Homeಅಂಕಣಗಳುಥೂತ್ತೇರಿ | ಯಾಹೂಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ ಮನು ಬಳಿಗಾರ್‌...

ಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ ಮನು ಬಳಿಗಾರ್‌ – ಯಾಹೂ

- Advertisement -
- Advertisement -

ಈ ದೇಶದಲ್ಲಿರುವ ಜಾತ್ಯತೀತ ವೇದಿಕೆ ಎಂದರೆ ಅದು ಸಾಹಿತ್ಯ ಪರಿಷತ್. ವ್ಯಕ್ತಿ ಏನೇ ಆಗಿರಲಿ, ಆ ವೇದಿಕೆ ಹತ್ತಿದ ಮೇಲೆ ಜಾತಿ ಸೋಂಕಿನಿಂದ ದೂರವಿರಬೇಕು. ಏಕೆಂದರೆ, ಅದೊಂದು ಸರ್ವ ಜನಾಂಗದ ಶಾಂತಿಯ ತೋಟದ ತಾಣ. ಈಗ ಹಾಲಿ ಇರುವ ಮನುಬಳಿಗಾರ್ ಎಂಬ ವ್ಯಕ್ತಿ ಸರಕಾರದಲ್ಲಿ ನಡುಬಗ್ಗಿಸುವ ಕರ್ಮಚಾರಿಯಾಗಿದ್ದವನು. ಈಗಲೂ ಅದೇ ಕೆಲಸ ಮಾಡುತ್ತಿರುವುದಲ್ಲದೆ, ಸ್ವಜಾತಿ ಜನಗಳನ್ನ ಸಾಹಿತ್ಯ ಸಮ್ಮೇಳನಕ್ಕೆ ಕರೆದು “ವಸತಿವ್ಯವಸ್ಥೆ ಮಾಡುತ್ತೇನೆ ಬನ್ನಿ ಎನ್ನುತ್ತಿದ್ದಾನೆ”.

ಮನು ಬಳಿಗಾರ್‌

ಇದೆಲ್ಲಾ ಹಾಳುಬಿದ್ದು ಹೋಗಲಿ, ಶೃಂಗೇರಿಯಲ್ಲಿನ ಘಟನೆಗೆ ಪರೋಕ್ಷ ಕಾರಣನಾಗಿದ್ದಾನೆ. ಈತ ನಿಲ್ಲಬೇಕಾದದ್ದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷನ ಪರವಾಗಿ. ಆದರೆ ಮೂರು ದಿನದ ರಾಜಕಾರಣಿ ಪರವಾಗಿ ನಿಂತು ಸಾಹಿತ್ಯ ಪರಿಷತ್ ಮಾನವನ್ನೇ ಹರಾಜು ಹಾಕಿದ್ದಾನೆ. ಇನ್ನ ಈತನ ಟೀಮು ಆರಿಸಿರುವ ವೆಂಕಟೇಶಮೂರ್ತಿ ಎಂಬಾತ ಶೃಂಗೇರಿಯಲ್ಲಿನ ಘಟನೆ ಬಗ್ಗೆ ಏನು ಹೇಳುತ್ತೀರಿ ಎಂದರೆ, ಅದೆಲ್ಲೋ ದೂರದಲ್ಲಿ ನಡೆದ ವಿಷಯ. ಆ ಬಗ್ಗೆ ತಲೆಕೆಡಿಸಿಕೊಳ್ಳಲು ನನಗೆ ಪುರುಸೊತ್ತಿಲ್ಲ ಎಂದಿದ್ದಾರೆ. ಯಾಕೆಂದರೆ ಬೆಂಗಳೂರು ಬ್ರಾಹ್ಮಣರು ಮಾಡಿದ ಸನ್ಮಾನ ತೆಗೆದುಕೊಳ್ಳುವುದರಲ್ಲೇ ಮುಳುಗಿದ್ದ ಇವರು ಇನ್ನೇನು ತಾನೆ ಹೇಳಿಯಾರು ಥೂತ್ತೇರಿ..

