Homeಮುಖಪುಟಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಗುರುವನ್ನು ಅರಸುವ ಕಲೆ: ಗುರುಪೂರ್ಣಿಮ ದಿನದ ಅಂಗವಾಗಿ ವಿಶೇಷ ಸ್ಟೋರಿ ಓದಿ

ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು

- Advertisement -
- Advertisement -

ಪರಸ್ಪರ ವೈಯುಕ್ತಿಕ ಸಂಬಂಧಗಳ ಬಗ್ಗೆ ಲೇಖನ ಬರೆದಾಗ, ಕೆಲವು ಸಂಬಂಧಗಳು ವಿಶೇಷವಾಗಿರುತ್ತವೆ ಎಂದು ತಿಳಿಸಿದ್ದೆ. ಅವುಗಳಲ್ಲಿ ಗುರು-ಶಿಷ್ಯ ಸಂಬಂಧವೂ ಒಂದು.

ಗುರುಗಳು ಶಿಷ್ಯರನ್ನು ಹುಡುಕುತ್ತಿದ್ದರೆ, ಶಿಷ್ಯರು ಗುರುಗಳನ್ನು ಅರಸುತ್ತಿರುತ್ತಾರೆ. ಇಬ್ಬರ ಮಿಲನವೂ ತೀರ ಅಪರೂಪ ಮತ್ತು ಕೇವಲ ಆಕಸ್ಮಿಕ. ಹೆಚ್ಚಾಗಿ ಇದು ರಾಂಗ್ ನಂಬರ್ ಅಥವಾ ಮಿಸ್ಡ್ ಕಾಲ್ ಪ್ರಸಂಗಗಳೇ ಆಗಿರುತ್ತದೆ.

ಯಾರು ಈ ಗುರುಗಳು? ಮನೆ ಬಿಟ್ಟು ಮಠದಲ್ಲಿರುವ ಕಾವಿ ಧರಿಸಿದ ಸನ್ಯಾಸಿಗಳೇ? ಸರಕಾರಿ ಜಮೀನು ಕಬಳಿಸಿ, ರಾಜಕಾರಣಿಗಳ ಹಣವನ್ನು ಭದ್ರವಾಗಿರಿಸಿಕೊಂಡಿರುವ, ಸ್ವಿಸ್ ಬ್ಯಾಂಕ್ ಎಕ್ಸ್ಟೆನ್ಷನ್ ಕೌಂಟರ್ ನಡೆಸುತ್ತಿರುವ ಪ್ರವಚನಕಾರರೇ? ಸಾಮ್ರಾಜ್ಯ ಕಟ್ಟಿಕೊಂಡು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಸರಬರಾಜು ಮಾಡುತ್ತಿರುವ ಸ್ವಾಮೀಜಿಗಳೇ? ಮುಗ್ಧ ಜನರನ್ನು ದಾರಿತಪ್ಪಿಸಿ, ಮಾಡಬಾರದ್ದನ್ನು ಮಾಡಿ, ಜೈಲಿಗೆ ಹೋಗಿ ಕುಳಿತಿರುವ ಬಾಪೂ/ಬಾಬಾಗಳೇ? ನಾನು ಹೇಳುತ್ತಿರುವುದು ಇಂತಹ ಢೋಂಗಿಗಳ ಬಗ್ಗೆ ಅಲ್ಲ.

ಕಲಿಸಿದಾತಂ ವರ್ಣ ಮಾತ್ರಂ ಗುರು ಎಂದು ನಮ್ಮ ಭಾಷೆ ಹೇಳುತ್ತದೆ. ನಿನಗೆ ಒಂದು ಅಕ್ಷರ ಹೇಳಿಕೊಟ್ಟವರೂ ಸಹ ಗುರು ಎಂದು. ಅಂದ ಮಾತ್ರಕ್ಕೆ ಕೇವಲ ಒಂದಕ್ಷರ ಕಲಿಸಿದ ಮಾತ್ರಕ್ಕೆ ಅವರು ನಮ್ಮ ಸಂಪೂರ್ಣ ಜೀವನದ ಗುರುಗಳಾದರೇ? ಗುರುಗಳು ಇರಲೇ ಬೇಕೇ, ಅವರಿಲ್ಲದೆ ನಮಗೆ ಮೋಕ್ಷಕ್ಕೆ ದಾರಿಯೇ ಇಲ್ಲವೇ?

