Homeಮುಖಪುಟಪೋಕ್ಸೋ ಆರೋಪಿ ಬ್ರಿಜ್‌ಭೂಷಣ್‌ ಬೆಂಬಲಕ್ಕೆ ‘ಸಂತರು’ ನಿಂತಿರುವುದೇಕೆ?

ಪೋಕ್ಸೋ ಆರೋಪಿ ಬ್ರಿಜ್‌ಭೂಷಣ್‌ ಬೆಂಬಲಕ್ಕೆ ‘ಸಂತರು’ ನಿಂತಿರುವುದೇಕೆ?

- Advertisement -
- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಪೋಕ್ಸೋ ಪ್ರಕರಣದ ಆರೋಪಿ, ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಜೂನ್‌ 5ರಂದು ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಸಂತರ ನೇತೃತ್ವದಲ್ಲಿ ರ್‍ಯಾಲಿಯನ್ನು ನಡೆಸಲು ಮುಂದಾಗಿದ್ದರು. ಅಯೋಧ್ಯೆಯ ಸಂತರ ಬೆಂಬಲದ ಹೊರತಾಗಿಯೂ ರ್‍ಯಾಲಿಯನ್ನು ಮುಂದೂಡಲಾಗಿದೆ.

ಈ ನಿರ್ಧಾರದ ಹಿಂದೆ ಅನೇಕ ಕಾರಣಗಳಿವೆ ಎಂದು ನಿರ್ಧರಿಸಬಹುದು ಮತ್ತು ಚರ್ಚಿಸಬಹುದು. ಸ್ವಾಮೀಜಿ ಮತ್ತು ರಾಜಕಾರಣಿಗಳ ಈ ಹೊಂದಾಣಿ ಇದೆ. ಧರ್ಮ, ಪಿತೃ ಪ್ರಧಾನ ಶಕ್ತಿಗಳ ನಡುವೆ ಒಂದು ರೀತಿಯ ಗೊಂದಲವಿದ್ದರೂ ನಿರಾಕರಿಸಲಾಗದ ಸಂಬಂಧ ಇದೆ ಎಂಬುದು ತಿಳಿಯುತ್ತದೆ.

ಪಿತೃಪ್ರಭುತ್ವ ಮತ್ತು ಧರ್ಮವು ಸಾಮಾನ್ಯವಾಗಿ ಜೊತೆಜೊತೆಯಲ್ಲಿ ಸಾಗುತ್ತದೆ ಎಂದು ತಿಳಿದಿರುವವರು ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ನರೇಂದ್ರ ಮೋದಿ ಸಂಪುಟದ ಮಹಿಳಾ ಮಂತ್ರಿಗಳು ಮೌನವಾಗಿರುವ ಕುರಿತು ಹೆಚ್ಚು ಆಶ್ಚರ್ಯಚಕಿತರಾಗಿದ್ದಾರೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಮಹಿಳಾ ಸದಸ್ಯರು ಅತ್ಯಲ್ಪ ಪ್ರಾತಿನಿಧ್ಯ ಹೊಂದಿದ್ದರು. ಬಹುತೇಕ ಇಲ್ಲವೇ ಎನ್ನುವಷ್ಟು ಪಾಲ್ಗೊಂಡಿದ್ದರು.

ಎಲ್ಲಾ ವಲಯಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದರೂ ಮೋದಿ ಸರ್ಕಾರವು ಬ್ರಿಜ್‌ ಭೂಷಣ್‌ ಅವರನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದೆ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಆದರೂ ಆರೋಪಿ ಬ್ರಿಜ್‌ ಎಷ್ಟು ‘ಅಸುರಕ್ಷಿತ’ನಾಗಿದ್ದನೆಂದರೆ- ಸ್ತ್ರೀಯರ ವಿರುದ್ಧ ಧಾರ್ಮಿಕ ಶಕ್ತಿ ಹೇಗೆ ನಿಂತಿದೆ ಎಂಬುದನ್ನು ಪ್ರದರ್ಶಿಸುವುದಕ್ಕೂ ಯೋಚಿಸಿ ಸ್ವಾಮೀಜಿಗಳ ಬೆಂಬಲವನ್ನು ಪಡೆಯಬೇಕಾಗಿದೆ.