* * *

ಕನ್ನಡನಾಡಿನಲ್ಲಿ ಹಿಂದೆಂದೂ ಸಂಭವಿಸದ ಪ್ರವಾಹ ಅನಾಹುತ ಸಂಭವಿಸಿದೆ. ಬದುಕನ್ನು ಕಳೆದುಕೊಂಡವರ ಗೋಳನ್ನ ತೋರದೆ ಸರಕಾರದ ಮರ‍್ಯಾದೆ ಕಾಪಾಡುವುದರಲ್ಲಿ ಮಗ್ನರಾಗಿರುವ ಮಾಧ್ಯಮದವರ ಹೊಟ್ಟೆಪಾಡು ಪ್ರವಾಹದವರಿಗಿಂತಲೂ ಭೀಕರವಾದದ್ದು. ಪ್ರವಾಹ ಸಂತ್ರಸ್ತರ ಕತೆಯೇನು ಎಂಬುದನ್ನು ಈ ನಾಡಿಗೆ ತೋರದೆ ಸಾಹಿತ್ಯ ಸಮ್ಮೇಳನ ಬಿತ್ತರಿಸಲು ತಯಾರಾಗಿರುವ ಮಾಧ್ಯಮದವರಿಗೂ, ಈ ಮನುಬಳಿಗಾರ್‌ಗೂ ಬಂಧುವಿದ್ದಂತೆ. ಅದಕ್ಕಾಗಿ ನಾಡು ಕೊಚ್ಚಿಹೋದರೇನು ಸಾಹಿತ್ಯ ಸಮ್ಮೇಳನ ಜರುಗದಿದ್ದರೆ ಅನಾವೃಷ್ಟಿ ಗ್ಯಾರಂಟಿ ಎಂಬಂತಾಡಿದ ಆತ ಸರಕಾರದಿಂದ ತನಗೆ ಬೇಕಿದ್ದಷ್ಟು ಹಣವನ್ನ ಬಿಡುಗಡೆ ಮಾಡಿಸಿಕೊಂಡಿದ್ದಾನೆ.

ಎಚ್‌. ಎಸ್‌ ವೆಂಕಟೇಶ ಮೂರ್ತಿ

ಕನ್ನಡನಾಡಿನಲ್ಲಿ ಸಾಹಿತ್ಯ ಪರಿಷತ್ ಉದ್ಭವವಾದಾಗಿನಿಂದಲೂ ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ಕನ್ನಡನಾಡಿನ ಸಾಹಿತಿಗಳ ಘನತೆಯನ್ನು ಎತ್ತಿ ಹಿಡಿಯುತ್ತ ಬಂದ ಈ ಸಂಸ್ಥೆಯ ಮಾನವನ್ನೇ ಹರಾಜುಹಾಕಿ ಮೌನವಾಗಿ ತಾನು ಮಾಡುವುದನ್ನೇ ಮಾಡುತ್ತಾ ಕನ್ನಡದ ಅಸಂಖ್ಯಾತ ಕವಿಗಳಲ್ಲಿ ಒಬ್ಬರಾದ ವೆಂಕಟೇಶ್‌ಮೂರ್ತಿಯನ್ನು ಮೆರೆಸಲು ಹೊರಟ ಮನುಬಳಿಗಾರ ಮುಂದೆ ಇನ್ನು ಸಮಸ್ಯೆಯಾಗುವುದರಲ್ಲಿ ಸಂಶಯವಿಲ್ಲವಂತಲ್ಲಾ ಥೂತ್ತೇರಿ.

* * *

ವೆಂಕಟೇಶ್‌ಮೂರ್ತಿಯಂತಹ ಸಾಧಾರಣ ಕವಿಯನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿಕೊಂಡು ಹತ್ತದಿನೈದು ಕೋಟಿಯನ್ನ ಉಡಾಯಿಸಲು ಹೊರಟಿರುವ ಕನ್ನಡಾಭಿವೃದ್ಧಿ ವಿಷಯವಾಗಿ ಸತ್ತಂತಿರುವ ಸಾಹಿತ್ಯ ಪರಿಷತ್ತಿನ ಹಟ ಹಾಳುಬಿದ್ದೋಗಲಿ ನಮ್ಮ ಸಂತೆ ಶಿವರದ ಭೈರಣ್ಣನ ಕಡೆಯಿಂದ ಸಂತೋಷಕರ ಸುದ್ದಿಯೊಂದು ಹೊರಬಿದ್ದಿದೆಯಲ್ಲಾ. ಅದೇನೆಂದರೆ ಅವರಿನ್ನು ಏನೂ ಬರೆಯುವುದಿಲ್ಲವಂತೆ. ಹಾಗೇ ಇದ್ದು ಸತ್ತು ಹೋಗುತ್ತಾರಂತೆ.

