Homeಮುಖಪುಟಘರ್ಷಣೆ ನಿರೋಧಕ ಸಾಧನ ಏಕಿರಲಿಲ್ಲ?; ರೈಲ್ವೆ ಸಚಿವರ ಎದುರಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ

ಘರ್ಷಣೆ ನಿರೋಧಕ ಸಾಧನ ಏಕಿರಲಿಲ್ಲ?; ರೈಲ್ವೆ ಸಚಿವರ ಎದುರಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನೆ

- Advertisement -
- Advertisement -

ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತವನ್ನು ‘ಶತಮಾನದ ಅತಿದೊಡ್ಡ’ ದುರಂತ ಎಂದು ಕರೆದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ರೈಲುಗಳಲ್ಲಿ Anti-collision device (ಘರ್ಷಣೆ ನಿರೋಧಕ ಸಾಧನ) ಏಕಿರಲಿಲ್ಲ? ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಶ್ನಿಸಿದ್ದಾರೆ.

ರೈಲುಗಳಲ್ಲಿ ಏಕೆ ಆಂಟಿ-ಕಲ್ಯೂಷನ್ ಡಿವೈಸ್ಇದ್ದಿದ್ದರೆ ದುರಂತವನ್ನು ತಡೆಯಬಹುದಿತ್ತು. ಆ ಸಾಧನವನ್ನು ರೈಲುಗಳಲ್ಲಿ ಏಕೆ ಅಳವಡಿಸಲಾಗಿಲ್ಲ ಎಂದು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

“ಇದು ಈ ಶತಮಾನದ ಅತಿ ದೊಡ್ಡ ರೈಲು ಅಪಘಾತವಾಗಿದ್ದು, ಇದರ ಹಿಂದೆ ಏನಾದರೂ ಕೈವಾಡವಿರಬೇಕು. ಈ ಕುರಿತು ಸೂಕ್ತ ತನಿಖೆ ನಡೆಸಿ, ಸತ್ಯ ಹೊರಬರಬೇಕು. Anti-collision device ಏಕೆ ಕೆಲಸ ಮಾಡಲಿಲ್ಲ?” ಎಂದು ವೈಷ್ಣವ್ ಅವರ ಪಕ್ಕದಲ್ಲಿ ನಿಂತು ಪ್ರಶ್ನಿಸಿದ್ದಾರೆ.

“ಕೋರಮಂಡಲ್ ಅತ್ಯುತ್ತಮ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಒಂದಾಗಿದೆ. ನಾನು ಮೂರು ಬಾರಿ ರೈಲ್ವೆ ಸಚಿವಳಾಗಿದ್ದೆ. ನಾನು ನೋಡಿದ ಪ್ರಕಾರ ಇದು 21 ನೇ ಶತಮಾನದ ಅತಿದೊಡ್ಡ ರೈಲ್ವೆ ಅಪಘಾತವಾಗಿದೆ. ನನಗೆ ತಿಳಿದ ಮಟ್ಟಿಗೆ ರೈಲಿನಲ್ಲಿ Anti-collision device ಇರಲಿಲ್ಲ. ಆ  ಸಾಧನ ರೈಲಿನಲ್ಲಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ… ಸತ್ತವರನ್ನು ಮರಳಿ ತರಲು ಸಾಧ್ಯವಿಲ್ಲ ಆದರೆ ಈಗ ನಮ್ಮ ಕೆಲಸ ರಕ್ಷಣಾ ಕಾರ್ಯಾಚರಣೆ ಮತ್ತು ಸಹಜ ಸ್ಥಿತಿಯ ಮರುಸ್ಥಾಪನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ನಾನು ಇಲ್ಲಿ ರೈಲ್ವೆ ಸಚಿವರು ಮತ್ತು ಬಿಜೆಪಿ ಸಂಸದರೊಂದಿಗೆ ನಿಂತಿದ್ದೇನೆ. ಬಂಗಾಳ ಸರ್ಕಾರವು ಅಪಘಾತದಲ್ಲಿ ಮರಣ ಹೊಂದಿಗೆ ನಮ್ಮ ರಾಜ್ಯದ ಜನರಿ ಕುಟುಂಬಗಳಿಗೆ ತಲಾ ₹ 5 ಲಕ್ಷ ನೀಡಲಿದೆ ಮತ್ತು ಕೆಲಸ ಪೂರ್ಣಗೊಳ್ಳುವವರೆಗೆ ರೈಲ್ವೆ ಮತ್ತು ಒಡಿಶಾ ಸರ್ಕಾರದೊಂದಿಗೆ ಸಹಕರಿಸುತ್ತದೆ. ನಾವು ಹೆಚ್ಚಿನ ವೈದ್ಯಕೀಯ ಸಹಾಯಕ್ಕಾಗಿ ಬಂಗಾಳದಿಂದ ಒಡಿಶಾಗೆ ಎರಡು ಬಸ್ಸುಗಳು ಮತ್ತು 40 ವೈದ್ಯರನ್ನು ಸಹ ಕಳುಹಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

Anti-collision device ಎಂದರೇನು?