ಬ್ರಿಜ್ ಭೂಷಣ್ ಸಿಂಗ್‌ನನ್ನು ಬೆಂಬಲಿಸುತ್ತಿರುವ ಸಂತರು

ಆರೋಪಿ ಬ್ರಿಜ್‌ಭೂಷಣ್ ಶರಣ್‌ಸಿಂಗ್‌ನನ್ನು ಬೆಂಬಲಿಸುತ್ತಿರುವವರಲ್ಲಿ, ಹಿಂದುತ್ವವಾದಿ ಮಣಿರಾಮ್ ದಾಸ್ ಶಿಬಿರದ ಮಹಂತ್ ಕಮಲನಯನ್ ದಾಸ್ ಮುಂಚೂಣಿಯಲ್ಲಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಎಂದೇ ಇವರನ್ನು ಗುರುತಿಸಲಾಗಿದೆ.

ಬ್ರಿಜ್ ಪರ ಅಭಿಯಾನದಲ್ಲಿ ಹೆಚ್ಚು ಸಕ್ರಿಯವಾಗಿರುವವರಲ್ಲಿ ಮಹಂತ್ ಮಿಥಿಲೇಶ ನಂದಿನಿ ಶರಣ್ ಒಬ್ಬರು. 2012ರಲ್ಲಿ ಪರಿಚಯಿಸಲಾದ ಪೋಕ್ಸೋ ಕಾಯ್ದೆಯಲ್ಲಿ ದೋಷಗಳಿವೆ ಎಂದು ಇವರು ಮಾತನಾಡುತ್ತಿದ್ದಾರೆ. ಈ ಕಾಯ್ದೆಯು ‘ಚಾರಿತ್ರ್ಯ ಹರಣ ಮಾಡುತ್ತದೆ, ಅನೇಕ ಗಣ್ಯರನ್ನು ಮಾಧ್ಯಮಗಳ ವಿಚಾರಣೆ ಒಳಪಡಿಸುತ್ತದೆ.  ಕಾಯ್ದೆಯ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೊದಲು, ಮಹಂತ್ ಶರಣ್ ಅವರು ಪೋಕ್ಸೋ ಕಾನೂನಿನಲ್ಲಿ ದೋಷವನ್ನು ಕಂಡಿರಲಿಲ್ಲ. ಆದರೆ ಈಗ ಏನು ಹೇಳುತ್ತಾರೆ? “ಸಾಧು ಸಂತರು ಅಪ್ರಾಪ್ತ ವಯಸ್ಕರಿಗೆ ಆರ್ಶೀವದಿಸಲು ತಲೆ ಮೇಲೆ ಕೈ ಇಟ್ಟರೂ ಕೆಟ್ಟದ್ದಾಗಿ ಕಾನೂನು ಪರಿಗಣಿಸಬಹುದು. ಸಂತರ ವಿರುದ್ಧ ಕ್ರಮ ಕೈಗೊಳ್ಳಬಹುದು” ಎನ್ನಲು ಶುರು ಮಾಡಿದ್ದಾರೆ.

ಪ್ರತಿಷ್ಠಿತ ಕಾಮತಾ ಪ್ರಸಾದ್ ಸುಂದರ್ ಲಾಲ್ ಸಾಕೇತ್ ಪಿಜಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ನಾಯಕನಾಗಿ, ಪ್ರಬಲ ಹಿಂದುತ್ವದ ನಾಯಕನಾಗಿ ಬಂದವರು ಬ್ರಿಜ್ ಎಂದು ಈ ಭಾಗದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬ್ರಿಜ್‌ ಆರೋಪಿಯಾಗಿದ್ದನು. “ಈ ಪ್ರಕರಣದಲ್ಲಿ ನನ್ನನ್ನು ಬಂಧಿಸಲಾಗಿತ್ತು” ಎಂದು ಬ್ರಿಜ್‌ ಹೆಮ್ಮೆಪಡುತ್ತಾನೆ.

