Homeಅಂಕಣಗಳುಥೂತ್ತೇರಿ | ಯಾಹೂಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು - ಚಂದ್ರೇಗೌಡರ ಕಟ್ಟೆಪುರಾಣ

ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು – ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ಇದು ಗಾಳಿ ಬೀಸುವ ಕಾಲ, ಬರ್ರೊ ಎಂದು ಬೀಸುವ ಗಾಳಿಯೂ ಕರೋನ ಸೋಂಕನ್ನು ಹೊತ್ತು ತರುತ್ತದೆಂದು ವಾಟಿಸ್ಸೆ ಹೇಳಿದಾಗಿನಿಂದ, ಹೆದರಿದ ಜುಮ್ಮಿ ಮನೆ ಬುಟ್ಟು ಈಚೆ ಬಂದಿರಲಿಲ್ಲ. ಆಗ ಆಗಮಿಸಿದ ಉಗ್ರಿ.

“ಸುಮಲತನಿಗೂ ಕರೋನ ಬಂದದಂತೆ ಕಣೆ” ಎಂದ.

“ಅಯ್ಯೊ ಶಿವನೇ ಅವುಳಿಗ್ಯಾಕೆ ಬತ್ತೂ.”

“ಪಾಪ ಅವಳು ಮನೆವಳಗಿಲ್ದೆಲೆ ಜನಗಳ ಜ್ವತೆ ಮಾತಾಡ್ಯವುಳೆ ಅದ್ಕೆ ಬಂದದೆ.”

“ನೀನು ಎಲ್ಲಿಂದ ಬಂದ್ಲ.”

“ಮನಿಂದ ಬಂದೆ.”

“ಅಂಗಾದ್ರೆ ವಳಿಕೆ ಬಾ, ಎಲ್ಲೆಲ್ಲೊ ನಾಯಿ ತಿರುಗಿದಂಗೆ ತಿರುಗಿದ್ರೆ ಇಲ್ಯಲ್ಲ ಬರದು ಬ್ಯಾಡ.”

“ಆ ಮಾತ ವಾಟಿಸ್ಸೆಗೇಳು.”

“ಯಾವ ಮಾತನಪ್ಪ” ಎನ್ನುತ್ತ ವಾಟಿಸ್ಸೆ ಬಂದ.

“ಇನ್ನ ಮುಂದೆ ಜುಮ್ಮಿ ಮನಿಗೆ ಬರಬೇಕಾದ್ರೆ, ನಿನ್ನ ಮನಿಂದ ಇಲ್ಲಿಗೆ ನೇರವಾಗಿ ಬರಬೇಕಂತೆ. ಅಲ್ಲಿ ಇಲ್ಲಿ ತಿರುಗಿದೊರಿಗೆ ನೊ ಎಂಟ್ರಿ.”

“ಲೇ ಉಗ್ರಿ, ನಾವು ಎಲ್ಯಾರ ತಿರುಗ್ಲಿ. ಆದ್ರೆ ಪೇಸ್‍ನ ಬಟ್ಟೆ ಮಕಾಡದಿಂದ ಕವರ್ ಮಾಡಿರಬೇಕು. ಯಾರತ್ರ ಮಾತಾಡಿದ್ರು ಟೆನ್ ಆರ್ ಪೈ ಪಿಟ್ ದೂರ ಮೆಂಟೇನ್ ಮಾಡಬೇಕು. ಕೈ ಕುಲುಕಬಾರ್ದು. ಎಷ್ಟೇ ಆತ್ಮೀಯರಾದ್ರು ತಬ್ಬಿಕಬಾರ್ದು, ನಿಸರ್ಗನೇ ತಂದಿರೊ ಅಸ್ಪೃಶ್ಯತೆನ ಚಾಚೂ ತಪ್ಪದೆ ಫಾಲೋ ಮಾಡಿದ್ರೆ ಎಲ್ಯಾರ ತಿರುಗಬಹುದು” ಎಂದ ವಾಟಿಸ್ಸೆ.

“ನಿನ್ನಂಗೆ ಮಾತಾಡಿ ಕೃಷ್ಣೇಗೌಡರ ಕತೆ ಏನಾಗ್ಯದೆ ಗೊತ್ತೆ.”

“ಏನಾಗ್ಯದೊ ವಾಟ್ಯಾಪನ್.”