Anti-collision device ಎಂಬುದು ರೈಲು-ಘರ್ಷಣೆ ತಡೆಗಟ್ಟುವ ವ್ಯವಸ್ಥೆಯಾಗಿದ್ದು, ಇದನ್ನು ರಾಜಾರಾಮ್ ಬೊಜ್ಜಿ ಎಂಬುವವರು ಕಂಡು ಹಿಡಿದಿದ್ದಾರೆ. ಇದನ್ನು ರೈಲುಗಳಲ್ಲಿ ಅಳವಡಿಸಿದರೆ ಅದು ರೇಡಿಯೋ ತರಂಗಾಂತರ ಮೂಲಕ ಎದುರಿಗೆ ಬರುವ ರೈಲುಗಳ ಮಾಹಿತಿಯನ್ನು ರವಾನಿಸುತ್ತದೆ. ಅಲ್ಲದೇ ಎದುರಿಗೆ 3 ಕಿ.ಮೀ ವ್ಯಾಪ್ತಿಯಲ್ಲಿ ರೈಲು ಬರುತ್ತಿರುವಾಗಲೇ ಅದು ಸ್ವಯಂಚಾಲಿತವಾಗಿ ಬ್ರೇಕ್‌ ಅನ್ನು ಒತ್ತುತ್ತದೆ. ಅಂದರೆ ಅವು 30 ಕಿಮೀ/ಗಂ ಅಥವಾ ಪರ್ಯಾಯ ಪೂರ್ವನಿರ್ಧರಿತ ವೇಗಕ್ಕೆ ಕ್ಷೀಣಿಸಲು ಬ್ರೇಕ್ ಹಾಕುತ್ತವೆ. ಆ ಮೂಲಕ ಅಪಘಾತ ತಡೆಗಟ್ಟುವಲ್ಲಿ ಶಸಕ್ತವಾಗಿದೆ ಎಂಬ ಖ್ಯಾತಿ ಪಡೆದಿದೆ.

ಈ ರೀತಿಯ Anti-collision device ಗಳನ್ನು ರೈಲ್ವೇ ಹಳಿ ಕ್ರಾಸಿಂಗ್‌ ಗೇಟ್‌ಗಳಲ್ಲಿ ಸಹ ಅಳವಡಿಸುತ್ತಾರೆ. ರೈಲುಗಳು ಗೇಟುಗಳ 2 ಕಿ.ಮೀ ದೂರ ಇರುವಾಗಲೇ ವೇಗವನ್ನು ಕಡಿತಗೊಳಿಸಲು ಸೂಚನೆ ನೀಡುತ್ತವೆ ಎನ್ನಲಾಗಿದೆ.

ಒಂದು ಲೊಕೊ ಎಸಿಡಿಯು ಇತರ ರೈಲು ಬೌಂಡ್ ಎಸಿಡಿಗಳಿಂದ ಹಸ್ತಚಾಲಿತ ‘ಎಸ್‌ಒಎಸ್’ ಸಂದೇಶವನ್ನು ಸ್ವೀಕರಿಸಿದರೆ ಅಥವಾ ಅದರ ರೇಡಿಯಲ್ ವ್ಯಾಪ್ತಿಯ ಮೂರು ಕಿಲೋಮೀಟರ್‌ಗಳೊಳಗಿನ ಸ್ಟೇಷನ್ ಎಸಿಡಿ, ರೈಲನ್ನು ನಿಲುಗಡೆಗೆ ತರಲು ಅದು ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ. ಈ ಕುರಿತ ಹೆಚ್ಚಿನ ಮಾಹಿಗೆ ಕೆಳಗಿನ ವಿಡಿಯೋ  ನೋಡಿ.

ಇದನ್ನೂ ಓದಿ; ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡ ಭೀಕರ ರೈಲು ದುರಂತಗಳಿವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...