Homeಕರ್ನಾಟಕಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

"ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ."

- Advertisement -
- Advertisement -

ಚಂದ್ರಯಾನ-2 ಅನ್ನು ಉಡಾವಣೆಗೂ ಮುನ್ನವೇ ನಭಕ್ಕೆ ನೆಗೆದ ಬಾಹುಬಲಿ ಎಂದು ಮುದ್ರಿಸಿ ಪ್ರಮಾದ ಎಸಗಿದ್ದ ವಿಜಯವಾಣಿ ಪತ್ರಿಕೆ ಕ್ಷಮೆ ಕೇಳುವ ನೆಪದಲ್ಲಿ ಮತ್ತೆ ಅಹಂಕಾರ ಮೆರೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಯಾಗಿದೆ.

ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಚಂದ್ರಯಾನವನ್ನು ಇಸ್ರೋ ಮುಂದೂಡಿತ್ತು. ಆದರೆ ಮುಂಚೆಯೇ ಚಂದ್ರಯಾಣ ಉಡಾವಣೆಯಾಯಿತು, ರಾಷ್ಟ್ರಪತಿ ಶುಭಹಾರೈಸಿದರು ಎಂದು ಪತ್ರಿಕೆ ಧಾವಂತದಲ್ಲಿ ಮುದ್ರಿಸಿತ್ತು. ಆ ಕುರಿತು ಇಂದು ನೋವಾಗಿದೆ ಎಂದು 17 ಸಾಲುಗಳುಳ್ಳ ಸುದ್ದಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆ ಅಲ್ಲಿಯೂ ನೇರವಾಗಿ ತಪ್ಪಾಗಿದೆ ಎಂದು ಹೇಳುವ ಬದಲು ಸುತ್ತಿ ಬಳಸಿ ಕೊನೆಯಲ್ಲಿ ಓದುಗರಿಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಸಂಪಾದಕನ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಅಹಂಕಾರ ಮೆರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸಾಲಿನಲ್ಲಿ ಹೇಳಬಹುದಾದನ್ನು ಅಷ್ಟು ಸಾಲುಗಳಲ್ಲಿ ಹೇಳಿದ ಉದ್ದೇಶವೇ ಮತ್ತೆ ಕನ್ ಫ್ಯೂಸ್ ಮಾಡುವುದು, ಆ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬ ಪರೋಕ್ಷ ವಾದ. ವಿಷಾದ ವಿನಯದ ಕುರುಹೂ ಇಲ್ಲ ಎಂದು ಶ್ರೀನಿವಾಸ ಕಾರ್ಕಳರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇವರ ಕುಲಗೆಟ್ಟು ಹೋದ ಈ ಧಂದೆ(ಉದ್ಯಮ)ಯನ್ನು ಆಗಾಗ ‘ಜಾರತನ’ ಎಂದು ನಾನು ಬರೀತಿದ್ದಾಗ ಸ್ವಲ್ಪ ಅಳುಕು ಉಂಟಾಗುತ್ತಿತ್ತು. ಈಗ ಯಾವ ಅಳುಕಿಲ್ಲದೇ ಹೇಳ್ತೇನೆ ಎಂದು ಅಬು ಅಸ್ಮರವರು ಪ್ರತಿಕ್ರಿಯಿಸಿದ್ದಾರೆ.

ಇಂಥ ಕಲಗಚ್ಚು ಪತ್ರಿಕೆಯಲ್ಲಿ ಪ್ರಾಮಾಣಿಕ ಕ್ಷಮಾಪಣೆ ಬಯಸುವುದು ಚಂದ್ರನಲ್ಲಿ ಜೀವಿಗಳಿವೆ ಎಂದು ಹೇಳಿದಷ್ಟೇ ಅಭಾಸ ಎಂದು ಗೋವಿಂದರಾಜ ಬೈಚಗುಪ್ಪೆಯವರು ವ್ಯಂಗ್ಯವಾಡಿದ್ದಾರೆ.

“ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ. ನಾವು ನಮ್ಮ ಕೆಲಸ ಶಿಸ್ತಿನಿಂದ ಮಾಡಿದ್ದೇವೆ. ಇಸ್ರೋದವರು ತಪ್ಪು ಮಾಡಿದರೆ ನಾವು ಹೊಣೆ ಅಲ್ಲ ಎಂಬ ಧ್ವನಿಯ ನಿಮ್ಮ ಈವತ್ತಿನ ಪ್ರಕಟಣೆ ನಿಮ್ಮ ಬಗ್ಗೆ, ನಿಮ್ಮ ಪತ್ರಿಕೋದ್ಯಮದ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿಯ ಬಗ್ಗೆ ತುಂಬಾ ಸೂಚನೆಗಳನ್ನು ನೀಡುತ್ತಿದೆ. ಸುದ್ದಿಮನೆಯಲ್ಲಿ ತಪ್ಪುಗಳು ಸ್ವಾಭಾವಿಕ. ಸ್ವಲ್ಪ ಎಚ್ಚರ ಮತ್ತು ನಾವು ಮಾಡುತ್ತಿರುವುದು ಏನೆಂಬ ಕಲ್ಪನೆ ಇದ್ದಿದ್ದರೆ, ಕ್ಷಮೆಯಲ್ಲಿ ವಿನಯ ತಾನಾಗಿ ವ್ಯಕ್ತಗೊಳ್ಳುತ್ತದೆ. ಕಲಿತದ್ದು ಜಾಸ್ತಿ ಆದಾಗ ಹೀಗೇ..” ಎಂದು ರಾಜರಾಮ ತಲ್ಲೂರ್ ರವರು ಬರೆದಿದ್ದಾರೆ.

