Homeಕರ್ನಾಟಕಧರ್ಮಾಂತರ ಅನಿವಾರ್ಯ ಏಕೆ?

ಧರ್ಮಾಂತರ ಅನಿವಾರ್ಯ ಏಕೆ?

- Advertisement -
- Advertisement -

ದಿ. 31.10.2021ರಂದು ಚಿತ್ರದುರ್ಗ ನಗರದಲ್ಲಿ ಮಹಾಬೋಧಿ ಸೊಸೈಟಿಯ ಧರ್ಮಾಧಿಕಾರಿಗಳಾದ ಪೂಜ್ಯ ಆನಂದ ಭಂತೆ ಅವರ ನೇತೃತ್ವದಲ್ಲಿ ಸುಮಾರು 103 ಜನರು ಬೌದ್ಧಧರ್ಮ ಸ್ವೀಕರಿಸಿದ್ದಾರೆ. ಅವರಲ್ಲಿ ಹೆಚ್ಚಾಗಿ ಅಸ್ಪೃಶ್ಯ ದಲಿತರು ಅಂದರೆ ಎಡಗೈ, ಬಲಗೈ ಜಾತಿಯವರು ಇದ್ದರು. ಅವರೊಟ್ಟಿಗೆ ಒಂದು ಗೊಲ್ಲರ ಕುಟುಂಬ ಮತ್ತು ಒಬ್ಬರು ಲಿಂಗಾಯತರೂ ಇದ್ದರು ಅನ್ನುವುದು ವಿಶೇಷ. ಅದೇ ದಿನ ಬುದ್ಧನಗರದಲ್ಲಿ ಬುದ್ಧನ ಪುತ್ಥಳಿಯನ್ನೂ ಅನಾವರಣಗೊಳಿಸಿದ್ದಾರೆ. ಇದರ ಹಿಂದೆ ಗೌತಮಬುದ್ಧ ಪ್ರತಿಷ್ಠಾನದ ತಿಪ್ಪೇಸ್ವಾಮಿ, ಸಿ. ಕೆ. ಮಹೇಶ್ ಮುಂತಾದವರ ಶ್ರಮವಿದೆ. ಕೆಲವು ತಿಂಗಳ ಕಾಲ ಜಿಲ್ಲೆಯಾದ್ಯಂತ ಸಂಚಾರ ಮಾಡಿ ಬಾಬಾಸಾಹೇಬ್ ಅಂಬೇಡ್ಕರರ ತತ್ವವಿಚಾರಗಳನ್ನು ಪ್ರಚುರಪಡಿಸಿ, ಅವರ ಅಂತಿಮ ನಿಲುವು ಧರ್ಮಾಂತರ, ಅದರ ಮೂಲಕವೇ ನಾವು ಸ್ವಾಭಿಮಾನವನ್ನು ಮೆರೆಯಬೇಕು ಮತ್ತು ರಕ್ಷಿಸಿಕೊಳ್ಳಬೇಕು ಎಂದು ದಲಿತರಲ್ಲಿ ಅರಿವು ಮೂಡಿಸಿದ್ದಾರೆ. ಬೈಕ್ ಜಾಥಾ ಮಾಡಿ ಇದು ನಮಗೆ ಅನಿವಾರ್ಯ ಎಂದು ಸಾರ್ವಜನಿಕರಿಗೆ ಸಾರಿ ಹೇಳಿದ್ದಾರೆ. ಹೀಗೆ ದಲಿತ ಮತ್ತು ಹಿಂದುಳಿದ ಜಾತಿಗಳಲ್ಲಿ ಪರಿವರ್ತನೆಯ ಜಾಗೃತಿ ಮೂಡಿಸಿರುವುದು ಅಭಿನಂದನಾರ್ಹವಾಗಿದೆ. ಇದು ಕೇವಲ ಪ್ರಾರಂಭವಷ್ಟೆ. ಬ್ರಹ್ಮಗಿರಿ, ಜಟಿಂಗ ರಾಮೇಶ್ವರ, ಅಶೋಕ ಸಿದ್ದಾಪುರಗಳಂತಹ ಅನೇಕ ಐತಿಹಾಸಿಕ ಬೌದ್ಧ ಸ್ಥಾವರಗಳಿರುವ ಕೋಟೆಯ ನಾಡಿನಲ್ಲಿ ಅತಿ ಸಹಜವೆನ್ನುವಂತೆ ಜನರು ತಮ್ಮ ಪೂರ್ವಿಕರ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ, ಮರಳಿ ಮನೆಗೆ ನಡೆಯುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಗಂಗೂರಿನಲ್ಲಿ ಒಂದು ಘಟನೆ ನಡೆದಿತ್ತು. ಆ ಊರಿನ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವಿರಲಿಲ್ಲ. ದಲಿತರು ಅಲ್ಲಿಗೆ ಹೋಗುವುದನ್ನೂ ಬಿಟ್ಟಿರಲಿಲ್ಲ. ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಲೇ ಇದ್ದವು. ಆದರೂ ದೈನ್ಯತೆಯಿಂದ ದೇವಸ್ಥಾನದ ಹೊರಗಡೆ ನಿಂತು ಬೇಡುತ್ತಿದ್ದವರನ್ನು ಒಂದಷ್ಟು ಪ್ರಗತಿಪರರು ಒಳಗೆ ಬಿಟ್ಟುಕೊಳ್ಳಲು ಮನಸ್ಸು ಮಾಡಿದ್ದಾರೆ. ಒಂದು ದಿನ ನಿಗದಿಯಾಗುತ್ತದೆ. ಸುಮಾರು 120 ಮಂದಿ ದಲಿತರನ್ನು ದೇವಸ್ಥಾನದ ಒಳಗೆ ಪ್ರಗತಿಪರ ಸವರ್ಣೀಯರು ಬರಮಾಡಿಕೊಳ್ಳುತ್ತಾರೆ. ಇದು ಸುದ್ದಿಯಾಗುತ್ತದೆ. ಆದರೆ ಅಲ್ಲಿ ನಡೆದ, ಪ್ರತ್ಯಕ್ಷದರ್ಶಿಯೊಬ್ಬರು ನನಗೆ ಹೇಳಿದ ಇನ್ನೊಂದು ಮಗ್ಗಲಿನ ಕಥೆ ಕುತೂಹಲಕಾರಿಯಾಗಿದೆ. ದೇಗುಲದೊಳಗೆ ದಲಿತರ ಪ್ರವೇಶವಾಗುವಾಗ ಸುತ್ತಲಿನ ಸವರ್ಣೀಯ ಹೆಂಗಸರು ಎದೆ ಬಡಿದುಕೊಂಡು ಜೋರಾಗಿ ಅಳುತ್ತಿದ್ದರು. ನಮ್ಮ ದೇವಸ್ಥಾನವನ್ನು ಹಾಳುಗೆಡವಿದರು, ಮೈಲಿಗೆಯಾಯಿತು; ಕಾಲಾಂತರದಲ್ಲಿ ಇಂಥ ಅನಿಷ್ಟವನ್ನು ನೋಡಿರಲಿಲ್ಲವಲ್ಲಾ ಎಂದು ಗೋಳಾಡುತ್ತಿದ್ದರು.

