Homeಪುಸ್ತಕ ವಿಮರ್ಶೆಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

- Advertisement -
- Advertisement -

ಗುರುಪ್ರಸಾದ್ ಕಂಟಲಗೆರೆಯವರು ಮೂಲತಃ ಕವಿ-ಕತೆಗಾರ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಣೆಯಾದ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ಪ್ರಕಟವಾಗುವುದರ ಮೂಲಕ ಒಬ್ಬ ಸಂಶೋಧಕ, ವಿಮರ್ಶಕನಾಗಿ ಈ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಗುರುಪ್ರಸಾದ್ ದಲಿತ ಸಾಹಿತ್ಯವನ್ನು ಮರುವ್ಯಾಖ್ಯಾನ ಮಾಡುವುದನ್ನು ಗೌಣಗೊಳಿಸಿ, ನೆಲಮೂಲದವರಾದ ಮಾದಿಗ ಸಮುದಾಯವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಮೌಖಿಕವಾಗಿ ದೊರೆಯುವ ಸಂಕಥನಗಳನ್ನು ಸಂಗ್ರಹಿಸಿ, ಅವನ್ನು ಸಮಕಾಲೀನ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಹೇಗೆ ಮುಖಾಮುಖಿಯಾಗಬಲ್ಲವು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ದಲಿತರ ಸಾಂಸ್ಕೃತಿಕ ಲೋಕದ ಕಥನಗಳನ್ನು ಜನಪದ ವಾಙ್ಮಯದಲ್ಲಿರುವ, ಅದರಲ್ಲೂ ಮಾದಾರ ಸಮುದಾಯದಲ್ಲಿರುವ ಮತ್ತು ಜನಪದ ಹಾಗೂ ಸಾಂಸ್ಕೃತಿಕ ಆಚರಣೆಗಳ ಒಳಗಿರುವ ದಲಿತರ ಅಸ್ಮಿತೆಗಳನ್ನು ಇತ್ತೀಚಿನ ದಿನಗಳಲ್ಲಿ ತೀವ್ರತರವಾಗಿ ಶೋಧಿಸುವ ಕೆಲಸ ಈಗಿನ ಯುವ ಸಂಶೋಧಕರಿAದ ಬಹಳ ಅರ್ಥಪೂರ್ಣವಾಗಿ ಜರುಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ರೂಪುಗೊಂಡ ಕೃತಿಯೇ ಕಂಟಲಗೆರೆ ಗುರುಪ್ರಸಾದ್ ಅವರ ‘ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಲಿತ ಅಧ್ಯಯನಗಳ ಅಡಿಯಲ್ಲಿ ಇದು ಪ್ರಕಟವಾಗಿದೆ. ತುಮಕೂರು ಜಿಲ್ಲೆಯ ದಲಿತರ ಬದುಕಿನ ಪರಂಪರೆಯ ಎಲ್ಲಾ ಮಗ್ಗುಲುಗಳನ್ನು ತಳಸ್ಪರ್ಶಿಯವಾಗಿ ಶೋಧಿಸಿ ಕಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಆಕರ ಕೃತಿಯಾಗಿ ನಿಲ್ಲಬಲ್ಲದು.

