Homeಕರ್ನಾಟಕದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

- Advertisement -
- Advertisement -

ಪುಟಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್‌

ಇಂದಿನ ರಾಜ್ಯಾಡಳಿತದ ಸಾಂಸ್ಥಿಕತೆಯು ರೂಪುಗೊಂಡಿರುವುದು ಅಂದಿನ ಬುಡಕಟ್ಟು ಸಮುದಾಯಗಳ ಸಮಾಧಿಗಳ ಮೇಲೆ. ಈ ಸ್ಪಷ್ಟತೆಯ ಅರಿವಿನ ಮೇಲೆಯೇ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಭಾರತದಲ್ಲಿ ಬುಡಕಟ್ಟುಗಳ ಸಂಸ್ಕೃತಿ ಮತ್ತು ಸಮಾಜದ ಆಳ, ಎತ್ತರಗಳನ್ನು ಶೋಧಿಸುತ್ತಾ ಹೋಗುತ್ತಾರೆ.

ಬಹಳ ಮುಖ್ಯವಾಗಿ ವೈದಿಕ ಸಮುದಾಯದಿಂದ ಇಂದು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿರುವ ಅನೇಕ ಪರಿಕಲ್ಪನೆಗಳ ಸಾಮಾಜಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿಖರ ಮಾಹಿತಿಗಳ ಮೂಲಕ ಅರಿವಿಗೆ ಗ್ರಾಸ ಒದಗಿಸುತ್ತಾರೆ.

ಲೋಕಾಯತ, ಹೆಸರೇ ಧ್ವನಿಸುವಂತೆ, ಕೃತಿಯು ಬರೀ ಭೌತವಾದಕ್ಕೆ ಸೀಮಿತವಾಗುವುದಿಲ್ಲ. ಇಂದಿನ ಭಾರತದಲ್ಲಿ ಪ್ರಚಲಿತದಲ್ಲಿರುವ ಅನೇಕಾನೇಕ ಪರಿಕಲ್ಪನೆಗಳ ಉಗಮ, ಬೆಳವಣಿಗೆ ಮತ್ತು ರೂಪಾಂತರಗೊಂಡಿರುವುದರ ಬಗ್ಗೆ ಯಾವುದೇ ಸೃಜನಶೀಲ ಕಾದಂಬರಿಗಿಂತ ರೋಚಕತೆಯನ್ನು ನೀಡುತ್ತದೆ. ನಾವು ಯಾವುದನ್ನೋ ತಲೆತಲಾಂತರಗಳಿಂದ ಶ್ರೇಷ್ಠವೆಂದೋ, ಪವಿತ್ರವೆಂದೋ ಶ್ರದ್ಧೆಯಿಂದ ನಂಬಿಕೊಂಡು ಬಂದಿರುವುದು, ಅದೇ ನಾವು ಯಾವುದನ್ನು ಕನಿಷ್ಟ ಅಥವಾ ನೀಚ ಎಂದು ಅಂದುಕೊಂಡಿದ್ದೇವೋ, ಅದೇ ಆ ಪಾವಿತ್ರ‍್ಯತೆಯ ಉಗಮವೆಂದು ತಿಳಿದಾಗ ಅಚ್ಚರಿಯಾಗುತ್ತದೆ.

ಅತಿ ಮುಖ್ಯವಾಗಿ ಯಾವ ರಾಕ್ಷಸರನ್ನು ಕ್ರೂರಿಗಳೆಂದು, ದುಷ್ಟರೆಂದು ಪೌರಾಣಿಕ ಕಥನಗಳು ವಿವರಿಸಿಕೊಂಡು ಮತ್ತು ನಂಬಿಸಿಕೊಂಡು ಬಂದಿದ್ದವೋ ಅದಕ್ಕೆ ವ್ಯತಿರಿಕ್ತವಾಗಿ ಅವರು ಅರಣ್ಯಕರೆಂದು, ಬುಡಕಟ್ಟಿನವರೆಂದು ತಿಳಿದುಬರುತ್ತದೆ. ಜೊತೆಗೆ ಅವರ ಅಸ್ತಿತ್ವಕ್ಕಾಗಿ ಮತ್ತು ಉಳಿವಿಗಾಗಿ ಮಾಡಿದಂತಹ ಅನಿವಾರ್ಯದ ಕದನಗಳು, ಪ್ರತಿಭಟನೆಗಳೆಲ್ಲಾ ಇಂದು ಪೀಡೆಗಳನ್ನಾಗಿ ಬಿಂಬಿಸಿರುವ ಕಾರಣಗಳು ಸ್ಪಷ್ಟವಾಗುತ್ತದೆ.

ಇನ್ನು ಧಾರ್ಮಿಕವಾಗಿ ಗುರುತಿಸಲ್ಪಡುವ ಗೋತ್ರಗಳು ಟೋಟಮ್ ಅಥವಾ ಪ್ರಾಣಿ ಲಾಂಛನದ ಬುಡಕಟ್ಟು ಅಧ್ಯಯನಗಳ ಕಡೆಗೆ ಹೊರಳುತ್ತವೆ. ಅಲ್ಲೇ ಸ್ವಾರಸ್ಯವೂ ಇರುವುದು. ಕಶ್ಯಪ, ಗೌತಮ, ಭಾರಧ್ವಜ ಇತ್ಯಾದಿ ಬ್ರಾಹ್ಮಣ ಗೋತ್ರದವರ ಮೂಲ ಆಮೆ, ಗೂಬೆ ಮತ್ತು ಇತರ ಕಾಡಿನ ಪ್ರಾಣಿ, ಪಕ್ಷಿ ಮತ್ತು ಮರಗಿಡಗಳ ಗುರುತುಗಳನ್ನು ಹೊಂದಿರುವ ಬುಡಕಟ್ಟು ಪಂಗಡಗಳು.

