Homeಮುಖಪುಟಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

ಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

- Advertisement -
- Advertisement -

ಅಮರ್ತ್ಯ ಸೇನ್ ಅವರು ಕಾಲಕಾಲಕ್ಕೆ ಆಡಳಿತಾರೂಢ ಎನ್‌ಡಿಎ ಸರಕಾರವನ್ನು ಸಕಾರಣವಾಗಿ ಟೀಕಿಸುತ್ತಾ ಬಂದಿದ್ದಾರೆ ಮತ್ತು ಅದು ಭಾರತದಲ್ಲಿಯ ಬಲಪಂಥೀಯರು ಅವರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಟ್ರಾಲ್ ಮಾಡುತ್ತಲೇ ಇರುವುದಕ್ಕೆ ಕಾರಣವಾಗಿದೆ. ಐಟಿ ಸೆಲ್‌ಗಳಿಂದ ಸೃಷ್ಟಿಸಲಾದ ಹ್ಯಾಷ್‌ಟ್ಯಾಗ್‌ಗಳಿಂದ, ಒಪ್‌ಎಡ್‌ಗಳಿಂದ(ಹೊರಗಿನ ಲೇಖಕರು ಬರೆಯುವ ಸಂಪಾದಕೀಯ ಬರಹಗಳು), ಟಿವಿ ವಾಹಿನಿಗಳಲ್ಲಿ ಮಾಡುವ ಚರ್ಚೆಗಳಿಂದ ಮಾಡಲಾಗುವ ಈ ಮಸಿ ಎರಚುವ ಪ್ರಚಾರವು ಎಂದಿಗೂ ಸೇನ್‌ರಂತಹ ತತ್ವಶಾಸ್ತ್ರದ- ಆರ್ಥಿಕತೆಯ ದೈತ್ಯಪ್ರತಿಭೆಯ ಪರಿಕಲ್ಪನೆಗಳ ಮೇಲೆ ಚರ್ಚಿಸುವುದಿಲ್ಲ. ಈ ಪರಿಕಲ್ಪನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ, ಅದರ ಬದಲಿಗೆ ಯಾವಾಗಲೂ ಅವರ ಚಾರಿತ್ರ್ಯ, ರಾಷ್ಟ್ರೀಯತೆ ಮತ್ತು ಅವರ ವೈಯಕ್ತಿಕ, ಧಾರ್ಮಿಕ ನಂಬಿಕೆಗಳನ್ನು ಮುಂದಿಟ್ಟುಕೊಂಡು ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇತ್ತೀಚಿಗೆ ಅವರು ಪ್ರಸಕ್ತ ನಡೆಯುತ್ತಿರುವ ರೈತರ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ, ಅದರೊಂದಿಗೆ ಈ ಕೃಷಿ ಕಾನೂನುಗಳನ್ನು ಪರಾಮರ್ಶಿಸಬೇಕು ಎಂತಲೂ ಸೂಚಿಸಿದ್ದರು; ಈ ಕಾರಣಕ್ಕಾಗಿ ಅವರ ಮೇಲೆ ಮತ್ತೊಮ್ಮೆ ದಾಳಿ ಶುರುವಾಗಿದೆ. ಕೇವಲ ಸರಕಾರಿ ನೀತಿಗಳನ್ನು ವಿಮರ್ಶಿಸಿದ್ದಕ್ಕಾಗಿ, ನಮ್ಮ ಕಾಲದ ಅತ್ಯಂತ ಪ್ರಭಾವಿ ಅರ್ಥಶಾಸ್ತ್ರಜ್ಞರ ಮೇಲೆ ಆಗುತ್ತಿರುವ ದಾಳಿಯನ್ನು ನೋಡಿದಾಗ, ಈ ಹಿಂದು ಬಹುಸಂಖ್ಯಾತವಾದಿ ಸರಕಾರದ ಅಡಿಯಲ್ಲಿಯ ಭಾರತೀಯ ಪ್ರಜಾಪ್ರಭುತ್ವದ ಬಿರುಕುಗಳನ್ನು ಮತ್ತೊಮ್ಮೆ ಎತ್ತಿತೋರಿಸಿದೆ.

