Homeಕರ್ನಾಟಕದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದಲ್ಲಿ ಅನುಮಾನ, ಆತಂಕ, ನಂಬಿಕೆ - ದೇವನೂರ ಮಹಾದೇವ

ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದಲ್ಲಿ ಅನುಮಾನ, ಆತಂಕ, ನಂಬಿಕೆ – ದೇವನೂರ ಮಹಾದೇವ

ಬಡವರಿಗೆ ಕೆಲಸ ಮಾಡುತ್ತಿಲ್ಲ ಎಂದು ಚರ್ಚಿಸುವುದೂ ಅಪರಾಧವಾಗುವುದಾದರೆ ಎಲ್ಲಾ ಊರು ನಗರಗಳ ತೊಂಬತ್ತು ಭಾಗವನ್ನು ಜೈಲಾಗಿ ಪರಿವರ್ತಿಸಬೇಕಾಗುತ್ತದಲ್ಲವೆ?

- Advertisement -
- Advertisement -

ಗೆಳೆಯ ದೊಡ್ಡಿಪಾಳ್ಯ ನರಸಿಂಹಮೂರ್ತಿರನ್ನು ರಾಯಚೂರು ಪೊಲೀಸ್, ಎರಡು ದಶಕಗಳ ಹಿಂದೆ ನಡೆದಿತ್ತು ಎನ್ನಲಾದ `ಕ್ರಿಮಿನಲ್ ಪ್ರಕರಣ’ ಗಳಲ್ಲಿ ವಿನೋದ್ ಎಂಬ ಹೆಸರಿನಲ್ಲಿ ಭಾಗಿಯಾಗಿದ್ದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯೇ ನರಸಿಂಹಮೂರ್ತಿ ಎಂದು ಪೊಲೀಸ್ ಸಾಕ್ಷಿ ಆಧರಿಸಿ ಗುಮಾನಿ ಮೇಲೆ ಬಂಧಿಸಲಾಗಿದೆ.

ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದೇ ಅನುಮಾನ ಆತಂಕ ಹುಟ್ಟಿಸುವಂತಿದೆ. ಯಾಕೆಂದರೆ ನರಸಿಂಹಮೂರ್ತಿ ಸಾರ್ವಜನಿಕ ವ್ಯಕ್ತಿ. ಪತ್ರಿಕಾ ಕ್ಷೇತ್ರದಲ್ಲಿ ಚಿರಪರಿಚಿತ. ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ. ಪ್ರಗತಿಪರ ಸಂಘಟನೆಗಳ ಸಖ. ದಶಕಗಳಿಂದಲೂ ರಾಯಚೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಮೂಲೆಮೂಲೆಗಳಲ್ಲಿ ಸುತ್ತಾಟ ನಡೆಸಿದವರು, ಅವರು ಭಾಗವಹಿಸಿದ ಕಾರ್ಯಕ್ರಮ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 1997 ರಿಂದಲೇ ಬೆಂಗಳೂರು-ಮೈಸೂರು ಕಾರಿಡಾರ್ ವಿರುದ್ಧದ ಹೋರಾಟದಲ್ಲಿ ನರಸಿಂಹಮೂರ್ತಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರೊಡನೆ ಸಕ್ರಿಯವಾಗಿದ್ದನ್ನು ನಾವು ನೋಡಿದ್ದೇವೆ. ಗೌರಿ ಟ್ರಸ್ಟ್‌ಗೆ ಎಚ್.ಎಸ್.ದೊರೆಸ್ವಾಮಿಯವರು ಅಧ್ಯಕ್ಷರು, ನರಸಿಂಹಮೂರ್ತಿ ಪ್ರಧಾನ ಕಾರ್ಯದರ್ಶಿ.

ದೊರೆಸ್ವಾಮಿಯವರು ಇದ್ದ ಕಡೆ ಬಲಗೈಯಂತೆ ಅವರ ಜೊತೆ ನರಸಿಂಹಮೂರ್ತಿಯವರೂ ಸಾಮಾನ್ಯವಾಗಿ ಇದ್ದೇ ಇರುತ್ತಾರೆ.
ಹೀಗಿರುವಾಗ, ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎನ್ನುವುದಾದರೆ ಎಚ್.ಎಸ್.ದೊರೆಸ್ವಾಮಿಯವರೂ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಬೇಕಾಗಿ ಬರುವ ದಯಾನೀಯ ಪರಿಸ್ಥಿತಿಯೂ ನಮಗೆ ಬರಬಹುದೇನೋ.

