Homeಮುಖಪುಟಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು

- Advertisement -
- Advertisement -

ಪರಸ್ಪರ ವೈಯುಕ್ತಿಕ ಸಂಬಂಧಗಳ ಬಗ್ಗೆ ಲೇಖನ ಬರೆದಾಗ, ಕೆಲವು ಸಂಬಂಧಗಳು ವಿಶೇಷವಾಗಿರುತ್ತವೆ ಎಂದು ತಿಳಿಸಿದ್ದೆ. ಅವುಗಳಲ್ಲಿ ಗುರು-ಶಿಷ್ಯ ಸಂಬಂಧವೂ ಒಂದು.

ಗುರುಗಳು ಶಿಷ್ಯರನ್ನು ಹುಡುಕುತ್ತಿದ್ದರೆ, ಶಿಷ್ಯರು ಗುರುಗಳನ್ನು ಅರಸುತ್ತಿರುತ್ತಾರೆ. ಇಬ್ಬರ ಮಿಲನವೂ ತೀರ ಅಪರೂಪ ಮತ್ತು ಕೇವಲ ಆಕಸ್ಮಿಕ. ಹೆಚ್ಚಾಗಿ ಇದು ರಾಂಗ್ ನಂಬರ್ ಅಥವಾ ಮಿಸ್ಡ್ ಕಾಲ್ ಪ್ರಸಂಗಗಳೇ ಆಗಿರುತ್ತದೆ.

ಯಾರು ಈ ಗುರುಗಳು? ಮನೆ ಬಿಟ್ಟು ಮಠದಲ್ಲಿರುವ ಕಾವಿ ಧರಿಸಿದ ಸನ್ಯಾಸಿಗಳೇ? ಸರಕಾರಿ ಜಮೀನು ಕಬಳಿಸಿ, ರಾಜಕಾರಣಿಗಳ ಹಣವನ್ನು ಭದ್ರವಾಗಿರಿಸಿಕೊಂಡಿರುವ, ಸ್ವಿಸ್ ಬ್ಯಾಂಕ್ ಎಕ್ಸ್ಟೆನ್ಷನ್ ಕೌಂಟರ್ ನಡೆಸುತ್ತಿರುವ ಪ್ರವಚನಕಾರರೇ? ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಸರಬರಾಜು ಮಾಡುತ್ತಿರುವ ಸ್ವಾಮೀಜಿಗಳೇ? ಮುಗ್ಧ ಜನರನ್ನು ದಾರಿತಪ್ಪಿಸಿ, ಮಾಡಬಾರದ್ದನ್ನು ಮಾಡಿ, ಜೈಲಿಗೆ ಹೋಗಿ ಕುಳಿತಿರುವ ಬಾಪೂ/ಬಾಬಾಗಳೇ? ನಾನು ಹೇಳುತ್ತಿರುವುದು ಇಂತಹ ಢೋಂಗಿಗಳ ಬಗ್ಗೆ ಅಲ್ಲ.

ಕಲಿಸಿದಾತಂ ವರ್ಣ ಮಾತ್ರಂ ಗುರು ಎಂದು ನಮ್ಮ ಭಾಷೆ ಹೇಳುತ್ತದೆ. ನಿನಗೆ ಒಂದು ಅಕ್ಷರ ಹೇಳಿಕೊಟ್ಟವರೂ ಸಹ ಗುರು ಎಂದು. ಅಂದ ಮಾತ್ರಕ್ಕೆ ಕೇವಲ ಒಂದಕ್ಷರ ಕಲಿಸಿದ ಮಾತ್ರಕ್ಕೆ ಅವರು ನಮ್ಮ ಸಂಪೂರ್ಣ ಜೀವನದ ಗುರುಗಳಾದರೇ? ಗುರುಗಳು ಇರಲೇ ಬೇಕೇ, ಅವರಿಲ್ಲದೆ ನಮಗೆ ಮೋಕ್ಷಕ್ಕೆ ದಾರಿಯೇ ಇಲ್ಲವೇ?