ಸದ್ಯಕ್ಕೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ 1998ರಲ್ಲಿ ಆರ್ಥಿಕ ವಿಜ್ಞಾನದ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು ಹಾಗೂ 1999ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನದಿಂದ ಪುರಸ್ಕರಿಸಲಾಗಿತ್ತು. ಸಮಾಜಕಲ್ಯಾಣ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ, ನೈತಿಕ ತತ್ವಶಾಸ್ತ್ರ ಮತ್ತು ಗಣಿತದ ತರ್ಕದಲ್ಲಿ ಅವರು ಮಾಡಿದ ಸಾಧನೆ ಅಗಾಧವಾದದ್ದು. ಈ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಅವರನ್ನು ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವಂತೆ ಮಾಡಿದೆ. ಅವರ ಆರು ದಶಕಗಳ ದೀರ್ಘ ಕಾರ್ಯಾವಧಿಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಬಹುಚರ್ಚಿತ ಪುಸ್ತಕಗಳನ್ನು ಹೊರತಂದಿದ್ದಾರೆ ಹಾಗೂ ಬಹುತೇಕ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಅವರು ಬರೆದಿದ್ದಾರೆ. ಅವರ ಪರಿಕಲ್ಪನೆಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ಎಲ್ಲೆಡೆ ಉಲ್ಲೇಖಿಸಲಾಗಿದೆ ಹಾಗೂ ಅಭಿವೃದ್ಧಿ ಪಡಿಸಲಾಗಿದೆ.

ಸೇನ್ ಅವರನ್ನು ಕೇವಲ ಅವರ ಅಕ್ಯಾಡೆಮಿಕ್ ಸಾಧನೆಗಾಗಿ ಗುರುತಿಸಲಾಗುವುದಿಲ್ಲ. ಅದರೊಂದಿಗೆ ಉದಾರವಾದಿ ಆರ್ಥಿಕ ಸಿದ್ಧಾಂತದ ವ್ಯಾಪ್ತಿಯಲ್ಲಿಯೇ ಮಾನವನ ಸ್ವಾತಂತ್ರ ಮತ್ತು ಸಾಮರ್ಥ್ಯಗಳ ಮೇಲೆ ಒತ್ತು ನೀಡಿದ್ದಕ್ಕಾಗಿಯೂ ಅವರನ್ನು ಗುರುತಿಸಲಾಗುತ್ತದೆ. ಅವರು ವೈಯಕ್ತಿಕ ಆಯ್ಕೆ ಮತ್ತು ನಿರ್ಣಯ ಮಾಡುವುದರ ಮೇಲೆ ನೀಡಿದ ಒತ್ತಿನ ಕಾರಣಕ್ಕಾಗಿ ಉಪಯೋಗಸಿಂಧು ಅಥವಾ ಉಪಯೋಗದ ದೃಷ್ಟಿಯಿಂದ ಮಾತ್ರ ನೋಡುವ(ಯುಟಿಲಿಟೇರಿಯನ್) ಚೌಕಟ್ಟನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ಟೀಕಿಸಿದರು ಹಾಗೂ ಈ ತಿಳಿವಳಿಕೆಯನ್ನು ಮೀರಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಯಾವ್ಯಾವ ’ಪರಿಸ್ಥಿತಿಗಳು’ ಜನರು ನಿರ್ದಿಷ್ಟ ಆಯ್ಕೆ ಮಾಡುವಂತೆ ಮಾಡುತ್ತವೆ ಎಂಬುದು ಸೇನ್ ಅವರ ಅಧ್ಯಯನದ ತಿರುಳು ಎನ್ನಬಹುದು. ಅವರು ಸಾಮಾಜಿಕ ಮೌಲ್ಯಮಾಪನದ ಪ್ರಸಿದ್ಧ ಚೌಕಟ್ಟನ್ನು ನೀಡಿದರು ಹಾಗೂ ’ಸಾಮರ್ಥ್ಯದ ವಿಧಾನ(ಅಪ್ರೋಚ್)’ನ ಸ್ವರೂಪದಲ್ಲಿ ವೈಯಕ್ತಿಕ ಯೋಗಕ್ಷೇಮದ ಮೌಲ್ಯಮಾಪನವನ್ನು ನೀಡಿದ್ದಾರೆ.

