HomeUncategorizedತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

- Advertisement -
- Advertisement -

‘ದೇಶದ್ರೋಹ’: ಈ ಮೊದಲು ಯಾವುದೋ ನಕ್ಸಲ್ ಕೇಸಲ್ಲಿ ಅದಕ್ಕೂ ಮುಂಚೆ ಖಲಿಸ್ತಾನ್ ಕೇಸುಗಳಲ್ಲಿ, ಮತ್ತಂಥದ್ಯಾವುದೋ ಕೇಸುಗಳಲ್ಲಿ ನಾವು ಪೇಪರಿನಲ್ಲಿ ಓದುತ್ತಿದ್ದೆವು. ನಮ್ಮ ಸುತ್ತಲಿನ ನಿತ್ಯದ ಬದುಕಲ್ಲಿ ಅದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಇರಲಿಲ್ಲ.

‘ದೇಶದ್ರೋಹ’ದ ಆಪಾದನೆಗಳು ಒಂದು ಕಾಲಘಟ್ಟದಲ್ಲಿ ಹೆಚ್ಚಾಗಿ ಕಂಡುಬಂದಿದ್ದು ಎಪ್ಪತ್ತರ ದಶಕದ ಎಮರ್ಜೆನ್ಸಿ ಸಮಯದಲ್ಲಿ. ಸ್ವಾತಂತ್ರ್ಯಪೂರ್ವದಲ್ಲಿ ಅದೊಂದು ನಿತ್ಯದ ಅಪರಾಧವಾಗಿತ್ತು. ದೇಶದ್ರೋಹದ ಆಪಾದನೆಯಿಲ್ಲದ ಸ್ವಾತಂತ್ರ್ಯ ಹೋರಾಟಗಾರನಿರಲಿಲ್ಲ. ನಮ್ಮ ದ.ರಾ ಬೇಂದ್ರೆಯವರನ್ನು ಕಾಡಿತ್ತು ದೇಶದ್ರೋಹದ ಶಿಕ್ಷೆ. ಅವರ ‘ನಾದಲೀಲೆ’ ಕವನಸಂಕಲನ ಆ ಸಮಯದಲ್ಲಿ ಬರೆದದ್ದು.

ಅಷ್ಟಕ್ಕೂ ಏನಿದು ‘ದೇಶದ್ರೋಹ’? ನಮ್ಮ ಕಾನೂನಿನಲ್ಲಿ, ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಕಾನೂನಾತ್ಮಕವಾಗಿ ನಡೆಸುತ್ತಿರುವ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಶಾಂತಿಭಂಗವಾಗುವಂಥ ವಾತಾವರಣ ಸೃಷ್ಟಿ ಮಾಡುವುದು ‘ದೇಶದ್ರೋಹ’ವೆನ್ನಲಾಗುತ್ತದೆ.

ಸರ್ಕಾರವನ್ನು ಟೀಕಿಸುವ, ವಿಮರ್ಶಿಸುವ ಅಧಿಕಾರ ನಮಗಿಲ್ಲವೇ? ಅದೆಷ್ಟೋ ಜನ ಸರ್ಕಾರಗಳನ್ನ ತರಾಟೆಗೆ ತೆಗೆದುಕೊಳ್ತಾರೆ – ವಿರೋಧಪಕ್ಷವಾಗಲೀ, ಮಾಧ್ಯಮದವರಾಗಲೀ ತಮ್ಮ ಹದ್ದಿನಕಣ್ಣಿನಿಂದ ಯಾವಾಗಲೂ ನೋಡುತ್ತಿರುತ್ತಾರೆ ಹಾಗೂ ಪ್ರತಿ ಚಿಕ್ಕತಪ್ಪನ್ನು ಎತ್ತಿಹಿಡಿಯುತ್ತಾರೆ. ಅದೇನಾದರೂ ಭ್ರಷ್ಟತೆಯ ಆರೋಪವಾದರೆ ಮುಗಿಯಿತು ಸರ್ಕಾರವನ್ನು ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಎಂತೆಂಥದೋ ಕೆಟ್ಟ ಶಬ್ದಗಳನ್ನ ಉಪಯೋಗಿಸಲಾಗುತ್ತದೆ. ಅದೇ ಅಲ್ಲವೇ ಪ್ರಜಾಪ್ರಭುತ್ವವೆಂದರೆ ಎಂದು ನೀವು ಕೇಳಬಹುದು. ಆಶ್ಚರ್ಯದ ಸಂಗತಿ ಏನೆಂದರೆ ಸುಪ್ರೀಂಕೋರ್ಟು, ಹೈಕೋರ್ಟುಗಳು ಕೂಡ ಇದನ್ನೇ ಹೇಳುತ್ತವೆ. ಹಾಗಾದರೆ ಅದು ಅಪರಾಧ ಹೇಗಾಯಿತು?

