Homeಕರ್ನಾಟಕಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

ಯಾನಾಗುಂದಿ ಮಾತೆ ಮಾಣಿಕಮ್ಮನ ಸುತ್ತ ಪವಾಡಗಳ ಹುತ್ತ ?!

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಹಳ್ಳಿಯ ಯಾನಾಗುಂದಿ ಮಾಣಿಕಮ್ಮನ ಆರೋಗ್ಯಕ್ಕಾಗಿ ಕೋರ್ಟ ನಿರ್ದೇಶನದಂತೆ ಜಿಲ್ಲಾಧಿಕಾರಿ, ವೈದ್ಯಾಧಿಕಾರಿಗಳು ನಿಗಾವಹಿಸುತ್ತಿದ್ದಾರೆ. ಇದೆಲ್ಲ ಒಂದು ರೀತಿ ಸರಿ ಇರಬಹುದು. ಆದರೆ ಈ ಮಾಣಿಕಮ್ಮ ಊಟ ಉಪಚಾರವನ್ನೆ ಮಾಡದೆ ಇಲ್ಲಿಯವರೆಗೂ ಹಾಗೆಯೇ ಜೀವಿಸುತ್ತಿದ್ದಾಳೆ ಎಂಬ ಸಂಗತಿ ತುಂಬಾ ಮಹತ್ವದ್ದು. ಈ ಪವಾಡದ ಘಟನೆಗಾಗಿಯೆ ಕರ್ನಾಟಕ, ಆಂದ್ರ ಹಾಗೂ ಮಹಾರಾಷ್ಟ್ರದಾದ್ಯಂತ ಈಕೆಗೆ ಭಕ್ತರು ಹುಟ್ಟಿಕೊಂಡರು. ಮುಸುರೆಗೆ ನೊಣ ಮುತ್ತಿಕೊಂಡಂತೆ ರಾಜಕಾರಣಿಗಳೂ ಸಹ ಜನ ಸಾಮಾನ್ಯರು ಸೇರುವ ಕಡೆಗೆ ಅವರೂ ಸೇರಿ ಯಾನಾಗುಂದಿಯನ್ನು ನೋಡ ನೋಡುತ್ತಲೆ ಯಾತ್ರಾಕ್ಷೇತ್ರವಾಗಿ ಪರಿವರ್ತನೆಗೊಳಿಸಿದ್ದಾರೆ.

ವರ್ಷಕ್ಕೆ ಒಂದೆ ಒಂದು ಬಾರಿ ಅಂದರೆ ಶಿವರಾತ್ರಿಯ ದಿನ ಮಾಣಿಕೇಶ್ವರಿ ತನ್ನ ಭಕ್ತಾದಿಗಳಿಗೆ ದರ್ಶನ ಭಾಗ್ಯ ಕರುಣಿಸಿ ಮತ್ತೆ ವರ್ಷದುದ್ದಕ್ಕೂ ತನ್ನ ನೆಲ ಮಹಡಿಯನ್ನು ಸೇರಿ ಬಿಡುತ್ತಾಳೆ. ಮಾಣಿಕಮ್ಮ ಮಾಣಿಕೇಶ್ವರಿ ಆಗುವುದಕ್ಕಿಂತ ಪೂರ್ವದಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬುಗ್ಗಮ್ಮ ಆಶಪ್ಪ ದಂಪತಿಗಳ ನಾಲ್ಕನೆಯ ಮಗಳು. ಬಡತನಕ್ಕೆ ಕಷ್ಟಗಳು ಜಾಸ್ತಿ ಎನ್ನುವಂತೆ ಅನ್ನ ನೀರಿಲ್ಲದೆ ಬಳಲಿಕೆಯಿಂದ ಮಾಣಿಕಮ್ಮ ಪವಾಡಗಳನ್ನು ಮಾಡುತ್ತಲೆ ಬಂದಳು. ಚಿಕ್ಕಂದಿನಲ್ಲಿ ಈಕೆ ಯಾರೊಂದಿಗೂ ಬೆರೆಯದೆ, ಮಾತಾಡದೆ, ಅರಳಿಯ ಮರದ ಟೊಂಗೆ ಏರಿ ಕುಳಿತುಕೊಳ್ಳುವಳು. ಇದನ್ನು ಕಂಡು ಕಂಗಾಲಾದ ತಂದೆ ತಾಯಿಗಳು ದೇವರಿಗೆ ಹರಕೆ ಹೊತ್ತಿದ್ದಾರೆ. ಸಾಲದೆಂಬಂತೆ ದೆವ್ವ ಬಿಡಿಸುವವರ ಮನೆಗೂ ಎಡತಾಕಿದ್ದಾರೆ. ಕೊನೆಗೆ ಯಾರ ಮಾತೋ ಕೇಳಿ ಮಾಣಿಕಮ್ಮಳಿಗೆ ಹತ್ತನೆ ವರ್ಷದಲ್ಲಿಯೆ ಬಾಲ್ಯ ವಿವಾಹವನ್ನೂ ಮಾಡಿದರು. ಆದರೂ ಆಕೆ ಸರಿ ಹೋಗಲಿಲ್ಲ.