ಇನ್ನೂ ತಮಾಷೆ ಎಂದರೆ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಪೊಲೀಸ್ ಕ್ವಾಟ್ರಸ್ ಎದುರೇನೆ ನರಸಿಂಹಮೂರ್ತಿ ಮನೆ. ನರಸಿಂಹಮೂರ್ತಿ ಮನೆ ಗುರುತು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳನ್ನೆ ಮೂರ್ತಿ ಮನೆ ವಿಳಾಸ ಕೇಳುವ ಪರಿಪಾಠ ಉಂಟು. ಹೀಗಿರುವಾಗ ನರಸಿಂಹಮೂರ್ತಿ ತಲೆ ಮರೆಸಿಕೊಂಡಿದ್ದರು ಎಂದು ಹೇಳುವಲ್ಲಿ ಯಾವುದಾದರೂ ಕಾಣದ ಕೈಗಳ ಒತ್ತಡ ಇರಬಹುದೇ? ಈ ಅನುಮಾನ ಆತಂಕ ಕಾಡುತ್ತದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕೆ, ಪತ್ರಿಕಾಕರ್ತರು, ಭಿನ್ನ ಧ್ವನಿಗಳ ಕತ್ತು ಹಿಸುಕಲಾಗುತ್ತಿದೆ.

ಈ ಪ್ರಕರಣ ಸಂಬಂಧಪಟ್ಟಂತೆ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವೇದಮೂರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ಪ್ರಕರಣಗಳ ನೀಡಿರುವ ವಿವರಗಳನ್ನು ವಿಶೇಷವಾಗಿ ಗಮನಿಸಬೇಕಾಗಿದೆ. ಅವರು ಹೇಳುತ್ತಾರೆ- 1) ಬಡವರಿಗೆ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಏಳೆಂಟು ಜನ ಸಭೆ ನಡೆಸುತ್ತಿದ್ದರು- ಇದೊಂದು ಪ್ರಕರಣ 2) ಬಿಡಿಓ ನೇತೃತ್ವದಲ್ಲಿ ಸಭಾ ಭವನ ಕಟ್ಟುತ್ತಿದ್ದಾಗ ಪಕ್ಕದಲ್ಲಿದ್ದ ಗರೀಬನ ಜೋಪಡಿಗೆ ತೊಂದರೆಯಾಗುತ್ತದೆ ಎಂದು ಒಂದಿಷ್ಟು ಜನ ಮಾರಾಕಾಸ್ತ್ರಗಳೊಡನೆ ಅಡಚಣೆ ಮಾಡಿದರು. 3) ಈ ಪ್ರಕರಣಗಳಲ್ಲಿ ಚಾರ್ಜ್‍ಷೀಟ್ ಆಗಿದೆ. ನ್ಯಾಯಾಲಯದಿಂದ ವಾರೆಂಟ್ ಇದೆ. ಈ ವಾರೆಂಟ್ ಮೇರೆಗೆ (ವಿನೋದ್ ಎಂಬ ಹೆಸರಲ್ಲಿ ಪ್ರಕರಣಗಳಲ್ಲಿ ಭಾಗವಹಿಸಿದ್ದ ವ್ಯಕ್ತಿಯೇ ತಲೆ ಮರೆಸಿಕೊಂಡಿದ್ದ ನರಸಿಂಹಮೂರ್ತಿ ಎಂದು) ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಮುಂದಿನದು ನ್ಯಾಯಾಲಯಕ್ಕೆ ಬಿಟ್ಟಿದ್ದು ಎನ್ನುತ್ತಾರೆ.

ಮೊದಲನೆಯದಾಗಿ ಎಸ್.ಪಿ. ವೇದಮೂರ್ತಿಯವರ ಸರಳ, ನೇರ ಮಾತುಗಳನ್ನು ನಾವು ಗೌರವಿಸಬೇಕು. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯಾಲಯದ ವಾರೆಂಟ್ ಇದೆ. ಆ ಪ್ರಕಾರವಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಎನ್ನುತ್ತಾರೆ. ಈಗ ಇರುವ ಯಥಾಸ್ಥಿತಿ ಜಡ ಕಾನೂನು ಪ್ರಕಾರ ಅವರು ಕೆಲಸ ಮಾಡಿದ್ದಾರೆ. ಅವರು ಮಾಡಲೇಬೇಕಾಗುತ್ತದೆ. ಆದ್ದರಿಂದ ಎತ್ತು ಈಯ್ತು ಎಂದರೆ ಕೊಟ್ಟಿಗೆಗೆ ಕಟ್ಟು ಎಂಬ ಗಾದೆ ಮಾತಿನಂತೆ ಪೊಲೀಸ್ ಬಗ್ಗೆ ಕುರುಡಾಗಿ ಎಗರಾಡುವುದನ್ನು ನಮ್ಮ ಹೋರಾಟದ ಸಂಘಟನೆಗಳ ಗೆಳೆಯರು ಕೈ ಬಿಡುವುದು ಕ್ಷೇಮ.

