Homeಕರ್ನಾಟಕಸರ್ಕಾರ ರಚಿಸಲು ಆಗುತ್ತಿಲ್ಲ: ಜ್ಯೋತಿಷ್ಯದ ಮೊರೆ ಹೋದ ಯಡಿಯೂರಪ್ಪ ಮತ್ತು ಮಾಧ್ಯಮಗಳು

ಸರ್ಕಾರ ರಚಿಸಲು ಆಗುತ್ತಿಲ್ಲ: ಜ್ಯೋತಿಷ್ಯದ ಮೊರೆ ಹೋದ ಯಡಿಯೂರಪ್ಪ ಮತ್ತು ಮಾಧ್ಯಮಗಳು

- Advertisement -
- Advertisement -

ಅಧಿವೇಶನದ ಪೂರ್ತಿ ಯಡಿಯೂರಪ್ಪ ಮತ್ತು ಬಿಜೆಪಿಯವರು ಮಾತನಾಡಿದ್ದು ಹೆಚ್ಚು ಕಮ್ಮಿ ಒಂದೇ ಮಾತು. ಅದು ಬೇಗ ವಿಶ್ವಾಸಮತ ಸಾಬೀತುಪಡಿಸಿ ಎಂಬುದೇ ಆಗಿತ್ತು. ಅದರರ್ಥ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸಂಖ್ಯಾಬಲ ಇಲ್ಲದಿರುವುದರಿಂದ ಈ ಸರ್ಕಾರ ಬಿದ್ದುಹೋಗುತ್ತದೆ ಕೂಡಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ಎಲ್ಲಾ ಬಿಜೆಪಿಗರ ಮನದಾಸೆ. ಅದಕ್ಕಾಗಿ ಸುಪಾರಿ ಪಡೆದವರಂತೆ ವರ್ತಿಸಿದ್ದವು ಮುಖ್ಯವಾಹಿನಿ ಎಲೆಕ್ಟ್ರಾನಿಕ್ ಮಾಧ್ಯಮಗಳು..

ಈಗ ಕುಮಾರಸ್ವಾಮಿಯವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡುದಿನಗಳಾಗುತ್ತಾ ಬಂದರೂ ಹೊಸ ಸರ್ಕಾರದ ಸುದ್ದಿಯೇ ಇಲ್ಲವಲ್ಲ?? ಸದನದಲ್ಲಿ ಚರ್ಚೆ ನಡೆಯುವಾಗ ಬಿಜೆಪಿ ಮತ್ತು ಮಾಧ್ಯಮಗಳಿಗಿದ್ದ ಆತುರ ಹೀಗೆಕ್ಕಿಲ್ಲ? ಏಕೆಂದರೆ ಅಧಿಕಾರ ಹಿಡಿಯುವ ಕಾರಣಕ್ಕಾಗಿ ಬಿಜೆಪಿಯವರು ಯಾವ ಆಪರೇಷನ್ ಮಾಡಿದರೋ, ಅದೇ ಆಪರೇಷನ್ ಅವರಿಗೆ ಮುಳುವಾಗಿಬಿಡದೆಂಬ ಭಯ ಕಾಡುತ್ತಿದೆ. ಅದಕ್ಕೆ ಇಲ್ಲ ಸಲ್ಲದ ನೆಪಗಳನ್ನು ಹುಡುಕುತ್ತಿದ್ದಾರೆ. ಅಂತಹ ನೆಪಗಳು ಇಲ್ಲಿವೆ ನೋಡಿ

ಜ್ಯೋತಿಷ್ಯದ ಜೋತು ಬಿದ್ದ ಯಡಿಯೂರಪ್ಪ

ಈ ಹಿಂದಿನ ಸರ್ಕಾರ ಲೋಕೋಪಯೋಗಿ ಇಲಾಖೆಯ ಸಚಿವ ಎಚ್.ಡಿ ರೇವಣ್ಣನವರನ್ನು ನಿಂಬೆ ಹಣ್ಣು ರೇವಣ್ಣ ಎಂದು ಎಲ್ಲರೂ ಆಡಿಕೊಂಡು ಸುಸ್ತಾಗಿದ್ದರು. ಸ್ವತಃ ಸ್ಪೀಕರ್ ಸಹ ರೇವಣ್ಣನವರು ಚರ್ಚೆಗೆ ಸಮಯ ಕೇಳಿದಾಗ ನಮ್ಮ ಜ್ಯೋತಿಷಿಗಳ ಬಳಿ ಕೇಳಿ ಗಳಿಗೆ ನಿಗಧಿ ಮಾಡುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಈಗ ಯಡಿಯೂರಪ್ಪನವರು ಸಹ ತಾವೇನು ಕಮ್ಮಿ ಎಂದು ರೇಣುಕಾರ್ಚಾರ ಎಂಬ ಜ್ಯೋತಿಷಿಯ ಮೊರೆಹೋಗಿದ್ದಾರೆ.