ಆದ್ಯತೆಗಳನ್ನು ಪೂರೈಸುವ ಉಪಯೋಗಸಿಂಧು (ಯುಟಿಲಿಟೇರಿಯನ್) ನೋಟಕ್ಕೆ ವಿರುದ್ಧವಾಗಿರುವ ಮತ್ತು ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ಇರಾದೆ ಇರುವ ಇವರ ವಿಧಾನವು ಮಾನವನ ಸ್ವಾತಂತ್ರ್ಯಗಳ ದೃಷ್ಟಿಯಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯನ್ನು ನೋಡುತ್ತದೆ. ಇಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಸಕಾರಾತ್ಮಕ ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ ಅಂದರೆ, ನಿಜವಾಗಿಯೂ ಏನನ್ನಾದರೂ ’ಮಾಡುವ’ ಮತ್ತು ಏನಾದರೂ ’ಆಗುವ’ ಸ್ವಾತಂತ್ರ್ಯ. ಸೇನ್ ಹೇಳುವುದೇನೆಂದರೆ, ಇಂತಹ ಸ್ವಾತಂತ್ರ್ಯವು ಆಯಾ ವ್ಯಕ್ತಿಗೆ ಲಭ್ಯವಿರುವ ಅವಕಾಶಗಳ ಮೂಲಕ ಪೂರ್ಣಗೊಳಿಸಬಹುದು ಎಂದು. ಶಿಕ್ಷಣ, ಆಹಾರ, ನೈರ್ಮಲ್ಯ, ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ತೊಡಗಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಂತಹವುಗಳಿಗೆ ಇರುವ ಪ್ರವೇಶಾವಕಾಶದಂತಹ ಸಂಗತಿಗಳು ಒಬ್ಬ ವ್ಯಕ್ತಿಯು ಸಾಮರ್ಥ್ಯವನ್ನು ರೂಪಿಸುತ್ತವೆ ಹಾಗೂ ಆ ವ್ಯಕ್ತಿಗೆ ಇರುವ ಆಯ್ಕೆಗಳನ್ನು ನಿರ್ಧರಿಸುತ್ತವೆ.

ಈ ಚೌಕಟ್ಟಿನಲ್ಲಿ ವೈಯಕ್ತಿಕ ಸ್ವಾತಂತ್ರವು ಒಬ್ಬ ವ್ಯಕ್ತಿಗೆ ಮೇಲ್ನೋಟದಲ್ಲಿ ಆ ವ್ಯಕ್ತಿಯು ಏನು ಬೇಕಾದರೂ ಮಾಡಲು ಅನುವು ಮಾಡಿಕೊಡುವುದಿಲ್ಲ ಅದರ ಬದಲಿಗೆ, ಅವರಿಗೆ ಲಭ್ಯವಿರುವ ಪರಿಸ್ಥಿತಿಗಳು, ಸಾಧ್ಯತೆಗಳು, ಜೀವನಾವಕಾಶಗಳು, ಇವೆಲ್ಲವುಗಳು ಕೂಡಿ, ಆ ಒಬ್ಬ ವ್ಯಕ್ತಿ ನಿಜವಾಗಿಯೂ ಏನು ಮಾಡಬಹುದು ಅಥವಾ ಏನು ಆಗಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಸೇನ್ ಅವರ ನ್ಯಾಯದ ಪರಿಕಲ್ಪನೆ ಇರುವುದು ಜನರ ಸಾಮರ್ಥ್ಯಗಳ ಸಮುಚ್ಛಯವನ್ನು ವಿಸ್ತರಿಸುವಲ್ಲಿ; ಹಾಗಾಗಬೇಕಾದರೆ, ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯಗಳು, ಸಾಮಾಜಿಕ-ರಾಜಕೀಯ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮುಂತಾದವುಗಳ ಮೇಲೆ ಸಮಾಜವು ಕೆಲಸ ಮಾಡಬೇಕಾಗುತ್ತದೆ. ಈ ಅಂಶಗಳೇ ಸೇನ್ ಅವರ ಪರಿಕಲ್ಪನೆಗಳನ್ನು ಅತ್ಯಂತ ಪ್ರಸ್ತುತಗೊಳಿಸುವುದು.

ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಇಂತಹ ತಿಳಿವಳಿಕೆಯು ಜನರಿಗೆ ಜೀವನಾಧಾರದ ಮೂಲಗಳನ್ನು ನೀಡಲು ಮತ್ತು ಅವುಗಳನ್ನು ವಿಸ್ತರಿಸಲು ಬೇಕಾದ ಕೆಲಸಗಳನ್ನು ಮಾಡಲು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿಯು ಜಿಡಿಪಿ ಆಧಾರಿತ ದೃಷ್ಟಿಕೋನದಿಂದ ಮುಂದೆ ಹೋಗಿ ಮಾನವ ಸಾಮರ್ಥ್ಯಗಳ ವಿಸ್ತರಣೆಯನ್ನು ಒಳಗೊಳ್ಳಬೇಕು ಎಂಬ ಅಭಿವೃದ್ಧಿಯ ಪರಿಕಲ್ಪನೆಯು ಅತ್ಯಂತ ಪ್ರಭಾವಕಾರಿಯಾಗಿದೆ. ಈ ಪರಿಕಲ್ಪನೆಯು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಚೌಕಟ್ಟು, ನೀತಿಗಳು ಮತ್ತು ಅಭಿವೃದ್ಧಿಯ ಗುರಿಗಳ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದೆ, ಇದರಿಂದಲೇ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ವರದಿಗಳು ಶುರುವಾದವು. ಸ್ವಾತಂತ್ರ್ಯ, ಸಾಧ್ಯತೆ, ನ್ಯಾಯ ಮತ್ತು ಪ್ರಜಾಪ್ರಭುತ್ವಗಳು ಸೇನ್ ಅವರ ಅಧ್ಯಯನದ ಮೂಲ ಸಾರಗಳಾಗಿವೆ ಹಾಗೂ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಗೆ ಅಪಾರ ಮಹತ್ವವನ್ನು ಒದಗಿಸುತ್ತವೆ; ಕೇಯ್ನೇಷಿಯನ್ ಕಲ್ಯಾಣ ಮಾದರಿ ಮತ್ತು ನವಉದಾರೀಕರಣ ನೀತಿಗಳನ್ನು ಅಳವಡಿಸಿಕೊಳ್ಳ್ಳುವುದನ್ನು ಸಕ್ರಿಯವಾಗಿ ತೊರೆಯಬೇಕೆಂದು ಪ್ರತಿಪಾದಿಸುತ್ತವೆ.

