Homeಮುಖಪುಟಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

ಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

- Advertisement -
- Advertisement -

ಅಮರ್ತ್ಯ ಸೇನ್ ಅವರು ಕಾಲಕಾಲಕ್ಕೆ ಆಡಳಿತಾರೂಢ ಎನ್‌ಡಿಎ ಸರಕಾರವನ್ನು ಸಕಾರಣವಾಗಿ ಟೀಕಿಸುತ್ತಾ ಬಂದಿದ್ದಾರೆ ಮತ್ತು ಅದು ಭಾರತದಲ್ಲಿಯ ಬಲಪಂಥೀಯರು ಅವರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಟ್ರಾಲ್ ಮಾಡುತ್ತಲೇ ಇರುವುದಕ್ಕೆ ಕಾರಣವಾಗಿದೆ. ಐಟಿ ಸೆಲ್‌ಗಳಿಂದ ಸೃಷ್ಟಿಸಲಾದ ಹ್ಯಾಷ್‌ಟ್ಯಾಗ್‌ಗಳಿಂದ, ಒಪ್‌ಎಡ್‌ಗಳಿಂದ(ಹೊರಗಿನ ಲೇಖಕರು ಬರೆಯುವ ಸಂಪಾದಕೀಯ ಬರಹಗಳು), ಟಿವಿ ವಾಹಿನಿಗಳಲ್ಲಿ ಮಾಡುವ ಚರ್ಚೆಗಳಿಂದ ಮಾಡಲಾಗುವ ಈ ಮಸಿ ಎರಚುವ ಪ್ರಚಾರವು ಎಂದಿಗೂ ಸೇನ್‌ರಂತಹ ತತ್ವಶಾಸ್ತ್ರದ- ಆರ್ಥಿಕತೆಯ ದೈತ್ಯಪ್ರತಿಭೆಯ ಪರಿಕಲ್ಪನೆಗಳ ಮೇಲೆ ಚರ್ಚಿಸುವುದಿಲ್ಲ. ಈ ಪರಿಕಲ್ಪನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ, ಅದರ ಬದಲಿಗೆ ಯಾವಾಗಲೂ ಅವರ ಚಾರಿತ್ರ್ಯ, ರಾಷ್ಟ್ರೀಯತೆ ಮತ್ತು ಅವರ ವೈಯಕ್ತಿಕ, ಧಾರ್ಮಿಕ ನಂಬಿಕೆಗಳನ್ನು ಮುಂದಿಟ್ಟುಕೊಂಡು ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇತ್ತೀಚಿಗೆ ಅವರು ಪ್ರಸಕ್ತ ನಡೆಯುತ್ತಿರುವ ರೈತರ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ, ಅದರೊಂದಿಗೆ ಈ ಕೃಷಿ ಕಾನೂನುಗಳನ್ನು ಪರಾಮರ್ಶಿಸಬೇಕು ಎಂತಲೂ ಸೂಚಿಸಿದ್ದರು; ಈ ಕಾರಣಕ್ಕಾಗಿ ಅವರ ಮೇಲೆ ಮತ್ತೊಮ್ಮೆ ದಾಳಿ ಶುರುವಾಗಿದೆ. ಕೇವಲ ಸರಕಾರಿ ನೀತಿಗಳನ್ನು ವಿಮರ್ಶಿಸಿದ್ದಕ್ಕಾಗಿ, ನಮ್ಮ ಕಾಲದ ಅತ್ಯಂತ ಪ್ರಭಾವಿ ಅರ್ಥಶಾಸ್ತ್ರಜ್ಞರ ಮೇಲೆ ಆಗುತ್ತಿರುವ ದಾಳಿಯನ್ನು ನೋಡಿದಾಗ, ಈ ಹಿಂದು ಬಹುಸಂಖ್ಯಾತವಾದಿ ಸರಕಾರದ ಅಡಿಯಲ್ಲಿಯ ಭಾರತೀಯ ಪ್ರಜಾಪ್ರಭುತ್ವದ ಬಿರುಕುಗಳನ್ನು ಮತ್ತೊಮ್ಮೆ ಎತ್ತಿತೋರಿಸಿದೆ.

