Homeಕರ್ನಾಟಕದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

ದೇವಿಪ್ರಸಾದ್ ಚಟ್ಟೋಪಾಧ್ಯಾಯರ ’ಲೋಕಾಯತ’ವನ್ನು ಏಕೆ ಓದಬೇಕೆಂದರೆ.. : ಯೋಗೇಶ್ ಮಾಸ್ಟರ್‌

- Advertisement -
- Advertisement -

ಪುಟಕಿಟ್ಟ ಪುಟಗಳು : ಯೋಗೇಶ್ ಮಾಸ್ಟರ್‌

ಇಂದಿನ ರಾಜ್ಯಾಡಳಿತದ ಸಾಂಸ್ಥಿಕತೆಯು ರೂಪುಗೊಂಡಿರುವುದು ಅಂದಿನ ಬುಡಕಟ್ಟು ಸಮುದಾಯಗಳ ಸಮಾಧಿಗಳ ಮೇಲೆ. ಈ ಸ್ಪಷ್ಟತೆಯ ಅರಿವಿನ ಮೇಲೆಯೇ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಭಾರತದಲ್ಲಿ ಬುಡಕಟ್ಟುಗಳ ಸಂಸ್ಕೃತಿ ಮತ್ತು ಸಮಾಜದ ಆಳ, ಎತ್ತರಗಳನ್ನು ಶೋಧಿಸುತ್ತಾ ಹೋಗುತ್ತಾರೆ.

ಬಹಳ ಮುಖ್ಯವಾಗಿ ವೈದಿಕ ಸಮುದಾಯದಿಂದ ಇಂದು ಅತ್ಯಂತ ಅಪವ್ಯಾಖ್ಯಾನಕ್ಕೊಳಗಾಗಿರುವ ಅನೇಕ ಪರಿಕಲ್ಪನೆಗಳ ಸಾಮಾಜಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿಖರ ಮಾಹಿತಿಗಳ ಮೂಲಕ ಅರಿವಿಗೆ ಗ್ರಾಸ ಒದಗಿಸುತ್ತಾರೆ.

ಲೋಕಾಯತ, ಹೆಸರೇ ಧ್ವನಿಸುವಂತೆ, ಕೃತಿಯು ಬರೀ ಭೌತವಾದಕ್ಕೆ ಸೀಮಿತವಾಗುವುದಿಲ್ಲ. ಇಂದಿನ ಭಾರತದಲ್ಲಿ ಪ್ರಚಲಿತದಲ್ಲಿರುವ ಅನೇಕಾನೇಕ ಪರಿಕಲ್ಪನೆಗಳ ಉಗಮ, ಬೆಳವಣಿಗೆ ಮತ್ತು ರೂಪಾಂತರಗೊಂಡಿರುವುದರ ಬಗ್ಗೆ ಯಾವುದೇ ಸೃಜನಶೀಲ ಕಾದಂಬರಿಗಿಂತ ರೋಚಕತೆಯನ್ನು ನೀಡುತ್ತದೆ. ನಾವು ಯಾವುದನ್ನೋ ತಲೆತಲಾಂತರಗಳಿಂದ ಶ್ರೇಷ್ಠವೆಂದೋ, ಪವಿತ್ರವೆಂದೋ ಶ್ರದ್ಧೆಯಿಂದ ನಂಬಿಕೊಂಡು ಬಂದಿರುವುದು, ಅದೇ ನಾವು ಯಾವುದನ್ನು ಕನಿಷ್ಟ ಅಥವಾ ನೀಚ ಎಂದು ಅಂದುಕೊಂಡಿದ್ದೇವೋ, ಅದೇ ಆ ಪಾವಿತ್ರ‍್ಯತೆಯ ಉಗಮವೆಂದು ತಿಳಿದಾಗ ಅಚ್ಚರಿಯಾಗುತ್ತದೆ.

ಅತಿ ಮುಖ್ಯವಾಗಿ ಯಾವ ರಾಕ್ಷಸರನ್ನು ಕ್ರೂರಿಗಳೆಂದು, ದುಷ್ಟರೆಂದು ಪೌರಾಣಿಕ ಕಥನಗಳು ವಿವರಿಸಿಕೊಂಡು ಮತ್ತು ನಂಬಿಸಿಕೊಂಡು ಬಂದಿದ್ದವೋ ಅದಕ್ಕೆ ವ್ಯತಿರಿಕ್ತವಾಗಿ ಅವರು ಅರಣ್ಯಕರೆಂದು, ಬುಡಕಟ್ಟಿನವರೆಂದು ತಿಳಿದುಬರುತ್ತದೆ. ಜೊತೆಗೆ ಅವರ ಅಸ್ತಿತ್ವಕ್ಕಾಗಿ ಮತ್ತು ಉಳಿವಿಗಾಗಿ ಮಾಡಿದಂತಹ ಅನಿವಾರ್ಯದ ಕದನಗಳು, ಪ್ರತಿಭಟನೆಗಳೆಲ್ಲಾ ಇಂದು ಪೀಡೆಗಳನ್ನಾಗಿ ಬಿಂಬಿಸಿರುವ ಕಾರಣಗಳು ಸ್ಪಷ್ಟವಾಗುತ್ತದೆ.