ನಮ್ಮ ಸಂಸ್ಕೃತಿ ಗುರುಗಳಿಗೆ ಬಹಳ ಉನ್ನತ ಸ್ಥಾನ ನೀಡಿದೆ. ಶ್ರೇಷ್ಠ ಕವಿ ಮತ್ತು ಭಕ್ತ ಕಬೀರ್ ದಾಸ್ ಹೇಳುತ್ತಾರೆ:

ಗುರು ಗೋವಿಂದ್ ದೋಊ ಖಡೇ ಕಾಕೆ ಲಾಗೌ ಪಾಯ್ |

ಬಲಿಹಾರೀ ಗುರು ಆಪನೇ ಗೋವಿಂದ್ ದಿಯೋ ಬತಾಯ್ ||

ಅರ್ಥಾತ್ (ಹೊರ ಮನಸ್ಸು ಪ್ರಶ್ನೆ ಮಾಡುತ್ತಿದೆ) ಅಕಸ್ಮಾತ್ ಗುರು ಮತ್ತು ದೇವರು ಇಬ್ಬರೂ ಏಕ ಕಾಲಕ್ಕೆ ಎದುರಾದರೆ ನಾನು ಯಾರ ಕಾಲಿಗೆ ಮೊದಲು ಬೀಳಲಿ ಎಂದು. (ಒಳ ಮನಸ್ಸು ಹೇಳುತ್ತದೆ) ಮೊದಲು ಗುರುಗಳ ಪಾದಕ್ಕೆ ಎರಗು ಏಕೆಂದರೆ ಗುರುಗಳಿಂದಲೇ ಆ ಗೋವಿಂದನ ದರ್ಶನ ಸಾಧ್ಯವಾಯಿತು ಎಂದು. ಹೀಗೆ ಗುರುಗಳನ್ನು ದೇವರಿಗಿಂತಲೂ ಎತ್ತರದ ಸ್ಥಾನದಲ್ಲಿ ನಾವು ನೋಡುತ್ತೇವೆ.

ನಮ್ಮ ತಾಯಿಯೇ ನಮಗೆಲ್ಲಾ ಮೊದಲ ಗುರು. ತಂದೆಯೂ ಸಹ ಗುರುವಿನ ಸ್ಥಾನದಲ್ಲಿದ್ದಾರೆ. ನಮ್ಮ ಶಾಲೆಯ ಶಿಕ್ಷಕರೂ ಸಹ ನಮಗೆ ಗುರುಗಳೇ. ಆದರೆ ನಿಜವಾದ, ನಾವು ಅರಸುತ್ತಿರುವ ಗುರು ಯಾರು? ಗುರುಗಳು ನಮಗೆ ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸಿಗುತ್ತಾರೋ, ಕಾಣುತ್ತಾರೋ ಅದನ್ನು ಅಥವಾ ಯಾವಾಗ ನಮಗೆ ಯಾವ ಪಾಠ ಕಲಿಸುತ್ತಾರೆ ಅದನ್ನೂ ಹೇಳುವುದು ಸಾಧ್ಯವಿಲ್ಲ.

