Homeಕರ್ನಾಟಕಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

"ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ."

- Advertisement -
- Advertisement -

ಚಂದ್ರಯಾನ-2 ಅನ್ನು ಉಡಾವಣೆಗೂ ಮುನ್ನವೇ ನಭಕ್ಕೆ ನೆಗೆದ ಬಾಹುಬಲಿ ಎಂದು ಮುದ್ರಿಸಿ ಪ್ರಮಾದ ಎಸಗಿದ್ದ ವಿಜಯವಾಣಿ ಪತ್ರಿಕೆ ಕ್ಷಮೆ ಕೇಳುವ ನೆಪದಲ್ಲಿ ಮತ್ತೆ ಅಹಂಕಾರ ಮೆರೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಯಾಗಿದೆ.

ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಚಂದ್ರಯಾನವನ್ನು ಇಸ್ರೋ ಮುಂದೂಡಿತ್ತು. ಆದರೆ ಮುಂಚೆಯೇ ಚಂದ್ರಯಾಣ ಉಡಾವಣೆಯಾಯಿತು, ರಾಷ್ಟ್ರಪತಿ ಶುಭಹಾರೈಸಿದರು ಎಂದು ಪತ್ರಿಕೆ ಧಾವಂತದಲ್ಲಿ ಮುದ್ರಿಸಿತ್ತು. ಆ ಕುರಿತು ಇಂದು ನೋವಾಗಿದೆ ಎಂದು 17 ಸಾಲುಗಳುಳ್ಳ ಸುದ್ದಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆ ಅಲ್ಲಿಯೂ ನೇರವಾಗಿ ತಪ್ಪಾಗಿದೆ ಎಂದು ಹೇಳುವ ಬದಲು ಸುತ್ತಿ ಬಳಸಿ ಕೊನೆಯಲ್ಲಿ ಓದುಗರಿಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಸಂಪಾದಕನ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಅಹಂಕಾರ ಮೆರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸಾಲಿನಲ್ಲಿ ಹೇಳಬಹುದಾದನ್ನು ಅಷ್ಟು ಸಾಲುಗಳಲ್ಲಿ ಹೇಳಿದ ಉದ್ದೇಶವೇ ಮತ್ತೆ ಕನ್ ಫ್ಯೂಸ್ ಮಾಡುವುದು, ಆ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬ ಪರೋಕ್ಷ ವಾದ. ವಿಷಾದ ವಿನಯದ ಕುರುಹೂ ಇಲ್ಲ ಎಂದು ಶ್ರೀನಿವಾಸ ಕಾರ್ಕಳರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇವರ ಕುಲಗೆಟ್ಟು ಹೋದ ಈ ಧಂದೆ(ಉದ್ಯಮ)ಯನ್ನು ಆಗಾಗ ‘ಜಾರತನ’ ಎಂದು ನಾನು ಬರೀತಿದ್ದಾಗ ಸ್ವಲ್ಪ ಅಳುಕು ಉಂಟಾಗುತ್ತಿತ್ತು. ಈಗ ಯಾವ ಅಳುಕಿಲ್ಲದೇ ಹೇಳ್ತೇನೆ ಎಂದು ಅಬು ಅಸ್ಮರವರು ಪ್ರತಿಕ್ರಿಯಿಸಿದ್ದಾರೆ.

ಇಂಥ ಕಲಗಚ್ಚು ಪತ್ರಿಕೆಯಲ್ಲಿ ಪ್ರಾಮಾಣಿಕ ಕ್ಷಮಾಪಣೆ ಬಯಸುವುದು ಚಂದ್ರನಲ್ಲಿ ಜೀವಿಗಳಿವೆ ಎಂದು ಹೇಳಿದಷ್ಟೇ ಅಭಾಸ ಎಂದು ಗೋವಿಂದರಾಜ ಬೈಚಗುಪ್ಪೆಯವರು ವ್ಯಂಗ್ಯವಾಡಿದ್ದಾರೆ.

“ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ. ನಾವು ನಮ್ಮ ಕೆಲಸ ಶಿಸ್ತಿನಿಂದ ಮಾಡಿದ್ದೇವೆ. ಇಸ್ರೋದವರು ತಪ್ಪು ಮಾಡಿದರೆ ನಾವು ಹೊಣೆ ಅಲ್ಲ ಎಂಬ ಧ್ವನಿಯ ನಿಮ್ಮ ಈವತ್ತಿನ ಪ್ರಕಟಣೆ ನಿಮ್ಮ ಬಗ್ಗೆ, ನಿಮ್ಮ ಪತ್ರಿಕೋದ್ಯಮದ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿಯ ಬಗ್ಗೆ ತುಂಬಾ ಸೂಚನೆಗಳನ್ನು ನೀಡುತ್ತಿದೆ. ಸುದ್ದಿಮನೆಯಲ್ಲಿ ತಪ್ಪುಗಳು ಸ್ವಾಭಾವಿಕ. ಸ್ವಲ್ಪ ಎಚ್ಚರ ಮತ್ತು ನಾವು ಮಾಡುತ್ತಿರುವುದು ಏನೆಂಬ ಕಲ್ಪನೆ ಇದ್ದಿದ್ದರೆ, ಕ್ಷಮೆಯಲ್ಲಿ ವಿನಯ ತಾನಾಗಿ ವ್ಯಕ್ತಗೊಳ್ಳುತ್ತದೆ. ಕಲಿತದ್ದು ಜಾಸ್ತಿ ಆದಾಗ ಹೀಗೇ..” ಎಂದು ರಾಜರಾಮ ತಲ್ಲೂರ್ ರವರು ಬರೆದಿದ್ದಾರೆ.