“ವಸ ಇನ್ನೋವಾ ತಗಂಡಿದ್ನಲ್ಲಾ. ಅದ ಯಲ್ಲಾರಿಗೂ ತೋರಿಸಿಗಂಡು ಮಾತಾಡಿಸಿಗಂಡು ತಿರುಗುತಿದ್ದ. ಮನ್ನೆ ದಿನ ಮಂಡ್ಯಾಕ್ಕೂ ಹೋಗಿ ಬಂದನಂತೆ. ಅಷ್ಟೆ. ಅವುನ ಸಮೇತ ಮನಿ ಮಕ್ಕಳಿಗ್ಯಲ್ಲ ಕರೊನ ಹಟಗಾಯಿಸಿಕೊಂಡದೆ.”

“ಛೇ ಪಾಪ ಅಂಗಾಗಬಾರದಿತ್ತು.”

“ನೀನಂಗಂತಿ ಕೇಳಿದೊರ್ಯಲ್ಲ ನಗ್ತರಲ್ಲ ಯಾಕೆ.”

“ಕ್ಯಟ್ಟ ಮನುಸರಿಗೆ ಕರೋನ ಬಂದ್ರೆ ಜನಗಳು ಕ್ಯಟ್ಟ ಕುಶಿಯಿಂದ ನಗ್ತರೆ ಕಣೊ. ಆದ್ರೆ ಇವತ್ತು ಅವುನಿಗೆ ಬಂದಿದ್ದು ನಾಳೆ ನಮಿಗೂ ಬಂದೇ ಬತ್ತದೆ ಅದ್ಕೆ ಆಡಿಕಬಾರ್ದು.”

“ನಿಜ ಕಂಡ್ಳ ನೀನೇಳಿದ್ದು. ನೋಡು ಮದ್ಲು ಮಂಡೇವುಕೆ ಬತ್ತು. ಆಮ್ಯಾಲೆ ನಾಗಮಂಗಲಕ್ಕೆ ಬತ್ತು. ಈಗ ಬಿಂಡಗನೂಲೆ ಹೆಂಗಸಿಗೆ ಬಂದದೆ. ಅಂಗೆ ಇಲ್ಲಿಗೂ ಬರಬಹುದು” ಎಂದಳು ಜುಮ್ಮಿ.

“ಬಂದೆ ಬತ್ತದೆ ಕಣಕ್ಕ. ಯಾಕೆ ಅಂದ್ರೇ ಬೆಂಗಳೂರಲ್ಲಿದ್ರಲ್ಲ ನಮ್ಮ ಜನ ಅವುರ್ಯಲ್ಲ ಮನೆ ಖಾಲಿ ಮಾಡಿಕಂಡು ಊರು ಕಡಿಕೆ ವಂಟವುರೆ. ಅವುರೇನು ಸುಮ್ಮಸುಮ್ಮನೆ ಬಂದರೇ, ಕರೋನ ಹಿಡಕಂಡೇ ಬತ್ತರೆ.”

“ಅಂಗಾದ್ರೆ ಗತಿಯೇನ್ಲ.”

“ಗತಿಯೇನು ಇಲ್ಲ ಕಣಕ್ಕ. ನಿನ್ನ ವಲ್ದತ್ರ ಒಂದು ಗುಡ್ಳಾಯ್ಕಂಡಿರು.”

“ಆಗ ಪ್ಳೇಗು ಕಾಲರ ಬಂದಾಗ ಅಂಗೇ ಮಾಡಿದ್ರಂತೆ.”

“ಈಗ್ಲು ಅಂಗೆ ಮಾಡನ ತಗೊ.”

“ಊರು ಬುಟ್ಟು ಹ್ವರಗೋಗಿ ಗುಡ್ಳಾಯ್ಕಂಡ್ರೆ ಪ್ಲೇಗು ಬತ್ತಿರಲಿಲ್ಲ. ಕರೋನ ಅಂಗಲ್ಲ ಯಾರಿಂದ ಬತ್ತದೆ ಅಂತ ಹೇಳಕ್ಕಾಗದಿಲ್ಲ” ಎಂದ ವಾಟಿಸ್ಸೆ.

“ಪಾಪ ಕೃಷ್ಣೇಗೌಡನಿಗೆ ಬಂದಿರದು ಅಂಗೆ ಅಲವೆ. ಯಾರಿಂದ ಬತ್ತು ಅಂತ್ಲೆ ಗೊತ್ತಿಲ್ಲ” ಎಂದ ಉಗ್ರಿ.