ಅಷ್ಟೇ ಮಂದಿ ಗಂಡಸರು ಹೊರಗೆ ನಿಂತು ರೊಚ್ಚಿಗೆದ್ದವರಂತೆ ಹಲ್ಲು ಮಸೆಯುತ್ತಿದ್ದರು. ಔಪಚಾರಿಕ ಪ್ರವೇಶ ಮುಗಿಯುತ್ತಿದ್ದಂತೆ ದಲಿತರು ಸಮಾನತೆಯ ಸುಖವನ್ನು ಅನುಭವಿಸುತ್ತಾ ಮನೆಗಳಿಗೆ ಹಿಂದಿರುಗುತ್ತಾರೆ. ಅದೇ ದಿನ ರಾತ್ರಿ ಸುಮಾರು 200 ಮಂದಿ ಸವರ್ಣೀಯರು ಪಂಚಾಯಿತಿ ಸೇರಿ ಸಭೆ ನಡೆಸುತ್ತಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದುದು. ಇದನ್ನು ಮುಂದುವರೆಯಲು ಬಿಡಬಾರದು ಎಂದು ತೀರ್ಮಾನಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ ಕೇರಿಗೆ ನುಗ್ಗಿ ದಲಿತರನ್ನು ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸುತ್ತಾರೆ. ಹಲ್ಲೆ ನಡೆಸಿದ ಗಂಡಸರು ಊರು ಬಿಡುತ್ತಾರೆ. ಹಲ್ಲೆಗೊಳಗಾದ ದಲಿತರು ಮರುದಿನ ಆಸ್ಪತ್ರೆ ಸೇರುತ್ತಾರೆ. ಇನ್ನು ಯಥಾಪ್ರಕಾರ ಅಟ್ರಾಸಿಟಿ ಕೇಸು. ಕೋರ್ಟು, ಕಚೆರಿ ಅಲೆದಾಟ. ಆಮೇಲೆ ಸಾಕ್ಷಿಗಳ ಕೊರತೆಯಿಂದ ಕೇಸು ಖುಲಾಸೆಯಾಗುತ್ತದೆ!

ಇತ್ತೀಚಿನ ಇನ್ನೊಂದು ಘಟನೆ: ದಿ. 30.10.2021ರಂದು ಗುಜರಾತಿನ ಕಚ್ ಜಿಲ್ಲೆಯ ಗಾಂಧಿಧಾಮದ ಹತ್ತಿರ ಒಂದು ಹಳ್ಳಿಯಲ್ಲಿ ದಲಿತ ಗೋವಿಂದ್ ವಘೇಲಾ ಮತ್ತು ಅವನ ಕುಟುಂಬದ ಆರು ಜನರು ಶ್ರೀರಾಮನ ದೇವಸ್ಥಾನಕ್ಕೆ ಪ್ರವೇಶ ಮಾಡಿದರೆಂದು ಸವರ್ಣೀಯರು ಮರುದಿನ ಅವನ ಜಮೀನಿಗೆ ದನಕರುಗಳನ್ನು ನುಗ್ಗಿಸಿ ಕುಯಿಲಿಗೆ ಬಂದಿದ್ದ ಬೆಳೆಯನ್ನು ನಾಶಪಡಿಸುತ್ತಾರೆ. ಕೇಳಲು ಬಂದ ಆರೂ ಮಂದಿ ಕುಟುಂಬಸ್ಥರನ್ನು ’ದೇವಸ್ಥಾನದ ಒಳಗೆ ಹೋಗಲು ಎಷ್ಟು ಧೈರ್ಯ ನಿಮಗೆ?’ ಎಂದು ಹಿಡಿದು ಕಟ್ಟಿಹಾಕಿ ದೊಣ್ಣೆ, ಮಚ್ಚು ಮತ್ತಿತರ ಹರಿತ ಆಯುಧಗಳಿಂದ ಹಲ್ಲೆ ನಡೆಸುತ್ತಾರೆ. ಯಥಾಪ್ರಕಾರ ಕೇಸು ದಾಖಲಾಗುತ್ತದೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಇತ್ಯಾದಿ. ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಜಾತಿ ಕಟ್ಟಳೆಯನ್ನು
ಮೀರಿದ ದಲಿತರಿಗೆ ಮೇಲ್ಜಾತಿ ಜನ ಕೊಡುವ ಮೊದಲ ಶಿಕ್ಷೆ ಏನೆಂದರೆ ಅವರ ಆರ್ಥಿಕತೆಯನ್ನು ಕುಗ್ಗಿಸುವುದು ಮತ್ತು ನಷ್ಟ ಮಾಡುವುದು.

