Homeಅಂಕಣಗಳುಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

ಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

- Advertisement -
- Advertisement -

ಉಗ್ರಿ ಚಾಡಿ ಹೇಳುವ ದನಿಯಲ್ಲಿ

‘ನೋಡೆ ಜುಮ್ಮಿ, ಈ ಬಿಜೆಪಿ ಸರಕಾರದೋರು ಕೊರೋನಾ ತಡಿಯಕ್ಕೆ ಅಂತ ಇರೊ ಅವುಸ್ದಿ, ಮಾತ್ರೆ, ಸ್ಯಾನಿಟೈಸರು, ಕಿಟ್ಟು, ಬೆಡ್ಡು ಇದನ್ಯಲ್ಲ ತಗಳವಾಗ ಒಂದುಕ್ಯರಡು ಅಂತ ದುಡ್ಡು ಕೊಟ್ಟು ಕೋಟ್ಯಾಂತರ್ರುಪಾಯಿ ಹ್ವಡದವುರಂತೆ’ ಎಂದ.

‘ಅಯ್ಯೋ ಇನ್ಯಂಥ ಗತಿಗ್ಯಟ್ಟ ಮುಂಡೆ ಮಕ್ಕಳಿವುರೂ, ಇದರಲ್ಲು ದುಡ್ಡು ವಡದರೇ’ ಎಂದಳು.

‘ಇದರಲ್ಲೆ ಕಣೆ ಹ್ವಡಿಯದು. ಯಾಕಂದ್ರೆ ಜನ ನಂಬದಿಲ್ಲ ಅಂತ ಅವುರಿಗೂ ಗೊತ್ತು.’

‘ಮನಸ್ಯಂಗೆ ಬತ್ಲ ಅವುರಿಗೆ ಹ್ಯಣ ತಿನ್ನೊ ನನ್ನ ಮಕ್ಕಳಿವುರು.’

‘ಆ ಟೈಮಲ್ಲಿ ಮನಸು ಕ್ಯಲಸ ಮಾಡದಿಲ್ಲ ಕಣಕ್ಕ. ಜನಗಳೂ ಇಗಿರೊ ಕಷ್ಟದಲ್ಲಿ ಅದ್ನ್ಯಲ್ಲ ನೋಡದಿಲ್ಲ. ಕೇಳದಿಲ್ಲ ಅಂತ ಅವುರಿಗೂ ಗೊತ್ತು’ ಎಂದ ವಾಟಿಸ್ಸೆ.

‘ಅಂಗರಿವುರು ಜನಗಳ ಉಳಸದಿಲ್ಲ ಬುಡು.’

‘ಜನಗಳ ಉಳಸರಾಗಿದ್ರೆ ಇಂತ ತೀರಮಾನ ತಗತಿದ್ರೇನಕ್ಕ.’

‘ಯಾವ ತೀರಮಾನ.’

‘ಕೆಲವು ಜಿಲ್ಲೆಯ ಮಧ್ಯಾಹ್ನದ ಮ್ಯಾಲೆ ಲಾಕ್‍ಡವುನ್ ಮಾಡ್ತಾ ಅವುರೆ. ಅಲ್ಲ ಕಣಕ್ಕ ವತ್ತರಿಂದ ಜನ ನಾಯಿ ತಿರಿಗಿದಂಗೆ ತಿರಗಿ ಮೂರುಗಂಟಿಗೆ ಮನಿಗೆ ಸೇರಿಕತ್ತರೆ. ಅಮ್ಯಾಲೆ ಲಾಕ್‍ಡವುನ್ ಆದ್ರೆಷ್ಟು ಬುಟ್ಟರೆಸ್ಟೂ ಇಂತದೂ ತಿಳಿಯದಿಲವಲ್ಲ ಏನೇಳನ.’

‘ಎಡೂರಪ್ಪನಿಗಾಗ್ಲೆ ವಯಿಸಾಯ್ತು ಕಣೊ, ಇಂತ ಸೂಕುಸ್ಮೆ ಹ್ವಳಿಯದಿಲ್ಲ ಅವುನಿಗೆ.’

