Homeಮುಖಪುಟಮಹಿಳೆಯರು ಮದ್ಯನಿಷೇಧದ ಪರವಾಗಿ ಏಕಿದ್ದಾರೆ?

ಮಹಿಳೆಯರು ಮದ್ಯನಿಷೇಧದ ಪರವಾಗಿ ಏಕಿದ್ದಾರೆ?

- Advertisement -
- Advertisement -

ಐಐಟಿ ದೆಹಲಿಯ ಮೂವರು ಸಂಶೋಧಕರು ಮಾಡಿರುವ ಹೊಸ ಸಂಶೋಧನೆಯು ಮದ್ಯ ನಿಷೇದಧ ವಿಷಯದ ಮೇಲೆ ನೀತಿ ರಚಿಸುವವರು ಹೊಸದಾಗಿ ಯೋಚಿಸುವಂತೆ ಮಾಡಬಹುದಾಗಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರ ಮಹಿಳೆಯರ ಬಗ್ಗೆ ಹೇಗೆ ಯೋಚಿಸಬೇಕು ಎಂಬುದನ್ನು ಈ ಅಧ್ಯಯನ ತೋರಿಸುತ್ತದೆ. ಇದು ದೇಶದಾದ್ಯಂತ ಮಹಿಳೆಯರು ಮದ್ಯನಿಷೇದವನ್ನು ಏಕೆ ಬೆಂಬಲಿಸುತ್ತಾರೆ ಎಂಬುದನ್ನು ಅರ್ಥಮಾಡಿಸಬಲ್ಲದು. ಕನಿಷ್ಠ ಮದ್ಯನಿಷೇದದ ಬಗ್ಗೆ ಹೇಗೆ ಯೋಚಿಸಬೇಕು ಎಂಬುದನ್ನಂತೂ ಕಲಿಸಿಕೊಡುತ್ತದೆ.

ಮದ್ಯನಿಷೇದಧ ಬಗ್ಗೆ ರಾಷ್ಟ್ರೀಯ ಚರ್ಚೆಯು ಎರಡು ರೀತಿಯ ಭ್ರಮೆಯ ಆಲೋಚನೆಗಳಗೆ ಬಲಿಯಾಗಿರುತ್ತದೆ. ಒಂದೆಡೆ ಸಂಪೂರ್ಣ ಮದ್ಯನಿಷೇದಧ ಬೆಂಬಲಿಗರು ಇದನ್ನು ಒಂದು ನೈತಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಶ್ನೆಯ ರೂಪದಲ್ಲಿ ಮಂಡಿಸುತ್ತಾರೆ. ಇನ್ನೊಂದೆಡೆ ಸರಕಾರದಿಂದ ಮದ್ಯನಿಷೇದಧ ವಿರೋಧ ಮಾಡುವ ಜನರಿದ್ದಾರೆ, ಅವರು ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ಮತ್ತು ಆಧುನಿಕವಲ್ಲದ ಸಾಂಪ್ರದಾಯಿಕ ಚಿಂತನೆ ಎಂದು ಕರೆಯುತ್ತಾರೆ. ಎರಡೂ ತರ್ಕಗಳಲ್ಲಿ ಹುರುಳಿಲ್ಲ. ಮದ್ಯ ಸೇವಿಸುವುದರಿಂದ ಅಥವಾ ಸೇವಿಸದೇ ಇರುವುದರಿಂದ ಯಾರದ್ದೇ ಗುಣವು ಒಳ್ಳೆಯದು ಅಥವಾ ಕೆಟ್ಟದಾಗುವುದಿಲ್ಲ. ಹಾಗೂ ನಮ್ಮ ಸಮಾಜದಲ್ಲಿ ಒಂದಲ್ಲ ಒಂದು ಮಾದಕ ದ್ರವ್ಯ ಸೇವಿಸುವ ಪುರಾತನ ಪದ್ಧತಿಗಳು ಇದ್ದೇಇವೆ. ಮತ್ತೊಂದೆಡೆ ಪಾಶ್ಚಾತ್ಯ ದೇಶದ ಎಲ್ಲವನ್ನು ನಕಲಿಸುವುದನ್ನು ಆಧುನಿಕತೆ ಎಂದು ಕರೆಯುವುದು ಮಾನಸಿಕ ಗುಲಾಮಗಿರಿಯ ಪ್ರತೀಕವಾಗಿದೆ ಹಾಗೂ, ಸರಕಾರ ಸಿಗರೇಟ್ ಮತ್ತು ಹೆಲ್ಮೆಟ್ ಮೇಲೆ ನಿಯಂತ್ರಣದ ನಿಯಮ/ಕಾನೂನು ಮಾಡಬಹುದಾದರೆ ಮದ್ಯದ ಮೇಲೆ ಏಕೆ ಮಾಡಬಾರದು?