ದಲಿತರು ಆರ್ಥಿಕವಾಗಿ ಸಬಲರಾಗುವುದು, ಅಧಿಕಾರ ಪಡೆದುಕೊಳ್ಳುವುದು ಅವರಿಗೆ ಸುತಾರಾಂ ಇಷ್ಟವಿಲ್ಲ. ಇದನ್ನು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಅನ್ವಯಿಸಿ ನಾನು ಹೇಳುತ್ತಿಲ್ಲ. ನಗರ ಪ್ರದೇಶದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲೂ ಇದೇ ಅಸಹನೆ, ಒಳಗೊಳ್ಳಲಾರದ ಸಮಸ್ಯೆ ಇದೆ. ಮುಂಬೈಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು. ಕಾನ್ಪುರದ ಐಐಟಿ ಸಂಸ್ಥೆಯ ಪ್ರಾಧ್ಯಾಪಕಿ ತರಗತಿಯಲ್ಲಿಯೆ ಹಿಂದುಳಿದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಕುರಿತು ಅವಹೇಳನ ಮಾಡಿ ಶಿಕ್ಷೆ ಅನುಭವಿಸಿದರು. ಇಷ್ಟಕ್ಕೇ ನಿಲ್ಲಿಸಿದರೆ ವಿವರಣೆ ಅಸಮರ್ಪಕವಾದೀತು. ಕಳೆದ ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ಅಂತಿಮ ಹಂತದವರೆಗೂ ತಲುಪಿ ಫೈನಲ್‌ನಲ್ಲಿ ಗೆಲ್ಲಲಾರದೆ ಹೋಗಿದ್ದಕ್ಕೆ ಇಡೀ ತಂಡವನ್ನು ಬಿಟ್ಟು ಅಲ್ಲಿ ಆಟವಾಡಿದ ದಲಿತ ಹೆಣ್ಣುಮಗಳಾದ ವಂದನಾ ಕಟಾರಿಯಾಳನ್ನು ದೂಷಿಸಿದರು. ಜಾತಿವಾದಿಗಳು ಆಕೆಯ ಮನೆಯ ಮುಂದೆ ಜಮಾಯಿಸಿ ಪಟಾಕಿಗಳನ್ನು ಸಿಡಿಸಿ ಪೋಷಕರನ್ನು ನಿಂದಿಸಿದರು. ಅಂದರೆ ಇಂಡಿಯಾ ದೇಶದ ಸಮಷ್ಟಿ ಮನಸ್ಸಿಗೆ ಜಾತಿ ಅಸಹನೆ ಎಷ್ಟು ರಕ್ತಗತವಾಗಿದೆ ಎಂಬುದನ್ನು ಈ ಘಟನೆಗಳು ಹೇಳುತ್ತವೆ.

ಇಂತಹ ಘಟನೆಗಳು ದೇಶದಾದ್ಯಂತ ದಿನವೂ ನಡೆಯುತ್ತವೆ. ವರದಿಯಾಗುವುದು ಅತಿ ಕಡಿಮೆ. ದಿನವೊಂದಕ್ಕೆ ಹತ್ತು ದಲಿತರ ಕೊಲೆಯಾಗುತ್ತದೆ, ಅಷ್ಟೇ ಸಂಖ್ಯೆಯ ದಲಿತ ಹೆಣ್ಣುಮಕ್ಕಳ ಅತ್ಯಾಚಾರವಾಗುತ್ತದೆ ಎಂದು ಅಂಕಿಅಂಶಗಳೇ ಹೇಳುತ್ತವೆ. ದಲಿತ ಮೀಸೆ ಬಿಟ್ಟನೆಂದು ಥಳಿಸುವ, ವಿದ್ಯಾರ್ಥಿ ವಾಚು ಕಟ್ಟಿದನೆಂದು ಕೈಯಿಗೆ
ಚೂರಿಯಿಂದ ಇರಿಯುವ, ಮೊಬೈಲ್ ಫೋನಿನಲ್ಲಿ ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡನೆಂದು ಹಿಡಿದು ಬಡಿಯುವ, ಮದುವೆ ಮಂಟಪದಲ್ಲಿ ಸಮಾ ಊಟಕ್ಕೆ ಕುಳಿತನೆಂದು ದರದರ ಎಳೆದು ಹೊರಗೆ ದಬ್ಬುವ ಹಿಂದೂ ಸಂಪ್ರದಾಯಸ್ಥ ಮನಸ್ಸಿಗೆ ಸಮಾನತೆಯ ಕನಸು ಬಿದ್ದರೂ ಬೆಚ್ಚಿ ಬೀಳುತ್ತದೆ. ಮತ್ತೆ ಅದೇ ಕೇಸು, ಕೋರ್ಟು, ಖುಲಾಸೆ ಇತ್ಯಾದಿ. ಇದು ಇಂಡಿಯಾದ ಮುಗಿಯದ ಕಥೆ.