ಸದ್ಯಕ್ಕೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ 1998ರಲ್ಲಿ ಆರ್ಥಿಕ ವಿಜ್ಞಾನದ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು ಹಾಗೂ 1999ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನದಿಂದ ಪುರಸ್ಕರಿಸಲಾಗಿತ್ತು. ಸಮಾಜಕಲ್ಯಾಣ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ, ನೈತಿಕ ತತ್ವಶಾಸ್ತ್ರ ಮತ್ತು ಗಣಿತದ ತರ್ಕದಲ್ಲಿ ಅವರು ಮಾಡಿದ ಸಾಧನೆ ಅಗಾಧವಾದದ್ದು. ಈ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಅವರನ್ನು ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವಂತೆ ಮಾಡಿದೆ. ಅವರ ಆರು ದಶಕಗಳ ದೀರ್ಘ ಕಾರ್ಯಾವಧಿಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಬಹುಚರ್ಚಿತ ಪುಸ್ತಕಗಳನ್ನು ಹೊರತಂದಿದ್ದಾರೆ ಹಾಗೂ ಬಹುತೇಕ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಅವರು ಬರೆದಿದ್ದಾರೆ. ಅವರ ಪರಿಕಲ್ಪನೆಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ಎಲ್ಲೆಡೆ ಉಲ್ಲೇಖಿಸಲಾಗಿದೆ ಹಾಗೂ ಅಭಿವೃದ್ಧಿ ಪಡಿಸಲಾಗಿದೆ.

ಸೇನ್ ಅವರನ್ನು ಕೇವಲ ಅವರ ಅಕ್ಯಾಡೆಮಿಕ್ ಸಾಧನೆಗಾಗಿ ಗುರುತಿಸಲಾಗುವುದಿಲ್ಲ. ಅದರೊಂದಿಗೆ ಉದಾರವಾದಿ ಆರ್ಥಿಕ ಸಿದ್ಧಾಂತದ ವ್ಯಾಪ್ತಿಯಲ್ಲಿಯೇ ಮಾನವನ ಸ್ವಾತಂತ್ರ ಮತ್ತು ಸಾಮರ್ಥ್ಯಗಳ ಮೇಲೆ ಒತ್ತು ನೀಡಿದ್ದಕ್ಕಾಗಿಯೂ ಅವರನ್ನು ಗುರುತಿಸಲಾಗುತ್ತದೆ. ಅವರು ವೈಯಕ್ತಿಕ ಆಯ್ಕೆ ಮತ್ತು ನಿರ್ಣಯ ಮಾಡುವುದರ ಮೇಲೆ ನೀಡಿದ ಒತ್ತಿನ ಕಾರಣಕ್ಕಾಗಿ ಉಪಯೋಗಸಿಂಧು ಅಥವಾ ಉಪಯೋಗದ ದೃಷ್ಟಿಯಿಂದ ಮಾತ್ರ ನೋಡುವ(ಯುಟಿಲಿಟೇರಿಯನ್) ಚೌಕಟ್ಟನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ಟೀಕಿಸಿದರು ಹಾಗೂ ಈ ತಿಳಿವಳಿಕೆಯನ್ನು ಮೀರಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಯಾವ್ಯಾವ ’ಪರಿಸ್ಥಿತಿಗಳು’ ಜನರು ನಿರ್ದಿಷ್ಟ ಆಯ್ಕೆ ಮಾಡುವಂತೆ ಮಾಡುತ್ತವೆ ಎಂಬುದು ಸೇನ್ ಅವರ ಅಧ್ಯಯನದ ತಿರುಳು ಎನ್ನಬಹುದು. ಅವರು ಸಾಮಾಜಿಕ ಮೌಲ್ಯಮಾಪನದ ಪ್ರಸಿದ್ಧ ಚೌಕಟ್ಟನ್ನು ನೀಡಿದರು ಹಾಗೂ ’ಸಾಮರ್ಥ್ಯದ ವಿಧಾನ(ಅಪ್ರೋಚ್)’ನ ಸ್ವರೂಪದಲ್ಲಿ ವೈಯಕ್ತಿಕ ಯೋಗಕ್ಷೇಮದ ಮೌಲ್ಯಮಾಪನವನ್ನು ನೀಡಿದ್ದಾರೆ.

