Homeಅಂಕಣಗಳುಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

ಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

- Advertisement -
- Advertisement -

ಉಗ್ರಿ ಚಾಡಿ ಹೇಳುವ ದನಿಯಲ್ಲಿ

‘ನೋಡೆ ಜುಮ್ಮಿ, ಈ ಬಿಜೆಪಿ ಸರಕಾರದೋರು ಕೊರೋನಾ ತಡಿಯಕ್ಕೆ ಅಂತ ಇರೊ ಅವುಸ್ದಿ, ಮಾತ್ರೆ, ಸ್ಯಾನಿಟೈಸರು, ಕಿಟ್ಟು, ಬೆಡ್ಡು ಇದನ್ಯಲ್ಲ ತಗಳವಾಗ ಒಂದುಕ್ಯರಡು ಅಂತ ದುಡ್ಡು ಕೊಟ್ಟು ಕೋಟ್ಯಾಂತರ್ರುಪಾಯಿ ಹ್ವಡದವುರಂತೆ’ ಎಂದ.

‘ಅಯ್ಯೋ ಇನ್ಯಂಥ ಗತಿಗ್ಯಟ್ಟ ಮುಂಡೆ ಮಕ್ಕಳಿವುರೂ, ಇದರಲ್ಲು ದುಡ್ಡು ವಡದರೇ’ ಎಂದಳು.

‘ಇದರಲ್ಲೆ ಕಣೆ ಹ್ವಡಿಯದು. ಯಾಕಂದ್ರೆ ಜನ ನಂಬದಿಲ್ಲ ಅಂತ ಅವುರಿಗೂ ಗೊತ್ತು.’

‘ಮನಸ್ಯಂಗೆ ಬತ್ಲ ಅವುರಿಗೆ ಹ್ಯಣ ತಿನ್ನೊ ನನ್ನ ಮಕ್ಕಳಿವುರು.’

‘ಆ ಟೈಮಲ್ಲಿ ಮನಸು ಕ್ಯಲಸ ಮಾಡದಿಲ್ಲ ಕಣಕ್ಕ. ಜನಗಳೂ ಇಗಿರೊ ಕಷ್ಟದಲ್ಲಿ ಅದ್ನ್ಯಲ್ಲ ನೋಡದಿಲ್ಲ. ಕೇಳದಿಲ್ಲ ಅಂತ ಅವುರಿಗೂ ಗೊತ್ತು’ ಎಂದ ವಾಟಿಸ್ಸೆ.

‘ಅಂಗರಿವುರು ಜನಗಳ ಉಳಸದಿಲ್ಲ ಬುಡು.’

‘ಜನಗಳ ಉಳಸರಾಗಿದ್ರೆ ಇಂತ ತೀರಮಾನ ತಗತಿದ್ರೇನಕ್ಕ.’

‘ಯಾವ ತೀರಮಾನ.’

‘ಕೆಲವು ಜಿಲ್ಲೆಯ ಮಧ್ಯಾಹ್ನದ ಮ್ಯಾಲೆ ಲಾಕ್‍ಡವುನ್ ಮಾಡ್ತಾ ಅವುರೆ. ಅಲ್ಲ ಕಣಕ್ಕ ವತ್ತರಿಂದ ಜನ ನಾಯಿ ತಿರಿಗಿದಂಗೆ ತಿರಗಿ ಮೂರುಗಂಟಿಗೆ ಮನಿಗೆ ಸೇರಿಕತ್ತರೆ. ಅಮ್ಯಾಲೆ ಲಾಕ್‍ಡವುನ್ ಆದ್ರೆಷ್ಟು ಬುಟ್ಟರೆಸ್ಟೂ ಇಂತದೂ ತಿಳಿಯದಿಲವಲ್ಲ ಏನೇಳನ.’

‘ಎಡೂರಪ್ಪನಿಗಾಗ್ಲೆ ವಯಿಸಾಯ್ತು ಕಣೊ, ಇಂತ ಸೂಕುಸ್ಮೆ ಹ್ವಳಿಯದಿಲ್ಲ ಅವುನಿಗೆ.’