ದುರಂತವೆಂದರೆ ಸ್ವಾತಂತ್ರ್ಯಾನಂತರ ದೇಶದ್ರೋಹದ ಅಪರಾಧವನ್ನು ಕಾನೂನಲ್ಲಿ ಉಳಿಸಿಕೊಳ್ಳಲಾಯಿತು. ಈ ಅಪರಾಧ ಊರ್ಜಿತವಲ್ಲವೆಂದು, ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದಾಗ ದೇಶದ್ರೋಹ ಉಳಿಯುವ ಅವಕಾಶವಿಲ್ಲವೆಂದು ಕೇದಾರನಾಥ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‍ನಲ್ಲಿ ವಾದಿಸಲಾಯಿತು. ಅಂದಿನ ಕಾಲಘಟ್ಟದಲ್ಲಿನ ಸ್ಥಿತಿಗಳು ಆ ಅಪರಾಧದ ಕಾನೂನನ್ನು ಉಳಿಸಿಕೊಳ್ಳುವ ಅವಶ್ಯಕತೆಯನ್ನ ಒಪ್ಪಿಸಿದ್ದವು. ಇಂದಿಗೂ ಕೇದಾರನಾಥ್ ಪ್ರಕರಣ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲು.

ಕೇದಾರನಾಥ್ ಪ್ರಕರಣದ ಮುಖ್ಯ ತೀರ್ಪೆಂದರೆ ಎಲ್ಲವುದೂ ದೇಶದ್ರೋಹವಲ್ಲ. 124ಎ ನಲ್ಲಿಯೇ ಅದಕ್ಕೆ ರಕ್ಷಣೆ ಕೊಡಲಾಗಿದೆ. ಸರ್ಕಾರದ ನೀತಿಗಳಿಗೆ ವಿರೋಧ ವ್ಯಕ್ತಪಡಿಸುವುದು, ಸರಿಯಿಲ್ಲವೆನ್ನುವುದು, ಮೂರ್ಖತ್ವದಿಂದ ಕೂಡಿದೆಯೆಂಬುದು, ಜನವಿರೋಧಿ ಎನ್ನುವುದು, ಮತ್ತು ಯಾವುದೇ ರೀತಿಯ ವಿಮರ್ಶೆಯನ್ನು ಅಲ್ಲಿ ರಕ್ಷಿಸಲಾಗಿದೆ. ಅದಿಲ್ಲದೇ ಇದ್ದರೇ ಪ್ರತಿ ವಿರೋಧಪಕ್ಷದ ರಾಜಕಾರಣಿಯನ್ನು ಜೈಲಲ್ಲಿಡಬಹುದು – ಅದು ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಕೇದಾರನಾಥ್ ತೀರ್ಪು ಎಷ್ಟೇ ಸರಿಯಿದ್ದರೂ, ಸರ್ಕಾರಗಳೆಂದೂ ತುಂಬಾ ಶ್ರದ್ಧೆಯಿಂದ ಆ ತೀರ್ಪನ್ನು ಕಡೆಗಣಿಸಿವೆ ಎಂಬುದು ಚಾರಿತ್ರಿಕ ಸತ್ಯ. ಆದರೆ ಇದನ್ನ ಯಾರ ಮೇಲೆ ಪ್ರಯೋಗಿಸಲಾಯಿತು ಎಂದರೆ, ಸಾಮಾನ್ಯವಾಗಿ ಜನಪರ ಚಳವಳಿಗಳ ಮೇಲೆ. ಅವುಗಳ ನಾಯಕರನ್ನು ಯಾವಾಗಲೂ ದೇಶದ್ರೋಹದ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಇರಲಿ, ಕಮ್ಯೂನಿಸ್ಟ್ ನಾಯಕರಿರಲಿ, ಅಟಲ್ ಬಿಹಾರಿ ವಾಜಪೇಯಿಯವರಿರಲಿ ಒಂದು ಚಳವಳಿಯ ನೇತಾರರಾಗಿದ್ದರೆ ದೇಶದ್ರೋಹದ ಆರೋಪ ಕಟ್ಟಿಟ್ಟಬುತ್ತಿ ಎಂಬಂತಿದೆ. ಇಂದಿಗೂ ಆ ಸ್ಥಿತಿ ಬದಲಾಗಿಲ್ಲ.

ಎಮರ್ಜೆನ್ಸಿ ಸಮಯದಲ್ಲಂತೂ ಈ ಅಪರಾಧ ಕಾನೂನನ್ನು, ಸರ್ಕಾರದ ಮಾತನ್ನು ವಿರೋಧಿಸಿದವರೆಲ್ಲರ ಮೇಲೂ ಉಪಯೋಗಿಸಲಾಯಿತು. ಅದರ ಪರಿಣಾಮ ನಮಗೆಲ್ಲರಿಗೂ ತಿಳಿದ ಇತಿಹಾಸ.