ಗುರುಮಿಠಕಲ್ ಮಠದ ಹಿಂದಿನ ಪೀಠಾಧಿಪತಿಗಳು ತಮ್ಮ ಮಠದಲ್ಲಿಯೆ ಈಕೆಯನ್ನು ಇಟ್ಟುಕೊಂಡು ಔಷದೋಪಚಾರ ಮಾಡಿದ್ದಾರೆ. ಆದರೂ ಅದು ಸರಿ ಹೋಗದೆ ಇದ್ದಾಗ ಮಾಣಿಕಮ್ಮನಿಗೆ ಕಾವಿ ಧರಿಸಿ ಸನ್ಯಾಸಿ ಮಾಡಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ತನ್ನಷ್ಟಕ್ಕೆ ತಾನು ಇರುವ ಹರೆಯದ ಹುಡುಗಿ, ಶೂನ್ಯದಲ್ಲಿ ಏನನ್ನೋ ನೋಡುತ್ತ ಕುಳಿತ ಮಾಣಿಕಮ್ಮ ಮೌಢ್ಯ ಭಕ್ತರ ಕಣ್ಣಲ್ಲಿ ಪವಾಡ ಪುರುಷಳಾಗಿ ಗೋಚರವಾಗಿದ್ದಾಳೆ. ಕೆಲವು ಐನಾತಿಗಳಿಗೆ ಇಂಥದ್ದನ್ನು ಕಂಡರೆ ರಸಗವಳ. ಮಾಣಿಕಮ್ಮನನ್ನೆ ಬಂಡವಾಳ ಮಾಡಿಕೊಂಡ ಜನರು ಆಕೆಗಾಗಿ ಯಾನಾಗುಂದಿಯಲ್ಲಿ ಭರ್ಜರಿ ಕಟ್ಟಡವೊಂದನ್ನು ಕಟ್ಟಿ ನೆಲ ಮಹಡಿಯಲ್ಲಿಟ್ಟರು. ಹೇಳಿ ಕೇಳಿ ಆಂದ್ರದ ಜನ ಭಾವನಾತ್ಮಕತೆಯಲ್ಲಿಯೇ ಇರುವವರು.

ಮಾಣಿಕಮ್ಮ ಊಟವನ್ನೇ ಮಾಡದೆ ಜೀವಿಸಿದ್ದಾಳೆ ಎಂಬ ಹರಿಬಿಟ್ಟ ಸಂಗತಿ ಕಿವಿಯಿಂದ ಕಿವಿಗೆ ತಲುಪಿ, ಯಾನಾಗುಂದಿಯಲ್ಲಿ ಜನ ಜಂಗುಳಿಯೆ ಕೂಡಲು ಆರಂಭವಾಯಿತು. ಸಣ್ಣಗೆ ಆರಂಭವಾದ ಧಾರ್ಮಿಕ ವ್ಯಾಪಾರ ಇಂದು ಭರ್ಜರಿಯಾಗಿ ನಡೆಯುತ್ತಿವೆ. ಕಾಯಿ, ಕರ್ಪೂರ, ಹಾರ, ತುರಾಯಿ, ಪ್ರಸಾದ, ದಾಸೋಹ ಸೇವೆ ಕೈಂಕರ್ಯಗಳು ಅವ್ಯಾಹತವಾಗಿ ನಡೆದಿವೆ. ಕುರಿಗಳು ಸಾರ್ ನಾವು ಕುರಿಗಳು ಎಂಬ ಹಾಡಿನಂತೆ ಯೋಚಿಸುವ ಶಕ್ತಿಯನ್ನು ಕಳಕೊಂಡ ಜನತೆ ನಾ ಮುಂದೆ ತಾ ಮುಂದೆ ಎನ್ನುತ್ತಾ ದೌಡಾಯಿಸಿ ಯಾನಾಗುಂದಿಗೆ ಹೋಗಿ ಮಾಣಿಕಮ್ಮನ ದರ್ಶನ ಪಡೆದು ಬಂದರು.

