Homeಮುಖಪುಟವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

- Advertisement -
- Advertisement -

ಹಿಂದಿಯಲ್ಲೊಂದು ಗಾದೆಯಿದೆ; ’ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‌ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ’ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’ ಎಂಬ ಗಾದೆ ಸೂಕ್ತವಾಗಿದೆ. ರಾಹುಲ್ ಗಾಂಧಿ ಇಂಗ್ಲೆಂಡಿನ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಮೇಲೆ ಸೃಷ್ಟಿಸುತ್ತಿರುವ ಗಲಾಟೆ ನೋಡಿದರೆ ಈ ಗಾದೆಯೇ ನೆನಪಾಗುವುದು.

ನಿಸ್ಸಂಶಯವಾಗಿ ದೇಶದ ಆಂತರಿಕ ವಿಷಯಗಳ ಬಗ್ಗೆ ವಿದೇಶದಲ್ಲಿ ಮಾಡುವ ಹೇಳಿಕೆಗಳಲ್ಲಿ ಒಂದು ಮಟ್ಟದ ಘನತೆ ಇರಲೇಬೇಕು. ವಿರೋಧಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಈ ಘನತೆಯ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದರು; ಆದರೆ ಯಾವುದೇ ಪಕ್ಷದ ಯಾವ ನಾಯಕರೂ ಇಂದು ಆ ಹಂತಕ್ಕೆ ತಲುಪುವುದಿಲ್ಲ. ಅಂದಹಾಗೆ ಈಗ ಮನೆಯ ಮಾತು ಮನೆಯಲ್ಲಿಯೇ ಮುಚ್ಚಿಡಬಹುದಾದ ಆ ದಿನಗಳೂ ಇಲ್ಲ. ಇಂಟರ್‌ನೆಟ್ ಮತ್ತು ಜಾಗತಿಕ ಮಾಧ್ಯಮಗಳ ಕಾಲದಲ್ಲಿ ಅಂತರಿಕ ಗೌಪ್ಯ ವಿಷಯಗಳನ್ನು ಹೊರಗೆ ಹೇಳಬೇಕಾದ-ಹೇಳಬಾರದ ಸಂಗತಿಗಳೆಂದೂ ಉಳಿದಿಲ್ಲ. ಆದರೂ, ಕನಿಷ್ಠ ಮೂರು ಘನತೆಯ ಸೂತ್ರಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಮೊದಲನೆಯದಾಗಿ. ಯಾವುದೇ ಪಕ್ಷ ಇತರ ಪಕ್ಷಗಳನ್ನು ಟೀಕೆ ಮಾಡಲಿ, ಆದರೆ ಯಾವುದೇ ಕೆಳಮಟ್ಟ ಅಗ್ಗದ ಗಾಸಿಪ್‌ಅನ್ನು ಹೊರಗೆ ಹೋಗಿ ಹರಡಬಾರದು. ಎರಡನೆಯದಾಗಿ, ಇತರ ಪಕ್ಷಗಳ ಆಡಳಿತದ ಬಗ್ಗೆ ಟೀಕೆ ಮಾಡಬಹುದು, ಆದರೆ ಇಡೀ ದೇಶದ ಗೌರವವನ್ನು ತಗ್ಗಿಸುವ ಮಾತುಗಳನ್ನು ಆಡಬಾರದು. ಮೂರನೆಯದಾಗಿ, ನಮ್ಮ ಸಮಸ್ಯೆಗಳು ಏನೇ ಇರಲಿ, ವಿದೇಶಿಯರ ಹಸ್ತಕ್ಷೇಪದ ಬೇಡಿಕೆ ಇಡಬಾರದು ಹಾಗೂ ಅವರ ವಿಷಯಗಳಲ್ಲಿ ನಾವು ತಲೆತೂರಿಸಬಾರದು.