ಭಾರತೀಯ ಪ್ರಜಾಪ್ರಭುತ್ವವನ್ನು ಪರಾಮರ್ಶಿಸಲು ಸೇನ್ ಅವರ ಪರಿಕಲ್ಪನೆಗಳು ಅತ್ಯುತ್ತಮ ಚೌಕಟ್ಟನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಹಿಂದೂ ಬಹುಸಂಖ್ಯಾವಾದದ ಸಮಯದಲ್ಲಿ ಇದು ಮುಖ್ಯವಾಗಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಭಾರತೀಯ ಪ್ರಜಾಪ್ರಭುತ್ವದ ಭರವಸೆಯು ಒಂದು ವೇಳೆ ಪ್ರಜೆಗಳಿಗೆ ಮೂಲ ಸಂಪನ್ಮೂಲಗಳಿಗೆ ಅವಕಾಶ ಮತ್ತು ಅವುಗಳನ್ನು ಬಳಸುವ ಸ್ವಾತಂತ್ರ್ಯ ಇಲ್ಲದೇ ಹೋದಲ್ಲಿ ಆ ಭರವಸೆ ಪೊಳ್ಳು ಭರವಸೆಯಾಗುತ್ತದೆ. ಉದಾಹರಣೆಗೆ, ಒಂದು ಮುಸ್ಲಿಮ್ ಕುಟುಂಬವು ಆರ್ಥಿಕ ಸ್ಥಿರತೆಯನ್ನು ಹೊಂದಬೇಕಾದರೆ, ಒಂದು ಸುಭದ್ರ ಉದ್ಯೋಗವಿದ್ದರೆ ಸಾಲದು, ಅದರೊಂದಿಗೆ ಆ ಉದ್ಯೋಗದಲ್ಲಿ ಮುಂದುವರೆಯಲು ಸಾಮಾಜಿಕ ಸುರಕ್ಷತೆ ಮತ್ತು ತಾರತಮ್ಯವಿಲ್ಲದ ವಾತಾವರಣವೂ ಬೇಕು.

ಇದೇ ಈ ಹೊಸ ಕೃಷಿ ನೀತಿಗಳಿಗೂ ಅನ್ವಯವಾಗುತ್ತದೆ, ಹಾಗೂ ಸೇನ್ ಸ್ವಾಭಾವಿಕವಾಗಿಯೇ ಕಾನೂನುಗಳ ವಿಮರ್ಶೆ ಮಾಡಿದರು ಹಾಗೂ ಅದಕ್ಕಾಗಿ ಅವರ ಮೇಲೆ ದಾಳಿ ಮಾಡಲಾಯಿತು. ಸರಕಾರವು ಪ್ರದರ್ಶಿಸುತ್ತಿರುವ ’ಆಯ್ಕೆ’ಯ ಭ್ರಮಾತ್ಮಕ ಭರವಸೆಗೆ ಒಂದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾದ ರೈತರು ಮತ್ತು ಕಾರ್ಪೊರೇಟ್‌ಗಳ ನಡುವೆ ಇರುವ ಅಸಮಾನ ಅಧಿಕಾರ ಮತ್ತು ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ ಯಾವುದೇ ಅರ್ಥ ಕಾಣಿಸುವುದಿಲ್ಲ. ಆದರೆ, ಸರಕಾರದಿಂದ ನಿಯೋಜಿಸಲಾದ ಟ್ರಾಲ್‌ಗಳಿಗೆ ಸೇನ್ ಹೇಳಿದ ಈ ಮಾತುಗಳು ತಿಳಿಯುವುದಿಲ್ಲ ಹಾಗೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಸೇನ್ ಬರೆದಿರುವ ವಿಮರ್ಶೆಗಳನ್ನು ಈ ಟ್ರಾಲ್‌ಗಳು ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗಿದೆ.

