Homeಚಳವಳಿಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ಹಿಂಸೆಯು ಮಾನ್ಯತೆ ಪಡೆದು ಸಾಮಾನ್ಯ ಎನಿಸಿರುವ ಈ ಪ್ರಪಂಚದಲ್ಲಿ ಸಾಮೂಹಿಕ ಪರಿಹಾರಕ್ಕಾಗಿ ಶ್ರಮಿಸುತ್ತಿರುವ ಎಲ್ಲರೂ ಗಾಂಧಿಯವರತ್ತ ನೋಡಬೇಕು. ಗಾಂಧಿಯವರು ಅಸಾಮಾನ್ಯ ಎನಿಸುವುದು ಅವರು ಯಶಸ್ವಿಯಾದರು ಎಂಬುದಕ್ಕಲ್ಲ ಎಂದು ನನಗನಿಸಿದ ಕ್ಷಣಗಳಿವೆ. ಬದಲಾಗಿ ಅವರು ‘ಅಸಾಧ್ಯ’ವಾದುದಕ್ಕಾಗಿ ಶ್ರಮಿಸಿದರು ಎಂಬುದಕ್ಕೆ. ಹಿಂಸೆಯ ಕಾಲದಲ್ಲಿ ಅಹಿಂಸೆಗಾಗಿ; ಅಧಿಕಾರಶಾಹಿ ಮತ್ತು ತಾಂತ್ರಿಕತೆಯ ಅಮಾನವೀಯತೆಯು ಮಾನ್ಯತೆ ಪಡೆದಿರುವ ಕಾಲದಲ್ಲಿ ಸ್ವಾವಲಂಬನೆಗಾಗಿ; ಹೊರಗಿನ ತೋರಿಕೆಯೇ ಮಾನ್ಯತೆ ಪಡೆದಿರುವ ಕಾಲದಲ್ಲಿ ಆತ್ಮವಿಮರ್ಶೆಗಾಗಿ ದುಡಿದರು ಎಂಬ ಕಾರಣಕ್ಕಾಗಿ. ಗಾಂಧಿ ‘ವಿಫಲ’ರಾದರೆಂದು ಬಹಳಷ್ಟು ಸಲ ಹೇಳಲಾಗುತ್ತದೆ. 1948ರ ಜನವರಿ 30ದಂದು ಅವರಿಗೆ ಗುಂಡಿಕ್ಕಿದಾಗ ನಾಥುರಾಂ ಗೋಡ್ಸೆ ನೀಡಿದ ಸಂದೇಶವೆಂದರೆ, ಗಾಂಧಿಯವರ ವೈಫಲ್ಯ ಅಕ್ಷಮ್ಯ ಮತ್ತು ಅದಕ್ಕಾಗಿ ಅವರನ್ನು ತಿಳಿದುಕೊಳ್ಳುವ ಬದಲು ಕೊಲ್ಲಬೇಕು ಎಂಬುದಾಗಿದೆ.

ಸಾಮಾನ್ಯವಾಗಿ ಗೋಡ್ಸೆಯ ರಾಜಕೀಯದ ಜೊತೆ ಸಂಬಂಧವಿಲ್ಲದ ನಮ್ಮಲ್ಲಿನ ಹಲವರಲ್ಲಿಯೂ ಗೋಡ್ಸೆಯ ತುಣುಕೊಂದು ಅಡಗಿದೆಯೆ? ‘ಗಾಂಧಿ ನಿಂದನೆ’ ಎಂದು ನಾನು ಕರೆಯಲಿಚ್ಛಿಸುವ ಕೃತ್ಯದಲ್ಲಿ ನಾವು ತೊಡಗಿರುವುದನ್ನು ಗಮನಿಸಿ. ಆಧುನಿಕವಾದಿಗಳು (ಗಾಂಧಿಯವರ ಅತ್ಯಂತ ನಿಕಟ ಶಿಷ್ಯ ಎನಿಸಿದ ಜವಾಹರಲಾಲ್ ನೆಹರೂ ಅವರನ್ನೂ ಈ ಗುಂಪಿನಲ್ಲಿ ಸೇರಿಸಲು ಇಚ್ಛಿಸುತ್ತೇನೆ)  ಅವರ ‘ಸರಳ’ ಆದರೂ ವಿಸ್ತೃತವಾದ ಹಿಂದ್ ಸ್ವರಾಜ್ ಎಂಬ ವಸಾಹತುವಿರೋಧಿ ಮಾರ್ಗದರ್ಶಿ ಸೂತ್ರದ ಬಗ್ಗೆ ಇರಿಸುಮುರುಸು ಹೊಂದಿರುವುದು ನಿಜ.

