Homeಪುಸ್ತಕ ವಿಮರ್ಶೆಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

- Advertisement -
- Advertisement -

ಗುರುಪ್ರಸಾದ್ ಕಂಟಲಗೆರೆಯವರು ಮೂಲತಃ ಕವಿ-ಕತೆಗಾರ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಣೆಯಾದ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ಪ್ರಕಟವಾಗುವುದರ ಮೂಲಕ ಒಬ್ಬ ಸಂಶೋಧಕ, ವಿಮರ್ಶಕನಾಗಿ ಈ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಗುರುಪ್ರಸಾದ್ ದಲಿತ ಸಾಹಿತ್ಯವನ್ನು ಮರುವ್ಯಾಖ್ಯಾನ ಮಾಡುವುದನ್ನು ಗೌಣಗೊಳಿಸಿ, ನೆಲಮೂಲದವರಾದ ಮಾದಿಗ ಸಮುದಾಯವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಮೌಖಿಕವಾಗಿ ದೊರೆಯುವ ಸಂಕಥನಗಳನ್ನು ಸಂಗ್ರಹಿಸಿ, ಅವನ್ನು ಸಮಕಾಲೀನ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಹೇಗೆ ಮುಖಾಮುಖಿಯಾಗಬಲ್ಲವು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ದಲಿತರ ಸಾಂಸ್ಕೃತಿಕ ಲೋಕದ ಕಥನಗಳನ್ನು ಜನಪದ ವಾಙ್ಮಯದಲ್ಲಿರುವ, ಅದರಲ್ಲೂ ಮಾದಾರ ಸಮುದಾಯದಲ್ಲಿರುವ ಮತ್ತು ಜನಪದ ಹಾಗೂ ಸಾಂಸ್ಕೃತಿಕ ಆಚರಣೆಗಳ ಒಳಗಿರುವ ದಲಿತರ ಅಸ್ಮಿತೆಗಳನ್ನು ಇತ್ತೀಚಿನ ದಿನಗಳಲ್ಲಿ ತೀವ್ರತರವಾಗಿ ಶೋಧಿಸುವ ಕೆಲಸ ಈಗಿನ ಯುವ ಸಂಶೋಧಕರಿAದ ಬಹಳ ಅರ್ಥಪೂರ್ಣವಾಗಿ ಜರುಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ರೂಪುಗೊಂಡ ಕೃತಿಯೇ ಕಂಟಲಗೆರೆ ಗುರುಪ್ರಸಾದ್ ಅವರ ‘ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಲಿತ ಅಧ್ಯಯನಗಳ ಅಡಿಯಲ್ಲಿ ಇದು ಪ್ರಕಟವಾಗಿದೆ. ತುಮಕೂರು ಜಿಲ್ಲೆಯ ದಲಿತರ ಬದುಕಿನ ಪರಂಪರೆಯ ಎಲ್ಲಾ ಮಗ್ಗುಲುಗಳನ್ನು ತಳಸ್ಪರ್ಶಿಯವಾಗಿ ಶೋಧಿಸಿ ಕಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಆಕರ ಕೃತಿಯಾಗಿ ನಿಲ್ಲಬಲ್ಲದು.