ಶ್ರೀಹರಿಕೋಟಾದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆಗೆ 56 ನಿಮಿಷ ಮುಂಚಿತವಾಗಿ ರದ್ದು ಮಾಡಲ್ಪಟ್ಟ ಚಂದ್ರಯಾನ -2 ಕೊನೆಗೆ ಯಶಸ್ವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿಜಯವಾಣಿ ಕಚೇರಿ ಒಳಗಿಂದ ಹಾರಿಸಲ್ಪಟ್ಟಿರುವುದು ತಿಳಿದು ಬಂದಿದೆ….. ಈ ಸುಸಂದರ್ಭದಲ್ಲಿ ಮಾನ್ಯ ವಿಜಯ ಸಂಕೇಶ್ವರ ಅವರು ಉಪಸ್ಥಿತರಿದ್ದು ಈ ಯಶಸ್ವಿ ಚಂದ್ರಯಾನ್ -2 ಉಡಾವಣೆಯನ್ನು ನೆರವೇರಿಸಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ…. ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ಪೇಪರ್ ಓದುವವರಿಗೆ, ಅದನ್ನು ಮನೆಗೆ ಹಾಕಿಸುವವರಿಗೆ – ನೆನ್ನೆ ಚಂದ್ರಯಾನ ನೌಕೆ ಯಶಸ್ವಿ ಉಡ್ಡಯನದ ಸುಳ್ಳು ಸುದ್ದಿ ಮುಖಪುಟದಲ್ಲಿ ಓದಿ ‘ಈ ಪೇಪರ್ ಹಾಕಿಸಿ ಬೆಂಬಲ ಕೊಡ್ತಾ ಇರೋದಕ್ಕೆ ನಮ್ ಮೆಟ್ ತಗಂಡು ನಾವೇ ಹೋಡ್ಕೊಬೇಕು’ ಅನ್ನಿಸಲಿಲ್ವಾ? ಎಂದು ಬರೆಯುವ ಮೂಲಕ ಗರುವೇ ಹೆಜ್ಜಾಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಯಾವ ಪತ್ರಿಕೆ ? ಇವರಿಗಿಂತ ನಮ್ಮ ರಂಗಣ್ಣ ಸರೇ Better.. ನಿನ್ನೆ ನೇರವಾಗಿ ಚಂದ್ರನ ಮೇಲೆ ನಿಂತು ವರದಿ ಮಾಡಿದ್ರು..” ಎಂದು ರಾಘವೇಂದ್ರ ಗೋಪಾಡಿಯವರು ಕಿಚಾಯಿಸಿದ್ದಾರೆ.

“ಯಾವ ಮೀಡಿಯಾವು ಯಾವಾಗ ತಾನು ಪ್ರಕಟಿಸುವ ಸುದ್ದಿಯನ್ನು ಮಾರಿದ ಆದಾಯವನ್ನಷ್ಟೇ ನೆಚ್ಚಿ ಬದುಕುವುದು ಬಿಡುತ್ತಾ ಬಂದಿತೋ ಆಗಲೇ ಈ ಅಹಂಕಾರದ ನಶೆಯೂ ಏರುತ್ತಾ ಹೋಯಿತು.” ಎಂದು ಬರಹಗಾರ್ತಿ ಕಾದಂಬಿನಿ ರಾವಿಯವರು ಬರೆದಿದ್ದಾರೆ.

ಇನ್ನು ವಿಜಯವಾಣಿ ಪತ್ರಿಕೆಯ ಸಿಬ್ಬಿಂದಿಯೊಬ್ಬರು “ನಾವೇನು ಕಾಲದರ್ಶಕರಲ್ಲ, ಮುಂದಿನದನ್ನು ಮೊದಲೆ ತಿಳಿದು ಬರೆಯಲು, ತಾಂತ್ರಿಕ ದೋಷ ಇದೆ ಎಂದು, ನಿಗದಿತ ಸಮಯಕ್ಕೆ ಉಡಾವನೆ ಮಾಡಲು ಆಗುವುದಿಲ್ಲ ಎಂದು ಅಲ್ಲಿರುವವರಿಗೇನೇ ಗೊತ್ತಿಲ್ಲದಿರುವಾಗ ಇನ್ನು ನಮಗೇನು ಗೊತ್ತಾಗ್ವೇಕು. ಇಸ್ರೋ ಮೇಲಿನ ನಂಬಿಕೆ, ವಿಶ್ವಾಸದಿಂದ ನಿಗದಿತ ಸಮಯಕ್ಕೆ ಉಡಾವಣೆ ಆಗಲಿದೆ ಎಂದು ಬರೆದಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ಪ್ರಸಿದ್ದ ಕಾರ್ಟೂನಿಷ್ಟ್ ಆದ ಪಂಜು ಗಂಗೊಳ್ಳಿಯವರು “ಒಂದು ಘಟನೆ ನಡೆದ ನಂತರವಷ್ಟೇ ಅದು ಸುದ್ದಿ ಅಂತಾಗುತ್ತದೆ. ಒಂದು ವೇಳೆ ೨.೫೫ ಕ್ಕೆ ನಿಗದಿಯಾಗಿದ್ದ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದರೂ ಬೆಳಗ್ಗಿನ ಎರಡು ಗಂಟೆಗಳೊಳಗೆ ಮುದ್ರಣಗೊಂಡು ಹೊರ ಬರುವ ಪತ್ರಿಕೆಯಲ್ಲಿ ಅದು ಸುದ್ದಿಯಾಗಿ ಬರುವುದೂ ಉಡಾಫೆಯಾಗುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...