Homeಕರ್ನಾಟಕಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

ಸಿ.ಎಂ ಯಡ್ಡಿಗೇಕೆ ಉತ್ತರ ಕನ್ನಡವೆಂದರೆ ತಾತ್ಸಾರ?

- Advertisement -
- Advertisement -

ಕರ್ನಾಟಕ ನೆರೆಸಂತ್ರಸ್ತರ ಬಗ್ಗೆ ಪಿ.ಎಂ ಮೋದಿ ಮಾಹಾತ್ಮನಿಗೆಷ್ಟು ತಿರಸ್ಕಾರವೋ ಅಷ್ಟೇ ಅಸಡ್ಡೆ ಉತ್ತರ ಕನ್ನಡದ ಬದುಕು ನಲುಗಿದ ಮಂದಿಯ ಬಗ್ಗೆ ಯಡ್ಡಿಗಿದೆ. ಮೋದಿಗೆ ಯಡ್ಡಿಯ ಪಠಾಲಮ್ ಮೇಲೆ ಪೂರ್ವಾಗ್ರಹವಾದರೆ ಯಡ್ಡಿಗೆ ಉತ್ತರ ಕನ್ನಡದ ಸಂಸದಶಿಖಾಮಣಿ ಅನಂತಕುಮಾರ ಹೆಗಡೆ ಎಂದರೆ ನಿಗಿನಿಗಿ ಕೋಪ. ಒಟ್ಟಿನಲ್ಲಿ ನೊಂದವರಿಗೆ ಇನ್ನಷ್ಟೂ ನೋವು ಅಧಿಕಾರಸ್ಥರಿಗೆ ದ್ವೇಷಾಸೂಯೆಯ ಮೋಜು..

ಉತ್ತರಕನ್ನಡದಲ್ಲಿ ಅಗಸ್ಟ್ 5 ರಿಂದ 10 ರವರಗೆ ಪ್ರಳಯಾಂತಕ ಮಳೆಸುರಿದು ಹೆಚ್ಚು ಕಮ್ಮಿ 750 ಕೋಟಿ ರೂ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಸಮಿಕ್ಷೆ ನೆಡೆಸಿದೆ. ಮೂರ್ನಾಲ್ಕು ಜೀವ ಹರಣವಾಗಿವೆ. ನೂರಾರು ಜಾನುವಾರಗಳು ಸತ್ತು ಹೋಗಿವೆ. ಸಾವಿರಾರು ಎಕೆರೆ ತೋಟ-ಗದ್ದೆ ಕೊಚ್ಚಿಕೊಂಡು ಹೋಗಿವೆ. ಬರೋಬ್ಬರಿ 2,500 ಮನೆಗಳು ಮುರಿದು ಬಿದ್ದಿವೆ. ನೆರೆ ಹಾವಳಿ ಸಂತ್ರಸ್ತರಿಗೆ ಎರಡು ತಿಂಗಳಾದರೂ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಸಿಎಂ ಸಾಹೇಬರು ಬಂದು ತಮ್ಮ ಕಣ್ಣಿರು ಒರೆಸುತ್ತಾರೆಂಬ ನಿರೀಕ್ಷೆಯಲ್ಲಿದ್ದ ನೆರೆಪಿಡಿತ ಜನತೆಗೆ ಮೂರು ಬಾರಿ ಯಡ್ಡಿ ಮೋಸಮಾಡಿದ್ದಾರೆ.

ವಾರದಲ್ಲಿ ಎರಡು ಮೂರು ಬಾರಿ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಬರುತ್ತಾರೆಂದು ಜಿಲ್ಲಾಡಳಿತ ಎಲ್ಲಾ ಸಿದ್ದತೆ ಮಾಡಿತ್ತು. ಕಳೆದ ತಿಂಗಳು ಸಿಎಂ ಬರುವುದು ಗ್ಯಾರಂಟಿಯೆಂದು ನೆರೆ ಸಂತ್ರಸ್ತರು ಕಾದು ಕುಳಿತ್ತಿದ್ದರು. ಎಂಮ್ಮೆಲ್ಲೆಗಳು, ಸಂಸದರು ಯಡ್ಡಿ ಸ್ವಾಗತಿಸಲು ಅಲ್ಲಿ ನೆರದಿದ್ದರು. ಅಧಿಕಾರಿಗಳ ದಂಡಂತು ನಡುವತ್ತಿಗೆ ಬಂದಿತ್ತು. ಆದರೆ ಪಕ್ಕದ ಶಿವಮೊಗ್ಗದಲ್ಲಿದ ಯಡ್ಡಿ ಧಿಡೀರ್ ಉತ್ತರಕನ್ನಡಕ್ಕೆ ಬರಲಾರೇನೆಂದು ಸಂದೇಶ ಕಳುಹಿಸಿದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ತನ್ನ ಹಿತಶತ್ರುವೂ ಆದ ಈಶ್ವರಪ್ಪ ಕರೆದಿದ್ದ ಅಧಿಕಾರಿಗಳ ಸಭೆಗೆ ನುಗ್ಗಿ ನಿಭಾಯಿಸಿದ್ದರು. ಶಿವಮೊಗ್ಗೆಯ ಚೆಡ್ಡಿ ರಾಜಕಾರಣದ ಮೇಲಾಟಕ್ಕೆ ಉತ್ತರಕನ್ನಡ ಕಡೆಗಣಿಸ ಬೇಕಾಯಿತು.