ನಮ್ಮ ಸಂಸ್ಕೃತಿ ಗುರುಗಳಿಗೆ ಬಹಳ ಉನ್ನತ ಸ್ಥಾನ ನೀಡಿದೆ. ಶ್ರೇಷ್ಠ ಕವಿ ಮತ್ತು ಭಕ್ತ ಕಬೀರ್ ದಾಸ್ ಹೇಳುತ್ತಾರೆ:

ಗುರು ಗೋವಿಂದ್ ದೋಊ ಖಡೇ ಕಾಕೆ ಲಾಗೌ ಪಾಯ್ |

ಬಲಿಹಾರೀ ಗುರು ಆಪನೇ ಗೋವಿಂದ್ ದಿಯೋ ಬತಾಯ್ ||

ಅರ್ಥಾತ್ (ಹೊರ ಮನಸ್ಸು ಪ್ರಶ್ನೆ ಮಾಡುತ್ತಿದೆ) ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು. ಹೀಗೆ ಗುರುಗಳನ್ನು ದೇವರಿಗಿಂತಲೂ ಎತ್ತರದ ಸ್ಥಾನದಲ್ಲಿ ನಾವು ನೋಡುತ್ತೇವೆ.

ನಮ್ಮ ತಾಯಿಯೇ ನಮಗೆಲ್ಲಾ ಮೊದಲ ಗುರು. ತಂದೆಯೂ ಸಹ ಗುರುವಿನ ಸ್ಥಾನದಲ್ಲಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ಸಹ ನಮಗೆ ಗುರುಗಳೇ. ಆದರೆ ನಿಜವಾದ, ನಾವು ಅರಸುತ್ತಿರುವ ಗುರು ಯಾರು? ಗುರುಗಳು ನಮಗೆ ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸಿಗುತ್ತಾರೋ, ಕಾಣುತ್ತಾರೋ ಅದನ್ನು ಅಥವಾ ಯಾವಾಗ ನಮಗೆ ಯಾವ ಪಾಠ ಕಲಿಸುತ್ತಾರೆ ಅದನ್ನೂ ಹೇಳುವುದು ಸಾಧ್ಯವಿಲ್ಲ.

ನನ್ನ ಸ್ನೇಹಿತನೊಬ್ಬ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದ. ಅಲ್ಲಿನ ಪ್ರಾಚಾರ್ಯರು ಘನ ಪಂಡಿತರು ಮತ್ತು ಸಹಜಜ್ಞಾನಿಗಳು. ಒಳ್ಳೆಯ ವಿದ್ಯಾರ್ಥಿಯಾದ ಈತನನ್ನು ಕಂಡಾಗಲೆಲ್ಲಾ, ತಮ್ಮ ಕೊಠಡಿಗೆ ಕರೆದು, ಒಂದಿಷ್ಟು ಪುಡಿ ಅಥವಾ ಚೂರ್ಣ ಅಥವಾ ಲೇಹ್ಯ ಮುಂತಾದ ಆಯುರ್ವೇದದ ಔಷಧಿಯನ್ನು ಒಂದು ಕಾಗದದ ಮೇಲೆ ಹಾಕಿ, ಇವನಿಗೆ ಕೊಟ್ಟು ಅದನ್ನು ಸರಿಯಾಗಿ ತೂಕಮಾಡಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಾಲೇಜಿನ ಹೊರಗೆ ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಆ ಹಳ್ಳಿಗೆ ಇದ್ದುದು ಒಂದೇ ಅಂಗಡಿಯಾದ್ದರಿಂದ ಯಾವಾಗಲೂ ಗ್ರಾಹಕರು ಇರುತ್ತಿದ್ದರು. ವ್ಯಾಪಾರವಿಲ್ಲದೆ ಸುಮ್ಮನೆ ಕೂತಿದ್ದಾಗ ಮಾತ್ರ, ಇಂತಹ (ಬಿಟ್ಟಿ) ತೂಕ ಮಾಡುವ ಕೆಲಸ ಅಂಗಡಿಯ ಮಾಲೀಕ ಮಾಡಿಕೊಡುತ್ತಿದ್ದ. ಮಿಕ್ಕಂತೆ ಇವನನ್ನು ಆತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈತನಿಗೆ ತುಂಬಾ ಮುಜುಗರವಾಗಿ, ಅವಶ್ಯಕತೆ ಇಲ್ಲದಿದ್ದರೂ, ಅಂಗಡಿಯಿಂದ ಏನಾದರೂ ಸೋಪು, ಬ್ಲೇಡು ಮುಂತಾದ ವಸ್ತುವನ್ನು ಖರೀದಿಸಿ, ಪ್ರಾಚಾರ್ಯರ ಬಿಟ್ಟಿ ಕೆಲಸ ಬೇಗನೇ ಮಾಡಿಸಿಕೊಳ್ಳುತ್ತಿದ್ದ. ನಿದಾನವಾಗಿ ಹಿಂತಿರುಗಿದರೆ ಪ್ರಾಚಾರ್ಯರಿಂದಲೂ ಒಂದೆರಡು ಮಾತು ಕೇಳಬೇಕಾಗುತ್ತಿತ್ತು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ, ಆತ ಪ್ರಾಚಾರ್ಯಕರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದ ಆದರೆ ಅವರ ಹದ್ದಿನ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುವುದೂ ಸಹ ಕಷ್ಟದ ಕೆಲಸವಾಗಿತ್ತು.