ಮದ್ಯದ ನಿಯಂತ್ರಣದ ಬಗ್ಗೆ ನಮಗೆ ಒಂದು ಹೊಸ ದೃಷ್ಟಿಕೋನ ತಳೆಯುವ ಅಗತ್ಯವಿದೆ. ಮದ್ಯನಿಷೇದಧ ನೈತಿಕತೆ ವರ್ಸಸ್ ವೈಯಕ್ತಿಕ ಸ್ವಾತಂತ್ರ್ಯದ ಅನವಶ್ಯಕ ಚರ್ಚೆಗಳಿಂದ ಹೊರಗೆ ಬಂದು, ಅದನ್ನು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯದ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ. ಈ ದೃಷ್ಟಿಕೋನದ ಪ್ರಕಾರ ಮದ್ಯದ ಚಲಾವಣೆಯಿಂದ ಆಗುವ ನಿಜವಾದ ಸಮಸ್ಯೆಗಳ ಬಗ್ಗೆ ಗಮನಹರಿಸಬಹುದು; ಮದ್ಯಪಾನ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ, ಬಡವರ ಮನೆಗಳ ಆರ್ಥಿಕ ಪರಿಸ್ಥಿತಿ ಎಕ್ಕುಟ್ಟಿಹೋಗುತ್ತದೆ ಹಾಗೂ ಕುಟುಂಬಗಳು ಒಡೆದುಹೋಗುತ್ತವೆ.

ಪ್ರಶ್ನೆ ಏನೆಂದರೆ, ಮದ್ಯದ ಈ ದುಷ್ಪರಿಣಾಮಗಳನ್ನು ಎದುರಿಸಲು ಸಂಪೂರ್ಣ ಮದ್ಯ ನಿಷೇಧ ಒಂದು ಪರಿಣಾಮಕಾರಿಯಾದ ಪರಿಹಾರವೇ? ನಮ್ಮ ದೇಶದಲ್ಲಿ ಗುಜರಾತ್, ಆಂಧ್ರಪ್ರದೇಶ ಹಾಗೂ ಹರಿಯಾಣದಲ್ಲಿ ಸಂಪೂರ್ಣ ಮದ್ಯನಿಷೇಧ ಅನುಭವದಿಂದ ಗೊತ್ತಾಗಿರುವುದೇನೆಂದರೆ ಈ ನೀತಿಯಿಂದಲೂ ಅನೇಕ ದುಷ್ಪರಿಣಾಮಗಳು ಆಗುತ್ತವೆ. ಒಂದು ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವುದರಿಂದ ಏನೂ ಆಗುವುದಿಲ್ಲ; ಏಕೆಂದರೆ ಪಕ್ಕದ ರಾಜ್ಯದಿಂದ ಕಳ್ಳಸಾಗಾಣಿಕೆ ಶುರುವಾಗುತ್ತದೆ, ಕಾಳಸಂತೆ ನಡೆಸುವ ಮಾಫಿಯಾ ಹುಟ್ಟಿಕೊಳ್ಳುತ್ತದೆ. ಮದ್ಯ ಮಾರಾಟವನ್ನು ಕಾನೂನಾತ್ಮಕವಾಗಿ ನಿಷೇಧಿಸಿದಾಗ ಕಚ್ಚಾ ಸಾರಾಯಿ, ವಿಷಕಾರಿ ಮದ್ಯ ಹಾಗೂ ಇತರ ಅಮಲು ಪದಾರ್ಥಗಳ ಕಾಣಿಸಿಕೊಳ್ಳುತ್ತವೆ. ಈ ವಾದಗಳ ಕಾರಣದಿಂದ ಮದ್ಯ ನಿಷೇಧದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಒಮ್ಮತಕ್ಕೆ ಬರಲಾಗಲಿಲ್ಲ. ಸರಕಾರದ ಎಲ್ಲಕ್ಕಿಂತ ದೊಡ್ಡ ವಾದವೇನೆಂದರೆ, ನಿಷೇಧದಿಂದ ಅವರ ರಾಜಸ್ವದಲ್ಲಿ ದೊಡ್ಡ ಕಡಿತವಾಗುತ್ತದೆ ಎಂಬುದು. ದುರದೃಷ್ಟವಶಾತ್, ಮದ್ಯದ ಮಾರಾಟದ ಮೇಲೆ ವಿಧಿಸುವ ಅಬಕಾರಿ ಶುಲ್ಕವು ರಾಜ್ಯ ಸರಕಾರಗಳ ಆದಾಯದ ಅತಿದೊಡ್ಡ ಮೂಲವಾಗಿದೆ.