ಆದ್ಯತೆಗಳನ್ನು ಪೂರೈಸುವ ಉಪಯೋಗಸಿಂಧು (ಯುಟಿಲಿಟೇರಿಯನ್) ನೋಟಕ್ಕೆ ವಿರುದ್ಧವಾಗಿರುವ ಮತ್ತು ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ಇರಾದೆ ಇರುವ ಇವರ ವಿಧಾನವು ಮಾನವನ ಸ್ವಾತಂತ್ರ್ಯಗಳ ದೃಷ್ಟಿಯಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯನ್ನು ನೋಡುತ್ತದೆ. ಇಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಸಕಾರಾತ್ಮಕ ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ ಅಂದರೆ, ನಿಜವಾಗಿಯೂ ಏನನ್ನಾದರೂ ’ಮಾಡುವ’ ಮತ್ತು ಏನಾದರೂ ’ಆಗುವ’ ಸ್ವಾತಂತ್ರ್ಯ. ಸೇನ್ ಹೇಳುವುದೇನೆಂದರೆ, ಇಂತಹ ಸ್ವಾತಂತ್ರ್ಯವು ಆಯಾ ವ್ಯಕ್ತಿಗೆ ಲಭ್ಯವಿರುವ ಅವಕಾಶಗಳ ಮೂಲಕ ಪೂರ್ಣಗೊಳಿಸಬಹುದು ಎಂದು. ಶಿಕ್ಷಣ, ಆಹಾರ, ನೈರ್ಮಲ್ಯ, ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ತೊಡಗಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಂತಹವುಗಳಿಗೆ ಇರುವ ಪ್ರವೇಶಾವಕಾಶದಂತಹ ಸಂಗತಿಗಳು ಒಬ್ಬ ವ್ಯಕ್ತಿಯು ಸಾಮರ್ಥ್ಯವನ್ನು ರೂಪಿಸುತ್ತವೆ ಹಾಗೂ ಆ ವ್ಯಕ್ತಿಗೆ ಇರುವ ಆಯ್ಕೆಗಳನ್ನು ನಿರ್ಧರಿಸುತ್ತವೆ.

ಈ ಚೌಕಟ್ಟಿನಲ್ಲಿ ವೈಯಕ್ತಿಕ ಸ್ವಾತಂತ್ರವು ಒಬ್ಬ ವ್ಯಕ್ತಿಗೆ ಮೇಲ್ನೋಟದಲ್ಲಿ ಆ ವ್ಯಕ್ತಿಯು ಏನು ಬೇಕಾದರೂ ಮಾಡಲು ಅನುವು ಮಾಡಿಕೊಡುವುದಿಲ್ಲ ಅದರ ಬದಲಿಗೆ, ಅವರಿಗೆ ಲಭ್ಯವಿರುವ ಪರಿಸ್ಥಿತಿಗಳು, ಸಾಧ್ಯತೆಗಳು, ಜೀವನಾವಕಾಶಗಳು, ಇವೆಲ್ಲವುಗಳು ಕೂಡಿ, ಆ ಒಬ್ಬ ವ್ಯಕ್ತಿ ನಿಜವಾಗಿಯೂ ಏನು ಮಾಡಬಹುದು ಅಥವಾ ಏನು ಆಗಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಸೇನ್ ಅವರ ನ್ಯಾಯದ ಪರಿಕಲ್ಪನೆ ಇರುವುದು ಜನರ ಸಾಮರ್ಥ್ಯಗಳ ಸಮುಚ್ಛಯವನ್ನು ವಿಸ್ತರಿಸುವಲ್ಲಿ; ಹಾಗಾಗಬೇಕಾದರೆ, ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯಗಳು, ಸಾಮಾಜಿಕ-ರಾಜಕೀಯ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮುಂತಾದವುಗಳ ಮೇಲೆ ಸಮಾಜವು ಕೆಲಸ ಮಾಡಬೇಕಾಗುತ್ತದೆ. ಈ ಅಂಶಗಳೇ ಸೇನ್ ಅವರ ಪರಿಕಲ್ಪನೆಗಳನ್ನು ಅತ್ಯಂತ ಪ್ರಸ್ತುತಗೊಳಿಸುವುದು.

ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಇಂತಹ ತಿಳಿವಳಿಕೆಯು ಜನರಿಗೆ ಜೀವನಾಧಾರದ ಮೂಲಗಳನ್ನು ನೀಡಲು ಮತ್ತು ಅವುಗಳನ್ನು ವಿಸ್ತರಿಸಲು ಬೇಕಾದ ಕೆಲಸಗಳನ್ನು ಮಾಡಲು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿಯು ಜಿಡಿಪಿ ಆಧಾರಿತ ದೃಷ್ಟಿಕೋನದಿಂದ ಮುಂದೆ ಹೋಗಿ ಮಾನವ ಸಾಮರ್ಥ್ಯಗಳ ವಿಸ್ತರಣೆಯನ್ನು ಒಳಗೊಳ್ಳಬೇಕು ಎಂಬ ಅಭಿವೃದ್ಧಿಯ ಪರಿಕಲ್ಪನೆಯು ಅತ್ಯಂತ ಪ್ರಭಾವಕಾರಿಯಾಗಿದೆ. ಈ ಪರಿಕಲ್ಪನೆಯು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಚೌಕಟ್ಟು, ನೀತಿಗಳು ಮತ್ತು ಅಭಿವೃದ್ಧಿಯ ಗುರಿಗಳ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದೆ, ಇದರಿಂದಲೇ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ವರದಿಗಳು ಶುರುವಾದವು. ಸ್ವಾತಂತ್ರ್ಯ, ಸಾಧ್ಯತೆ, ನ್ಯಾಯ ಮತ್ತು ಪ್ರಜಾಪ್ರಭುತ್ವಗಳು ಸೇನ್ ಅವರ ಅಧ್ಯಯನದ ಮೂಲ ಸಾರಗಳಾಗಿವೆ ಹಾಗೂ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಗೆ ಅಪಾರ ಮಹತ್ವವನ್ನು ಒದಗಿಸುತ್ತವೆ; ಕೇಯ್ನೇಷಿಯನ್ ಕಲ್ಯಾಣ ಮಾದರಿ ಮತ್ತು ನವಉದಾರೀಕರಣ ನೀತಿಗಳನ್ನು ಅಳವಡಿಸಿಕೊಳ್ಳ್ಳುವುದನ್ನು ಸಕ್ರಿಯವಾಗಿ ತೊರೆಯಬೇಕೆಂದು ಪ್ರತಿಪಾದಿಸುತ್ತವೆ.