ನನ್ನ ಸ್ನೇಹಿತನೊಬ್ಬ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದ. ಅಲ್ಲಿನ ಪ್ರಾಚಾರ್ಯರು ಘನ ಪಂಡಿತರು ಮತ್ತು ಸಹಜಜ್ಞಾನಿಗಳು. ಒಳ್ಳೆಯ ವಿದ್ಯಾರ್ಥಿಯಾದ ಈತನನ್ನು ಕಂಡಾಗಲೆಲ್ಲಾ, ತಮ್ಮ ಕೊಠಡಿಗೆ ಕರೆದು, ಒಂದಿಷ್ಟು ಪುಡಿ ಅಥವಾ ಚೂರ್ಣ ಅಥವಾ ಲೇಹ್ಯ ಮುಂತಾದ ಆಯುರ್ವೇದದ ಔಷಧಿಯನ್ನು ಒಂದು ಕಾಗದದ ಮೇಲೆ ಹಾಕಿ, ಇವನಿಗೆ ಕೊಟ್ಟು ಅದನ್ನು ಸರಿಯಾಗಿ ತೂಕಮಾಡಿಸಿಕೊಂಡು ಬರಲು ಆದೇಶಿಸುತ್ತಿದ್ದರು. ಕಾಲೇಜಿನ ಹೊರಗೆ ಒಂದು ಸಣ್ಣ ಕಿರಾಣಿ ಅಂಗಡಿ ಇತ್ತು. ಆ ಹಳ್ಳಿಗೆ ಇದ್ದುದು ಒಂದೇ ಅಂಗಡಿಯಾದ್ದರಿಂದ ಯಾವಾಗಲೂ ಗ್ರಾಹಕರು ಇರುತ್ತಿದ್ದರು. ವ್ಯಾಪಾರವಿಲ್ಲದೆ ಸುಮ್ಮನೆ ಕೂತಿದ್ದಾಗ ಮಾತ್ರ, ಇಂತಹ (ಬಿಟ್ಟಿ) ತೂಕ ಮಾಡುವ ಕೆಲಸ ಅಂಗಡಿಯ ಮಾಲೀಕ ಮಾಡಿಕೊಡುತ್ತಿದ್ದ. ಮಿಕ್ಕಂತೆ ಇವನನ್ನು ಆತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಈತನಿಗೆ ತುಂಬಾ ಮುಜುಗರವಾಗಿ, ಅವಶ್ಯಕತೆ ಇಲ್ಲದಿದ್ದರೂ, ಅಂಗಡಿಯಿಂದ ಏನಾದರೂ ಸೋಪು, ಬ್ಲೇಡು ಮುಂತಾದ ವಸ್ತುವನ್ನು ಖರೀದಿಸಿ, ಪ್ರಾಚಾರ್ಯರ ಬಿಟ್ಟಿ ಕೆಲಸ ಬೇಗನೇ ಮಾಡಿಸಿಕೊಳ್ಳುತ್ತಿದ್ದ. ನಿದಾನವಾಗಿ ಹಿಂತಿರುಗಿದರೆ ಪ್ರಾಚಾರ್ಯರಿಂದಲೂ ಒಂದೆರಡು ಮಾತು ಕೇಳಬೇಕಾಗುತ್ತಿತ್ತು. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ, ಆತ ಪ್ರಾಚಾರ್ಯಕರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದ ಆದರೆ ಅವರ ಹದ್ದಿನ ಕಣ್ಣಿನಿಂದ ಸದಾ ತಪ್ಪಿಸಿಕೊಳ್ಳುವುದೂ ಸಹ ಕಷ್ಟದ ಕೆಲಸವಾಗಿತ್ತು.