ಇನ್ನು ಧಾರ್ಮಿಕವಾಗಿ ಗುರುತಿಸಲ್ಪಡುವ ಗೋತ್ರಗಳು ಟೋಟಮ್ ಅಥವಾ ಪ್ರಾಣಿ ಲಾಂಛನದ ಬುಡಕಟ್ಟು ಅಧ್ಯಯನಗಳ ಕಡೆಗೆ ಹೊರಳುತ್ತವೆ. ಅಲ್ಲೇ ಸ್ವಾರಸ್ಯವೂ ಇರುವುದು. ಕಶ್ಯಪ, ಗೌತಮ, ಭಾರಧ್ವಜ ಇತ್ಯಾದಿ ಬ್ರಾಹ್ಮಣ ಗೋತ್ರದವರ ಮೂಲ ಆಮೆ, ಗೂಬೆ ಮತ್ತು ಇತರ ಕಾಡಿನ ಪ್ರಾಣಿ, ಪಕ್ಷಿ ಮತ್ತು ಮರಗಿಡಗಳ ಗುರುತುಗಳನ್ನು ಹೊಂದಿರುವ ಬುಡಕಟ್ಟು ಪಂಗಡಗಳು.

ಹಾಗೆಯೇ ತಾಯಾಳಿಕೆಯ ಜಾಡು ಹಿಡಿದು ಗೌರಿಯ ಸ್ತ್ರೀ ತತ್ವದ ಎಳೆಗಳಿಂದ ವ್ರತ ಮತ್ತು ವ್ರಾತ್ಯ ಇತ್ಯಾದಿಗಳ ತಿಳಿವಳಿಕೆ ನೀಡುತ್ತಾ ಕೃಷಿಯನ್ನು ಆರಂಭ ಮಾಡಿದ್ದು ಹೆಂಗಸು ಎಂಬ ಅಂಶವನ್ನು ಹೊರಗೆಡವುತ್ತಾರೆ.

ಆದಿಪೂಜಿತ ಗಣಪತಿಯ ಗಾಣಪತ್ಯದ ರಹಸ್ಯವನ್ನು ಹೊರಗೆಡವುತ್ತಾರೆ. ವಿನಾಯಕನ ಬಗ್ಗೆ ಏನೆಲ್ಲಾ ಭಯಭಕ್ತಿಗಳನ್ನು ಇಟ್ಟುಕೊಂಡಿರುವ ಜನರಿಗೆ ಇದೇ ವಿನಾಯಕ ದುಃಸ್ವಪ್ನದ ಕುರುಹಾಗಿದ್ದರ ಬಗ್ಗೆ ಬೆಚ್ಚಿಬೀಳಿಸದೇ ಇರದು. ಇಂದು ಗಣಪತಿಯ ಬಗ್ಗೆ ಏನೇನೆಲ್ಲಾ ಶುಭ ಎಂದು ಕಾಣುತ್ತೇವೋ ಅದೆಲ್ಲವೂ ಅರಣ್ಯಕಗಳಲ್ಲಿ, ಯಾಜ್ಞವಲ್ಯ ಸ್ಮೃತಿಯಲ್ಲಿ, ಬ್ರಾಹ್ಮಣಗಳಲ್ಲಿ ಅಷ್ಟೇ ಅಶುಭವಾಗಿ, ಕೀಳಾಗಿ ಕಾಣುತ್ತಿದ್ದ ಉಲ್ಲೇಖಗಳನ್ನು ಕಾಣಿಸುತ್ತಾರೆ.

ಮಾನವಶಾಸ್ತ್ರೀಯ ಅಧ್ಯಯನಕ್ಕೆ ನೆರವಾಗುತ್ತಲೇ ಭಾರತದ ಧಾರ್ಮಿಕ, ಆಧ್ಯಾತ್ಮಿಕ, ತಾತ್ವಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಇಂದು ಯಾವ ಪ್ರತಿಕೃತಿಗಳಲ್ಲಿ ಕಾಣುತ್ತಿದ್ದೇವೆ ಎಂಬ ಅರಿವು ಮೂಡಿಸುವ ಮಹಾನ್ ವಿದ್ವಾಂಸ ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ದೇವಿಪ್ರಸಾದ್ ಚಟ್ಟೋಪಾಧ್ಯಾಯ.

ಬರಿಯ ಪೌರಾಣಿಕತೆಯ ಆಯಾಮದಿಂದಷ್ಟೇ ಧಾರ್ಮಿಕತೆಯ ಶ್ರದ್ಧೆಯನ್ನು ಕಟ್ಟಿಕೊಂಡವರಿಗೆ ಲೋಕಾಯತ ಗಾಬರಿ ಬೀಳಿಸದೇ ಇರದು. ಆದರೆ ಯಾವುದೇ ಸಂಪ್ರದಾಯ, ಆಚರಣೆ ಮತ್ತು ಧಾರ್ಮಿಕ ವಿಧಿವಿಧಾನಗಳ ಜಾಡು ಹಿಡಿದು ಹೊರಟರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳು ಒಂದಷ್ಟು ಧೂಳೊದರಿಕೊಂಡು ಬೆಳಕಿಗೆ ಬರುತ್ತವೆ. ಅದು ಅದೇ ಪರಿಕಲ್ಪನೆಗಳ ಆಧಾರದಲ್ಲಿ ಇಂದು ನಡೆಯುತ್ತಿರುವ ಶೋಷಣೆಗಳೂ ಅರಿವಿಗೆ ನಿಲುಕುತ್ತವೆ. ಪೌರಾಣಿಕ ಕಥನಗಳ ರೂಪಕಗಳನ್ನು ತಿಳಿಯಲು, ಒಗಟುಗಳನ್ನು ಬಿಡಿಸಲು ನೆರವಾಗುತ್ತವೆ.

ಲೋಕಾಯತದ ಪುಟಪುಟವೂ ಸಾಂಸ್ಕೃತಿಕ ಚರಿತ್ರೆ ಮತ್ತು ಒಳನೋಟಗಳ ಬಳುವಳಿಗಳೇ.

ನವಕರ್ನಾಟಕ ಪ್ರಕಾಶನದಲ್ಲಿ ಈ ಕೃತಿ ಕನ್ನಡದಲ್ಲಿಯೂ ಲಭ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....