‘ದಲಿತ’ ಪದ, ದಲಿತರ ಉಗಮ ವಿಕಾಸ, ಬದುಕಿನ ವಿನ್ಯಾಸ, ದಲಿತ ಚಳವಳಿಯಲ್ಲಿ ಕಂಡುಂಡ ವೈಫಲ್ಯಗಳು-ಸಾಫಲ್ಯಗಳು, ‘ದಲಿತ’ ಪದ ಇಂದು ವಿಸ್ತೃತಗೊಳ್ಳುತ್ತಿರುವ ಆರ್ದ್ರತೆ, ಅವುಗಳಲ್ಲೇ ಮುಂದುವರೆದಿರುವ- ಹಿಂದುಳಿದಿರುವ(ಸ್ಪೃಶ್ಯ-ಅಸ್ಪೃಶ್ಯ) ಜಾತಿಗಳಲ್ಲಿ ತಮ್ಮ ತಮ್ಮ ಐಡೆಂಟಿಗಳ ಹುಡುಕಾಟ, ಅಸ್ತಿತ್ವದ ಪ್ರಶ್ನೆ ಎದುರಾದಾಗ ರಾಜಕೀಯಾತ್ಮಕ ಮೇಲಾಟಗಳು ಜರುಗಿ, ಮತ್ತೊಂದು ಜಾತಿಯ ಮೇಲೆ ಸಣ್ಣದಾದ ಅಸೂಯೆ- ಸಂಘ಼ರ್ಷದಿಂದಾಗಿ ಆಗುತ್ತಿರುವ ಮೂಲದ ಆಶಯ-ಧ್ಯೇಯೋದ್ದೇಶಗಳಿಗೆ ಬಹು ದೊಡ್ಡ ಪೆಟ್ಟಾಗಿರುವುದನ್ನು ಅದರಲ್ಲೇ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಚಿಂತಕರು ವಿಷಾದವನ್ನು ತಳೆಯುತ್ತಿರುವುದನ್ನು ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಹೋರಾಟದ ಸಾಂಘಿಕ ಫಲದಲ್ಲಿ ಒಂದೆರಡು ಜಾತಿಗಳು ಮಾತ್ರ ಲಾಭ ಹೊಂದಿವೆ ಎಂಬುದನ್ನು ಮನಗಂಡ ಯುವಪೀಳಿಗೆ ಒಳಮೀಸಲಾತಿ ಮತ್ತು ಈಗಾಗಲೇ ಅದರ ನಷ್ಟದಿಂದ ಅರಿವಿರುವ ಕಾರಣದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ, ಸರ್ಕಾರದ ಮಡಿಲಲ್ಲಿದ್ದರೂ ಅದು ಜೀವಪಡೆಯದೇ ಅನಾಥವಾಗುವುದರ ಜೊತೆಗೆ ದೀರ್ಘದಿಂದ ಶೋಷಿತ ಜನಾಂಗ ಮತ್ತೆ ನೋವಿಗೆ ತಳ್ಳಿರುವುದು ಆಘಾತ ತರಿಸಿದೆ. ಇದರ ಹೋರಾಟಗಳು ನಡೆಯುತ್ತಿದ್ದರೂ ಇದೊಂದು ರಾಜಕೀಯದ ದಾಳವಾಗಿರುವುದಂತೂ ಸತ್ಯವೆಂಬುದನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.

ಗುರುಪ್ರಸಾದ್ ಅವರು ಸಮುದಾಯದಲ್ಲಿ ಮೌಖಿಕವಾಗಿರುವ ದಲಿತರ ಸಾಂಸ್ಕೃತಿಕ ಸಂಕಥನಗಳನ್ನು ಕ್ಷೇತ್ರಕಾರ್ಯದ ಮೂಲಕ ಪ್ರಶ್ನಾವಳಿ ರೂಪಿಸಿಕೊಂಡು ವಕ್ತೃ-ಹಾಡುಗಾರರೊಟ್ಟಿಗೆ ಸಂವಾದಿಸಿ, ತಮಗೆ ಬೇಕಾದುದನ್ನು ಪಡೆದು, ಕಳೆದುಹೋಗುವುದನ್ನು ಅಕ್ಷರರೂಪಕ್ಕೆ ತಂದಿರುವುದು ಮೆಚ್ಚತಕ್ಕದ್ದು. ಮಾದಿಗರ ಸೃಷ್ಟಿಮೂಲದ ಸಂಕಥನಗಳನ್ನು ಭಿನ್ನ ಪ್ರದೇಶಗಳಲ್ಲಿ ದೊರೆತಿರುವ ಭಿನ್ನಪಠ್ಯಗಳನ್ನು ಶೋಧಿಸಿರುವ ಗುರುಪ್ರಸಾದ್ ಚೌಡಿಕೆಯಲ್ಲಯ್ಯ ಹೇಳಿದ ಸಂಕಥನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ದಕ್ಕಲಿಗರು ಕರ್ತೃ ಜಾನಕಲ್ ರಾಜಣ್ಣನವರು ಹೇಳಿದ ಸೃಷ್ಟಿಮೂಲದ ಬಗೆಗೆ ಇರುವ ವ್ಯತ್ಯಾಸವನ್ನು ಗುರುತಿಸುವುದನ್ನು ಕೃತಿಯಲ್ಲಿ ಕಾಣಬಹುದು.

