Homeಕರ್ನಾಟಕದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

- Advertisement -
- Advertisement -

ಪುಟಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್‌

ಇಂದಿನ ರಾಜ್ಯಾಡಳಿತದ ಸಾಂಸ್ಥಿಕತೆಯು ರೂಪುಗೊಂಡಿರುವುದು ಅಂದಿನ ಬುಡಕಟ್ಟು ಸಮುದಾಯಗಳ ಸಮಾಧಿಗಳ ಮೇಲೆ. ಈ ಸ್ಪಷ್ಟತೆಯ ಅರಿವಿನ ಮೇಲೆಯೇ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಭಾರತದಲ್ಲಿ ಬುಡಕಟ್ಟುಗಳ ಸಂಸ್ಕೃತಿ ಮತ್ತು ಸಮಾಜದ ಆಳ, ಎತ್ತರಗಳನ್ನು ಶೋಧಿಸುತ್ತಾ ಹೋಗುತ್ತಾರೆ.

ಬಹಳ ಮುಖ್ಯವಾಗಿ ವೈದಿಕ ಸಮುದಾಯದಿಂದ ಇಂದು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿರುವ ಅನೇಕ ಪರಿಕಲ್ಪನೆಗಳ ಸಾಮಾಜಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿಖರ ಮಾಹಿತಿಗಳ ಮೂಲಕ ಅರಿವಿಗೆ ಗ್ರಾಸ ಒದಗಿಸುತ್ತಾರೆ.

ಲೋಕಾಯತ, ಹೆಸರೇ ಧ್ವನಿಸುವಂತೆ, ಕೃತಿಯು ಬರೀ ಭೌತವಾದಕ್ಕೆ ಸೀಮಿತವಾಗುವುದಿಲ್ಲ. ಇಂದಿನ ಭಾರತದಲ್ಲಿ ಪ್ರಚಲಿತದಲ್ಲಿರುವ ಅನೇಕಾನೇಕ ಪರಿಕಲ್ಪನೆಗಳ ಉಗಮ, ಬೆಳವಣಿಗೆ ಮತ್ತು ರೂಪಾಂತರಗೊಂಡಿರುವುದರ ಬಗ್ಗೆ ಯಾವುದೇ ಸೃಜನಶೀಲ ಕಾದಂಬರಿಗಿಂತ ರೋಚಕತೆಯನ್ನು ನೀಡುತ್ತದೆ. ನಾವು ಯಾವುದನ್ನೋ ತಲೆತಲಾಂತರಗಳಿಂದ ಶ್ರೇಷ್ಠವೆಂದೋ, ಪವಿತ್ರವೆಂದೋ ಶ್ರದ್ಧೆಯಿಂದ ನಂಬಿಕೊಂಡು ಬಂದಿರುವುದು, ಅದೇ ನಾವು ಯಾವುದನ್ನು ಕನಿಷ್ಟ ಅಥವಾ ನೀಚ ಎಂದು ಅಂದುಕೊಂಡಿದ್ದೇವೋ, ಅದೇ ಆ ಪಾವಿತ್ರ‍್ಯತೆಯ ಉಗಮವೆಂದು ತಿಳಿದಾಗ ಅಚ್ಚರಿಯಾಗುತ್ತದೆ.

ಅತಿ ಮುಖ್ಯವಾಗಿ ಯಾವ ರಾಕ್ಷಸರನ್ನು ಕ್ರೂರಿಗಳೆಂದು, ದುಷ್ಟರೆಂದು ಪೌರಾಣಿಕ ಕಥನಗಳು ವಿವರಿಸಿಕೊಂಡು ಮತ್ತು ನಂಬಿಸಿಕೊಂಡು ಬಂದಿದ್ದವೋ ಅದಕ್ಕೆ ವ್ಯತಿರಿಕ್ತವಾಗಿ ಅವರು ಅರಣ್ಯಕರೆಂದು, ಬುಡಕಟ್ಟಿನವರೆಂದು ತಿಳಿದುಬರುತ್ತದೆ. ಜೊತೆಗೆ ಅವರ ಅಸ್ತಿತ್ವಕ್ಕಾಗಿ ಮತ್ತು ಉಳಿವಿಗಾಗಿ ಮಾಡಿದಂತಹ ಅನಿವಾರ್ಯದ ಕದನಗಳು, ಪ್ರತಿಭಟನೆಗಳೆಲ್ಲಾ ಇಂದು ಪೀಡೆಗಳನ್ನಾಗಿ ಬಿಂಬಿಸಿರುವ ಕಾರಣಗಳು ಸ್ಪಷ್ಟವಾಗುತ್ತದೆ.

ಇನ್ನು ಧಾರ್ಮಿಕವಾಗಿ ಗುರುತಿಸಲ್ಪಡುವ ಗೋತ್ರಗಳು ಟೋಟಮ್ ಅಥವಾ ಪ್ರಾಣಿ ಲಾಂಛನದ ಬುಡಕಟ್ಟು ಅಧ್ಯಯನಗಳ ಕಡೆಗೆ ಹೊರಳುತ್ತವೆ. ಅಲ್ಲೇ ಸ್ವಾರಸ್ಯವೂ ಇರುವುದು. ಕಶ್ಯಪ, ಗೌತಮ, ಭಾರಧ್ವಜ ಇತ್ಯಾದಿ ಬ್ರಾಹ್ಮಣ ಗೋತ್ರದವರ ಮೂಲ ಆಮೆ, ಗೂಬೆ ಮತ್ತು ಇತರ ಕಾಡಿನ ಪ್ರಾಣಿ, ಪಕ್ಷಿ ಮತ್ತು ಮರಗಿಡಗಳ ಗುರುತುಗಳನ್ನು ಹೊಂದಿರುವ ಬುಡಕಟ್ಟು ಪಂಗಡಗಳು.