ಹಾಗೆ ನೋಡಿದರೆ ಭೈರಣ್ಣನ ಬರವಣಿಗೆ ಶ್ರಮ ಸಾರ್ಥಕವಾಗಿದೆ. ಅವರ ಆರಂಭದ ಕಾದಂಬರಿ ಧರ್ಮಶ್ರೀ ಈಗ ದೇಶದಲ್ಲೆಲ್ಲಾ ತನ್ನ ಅಜೆಂಡಾ ಮೆರೆಸಿಕೊಂಡು ಸಂಭ್ರಮಪಡುತ್ತಿದೆ. ಅದರ ಬಹುಮುಖ್ಯ ಕಾಳಜಿಯಾದ ರಾಮಮಂದಿರ ತಲೆ ಎತ್ತಲಿದೆ. ಹಿಂದೆ ಅವರ ನಿದ್ದೆ ಹಾಳು ಮಾಡಿದ್ದ ಬಾಬರಿ ಮಸೀದಿ ಇದ್ದ ಗುರುತು ನಾಶವಾಗಿದೆ. ಕಾಶ್ಮೀರಕ್ಕೆ ಕೊಳ್ಳಿ ಇಡಲಾಗಿದೆ. ಜೆಎನ್‌ಯು ವಿದ್ಯಾರ್ಥಿಗಳನ್ನ ಚಚ್ಚಿ ತಹಬಂದಿಗೆ ತರಲಾಗಿದೆ. ದೇಶದ ಪಠ್ಯಪುಸ್ತಕದೊಳಕ್ಕೆ ಪುರೋಹಿತಶಾಹಿ ಅಜೆಂಡಾಗಳನ್ನ ತುರುಕಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಎಎ ತರಲಾಗಿದೆ. ಈ ಸಂಗತಿ ಹಳೇ ಭೈರಪ್ಪನ ಬರವಣಿಗೆ ಬದುಕನ್ನ ಸಾರ್ಥಕಗೊಳಿಸಿವೆಯಂತಲ್ಲಾ ಥೂತ್ತೇರಿ.