ಅಟಲ್ ಬಿಹಾರಿ ವಾಜಪೇಯಿ

ಮೊದಲ ಮಾನದಂಡವನ್ನು ತೆಗೆದುಕೊಂಡರೆ, ರಾಹುಲ್ ಗಾಂಧಿಯ ಹೇಳಿಕೆಯಲ್ಲಿ ಅಗ್ಗದ ಅಥವಾ ತೀರಾ ಕೆಳಮಟ್ಟದ ಅಂತಹ ಯಾವ ಮಾತೂ ಕಾಣಿಸಲಿಲ್ಲ. ಅವರು ಸಂಸತ್ತಿನಲ್ಲಿ ವಿರೋಧಪಕ್ಷಗಳ ನಾಯಕರ ಮೈಕ್ ಬಂದ್ ಮಾಡುವುದರ ಬಗ್ಗೆ ಹೇಳಿದರು, ವಿರೋಧಪಕ್ಷದವರ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ರೇಡ್‌ಗಳ ಬಗ್ಗೆ ಹೇಳಿದರು ಹಾಗೂ ವಿರೋಧಪಕ್ಷಗಳ ನಾಯಕರ ಮೇಲೆ ಪೆಗಸಸ್ ಮೂಲಕ ಕಣ್ಗಾವಲು ಇಟ್ಟಿದ್ದರ ಬಗ್ಗೆ ಹೇಳಿದರು. ಈ ವಾಸ್ತವಗಳು ಜಗಜ್ಜಾಹೀರಾಗಿರುವ ವಾಸ್ತವಗಳು. ರಾಹುಲ್ ಗಾಂಧಿ ಗೌಪ್ಯವಾಗಿದ್ದ ಏನನ್ನೂ ಹೇಳಿಲ್ಲ. ಭಾರತವಷ್ಟೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಇಂತಹದ್ದೇ ರೀತಿಯಲ್ಲಿ ದಾಳಿಗಳು ಆಗುತ್ತಿವೆ. ಒಂದು ವೇಳೆ ಒಂದು ದೇಶದ ಒಬ್ಬ ಸಂಸದ, ಇನ್ನೊಂದು ದೇಶದ ಸಂಸದರೊಂದಿಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡಿದರೆ, ಅವರು ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡದೇ ಇದ್ದರೆ ಮತ್ಯಾವುದರ ಬಗ್ಗೆ ಚರ್ಚೆ ಮಾಡಿಯಾರು?

ಈ ಹೇಳಿಕೆಯನ್ನು ನೀವು 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್‌ನ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣದೊಂದಿಗೆ ಹೋಲಿಸಿ. ಅಲ್ಲಿ ಮೋದಿಯವರು ರಾಜೀವ್ ಗಾಂಧೀಯನ್ನು ಟೀಕಿಸುತ್ತ ಹೇಳಿದ್ದೇನೆಂದರೆ, ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಕೆಳಗೆ ತಲುಪುವ ಆ ದಿನಗಳು ಈಗಿಲ್ಲ ಎಂದರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ರೀತಿಯಲ್ಲಿ ’ಆ 85 ಪೈಸೆಗಳನ್ನು ಸವೆಸುತ್ತಿದ್ದ ’ಕೈ’ ಯಾವುದಿತ್ತು’ ಎಂದು ಕೇಳಿದರು. ವಿದೇಶದಲ್ಲಿ ಮಾಡಿದ ಈ ಅಗ್ಗದ ಚುನಾವಣಾ ಭಾಷಣದ ಬಗ್ಗೆ ಪ್ರಧಾನಮಂತ್ರಿಯವರು ಕ್ಷಮೆಯನ್ನೂ ಕೇಳಲಿಲ್ಲ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ನೀಡಲಿಲ್ಲ.

ಇದನ್ನೂ ಓದಿ: ರೌಡಿಶೀಟರ್ ಫೈಟರ್ ರವಿ ಎದುರು ಕೈಮುಗಿದು ನಿಂತ ಮೋದಿ, ಇದು ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