ಹಾಗೆಯೇ ತಾಯಾಳಿಕೆಯ ಜಾಡು ಹಿಡಿದು ಗೌರಿಯ ಸ್ತ್ರೀ ತತ್ವದ ಎಳೆಗಳಿಂದ ವ್ರತ ಮತ್ತು ವ್ರಾತ್ಯ ಇತ್ಯಾದಿಗಳ ತಿಳಿವಳಿಕೆ ನೀಡುತ್ತಾ ಕೃಷಿಯನ್ನು ಆರಂಭ ಮಾಡಿದ್ದು ಹೆಂಗಸು ಎಂಬ ಅಂಶವನ್ನು ಹೊರಗೆಡವುತ್ತಾರೆ.

ಆದಿಪೂಜಿತ ಗಣಪತಿಯ ಗಾಣಪತ್ಯದ ರಹಸ್ಯವನ್ನು ಹೊರಗೆಡವುತ್ತಾರೆ. ವಿನಾಯಕನ ಬಗ್ಗೆ ಏನೆಲ್ಲಾ ಭಯಭಕ್ತಿಗಳನ್ನು ಇಟ್ಟುಕೊಂಡಿರುವ ಜನರಿಗೆ ಇದೇ ವಿನಾಯಕ ದುಃಸ್ವಪ್ನದ ಕುರುಹಾಗಿದ್ದರ ಬಗ್ಗೆ ಬೆಚ್ಚಿಬೀಳಿಸದೇ ಇರದು. ಇಂದು ಗಣಪತಿಯ ಬಗ್ಗೆ ಏನೇನೆಲ್ಲಾ ಶುಭ ಎಂದು ಕಾಣುತ್ತೇವೋ ಅದೆಲ್ಲವೂ ಅರಣ್ಯಕಗಳಲ್ಲಿ, ಯಾಜ್ಞವಲ್ಯ ಸ್ಮೃತಿಯಲ್ಲಿ, ಬ್ರಾಹ್ಮಣಗಳಲ್ಲಿ ಅಷ್ಟೇ ಅಶುಭವಾಗಿ, ಕೀಳಾಗಿ ಕಾಣುತ್ತಿದ್ದ ಉಲ್ಲೇಖಗಳನ್ನು ಕಾಣಿಸುತ್ತಾರೆ.

ಮಾನವಶಾಸ್ತ್ರೀಯ ಅಧ್ಯಯನಕ್ಕೆ ನೆರವಾಗುತ್ತಲೇ ಭಾರತದ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಇಂದು ಯಾವ ಪ್ರತಿಕೃತಿಗಳಲ್ಲಿ ಕಾಣುತ್ತಿದ್ದೇವೆ ಎಂಬ ಅರಿವು ಮೂಡಿಸುವ ಮಹಾನ್ ವಿದ್ವಾಂಸ ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ಬರಿಯ ಪೌರಾಣಿಕತೆಯ ಆಯಾಮದಿಂದಷ್ಟೇ ಧಾರ್ಮಿಕತೆಯ ಶ್ರದ್ಧೆಯನ್ನು ಕಟ್ಟಿಕೊಂಡವರಿಗೆ ಲೋಕಾಯತ ಗಾಬರಿ ಬೀಳಿಸದೇ ಇರದು. ಆದರೆ ಯಾವುದೇ ಸಂಪ್ರದಾಯ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳ ಜಾಡು ಹಿಡಿದು ಹೊರಟರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳು ಒಂದಷ್ಟು ಧೂಳೊದರಿಕೊಂಡು ಬೆಳಕಿಗೆ ಬರುತ್ತವೆ. ಅದು ಅದೇ ಪರಿಕಲ್ಪನೆಗಳ ಆಧಾರದಲ್ಲಿ ಇಂದು ನಡೆಯುತ್ತಿರುವ ಶೋಷಣೆಗಳೂ ಅರಿವಿಗೆ ನಿಲುಕುತ್ತವೆ. ಪೌರಾಣಿಕ ಕಥನಗಳ ರೂಪಕಗಳನ್ನು ತಿಳಿಯಲು, ಒಗಟುಗಳನ್ನು ಬಿಡಿಸಲು ನೆರವಾಗುತ್ತವೆ.

ಲೋಕಾಯತದ ಪುಟಪುಟವೂ ಸಾಂಸ್ಕೃತಿಕ ಚರಿತ್ರೆ ಮತ್ತು ಒಳನೋಟಗಳ ಬಳುವಳಿಗಳೇ.

ನವಕರ್ನಾಟಕ ಪ್ರಕಾಶನದಲ್ಲಿ ಈ ಕೃತಿ ಕನ್ನಡದಲ್ಲಿಯೂ ಲಭ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....