‘ನಿಜಕಣೊ ಉಗ್ರಿ, ಅದ್ಕೆ ನೊಡು ಯಯಾತಿ ಓತ್ತಾಕುಂತವುನೆ.’

‘ಯಯ್ಯಾತಿ ಅಂದ್ರೇನ್ಲ.’

‘ಅದು ಪುಸ್ತಗ ಕಣಕ್ಕ ಮುದುಕರ್ಯಲ್ಲ ಓದೊ ಪುಸ್ತಕ.’

‘ಅದ್ಯಂತೆದ್ಲ ಮುದುಕುರೋದೊ ಪುಸಗ.’

‘ಅದರ ಕತೆ ಗೊತ್ತೇನಕ್ಕ.’

‘ನನಿಗೇನು ಗೊತ್ತು ಹೇಳ್ಳ.’

‘ಯಯಾತಿ ಒಬ್ಬ ರಾಜ ಕಣಕ್ಕ. ರಾಜ ಅಂದ ಮ್ಯಾಲೆ ಹೆಂಗಸರ ಚಟ ಇದ್ದೇ ಇರತದೆ. ಅಂಗೆ ಇವುನು ರುಶಿಮುನಿ ಮಗಳ ಹಿಡಕಳಕ್ಕೋದ ಅವುಳೋಗಿ ಅವುರಪ್ಪನಿಗೇಳಿದ್ಲು.’

‘ರಾಜನಿಗೆ ಹೆಡತಿ ಇರಲಿಲ್ವೆ?’

‘ಇರತರೆ ಕಣಕ್ಕ. ಅವುರ್ಯಲ್ಲ ನ್ಯಪಕಿರತರೆ ಇವುರು ಮಾತ್ರ ಚನ್ನಾಗಿರೊರನ್ಯಲ್ಲ ಹಿಡಕಳಕ್ಕೋಯ್ತರೆ, ಅಂಗೆ ಯಯಾತಿನೂ ಹೋಗಿ ಬ್ರಾಂಬ್ರುಡುಗಿ ಕೆಣಕಿದ. ಸಾಮಾನ್ಯವಾಗಿ ಬ್ರಾಂಬ್ರುಡುಗಿರಿಗೆ ಸೆಕ್ಸ್ ಕಡಮೆ. ಅದ್ಕೆ ಹೋಗಿ ಅವುರಪ್ಪನಿಗೇಳಿದ್ಲು.’

‘ಸರಿಯಾಗೆ ಮ್ಯಾಡವುಳೆ ಬುಡು.’

‘ಅವುರಪ್ಪ ಮಹಾಕೋಪಿಸ್ಟ. ಅವುನೋಗಿ ಯಯಾತಿ ಬೈದು ನಿನ್ನ ಪ್ರಾಯದಿಂದ್ಲೆ ಹಿಂಗೆ ಮಾಡಿದ್ದಿ ಅದ್ಕೆ ನೀನು ಮುದುಕಾಗೋಗತ್ತಗೆ ಅಂತ ಶಾಪ ಕೊಟ್ಟ. ಆ ಕೂಡ್ಳೆ ಯಯಾತಿ ನಮ್ಮ ಸೀರ ಮಾವನಂಗಾದ.’

‘ಅಯ್ಯೋ ಪಾಪ ಅಂತ ಸಾಪನೇನ್ಲ ಕೊಡದು.’

‘ಅದವುನಿಗೂ ಗೊತ್ತಾಯ್ತು ಕಣಕ್ಕ. ಅದ್ಕೆ ಯಯಾತಿಗೆ ನಿನ್ನ ಮುಪ್ಪ ಯಾರಿಗಾರ ಕೊಟ್ರೆ ಅವುರ ಹರೇಯ ನಿನಿಗೆ ಬತ್ತದೆ ಹೋಗು ಅಂದ. ಸರಿ ಯಯಾತಿ ಬಂದು ಯಾರಾರ ನನ್ನ ಮುಪ್ಪ ತಗಳಿ ಅರ್ದ ರಾಜ್ಯ ಕೊಡ್ತಿನಿ ಅಂದ ಯಾರೂ ಬರಲಿಲ್ಲ.’