ಜಾತಿಪ್ರಜ್ಞೆಯ ಬೀಜಗಳನ್ನು ನಿವಾರಿಸುವಲ್ಲಿ ಗಾಂಧಿಯವರು ಯಾವುದೇ ಅರ್ಥಪೂರ್ಣ ಪಾತ್ರ ಹೊಂದಿದ್ದರು ಎಂಬುದನ್ನು ನಂಬಲು ಅಂಬೇಡ್ಕರ್‌ವಾದಿಗಳು ನಿರಾಕರಿಸಬಹುದು. ಕಮ್ಯುನಿಸ್ಟರು ಅವರ ‘ಅಹಿಂಸಾತ್ಮಕ ಸಮಾಜವಾದ’ ಕಲ್ಪನೆಯ ಕುರಿತು ಬಹಳಷ್ಟು ಸಲ ನಗುತ್ತಾರೆ. ಮಧ್ಯಯುಗದ, ಮೃದು ಹಿಂದೂ, ಪಿತೃಪ್ರಧಾನ ಗಾಂಧಿ- ನಮ್ಮ ಇತಿಹಾಸದಲ್ಲಿನ ಅಪ್ರಿಯವಾದ ಎಲ್ಲಾ ವಿಷಯಗಳಿಗೆ ಹೊಣೆ ಎಂಬ ಭಾವ ಎಷ್ಟು ಬಾರಿ ನಮ್ಮ ಆತ್ಮಸಾಕ್ಷಿಯಲ್ಲಿ ಸುಳಿದಿಲ್ಲ? ಗೋಡ್ಸೆ ಅವರನ್ನು ದೈಹಿಕವಾಗಿ ಕೊಂದ. ಅವರಿಗೆ ಸಹಾನುಭೂತಿಯಿಲ್ಲದೇ ಕಳಂಕಹಚ್ಚುವ ಕೃತ್ಯದಿಂದ ನಮ್ಮಲ್ಲನೇಕರು ಅವರ ಚೈತನ್ಯವನ್ನು ಕೊಲ್ಲಲು ಬಯಸಿದ್ದೇವೆ.

ಗಾಂಧಿಯವರ ಕುರಿತು ಒಲವಿರುವ, ಅವರನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುವ  ಕ್ರಾಂತಿಕಾರಿ ಯುವಜನರನ್ನು ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇದು ಬದಲಾಗಬೇಕೆಂದು ನಾನು ಭಾವಿಸುತ್ತೇನೆ. ಈ ಲೇಖನದಲ್ಲಿ ಇದು ಏಕೆ ಅಗತ್ಯ-ಅದರಲ್ಲೂ ಯುವ ಜನರು ಗಾಂಧಿಯವರನ್ನು ಸ್ವಲ್ಪ ಮಟ್ಟಿನ ಗಂಭೀರತೆಯಿಂದ ತಿಳಿದುಕೊಳ್ಳುವುದು ಏಕೆ ಅಗತ್ಯ ಎಂದು ನಾನು ವಾದಿಸುತ್ತೇನೆ.