“ಥೇಟ್ ಡಿ.ಕೆ.ಶಿವಕುಮಾರನಂಗವುನೆ ಕಣೊ ಅವುನು. ನೋಡಿದ್ರೆ ಅವಳಿಜವಳಿ ಅನ್ನಬೇಕು.”

“ಅಂತೂ ಡಿ.ಕೆ.ಶಿವಕುಮಾರ್ ಕಡಿಗೂ ಅಧ್ಯಕ್ಷಾದ ಬುಡತ್ತಗೆ.”

“ಅವುನು ವಳ್ಯೊನೇನ್ಲ” ಎಂದಳು.

“ವಳ್ಳೆಯವನು ಅಂದ್ರೆ ಯಾವ ತರನಕ್ಕ. ನಿನ್ನ ಗಂಡನಂಗಿರಬೇಕೊ, ನನ್ನಂಗಿರಬೇಕೊ ಇಲ್ಲ ಈ ಉಗ್ರಿ ತರ ಇರಬೇಕೊ ಯಾವ ತರ ಅಂತ ಹೇಳು.”

“ಬಡವುರಾಧಾರಿನೆ ಅಂತ ಕೇಳಿದೆ ಕಂಡ್ಳ.”

“ಬಡವುರಾಧಾರಿ ಅನ್ನದ್ರಲ್ಲಿ ಯರಡು ಮಾತಿಲ್ಲ ಕಣಕ್ಕ. ದಿವ್ಸ ಮನೆ ಹತ್ರಕ್ಕೆ ನೂರಾರು ಜನ ಬತ್ತರೆ. ಯಾಕೆ ಅಂದ್ರೆ ಯಾರೊ ನಿನ್ನಂಥವುಳಿಗೆ ಹೆರಿಗೆಯಾಗಬೇಕಿರುತ್ತೆ ದುಡ್ಡಿರದಿಲ್ಲ ಡಿ.ಕೆ.ಶಿ ಹುಡಿಕ್ಕಂಡು ಬತ್ತಳೆ.”

“ನನ್ನಂಥೊಳು ಅಂತ ಯಾಕಂತಿಲ ಮುಂಡೆ ಮಗನೆ.”

“ಪರೆಗ್‍ಜಾಂಪಲ್ಲು ಕಣಕ್ಕ ಸಿಟ್ಟಾಗಬ್ಯಾಡ. ಇನ್ನ ಯಂತ್ಯಂಥ ಜನ ಬತ್ತರೆ ಗೊತ್ತ. ಕ್ಯಾನ್ಸರ್ ಆದೊರು, ಆರಟಾಪರೇಶನ್ ಜನ, ತಿಥಿ ಮಾಡೋರು, ನಾಮಕರಣ ಮಾಡೋರು, ತಿರುಪ್ತಿಗೋಗರು, ಅಯ್ಯಪ್ಪ ಸ್ವಾಮಿ ಹುಡಿಕ್ಕಂಡೋಗವು ಹಿಂಗೆ ಈ ಸಮಾಜದ ಸಕಲಿಸ್ಟು ರೋಗನು ಡಿ.ಕೆ.ಶಿ ಮನೆತಕ್ಕೆ ಬತ್ತದೆ.”

“ಅವಿರುಗ್ಯಲ್ಲ ದುಡ್ಡು ಕೊಟ್ಟನೆ.”

“ಯಾರ್ನು ಬರಿಕೈಲಿ ಕಳಸದಿಲ್ಲ ಕಣಕ್ಕ. ನಾನೇ ನಿಂತುಗಂಡು ನೋಡಿದಂಗೆ ಲಕ್ಷಾಂತೃಪಾಯಿ ದಾನ ಮಾಡ್ತನೆ.”

“ಬೇಕಾದಷ್ಟು ಸಂಪಾದ್ನೆ ಮಾಡ್ಯವುನೆ ಕೊಡ್ತನೆ.”

“ಮಿಸ್ಟರ್ ಉಗ್ರಿ, ಸಂಪಾದ್ನೆ ಮಾಡಿದೊರ್ಯಲ್ಲ ದಾನ ಮಾಡಿದ್ರೆ ನಮ್ಮಂಥೊರು ಹಿಂಗಿರತಿರಲಿಲ್ಲ ಕಣೊ. ಡಿ.ಕೆ.ಶಿಗಿಂತ ಅವುನ ತಮ್ಮನಂತೂ ದಾನಸೂರ ಕರ್ಣ ಕಣೊ.”