ಆ ಜ್ಯೋತಿಷಿಯು ಅಳೆದು ತೂಗಿ ಶುಕ್ರವಾರ ಸಂಜೆ 6 ಗಂಟೆ ಮೇಲೆ, ಇಲ್ಲ ಸೋಮವಾರ ಅಥವಾ ಆಷಾಡ ಮುಗಿದ ಮೇಲೆ ಯಡಿಯೂರಪ್ಪನವರು ಪ್ರಮಾಣವಚನ ಸ್ಪೀಕರಿಸಿದರೆ ಒಳ್ಳೇಯದು ಎಂದು ಷರಾ ಬರೆದಿದ್ದಾರೆ. ಎಂದರೆ ಅಷ್ಟು ದಿನ ಸರ್ಕಾರ ರಚಿಸುವ ಸರ್ಕಸ್ಸನ್ನು ಎಳೆಯಲು ಅನುವು ಮಾಡಿಕೊಟ್ಟಿದ್ದಾರೆ.

ಅವರು ಹಾಗೇ ಹೇಳಿ ಮುಗಿಸಿದ ಮೂರೇ ನಿಮಿಷಕ್ಕೆ ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ಮೂವತ್ತು ನಿಮಿಷದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪಾಪಾ ಅವರಷ್ಟು ಸ್ಪೀಡು ಬಿಜೆಪಿ ಸರ್ಕಾರಕ್ಕಿಲ್ಲ.

ಐವರು ಡಿಸಿಎಂಗಳನ್ನು ತಪ್ಪಿಸಬೇಕು

ಸರ್ಕಾರ ರಚನೆ ತಡವಾಗುತ್ತಿರುವುದಕ್ಕೆ ಟಿವಿ ಮಾಧ್ಯಮಗಳು ಕಂಡುಕೊಂಡ ಪರಿಹಾರ ಐವರು ಡಿಸಿಎಂಗಳನ್ನು ತಪ್ಪಿಸಬೇಕು ಎಂಬುದಾಗಿದೆ. ಅವರ ಪ್ರಕಾರ ಬಿಜೆಪಿಯಲ್ಲಿ ಐವರು ನಾಯಕರು ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರಿಗೆ ಕೊಡುವುದು ಕಷ್ಟ ಹಾಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ.

ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ಬಿ.ಶ್ರೀರಾಮುಲು, ಆರ್.ಅಶೋಕ್ ಮತ್ತು ಗೋವಿಂದ ಕಾರಜೋಳ ರವರು ಹೆಸರನ್ನು ಪದೇ ಪದೇ ಉಲ್ಲೇಖಿಸುತ್ತಿರುವ ಟಿ.ವಿಗಲು ಸದ್ದಿಲ್ಲದೇ ಅರವಿಂದ ಲಿಂಬಾವಳಿ ಹೆಸರನ್ನು ಕೈಬಿಟ್ಟಿದ್ದಾರೆ. ವಿಶ್ವಾಸಮತ ಯಾಚನೆಗೂ ಮುನ್ನವೇ ರೆಸಾರ್ಟ್ ನಲ್ಲಿ ಕೆ.ಎಸ್ ಈಶ್ವರಪ್ಪ ಮತ್ತು ಅರವಿಂದ ಲಿಂಬಾವಳಿ ನಡುವೆ ಇದೇ ಡಿಸಿಎಂ ಸ್ಥಾನಕ್ಕಾಗಿ ಕಿತ್ತಾಟವಾದುದ್ದಾಗಿಯೂ, ತದನಂತರವೇ ಅಶ್ಲೀಲ ಸಿ.ಡಿ ಬಿಡುಗಡೆಯಾಗಿದ್ದು ಆದರೂ ಅವರ ಬಗ್ಗೆ ಟಿವಿಗಳು ಚಕಾರವೆತ್ತುತ್ತಿಲ್ಲ.

ಸ್ಪೀಕರ್ ರವರು ಏನಂಥಾರೆ?

ಇನ್ನು ಅತೃಪ್ತ ಶಾಸಕರೆಂದು ಕರೆಯುವ 16 ಜನ ಶಾಸಕರ ರಾಜೀನಾಮೆ ವಿಚಾರವಿನ್ನು ಬಗೆಹರಿದಿಲ್ಲ. ಸುಪ್ರೀಂ ಕೋರ್ಟ್ ಸಹ ಅಂತಿಮ ತೀರ್ಪು ನೀಡಿಲ್ಲ. ಅವರನ್ನು ಈ ವಿಧಾನಸಭಾ ಅವಧಿಪೂರ್ತಿ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹ ಮಾಡಬೇಕೇಂದು ಸ್ಪೀಕರ್ ರವರು ಕಾಯುತ್ತಿದ್ದಾರೆ.