‘ದಲಿತ’ ಪದ, ದಲಿತರ ಉಗಮ ವಿಕಾಸ, ಬದುಕಿನ ವಿನ್ಯಾಸ, ದಲಿತ ಚಳವಳಿಯಲ್ಲಿ ಕಂಡುಂಡ ವೈಫಲ್ಯಗಳು-ಸಾಫಲ್ಯಗಳು, ‘ದಲಿತ’ ಪದ ಇಂದು ವಿಸ್ತೃತಗೊಳ್ಳುತ್ತಿರುವ ಆರ್ದ್ರತೆ, ಅವುಗಳಲ್ಲೇ ಮುಂದುವರೆದಿರುವ- ಹಿಂದುಳಿದಿರುವ(ಸ್ಪೃಶ್ಯ-ಅಸ್ಪೃಶ್ಯ) ಜಾತಿಗಳಲ್ಲಿ ತಮ್ಮ ತಮ್ಮ ಐಡೆಂಟಿಗಳ ಹುಡುಕಾಟ, ಅಸ್ತಿತ್ವದ ಪ್ರಶ್ನೆ ಎದುರಾದಾಗ ರಾಜಕೀಯಾತ್ಮಕ ಮೇಲಾಟಗಳು ಜರುಗಿ, ಮತ್ತೊಂದು ಜಾತಿಯ ಮೇಲೆ ಸಣ್ಣದಾದ ಅಸೂಯೆ- ಸಂಘ಼ರ್ಷದಿಂದಾಗಿ ಆಗುತ್ತಿರುವ ಮೂಲದ ಆಶಯ-ಧ್ಯೇಯೋದ್ದೇಶಗಳಿಗೆ ಬಹು ದೊಡ್ಡ ಪೆಟ್ಟಾಗಿರುವುದನ್ನು ಅದರಲ್ಲೇ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಚಿಂತಕರು ವಿಷಾದವನ್ನು ತಳೆಯುತ್ತಿರುವುದನ್ನು ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಹೋರಾಟದ ಸಾಂಘಿಕ ಫಲದಲ್ಲಿ ಒಂದೆರಡು ಜಾತಿಗಳು ಮಾತ್ರ ಲಾಭ ಹೊಂದಿವೆ ಎಂಬುದನ್ನು ಮನಗಂಡ ಯುವಪೀಳಿಗೆ ಒಳಮೀಸಲಾತಿ ಮತ್ತು ಈಗಾಗಲೇ ಅದರ ನಷ್ಟದಿಂದ ಅರಿವಿರುವ ಕಾರಣದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ, ಸರ್ಕಾರದ ಮಡಿಲಲ್ಲಿದ್ದರೂ ಅದು ಜೀವಪಡೆಯದೇ ಅನಾಥವಾಗುವುದರ ಜೊತೆಗೆ ದೀರ್ಘದಿಂದ ಶೋಷಿತ ಜನಾಂಗ ಮತ್ತೆ ನೋವಿಗೆ ತಳ್ಳಿರುವುದು ಆಘಾತ ತರಿಸಿದೆ. ಇದರ ಹೋರಾಟಗಳು ನಡೆಯುತ್ತಿದ್ದರೂ ಇದೊಂದು ರಾಜಕೀಯದ ದಾಳವಾಗಿರುವುದಂತೂ ಸತ್ಯವೆಂಬುದನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.

ಗುರುಪ್ರಸಾದ್ ಅವರು ಸಮುದಾಯದಲ್ಲಿ ಮೌಖಿಕವಾಗಿರುವ ದಲಿತರ ಸಾಂಸ್ಕೃತಿಕ ಸಂಕಥನಗಳನ್ನು ಕ್ಷೇತ್ರಕಾರ್ಯದ ಮೂಲಕ ಪ್ರಶ್ನಾವಳಿ ರೂಪಿಸಿಕೊಂಡು ವಕ್ತೃ-ಹಾಡುಗಾರರೊಟ್ಟಿಗೆ ಸಂವಾದಿಸಿ, ತಮಗೆ ಬೇಕಾದುದನ್ನು ಪಡೆದು, ಕಳೆದುಹೋಗುವುದನ್ನು ಅಕ್ಷರರೂಪಕ್ಕೆ ತಂದಿರುವುದು ಮೆಚ್ಚತಕ್ಕದ್ದು. ಮಾದಿಗರ ಸೃಷ್ಟಿಮೂಲದ ಸಂಕಥನಗಳನ್ನು ಭಿನ್ನ ಪ್ರದೇಶಗಳಲ್ಲಿ ದೊರೆತಿರುವ ಭಿನ್ನಪಠ್ಯಗಳನ್ನು ಶೋಧಿಸಿರುವ ಗುರುಪ್ರಸಾದ್ ಚೌಡಿಕೆಯಲ್ಲಯ್ಯ ಹೇಳಿದ ಸಂಕಥನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ದಕ್ಕಲಿಗರು ಕರ್ತೃ ಜಾನಕಲ್ ರಾಜಣ್ಣನವರು ಹೇಳಿದ ಸೃಷ್ಟಿಮೂಲದ ಬಗೆಗೆ ಇರುವ ವ್ಯತ್ಯಾಸವನ್ನು ಗುರುತಿಸುವುದನ್ನು ಕೃತಿಯಲ್ಲಿ ಕಾಣಬಹುದು.