ಹಾಗೂ ಹೀಗೂ ಒಂದು ವರ್ಷ ಕಳೆದ ನಂತರ, ಆತ ರಜೆಯ ಮೇಲೆ ತನ್ನ ಊರಿಗೆ ಬಂದ. ಪ್ರಾಚಾರ್ಯರ ಬಿಟ್ಟಿ ಚಾಕರಿಯಿಂದ ಬೇಸತ್ತಿದ್ದ ಆತ ತನ್ನ ತಂದೆಯ ಹತ್ತಿರ ಕೇಳಿ ಹಣ ಪಡೆದು, ನಗರಕ್ಕೆ ಹೋಗಿ, ಒಂದು ಸಣ್ಣ ತೂಕದ ಯಂತ್ರ ಖರೀದಿಸಿದ. ಅದನ್ನು ಜೋಪಾನವಾಗಿ ತನ್ನೊಡನೆ ರಜೆ ಮುಗಿದಾಗ ಕಾಲೇಜಿಗೆ ತೆಗೆದುಕೊಂಡು ಹೋದ. ಇವನನ್ನು ಕಂಡಕೂಡಲೇ ಮತ್ತೆ ಪ್ರಾಚಾರ್ಯರು ಕರೆದು ಒಂದಿಷ್ಟು ಪುಡಿ ಕೊಟ್ಟು, ತೂಕ ಮಾಡಿಸಿಕೊಂಡು ಬರಲು ಹೇಳಿದರು. ಇವನು ತನ್ನ ಹಾಸ್ಟೆಲ್ ರೂಮಿಗೆ ಹೋಗಿ, ತೂಕದ ಯಂತ್ರವನ್ನು ಹೊರತೆಗೆದು, ಅದರಲ್ಲಿ ಸರಿಯಾಗಿ ಪುಡಿಯನ್ನು ತೂಕ ಮಾಡಿ, ಜೊತೆಗೆ ಯಂತ್ರವನ್ನೂ ತೆಗೆದುಕೊಂಡು, ಪ್ರಾಚಾರ್ಯರ ಕೊಠಡಿಗೆ ಹೋದ. ಆ ಯಂತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾ, ಇನ್ನು ಮೇಲೆ ಯಾವುದೇ ಸಣ್ಣ-ಪುಟ್ಟ ವಸ್ತುವನ್ನು ಇಲ್ಲೇ ತೂಗಬಹುದು ಎಂದು ಹೇಳಿದ. ಕೆಲಸದಿಂದ ತಪ್ಪಿಸಿಕೊಂಡ ಸಾಧನೆಯಿಂದ ಬೀಗುತ್ತಿದ್ದ ಇವನ ಮುಖಚರ್ಯೆ ಕಂಡು ಖಿನ್ನರಾದ ಪ್ರಾಚಾರ್ಯರು ಇವನ ಯಂತ್ರವನ್ನು ಒಂದು ಸಣ್ಣ ಪೆಟ್ಟಿಗೆ ತೆಗೆದು ಅದರಲ್ಲಿ ಈಗಾಗಲೇ ಇದ್ದ, ಇನ್ನೂ ಹಲವಾರು ತೂಕದ ಯಂತ್ರಗಳ ಜೊತೆಗೆ ಸೇರಿಸಿ ಬಾಗಿಲು ಹಾಕಿದರು. ಇವನ ಮುಖ ಆಗಲೇ ಬಿಳಿಚಿತ್ತು. ಪ್ರಾಚಾರ್ಯರ ಬಳಿ ಈಗಾಗಲೇ ಇಷ್ಟೊಂದು ಯಂತ್ರಗಳಿದ್ದರೆ ಏಕೆ ನನ್ನನ್ನುಕಂಡಾಗಲೆಲ್ಲಾ ಪುಡಿ ಇತ್ಯಾದಿಯನ್ನು ಹೊರಗಿನಿಂದ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದರು ಎಂಬುದು ಇವನಿಗೆ ಅರ್ಥವಾಗಲಿಲ್ಲ. ಇವನ ಮನಃಸ್ಥಿತಿ ಅರಿತ ಪ್ರಾಚಾರ್ಯರು ಸ್ವತಃ ಹೇಳಿದರು.