‘ನಿಜಕಣೊ ಉಗ್ರಿ, ಅದ್ಕೆ ನೊಡು ಯಯಾತಿ ಓತ್ತಾಕುಂತವುನೆ.’

‘ಯಯ್ಯಾತಿ ಅಂದ್ರೇನ್ಲ.’

‘ಅದು ಪುಸ್ತಗ ಕಣಕ್ಕ ಮುದುಕರ್ಯಲ್ಲ ಓದೊ ಪುಸ್ತಕ.’

‘ಅದ್ಯಂತೆದ್ಲ ಮುದುಕುರೋದೊ ಪುಸಗ.’

‘ಅದರ ಕತೆ ಗೊತ್ತೇನಕ್ಕ.’

‘ನನಿಗೇನು ಗೊತ್ತು ಹೇಳ್ಳ.’

‘ಯಯಾತಿ ಒಬ್ಬ ರಾಜ ಕಣಕ್ಕ. ರಾಜ ಅಂದ ಮ್ಯಾಲೆ ಹೆಂಗಸರ ಚಟ ಇದ್ದೇ ಇರತದೆ. ಅಂಗೆ ಇವುನು ರುಶಿಮುನಿ ಮಗಳ ಹಿಡಕಳಕ್ಕೋದ ಅವುಳೋಗಿ ಅವುರಪ್ಪನಿಗೇಳಿದ್ಲು.’

‘ರಾಜನಿಗೆ ಹೆಡತಿ ಇರಲಿಲ್ವೆ?’

‘ಇರತರೆ ಕಣಕ್ಕ. ಅವುರ್ಯಲ್ಲ ನ್ಯಪಕಿರತರೆ ಇವುರು ಮಾತ್ರ ಚನ್ನಾಗಿರೊರನ್ಯಲ್ಲ ಹಿಡಕಳಕ್ಕೋಯ್ತರೆ, ಅಂಗೆ ಯಯಾತಿನೂ ಹೋಗಿ ಬ್ರಾಂಬ್ರುಡುಗಿ ಕೆಣಕಿದ. ಸಾಮಾನ್ಯವಾಗಿ ಬ್ರಾಂಬ್ರುಡುಗಿರಿಗೆ ಸೆಕ್ಸ್ ಕಡಮೆ. ಅದ್ಕೆ ಹೋಗಿ ಅವುರಪ್ಪನಿಗೇಳಿದ್ಲು.’

‘ಸರಿಯಾಗೆ ಮ್ಯಾಡವುಳೆ ಬುಡು.’

‘ಅವುರಪ್ಪ ಮಹಾಕೋಪಿಸ್ಟ. ಅವುನೋಗಿ ಯಯಾತಿ ಬೈದು ನಿನ್ನ ಪ್ರಾಯದಿಂದ್ಲೆ ಹಿಂಗೆ ಮಾಡಿದ್ದಿ ಅದ್ಕೆ ನೀನು ಮುದುಕಾಗೋಗತ್ತಗೆ ಅಂತ ಶಾಪ ಕೊಟ್ಟ. ಆ ಕೂಡ್ಳೆ ಯಯಾತಿ ನಮ್ಮ ಸೀರ ಮಾವನಂಗಾದ.’

‘ಅಯ್ಯೋ ಪಾಪ ಅಂತ ಸಾಪನೇನ್ಲ ಕೊಡದು.’

‘ಅದವುನಿಗೂ ಗೊತ್ತಾಯ್ತು ಕಣಕ್ಕ. ಅದ್ಕೆ ಯಯಾತಿಗೆ ನಿನ್ನ ಮುಪ್ಪ ಯಾರಿಗಾರ ಕೊಟ್ರೆ ಅವುರ ಹರೇಯ ನಿನಿಗೆ ಬತ್ತದೆ ಹೋಗು ಅಂದ. ಸರಿ ಯಯಾತಿ ಬಂದು ಯಾರಾರ ನನ್ನ ಮುಪ್ಪ ತಗಳಿ ಅರ್ದ ರಾಜ್ಯ ಕೊಡ್ತಿನಿ ಅಂದ ಯಾರೂ ಬರಲಿಲ್ಲ.’