ಭಾರತೀಯ ಪ್ರಜಾಪ್ರಭುತ್ವವನ್ನು ಪರಾಮರ್ಶಿಸಲು ಸೇನ್ ಅವರ ಪರಿಕಲ್ಪನೆಗಳು ಅತ್ಯುತ್ತಮ ಚೌಕಟ್ಟನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಹಿಂದೂ ಬಹುಸಂಖ್ಯಾವಾದದ ಸಮಯದಲ್ಲಿ ಇದು ಮುಖ್ಯವಾಗಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಭಾರತೀಯ ಪ್ರಜಾಪ್ರಭುತ್ವದ ಭರವಸೆಯು ಒಂದು ವೇಳೆ ಪ್ರಜೆಗಳಿಗೆ ಮೂಲ ಸಂಪನ್ಮೂಲಗಳಿಗೆ ಅವಕಾಶ ಮತ್ತು ಅವುಗಳನ್ನು ಬಳಸುವ ಸ್ವಾತಂತ್ರ್ಯ ಇಲ್ಲದೇ ಹೋದಲ್ಲಿ ಆ ಭರವಸೆ ಪೊಳ್ಳು ಭರವಸೆಯಾಗುತ್ತದೆ. ಉದಾಹರಣೆಗೆ, ಒಂದು ಮುಸ್ಲಿಮ್ ಕುಟುಂಬವು ಆರ್ಥಿಕ ಸ್ಥಿರತೆಯನ್ನು ಹೊಂದಬೇಕಾದರೆ, ಒಂದು ಸುಭದ್ರ ಉದ್ಯೋಗವಿದ್ದರೆ ಸಾಲದು, ಅದರೊಂದಿಗೆ ಆ ಉದ್ಯೋಗದಲ್ಲಿ ಮುಂದುವರೆಯಲು ಸಾಮಾಜಿಕ ಸುರಕ್ಷತೆ ಮತ್ತು ತಾರತಮ್ಯವಿಲ್ಲದ ವಾತಾವರಣವೂ ಬೇಕು.

ಇದೇ ಈ ಹೊಸ ಕೃಷಿ ನೀತಿಗಳಿಗೂ ಅನ್ವಯವಾಗುತ್ತದೆ, ಹಾಗೂ ಸೇನ್ ಸ್ವಾಭಾವಿಕವಾಗಿಯೇ ಕಾನೂನುಗಳ ವಿಮರ್ಶೆ ಮಾಡಿದರು ಹಾಗೂ ಅದಕ್ಕಾಗಿ ಅವರ ಮೇಲೆ ದಾಳಿ ಮಾಡಲಾಯಿತು. ಸರಕಾರವು ಪ್ರದರ್ಶಿಸುತ್ತಿರುವ ’ಆಯ್ಕೆ’ಯ ಭ್ರಮಾತ್ಮಕ ಭರವಸೆಗೆ ಒಂದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾದ ರೈತರು ಮತ್ತು ಕಾರ್ಪೊರೇಟ್‌ಗಳ ನಡುವೆ ಇರುವ ಅಸಮಾನ ಅಧಿಕಾರ ಮತ್ತು ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ ಯಾವುದೇ ಅರ್ಥ ಕಾಣಿಸುವುದಿಲ್ಲ. ಆದರೆ, ಸರಕಾರದಿಂದ ನಿಯೋಜಿಸಲಾದ ಟ್ರಾಲ್‌ಗಳಿಗೆ ಸೇನ್ ಹೇಳಿದ ಈ ಮಾತುಗಳು ತಿಳಿಯುವುದಿಲ್ಲ ಹಾಗೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಸೇನ್ ಬರೆದಿರುವ ವಿಮರ್ಶೆಗಳನ್ನು ಈ ಟ್ರಾಲ್‌ಗಳು ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗಿದೆ.