ಮಗೂ, ಆಯುರ್ವೇದದ ಔಷದಿಗಳನ್ನು ಮಾಡುವ ಸಂಹಿತದಲ್ಲಿ ನಾವು ವಿವಿಧ ಸಾಮಗ್ರಿಗಳನ್ನು ಸೇರಿಸುತ್ತೇವೆ. ಅವನ್ನು ಈಗಿನ ಗ್ರಾಂ ಲೆಕ್ಕದಲ್ಲಿ ಅಲ್ಲ, ನಮ್ಮ ಕಾಲದ ಸೇರು, ಪಂಚೇರು, ಪಾವು, ತೊಲ ಗುಲಗಂಜಿ ತೂಕದಲ್ಲಿ ಅಳೆಯುತ್ತೇವೆ. ಒಳ್ಳೆಯ ವೈದ್ಯನಾಗಬೇಕಿದ್ದಲ್ಲಿ ವಸ್ತುವನ್ನು ಕಣ್ಣಿನಲ್ಲಿ ಕರಾರುವಾಕ್ಕಾಗಿ ತೂಗುವ, ಅಳೆಯುವ ಶಕ್ತಿ ಬರಬೇಕು. ಅ ಶಕ್ತಿ ನಿನಗೆ ಸಿಗಲಿ ಎಂದು ನಿನಗೆ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದೆ. ನಿನಗೆ ತೂಕಕ್ಕೆ ವಸ್ತುವನ್ನು ಕೊಡುವ ಮುಂಚೆಯೇ ಅದರಲ್ಲಿ ಎಷ್ಟಿದೆ ಅನ್ನುವುದು ನನಗೆ ಗೊತ್ತಿರುತ್ತಿತ್ತು, ಹಾಗಾಗಿ ನೀನು ಸರಿಯಾಗಿ ತೂಕ ಮಾಡಿಸಿಕೊಂಡು ಬಂದೆಯೋ ಅಥವಾ ಸುಳ್ಳು ಹೇಳಿದೆಯೋ ಅದೂ ಸಹ ನನಗೆ ತಿಳಿಯುತ್ತಿತ್ತು. ನಿನ್ನ ಜ್ಞಾನಕ್ಕಾಗಿ ನಾನು ನಿನಗೆ ಕೆಲಸ ಹೇಳುತ್ತಿದ್ದೆನೇ ಹೊರತು, ನನ್ನ ಪ್ರಯೋಜನಕ್ಕಾಗಿ ಅಲ್ಲ. ಕೂಡಲೇ ಜ್ಞಾನೋದಯವಾದ ಆತ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಈಗ ನನ್ನ ಸ್ನೇಹಿತ ಆಯುರ್ವೇದ ಪಂಡಿತನಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಎರಡೂ ಮಾಡಿಕೊಳ್ಳುತ್ತಿದ್ದಾನೆ.

ಹೀಗೆ ನಮಗೆ ಯಾವಾಗ ಗುರುಗಳ ಸಾನಿಧ್ಯ, ಸಾಕ್ಷಾತ್ಕಾರ, ಜ್ಞಾನ ಲಭ್ಯವಾಗುತ್ತದೋ, ಇಲ್ಲವೋ ಯಾರೂ ಹೇಳಲು ಬರುವುದಿಲ್ಲ. ಜೀವನದಲ್ಲಿ ನಮಗೆ ಕಾಲಕಾಲಕ್ಕೆ ಹಲವಾರು ಗುರುಗಳ ಅವಶ್ಯಕತೆ ಬರುತ್ತದೆ. ಸರಿಯಾದ ಗುರು ಸಿಗುವವರೆಗೆ ಅರಸುವ ಕೆಲಸ ತಪ್ಪುವುದಿಲ್ಲ.

ಶ್ರೀ ಗುರುಭ್ಯೋ ನಮಃ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...