ಇಂದು ಮಾಧ್ಯಮಗಳು ಸ್ಪೀಕರ್ ರವರಿಗೆ ಪದೇ ಪದೇ ಆ ಶಾಸಕರ ರಾಜೀನಾಮೆ ಏನು ಮಾಡುತ್ತೀರಿ? ಅನರ್ಹತೆ ಯಾವಾಗ ಮಾಡುತ್ತೀರಿ ಎಂದು ಪ್ರಶ್ನೆ ಹಾಕುತ್ತಿದ್ದರು. ಒಂದೂ ಚಾನೆಲ್ ಅಂತೂ ಆ ಶಾಸಕರನ್ನು ಮತ್ತೆ ವಿಚಾರಣೆಗೆ ಕರೆಯುತ್ತೀರಾ ಎಂದು ಪ್ರಶ್ನಿಸಿತು. ಆಗ ಸಿಟ್ಟಿಗೆದ್ದ ಸ್ಪೀಕರ್ ರಮೇಶ್ ಕುಮಾರ್, “ನಮಗೇನು ಬೇರೆ ಕೆಲಸ ಇಲ್ಲ ಅನ್ಕೊಂಡ್ರ? ಬೇಕಾದರೆ ನೀವೆ ಕರೆಸಿ ವಿಚಾರಣೆ ಮಾಡಿಕೊಳ್ಳಿ” ಎಂದು ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ಗುಟ್ಟು ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ಹೈಕಮಾಂಡ್ ಎಂಬ ಗುಮ್ಮ

ಇನ್ನು ಬಿಜೆಪಿ ಹೈಕಮಾಂಡ್ ಕೂಡ ಗೊಂದಲಕ್ಕೆ ಬಿದ್ದಿದೆ. ಹಾಗಾಗಿ ರಾಜ್ಯ ಬಿಜೆಪಿಗೆ ಯಾವುದೇ ಸ್ಪಷ್ಟ ಸೂಚನೆಯನ್ನು ಕೊಟ್ಟಿಲ್ಲ. ಇದು ಯಡಿಯೂರಪ್ಪನವರ ಎದೆಬಡಿತವನ್ನು ಹೆಚ್ಚಿಸಿದೆ. ಕಷ್ಟಪಟ್ಟು ಮೈತ್ರಿ ಸರ್ಕಾರ ಬೀಳಿಸಿದ್ದರೂ ತಾನು ಪಟ್ಟಕ್ಕೆರಲು ತಡವಾಗುತ್ತಿರುವುದು ಅವರ ಚಿಂತೆಗೆ ಕಾರಣವಾಗಿದೆ. ಹೈಕಮಾಂಡ್ ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡಿಬಿಟ್ಟರೆ ಏನು ಮಾಡುವುದು ಎಂಬುದು 76 ವರ್ಷದ ಯಡಿಯೂರಪ್ಪನವರ ಅನುಮಾನ.

ಹೈಕಮಾಂಡ್ ಅನುಮತಿ ನೀಡುವವರೆಗೂ ಸರ್ಕಾರ ರಚನೆಯ ಪ್ರಕ್ರಿಯೆ ನಿಂತಲ್ಲೇ ನಿಲ್ಲಲ್ಲಿದೆ.. ಒಟ್ಟಿಗೆ ಅಷ್ಟೆಲ್ಲಾ ಅರ್ಜೆಂಟ್ ಮಾಡಿದವರಿಗೆ ಈಗ ತಾವು ಕಾಲ ತಳ್ಳುವಂತ ಪರಿಸ್ಥಿತಿ ಬಂದೊದಗಿದೆ. ಇದೆಲ್ಲದರ ನೋವು ಅನುಭವಿಸುತ್ತಿರುವವರು ಮಾತ್ರ ಜನಸಾಮಾನ್ಯರು. ಸ್ಪೀಕರ್ ರವರು ಇದನ್ನು ಸೂಚ್ಯವಾಗಿ ಹೇಳಿದರು. ಬೇಗ ಹೊಸ ಸರ್ಕಾರ ರಚನೆಯಾಗಬೇಕು, ನಾನು ಯಾವಾಗ ಬೇಕಾದರೂ ಸದನ ನಡೆಸಲು ಸಿದ್ದನಿದ್ದೇನೆ ಏಕೆಂದರೆ ತಿಂಗಳ ಕೊನೆ ಆಗಿರುವುದರಿಂದ ಸರ್ಕಾರಿ ನೌಕರರಿಗೆ ಸಂಬಳ ಹಾಕುವುದು ಸಹ ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...