ನೆರೆ ಹಾನಿಯ ಪರಿಶೀಲನೆಗೆಂದು ಪಕ್ಕದ ಧಾರವಾಡದ ಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲೆಗೊಮ್ಮೆ ಬಂದು ಹಾಗೆ ಹೋಗಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ ಶಶಿಕಲಾ ಜೊಲ್ಲೆ ಮೊನ್ನೆ ಬಂದು ಬೈ ಹೇಳಿದ್ದಾರೆ. ಜಿಲ್ಲೆಯ ಭೌಗೋಳಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಒಂಚೂರು ಗೊತ್ತಿಲ್ಲದ ಈ ಮಂತ್ರಿ, ಅಧಿಕಾರಿ ಹೇಳಿದ್ದಕೆ ಗೋಣು ಆಡಿಸಿದ್ದಾರೆ. ತಾವು ಬಂದಿದ್ದು ಬರೀ ಮಾಹಿತಿಯನ್ನು ಬಾಯಲ್ಲಿ ಸಿಎಂಗೆ ತಲುಪಿಸುವ ಪೋಸ್ಟ್ ಮ್ಯಾನ್ ಚಾಕರಿಗಷ್ಟೇ ಎಂಬಂತೆ ಹೊಣಗೆಡಿ ಮಾತನಾಡಿದ್ದಾರೆ. ಸಿಎಂ ಜೊತೆ ಚರ್ಚಿಸುತೇನೆಂದು ಮಂತ್ರಿಗಳು ಹೇಳಿದ್ದಾರೆಯೇ ಹೊರತು ಇಂತಿಷ್ಟು ಪರಿಹಾರಕ್ಕೆ ಬೇಡಿಕೆ ಇಡುತ್ತೇವೆಂದಾಗಲಿ, ನೊಂದವರಿಗೆ ಸೂಕ್ತ ಪರಿಹಾರ ಕೊಡುತ್ತೇವೆ ಎಂದಾಲಿ ಧೈರ್ಯದಿಂದ ಹೇಳಿಲ್ಲ. ಈ ಮಂತ್ರಿಗಳ ದಂಡಿನ “ದಂಡ” ಯಾತ್ರೆಗೆ ಮತ್ತು ಸಿಎಂ ಬರ್‍ತಾರೆಂದು ಮಾಡಿದ ಸಿದ್ದತೆಗೆ ಲಕ್ಷಾಂತರ ಹಾನಿಯಾಗಿದೆ ಹೊರತು ನೆರೆ ಪಿಡಿತರಿಗೆ ಪೈಸೆ ಫಾಯ್ದೆ ಆಗಿಲ್ಲ.

ಹನ್ನೊಂದು ಸಾವಿರಕ್ಕೂ ಹೆಚ್ಚು ಮಂದಿ ಪರಿಹಾರ ಕೇಂದ್ರಗಳನ್ನು ಸೇರಿದ್ದರು. ಇದಕ್ಕಿಂತಲು ಹೆಚ್ಚು ಮಂದಿ ನೆರೆಯಿಂದ ದಿಕ್ಕೆಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಕೆಲವರಿಗೆ ಪಂಚಕಜ್ಜಾಯ ಕೊಟ್ಟಂತೆ ಹನಿ ಹನಿ ಹಣ ‘ಪರಿಹಾರ’ ಹಂಚಿದ್ದಾರೆ. ಇದು ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿಲ್ಲ. ರಸ್ತೆ, ಕಾಲು ಸುಂಕ, ಬ್ರಿಡ್ಜ್, ವಿದ್ಯುತ್ ಕಂಬ, ಡ್ಯಾಮು, ಕೆರೆ, ಬಾವಿ ಕೊಚ್ಚಿ ಹೋಗಿವೆ. ನೆರೆಬಂದ ಪ್ರದೇಶಗಳಂತೂ ನರಕವಾಗಿವೆ. ಜನರಿಗಾದ ಆಘಾತವನ್ನು ಆಳುವವರ ಎದುರು ಸಮರ್ಥವಾಗಿ ಮಂಡಿಸಿ ಪರಿಹಾರ ತರುವ ನಾಯಕತ್ವ ಉತ್ತರಕನ್ನಡದಲ್ಲಿ ಇಲ್ಲ. ಬಿಜೆಪಿಯಿಂದ ಆರರಲ್ಲಿ ನಾಲ್ಕುಜನ ಶಾಸಕರಾಗಿದ್ದಾರೆ. ಒಬ್ಬ ಅನರ್ಹನು ಬಿಜೆಪಿ ಪಾಲಾಗಿದ್ದಾನೆ. ತಾನು ಹುಟ್ಟಿದೇ ದೇಶಉದ್ದಾರಕೆಂದು ಎಂಬಂತೆ ನಾಲಿಗೆ ಹರಿಬಿಡುವ ಸಂಸದ ಆರನೇ ಭಾರಿ ಪಾರ್ಲಿಮೆಂಟಿನ ಕುರ್ಚಿ ಬಿಸಿ ಮಾಡಲು ಆಯ್ಕೆಯಾಗಿದ್ದಾನೆ.