‘ಅದ್ಯಂಗೆ ಬಂದರ್ಲ ಮುಪ್ಪು ಯಾರಿಗೆ ಬೇಕೇಳು.’

‘ಅಂಗೆ ಆಯ್ತು ಕಣಕ್ಕ. ಕಡಿಗೆ ಅಪ್ಪನ ಗೋಳಾಟ ನೋಡಕ್ಕಾಗದೆ ಮಗನೆ ಬಂದು ಈಸ್ಕಂಡ. ಅಪ್ಪ ಹರೇವುದೋನಾದ. ಮಗ ಮುದುಕಾದ ಅದ ನೊಡಿ ಸ್ವಸೆ ನ್ಯಾಣಾಯ್ಕಂಡು ಸತ್ತೋದ್ಲು. ಅದು ಗೊತ್ತಿಲ್ಲದೆ ಯಯಾತಿ ಹೆಡತಿ ಹಿಡಕಳಕ್ಕೊದ. ಅವುಳು ನಿನ್ನ ಪ್ರಾಯ ನನ್ನ ಮಗಂದು ಮುಟ್ಟುಬ್ಯಾಡ ಅಂದ್ಲು. ಯಾಯತಿ ಅಳತ ತಿರಗ ಮಗನಿಗೆ ಪ್ರಾಯಕೊಟ್ಟು ಮುದುಕಾದ.’

‘ಚನಾಗ್ಯದೆ ಕಂಡ್ಳ ಕತೆ. ಇದ್ಯಾಕ್ಕೋತ್ತ ಅವುನೆ ಎಡೂರಪ್ಪಾ.’

‘ಯಾಕೆ ಅಂದ್ರೆ ಆಗ್ಲೆ ಯಪ್ಪಂತೆಟ್ಟು ವರ್ಸಾಯ್ತ ಅದೆ. ಶೋಬಕ್ಕನೂ ದೂರಾಗ್ಯವುಳೆ. ಪ್ರಾಯ ಹೋಯ್ತಾ ಅದೆ. ಹೈಕಮಾಂಡು ಎಡೂರಪ್ಪನೆ ಇಳಿಲಿ ಅಂತ ಕಿರುಕುಳ ಕೊಡ್ತಾ ಅವುರೆ. ಕೊರೋನಾ ಸಮಸ್ಯೆ ಹಠಗಾಯಿಸಿಗಂಡದೆ. ಜ್ವತೆಲಿರೊ ಮಂತ್ರಿಗಳು ಕೊರೋನಾದಲ್ಲೂ ಕಾಸು ತಿಂತಾ ಅವುರೆ. ಅಂತೂ ಸೂಕುಸ್ಮುವಾಗಿ ನೋಡಿದ್ರೆ ಯಯಾತಿ ಗೋಳಾಟ ಹೆಡೂರಪ್ಪನಿಗೂ ಹಠಗಾಯಿಸಿಗಂಡದೆ. ಮುಪ್ಪು ಅನಿವಾರ್ಯ ಅಧಿಕಾರದಿಂದ ಇಳಿಯೋದು ಅನಿವಾರ್ಯ, ವಿಜಯೇಂದ್ರನ್ನ ಮುಂದೆ ತರೋದು ಅನಿವಾರ್ಯ, ಇಂತ ಅನಿವಾರ್ಯಗಳೆ ಎಡೂರಪ್ಪನ್ನ ಬಗ್ಗಸಬಹುದು ಕಣಕ್ಕ.’

‘ಅದೇನಾರ ಆಗ್ಲಿ ಬಡುವುರು ತಿನ್ನ ಅಕ್ಕಿನೆ ಕಡಮೆ ಮಾಡ್ಯವುನಂತೆ ಇವುನಿಗೆ ವಳ್ಳೆದಾದತೆ?’

‘!?


ಇದನ್ನು ಓದಿ: ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು – ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...