Homeಕರ್ನಾಟಕಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ಆಕೆ ಯಾವಾಗಲೂ ಹಾಗೆಯೇ ಅಂತೆ ಎಂದು ಹೇಳಿದ ಸಚಿವ ಮಾಧುಸ್ವಾಮಿಯವರು ಉಲ್ಲೇಖಿಸುತ್ತಿರುವ ನಳಿನಿ ಯಾರು? ಅವರ ಹಿನ್ನೆಲೆಯೇನು? ಯಾವಾಗಲೂ ಅವರು ಹೇಗೆ ಮಾಡುತ್ತಾರೆ, ನಳಿನಿಯವರನ್ನು ಸ್ವತಃ ಬಲ್ಲ ಡಾ.ವಾಸು ಎಚ್‌.ವಿ ಅವರ ಬರಹ

- Advertisement -
- Advertisement -

ನಳಿನಿ
ಕೋಲಾರ ಜಿಲ್ಲೆಯ ಅಗ್ರಹಾರ ಕೆರೆಯ ವೀಕ್ಷಣೆಗೆ ಹೋಗಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯರನ್ನು ಪ್ರಶ್ನಿಸಿದ ನಳಿನಿ ಇಂದು ಆಕೆಯನ್ನು ಟಿವಿಯಲ್ಲಿ ನೋಡುತ್ತಿರುವ ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ ಕೋಲಾರದಲ್ಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ರೈತಸಂಘದ ಕಾರ್ಯಕರ್ತರಿಗೆ ನಳಿನಿ ಚೆನ್ನಾಗಿ ಗೊತ್ತು. ಏಕೆಂದರೆ ಕಳೆದ ಸುಮಾರು ಏಳೆಂಟು ವರ್ಷಗಳಿಂದ ರೈತಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕ್ರಮಗಳು/ಹೋರಾಟಗಳಲ್ಲಿ ಅವರಿದ್ದಾರೆ.

‘ಆಯಮ್ಮ ಹಾಗೇ ಅಂತ, ಯಾರು ಬಂದರೂ ಹೋಗಿ ಪ್ರಶ್ನಿಸುವುದು. ಬೇಕಾದರೆ ಆ ವಿಡಿಯೋ ನೋಡಿ, ಅದರಲ್ಲಿ ಇನ್ಸ್‍ಪೆಕ್ಟರ್‍ರನ್ನು ‘ಏನ್ಸಾರ್ ಯಾವಾಗಲೂ ನೀವು ಹೀಗೇ ಮಾಡ್ತೀರಾ?, ನಮಗೆ ಅವಕಾಶವನ್ನೇ ಕೊಡಲಿಲ್ಲ’ ಎಂದಿದ್ದಾರೆ ಎಂಬ ಅರ್ಥದಲ್ಲಿ ಸಚಿವ ಮಾಧುಸ್ವಾಮಿಯವರು ತಮ್ಮ ‘ಕ್ಷಮಾಪಣಾ ಹೇಳಿಕೆ’ಯಲ್ಲೂ ಆರೋಪ ಮಾಡಿದ್ದಾರೆ. ನಳಿನಿಯವರು ಹೇಳುವ ಪ್ರಕಾರ, ಅವರನ್ನು ಅಲ್ಲಿಂದ ತಳ್ಳಿಕೊಂಡು ಹೋದ ಇನ್ಸ್‍ಪೆಕ್ಟರ್ ಸಹಾ ‘ನೀನು ಯಾವಾಗಲೂ ಹೀಗೆಯೇ ಮಾಡುತ್ತೀಯಾ’ ಎಂದು ಹೇಳಿ, ‘ಈಕೆ ಮೇಲೆ ಒಂದೆರಡು ಕೇಸು ಫಿಟ್ ಮಾಡ್ರಿ’ ಎಂದು ಅಲ್ಲಿದ್ದ ಪೊಲೀಸರಿಗೆ ಹೇಳಿ ಹೋದರಂತೆ.

ಹೌದಾ? ನಳಿನಿ ಹಾಗೆ ಮಾಡುತ್ತಾರಾ? ಮಾಧುಸ್ವಾಮಿಯವರು ಹೇಳಿದಂತೆ ಆಕೆ ಅತಿರೇಕ ಮಾಡುತ್ತಾರಾ? ಸ್ವತಃ ಆ ವಿಡಿಯೋ ನೋಡಿದ ಯಾರೊಬ್ಬರೂ ಅದನ್ನು ನಂಬಲಾರರು. ಆದರೆ ನಳಿನಿಯವರನ್ನು ಸಾಕಷ್ಟು ಕಾಲದಿಂದ ನೋಡಿರುವ ನಮ್ಮಂಥವರ ಅಭಿಪ್ರಾಯವೇನು?