ಶ್ರೀಹರಿಕೋಟಾದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆಗೆ 56 ನಿಮಿಷ ಮುಂಚಿತವಾಗಿ ರದ್ದು ಮಾಡಲ್ಪಟ್ಟ ಚಂದ್ರಯಾನ -2 ಕೊನೆಗೆ ಯಶಸ್ವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿಜಯವಾಣಿ ಕಚೇರಿ ಒಳಗಿಂದ ಹಾರಿಸಲ್ಪಟ್ಟಿರುವುದು ತಿಳಿದು ಬಂದಿದೆ….. ಈ ಸುಸಂದರ್ಭದಲ್ಲಿ ಮಾನ್ಯ ವಿಜಯ ಸಂಕೇಶ್ವರ ಅವರು ಉಪಸ್ಥಿತರಿದ್ದು ಈ ಯಶಸ್ವಿ ಚಂದ್ರಯಾನ್ -2 ಉಡಾವಣೆಯನ್ನು ನೆರವೇರಿಸಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ…. ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ಪೇಪರ್ ಓದುವವರಿಗೆ, ಅದನ್ನು ಮನೆಗೆ ಹಾಕಿಸುವವರಿಗೆ – ನೆನ್ನೆ ಚಂದ್ರಯಾನ ನೌಕೆ ಯಶಸ್ವಿ ಉಡ್ಡಯನದ ಸುಳ್ಳು ಸುದ್ದಿ ಮುಖಪುಟದಲ್ಲಿ ಓದಿ ‘ಈ ಪೇಪರ್ ಹಾಕಿಸಿ ಬೆಂಬಲ ಕೊಡ್ತಾ ಇರೋದಕ್ಕೆ ನಮ್ ಮೆಟ್ ತಗಂಡು ನಾವೇ ಹೋಡ್ಕೊಬೇಕು’ ಅನ್ನಿಸಲಿಲ್ವಾ? ಎಂದು ಬರೆಯುವ ಮೂಲಕ ಗರುವೇ ಹೆಜ್ಜಾಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಯಾವ ಪತ್ರಿಕೆ ? ಇವರಿಗಿಂತ ನಮ್ಮ ರಂಗಣ್ಣ ಸರೇ Better.. ನಿನ್ನೆ ನೇರವಾಗಿ ಚಂದ್ರನ ಮೇಲೆ ನಿಂತು ವರದಿ ಮಾಡಿದ್ರು..” ಎಂದು ರಾಘವೇಂದ್ರ ಗೋಪಾಡಿಯವರು ಕಿಚಾಯಿಸಿದ್ದಾರೆ.

“ಯಾವ ಮೀಡಿಯಾವು ಯಾವಾಗ ತಾನು ಪ್ರಕಟಿಸುವ ಸುದ್ದಿಯನ್ನು ಮಾರಿದ ಆದಾಯವನ್ನಷ್ಟೇ ನೆಚ್ಚಿ ಬದುಕುವುದು ಬಿಡುತ್ತಾ ಬಂದಿತೋ ಆಗಲೇ ಈ ಅಹಂಕಾರದ ನಶೆಯೂ ಏರುತ್ತಾ ಹೋಯಿತು.” ಎಂದು ಬರಹಗಾರ್ತಿ ಕಾದಂಬಿನಿ ರಾವಿಯವರು ಬರೆದಿದ್ದಾರೆ.

ಇನ್ನು ವಿಜಯವಾಣಿ ಪತ್ರಿಕೆಯ ಸಿಬ್ಬಿಂದಿಯೊಬ್ಬರು “ನಾವೇನು ಕಾಲದರ್ಶಕರಲ್ಲ, ಮುಂದಿನದನ್ನು ಮೊದಲೆ ತಿಳಿದು ಬರೆಯಲು, ತಾಂತ್ರಿಕ ದೋಷ ಇದೆ ಎಂದು, ನಿಗದಿತ ಸಮಯಕ್ಕೆ ಉಡಾವನೆ ಮಾಡಲು ಆಗುವುದಿಲ್ಲ ಎಂದು ಅಲ್ಲಿರುವವರಿಗೇನೇ ಗೊತ್ತಿಲ್ಲದಿರುವಾಗ ಇನ್ನು ನಮಗೇನು ಗೊತ್ತಾಗ್ವೇಕು. ಇಸ್ರೋ ಮೇಲಿನ ನಂಬಿಕೆ, ವಿಶ್ವಾಸದಿಂದ ನಿಗದಿತ ಸಮಯಕ್ಕೆ ಉಡಾವಣೆ ಆಗಲಿದೆ ಎಂದು ಬರೆದಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ಪ್ರಸಿದ್ದ ಕಾರ್ಟೂನಿಷ್ಟ್ ಆದ ಪಂಜು ಗಂಗೊಳ್ಳಿಯವರು “ಒಂದು ಘಟನೆ ನಡೆದ ನಂತರವಷ್ಟೇ ಅದು ಸುದ್ದಿ ಅಂತಾಗುತ್ತದೆ. ಒಂದು ವೇಳೆ ೨.೫೫ ಕ್ಕೆ ನಿಗದಿಯಾಗಿದ್ದ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದರೂ ಬೆಳಗ್ಗಿನ ಎರಡು ಗಂಟೆಗಳೊಳಗೆ ಮುದ್ರಣಗೊಂಡು ಹೊರ ಬರುವ ಪತ್ರಿಕೆಯಲ್ಲಿ ಅದು ಸುದ್ದಿಯಾಗಿ ಬರುವುದೂ ಉಡಾಫೆಯಾಗುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...