ಯಾಕೆಂದರೆ, ಇಲ್ಲಿ ನಾವು ಚರ್ಚಿಸಬೇಕಾದ ವಿಚಾರಗಳೇ ಬೇರೆ ಇದೆ. ಬಡವರಿಗೆ ಕೆಲಸ ಮಾಡುತ್ತಿಲ್ಲ ಎಂದು ಚರ್ಚಿಸುವುದೂ ಅಪರಾಧವಾಗುವುದಾದರೆ ಎಲ್ಲಾ ಊರು ನಗರಗಳ ತೊಂಬತ್ತು ಭಾಗವನ್ನು ಜೈಲಾಗಿ ಪರಿವರ್ತಿಸಬೇಕಾಗುತ್ತದಲ್ಲವೆ? ಇನ್ನು ಸಮುದಾಯ ಭವನ ಕಟ್ಟುವುದಕ್ಕೆ ಒಂದಿಷ್ಟು ಜನ ಅಡಚಣೆ ಮಾಡಿದರು ಎಂಬ ಪ್ರಕರಣವನ್ನು ಈಗಾಗಲೇ ನ್ಯಾಯಾಲಯ ವಿಚಾರಣೆ ಮಾಡಿ ಸಾಕ್ಷ್ಯಾ ಇಲ್ಲದೆ ಪ್ರಕರಣವನ್ನು ಖುಲಾಸೆ ಮಾಡಿದೆ. ಏನು ಆರೋಪ ಇತ್ತೋ ಅದೇ ಬಿದ್ದುಹೋಗಿದೆ. ಈ ಸಂಬಂಧ ಬಂಧಿಸಿದ್ದ ಆರೋಪಿಗಳ ಬಿಡುಗಡೆಯೂ ಆಗಿದೆ. ಆರೋಪವೇ ಬಿದ್ದು ಹೋಗಿರುವಾಗ, ಇವರಲ್ಲಿ ಆರೋಪಿತರಾದ ವಿನೋದನೊ ಮತ್ತೊಬ್ಬನೊ ಸಿಕ್ಕರೆಷ್ಟು? ಸಿಗದಿದ್ದರೆಷ್ಟು? ಈ ಪ್ರಕರಣವನ್ನು ಜೀವಂತವಾಗಿರಿಸುವುದೇಕೆ? ಇದು ನಮ್ಮ ಪೊಲೀಸ್ ಮತ್ತು ನ್ಯಾಯಾಲಯದ ಮೇಲೆ ಆಚರಣಾತ್ಮಕ ವೃಥಾ ಹೆಣ ಭಾರವಲ್ಲವೆ?- ಪಿ.ಐ.ಎಲ್. ಮೂಲಕ ಪ್ರಶ್ನಿಸಬೇಕಾಗಿದೆ. ಜೊತೆಗೆ ಇದನ್ನು ಸಾರ್ವಜನಿಕರು, ಸಂಘಟನೆಗಳು, ಪರ್ಯಾಯ ಕಾನೂನು ತಜ್ಞರು ಚರ್ಚಿಸಬೇಕಾಗಿದೆ.

ಯಾರ ಅಪರಾಧವೂ ಕಾನೂನು ಚೌಕಟ್ಟನ್ನು ಮೀರಿದ್ದಲ್ಲ ಎಂಬ ಅರಿವಿನಲ್ಲೆ, ನರಸಿಂಹಮೂರ್ತಿ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಹೊರಬರುತ್ತಾರೆಂಬ ನಂಬಿಕೆ ಇದ್ದರೂ, ಕಾನೂನು ಪ್ರಕ್ರಿಯೆಗಳನ್ನು ವಿಳಂಬಗೊಳಿಸುತ್ತ ‘ವಿಳಂಬ ಹಿಂಸೆ’ ನೀಡಬಹುದೆನ್ನುವ ಆತಂಕವೂ ನನಗಿದೆ. ಈ ರೀತಿಯಾದಲ್ಲಿ ಸ್ವರಾಜ್ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳಾದ ರೈತ ಸಂಘ, ದಲಿತ ಸಂಘಟನೆ, ಮತ್ತಿತರ ಸಮಾಜಮುಖಿ ಸಂಘಟನೆಗಳ ಜೊತೆಗೂಡಿ ಬರ, ನೆರೆ, ಉದ್ಯೋಗ ಕುಸಿತ ಇವುಗಳನ್ನೆಲ್ಲ ಸಮ್ಮಿಲನಗೊಳಿಸಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...