ನಳಿನಿಯವರ ಹಿನ್ನೆಲೆಯೇನು?
ಸ್ವತಃ ರೈತರೂ, ರೈತ ಸಂಘಟನೆಯ ಮುಖಂಡರೂ ಇರುವ ಒಟ್ಟು ಕುಟುಂಬದ ಮಗಳು ನಳಿನಿ. ಕೋಲಾರದಲ್ಲೇ ಬಿಕಾಂ ಮುಗಿಸಿರುವ ಅವರು ವಿದ್ಯಾಭ್ಯಾಸ ಮಾಡುವಾಗಿನಿಂದ ರೈತ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ನಳಿನಿ ಮತ್ತು ಅವರ ತಂಗಿ ಉಮಾ ಇಬ್ಬರೂ ರೈತಚಳವಳಿಯ ಕಾರ್ಯಕರ್ತೆಯರು. ಬಹಳಷ್ಟು ರೈತ ನಾಯಕರುಗಳು ತಮ್ಮ ಗಂಡುಮಕ್ಕಳನ್ನೂ ಚಳವಳಿಯಲ್ಲಿ ಸಕ್ರಿಯಗೊಳಿಸಲು ಆಗಿಲ್ಲ. ಹೀಗಿರುವಾಗ ಶ್ರೀನಿವಾಸಗೌಡರ ಕುಟುಂಬ ಈ ಇಬ್ಬರು ಹೆಣ್ಣುಮಕ್ಕಳಿಗೆ ನೀಡಿರುವ ಪ್ರೋತ್ಸಾಹ ಅಭಿನಂದನೀಯ. ಸ್ವತಃ ರೈತ ಸಂಘಟನೆಯ ಒಂದು ಗುಂಪಿನ ಜೊತೆಗೆ ಇದ್ದರೂ, ಆಕೆ ಕೇವಲ ಒಂದು ಬಣಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ದೊಡ್ಡ ನಾಯಕರ ಬಗ್ಗೆಯೂ ತನ್ನ ಅನಿಸಿಕೆಗಳನ್ನು ನೇರವಾಗಿ ಹೇಳುತ್ತಾರೆ. ಹಾಗೆ ಹೇಳುವಾಗ, ಸಾಮಾಜಿಕ ಜಾಲತಾಣಗಳಲ್ಲೂ ತನ್ನ ಕಟು ವಿಮರ್ಶೆಯನ್ನು ಮುಂದಿಡುವಾಗಲೂ ಅದನ್ನು ಸಭ್ಯತೆಯನ್ನು ದಾಟಿ ಹೇಳುವುದಿಲ್ಲ.
ಹಲವಾರು ಶಿಬಿರಗಳಲ್ಲಿ, ಹೋರಾಟಗಳಲ್ಲಿ ನಳಿನಿಯವರ ಜೊತೆಗೆ ಭಾಗವಹಿಸಿ ಖುದ್ದಾಗಿ ನೋಡಿರುವ ನಾನು ಅಂತಹ ಹೋರಾಟಗಳಲ್ಲಿ ಸಕ್ರಿಯವಾಗಿರುವ, ಹೆದರಿ ಎಂದೂ ಹಿಂದಕ್ಕೆ ಹೋಗದ, ಮುಂಚೂಣಿ ವ್ಯಕ್ತಿಯಾಗಿ ಮಾತಾಡುವಾಗಲೂ ಬಾಯಿಗೆ ಬಂದ ಹಾಗೆ ಮಾತಾಡದ ವ್ಯಕ್ತಿ ನಳಿನಿ. ಹಾಗೆಂದು ಮಾತನಾಡದೇ ಸುಮ್ಮನಿರುವುದಿಲ್ಲ. ರೈತಸಂಘದ ಕಾರ್ಯಕರ್ತೆಯಾಗಿ ತಾನು ಇರಬೇಕಾದ್ದೇ ಹೀಗೆ ಎಂದು ಆಕೆಯ ಖಚಿತ ನಂಬಿಕೆಯಿದ್ದಂತಿದೆ. ರಾಜಿ ಮಾಡಿಕೊಳ್ಳದಿರುವುದು ಮತ್ತು ಅನ್ಯಾಯವನ್ನು ಪ್ರಶ್ನಿಸಬೇಕಾದ್ದು ಹೋರಾಟಗಾರ್ತಿಯ ಧರ್ಮ ಎಂಬುದರಲ್ಲಿ ನಳಿನಿಗೆ ಸಂದೇಹವೇ ಇಲ್ಲ. ಹಾಗಾಗಿ ಆಕೆಗೆ ಹೆದರಿಕೆ ಇಲ್ಲ.