ಎಂಭತ್ತರ, ತೊಂಭತ್ತರ ದಶಕ ಹಾಗೂ ಇಪ್ಪತ್ತೊಂದನೇ ಶತಮಾನದ ಮೊದಲ ದಶಕದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಕಂಡರೂ (ಬಹುಶಃ ಮೈತ್ರಿ ಸರ್ಕಾರಗಳ ಕಾರಣವಿರಬಹುದು) ಕಳೆದೈದು ವರ್ಷಗಳಲ್ಲಿ ಇದರ ದುರುಪಯೋಗ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೆಂದೆ ತಂದ UAPA ಕಾಯ್ದೆ ನಂತರದ ರೂಪಗಳಲ್ಲಿ, TADA ಹಾಗೂ POTA ಕಾಯ್ದೆಗಳಿಗೆ ಪರ್ಯಾಯವಾಗಿ ಬದಲಾವಣೆಯಾಗಿದ್ದು ಚಾರಿತ್ರಿಕ ಸತ್ಯ. ಯಾವುದೋ ಆತಂಕವಾದಿ ಸಂಘಟನೆಯನ್ನು ಬಹಿಷ್ಕರಿಸುವ ಹಾಗೂ ಅದರ ಕಾರ್ಯಗಳನ್ನು ಕಟ್ಟಿಹಾಕುವ ಹಾಗೂ ಯಾವುದೇ ಅಂಥಾ ಘಟನೆಗಳಿಗೆ ಶಿಕ್ಷಿಸುವಂಥಾ ಉದ್ದೇಶವನ್ನು ಹೊಂದಿದ್ದು ತನ್ನ ಹೊಸ ಅವತಾರದಲ್ಲಿ ಯಾರನ್ನಾದರೂ ಅದರಡಿಯಲ್ಲಿ ಜೈಲಿಗೆ ತಳ್ಳಬಹುದಾದ ಮತ್ತು ಸಂವಿಧಾನ ಜನಿತ ಹಕ್ಕುಗಳನ್ನು ಇಲ್ಲದಂತೆ ಮಾಡುವ ಅಧಿಕಾರವನ್ನು ಹೊಂದಿದೆ.

ಅದರ ತೀವ್ರ ದುರುಪಯೋಗ ಇಂದು ನಾವೆಲ್ಲ ಕಾಣುತ್ತಿದ್ದೇವೆ. ಬೀದರಿನ ಶಾಲೆಯಲ್ಲಿ ನಾಟಕಕ್ಕೆಂದು ಮಗುವಿಗೆ ಹಳೆಯ ಚಪ್ಪಲಿಯೊಂದು ಕೊಟ್ಟಿದ್ದು ತಾಯಿಯ ದೇಶದ್ರೋಹವಾಗುವಷ್ಟು, ಒಂದು ಕವನ ಬರೆದರೆ, ಒಂದು ಕಾರ್ಟೂನನ್ನು ಶೇರ್ ಮಾಡಿದರೆ, ಕಾರ್ಟೂನ್ ಚಿತ್ರಿಸಿದರೆ, ಒಂದು ಸ್ಲೋಗನ್ ಕೂಗಿದರೂ ದೇಶದ್ರೋಹ ಪ್ರಕರಣ ದಾಖಲಿಸುವ ಸ್ಥಿತಿಯನ್ನು ನಾವು ತಲುಪಿದ್ದೇವೆ. ಮಾನವ ಹಕ್ಕುಗಳನ್ನು ಕೇಳುವವರನ್ನು ಜೈಲಿಗಟ್ಟುತ್ತಿದೇವೆ. ಅದು ಒಬ್ಬ ಕವಿಯಿರಲಿ, ಪ್ರಾಧ್ಯಾಪಕನಿರಲಿ, ವಿದ್ಯಾರ್ಥಿಯಿರಲಿ, ಬಸರಿಯಿರಲಿ, ಸಂವಿಧಾನಿಕ ರೀತಿಯ ಹೋರಾಟವನ್ನು ತನ್ನದಾಗಿಸಿಕೊಂಡವನಿರಲಿ, ಸರ್ಕಾರಗಳು ಸಹಿಸುತ್ತಿಲ್ಲ. ಇಂದು ಇಂಥಾ ಕಾನೂನುಗಳಲ್ಲಿ ಆರೋಪಿಸುವುದಕ್ಕೆ ಬಲವಾದ ಕಾರಣಗಳೂ ಬೇಕಿಲ್ಲ.

ಇವು ನಾವು ನಮಗಾಗಿ ಬರೆದುಕೊಂಡಿರುವ, ನಮ್ಮದಾದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಚ್ಯುತಿ ತಂದಿವೆ. ಇಂಥಾ ಕರಾಳ ಕಾಯ್ದೆಗಳ ಮರುಪರಿಶೀಲನೆ ಅತ್ಯವಶ್ಯವಾಗಿದೆ. ಇಂಥಾ ಕಾನೂನುಗಳ ದುರುಪಯೋಗ ನಿಲ್ಲಬೇಕಿದೆ.


ಇದನ್ನು ಓದಿ: ಪತಂಜಲಿ ಕೊರೊನಾ ಔಷಧಿ ಮಾರಿದರೆ ಕ್ರಮ: ರಾಜಸ್ಥಾನ ಸಚಿವರ ಎಚ್ಚರಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...