‘ದಲಿತ’ ಪದದ ಒಳಗಿರುವ ಸಿಕ್ಕು, ಅದರೊಳಗೆ ಪಡೆಯುತ್ತಿರುವ ಸೌಲಭ್ಯಗಳು, ನಿಜವಾದ ದಲಿತರು ಯಾರು? ದಲಿತತ್ವ ಎಂದರೆ ಏನು? ಎಂಬುದನ್ನು ತಮ್ಮ ಅಭಿಪ್ರಾಯದೊಂದಿಗೆ ಅಂಬೇಡ್ಕರ್, ಕೆ.ಬಿ. ಸಿದ್ದಯ್ಯ ಅವರ ಆಲೋಚನೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ದಲಿತ ಅಂದರೆ ಡಿಪ್ರೆಸ್ಡ್ ಅನ್ನುವ ಇಂಗ್ಲಿಷ್ ಪದವಿದ್ದು, ಅದನ್ನೆ ತುಳಿತಕ್ಕೆ ಒಳಗಾದವರೆಲ್ಲರೂ ಸಮಾನ ದುಃಖಿಗಳೆಂಬುದನ್ನು ಚರ್ಚಿಸಿದ್ದಾರೆ. ದಲಿತರಲ್ಲಿ ಸ್ಪೃಶ್ಯ ಅಸ್ಪೃಶ್ಯರು ನಿರ್ಮಾಣಗೊಂಡು ಅದರ ಲಾಭವನ್ನು ಅಧಿಕವಾಗಿ ಸ್ಪೃಶ್ಯರೇ ಪಡೆಯುವ ಆತಂಕಕಾರಿ ಚಿತ್ರಣವನ್ನು ವಿಶ್ಲೇಶಿಸುವುದಾಗಿದೆ. ಆದರೆ ಇಂದು 101 ಜಾತಿಗಳ ಸಾಂಘಿಕ ಸಂಘಟನೆಯ ನೆಲೆಯೊಳಗೆ ಒಡಕು ಬಂದು ತಮ್ಮ ಅಸ್ಮಿತೆಗಳ ಹುಡುಕಾಟ ಶುರುವಾಗಿದೆ.

ಮೂಲದ ಪುರಾಣ ಸಂಕಥನಗಳು ತಿರುಚುವ ಪ್ರಯತ್ನ ನಿರಂತರವಾಗಿ ನಡೆದಿದೆ. ಸಂಕಥನಗಳಲ್ಲಿ ಭಿನ್ನ ಪಠ್ಯಗಳು ಹೇಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ನಿಂತು ಮಾತಾಡುತ್ತವೆಂಬುದನ್ನು ಗುರುಪ್ರಸಾದ್ ಗುರುತಿಸಿದ್ದಾರೆ. ನೆಲಮೂಲದವರು ಯರ‍್ಯಾರೆಂಬುದು ಜಿಜ್ಞಾಸೆ ವ್ಯಕ್ತವಾಗುತ್ತಿರುವ ಇದೇ ಸಂದರ್ಭದಲ್ಲಿ ಆದಿಜಾಂಬವರು, ಯಾದವರು ನೆಲ ಸಂಸ್ಕೃತಿಯನ್ನು ಸಾರುವ ವಕ್ತಾರರೆನಿಸಿದ್ದಾರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ಕುರುಬರು, ಕುಂಚಿಟಿಗರು, ಮ್ಯಾಸಬೇಡರು ಕುಲ(ಪಂಗಡ)ಗಳಲ್ಲಿ ಹಲವು ಸಾಮ್ಯತೆಗಳಿವೆಯೆಂದರೆ ಈ ಸಮುದಾಯಗಳೆಲ್ಲವೂ ಈ ನೆಲಮೂಲದವರು, ಒಂದೇ ಸಂಸ್ಕೃತಿಯ ವಕ್ತಾರರೆಂಬುದನ್ನು ಅರಿಯಬಹುದು.

ಕೃತಿಯ ಎರಡನೆಯ ಹಂತದಲ್ಲಿ ಸಂಶೋಧಕರು ಆರು ದಲಿತರೊಟ್ಟಿಗೆ ಸಂವಾದಿಸುತ್ತಾರೆ. ಇವರೆಲ್ಲರೂ ಭಿನ್ನ ನೆಲೆಯಲ್ಲಿ ಬದುಕುತ್ತಿರುವವರು, ಆಲೋಚಿಸುತ್ತಿರುವವರು. ಲೇಖಕರ ಮೂಲ ಆಶಯವಿರುವುದು ಗ್ರಾಮ್ಯದ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ಹೋರಾಟಗಾರರಲ್ಲಿ, ಚಿಂತಕರಲ್ಲಿ ದಲಿತತ್ವದ ನಿಲುವು ಹೇಗಿದೆ, ಅದರಲ್ಲೂ ಮಾದಿಗರ ಬದುಕಿಗೆ ಹೊಸ ಆಯಾಮವನ್ನು ಕೊಡುವ ದಾರಿ ಯಾವುದೆಂಬುದನ್ನು ಚರ್ಚಿಸುವುದು ಇಲ್ಲಿ ಮುಖ್ಯವಾಗಿದೆ. ಅವರ ಎಲ್ಲಾ ನಿಲುವುಗಳನ್ನು ಒಂದೆಡೆ ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ.

‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿಯು ಮೇಲ್ನೋಟದಲ್ಲಿ ಹಲವು ಹಂತಗಳಲ್ಲಿ ರೂಪುಗೊಂಡಿದೆ. ಅವಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಪುರಾಣದ ಕಥನಗಳಲ್ಲಿ ಮಾದಿಗರ ಪ್ರಾಮುಖ್ಯತೆ ಹಾಗೂ ಪರಂಪರೆ ಹೇಗೆ ನಯವಾಗಿ ಅದನ್ನು ವಂಚಿಸಿದೆಂಬುದನ್ನು ಗ್ರಹಿಸುವುದು.

2. ಕಂಚಿ ಫರ್ಮಾನ್‌ನಲ್ಲಿರುವ ಎಡಗೈ ಜನಾಂಗಕ್ಕಿರುವ ಸಾಂಸ್ಕೃತಿಕ ಬಿರುದಾವಳಿಗಳು, ಅಲ್ಲಿಯೂ

ಬಲಗೈಯೊಂದಿಗೆ ಸಂಘರ್ಷವಾದರೂ ಪೂರ್ವದ ಶ್ರೇಷ್ಠತೆಯಿಂದ ಮತ್ತೆ ಪಾರಮ್ಯ ಮೆರೆಯುವಿಕೆ.

3. ದಲಿತರ ಪ್ರಸ್ತ್ತುತ ಬದುಕಿನ ಆಯಾಮಗಳು, ‘ದಲಿತ’ ಪದದ ಮರುಚಿಂತನೆಯಲ್ಲಿ ಒಳಮೀಸಲಾತಿ

ಕೂಗು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ.

4. ಸಾಹಿತ್ಯದ ಚರಿತ್ರೆಯಲ್ಲಿ ಮಾದಿಗರನ್ನು ಗೌಣಗೊಳಿಸಿ ಮಾಡಿದ ಅನ್ಯಾಯದ ವಿರುದ್ಧ ದನಿಯೆತ್ತುವಿಕೆ.

5. ದಲಿತರ ಭವಿಷ್ಯ ಹೇಗಿರಬೇಕು ಎಂಬ ಪರ್ಯಾಯ ದಲಿತ ಚಿಂತನೆಯಿದೆ.

6. ದಲಿತತನದ ಒಳಗಿರುವ ಭಿನ್ನ ಆಯಾಮಗಳು, ಜಾತಿಯೆಂಬ ಪದದ ಐಡೆಂಟಿಟಿಯ ಒತ್ತಾಸೆಗಳು,

ಅಸ್ಮಿತೆಯ ಹುಡುಕಾಟಗಳು.

ಗುರುಪ್ರಸಾದ್ ಅವರು ದಲಿತರ ಬದುಕಿನ ಸಮಗ್ರ ಚಿತ್ರಣದ ಬಗೆಗೆ ಆಲೋಚಿಸುತ್ತಲೇ, ಸಮಕಾಲೀನ ಬಿಕ್ಕಟ್ಟುಗಳ ಕಡೆಗೂ ಹೊರಳಿಕೊಳ್ಳುವುದರಿಂದ ಈ ಕೃತಿಯು ಎಲ್ಲಾ ಕಾಲಕ್ಕೂ ಮುಖಾಮುಖಿಯಾಗುವ ಸಾಮರ್ಥ್ಯವೊಂದಿದೆ. ಕೃತಿಯ ಸತ್ವ ಇರುವುದು ಪರಂಪರೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮೌಖಿಕ ಕಥನಗಳ ಸಂಗ್ರಹ ಇದೆಯಲ್ಲ ಅದು ಇದುವರೆವಿಗೂ ಯಾರಿಂದಲೂ ಆಗದ್ದನ್ನು ಸಾಧಿಸಿದಂತಿದೆ. ಸಮುದಾಯದಲ್ಲಿ ಸಮೃದ್ಧವಾಗಿರುವ ಮೌಖಿಕ ಕಥನಗಳನ್ನು ಈಗ ಹೇಳುವ ಕೊಂಡಿಗಳು ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ದಲಿತರಿಗೆ, ಅದರಲ್ಲೂ ‘ಮಾದಿಗ’ ಜನಾಂಗಕ್ಕೆ ಕೃತಿ ಬೈಬಲ್ ಎಂದೇ ಹೇಳಬಹುದು.

-ಡಾ.ಕೆ.ವಿ.ಮುದ್ದವೀರಪ್ಪ, ತುಮಕೂರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...