‘ಅದ್ಯಂಗೆ ಬಂದರ್ಲ ಮುಪ್ಪು ಯಾರಿಗೆ ಬೇಕೇಳು.’

‘ಅಂಗೆ ಆಯ್ತು ಕಣಕ್ಕ. ಕಡಿಗೆ ಅಪ್ಪನ ಗೋಳಾಟ ನೋಡಕ್ಕಾಗದೆ ಮಗನೆ ಬಂದು ಈಸ್ಕಂಡ. ಅಪ್ಪ ಹರೇವುದೋನಾದ. ಮಗ ಮುದುಕಾದ ಅದ ನೊಡಿ ಸ್ವಸೆ ನ್ಯಾಣಾಯ್ಕಂಡು ಸತ್ತೋದ್ಲು. ಅದು ಗೊತ್ತಿಲ್ಲದೆ ಯಯಾತಿ ಹೆಡತಿ ಹಿಡಕಳಕ್ಕೊದ. ಅವುಳು ನಿನ್ನ ಪ್ರಾಯ ನನ್ನ ಮಗಂದು ಮುಟ್ಟುಬ್ಯಾಡ ಅಂದ್ಲು. ಯಾಯತಿ ಅಳತ ತಿರಗ ಮಗನಿಗೆ ಪ್ರಾಯಕೊಟ್ಟು ಮುದುಕಾದ.’

‘ಚನಾಗ್ಯದೆ ಕಂಡ್ಳ ಕತೆ. ಇದ್ಯಾಕ್ಕೋತ್ತ ಅವುನೆ ಎಡೂರಪ್ಪಾ.’

‘ಯಾಕೆ ಅಂದ್ರೆ ಆಗ್ಲೆ ಯಪ್ಪಂತೆಟ್ಟು ವರ್ಸಾಯ್ತ ಅದೆ. ಶೋಬಕ್ಕನೂ ದೂರಾಗ್ಯವುಳೆ. ಪ್ರಾಯ ಹೋಯ್ತಾ ಅದೆ. ಹೈಕಮಾಂಡು ಎಡೂರಪ್ಪನೆ ಇಳಿಲಿ ಅಂತ ಕಿರುಕುಳ ಕೊಡ್ತಾ ಅವುರೆ. ಕೊರೋನಾ ಸಮಸ್ಯೆ ಹಠಗಾಯಿಸಿಗಂಡದೆ. ಜ್ವತೆಲಿರೊ ಮಂತ್ರಿಗಳು ಕೊರೋನಾದಲ್ಲೂ ಕಾಸು ತಿಂತಾ ಅವುರೆ. ಅಂತೂ ಸೂಕುಸ್ಮುವಾಗಿ ನೋಡಿದ್ರೆ ಯಯಾತಿ ಗೋಳಾಟ ಹೆಡೂರಪ್ಪನಿಗೂ ಹಠಗಾಯಿಸಿಗಂಡದೆ. ಮುಪ್ಪು ಅನಿವಾರ್ಯ ಅಧಿಕಾರದಿಂದ ಇಳಿಯೋದು ಅನಿವಾರ್ಯ, ವಿಜಯೇಂದ್ರನ್ನ ಮುಂದೆ ತರೋದು ಅನಿವಾರ್ಯ, ಇಂತ ಅನಿವಾರ್ಯಗಳೆ ಎಡೂರಪ್ಪನ್ನ ಬಗ್ಗಸಬಹುದು ಕಣಕ್ಕ.’

‘ಅದೇನಾರ ಆಗ್ಲಿ ಬಡುವುರು ತಿನ್ನ ಅಕ್ಕಿನೆ ಕಡಮೆ ಮಾಡ್ಯವುನಂತೆ ಇವುನಿಗೆ ವಳ್ಳೆದಾದತೆ?’

‘!?


ಇದನ್ನು ಓದಿ: ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು – ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...