ಪ್ರಭುತ್ವ ಬದಲಾಗದ ಹೊರತು ದೇಶ ಬದಲಾಗದು, ದೇಶ ಬದಲಾಗದ ಹೊರತು ಸಮಾಜ ಬದಲಾಗುವುದಿಲ್ಲ. ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರದ ಹೊರತು ಮಕ್ಕಳ ಮನಸ್ಸು ಬದಲಾಗುವುದಿಲ್ಲ. ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎನ್ನುವ ಕಾರಣವನ್ನು ಮುಂದುಮಾಡಿ ಇತಿಹಾಸವನ್ನು, ಕಣ್ಣಮುಂದೆ ನಡೆದಿರುವ ಅನೇಕ ಸಾಮಾಜಿಕ ಸತ್ಯಗಳನ್ನು ಪಠ್ಯದಿಂದ ಬಚ್ಚಿಡುತ್ತಾರೆ. ಹಾಗಾದರೆ ಮಕ್ಕಳಿಗೆ ಜಾತಿ ಎನ್ನುವುದು ಹುಸಿ, ಅಸಹಜ ವಿಂಗಡನೆ, ವಿಕೃತಿ, ಅವಮಾನಕರ ಸಂಗತಿ ಎಂದು ತಿಳಿಯುವುದಾದರೂ ಹೇಗೆ? ಅಸ್ಪೃಶ್ಯತೆಯೂ ಮೇಲ್ಜಾತಿಯವರ ಭಾವನೆಗಳಿಗೆ ನೋವುಂಟುಮಾಡುತ್ತದೆ! ಆದ್ದರಿಂದಲೇ ಇನ್ನೂ ಅದು ಅಸಾಂವಿಧಾನಿಕವಾಗಿ ಚಾಲ್ತಿಯಲ್ಲಿದೆ!? ಹಿಂದೂಗಳು ಬದಲಾಗುವುದಿಲ್ಲ ಯಾಕೆಂದರೆ ಅವರ ಶಾಸ್ತ್ರ, ಪುರಾಣಗಳು ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಫುಲೆ, ಅಂಬೇಡ್ಕರ್, ಪೆರಿಯಾರ್ ಅವರು ಶಾಸ್ತ್ರ ಪುರಾಣಗಳ ಮೇಲೆ ಬೆಳಕು ಚೆಲ್ಲಿ ಧರ್ಮವನ್ನು ಮರುನಿರೂಪಿಸಿದರು. ಸಮಾಜದಲ್ಲಿ ನಡೆಯುವ ಮೋಸ, ವಂಚನೆಗಳನ್ನು ಬಯಲಿಗೆಳೆದರು. ಆದರೆ ಪ್ರಯೋಜನವೇನು? ದಲಿತರು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ! ಹೊರದಬ್ಬಿಸಿಕೊಳ್ಳುವುದು ತಪ್ಪುವುದಿಲ್ಲ. ಈ ಅಜ್ಞಾನಕ್ಕೆ ಕಾರಣಗಳೇನು?

ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ಧರ್ಮಾಂತರ ಪ್ರಯೋಗ ಅನುಕರಣೀಯವಾಗಿದೆ. ಬಾಬಾಸಾಹೇಬರು ಧರ್ಮಾಂತರ ಯಾಕೆ ಬೇಕು ಎಂದರೆ ಮನುಷ್ಯರ ಬದುಕನ್ನು ಯಶಸ್ವಿಗೊಳಿಸಿಕೊಳ್ಳುವುದಕ್ಕೆ ಎಂದು ಹೇಳುತ್ತಾರೆ. ಹಿಂದೂ ಧರ್ಮದ ಒಳಗೇ ಇದ್ದರೆ ಪ್ರಗತಿ ಸಾಧ್ಯವಿಲ್ಲ. ಯಾಕೆಂದರೆ ಶಾಸ್ತ್ರಗಳು ಹೇಳುವಂತೆ ದಲಿತ, ಹಿಂದುಳಿದ ಜಾತಿಗಳು ಶ್ರೇಣೀಕೃತ ವ್ಯವಸ್ಥೆಯ ಕೆಳಹಂತದಲ್ಲೇ ಇರಬೇಕೆಂದು ಮೇಲಿನವರು ಬಯಸುತ್ತಾರೆ. ಅದಕ್ಕಾಗಿ ಪ್ರಗತಿಯನ್ನು ಅಡ್ಡಿಪಡಿಸುತ್ತಾರೆ. ಅಲ್ಲಿರುವುದು ಗುಲಾಮ ಮತ್ತು ಯಜಮಾನ ಸಂಬಂಧ. ನಾವು ಹಿಂದೂಗಳ ಕಕ್ಷೆಯಿಂದ ಹೊರಗೆ ಬಂದರೆ ಗುಲಾಮಗಿರಿಯಿಂದ ಹೊರಬಂದಂತೆ. ಸವರ್ಣೀಯರೊಡನೆ ಪೈಪೋಟಿ ಇರುವುದಿಲ್ಲ, ಹಾಗಾಗಿ ಸಂಘರ್ಷ ಏರ್ಪಡುವುದೇ ಇಲ್ಲ. ಸಮಾನತೆಯನ್ನು ಆಗ್ರಹಿಸಿದ ಕೂಡಲೇ ಸಂಘರ್ಷ ಉಂಟಾಗುತ್ತದೆ. ಆದಕಾರಣ, ಸ್ವಾಭಿಮಾನದ, ಸಮಾನತೆಯ, ಸ್ವಾವಲಂಬನೆಯ ಬದುಕು ಬೇಕೆಂದರೆ ಧರ್ಮಾಂತರವನ್ನು ಆಯ್ಕೆಮಾಡಿಕೊಳ್ಳಬೇಕು.

ಅನ್ಯಾಯವನ್ನು ಶತಮಾನಗಳಿಂದ ಸಹಿಸಿಕೊಂಡು ಬಂದಿರುವ ಕಾರಣಕ್ಕೆ ಪ್ರಶ್ನಿಸುವ, ಪ್ರತಿಭಟಿಸುವ, ದಂಗೆ ಏಳುವ ಶಕ್ತಿ ನಮ್ಮಲ್ಲಿ ಕುಂದುಹೋಗಿದೆ. ನಮ್ಮ ಚೈತನ್ಯವನ್ನು ಹಿಂದೂ ಧರ್ಮ ಹೊಸಕಿಹಾಕಿಬಿಟ್ಟಿದೆ. ಮನುಷ್ಯರನ್ನು ಕುಷ್ಠರೋಗಿಗಳಂತೆ ಕಾಣುವ ಧರ್ಮದಿಂದ ಹೊರಗೆ ಬರಲೇಬೇಕು ಎಂದು ಅಂಬೇಡ್ಕರ್ ಹೇಳುತ್ತಾರೆ. ಆದ್ದರಿಂದ ಒಂದನ್ನು ನಾವು ಅರಿತುಕೊಳ್ಳಬೇಕು. ಹಿಂದೂ ಧರ್ಮವು ನಮ್ಮ ಪೂರ್ವಜರ ಧರ್ಮ ಆಗಿರಲಿಲ್ಲ. ಅದನ್ನು ಹೇರಲಾಗಿತ್ತು. ಈ ಭಯ ಹುಟ್ಟಿಸುವ ದೇವರುಗಳು