ಹಾಗೂ ಹೀಗೂ ಒಂದು ವರ್ಷ ಕಳೆದ ನಂತರ, ಆತ ರಜೆಯ ಮೇಲೆ ತನ್ನ ಊರಿಗೆ ಬಂದ. ಪ್ರಾಚಾರ್ಯರ ಬಿಟ್ಟಿ ಚಾಕರಿಯಿಂದ ಬೇಸತ್ತಿದ್ದ ಆತ ತನ್ನ ತಂದೆಯ ಹತ್ತಿರ ಕೇಳಿ ಹಣ ಪಡೆದು, ನಗರಕ್ಕೆ ಹೋಗಿ, ಒಂದು ಸಣ್ಣ ತೂಕದ ಯಂತ್ರ ಖರೀದಿಸಿದ. ಅದನ್ನು ಜೋಪಾನವಾಗಿ ತನ್ನೊಡನೆ ರಜೆ ಮುಗಿದಾಗ ಕಾಲೇಜಿಗೆ ತೆಗೆದುಕೊಂಡು ಹೋದ. ಇವನನ್ನು ಕಂಡಕೂಡಲೇ ಮತ್ತೆ ಪ್ರಾಚಾರ್ಯರು ಕರೆದು ಒಂದಿಷ್ಟು ಪುಡಿ ಕೊಟ್ಟು, ತೂಕ ಮಾಡಿಸಿಕೊಂಡು ಬರಲು ಹೇಳಿದರು. ಇವನು ತನ್ನ ಹಾಸ್ಟೆಲ್ ರೂಮಿಗೆ ಹೋಗಿ, ತೂಕದ ಯಂತ್ರವನ್ನು ಹೊರತೆಗೆದು, ಅದರಲ್ಲಿ ಸರಿಯಾಗಿ ಪುಡಿಯನ್ನು ತೂಕ ಮಾಡಿ, ಜೊತೆಗೆ ಯಂತ್ರವನ್ನೂ ತೆಗೆದುಕೊಂಡು, ಪ್ರಾಚಾರ್ಯರ ಕೊಠಡಿಗೆ ಹೋದ. ಆ ಯಂತ್ರವನ್ನು ಅವರಿಗೆ ಕಾಣಿಕೆಯಾಗಿ ಕೊಡುತ್ತಾ, ಇನ್ನು ಮೇಲೆ ಯಾವುದೇ ಸಣ್ಣ-ಪುಟ್ಟ ವಸ್ತುವನ್ನು ಇಲ್ಲೇ ತೂಗಬಹುದು ಎಂದು ಹೇಳಿದ. ಕೆಲಸದಿಂದ ತಪ್ಪಿಸಿಕೊಂಡ ಸಾಧನೆಯಿಂದ ಬೀಗುತ್ತಿದ್ದ ಇವನ ಮುಖಚರ್ಯೆ ಕಂಡು ಖಿನ್ನರಾದ ಪ್ರಾಚಾರ್ಯರು ಇವನ ಯಂತ್ರವನ್ನು ಒಂದು ಸಣ್ಣ ಪೆಟ್ಟಿಗೆ ತೆಗೆದು ಅದರಲ್ಲಿ ಈಗಾಗಲೇ ಇದ್ದ, ಇನ್ನೂ ಹಲವಾರು ತೂಕದ ಯಂತ್ರಗಳ ಜೊತೆಗೆ ಸೇರಿಸಿ ಬಾಗಿಲು ಹಾಕಿದರು. ಇವನ ಮುಖ ಆಗಲೇ ಬಿಳಿಚಿತ್ತು. ಪ್ರಾಚಾರ್ಯರ ಬಳಿ ಈಗಾಗಲೇ ಇಷ್ಟೊಂದು ಯಂತ್ರಗಳಿದ್ದರೆ ಏಕೆ ನನ್ನನ್ನುಕಂಡಾಗಲೆಲ್ಲಾ ಪುಡಿ ಇತ್ಯಾದಿಯನ್ನು ಹೊರಗಿನಿಂದ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದರು ಎಂಬುದು ಇವನಿಗೆ ಅರ್ಥವಾಗಲಿಲ್ಲ. ಇವನ ಮನಃಸ್ಥಿತಿ ಅರಿತ ಪ್ರಾಚಾರ್ಯರು ಸ್ವತಃ ಹೇಳಿದರು.