ಬಹುಶಃ ಬಿಜೆಪಿಯ ನಾಯಕರ ದೂರು ಎರಡನೆಯ ಮಾನದಂಡದ ಬಗ್ಗೆ ಇದೆ; ಅದು ರಾಹುಲ್ ಗಾಂಧಿ ಮಾತುಗಳಲ್ಲಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಘನತೆಯ ಪತನದ ಬಗ್ಗೆ ವ್ಯಕ್ತಪಡಿಸಿದ ಕಾಳಜಿಯಿಂದ ದೇಶದ ಇಮೇಜ್ ಕುಸಿದಿದೆ ಎಂದು. ಒಂದು ವೇಳೆ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಶಕ್ತಿಗಳು ಇಲ್ಲವಾಗಿವೆ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಡೆಸುವುದು ಭಾರತೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದರೆ, ಆ ಮಾನದಂಡ ಉಲ್ಲಂಘಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಅವರು ಇಂಥದ್ದೇನೂ ಹೇಳಲಿಲ್ಲ, ಅದರ ಬದಲಿಗೆ ಭಾರತದ ಜನರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯು ಆಳವಾಗಿ ಬೇರುಬಿಟ್ಟಿದ್ದನ್ನು ಎತ್ತಿತೋರಿಸಿದರು. ಅವರ ಈ ಹೇಳಿಕೆಯನ್ನು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನೀಡಿದ ಭಾಷಣದೊಂದಿಗೆ ಹೋಲಿಕೆ ಮಾಡಿನೋಡಿ. ಅಲ್ಲಿ ಹಿಂದಿನ ಸರಕಾರಗಳ ಮೇಲೆ ದಾಳಿ ಮಾಡುತ್ತ ಮೋದಿಯವರು ’ಹೀಗೂ ಒಂದು ಸಮಯವಿತ್ತು, ಆಗ ಜನರು ತಮ್ಮ ಕಳೆದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ ಏನೋ, ಅದಕ್ಕಾಗಿ ಹಿಂದುಸ್ತಾನದಲ್ಲಿ ಹುಟ್ಟಿದ್ದೀವಿ ಎಂದು ಯೋಚಿಸುತ್ತಿದ್ದರು’ ಎಂದು ಹೇಳಿದರು. ದೇಶದ ಪ್ರತಿಷ್ಠೆಯನ್ನು ತಗ್ಗಿಸುವ ಮಾನದಂಡದಲ್ಲಿ ದೇಶವನ್ನು ಅವಮಾನಿಸುವ ದೊಡ್ಡ ದೋಷಿ ಮೋದಿಜಿಯ ಈ ಹೇಳಿಕೆ ಎಂದು ನಿಸ್ಸಂಶಯವಾಗಿ ಹೇಳಬೇಕಿದೆ.

ಮೂರನೆಯ ಮಾನದಂಡ ವಿದೇಶಿಯರ ಹಸ್ತಕ್ಷೇಪವನ್ನು ಆಹ್ವಾನಿಸುವುದರ ಬಗ್ಗೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಂದಿನ ಜನಸಂಘದ ಸಂಸದ ಸುಬ್ರಮಣ್ಯಂ ಸ್ವಾಮಿಯೊಂದಿಗೆ ಅನೇಕ ವಿರೋಧಪಕ್ಷದ ನಾಯಕರು ಅಮೆರಿಕ ಮತ್ತು ಇತರ ದೇಶಗಳಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಸ್ತಕ್ಷೇಪ ಮಾಡುವ ಬೇಡಿಕೆ ಇಟ್ಟಿದ್ದರು. ಅಂತಹ ವಿಪತ್ತಿನ ಕಾಲದಲ್ಲಿ ಹೀಗೆ ಮಾಡಬೇಕೇ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ, ಆದರೆ ಸದ್ಯಕ್ಕೆ ಇಂತಹದ್ದೇನೂ ಆಗಿಲ್ಲ. ಬಿಜೆಪಿಯ ನಾಯಕರು ಆರೋಪವನ್ನಂತೂ ಮಾಡುತ್ತಿದ್ದಾರೆ, ಆದರೆ ಇಂಗ್ಲೆಂಡಿನ ಸಂಸದರು ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕು ಎಂಬ ಮನವಿ ಮಾಡಿರುವಂತಹ ಯಾವ ಹೇಳಿಕೆಗಳೂ ರಾಹುಲ್ ಗಾಂಧಿಯ ಮಾತುಗಳಲ್ಲಿ ಕಾಣಸಿಗುತ್ತಿಲ್ಲ. ಸ್ವಾಭಾವಿಕವಾಗಿಯೇ, ಇಂತಹ ಆರೋಪ ಮೋದಿಯವರ ಮೇಲೆಯೂ ಇಲ್ಲ. ಆದರೆ, ಇನ್ನೊಂದು ದಿಕ್ಕಿನಿಂದ ಅವರು ಖಂಡಿತವಾಗಿಯೂ ಈ ಘನತೆಯ ಉಲ್ಲಂಘನೆ ಮಾಡಿದ್ದಾರೆ; ಅದು ಅವರು ಅಮೆರಿಕದ ಹೂಸ್ಟನ್ ನಗರದಲ್ಲಿ 2019ರಲ್ಲಿ ಆದ ರ್‍ಯಾಲಿಯಲ್ಲಿ ’ಅಬ್ ಕಿ ಬಾರ್ ಟ್ರಂಪ್ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯನ್ನು ಕೂಗಿ, ಸುಮ್‌ಸುಮ್ನೆ ಅಮೇರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಲಸ ಮಾಡಿದರು. ಈ ಅಸಫಲ ಮತ್ತು ಹಾಸ್ಯಾಸ್ಪದ ಪ್ರಯತ್ನದ ಪರಿಣಾಮಗಳನ್ನು ದೇಶ ಅನುಭವಿಸಬೇಕಾಯಿತು.

ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಮೂರು ಮಾನದಂಡಗಳು ರಾಹುಲ್ ಗಾಂಧಿಯ ಮೇಲೆ ಅನ್ವಯ ಆಗುವುದಿಲ್ಲ ಎಂದಮೇಲೆ ಬಿಜೆಪಿ ಇಷ್ಟು ವಿಚಲಿತವಾಗಿದ್ದು ಏಕೆ? ಒಂದೋ, ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಗಲಾಟೆ ಸೃಷ್ಟಿಸುತ್ತಿದ್ದಾರೆ, ಅಥವಾ ರಾಹುಲ್ ಗಾಂಧಿಯು ಮೋದಿ ಸರಕಾರದ ಮರ್ಮಸ್ಥಾನದ ಮೇಲೆಯೇ ಪೆಟ್ಟುಕೊಟ್ಟಿದ್ದಾರೆಯೇ? ನಿಜ ಏನೆಂದರೆ, ಭಾರತದ ಪ್ರಜಾಸತ್ತಾತ್ಮಕ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಭಾರತ ಸರಕಾರವು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಬ್ಯಾನ್ ಮಾಡಿದಾಗ ಹಾಗೂ ಬಿಬಿಸಿ ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾದಾಗ. ಭಾರತೀಯ ಅರ್ಥವ್ಯವಸ್ಥೆಯ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಹಿಂಡನ್‌ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ಆದ ಹಗರಣ ತಡೆಯಲು ಭಾರತ ಸರಕಾರ ಮತ್ತು ಅದರ ಸಂಸ್ಥೆಗಳು ಏನನ್ನೂ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾದಾಗ. ಒಂದು ಸಶಕ್ತ ದೇಶದ ರೂಪದಲ್ಲಿ ಭಾರತದ ಪ್ರತಿಷ್ಠೆ ಯಾವಾಗ ಕುಸಿಯುತ್ತೆ ಎಂದರೆ, ಚೀನಾ ದೇಶವು ಭಾರತದ 2000 ಚದರ ಕಿಲೊಮೀಟರ್ ಆಕ್ರಮಿಸಿದೆ ಎಂದು ಸೆಟಲೈಟ್ ಮೂಲಕ ಜಗತ್ತಿಗೆ ತಿಳಿದಾಗ ಹಾಗೂ ಸರಕಾರ ಅದರ ಬಗ್ಗೆ ಮೌನವಹಿಸಿದ್ದನ್ನು ನೋಡಿದಾಗ. ಯಾರೂ ನಮ್ಮ ಗಡಿಯಲ್ಲಿ ಪ್ರವೇಶಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳ್ತಾರೆ ಹಾಗೂ ಚೀನಾದ ಬಳಿ ಎಷ್ಟು ಆರ್ಥಿಕ ಶಕ್ತಿ ಇದೆಯೆಂದರೆ, ನಾವು ಅವರೊಂದಿಗೆ ಕಾಲ್ಕೆರೆದು ಜಗಳವಾಡಲು ಸಾಧ್ಯವಿಲ್ಲ ಎಂದು ವಿದೇಶ ಮಂತ್ರಿ ಹೇಳುತ್ತಾರೆ. ಒಂದು ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯ ಮೇಲೆ ದೇಶದ ಪ್ರತಿಷ್ಠೆ ಕಡಿಮೆ ಮಾಡಿದ ಆರೋಪ ಹೊರಿಸುವ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಆಕ್ರಮಣದ ಬಗ್ಗೆ ಬಾಯ್ಬಿಟ್ಟಿದ್ದರೆ ದೇಶದ ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....