ಇದನ್ನೂ ಓದಿರಿ: ಕುಸ್ತಿಪಟುಗಳ ಪ್ರತಿಭಟನೆಗೆ ಬಿಜೆಪಿ ಸಂಸದೆಯರಾದ ಮೇನಕಾ ಗಾಂಧಿ, ಪ್ರೀತಮ್ ಮುಂಡೆ ಬೆಂಬಲ

ಅಯೋಧ್ಯೆಯಲ್ಲಿನ ಸುದೀರ್ಘ ಒಡನಾಟದಿಂದಾಗಿ ಬ್ರಿಜ್‌ ಭೂಷಣ್‌ಗೆ ಋಣಿ ಎಂದು ಭಾವಿಸುವ ಜನರಿಗೆ ಕೊರತೆಯಿಲ್ಲ. ಆತನಿಗೆ ಆಪ್ತರು ಎಂದು ಹೇಳಿಕೊಳ್ಳುವ ಅನೇಕರು ಸಹ ಈಗ ಮುಂದೆ ಬರುತ್ತಿದ್ದಾರೆ. ಬ್ರಿಜ್‌ ಭೂಷಣ್‌ನ ಊರು ಸರಯುವಿನ ಒಂದು ಕಡೆ ಇದ್ದರೆ ಅಯೋಧ್ಯೆ ಇನ್ನೊಂದು ಬದಿಯಲ್ಲಿದೆ. ಆತ ಬಿಜೆಪಿಯ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಅನೇಕ ಹಿತೈಷಿಗಳನ್ನು ಹೊಂದಿದ್ದಾನೆ.

ಅಯೋಧ್ಯೆಯ ಸ್ವಾಮೀಜಿಗಳು ಸಿಂಗ್‌ಗೆ ಏಕೆ ಬೆಂಬಲ ನೀಡುತ್ತಿದ್ದಾರೆ? ಸ್ವಾಮೀಜಿಗಳು ಮತ್ತು ಬ್ರಿಜ್‌ ಇಬ್ಬರೂ ಪರಸ್ಪರ ಅವಲಂಬಿಸಿರುವುದರ ಪರಿಣಾಮ ಇದೆಂದು ಕೆಲವು ತಜ್ಞರು ಹೇಳುತ್ತಾರೆ. ಏಕೆಂದರೆ ಅವರು ಪರಸ್ಪರ ಆಶ್ರಯವನ್ನು ಪಡೆಯುತ್ತಾರೆ ಮತ್ತು ಅಗತ್ಯವಿದ್ದಾಗ ಪರಸ್ಪರ ಪ್ರಭಾವದ ಲಾಭವನ್ನೂ ಪಡೆಯುತ್ತಾರೆ.

ಬ್ರಿಜ್‌ಗೆ ಬೆಂಬಲ ನೀಡಿರುವವರನ್ನು ‘ಸಂತರು’ ಎಂದು ಮಾಧ್ಯಮಗಳು ಉಲ್ಲೇಖಿಸುತ್ತಿರುವುದಕ್ಕೆ ಭಾರತೀಯ  ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಮುಖಂಡ ಸೂರ್ಯಕಾಂತ್ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇವರನ್ನು ಸಂತರು ಎಂದು ಬಿಂಬಿಸುವ ಬದಲು ಹುಸಿ ಸಂತರು ಎಂದು ಏಕೆ ಉಲ್ಲೇಖಿಸುವುದಿಲ್ಲ”  ಎಂದು ಪ್ರಶ್ನಿಸಿದ್ದಾರೆ. “ರಾಮಚರಿತಮಾನಸದಲ್ಲಿ ಗೋಸ್ವಾಮಿ ತುಳಸಿದಾಸರು ಪಟ್ಟಿ ಮಾಡಿರುವ ನಿಜವಾದ ಸಂತರ ಗುಣಗಳು ಮತ್ತು ಗುಣಲಕ್ಷಣಗಳ ಬಗ್ಗೆ ಇವರು ಓದಿಲ್ಲ” ಎಂದು ಟೀಕಿಸಿದ್ದಾರೆ.

ಮಾಹಿತಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...