Homeಮುಖಪುಟ‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

‘ವಂಡರ್‌ ವುಮೆನ್‌’: ತಾಯ್ತನದ ಸುಖ-ದುಃಖದ ಸುತ್ತಲಿನ ಲೋಕ

- Advertisement -
- Advertisement -

ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯ ಮೂಲಕ ಗಮನ ಸೆಳೆದವರು ‘ಅಂಜಲಿ ಮೆನಾನ್‌’. ‘ಬೆಂಗಳೂರ್‌ ಡೇಸ್‌’, ‘ಕೂಡೆ’, ‘ಕೇರಳ ಕೆಫೆ’, ‘ಉಸ್ತಾದ್ ಹೋಟೆಲ್‌’ನಂತಹ ಸಿನಿಮಾಗಳ ರೈಟರ್‌ ಆಗಿರುವ ಅಂಜಲಿಯವರು, ಎಲೈಟ್ ವರ್ಗದ ಹಿನ್ನೆಲೆಯಲ್ಲಿ ಪಾತ್ರಗಳನ್ನು ಚಿತ್ರಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಪಾತ್ರಗಳು ಎಲೈಟ್ ಹಿನ್ನೆಲೆಯಲ್ಲಿದ್ದರೂ ಎಲ್ಲ ಮನುಷ್ಯರನ್ನು ಸ್ಪರ್ಶಿಸಬಲ್ಲ ವರ್ಗಾತೀತ ಅನುಭವವೊಂದನ್ನು ಅಂಜಲಿಯವರು ತಮ್ಮ ಕತೆಗಳೊಳಗೆ ತರುವ ಪ್ರಯತ್ನ ಮಾಡುವುದು ಗಮನಾರ್ಹ. ಅಂಥದ್ದೇ ಮತ್ತೊಂದು ಸಿನಿಮಾ ಕತೆಯನ್ನು ಬರೆದು, ಅವರೀಗ ನಿರ್ದೇಶಿಸಿದ್ದಾರೆ.

ಅಂಜಲಿ ಮೆನಾನ್‌ ನಿರ್ದೇಶನದ ಇತ್ತೀಚಿನ ಸಿನಿಮಾ ‘ವಂಡರ್‌ ವುಮೆನ್‌’ (ಇಂಗ್ಲಿಷ್‌) ‘ಸೋನಿಲೈವ್‌’ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ ‘ವಂಡರ್‌ ವುಮೆನ್‌’ ತಾಯ್ತನ, ಗರ್ಭಿಣಿಯರ ಕಷ್ಟಸುಖದ ಸುತ್ತ ಸಾಗುತ್ತದೆ. ನವಿರಾದ ಸಂಭಾಷಣೆಯು ಹಿತವೆನಿಸುತ್ತದೆ ಹಾಗೂ ಕೆಲವು ಗಂಭೀರ ಚಿಂತನೆಗಳಿಗೆ ಅವಕಾಶ ನೀಡಿದೆ.

ಆರು ಮಂದಿ ತುಂಬು ಗರ್ಭಿಣಿಯರು ‘ಪ್ರಸವ ಪೂರ್ವ ತರಗತಿ’ಗೆ ಸೇರುತ್ತಾರೆ. ತಮ್ಮ ಮುಂದಿರುವ ಸವಾಲುಗಳನ್ನು ನಿವಾರಿಸಿಕೊಂಡು, ಪ್ರಸವ ವೇದನೆಯನ್ನು ಮೀರಿ ತಾಯ್ತನದ ನೆಮ್ಮದಿಯನ್ನು ಪಡೆಯುವುದು ಇಂತಹ ತರಗತಿ/ತರಬೇತಿಯ ಉದ್ದೇಶ. ಆರು ಮಂದಿ ಗರ್ಭಿಣಿಯರ ಹಿನ್ನೆಲೆಯೂ ವಿಭಿನ್ನ. ಅವರೆಂದರೆ- ಸಂಪ್ರದಾಯವಾದಿ ಹಿಂದೂ ಕುಟುಂಬದ ಮಹಿಳೆ, ಕ್ರಿಶ್ಚಿಯನ್‌ ಮಹಿಳೆ, ಪ್ರಸವ ಪೂರ್ವ ತರಬೇತಿ ನೀಡುವ ತಜ್ಞೆಯೊಂದಿಗೆ ಇರುವ ಕೆಲಸದಾಕೆ, ಲಿವಿಂಗ್ ಟುಗೆದರ್‌ ಮೂಲಕ ಜೀವನ ನಡೆಸುತ್ತಿರುವಾಕೆ, ಸಿಂಗಲ್‌ ಪೇರೆಂಟ್ (ಅಂದರೆ- ಪ್ರಸವ ಪೂರ್ವದಲ್ಲಿ ವಿಚ್ಛೇದನಾ ಪಡೆದಿರುವ ಮುಸ್ಲಿಂ ಮಹಿಳೆ), ಈಗಾಗಲೇ ಎರಡು ಸಲ ಗರ್ಭಪಾತವಾಗಿ ತಾಯ್ತನಕ್ಕಾಗಿ ಹಂಬಲಿಸುತ್ತಿರುವ ಮರಾಠಿ ಮೂಲದ ಮಹಿಳೆ.

Wonder Women OTT Release Date is OUT

ಪ್ರತಿ ಹೆಣ್ಣಿನ ಹಿಂದೆಯೂ ಇರುವ ಸುಖ- ದುಃಖದ ಅನಾವರಣ ಮಾಡುತ್ತಾ, ಒಬ್ಬೊರ ದುಃಖದಲ್ಲಿ ಇನ್ನೊಬ್ಬರು ಸಹಭಾಗಿಯಾಗಿ ಸಂತ್ವಾನ ಮೆರೆಯುತ್ತಾ ಸುಖ್ಯಾಂತ್ಯದಲ್ಲಿ ಕತೆ ಮುಗಿಯುತ್ತದೆ. ಗರ್ಭಿಣಿ ಮಹಿಳೆಯರು ಎದುರಿಸುವ ಸವಾಲು, ಭಯ, ಆತಂಕ, ತಾಯಿ ಮತ್ತು ಮಗುವಿನ ಪಾಲನೆಯಲ್ಲಿ ಗಂಡ ಹಾಗೂ ಕುಟುಂಬದ ಜವಾಬ್ದಾರಿ- ಇತ್ಯಾದಿಗಳ ವಿಷಯಗಳನ್ನು ಸೂಕ್ಷ್ಮವಾಗಿ ಕತೆ ಚರ್ಚಿಸುತ್ತದೆ.

ಶ್ರೇಣೀಕೃತ ಪುರುಷಾಧಿಪತ್ಯದ ಪ್ರಶ್ನೆಯನ್ನು ಗಂಭೀರವಾಗಿಯಲ್ಲದಿದ್ದರೂ ಖೋ ಖೋ ಆಟದಂತೆ ಸ್ಪರ್ಶಿಸಿ ಕಥೆ ಮುಂದೆ ಸಾಗುತ್ತದೆ. ಎಲ್ಲರ ಹಿಂದೆಯೂ ಕಷ್ಟಗಳಿವೆ ಎಂಬ ಸಿದ್ಧಸೂತ್ರವನ್ನು ಹೆಣೆದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಮಾದರಿಯನ್ನು ಇಲ್ಲಿ ಕಾಣಬಹುದು. ತಾಯಿ ಮತ್ತು ಮಗುವಿನ ಪಾಲನೆಗಿರುವ ತೊಡರುಗಳನ್ನು ಪರಿಹರಿಸಿಕೊಳ್ಳುವತ್ತ ಕಥೆಯನ್ನು ಕೇಂದ್ರೀಕರಿಸಲಾಗಿದೆ.

ಮಲಯಾಳಂ, ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಕನ್ನಡ ಭಾಷಾ ಹಿನ್ನೆಲೆಯ ಇಲ್ಲಿನ ಪಾತ್ರಗಳು ಮುಖ್ಯವಾಗಿ ವ್ಯವಹಿಸುವುದು ‘ಇಂಗ್ಲಿಷ್‌’ ಮೂಲಕ. ಭಾವನೆಗಳ ಹಂಚಿಕೆಗೆ ಭಾಷೆ ಮುಖ್ಯವಲ್ಲ ಎಂಬ ಎಚ್ಚರಿಕೆಯನ್ನು ಇಂಗ್ಲಿಷ್ ಭಾರದಿರುವ ಮರಾಠಿ ಮಹಿಳೆಯ ಮೂಲಕ ಹೇಳಲು ಹೊರಟಿರುವುದನ್ನು ಗಮನಿಸಬಹುದು.

ಎಲೈಟ್‌ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಇಲ್ಲಿನ ಪಾತ್ರಗಳೊಳಗೆ, ಪ್ರಸವ ಪೂರ್ವ ತರಬೇತಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯನ್ನು ಒಳಗೊಳ್ಳುವ ಮೂಲಕ- ವರ್ಗ ಪ್ರಣೀತ ಚೌಕಟ್ಟನ್ನು ಮೀರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆದರೆ ಇದು ಸಾಂಕೇತಿಕವೆನಿಸುತ್ತದೆಯೇ ಹೊರತು, ಇಂತಹ ತರಬೇತಿಗಳೆಲ್ಲ ಎಲೈಟ್‌ ವರ್ಗವನ್ನೇ ಪ್ರತಿನಿಧಿಸುತ್ತವೆ ಎಂಬುದು ವಾಸ್ತವ. ಪ್ರಸವ ಪೂರ್ವದಲ್ಲಿ ಈ ರೀತಿಯ ಮುಂಜಾಗ್ರತೆ ಎಲ್ಲ ಹಿನ್ನೆಲೆಯ ಮಹಿಳೆಯರಿಗೆ ಅಗತ್ಯ ಎಂಬುದನ್ನು ತಳ್ಳಿಹಾಕಲಾಗದು.

ಸರ್‌ ನೇಮ್‌ನಿಂದ ಗುರುತಿಸಿಕೊಳ್ಳಬೇಕು ಎಂಬ ಸಂಪ್ರದಾಯವಾದಿ ಕುಟುಂಬದ ಹಿನ್ನೆಲೆಯ ಅತ್ತೆಯ ಪಾತ್ರವೊಂದನ್ನು ಇಲ್ಲಿ ಬರುತ್ತದೆ. ತನ್ನ ಸೊಸೆ ಗಂಡನ ಹೆಸರಿನಿಂದ ಗುರುತಿಸಿಕೊಳ್ಳದಿದ್ದರೆ ಮಹಾಪರಾಧ ಎಂಬಂತೆ ಈ ಪಾತ್ರ ವರ್ತಿಸುತ್ತದೆ. ಹೆಣ್ಣಿನ ಭಾವನೆಗಳು ಮತ್ತು ತಾಯ್ತನದ ಕುರಿತು ಗಂಡಿನಲ್ಲಿ ತಿಳಿವಳಿಕೆಯ ಕೊರತೆ ಇದೆ ಎಂಬುದನ್ನು ಮನಗಾಣಿಸುವ ಪ್ರಯತ್ನವಾಗಿ ಸಂಪ್ರದಾಯವಾದಿ ಕುಟುಂಬದ ಮಹಿಳೆಯ ಗಂಡನನ್ನು ಪುರುಷಾಧಿಪತ್ಯ ವ್ಯವಸ್ಥೆಯ ಪ್ರತಿನಿಧಿಯಂತೆ ಚಿತ್ರಿಸಲಾಗಿದೆ. ಉಳಿದೆಲ್ಲ ಗಂಡಸರ ಪಾತ್ರಗಳಿಗಿಂತ ಪ್ರತಿಗಾಮಿಯಂತೆ ತೋರುವ ಈ ಪಾತ್ರವು ಮನಃಪರಿವರ್ತನೆಯಾಗಲು ಹೆಚ್ಚು ಸಮಯ ಬೇಡುವುದಿಲ್ಲ. ಸಂಪ್ರದಾಯನಿಷ್ಠ ಅತ್ತೆಯ ಪಾತ್ರವೂ ಹೀಗೆಯೇ ಬದಲಾಗುತ್ತದೆ. ಪಾತ್ರಗಳ ಮಾನಸಿಕತೆಯ ಬದಲಾವಣೆಯಲ್ಲಿ ಧಾವಂತ ಎದ್ದು ಕಾಣುತ್ತದೆ.

ಇದನ್ನೂ ಓದಿರಿ: ಮುಂದಿನ ಸಲ ಗಂಭೀರವಾಗಿ ಸಂಶೋಧನೆ ಮಾಡಿ: ಅಗ್ನಿಹೋತ್ರಿಗೆ ಅನುರಾಗ್ ಕಶ್ಯಪ್‌ ಸಲಹೆ

ವಿಚ್ಛೇದನಾ ಪಡೆಯುತ್ತಿರುವ ಗರ್ಭಿಣಿಯನ್ನು ‘ಮುಸ್ಲಿಂ’ ಸಮುದಾಯದ ಭಾಗವಾಗಿ ಚಿತ್ರಿಸಿರುವುದು ಕತೆಯ ಆಶಯಕ್ಕೆ ಚ್ಯುತಿ ಬರುವಂತಿದೆ. ಪುರುಷಾಧಿಪತ್ಯ ಹಾಗೂ ಹೆಣ್ಣನ್ನು ಭೋಗಿಸುವವರು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ಮತ್ತು ಪಿತೂರಿ ವ್ಯವಸ್ಥೆಯು ಅಲ್ಪಸಂಖ್ಯಾತ ಸಮುದಾಯವನ್ನು ಮಾತ್ರ ಕಟಕಟೆಯಲ್ಲಿ ನಿಲ್ಲುಸುತ್ತದೆ. “ಹೆಣ್ಣನ್ನು ಭೋಗಿಸಿ, ವಂಚಿಸುವ ಧರ್ಮಾಂಧರಿವರು” ಎಂಬಂತೆ ಕತೆಗಳನ್ನು ಹಬ್ಬಿಸಿ, ದ್ವೇಷವನ್ನು ಹರಡುವ ಮೂಲಭೂತವಾದಿ ವ್ಯವಸ್ಥೆಯನ್ನು ಇಂದು ಕಾಣುತ್ತಿದ್ದೇವೆ. ಹೀಗಾಗಿ ಸಿಂಗಲ್ ಪೇರೆಂಟ್‌ ಗರ್ಭಿಣಿಯನ್ನು ಮುಸ್ಲಿಂ ಎಂದು ಬಿಂಬಿಸುವುದು- ಸದ್ಯದ ರಾಜಕೀಯ ಪಿತೂರಿಗೆ ಇಂಬು ನೀಡಿದಂತಾಗುತ್ತದೆ. ಹೀಗಾಗಿ ಈ ಪಾತ್ರದ ಸುತ್ತ ಬಹುಸಂಖ್ಯಾತ ರಾಜಕೀಯ ಪ್ರಣೀತ ಪ್ರಶ್ನೆ ಏಳದಂತೆ ಅಂಜಲಿಯವರು ಎಚ್ಚರ ವಹಿಸಬೇಕಿತ್ತು. ಸಿಂಗಲ್‌ ಪೇರೆಂಟ್‌‌- ಬಹುಸಂಖ್ಯಾತ ಹಿನ್ನೆಲೆಯವಳೆನ್ನುವುದಕ್ಕಿಂತ ಅಲ್ಪಸಂಖ್ಯಾತಳಾಗಿ ಚಿತ್ರಿತವಾದರೆ ಅಲ್ಲಿ ಹುಟ್ಟುವ ರಾಜಕೀಯ ತರಂಗಳು ಬೇರೆಬೇರೆಯಾಗುತ್ತವೆ. ಈ ಚರ್ಚೆಯು ಎರಡಗಲಿನ ಕತ್ತಿಯೆಂಬುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.

ನವಿರಾದ ಹಾಗೂ ಸುಖ್ಯಾಂತದಲ್ಲಿ ಮುಗಿಯುವ ‘ವಂಡರ್‌ ವುಮೆನ್‌’- ತಾಯ್ತನದ ಸುತ್ತ ಮೂಡಿಬಂದಿರುವ ವಿಭಿನ್ನ ಪ್ರಯತ್ನ. ತಾರಾಗಣದಲ್ಲಿ ನದಿಯಾ ಮೊಯ್ದು, ನಿತ್ಯಾ ಮೆನೆನ್, ಪಾರ್ವತಿ ತಿರುವೋತು, ಪದ್ಮಪ್ರಿಯಾ, ಸಯನೋರಾ ಫಿಲಿಪ್, ಅರ್ಚನಾ ಪದ್ಮಿನಿ ಮತ್ತು ಅಮೃತಾ ಸುಭಾಷ್ ಮೊದಲಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಾಲ್ಕೈದು ಲೊಕೇಷನ್‌ಗಳಲ್ಲಿಯೇ ಕತೆ ಮುಗಿದು ಹೋದರೂ ಮನೇಶ್ ಮಾಧವನ್ ಅವರ ಛಾಯಾಗ್ರಹಣ ಮೆಚ್ಚುವಂತಿದೆ. ಗೋವಿಂದ ವಸಂತ ಅವರ ಸಂಗೀತ ಭಾವುಕ ದೃಶ್ಯಗಳನ್ನು ತೀವ್ರವಾಗಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...