ನಮ್ಮವರಲ್ಲ. ಅವರನ್ನು ಈಗ ನಮ್ಮ ಮೇಲೆ ಹೇರಲಾಗಿದೆ. ನಮಗೆ ನಮ್ಮ ಪರಂಪರೆಯ ನೆನಪಿರಬೇಕು. ನಮ್ಮ ತಾತ, ಮುತ್ತಾತ, ಅವರ ತಾತ, ಮುತ್ತಾತಂದಿರ ಸಂಕಟ, ಅಸಹಾಯಕತೆ, ನೋವು, ಅವಮಾನ ಈಗ ನಮ್ಮದೇ ಆಗಬೇಕು. ಧರ್ಮಾಂತರವಾಗುವುದರ ಮೂಲಕ ನಾವು ಅವರಿಗೆ ನ್ಯಾಯ ದೊರಕಿಸಿಕೊಡಬೇಕು.

ಕೊನೆಯದಾಗಿ ನಾವು ಹಿಂದೂ ಧರ್ಮವನ್ನು ತೊರೆಯುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಕಳೆದುಕೊಳ್ಳುವುದು ಅಸ್ಪೃಶ್ಯತೆಯ ಕಳಂಕವನ್ನು, ಅವಮಾನವನ್ನು, ಕೀಳರಿಮೆಯನ್ನು, ಮೈಲಿಗೆಯೆನ್ನುವ
ಮಿಥ್ಯಾಪವಾದವನ್ನು, ಮೌಢ್ಯವನ್ನು, ಅನಕ್ಷರತೆಯನ್ನು, ಗುಲಾಮಗಿರಿಯನ್ನು, ಒಟ್ಟಾರೆ ನರಕವನ್ನು. ಬದಲಾಗಿ ವಿಶ್ವಧರ್ಮವಾಗಿ ಬೆಳೆದಿರುವ ಬೌದ್ಧಧರ್ಮದಿಂದ ಪಡೆದುಕೊಳ್ಳುವುದು ಅಪಾರವಾದುದು. ಬೀಜದಲ್ಲಿ ಸಸ್ಯದ ಭ್ರೂಣವಿದ್ದರೆ ಅದನ್ನೂ ನೋಯಿಸಲಾರೆ ಎಂದು ಹೇಳುವ ಬುದ್ಧರ ಅನುಕಂಪೆಯ ಪರಮೋಚ್ಛ ಸ್ಥಿತಿಯನ್ನು ಊಹಿಸಿಕೊಳ್ಳಿ. ನೈತಿಕ ನೆಲೆಗಟ್ಟಿನ ಮೇಲೆ ನಿಂತ ಬೌದ್ಧಧರ್ಮ ಜ್ಞಾನದ ಗಣಿ. ಅಗೆದಷ್ಟೂ ಮೊಗೆದಷ್ಟೂ ದೊರಕುವ ಕರುಣೆ, ಮೈತ್ರಿ, ಶೀಲ, ಪ್ರಜ್ಞೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ. ದಾನದಿಂದ ಉದಾರತೆ, ಧ್ಯಾನದಿಂದ ಶಾಂತಿ. ಅಂತಿಮವಾಗಿ ದುಃಖದಿಂದ ಬಿಡುಗಡೆ, ನಿಬ್ಬಾಣ ಸುಖ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಕೇರಳ: ದಲಿತ ಮಹಿಳೆಗೆ ಮನೆ ಕಟ್ಟುಲು ಸಾಮಾಗ್ರಿಯನ್ನು ಕೊಂಡೊಯ್ಯಲು ಬಿಡದ ಮೇಲ್ಜಾತಿ ಕುಟುಂಬ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...