“ಕರ್ಣ ಏನು ದುಡದಿದ್ನೆ ದುರ್ಯೋಧನ ಮಾಡಿ ಮಡಗಿದ್ದ ಅವುನು ಕೊಟ್ಟ ಅಂಗೆ ಇವುನುವೆ.”

“ನೋಡೊ ಉಗ್ರಿ, ಸಣ್ಣಮಾತ ಯಲ್ಲಾರು ವಿಷಯದಲ್ಲೂ ಮಾತಾಡಕ್ಕೆ ಬರದಿಲ್ಲ. ಈ ಡಿ.ಕೆ. ಬ್ರದರ್ಸೆ ಡಿಪರೆಂಟು ಕಣೊ, ಏನಪ್ಪ ಅಂದ್ರೆ ಇವುರು ಆಸ್ತಿ ಮಾಡಿಕಂಡು ಪವರಿಗೆ ಬತ್ತಾ ಅವುರೆ, ಆದ್ರಿಂದ ಆಸ್ತಿ ಮಾಡೊ ಅಗತ್ಯ ಇಲ್ಲ. ಅದೇ ಎಡೂರಪ್ಪ ಮುಖ್ಯಮಂತ್ರಿಯಾದೇಟಿಗೆ ಬರೀ ಆಸ್ತಿ ಮಾಡದ್ನೆ ಆಡಳತ ಅನ್ನಕಂಡಿದ್ದ. ಡಿ.ಕೆ.ಶಿ ಆಸ್ತಿ ಅದರಿಂದ್ಲೆ ತೊಂದ್ರೆ ಅನುಭವಿಸಿದೋನು. ನಮ್ಮ ಜನಾಂಗದಲ್ಲಿ ಕುಮಾರಣ್ಣನಿಗಿಂತ ವಳ್ಳೆ ಪರಸನ್ನು.”

“ಅದ್ಯಂಗೇಳತಿಯೋ.”

“ಯಂಗೇ ಅಂದ್ರೆ ಡಿ.ಕೆ.ಶಿ ಕಾಂಗ್ರೆಸ್ಸಿಂದ ಬಂದವುನು. ಅವುನು ಕಾಂಗ್ರೆಸ್ಸಿಗ. ಆ ಪಾರ್ಟಿ ಸಿದ್ಧಾಂತ ಮಾತಾಡ್ತನೆ. ಅದೇ ಕುಮಾರಣ್ಣ ಯಾವ ಪಾರ್ಟಿ ಅಂತ್ಲೂ ಹೇಳಕ್ಕ ಬರದಿಲ್ಲ. ಒಟ್ಟಿನಲ್ಲಿ ನಂಬಿಕೆಗೆ ಯೋಗ್ಯನಲ್ಲ ಅಂತ ಅವನಿಂದ ದೂರ ಹೋದೊರು ಹೇಳ್ತ ಅವುರೆ. ಆದ್ರೆ ಡಿ.ಕೆ.ಶಿ ಅಂಗಲ್ಲ ಏನಪ್ಪ ಅಂದ್ರೆ ಒಂದಿಷ್ಟು ರೌಡಿ ಇಮೇಜದೆ.”

“ಸದ್ದಿಕೆ ಅದುಬೇಕು ಕಣೊ. ಈ ಬಿಜೆಪಿಗಳ ಹೆದರಸಬೇಕಾದ್ರೆ ರೌಡಿ ಗಂಟ್ಳೇಬೇಕು ಅದ್ಕೆ ಹೆದರದವುರು.”

“ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು.”

“ಅವುನ್ನೊಂದು ಸತಿ ತೋರುಸ್ಲ.”

“ಹೋಗನಿರಕ್ಕ ಮನೆತಕ್ಕೆ ಹೋಗನ. ಯಸ್ಸೆಂ ಕೃಷ್ಣನ ಕಡಿಯೋರು ಅಂದ್ರೆ ಊಟ ಮಾಡ್ಸಿ ಕಳುಸ್ತನೆ.”

“ !?

  • ಬಿ.ಚಂದ್ರೇಗೌಡ

ಇದನ್ನು ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...