‘ದಲಿತ’ ಪದದ ಒಳಗಿರುವ ಸಿಕ್ಕು, ಅದರೊಳಗೆ ಪಡೆಯುತ್ತಿರುವ ಸೌಲಭ್ಯಗಳು, ನಿಜವಾದ ದಲಿತರು ಯಾರು? ದಲಿತತ್ವ ಎಂದರೆ ಏನು? ಎಂಬುದನ್ನು ತಮ್ಮ ಅಭಿಪ್ರಾಯದೊಂದಿಗೆ ಅಂಬೇಡ್ಕರ್, ಕೆ.ಬಿ. ಸಿದ್ದಯ್ಯ ಅವರ ಆಲೋಚನೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ದಲಿತ ಅಂದರೆ ಡಿಪ್ರೆಸ್ಡ್ ಅನ್ನುವ ಇಂಗ್ಲಿಷ್ ಪದವಿದ್ದು, ಅದನ್ನೆ ತುಳಿತಕ್ಕೆ ಒಳಗಾದವರೆಲ್ಲರೂ ಸಮಾನ ದುಃಖಿಗಳೆಂಬುದನ್ನು ಚರ್ಚಿಸಿದ್ದಾರೆ. ದಲಿತರಲ್ಲಿ ಸ್ಪೃಶ್ಯ ಅಸ್ಪೃಶ್ಯರು ನಿರ್ಮಾಣಗೊಂಡು ಅದರ ಲಾಭವನ್ನು ಅಧಿಕವಾಗಿ ಸ್ಪೃಶ್ಯರೇ ಪಡೆಯುವ ಆತಂಕಕಾರಿ ಚಿತ್ರಣವನ್ನು ವಿಶ್ಲೇಶಿಸುವುದಾಗಿದೆ. ಆದರೆ ಇಂದು 101 ಜಾತಿಗಳ ಸಾಂಘಿಕ ಸಂಘಟನೆಯ ನೆಲೆಯೊಳಗೆ ಒಡಕು ಬಂದು ತಮ್ಮ ಅಸ್ಮಿತೆಗಳ ಹುಡುಕಾಟ ಶುರುವಾಗಿದೆ.

ಮೂಲದ ಪುರಾಣ ಸಂಕಥನಗಳು ತಿರುಚುವ ಪ್ರಯತ್ನ ನಿರಂತರವಾಗಿ ನಡೆದಿದೆ. ಸಂಕಥನಗಳಲ್ಲಿ ಭಿನ್ನ ಪಠ್ಯಗಳು ಹೇಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ನಿಂತು ಮಾತಾಡುತ್ತವೆಂಬುದನ್ನು ಗುರುಪ್ರಸಾದ್ ಗುರುತಿಸಿದ್ದಾರೆ. ನೆಲಮೂಲದವರು ಯರ‍್ಯಾರೆಂಬುದು ಜಿಜ್ಞಾಸೆ ವ್ಯಕ್ತವಾಗುತ್ತಿರುವ ಇದೇ ಸಂದರ್ಭದಲ್ಲಿ ಆದಿಜಾಂಬವರು, ಯಾದವರು ನೆಲ ಸಂಸ್ಕೃತಿಯನ್ನು ಸಾರುವ ವಕ್ತಾರರೆನಿಸಿದ್ದಾರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ಕುರುಬರು, ಕುಂಚಿಟಿಗರು, ಮ್ಯಾಸಬೇಡರು ಕುಲ(ಪಂಗಡ)ಗಳಲ್ಲಿ ಹಲವು ಸಾಮ್ಯತೆಗಳಿವೆಯೆಂದರೆ ಈ ಸಮುದಾಯಗಳೆಲ್ಲವೂ ಈ ನೆಲಮೂಲದವರು, ಒಂದೇ ಸಂಸ್ಕೃತಿಯ ವಕ್ತಾರರೆಂಬುದನ್ನು ಅರಿಯಬಹುದು.

ಕೃತಿಯ ಎರಡನೆಯ ಹಂತದಲ್ಲಿ ಸಂಶೋಧಕರು ಆರು ದಲಿತರೊಟ್ಟಿಗೆ ಸಂವಾದಿಸುತ್ತಾರೆ. ಇವರೆಲ್ಲರೂ ಭಿನ್ನ ನೆಲೆಯಲ್ಲಿ ಬದುಕುತ್ತಿರುವವರು, ಆಲೋಚಿಸುತ್ತಿರುವವರು. ಲೇಖಕರ ಮೂಲ ಆಶಯವಿರುವುದು ಗ್ರಾಮ್ಯದ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ಹೋರಾಟಗಾರರಲ್ಲಿ, ಚಿಂತಕರಲ್ಲಿ ದಲಿತತ್ವದ ನಿಲುವು ಹೇಗಿದೆ, ಅದರಲ್ಲೂ ಮಾದಿಗರ ಬದುಕಿಗೆ ಹೊಸ ಆಯಾಮವನ್ನು ಕೊಡುವ ದಾರಿ ಯಾವುದೆಂಬುದನ್ನು ಚರ್ಚಿಸುವುದು ಇಲ್ಲಿ ಮುಖ್ಯವಾಗಿದೆ. ಅವರ ಎಲ್ಲಾ ನಿಲುವುಗಳನ್ನು ಒಂದೆಡೆ ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ.

‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿಯು ಮೇಲ್ನೋಟದಲ್ಲಿ ಹಲವು ಹಂತಗಳಲ್ಲಿ ರೂಪುಗೊಂಡಿದೆ. ಅವಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಪುರಾಣದ ಕಥನಗಳಲ್ಲಿ ಮಾದಿಗರ ಪ್ರಾಮುಖ್ಯತೆ ಹಾಗೂ ಪರಂಪರೆ ಹೇಗೆ ನಯವಾಗಿ ಅದನ್ನು ವಂಚಿಸಿದೆಂಬುದನ್ನು ಗ್ರಹಿಸುವುದು.

2. ಕಂಚಿ ಫರ್ಮಾನ್‌ನಲ್ಲಿರುವ ಎಡಗೈ ಜನಾಂಗಕ್ಕಿರುವ ಸಾಂಸ್ಕೃತಿಕ ಬಿರುದಾವಳಿಗಳು, ಅಲ್ಲಿಯೂ

ಬಲಗೈಯೊಂದಿಗೆ ಸಂಘರ್ಷವಾದರೂ ಪೂರ್ವದ ಶ್ರೇಷ್ಠತೆಯಿಂದ ಮತ್ತೆ ಪಾರಮ್ಯ ಮೆರೆಯುವಿಕೆ.

3. ದಲಿತರ ಪ್ರಸ್ತ್ತುತ ಬದುಕಿನ ಆಯಾಮಗಳು, ‘ದಲಿತ’ ಪದದ ಮರುಚಿಂತನೆಯಲ್ಲಿ ಒಳಮೀಸಲಾತಿ

ಕೂಗು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ.

4. ಸಾಹಿತ್ಯದ ಚರಿತ್ರೆಯಲ್ಲಿ ಮಾದಿಗರನ್ನು ಗೌಣಗೊಳಿಸಿ ಮಾಡಿದ ಅನ್ಯಾಯದ ವಿರುದ್ಧ ದನಿಯೆತ್ತುವಿಕೆ.

5. ದಲಿತರ ಭವಿಷ್ಯ ಹೇಗಿರಬೇಕು ಎಂಬ ಪರ್ಯಾಯ ದಲಿತ ಚಿಂತನೆಯಿದೆ.

6. ದಲಿತತನದ ಒಳಗಿರುವ ಭಿನ್ನ ಆಯಾಮಗಳು, ಜಾತಿಯೆಂಬ ಪದದ ಐಡೆಂಟಿಟಿಯ ಒತ್ತಾಸೆಗಳು,

ಅಸ್ಮಿತೆಯ ಹುಡುಕಾಟಗಳು.

ಗುರುಪ್ರಸಾದ್ ಅವರು ದಲಿತರ ಬದುಕಿನ ಸಮಗ್ರ ಚಿತ್ರಣದ ಬಗೆಗೆ ಆಲೋಚಿಸುತ್ತಲೇ, ಸಮಕಾಲೀನ ಬಿಕ್ಕಟ್ಟುಗಳ ಕಡೆಗೂ ಹೊರಳಿಕೊಳ್ಳುವುದರಿಂದ ಈ ಕೃತಿಯು ಎಲ್ಲಾ ಕಾಲಕ್ಕೂ ಮುಖಾಮುಖಿಯಾಗುವ ಸಾಮರ್ಥ್ಯವೊಂದಿದೆ. ಕೃತಿಯ ಸತ್ವ ಇರುವುದು ಪರಂಪರೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮೌಖಿಕ ಕಥನಗಳ ಸಂಗ್ರಹ ಇದೆಯಲ್ಲ ಅದು ಇದುವರೆವಿಗೂ ಯಾರಿಂದಲೂ ಆಗದ್ದನ್ನು ಸಾಧಿಸಿದಂತಿದೆ. ಸಮುದಾಯದಲ್ಲಿ ಸಮೃದ್ಧವಾಗಿರುವ ಮೌಖಿಕ ಕಥನಗಳನ್ನು ಈಗ ಹೇಳುವ ಕೊಂಡಿಗಳು ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ದಲಿತರಿಗೆ, ಅದರಲ್ಲೂ ‘ಮಾದಿಗ’ ಜನಾಂಗಕ್ಕೆ ಕೃತಿ ಬೈಬಲ್ ಎಂದೇ ಹೇಳಬಹುದು.

-ಡಾ.ಕೆ.ವಿ.ಮುದ್ದವೀರಪ್ಪ, ತುಮಕೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...