ನಳಿನಿ

 

ಸಂಘಟನೆಯೊಳಗೂ ಪ್ರಬುದ್ಧತೆ ತೋರುವ ವ್ಯಕ್ತಿ
ಇಷ್ಟಾದ ಮೇಲೂ ಒಂದು ಪ್ರಶ್ನೆಯಿದೆ. ಪ್ರಚಾರಕ್ಕೆ, ತೋರಿಕೆಗೆ ಇದನ್ನು ಮಾಡುತ್ತಾರಾ ಎಂದು. ಏಕೆಂದರೆ ಹಲವು ಹೊಸತಲೆಮಾರಿನ ‘ಹೋರಾಟಗಾರರು’ ಅದನ್ನು ಮಾಡುವುದು ವಾಸ್ತವ. ಹೆಣ್ಣುಮಕ್ಕಳಲ್ಲೂ ಕೆಲವರು ಹಾಗೆ ಮಾಡಿದ್ದು ನೋಡಿದ್ದೇನೆ. ಕೆಲವೊಮ್ಮೆ ಅಪ್ರಬುದ್ಧತೆಯ ಕಾರಣಕ್ಕೂ ಹಾಗೆ ಮಾಡುತ್ತಾರೆ. ಆದರೆ, ಯಾವುದಾದರೂ ಹೋರಾಟದ ಸಂದರ್ಭದಲ್ಲಿ ಅನಗತ್ಯವಾಗಿ ಮುಂದಕ್ಕೆ ಬಂದು ನಿಂತಿದ್ದು ಅಥವಾ ಪ್ರಚಾರದ ಗೀಳಿನಿಂದ ಅನಗತ್ಯ ಮಾತುಗಳನ್ನಾಡಿದ್ದನ್ನು ನಾನಂತೂ ನೋಡಿಲ್ಲ. ವಿಚಾರಗಳನ್ನು ಅನಗತ್ಯವಾಗಿ ಕಾಂಪ್ಲಿಕೇಟೆಡ್ ಮಾಡಿಕೊಳ್ಳದೇ ಮುಂದಕ್ಕೆ ಹೋಗುತ್ತಿರುತ್ತಾರೆ. ಸಂಘಟನೆಯ ಒಳಗೇ ತನಗಾದ ಸಮಸ್ಯೆಗಳನ್ನು ವಿಪರೀತಗೊಳಿಸಿ ಸಂದರ್ಭವಲ್ಲದ ಸಂದರ್ಭದಲ್ಲಿ ವೇದಿಕೆಯಿಂದ ಬೇರೆಯವರು ಮಾತಾಡಿದಾಗ ಅವರ ಜೊತೆಗೆ ಸಾಲಿಡಾರಿಟಿ ತೋರಿಸಿ ನಿಂತಿದ್ದನ್ನು ನೋಡಿದ್ದೇನೆಯೇ ಹೊರತು, ಸ್ವತಃ ತಾನೇ ಅತಿರೇಕ ಮಾಡಿದ್ದನ್ನು ನೋಡಿಲ್ಲ.

ಇದನ್ನೂ ಓದಿ: ಲಾಕ್‌ಡೌನ್‌ ನಂತರದ ಪ್ರಥಮ ಆದ್ಯತೆ ಕೃಷಿ ಮತ್ತು ಆರ್ಥಿಕತೆ- ಡಾ.ಕಮ್ಮರಡಿ

ಹಳ್ಳಿ ಹೆಣ್ಣುಮಗಳಾದ ನಳಿನಿ ನಿಜವಾದ ಅರ್ಥದಲ್ಲಿ ನೇರ, ದಿಟ್ಟ, ನಿರಂತರ, ಆದರೆ ಸರಳ ವ್ಯಕ್ತಿ. ಬಹುಶಃ ಇದನ್ನು ಕೋಲಾರ ಗ್ರಾಮಾಂತರದ ಇನ್ಸ್‍ಪೆಕ್ಟರ್ ಅರ್ಥ ಮಾಡಿಕೊಳ್ಳುವುದು ಕಷ್ಟವೇನೋ. ಹೆಣ್ಣುಮಕ್ಕಳು ಮನೆಯಲ್ಲಿರಬೇಕು, ದೈನ್ಯತೆಯಿಂದ ಕೇಳಿಕೊಳ್ಳಬೇಕು, ಹೋರಾಟಗಳಲ್ಲಿ ಗಂಡಸರನ್ನು ಮುಂದೆ ಬಿಟ್ಟು ಹಿಂದೆ ಗುಂಪಿನಲ್ಲಿ ಸಂಖ್ಯೆಯಾಗಿ ಮಾತ್ರ ಇರಬೇಕು ಎಂಬುದು ‘ಸಹಜ ಫ್ಯೂಡಲ್ ಭಾವನೆ’. ‘ರಿಕ್ವೆಸ್ಟ್ ಮಾಡಿಕೊಳ್ಳಬೇಕಮ್ಮಾ’ ಎಂದು ಹೇಳಿದ ಎಂಎಲ್‍ಸಿ ಮತ್ತು ಬಾಯಿಗೆ ಬಂದ ಹಾಗೆ ವದರಿದ ಮಂತ್ರಿಗಳಿಗೆ ಅಂತಹ ಭಾವನೆ ಇರುವುದು ಎದ್ದು ಕಂಡ ಮೇಲೆ, ಇನ್ನು ಆ ಇನ್ಸ್‍ಪೆಕ್ಟರ್‍ರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾದೀತೇ?