ಇವರ್‍ಯಾರಿಗೂ ಸಿಎಂ ಎದುರು ನಿಂತು ಸಮಸ್ಯ ವಿವರಿಸುವ ಧೈರ್ಯವಿಲ್ಲ. ಕಾರವಾರ ಶಾಸಕಿ ರೂಪಾಲಿ ನಾಯ್ಕಳಂತೂ ಹೆಜ್ಜೆ-ಹೆಜ್ಜೆಗೆ ಶೋ ಮಾಡುವುದೆ ಶಾಸಕಿಯ ಕರ್ತವ್ಯ ಎಂದುಕೊಂಡಿದ್ದಾಳೆ. ನೆರೆ ಬಂದಾಗ ಸಮ್ಮಿಶ್ರ ಸರ್ಕಾರ ಉರುಳಿಸುವ ಬಿಜೆಪಿ ರೆಸಾರ್ಟ್‌ ಸರ್ಕಸ್‍ನಲ್ಲಿದ ಈಕೆ ತಾನು ಅನಿವಾರ್ಯವಾಗಿ ರೆಸಾರ್ಟ್ ಸೇರಿದ್ಧೇನೆ… ನೊಂದ ನೆರೆ ಪೀಡಿತರ ಬಳಿ ಬರಲಾಗುತ್ತಿಲ್ಲವೆಂದು ಜಾಹಿರಾತು ಪತ್ರಿಕೆಗಳಿಗೆ ಕೊಟ್ಟು ತಾನೆಂತಹ ನಾಲಾಯಕ್ ಜನಪ್ರತಿನಿಧಿ ಎಂದು ತೋರಿಸಿಕೊಂಡಿದ್ದಾಳೆ. ಬಟ್ಕಳದ ಬಚ್ಚಾ ಶಾಸಕ ಸುನಿಲನಾಯ್ಕ್ ಸಿಎಂ ಇರಲಿ ಸಂಸರ ಮುಂದೆನಿಂತು ಮಾತನಾಡುವ ಧೈರ್ಯವಿಲ್ಲ. ಕುಮುಟೆಯ ಶಾಸಕ ದಿನಕರ್ ಶೆಟ್ಟಿಗೆ ಕಿಕ್‌ಬ್ಯಾಕ್‌ ಕಮಾಯಿಯೇ ನೆರೆ ಪೀಡಿತರ ಸೇವೆ ಎಂಬ ಭಾವನೆ.

ಈಗ ಎರಡನೆ ಸುತ್ತಿನ ನೆರೆ ವಿಕ್ಷಣೆಗೆ ಸಿಎಂ ಯಡ್ಡಿ ರೆಡಿಯಾಗಿದ್ದಾರೆ. ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತಿತರ ಕಡೆ ಸಿಎಂ ಸಂಚಾರ ಮಾಡುತ್ತಿದ್ದಾರೆ. ಆದರೆ ಆತನ ಟೂರ್ ಲಿಸ್ಟ್ ನಲ್ಲಿ ಉತ್ತರಕನ್ನಡ ಇಲ್ಲ.!! ಸಿಎಂ ಕಾಲರ್ ಹಿಡಿದು ಜಿಲ್ಲೆಗೆ ಕರೆತಬೇಕಿದ್ದ ಶಾಸಕರಿಗೆ ಆ ತಾಕತು ಇಲ್ಲ. ಸಿಎಂ ಕೆಂಗಣ್ಣಿಗೆ ಸಿಲುಕಿದರೆ ನಿಗಮ ಮಂಡಳಿ, ಗೂಟದ ಕಾರಿಗೆ ಸಂಚಕಾರ ಎಂಬ ಅಂಜಿಕೆ. ಸಿಎಂ ಮುಂದೆ ವಿರಾವೇಷದ ಮಾತಾಡುವ ಸಂಸದ ಅನಂತ್ಮಾಣಿಗೆ ಜನರೆಂದರೆ ಯಾವಾಗಲೂ ಅಲರ್ಜಿ. ಅತನಿಗೆ ಹಿಂದುತ್ವ ಗೊಂದಲಗಳಿಗಷ್ಟೆ ಕಾಲಾಳುಗಳು ಬೇಕು.

ಒಟ್ಟಿನಲ್ಲಿ ಉತ್ತರಕನ್ನಡದ ಸಮಸ್ಯಗಂತೂ ಉತ್ತರವಿಲ್ಲ.!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...