ಮಗೂ, ಆಯುರ್ವೇದದ ಔಷದಿಗಳನ್ನು ಮಾಡುವ ಸಂಹಿತದಲ್ಲಿ ನಾವು ವಿವಿಧ ಸಾಮಗ್ರಿಗಳನ್ನು ಸೇರಿಸುತ್ತೇವೆ. ಅವನ್ನು ಈಗಿನ ಗ್ರಾಂ ಲೆಕ್ಕದಲ್ಲಿ ಅಲ್ಲ, ನಮ್ಮ ಕಾಲದ ಸೇರು, ಪಂಚೇರು, ಪಾವು, ತೊಲ ಗುಲಗಂಜಿ ತೂಕದಲ್ಲಿ ಅಳೆಯುತ್ತೇವೆ. ಒಳ್ಳೆಯ ವೈದ್ಯನಾಗಬೇಕಿದ್ದಲ್ಲಿ ವಸ್ತುವನ್ನು ಕಣ್ಣಿನಲ್ಲಿ ಕರಾರುವಾಕ್ಕಾಗಿ ತೂಗುವ, ಅಳೆಯುವ ಶಕ್ತಿ ಬರಬೇಕು. ಅ ಶಕ್ತಿ ನಿನಗೆ ಸಿಗಲಿ ಎಂದು ನಿನಗೆ ತೂಕ ಮಾಡಿಸಿಕೊಂಡು ಬರಲು ಹೇಳುತ್ತಿದ್ದೆ. ನಿನಗೆ ತೂಕಕ್ಕೆ ವಸ್ತುವನ್ನು ಕೊಡುವ ಮುಂಚೆಯೇ ಅದರಲ್ಲಿ ಎಷ್ಟಿದೆ ಅನ್ನುವುದು ನನಗೆ ಗೊತ್ತಿರುತ್ತಿತ್ತು, ಹಾಗಾಗಿ ನೀನು ಸರಿಯಾಗಿ ತೂಕ ಮಾಡಿಸಿಕೊಂಡು ಬಂದೆಯೋ ಅಥವಾ ಸುಳ್ಳು ಹೇಳಿದೆಯೋ ಅದೂ ಸಹ ನನಗೆ ತಿಳಿಯುತ್ತಿತ್ತು. ನಿನ್ನ ಜ್ಞಾನಕ್ಕಾಗಿ ನಾನು ನಿನಗೆ ಕೆಲಸ ಹೇಳುತ್ತಿದ್ದೆನೇ ಹೊರತು, ನನ್ನ ಪ್ರಯೋಜನಕ್ಕಾಗಿ ಅಲ್ಲ. ಕೂಡಲೇ ಜ್ಞಾನೋದಯವಾದ ಆತ ಗುರುಗಳ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಈಗ ನನ್ನ ಸ್ನೇಹಿತ ಆಯುರ್ವೇದ ಪಂಡಿತನಾಗಿ ಒಳ್ಳೆಯ ಹೆಸರು ಮತ್ತು ಸಂಪಾದನೆ ಎರಡೂ ಮಾಡಿಕೊಳ್ಳುತ್ತಿದ್ದಾನೆ.

ಹೀಗೆ ನಮಗೆ ಯಾವಾಗ ಗುರುಗಳ ಸಾನಿಧ್ಯ, ಸಾಕ್ಷಾತ್ಕಾರ, ಜ್ಞಾನ ಲಭ್ಯವಾಗುತ್ತದೋ, ಇಲ್ಲವೋ ಯಾರೂ ಹೇಳಲು ಬರುವುದಿಲ್ಲ. ಜೀವನದಲ್ಲಿ ನಮಗೆ ಕಾಲಕಾಲಕ್ಕೆ ಹಲವಾರು ಗುರುಗಳ ಅವಶ್ಯಕತೆ ಬರುತ್ತದೆ. ಸರಿಯಾದ ಗುರು ಸಿಗುವವರೆಗೆ ಅರಸುವ ಕೆಲಸ ತಪ್ಪುವುದಿಲ್ಲ.

ಶ್ರೀ ಗುರುಭ್ಯೋ ನಮಃ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...