ಅಮರ್ತ್ಯ ಸೇನ್ ಅವರು ಬಂಡವಾಳಶಾಹಿ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿರುವ ಉದಾರವಾದಿ ಆರ್ಥಿಕಶಾಸ್ತ್ರಜ್ಞರಾಗಿದ್ದಾರೆ. ಕಲ್ಯಾಣ ನೀತಿಗಳನ್ನು ಪ್ರತಿಪಾದಿಸುತ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಸೇನ್ ಅವರನ್ನು ಖಂಡಿತವಾಗಿಯೂ ಟೀಕಿಸಬಹುದು. ಅವರು ಬಂಡವಾಳಶಾಹಿ ವ್ಯವಸ್ಥೆಯ ರ್‍ಯಾಡಿಕಲ್ ವಿಶ್ಲೇಷಣೆಯನ್ನು ನೀಡುವುದಿಲ್ಲ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಡಗಿರುವ ಬಿಕ್ಕಟ್ಟನ್ನೂ ನೋಡುವುದಿಲ್ಲ. ಅವರ ಪರಿಕಲ್ಪನೆಗಳಿಗೆ ನವಶಾಸ್ತ್ರೀಯ, ನವಉದಾರ ಹಾಗೂ ಮಾರ್ಕ್ಸಿಸ್ಟ್‌ರ ಆರ್ಥಿಕ ವಿಚಾರಧಾರೆಯನ್ನು ಹೊಂದಿರುವವರಿಂದ ಕಟು ಟೀಕೆಗಳು ವ್ಯಕ್ತವಾಗುತ್ತವೆ. ಹಾಗೂ ಸೇನ್ ಅವರು ಇಂತಹ ಟೀಕೆಗಳನ್ನು ಸ್ವಾಗತಿಸುತ್ತಾರೆ. ಆದರೆ, ಇತ್ತೀಚಿಗೆ ಮತ್ತೊಮ್ಮೆ ಕಾಣಿಸಿಕೊಂಡ ಬಲಪಂಥೀಯರ ದಾಳಿಗಳು, ಸೇನ್ ಅವರ ಪರಿಕಲ್ಪನೆಗಳನ್ನು ಆಧಾರವಾಗಿಸಿಕೊಂಡಿಲ್ಲ.

ಇದು ಕೇವಲ ಮಸಿ ಬಳಿಯುವ ಕೆಲಸವಾಗಿದೆ, ಅವರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಕರೆಯುವುದು, ಪಶ್ಚಿಮದ ಗುಲಾಮ ಎನ್ನುವುದು, ಹಿಂದೂ ದ್ವೇಷಿ ಎಂದು ಕರೆಯುವುದು ಮತ್ತು ಇನ್ನೂ ಕೀಳುಮಟ್ಟದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಮಾಡುವುದು ಎಲ್ಲವೂ ಮಸಿ ಬಳಿಯುವ ಪ್ರಯತ್ನವಷ್ಟೆ. ಸೇನ್ ಅವರು ನಮ್ಮ ಕಾಲದ ಅತ್ಯಂತ ಪ್ರಮುಖ ಅಕ್ಯಾಡೆಮಿಕ್ ಚಿಂತಕರಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರತ್ವದ ಬಗ್ಗೆ ವೈಭವವನ್ನು ತಂದವರು, ಅದನ್ನು ಬಲಪಂಥೀಯರು ತಮ್ಮ ರಾಜಕೀಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ, ಅದೂ ಅವರು ಪರಿಣಿತಿಯನ್ನು ಹೊಂದಿದ ವಿಷಯದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಮಾಡುತ್ತಿರುವ ದಾಳಿಗಳನ್ನು ವ್ಯಾಪಕವಾಗಿ ಖಂಡಿಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಶಿವ

ಶಿವ
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಮಾಜಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳು ಬಗ್ಗೆ ವಿಶಿಷ್ಟ ಒಳನೋಟಗಳೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಾರೆ.


ಇದನ್ನೂ ಓದಿ: ನೇತಾಜಿ, ಠಾಗೋರರ ಉತ್ತರಾಧಿಕಾರಿಗಳಾಗಲು ಕೋಮುವಾದ ತಿರಸ್ಕರಿಸಿ: ಬಂಗಾಳಿಗಳಿಗೆ ಅಮರ್ತ್ಯ ಸೇನ್ ಕರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...