ಮೂರು ಸೂಕ್ತ ಪ್ರಶ್ನೆಗಳು

ಮೊದಲಿಗೆ ನಮ್ಮ ಕಾಲದಲ್ಲಿ ನಮ್ಮ ಬದುಕೇ ಎತ್ತುವ ಮೂರು ಪ್ರಶ್ನೆಗಳನ್ನು ನಾನು ಎತ್ತುತ್ತೇನೆ. ಮೊದಲನೆಯದಾಗಿ ನವ ಉದಾರವಾದಿ ಜಾಗತಿಕ ಬಂಡವಾಳಶಾಹಿಯ ಮಾರುಕಟ್ಟೆ ಪ್ರೇರಿತ ಚಿಂತನೆ ಮತ್ತು ಅದರ ಜವಾಬ್ದಾರಿಯಿಲ್ಲದ ಸ್ಪರ್ಧೆ- ಪ್ರೀತಿ, ಕಾಳಜಿ ಮತ್ತು ನ್ಯಾಯಪ್ರಜ್ಞೆಯಿಲ್ಲದ ಸ್ವಾರ್ಥ ತುಂಬಿದ ವ್ಯಕ್ತಿಯನ್ನು ಕೇವಲ ಒಬ್ಬ ಸದಾ ಅತೃಪ್ತನಾದ ಚಡಪಡಿಕೆಯ ಗ್ರಾಹಕನನ್ನಾಗಿ ಮಾತ್ರ ಕಾಣುವ ಅದರ ಸೂಚ್ಯವಾದ ಚಿಂತನೆಯ ಕುರಿತು ಯೋಚಿಸಿ.

ಎರಡನೆಯದಾಗಿ, ಧರ್ಮವನ್ನು ಆತ್ಮರತಿಯನ್ನಾಗಿ ಪರಿವರ್ತಿಸುವ ಮತ್ತು ನಂಬಿಕೆ, ಜೀವನಶೈಲಿ, ಸಾಂಸ್ಕೃತಿಕ ಆಚಾರಗಳ ವೈವಿಧ್ಯಕ್ಕೆ ಕುರುಡಾಗಿರುವ ಕೇಂದ್ರೀಕೃತ, ಏಕರೂಪಿ ಚಿಂತನೆಯ ಧಾರ್ಮಿಕ ರಾಷ್ಟ್ರವಾದದ ಬೆಳವಣಿಗೆಯನ್ನು ನೋಡಿ.

ಮೂರನೆಯದಾಗಿ, ನಾನು ಆತ್ಮದ ಮಿಲಿಟರೀಕರಣ ಎಂದು ಕರೆಯುವ ಮೌಲ್ಯಗಳ ವೈಭವೀಕರಣವನ್ನು ನೋಡಿ. ಇಲ್ಲಿ ಕಾಳಜಿ, ಕರುಣೆ ಮತ್ತು ಉಳಿದವರ ಮಾತುಗಳನ್ನು ತಾಳ್ಮೆಯಿಂದ ಕೇಳುವುದನ್ನು ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಬದಲಾಗಿ ಅತ್ಯಂತ ಆಕ್ರಮಣಕಾರಿಯಾದ ‘ಕಠೋರ’ ನಿರ್ಧಾರಗಳನ್ನು ಆರಾಧಿಸಲಾಗುತ್ತದೆ. ಯುದ್ಧದ ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹಾ ಪ್ರತಿಮೆಗಳು ನಮ್ಮ ಮನೋಭಿತ್ತಿಯಲ್ಲಿ ಸದ್ದಿಲ್ಲದೇ ಸೇರಿಬಿಟ್ಟಿವೆ.

ಆದುದರಿಂದ, ಸಾಮೂಹಿಕವಾಗಿ ಇದಕ್ಕೆ ಪರಿಹಾರ ಮತ್ತು ನಮ್ಮ ಕಾಲದ ಉನ್ನತಿಗಾಗಿ ಶ್ರಮಿಸುತ್ತಿರುವ ಎಲ್ಲರೂ ಕೆಳಗಿನ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಎಂದು ನಾನು ಹೇಳಿದರೆ ತಪ್ಪಾಗಲಾರದು.

1. ಮಾನಸಿಕವಾಗಿ ಮತ್ತು ಪಾರಿಸರಿಕವಾಗಿ ವಿನಾಶಕಾರಿಯಾದ ಕೊಳ್ಳುಬಾಕ ಸಂಸ್ಕೃತಿಗೆ ಅಸಹಕಾರ ತೋರಿಸಿ, ನಿಸರ್ಗ, ಪರಿಸರ ಮತ್ತು ಸಮಾಜದೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಿರುವ ಜೀವಪ್ರೇಮಿಯಾದ, ಶಾಂತಿ ಮತ್ತು ಸರಳತೆಯೇ ಕೇಂದ್ರವಾಗಿರುವ ಚಿಂತನೆಯ ಕಡೆಗೆ ಸಾಗಬಲ್ಲ ಧೈರ್ಯವನ್ನು ತೋರುವ ವ್ಯಕ್ತಿಯನ್ನು ಮರುಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

2. ಧರ್ಮವನ್ನು ಆಕ್ರಮಣಕಾರಿ ರಾಷ್ಟ್ರವಾದದ ಸಿದ್ಧಾಂತವನ್ನಾಗಿ ಕಾಣದೆ, ಜಾತ್ಯತೀತವಾದ, ಆಧ್ಯಾತ್ಮಿಕವಾದ, ಪ್ರೀತಿ ಮತ್ತು ಸಾಮರಸ್ಯದ ಭಾವನೆಯಾಗಿ ಧಾರ್ಮಿಕತೆಯನ್ನು ಕಾಣಲು ಸಾಧ್ಯವಿದೆಯೇ?

3.  ಕ್ರೌರ್ಯದಿಂದ ಕೂಡಿದ ಅಧಿಕಾರದ ತಕ್ಷಣದ ಲಾಲಸೆಗೆ ಬಲಿಬೀಳದೆ, ಅಹಿಂಸೆಯ ನೈತಿಕಶಕ್ತಿಯಾಗಿ ಧೈರ್ಯವನ್ನು ಮರುವ್ಯಾಖ್ಯಾನಿಸಲು, ಬಂಡಾಯವನ್ನು ಆತ್ಮದ ಉನ್ನತ ಮಟ್ಟಕ್ಕೆ ಒಯ್ದು, ಆ ಮೂಲಕ ಶೋಷಕನ ಹೃದಯವನ್ನು ಮುಟ್ಟಬಯಸುವ ಪ್ರತಿರೋಧದ ವಿಧಾನವನ್ನು ಕಂಡುಕೊಳ್ಳಲು ಸಾಧ್ಯವಿದೆಯೇ? ಬೇರೆ ಮಾತುಗಳಲ್ಲಿ ಹೇಳುವುದಾದರೆ ಗೆರಿಲ್ಲಾ ತಂತ್ರದಲ್ಲಿ ತರಬೇತಿ ಹೊಂದಿದ ಕ್ರಾಂತಿಕಾರಿಯಾಗುವ ಬದಲು ಸತ್ಯಾಗ್ರಹಿಯಾಗಲು ಸಾಧ್ಯವೆ?

ಗಾಂಧಿಯವರ ಅರ್ಥಪೂರ್ಣ ಅಧ್ಯಯನದಿಂದ ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯುವಜನರಿಗೆ ಸಾಧ್ಯವಾದೀತು. ಅದಕ್ಕೆ ಮೊದಲು ಯಾವುದೇ ಚಿಂತಕ ಪರಿಪೂರ್ಣನಲ್ಲ; ತಪ್ಪುಗಳನ್ನು ಮಾಡುವುದು ಮಾನವ ಸಹಜ ಎಂಬ ತಿಳುವಳಿಕೆಯ ಅಗತ್ಯವಿದೆ. ಗಾಂಧಿಯವರಿಗೆ ಅವರ ತಪ್ಪುಗಳು ಗೊತ್ತಿದ್ದವು ಮತ್ತು ಅವುಗಳನ್ನು ಅವರು ಅತ್ಯಂತ ನಿರ್ಭಿಡೆಯಿಂದ ಮತ್ತು ಪಾರದರ್ಶಕತೆಯಿಂದ ಒಪ್ಪಿಕೊಂಡಿದ್ದಾರೆ ಕೂಡಾ. ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುತ್ತಿದ್ದರೂ ಗಾಂಧಿಯವರ ಜೊತೆ ಯಾವತ್ತೂ ಹೆಜ್ಜೆಹಾಕಲು ಸಾಧ್ಯವಿದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...