ಇದನ್ನೂ ಓದಿ: ಕ್ಷಮೆ ಕೇಳುತ್ತಲೇ ಆರೋಪ ಮುಂದುವರೆಸಿದ ಮಾಧುಸ್ವಾಮಿ

ಸಚಿವ ಮಾಧುಸ್ವಾಮಿ ಕ್ಷಮೆಯಾಚನೆ ಮಾಡದಿದ್ದರೂ ಆಗುತ್ತಿತ್ತು. ಆದರೆ ನಳಿನಿಯ ಕುರಿತಾಗಿ ‘ಆಕೆ ಯಾವಾಗಲೂ ಹಾಗೆ ಅಂತೆ’ ಇತ್ಯಾದಿ ಮಾತುಗಳನ್ನು ಹೇಳಿದಾಗ ನಾವು ಮಾತಾಡದಿದ್ದರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಇಷ್ಟನ್ನು ಬರೆಯಬೇಕಾಯಿತು. ನಳಿನಿ ‘ಯಾವಾಗಲೂ ಹಾಗೆಯೇ ಇರಲಿ’ ಎಂದು ಆಶಿಸುತ್ತೇನೆ. ಇನ್ನಷ್ಟು ಹೊಸ ತಿಳುವಳಿಕೆಯ ಜೊತೆಗೆ ಆಕೆ ರೈತಚಳವಳಿಗೆ ಅಗತ್ಯವಿರುವ ಹೊಸನಾಯಕಿಯಾಗಿ ರೂಪುಗೊಳ್ಳಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾಗರಿಕರ ಹತ್ಯೆ, ಹೊಸ ಯುದ್ದವನ್ನು ಅಮೆರಿಕ ಜನತೆ ಬಯಸುವುದಿಲ್ಲ’ : ಇರಾನ್‌ ಮೇಲಿನ ದಾಳಿಯನ್ನು ಖಂಡಿಸಿದ ನ್ಯೂಯಾರ್ಕ್ ಮೇಯರ್‌ ಝೊಹ್ರಾನ್ ಮಮ್ದಾನಿ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ಮಿಲಿಟರಿ ನಡೆಸಿದ ದಾಳಿಗಳನ್ನು ನ್ಯೂಯಾರ್ಕ್ ನಗರದ ಮೇಯರ್ ಝೊಹ್ರಾನ್ ಮಮ್ದಾನಿ ಖಂಡಿಸಿದ್ದು, "ಅಕ್ರಮ ಆಕ್ರಮಣಕಾರಿ ಯುದ್ಧದಲ್ಲಿ ದುರಂತದ ಉಲ್ಬಣ" ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಇರಾನ್‌ನ ಶಾಲೆಗಳ ಮೇಲೆ ಇಸ್ರೇಲ್ ದಾಳಿ : ಮಕ್ಕಳು ಸೇರಿ 100ಕ್ಕೂ ಹೆಚ್ಚು ಜನರು ಸಾವು

ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ನಗರದ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಶನಿವಾರ (ಫೆ.28) ಇಸ್ರೇಲ್ ನಡೆಸಿದ ದಾಳಿಯಲ್ಲಿ 108 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್‌-ಜಝೀರಾ ವರದಿ ಮಾಡಿದೆ. ಮಿನಾಬ್‌ನಲ್ಲಿರುವ ಶಜರೆಹ್...

ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಮೇನಿ ಸಾವು : ದೃಢಪಡಿಸಿದ ಇರಾನ್

ಇಸ್ರೇಲ್- ಅಮೆರಿಕ ಶನಿವಾರ (ಫೆ.28) ಇರಾನ್‌ ಮೇಲೆ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯಾತುಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ದೃಢಪಡಿಸಿರುವುದಾಗಿ Al Jazeera...