ಆದರೆ ಇದುವರೆಗೂ ಯಾರೊಬ್ಬರೂ ಮಾಣಿಕಮ್ಮ ಊಟ ಮಾಡದೆ, ನೀರು ಕುಡಿಯದೆ ಹೇಗೆ ಜೀವಿಸಬಲ್ಲಳು ? ಎಂಬುದು ಯಾರೂ ಪ್ರಶ್ನಿಸಿಲ್ಲ. ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸುವುದು ಅಂದರೆ ಬತ್ತಲೆ ಇದ್ದವರ ರಾಜ್ಯದಲ್ಲಿ ಬಟ್ಟೆ ಉಟ್ಟವನ ಸ್ಥಿತಿಯಂತೆ. ಪುಂಡ ಪುರೋಹಿತರು, ಆಡಳಿತ ವರ್ಗದವರು ಹಬ್ಬಿಸಿದ ಗಾಳಿ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡಿದ ಪರಿಣಾಮ ಯಾನಾಗುಂದಿ ಸುಕ್ಷೇತ್ರವಾಯಿತು, ಸುಪ್ರಸಿದ್ಧವಾಯಿತು.

ಜಗತ್ತಿನಾದ್ಯಂತ ಆಹಾರಕ್ಕಾಗಿ ನಡೆದ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಮನುಷ್ಯನ ಮೋಸ, ತಟವಟ, ವಂಚನೆ, ಭ್ರಷ್ಟಾಚಾರಕ್ಕೆಲ್ಲ ಮೂಲ ಕಾರಣ ಹಸಿವು. ಆ ಹಸಿವಿಗಾಗಿಯೆ ಆತ ಏನೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಲಾದರೂ ಮಾತೆ ಮಾಣಿಕಮ್ಮ ಊಟ ಮಾಡದೆ , ನೀರು ಕುಡಿಯದೆ ಬದುಕಲು ಹೇಗೆ ಸಾಧ್ಯ ? ಎಂಬ ಸೂತ್ರವನ್ನು ಜಗತ್ತಿಗೆ ನೀಡಿದರೆ ಈ ಜಗತ್ತು ಆಕೆಯನ್ನು ಕೃತಜ್ಞತೆಯಿಂದ ನೆನೆಯುತ್ತದೆ. ಆಹಾರ ಮತ್ತು ನೀರಿಗಾಗಿ ಜಗತ್ತಿನಲ್ಲಿ ನಡೆದಿರುವ ಅಂತಃಕಲಹ ತಪ್ಪುತ್ತದೆ. ಮದ್ದು ಗುಂಡುಗಳು ಸೈನಿಕರು ಯುದ್ದ ವಿಮಾನಗಳು ಅರ್ಥಕಳೆದುಕೊಳ್ಳುತ್ತವೆ.

ವೈಜ್ಞಾನಿಕ ಮನೋಭಾವ ಇರುವ ಕೋರ್ಟ, ಸರಕಾರ ಆಕೆಯ ಆರೋಗ್ಯದ ಜೊತೆ ಜೊತೆಗೆ ಆಹಾರದ ಗುಟ್ಟನ್ನು ಬಯಲು ಮಾಡಿ ಪುಣ್ಯ ಕಟ್ಟಿಕೊಳ್ಳಬೇಕಿದೆ. ಇದೆಲ್ಲ ಇಂದು ಸಾಧ್ಯವೆ ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...