* * *

ಸಾಹಿತಿಯಾದವನು ಚಳವಳಿಗಳಿಂದ ದೂರ ಇರಬೇಕು. ಚಳವಳಿಗಳ ಕಾಲಘಟ್ಟ ಕೃತಿ ರಚನೆಗೆ ಪ್ರೇರಕವಾಗಬಾರದು ಸಾಹಿತಿ ಯಾವುದಕ್ಕೂ ಗಂಟುಬೀಳಬಾರದೆಂದು ಹೇಳುವ ಭೈರಪ್ಪ ಸರಿಯಾಗಿ ಗಂಟುಬಿದ್ದದ್ದು ಜನಿವಾರಕ್ಕೆ. ಇವರ ದಾಟು ಕೃತಿಯಲ್ಲಿ ದಲಿತರ ಹುಡುಗಿಗೆ ಜನಿವಾರ ಬಿಗಿಯುತ್ತಾರೆ. ದಲಿತರು ದೇವಸ್ಥಾನಕ್ಕೆ ನುಗ್ಗಿದ್ದಕ್ಕೆ ಮೂರ್ಛೆ ಬೀಳಿಸುತ್ತಾರೆ. ವಿಧವೆ ಮರುಮದುವೆಯಾದರೆ ಬರೀ ಅಬಾಷನ್ ಎದುರಿಸಬೇಕಾಗುತ್ತದೆ ಇತ್ಯಾದಿ ಪುರೋಹಿತಶಾಹಿ ಅಜೆಂಡಾಗಳನ್ನ ತನ್ನ ಕೃತಿಗಳಲ್ಲಿ ತುರುಕಿರುವ ಭೈರಪ್ಪ, ಬರವಣಿಗೆ ಸಮಯದಲ್ಲಿ ಭೀಕರವಾಗಿ ಎದುರಿಸಿದ್ದು ನವ್ಯ ಲೇಖಕರನ್ನ. ಮತ್ತವರ ಟೀಕೆಯನ್ನ. ನವ್ಯರಿಗೆ ವಿರುದ್ಧ ದಿಕ್ಕಿನಲ್ಲಿ ಕಗ್ಗಹೊಸೆಯುತ್ತಿದ್ದ ಭೈರಪ್ಪ, ಗಮನಿಸಿದರೂ ಮರೆಮಾಚುವ ಸಂಗತಿ ಯಾವುದೆಂದರೆ ನವ್ಯರ ಕೃತಿಗಳನ್ನು ಈಗಲೂ ಉತ್ಸಾಹದಿಂದ ಓದಬಹುದು. ಬರುಬರುತ್ತಾ ಭೈರಪ್ಪ ಆವರಣದಂತಹ ಕೃತಿ ರಚಿಸಿದಾಗ ಪೂರ್ಣಚಂದ್ರ ತೇಜಸ್ವಿಯವರು “ಹೊಟ್ಟೆಗೆ ಅನ್ನ ತಿನ್ನುವ ನರಮನುಷ್ಯರಾರು ಇಂತಹ ಕೃತಿ ಹೇಳಿದ ಮಾತುಗಳು ತಮ್ಮನ್ನೇ ಆವರಿಸಿ ಬರೆಸಿಕೊಂಡು ಉಗಿಸಿದ್ದು ಇತಿಹಾಸ; ಇರಲಿ, 87 ವರ್ಷದ ಭೈರಣ್ಣನ ಕಡೆಯ ಕೃತಿ ಉತ್ತರ ಕಾಂಡ ಓದಿ ಒಂದು ನಮಸ್ಕಾರ ಹೊಡೆಯಬಹುದಲ್ಲಾ ಥೂತ್ತೇರಿ.

* * *

ವ್ಯಕ್ತಿ ಸತ್ಯ ಹೇಳುವಾಗ ಸದೃಢನಾಗಿರುತ್ತಾನೆ. ಆ ಸಮಯವೂ ಕಡಿಮೆ ಇರುತ್ತದೆ. ಅದೇ ಸುಳ್ಳು ಹೇಳುವಾಗ ಕಂಪಿಸುತ್ತಾನೆ. ಏಕೆಂದರೆ ಸುಳ್ಳುಗಳ ಸರಮಾಲೆಗೆ ಸದೃಢತೆ ಬರುವುದಿಲ್ಲ. ನಮ್ಮ ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞೆಯಾದ ಸಚಿವೆ ನಿರ್ಮಲ ಮೋದಿ ಟೀಮು ತಯಾರಿಸಿದ ಸುಳ್ಳು ಬಜೆಟ್ ಓದಿ ಓದಿ ಬಳಲಿ ಬೆಂಡಾಗಿಹೋದಳಲ್ಲಾ. ಆಕೆಯ ಬಳಲಿಕೆಗೆ ತಿರುವಳ್ಳುವರ್ ಕವಿತೆ ತಿಲಮಾತ್ರವೂ ಸ್ಫೂರ್ತಿ ನೀಡದಿದ್ದುದು ವಿಶೇಷ. ಏಕೆಂದರೆ ಕವಿತೆ ಸಾಲುಗಳು ಸುಳ್ಳನ್ನು ವಿಜೃಂಭಿಸಲಾರವು.