ಅಮೆರಿಕ, ಇಸ್ರೇಲ್, ಇರಾನ್ ದಾಳಿ-ಪ್ರತಿ ದಾಳಿ : ಈವರೆಗೆ ಕನಿಷ್ಠ 8 ಸಾವು

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ಪ್ರತಿ-ದಾಳಿಗಳಲ್ಲಿ ಹಲವು ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಹೆಣ್ಣು...

ಮಧ್ಯಪ್ರಾಚ್ಯ ಉದ್ವಿಗ್ನ : ಯುಎಇ, ಬಹ್ರೇನ್‌, ಕತಾರ್, ಕುವೈತ್‌ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಪ್ರತಿ ದಾಳಿ!

ಶನಿವಾರ (ಫೆ.28) ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ, ಇರಾನ್ ಅಮೆರಿಕದ ಮಿಲಿಟರಿ ನೆಲೆಗಳಿರುವ ಹಲವು ಅರಬ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್...

ರಾಜ್ಯಸಭೆಗೆ ಮೇನಕಾ ಗುರುಸ್ವಾಮಿ : ದೇಶದ ಮೊದಲ LGBTQ+ ಸಂಸದೆಯಾಗಲು ಅಣಿಯಾದ ಹಿರಿಯ ವಕೀಲೆ

ರಾಜ್ಯಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ (ಫೆ.27) ವಕೀಲೆ ಮೇನಕಾ ಗುರುಸ್ವಾಮಿ, ಪಶ್ಚಿಮ ಬಂಗಾಳದ ಮಾಜಿ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್, ರಾಜ್ಯ ಸಂಪುಟ ಸಚಿವ ಬಾಬುಲ್ ಸುಪ್ರಿಯೋ ಮತ್ತು ನಟಿ...

ದಾಳಿ ಮುಂದುವರಿಸುವ ಸೂಚನೆ ನೀಡಿದ ಟ್ರಂಪ್ : ಇರಾನ್‌ನಿಂದ ತೀವ್ರ ಪ್ರತಿದಾಳಿಯ ಎಚ್ಚರಿಕೆ

ಅಮೆರಿಕದ ಸಹಯೋಗದೊಂದಿಗೆ ಇಸ್ರೇಲ್ ಶನಿವಾರ (ಫೆ.28) ಇರಾನ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗುವಾಗ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇಸ್ರೇಲ್‌ ಇರಾನ್‌ನ ರಾಜಧಾನಿ ಟೆಹ್ರಾನ್‌ ಸೇರಿದಂತೆ ದೇಶದ ಹಲವು ಸ್ಥಳಗಳ...

ಅಮೆರಿಕ ಅಣತಿಯಂತೆ ಇರಾನ್ ಮೇಲೆ ಇಸ್ರೇಲ್ ದಾಳಿ : ಟೆಹ್ರಾನ್‌ನ ಹಲವೆಡೆ ಭಾರೀ ಸ್ಪೋಟ

ಇರಾನ್ ಮೇಲೆ ಇಸ್ರೇಲ್ ಶನಿವಾರ (ಫೆ.28) ವೈಮಾನಿಕ ದಾಳಿ ನಡೆಸಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯನ್ನು ಇಸ್ರೇಲ್ 'ಪೂರ್ವಭಾವಿ ದಾಳಿ' ಎಂದು ಕರೆದಿದೆ. ಇಂದು ಬೆಳಿಗ್ಗಿನ ಹೇಳಿಕೆಯೊಂದರಲ್ಲಿ, ಇಸ್ರೇಲ್ ರಕ್ಷಣಾ ಸಚಿವ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ನಟ ದಿಲೀಪ್, ಇತರರ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸರ್ಕಾರ

ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ (2017ರ ಪ್ರಕರಣ) ಮಲಯಾಳಂನ ಪ್ರಮುಖ ನಟ ದಿಲೀಪ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪ್ರಕರಣದ...

‘ದಿ ಕೇರಳ ಸ್ಟೋರಿ-2’ ಬಿಡುಗಡೆಗೆ ವಿಧಿಸಿದ್ದ ತಡೆಯಾಜ್ಞೆ ತೆರವು

'ದಿ ಕೇರಳ ಸ್ಟೋರಿ-2 : ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ (ಫೆ.27) ತೆರವುಗೊಳಿಸಿದೆ. 'ಕೋಮು ಸಾಮರಸ್ಯ ಕದಡುವ ಸಾಧ್ಯತೆ'ಯನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಬೆಚು...