Homeಮುಖಪುಟಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

ಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

- Advertisement -
- Advertisement -

ಅಮರ್ತ್ಯ ಸೇನ್ ಅವರು ಕಾಲಕಾಲಕ್ಕೆ ಆಡಳಿತಾರೂಢ ಎನ್‌ಡಿಎ ಸರಕಾರವನ್ನು ಸಕಾರಣವಾಗಿ ಟೀಕಿಸುತ್ತಾ ಬಂದಿದ್ದಾರೆ ಮತ್ತು ಅದು ಭಾರತದಲ್ಲಿಯ ಬಲಪಂಥೀಯರು ಅವರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಟ್ರಾಲ್ ಮಾಡುತ್ತಲೇ ಇರುವುದಕ್ಕೆ ಕಾರಣವಾಗಿದೆ. ಐಟಿ ಸೆಲ್‌ಗಳಿಂದ ಸೃಷ್ಟಿಸಲಾದ ಹ್ಯಾಷ್‌ಟ್ಯಾಗ್‌ಗಳಿಂದ, ಒಪ್‌ಎಡ್‌ಗಳಿಂದ(ಹೊರಗಿನ ಲೇಖಕರು ಬರೆಯುವ ಸಂಪಾದಕೀಯ ಬರಹಗಳು), ಟಿವಿ ವಾಹಿನಿಗಳಲ್ಲಿ ಮಾಡುವ ಚರ್ಚೆಗಳಿಂದ ಮಾಡಲಾಗುವ ಈ ಮಸಿ ಎರಚುವ ಪ್ರಚಾರವು ಎಂದಿಗೂ ಸೇನ್‌ರಂತಹ ತತ್ವಶಾಸ್ತ್ರದ- ಆರ್ಥಿಕತೆಯ ದೈತ್ಯಪ್ರತಿಭೆಯ ಪರಿಕಲ್ಪನೆಗಳ ಮೇಲೆ ಚರ್ಚಿಸುವುದಿಲ್ಲ. ಈ ಪರಿಕಲ್ಪನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ, ಅದರ ಬದಲಿಗೆ ಯಾವಾಗಲೂ ಅವರ ಚಾರಿತ್ರ್ಯ, ರಾಷ್ಟ್ರೀಯತೆ ಮತ್ತು ಅವರ ವೈಯಕ್ತಿಕ, ಧಾರ್ಮಿಕ ನಂಬಿಕೆಗಳನ್ನು ಮುಂದಿಟ್ಟುಕೊಂಡು ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇತ್ತೀಚಿಗೆ ಅವರು ಪ್ರಸಕ್ತ ನಡೆಯುತ್ತಿರುವ ರೈತರ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ, ಅದರೊಂದಿಗೆ ಈ ಕೃಷಿ ಕಾನೂನುಗಳನ್ನು ಪರಾಮರ್ಶಿಸಬೇಕು ಎಂತಲೂ ಸೂಚಿಸಿದ್ದರು; ಈ ಕಾರಣಕ್ಕಾಗಿ ಅವರ ಮೇಲೆ ಮತ್ತೊಮ್ಮೆ ದಾಳಿ ಶುರುವಾಗಿದೆ. ಕೇವಲ ಸರಕಾರಿ ನೀತಿಗಳನ್ನು ವಿಮರ್ಶಿಸಿದ್ದಕ್ಕಾಗಿ, ನಮ್ಮ ಕಾಲದ ಅತ್ಯಂತ ಪ್ರಭಾವಿ ಅರ್ಥಶಾಸ್ತ್ರಜ್ಞರ ಮೇಲೆ ಆಗುತ್ತಿರುವ ದಾಳಿಯನ್ನು ನೋಡಿದಾಗ, ಈ ಹಿಂದು ಬಹುಸಂಖ್ಯಾತವಾದಿ ಸರಕಾರದ ಅಡಿಯಲ್ಲಿಯ ಭಾರತೀಯ ಪ್ರಜಾಪ್ರಭುತ್ವದ ಬಿರುಕುಗಳನ್ನು ಮತ್ತೊಮ್ಮೆ ಎತ್ತಿತೋರಿಸಿದೆ.

ಸದ್ಯಕ್ಕೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ 1998ರಲ್ಲಿ ಆರ್ಥಿಕ ವಿಜ್ಞಾನದ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು ಹಾಗೂ 1999ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನದಿಂದ ಪುರಸ್ಕರಿಸಲಾಗಿತ್ತು. ಸಮಾಜಕಲ್ಯಾಣ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ, ನೈತಿಕ ತತ್ವಶಾಸ್ತ್ರ ಮತ್ತು ಗಣಿತದ ತರ್ಕದಲ್ಲಿ ಅವರು ಮಾಡಿದ ಸಾಧನೆ ಅಗಾಧವಾದದ್ದು. ಈ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಅವರನ್ನು ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವಂತೆ ಮಾಡಿದೆ. ಅವರ ಆರು ದಶಕಗಳ ದೀರ್ಘ ಕಾರ್ಯಾವಧಿಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಬಹುಚರ್ಚಿತ ಪುಸ್ತಕಗಳನ್ನು ಹೊರತಂದಿದ್ದಾರೆ ಹಾಗೂ ಬಹುತೇಕ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಅವರು ಬರೆದಿದ್ದಾರೆ. ಅವರ ಪರಿಕಲ್ಪನೆಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ಎಲ್ಲೆಡೆ ಉಲ್ಲೇಖಿಸಲಾಗಿದೆ ಹಾಗೂ ಅಭಿವೃದ್ಧಿ ಪಡಿಸಲಾಗಿದೆ.

ಸೇನ್ ಅವರನ್ನು ಕೇವಲ ಅವರ ಅಕ್ಯಾಡೆಮಿಕ್ ಸಾಧನೆಗಾಗಿ ಗುರುತಿಸಲಾಗುವುದಿಲ್ಲ. ಅದರೊಂದಿಗೆ ಉದಾರವಾದಿ ಆರ್ಥಿಕ ಸಿದ್ಧಾಂತದ ವ್ಯಾಪ್ತಿಯಲ್ಲಿಯೇ ಮಾನವನ ಸ್ವಾತಂತ್ರ ಮತ್ತು ಸಾಮರ್ಥ್ಯಗಳ ಮೇಲೆ ಒತ್ತು ನೀಡಿದ್ದಕ್ಕಾಗಿಯೂ ಅವರನ್ನು ಗುರುತಿಸಲಾಗುತ್ತದೆ. ಅವರು ವೈಯಕ್ತಿಕ ಆಯ್ಕೆ ಮತ್ತು ನಿರ್ಣಯ ಮಾಡುವುದರ ಮೇಲೆ ನೀಡಿದ ಒತ್ತಿನ ಕಾರಣಕ್ಕಾಗಿ ಉಪಯೋಗಸಿಂಧು ಅಥವಾ ಉಪಯೋಗದ ದೃಷ್ಟಿಯಿಂದ ಮಾತ್ರ ನೋಡುವ(ಯುಟಿಲಿಟೇರಿಯನ್) ಚೌಕಟ್ಟನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ಟೀಕಿಸಿದರು ಹಾಗೂ ಈ ತಿಳಿವಳಿಕೆಯನ್ನು ಮೀರಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಯಾವ್ಯಾವ ’ಪರಿಸ್ಥಿತಿಗಳು’ ಜನರು ನಿರ್ದಿಷ್ಟ ಆಯ್ಕೆ ಮಾಡುವಂತೆ ಮಾಡುತ್ತವೆ ಎಂಬುದು ಸೇನ್ ಅವರ ಅಧ್ಯಯನದ ತಿರುಳು ಎನ್ನಬಹುದು. ಅವರು ಸಾಮಾಜಿಕ ಮೌಲ್ಯಮಾಪನದ ಪ್ರಸಿದ್ಧ ಚೌಕಟ್ಟನ್ನು ನೀಡಿದರು ಹಾಗೂ ’ಸಾಮರ್ಥ್ಯದ ವಿಧಾನ(ಅಪ್ರೋಚ್)’ನ ಸ್ವರೂಪದಲ್ಲಿ ವೈಯಕ್ತಿಕ ಯೋಗಕ್ಷೇಮದ ಮೌಲ್ಯಮಾಪನವನ್ನು ನೀಡಿದ್ದಾರೆ.

ಆದ್ಯತೆಗಳನ್ನು ಪೂರೈಸುವ ಉಪಯೋಗಸಿಂಧು (ಯುಟಿಲಿಟೇರಿಯನ್) ನೋಟಕ್ಕೆ ವಿರುದ್ಧವಾಗಿರುವ ಮತ್ತು ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ಇರಾದೆ ಇರುವ ಇವರ ವಿಧಾನವು ಮಾನವನ ಸ್ವಾತಂತ್ರ್ಯಗಳ ದೃಷ್ಟಿಯಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯನ್ನು ನೋಡುತ್ತದೆ. ಇಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಸಕಾರಾತ್ಮಕ ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ ಅಂದರೆ, ನಿಜವಾಗಿಯೂ ಏನನ್ನಾದರೂ ’ಮಾಡುವ’ ಮತ್ತು ಏನಾದರೂ ’ಆಗುವ’ ಸ್ವಾತಂತ್ರ್ಯ. ಸೇನ್ ಹೇಳುವುದೇನೆಂದರೆ, ಇಂತಹ ಸ್ವಾತಂತ್ರ್ಯವು ಆಯಾ ವ್ಯಕ್ತಿಗೆ ಲಭ್ಯವಿರುವ ಅವಕಾಶಗಳ ಮೂಲಕ ಪೂರ್ಣಗೊಳಿಸಬಹುದು ಎಂದು. ಶಿಕ್ಷಣ, ಆಹಾರ, ನೈರ್ಮಲ್ಯ, ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ತೊಡಗಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಂತಹವುಗಳಿಗೆ ಇರುವ ಪ್ರವೇಶಾವಕಾಶದಂತಹ ಸಂಗತಿಗಳು ಒಬ್ಬ ವ್ಯಕ್ತಿಯು ಸಾಮರ್ಥ್ಯವನ್ನು ರೂಪಿಸುತ್ತವೆ ಹಾಗೂ ಆ ವ್ಯಕ್ತಿಗೆ ಇರುವ ಆಯ್ಕೆಗಳನ್ನು ನಿರ್ಧರಿಸುತ್ತವೆ.

ಈ ಚೌಕಟ್ಟಿನಲ್ಲಿ ವೈಯಕ್ತಿಕ ಸ್ವಾತಂತ್ರವು ಒಬ್ಬ ವ್ಯಕ್ತಿಗೆ ಮೇಲ್ನೋಟದಲ್ಲಿ ಆ ವ್ಯಕ್ತಿಯು ಏನು ಬೇಕಾದರೂ ಮಾಡಲು ಅನುವು ಮಾಡಿಕೊಡುವುದಿಲ್ಲ ಅದರ ಬದಲಿಗೆ, ಅವರಿಗೆ ಲಭ್ಯವಿರುವ ಪರಿಸ್ಥಿತಿಗಳು, ಸಾಧ್ಯತೆಗಳು, ಜೀವನಾವಕಾಶಗಳು, ಇವೆಲ್ಲವುಗಳು ಕೂಡಿ, ಆ ಒಬ್ಬ ವ್ಯಕ್ತಿ ನಿಜವಾಗಿಯೂ ಏನು ಮಾಡಬಹುದು ಅಥವಾ ಏನು ಆಗಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಸೇನ್ ಅವರ ನ್ಯಾಯದ ಪರಿಕಲ್ಪನೆ ಇರುವುದು ಜನರ ಸಾಮರ್ಥ್ಯಗಳ ಸಮುಚ್ಛಯವನ್ನು ವಿಸ್ತರಿಸುವಲ್ಲಿ; ಹಾಗಾಗಬೇಕಾದರೆ, ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯಗಳು, ಸಾಮಾಜಿಕ-ರಾಜಕೀಯ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮುಂತಾದವುಗಳ ಮೇಲೆ ಸಮಾಜವು ಕೆಲಸ ಮಾಡಬೇಕಾಗುತ್ತದೆ. ಈ ಅಂಶಗಳೇ ಸೇನ್ ಅವರ ಪರಿಕಲ್ಪನೆಗಳನ್ನು ಅತ್ಯಂತ ಪ್ರಸ್ತುತಗೊಳಿಸುವುದು.

ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಇಂತಹ ತಿಳಿವಳಿಕೆಯು ಜನರಿಗೆ ಜೀವನಾಧಾರದ ಮೂಲಗಳನ್ನು ನೀಡಲು ಮತ್ತು ಅವುಗಳನ್ನು ವಿಸ್ತರಿಸಲು ಬೇಕಾದ ಕೆಲಸಗಳನ್ನು ಮಾಡಲು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿಯು ಜಿಡಿಪಿ ಆಧಾರಿತ ದೃಷ್ಟಿಕೋನದಿಂದ ಮುಂದೆ ಹೋಗಿ ಮಾನವ ಸಾಮರ್ಥ್ಯಗಳ ವಿಸ್ತರಣೆಯನ್ನು ಒಳಗೊಳ್ಳಬೇಕು ಎಂಬ ಅಭಿವೃದ್ಧಿಯ ಪರಿಕಲ್ಪನೆಯು ಅತ್ಯಂತ ಪ್ರಭಾವಕಾರಿಯಾಗಿದೆ. ಈ ಪರಿಕಲ್ಪನೆಯು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಚೌಕಟ್ಟು, ನೀತಿಗಳು ಮತ್ತು ಅಭಿವೃದ್ಧಿಯ ಗುರಿಗಳ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದೆ, ಇದರಿಂದಲೇ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ವರದಿಗಳು ಶುರುವಾದವು. ಸ್ವಾತಂತ್ರ್ಯ, ಸಾಧ್ಯತೆ, ನ್ಯಾಯ ಮತ್ತು ಪ್ರಜಾಪ್ರಭುತ್ವಗಳು ಸೇನ್ ಅವರ ಅಧ್ಯಯನದ ಮೂಲ ಸಾರಗಳಾಗಿವೆ ಹಾಗೂ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಗೆ ಅಪಾರ ಮಹತ್ವವನ್ನು ಒದಗಿಸುತ್ತವೆ; ಕೇಯ್ನೇಷಿಯನ್ ಕಲ್ಯಾಣ ಮಾದರಿ ಮತ್ತು ನವಉದಾರೀಕರಣ ನೀತಿಗಳನ್ನು ಅಳವಡಿಸಿಕೊಳ್ಳ್ಳುವುದನ್ನು ಸಕ್ರಿಯವಾಗಿ ತೊರೆಯಬೇಕೆಂದು ಪ್ರತಿಪಾದಿಸುತ್ತವೆ.

ಭಾರತೀಯ ಪ್ರಜಾಪ್ರಭುತ್ವವನ್ನು ಪರಾಮರ್ಶಿಸಲು ಸೇನ್ ಅವರ ಪರಿಕಲ್ಪನೆಗಳು ಅತ್ಯುತ್ತಮ ಚೌಕಟ್ಟನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಹಿಂದೂ ಬಹುಸಂಖ್ಯಾವಾದದ ಸಮಯದಲ್ಲಿ ಇದು ಮುಖ್ಯವಾಗಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಭಾರತೀಯ ಪ್ರಜಾಪ್ರಭುತ್ವದ ಭರವಸೆಯು ಒಂದು ವೇಳೆ ಪ್ರಜೆಗಳಿಗೆ ಮೂಲ ಸಂಪನ್ಮೂಲಗಳಿಗೆ ಅವಕಾಶ ಮತ್ತು ಅವುಗಳನ್ನು ಬಳಸುವ ಸ್ವಾತಂತ್ರ್ಯ ಇಲ್ಲದೇ ಹೋದಲ್ಲಿ ಆ ಭರವಸೆ ಪೊಳ್ಳು ಭರವಸೆಯಾಗುತ್ತದೆ. ಉದಾಹರಣೆಗೆ, ಒಂದು ಮುಸ್ಲಿಮ್ ಕುಟುಂಬವು ಆರ್ಥಿಕ ಸ್ಥಿರತೆಯನ್ನು ಹೊಂದಬೇಕಾದರೆ, ಒಂದು ಸುಭದ್ರ ಉದ್ಯೋಗವಿದ್ದರೆ ಸಾಲದು, ಅದರೊಂದಿಗೆ ಆ ಉದ್ಯೋಗದಲ್ಲಿ ಮುಂದುವರೆಯಲು ಸಾಮಾಜಿಕ ಸುರಕ್ಷತೆ ಮತ್ತು ತಾರತಮ್ಯವಿಲ್ಲದ ವಾತಾವರಣವೂ ಬೇಕು.

ಇದೇ ಈ ಹೊಸ ಕೃಷಿ ನೀತಿಗಳಿಗೂ ಅನ್ವಯವಾಗುತ್ತದೆ, ಹಾಗೂ ಸೇನ್ ಸ್ವಾಭಾವಿಕವಾಗಿಯೇ ಕಾನೂನುಗಳ ವಿಮರ್ಶೆ ಮಾಡಿದರು ಹಾಗೂ ಅದಕ್ಕಾಗಿ ಅವರ ಮೇಲೆ ದಾಳಿ ಮಾಡಲಾಯಿತು. ಸರಕಾರವು ಪ್ರದರ್ಶಿಸುತ್ತಿರುವ ’ಆಯ್ಕೆ’ಯ ಭ್ರಮಾತ್ಮಕ ಭರವಸೆಗೆ ಒಂದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾದ ರೈತರು ಮತ್ತು ಕಾರ್ಪೊರೇಟ್‌ಗಳ ನಡುವೆ ಇರುವ ಅಸಮಾನ ಅಧಿಕಾರ ಮತ್ತು ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ ಯಾವುದೇ ಅರ್ಥ ಕಾಣಿಸುವುದಿಲ್ಲ. ಆದರೆ, ಸರಕಾರದಿಂದ ನಿಯೋಜಿಸಲಾದ ಟ್ರಾಲ್‌ಗಳಿಗೆ ಸೇನ್ ಹೇಳಿದ ಈ ಮಾತುಗಳು ತಿಳಿಯುವುದಿಲ್ಲ ಹಾಗೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಸೇನ್ ಬರೆದಿರುವ ವಿಮರ್ಶೆಗಳನ್ನು ಈ ಟ್ರಾಲ್‌ಗಳು ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗಿದೆ.

ಅಮರ್ತ್ಯ ಸೇನ್ ಅವರು ಬಂಡವಾಳಶಾಹಿ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿರುವ ಉದಾರವಾದಿ ಆರ್ಥಿಕಶಾಸ್ತ್ರಜ್ಞರಾಗಿದ್ದಾರೆ. ಕಲ್ಯಾಣ ನೀತಿಗಳನ್ನು ಪ್ರತಿಪಾದಿಸುತ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಸೇನ್ ಅವರನ್ನು ಖಂಡಿತವಾಗಿಯೂ ಟೀಕಿಸಬಹುದು. ಅವರು ಬಂಡವಾಳಶಾಹಿ ವ್ಯವಸ್ಥೆಯ ರ್‍ಯಾಡಿಕಲ್ ವಿಶ್ಲೇಷಣೆಯನ್ನು ನೀಡುವುದಿಲ್ಲ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಡಗಿರುವ ಬಿಕ್ಕಟ್ಟನ್ನೂ ನೋಡುವುದಿಲ್ಲ. ಅವರ ಪರಿಕಲ್ಪನೆಗಳಿಗೆ ನವಶಾಸ್ತ್ರೀಯ, ನವಉದಾರ ಹಾಗೂ ಮಾರ್ಕ್ಸಿಸ್ಟ್‌ರ ಆರ್ಥಿಕ ವಿಚಾರಧಾರೆಯನ್ನು ಹೊಂದಿರುವವರಿಂದ ಕಟು ಟೀಕೆಗಳು ವ್ಯಕ್ತವಾಗುತ್ತವೆ. ಹಾಗೂ ಸೇನ್ ಅವರು ಇಂತಹ ಟೀಕೆಗಳನ್ನು ಸ್ವಾಗತಿಸುತ್ತಾರೆ. ಆದರೆ, ಇತ್ತೀಚಿಗೆ ಮತ್ತೊಮ್ಮೆ ಕಾಣಿಸಿಕೊಂಡ ಬಲಪಂಥೀಯರ ದಾಳಿಗಳು, ಸೇನ್ ಅವರ ಪರಿಕಲ್ಪನೆಗಳನ್ನು ಆಧಾರವಾಗಿಸಿಕೊಂಡಿಲ್ಲ.

ಇದು ಕೇವಲ ಮಸಿ ಬಳಿಯುವ ಕೆಲಸವಾಗಿದೆ, ಅವರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಕರೆಯುವುದು, ಪಶ್ಚಿಮದ ಗುಲಾಮ ಎನ್ನುವುದು, ಹಿಂದೂ ದ್ವೇಷಿ ಎಂದು ಕರೆಯುವುದು ಮತ್ತು ಇನ್ನೂ ಕೀಳುಮಟ್ಟದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಮಾಡುವುದು ಎಲ್ಲವೂ ಮಸಿ ಬಳಿಯುವ ಪ್ರಯತ್ನವಷ್ಟೆ. ಸೇನ್ ಅವರು ನಮ್ಮ ಕಾಲದ ಅತ್ಯಂತ ಪ್ರಮುಖ ಅಕ್ಯಾಡೆಮಿಕ್ ಚಿಂತಕರಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರತ್ವದ ಬಗ್ಗೆ ವೈಭವವನ್ನು ತಂದವರು, ಅದನ್ನು ಬಲಪಂಥೀಯರು ತಮ್ಮ ರಾಜಕೀಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ, ಅದೂ ಅವರು ಪರಿಣಿತಿಯನ್ನು ಹೊಂದಿದ ವಿಷಯದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಮಾಡುತ್ತಿರುವ ದಾಳಿಗಳನ್ನು ವ್ಯಾಪಕವಾಗಿ ಖಂಡಿಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಶಿವ

ಶಿವ
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಮಾಜಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳು ಬಗ್ಗೆ ವಿಶಿಷ್ಟ ಒಳನೋಟಗಳೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಾರೆ.


ಇದನ್ನೂ ಓದಿ: ನೇತಾಜಿ, ಠಾಗೋರರ ಉತ್ತರಾಧಿಕಾರಿಗಳಾಗಲು ಕೋಮುವಾದ ತಿರಸ್ಕರಿಸಿ: ಬಂಗಾಳಿಗಳಿಗೆ ಅಮರ್ತ್ಯ ಸೇನ್ ಕರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...