ಬಿಜೆಪಿಯಲ್ಲಿ ಭಾರತದ ಹಣಕಾಸಿನ ಸುಧಾರಣಾ ಪ್ರತಿಭೆಗಳೇ ಇಲ್ಲ. ತಲೆಗೆ ಮತದ ಅಮಲೇರಿದಾಗ ಪ್ರತಿಭೆ ಅಲ್ಲಿಂದ ಕಾಲ್ಕೀಳುತ್ತದೆ. ಅಡ್ಡಕಸುಬಿಗಳ ಕೈಗೆ ದೇಶಸಿಕ್ಕಾಗ ಕಸುಬುದಾರ ಕುಬೇರರು ದೇಶ ಕಬಳಿಸಲು ಸಂಚು ಹೂಡುತ್ತಾರೆ. ಅದರಂತೆ ಭಾರತದ ಸರಕಾರದ ಸಂಪತ್ತಿನ ಮೇಲೆ ಕಣ್ಣಿಟ್ಟ ಕುಬೇರರ ಸಂಚನ್ನ ಅರಿತ ಮೋದಿ ಎಲೈಸಿಯನ್ನ ಮಾರುವ ತೀರ್ಮಾನ ಮಾಡಿದ್ದಾನಂತಲ್ಲಾ. ಅಂತೂ ಜೀವವಿಮೆಗೂ ಸಂಚಕಾರ ತಂದ ಮೋದಿ ಇನ್ನೇನನ್ನ ಉಳಿಸಲಾರ ಎಂಬುದನ್ನು ಸಾಬೀತು ಮಾಡಿದ್ದಾನಲ್ಲಾ ಥೂತ್ತೇರಿ.

* * *

ನಮ್ಮ ಸುಂದರವಾದ ಕಡಲತೀರದಲ್ಲಿ ವಿಕೃತವಾಗಿ ಉದ್ಭವಿಸಿಬಂದಂತಿರುವ ಪುರೋಹಿತಶಾಹಿ ಪಿಂಡವೊಂದು, ಮತ್ತೆ ತನ್ನ ವಟಾರದಿಂದ ಗಾಂಧೀಜಿ ವಿರುದ್ಧ ವಿಕಾರವಾಗಿ ಕೂಡಿಕೊಂಡಿದೆ. ಇದರ ಅರಚಾಟ ನೋಡಿ ಬೇಸತ್ತಿದ್ದ ಮೋದಿ ಮಹಾತ್ಮ ಸಮಯ ಕಾದಿದ್ದು, ಇದಕ್ಕೆ ತಕ್ಕ ಶಾಸ್ತಿ ಎಂದರೆ ಮಂತ್ರಿಮಾಡದೆ ಇರುವುದು ಎಂದುಕೊಂಡು. ಅದರಂತೆ ಮಂತ್ರಿಗಿರಿ ಇಲ್ಲದೆ ಮನಗೆ ಕಳಿಸಿದಾಗಿನಿಂದಲೂ ಹೆಚ್ಚು ವಿಕೃತವಾಗಿ ಕೂಗಿದರೆ ಅದು ನಾಗಪುರಕ್ಕೆ ತಲುಪಿ, ಅಲ್ಲಿಂದ ಏನಾದರೂ ಸಂದೇಶ ಚೆಡ್ಡಿಗಳ ಹೈಕಮಾಂಡು ತಲುಪಿ, ಯಾವುದಾದರೂ ಕಿತ್ತುಹೋದ ಖಾತೆ ಸಿಗಬಹುದೆಂದು ಕೂಗುತ್ತಿದೆಯಂತಲ್ಲಾ.

ಇದರ ಹುನ್ನಾರಕ್ಕೆ ಪ್ರತಿಯಾಗಿ, ಬಸನಗೌಡ ಯತ್ನಾಳ್ ಎಂಬ ಎಮ್ಮೆ ಮುಕಳಿ ಕೊಳೆದು ಸುಸ್ತಾಗಿರುವ ವ್ಯಕ್ತಿಯ ಜೊತೆಗೆ ತೀಟೆ ರವಿ, ರೇಣುಕಾದೇವಿ ಭಕ್ತನಾದ ರೇಣುಕಾಚಾರಿ ಇವರೆಲ್ಲಾ ಸೇರಿಕೊಂಡಿದ್ದಾರಂತಲ್ಲಾ ಮುಖ್ಯವಾಗಿ ಇವರ ಉದ್ದೇಶ ಇಷ್ಟೆ. ಎಲ್ಲರನ್ನ ಮೀರಿಸಿ ಮತಾಂಧತೆಯಿಂದ ಒರಲುವುದು. ಆ ನಂತರ ಮೆಂಟಲಾಸ್ಪಿಟಲ್ ಸೇರುವುದೇ ಗುರಿಯಾಗಿದೆಯಂತಲ್ಲಾ ಥೂತ್ತೇರಿ

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...