ಇಂತಹ ಸಂದರ್ಭದಲ್ಲಿ 2016ರಲ್ಲಿ ನಿತೀಶ್ ಕುಮಾರ್ ಸರಕಾರವು ಬಿಹಾರದಲ್ಲಿ ಸಂಪೂರ್ಣ ಮದ್ಯನಿಷೇಧ ವಿಧಿಸುವ ತೀರ್ಮಾನ ಎಲ್ಲರನ್ನು ಚಕಿತಗೊಳಿಸಿತು. ಕಳೆದ ಏಳು ವರ್ಷಗಳಿಂದ ಈ ನೀತಿಯ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಬಗ್ಗೆ ಸುದ್ದಿಗಳು ಬರುತ್ತಿದ್ದವು; ಆದರೆ ಇದರ ಲಾಭನಷ್ಟಗಳ ಬಗ್ಗೆ ಯಾವುದೇ ಸ್ಪಷ್ಟ ಅಭಿಪ್ರಾಯ ಕಾಣಿಸಲಿಲ್ಲ. ಆದರೆ ಬಿಹಾರ ಸರಕಾರವು ಇದನ್ನು ಸಾರಾಯಿ ಮಾಫಿಯಾದ ಪ್ರಚಾರ ಎಂದು ಕರೆದಿದೆ ಹಾಗೂ ಇದರಿಂದ ಹಿಂದೆ ಸರಿಯುವುದಿಲ್ಲ ಎಂದಿದೆ.

ಇದನ್ನೂ ಓದಿ: ಉಡುಪಿ ವಿಡಿಯೋ ಪ್ರಕರಣ: ಹಾಸ್ಟೆಲ್ ಮಕ್ಕಳ ಹುಚ್ಚಾಟವೂ, ಹಿಡನ್ ಹಿಂದುತ್ವದ ಹಿಕಮತ್ತೂ!!