ಅಮರ್ತ್ಯ ಸೇನ್ ಅವರು ಬಂಡವಾಳಶಾಹಿ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿರುವ ಉದಾರವಾದಿ ಆರ್ಥಿಕಶಾಸ್ತ್ರಜ್ಞರಾಗಿದ್ದಾರೆ. ಕಲ್ಯಾಣ ನೀತಿಗಳನ್ನು ಪ್ರತಿಪಾದಿಸುತ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಸೇನ್ ಅವರನ್ನು ಖಂಡಿತವಾಗಿಯೂ ಟೀಕಿಸಬಹುದು. ಅವರು ಬಂಡವಾಳಶಾಹಿ ವ್ಯವಸ್ಥೆಯ ರ್‍ಯಾಡಿಕಲ್ ವಿಶ್ಲೇಷಣೆಯನ್ನು ನೀಡುವುದಿಲ್ಲ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಡಗಿರುವ ಬಿಕ್ಕಟ್ಟನ್ನೂ ನೋಡುವುದಿಲ್ಲ. ಅವರ ಪರಿಕಲ್ಪನೆಗಳಿಗೆ ನವಶಾಸ್ತ್ರೀಯ, ನವಉದಾರ ಹಾಗೂ ಮಾರ್ಕ್ಸಿಸ್ಟ್‌ರ ಆರ್ಥಿಕ ವಿಚಾರಧಾರೆಯನ್ನು ಹೊಂದಿರುವವರಿಂದ ಕಟು ಟೀಕೆಗಳು ವ್ಯಕ್ತವಾಗುತ್ತವೆ. ಹಾಗೂ ಸೇನ್ ಅವರು ಇಂತಹ ಟೀಕೆಗಳನ್ನು ಸ್ವಾಗತಿಸುತ್ತಾರೆ. ಆದರೆ, ಇತ್ತೀಚಿಗೆ ಮತ್ತೊಮ್ಮೆ ಕಾಣಿಸಿಕೊಂಡ ಬಲಪಂಥೀಯರ ದಾಳಿಗಳು, ಸೇನ್ ಅವರ ಪರಿಕಲ್ಪನೆಗಳನ್ನು ಆಧಾರವಾಗಿಸಿಕೊಂಡಿಲ್ಲ.

ಇದು ಕೇವಲ ಮಸಿ ಬಳಿಯುವ ಕೆಲಸವಾಗಿದೆ, ಅವರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಕರೆಯುವುದು, ಪಶ್ಚಿಮದ ಗುಲಾಮ ಎನ್ನುವುದು, ಹಿಂದೂ ದ್ವೇಷಿ ಎಂದು ಕರೆಯುವುದು ಮತ್ತು ಇನ್ನೂ ಕೀಳುಮಟ್ಟದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಮಾಡುವುದು ಎಲ್ಲವೂ ಮಸಿ ಬಳಿಯುವ ಪ್ರಯತ್ನವಷ್ಟೆ. ಸೇನ್ ಅವರು ನಮ್ಮ ಕಾಲದ ಅತ್ಯಂತ ಪ್ರಮುಖ ಅಕ್ಯಾಡೆಮಿಕ್ ಚಿಂತಕರಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರತ್ವದ ಬಗ್ಗೆ ವೈಭವವನ್ನು ತಂದವರು, ಅದನ್ನು ಬಲಪಂಥೀಯರು ತಮ್ಮ ರಾಜಕೀಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ, ಅದೂ ಅವರು ಪರಿಣಿತಿಯನ್ನು ಹೊಂದಿದ ವಿಷಯದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಮಾಡುತ್ತಿರುವ ದಾಳಿಗಳನ್ನು ವ್ಯಾಪಕವಾಗಿ ಖಂಡಿಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಶಿವ

ಶಿವ
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಮಾಜಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳು ಬಗ್ಗೆ ವಿಶಿಷ್ಟ ಒಳನೋಟಗಳೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಾರೆ.


ಇದನ್ನೂ ಓದಿ: ನೇತಾಜಿ, ಠಾಗೋರರ ಉತ್ತರಾಧಿಕಾರಿಗಳಾಗಲು ಕೋಮುವಾದ ತಿರಸ್ಕರಿಸಿ: ಬಂಗಾಳಿಗಳಿಗೆ ಅಮರ್ತ್ಯ ಸೇನ್ ಕರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...