ಹಾಗೆಯೇ ತಾಯಾಳಿಕೆಯ ಜಾಡು ಹಿಡಿದು ಗೌರಿಯ ಸ್ತ್ರೀ ತತ್ವದ ಎಳೆಗಳಿಂದ ವ್ರತ ಮತ್ತು ವ್ರಾತ್ಯ ಇತ್ಯಾದಿಗಳ ತಿಳಿವಳಿಕೆ ನೀಡುತ್ತಾ ಕೃಷಿಯನ್ನು ಆರಂಭ ಮಾಡಿದ್ದು ಹೆಂಗಸು ಎಂಬ ಅಂಶವನ್ನು ಹೊರಗೆಡವುತ್ತಾರೆ.

ಆದಿಪೂಜಿತ ಗಣಪತಿಯ ಗಾಣಪತ್ಯದ ರಹಸ್ಯವನ್ನು ಹೊರಗೆಡವುತ್ತಾರೆ. ವಿನಾಯಕನ ಬಗ್ಗೆ ಏನೆಲ್ಲಾ ಭಯಭಕ್ತಿಗಳನ್ನು ಇಟ್ಟುಕೊಂಡಿರುವ ಜನರಿಗೆ ಇದೇ ವಿನಾಯಕ ದುಃಸ್ವಪ್ನದ ಕುರುಹಾಗಿದ್ದರ ಬಗ್ಗೆ ಬೆಚ್ಚಿಬೀಳಿಸದೇ ಇರದು. ಇಂದು ಗಣಪತಿಯ ಬಗ್ಗೆ ಏನೇನೆಲ್ಲಾ ಶುಭ ಎಂದು ಕಾಣುತ್ತೇವೋ ಅದೆಲ್ಲವೂ ಅರಣ್ಯಕಗಳಲ್ಲಿ, ಯಾಜ್ಞವಲ್ಯ ಸ್ಮೃತಿಯಲ್ಲಿ, ಬ್ರಾಹ್ಮಣಗಳಲ್ಲಿ ಅಷ್ಟೇ ಅಶುಭವಾಗಿ, ಕೀಳಾಗಿ ಕಾಣುತ್ತಿದ್ದ ಉಲ್ಲೇಖಗಳನ್ನು ಕಾಣಿಸುತ್ತಾರೆ.

ಮಾನವಶಾಸ್ತ್ರೀಯ ಅಧ್ಯಯನಕ್ಕೆ ನೆರವಾಗುತ್ತಲೇ ಭಾರತದ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಇಂದು ಯಾವ ಪ್ರತಿಕೃತಿಗಳಲ್ಲಿ ಕಾಣುತ್ತಿದ್ದೇವೆ ಎಂಬ ಅರಿವು ಮೂಡಿಸುವ ಮಹಾನ್ ವಿದ್ವಾಂಸ ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ಬರಿಯ ಪೌರಾಣಿಕತೆಯ ಆಯಾಮದಿಂದಷ್ಟೇ ಧಾರ್ಮಿಕತೆಯ ಶ್ರದ್ಧೆಯನ್ನು ಕಟ್ಟಿಕೊಂಡವರಿಗೆ ಲೋಕಾಯತ ಗಾಬರಿ ಬೀಳಿಸದೇ ಇರದು. ಆದರೆ ಯಾವುದೇ ಸಂಪ್ರದಾಯ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳ ಜಾಡು ಹಿಡಿದು ಹೊರಟರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳು ಒಂದಷ್ಟು ಧೂಳೊದರಿಕೊಂಡು ಬೆಳಕಿಗೆ ಬರುತ್ತವೆ. ಅದು ಅದೇ ಪರಿಕಲ್ಪನೆಗಳ ಆಧಾರದಲ್ಲಿ ಇಂದು ನಡೆಯುತ್ತಿರುವ ಶೋಷಣೆಗಳೂ ಅರಿವಿಗೆ ನಿಲುಕುತ್ತವೆ. ಪೌರಾಣಿಕ ಕಥನಗಳ ರೂಪಕಗಳನ್ನು ತಿಳಿಯಲು, ಒಗಟುಗಳನ್ನು ಬಿಡಿಸಲು ನೆರವಾಗುತ್ತವೆ.

ಲೋಕಾಯತದ ಪುಟಪುಟವೂ ಸಾಂಸ್ಕೃತಿಕ ಚರಿತ್ರೆ ಮತ್ತು ಒಳನೋಟಗಳ ಬಳುವಳಿಗಳೇ.

ನವಕರ್ನಾಟಕ ಪ್ರಕಾಶನದಲ್ಲಿ ಈ ಕೃತಿ ಕನ್ನಡದಲ್ಲಿಯೂ ಲಭ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...