ಇತ್ತೀಚಿಗೆ ಐಐಟಿಯ ದೆಹಲಿಯ ಮೂರು ಅರ್ಥಶಾಸ್ತ್ರಜ್ಞರು (ಹೌದು, ಐಐಟಿಯಲ್ಲಿ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನವಲ್ಲ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ಇತ್ಯಾದಿ ವಿಷಯಗಳ ಬಗ್ಗೆಯೂ ಒಳ್ಳೆಯ ಸಂಶೋಧನೆ ನಡೆಯುತ್ತವೆ.) ಬಿಹಾರದಲ್ಲಿ ಮದ್ಯನಿಷೇಧ ನೀತಿಯಿಂದ ಮಹಿಳೆಯರ ಮೇಲೆ ಆದ ಪರಿಣಾಮಗಳನ್ನು ಪರಿಶೀಲಿಸಿ, ಈ ನೀತಿಯ ವಸ್ತುನಿಷ್ಠ ಮೌಲ್ಯಮಾಪನಕ್ಕೆ ದಾರಿ ತೆಗೆದಿಟ್ಟಿದ್ದಾರೆ. ಶಿಶಿರ್ ದೇಬನಾತ್, ಸೌರಭ್ ಪಾಲ್ ಹಾಗೂ ಕೋಮಲ್ ಸರೀನ್ ಅವರು ತಮ್ಮ ಸಂಶೋಧನೆಯಲ್ಲಿ ಒಂದು ದೊಡ್ಡ ಪ್ರಶ್ನೆಯನ್ನು ತಮ್ಮ ಅಧ್ಯಯನದ ಕೇಂದ್ರದಲ್ಲಿಟ್ಟುಕೊಂಡರು; ಮದ್ಯನಿಷೇಧದಿಂದ ಮಹಿಳೆಯರ ಮೇಲೆ ಆಗುವ ಹಿಂಸೆಯಲ್ಲಿ ಕಡಿತವಾಗುತ್ತದೆಯೇ? ಮೊದಲು ಇದಕ್ಕೆ ಸಂಬಂಧಿಸಿದಂತೆ ವಾದಗಳನ್ನು ಮಂಡಿಸಲಾಗಿತ್ತು ಹಾಗೂ ಅವನ್ನು ನಿರಾಕರಿಸುವ ಕೆಲಸವೂ ಆಗಿತ್ತು. ಆದರೆ ಇಲ್ಲಿಯತನಕ ಸ್ಪಷ್ಟವಾದ ಪ್ರಮಾಣಗಳು ಸಿಕ್ಕಿದ್ದಿಲ್ಲ. ಈ ಅಧ್ಯಯನಕ್ಕೆ ಈ ತಜ್ಞರು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆಯ ಸಹಾಯ ಪಡೆದುಕೊಂಡರು ಮತ್ತು ಈ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಈ ವಿಷಯದ ಮೇಲೆ ದೇಶದ ಅತಿ ದೊಡ್ಡ ಹಾಗೂ ಪ್ರಮಾಣಿತ ಮಾಹಿತಿಯ ಮೂಲವಾಗಿದೆ. ಈ ಸಮೀಕ್ಷೆಯ ವಿಶೇಷವೇನೆಂದರೆ, ಮದ್ಯದ ಬಳಕೆಯನ್ನು ಅಳೆಯಲು ಸರಕಾರಿ ಅಂಕಿಅಂಶಗಳನ್ನು ಬಳಸಲಾಗುವುದಿಲ್ಲ, ಅದರ ಬದಲಿಗೆ ಮನೆಯಲ್ಲಿ ಮಹಿಳೆಯರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದೇ ರೀತಿಯಲ್ಲಿ ಮಹಿಳೆಯರ ಮೇಲಿನ ಹಿಂಸೆ ಅಥವಾ ಬಲಾತ್ಕಾರಗಳ ಬಗ್ಗೆ ಪೊಲೀಸ್ ಠಾಣೆಯ ದಾಖಲೆಗಳನ್ನು ನೋಡಲಾಗುವುದಿಲ್ಲ; ಅವುಗಳು ತಪ್ಪುದಿಕ್ಕಿಗೆ ಕರೆದೊಯ್ಯುವುದರಿಂದ, ಅದರ ಬದಲಿಗೆ ಖುದ್ದು ಮಹಿಳೆಯರಿಗೇ ಖಾಸಗಿಯಾಗಿ ಕೇಳಲಾಗುತ್ತದೆ. ದೇಶದಲ್ಲಿ ಆರೋಗ್ಯದ ಮಾಹಿತಿಯೊಂದಿಗೆ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆಯ ಅಂಕಿಅಂಶಗಳಿಗೆ ಇದು ಅತ್ಯಂತ ಪ್ರಾಮಾಣಿಕ ಮೂಲವಾಗಿದೆ. ಈ ಸಮೀಕ್ಷೆ ಮೊದಲು 2005-06ರಲ್ಲಿ ನಂತರ 2015-16ರಲ್ಲಿ ಹಾಗೂ ಹೊಸದಾಗಿ 2019-20ರಲ್ಲಿ ನಡೆದಿದೆ.

ಕಾಕತಾಳೀಯವಾಗಿ ಈ ಸಮೀಕ್ಷೆಯ ಎರಡನೆಯ ಸುತ್ತು ಬಿಹಾರದಲ್ಲಿ ಮದ್ಯನಿಷೇಧ ಅನುಷ್ಠಾನಗೊಸುವುದಕ್ಕೆ ಸ್ವಲ್ಪ ಸಮಯದ ಮುಂಚೆ ಆಗಿತ್ತು. ಅಂದರೆ ಇದರ ಆಧಾರದ ಮೇಲೆ ಮದ್ಯನಿಷೇಧ ಪರಿಣಾಮವನ್ನು ಅಳೆಯಬಹುದಾಗಿದೆ. ಸಮೀಕ್ಷೆಯ ಅಂಕಿಅಂಶಗಳ ಸೂಕ್ಷ್ಮವಾದ ವಿಶ್ಲೇಷಣೆಯ ಆಧಾರದ ಮೇಲೆ ಈ ತಜ್ಞರು ತೋರಿಸಿರುವುದೇನೆಂದರೆ ಮದ್ಯನಿಷೇಧ ಜಾರಿಗೊಳಿಸಿದ ನಂತರ ಬಿಹಾರದಲ್ಲಿ (ಕುಟುಂಬದ ಮಹಿಳೆಯರ ಪ್ರಕಾರ) ಗಂಡಸರು ಸೇವಿಸುವ ಮದ್ಯದ ಪ್ರಮಾಣದಲ್ಲಿ ಭಾರಿ ಕಡಿತವಾಗಿದೆ; ಇದೇ ಅವಧಿಯಲ್ಲಿ ಇತರ ರಾಜ್ಯಗಳಲ್ಲಿ ಮದ್ಯದ ಬಳಕೆಯ ಪ್ರಮಾಣ ಹೆಚ್ಚಾಗಿತ್ತು. ಇದು ನಿರೀಕ್ಷಿತವೇ. ಇದಕ್ಕಿಂತ ಮಹತ್ವಪೂರ್ಣವಾದ ನಿಷ್ಕರ್ಷವೇನೆಂದರೆ, 2016ರ ನಂತರ ಬಿಹಾರದಲ್ಲಿ ಗಂಡಸರು ಮಹಿಳೆಯರ ಮೇಲೆ ಎಸಗುತ್ತಿದ್ದ ನಾನಾ ಪ್ರಕಾರದ ಹಿಂಸೆಯೂ ಸ್ಪಷ್ಟವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲ, ಮಹಿಳೆಯರು ಹೊರಗೆ ಹೋಗಲು, ಖರ್ಚು ಮಾಡಲು ಮುಂತಾದವುಗಳಿಗೆ ವಿಧಿಸುತ್ತಿದ್ದ ನಿರ್ಬಂಧನೆಗಳಲ್ಲೂ ಕುಸಿತ ಕಂಡುಬಂದಿದೆ. ಈ ಬದಲಾವಣೆ ಬೇರೆ ಯಾವುದೇ ಸರಕಾರಿ ನೀತಿ ಅಥವಾ ಬೇರಾವುದೇ ಕಾರಣದಿಂದ ಆಗಿರಬಹುದು ಎಂಬುದರ ಸಾಧ್ಯತೆಗಳನ್ನು ಈ ಸಂಶೋಧಕರು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನಂತರ ತಳ್ಳಿಹಾಕಿದ್ದಾರೆ.

ಈ ಅಧ್ಯಯನವು ಮೊದಲ ಬಾರಿ ಮಹಿಳೆಯರ ಮೇಲಿನ ಹಿಂಸೆಗೆ ಮತ್ತು ಮದ್ಯಕ್ಕೆ ಸಂಬಂಧವಿದೆ ಎನ್ನುತ್ತದೆ ಹಾಗೂ ಈ ಕಾರಣಕ್ಕಾಗಿ ಮದ್ಯನಿಷೇಧದ ಬೇಡಿಕೆ ಇಡುವ ಮಹಿಳಾ ಸಂಘಟನೆಗಳು ಮತ್ತು ಜನಾಂದೋಲನಗಳ ಅನುಭವಗಳನ್ನು ದೃಢೀಕರಿಸುತ್ತದೆ. ಮದ್ಯನಿಷೇಧದ ವಿಷಯದ ಮೇಲೆ ಯೋಚಿಸುವಾಗ ನೀತಿ ರಚಿಸುವವರು ಈ ಅಂಶದ ಮೇಲೆಯೂ ಗಮನವಿರಿಸುತ್ತಾರೆ ಎಂದು ಆಶಿಸೋಣ. ಆದರೆ ಈ ಆಧ್ಯಯನ ಪ್ರಕಟವಾದ ವಾರವೇ ಸರಕಾರವು ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ ಮಾಡಿದ ಸಂಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸ್ಟಡೀಸ್‌ನ ನಿರ್ದೇಶಕರನ್ನು ಅಮಾನತ್ತುಗೊಳಿಸಿದ್ದಾರೆ. ಬಲ್ಲವರು ಹೇಳುವುದೇನೆಂದರೆ, ಅವರನ್ನು ಆ ಸ್ಥಾನದಿಂದ ತೆಗೆಯಲು ಇದ್ದ ಅಸಲಿ ಕಾರಣ, ಈ ಸಮೀಕ್ಷೆಯ ಅಂಕಿಅಂಶಗಳು ಸರಕಾರಕ್ಕೆ ಇಷ್ಟವಾಗಲಿಲ್ಲ ಎಂದು. ಇಂತಹದ್ದರಲ್ಲಿ ಈ ಅಧ್ಯಯನದ ಆಧಾರದ ಮೇಲೆ ನೀತಿ ರಚಿಸಬೇಕು ಎಂದು ನಿರೀಕ್ಷೆ ಮಾಡಬಹುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...