Homeಅಂಕಣಗಳುಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

ಯಡೂರಪ್ಪ ಯಯಾತಿ ಓತ್ತಾಯಿದ್ದನಂತೆ!- ಕಟ್ಟೆಪುರಾಣ

- Advertisement -
- Advertisement -

ಉಗ್ರಿ ಚಾಡಿ ಹೇಳುವ ದನಿಯಲ್ಲಿ

‘ನೋಡೆ ಜುಮ್ಮಿ, ಈ ಬಿಜೆಪಿ ಸರಕಾರದೋರು ಕೊರೋನಾ ತಡಿಯಕ್ಕೆ ಅಂತ ಇರೊ ಅವುಸ್ದಿ, ಮಾತ್ರೆ, ಸ್ಯಾನಿಟೈಸರು, ಕಿಟ್ಟು, ಬೆಡ್ಡು ಇದನ್ಯಲ್ಲ ತಗಳವಾಗ ಒಂದುಕ್ಯರಡು ಅಂತ ದುಡ್ಡು ಕೊಟ್ಟು ಕೋಟ್ಯಾಂತರ್ರುಪಾಯಿ ಹ್ವಡದವುರಂತೆ’ ಎಂದ.

‘ಅಯ್ಯೋ ಇನ್ಯಂಥ ಗತಿಗ್ಯಟ್ಟ ಮುಂಡೆ ಮಕ್ಕಳಿವುರೂ, ಇದರಲ್ಲು ದುಡ್ಡು ವಡದರೇ’ ಎಂದಳು.

‘ಇದರಲ್ಲೆ ಕಣೆ ಹ್ವಡಿಯದು. ಯಾಕಂದ್ರೆ ಜನ ನಂಬದಿಲ್ಲ ಅಂತ ಅವುರಿಗೂ ಗೊತ್ತು.’

‘ಮನಸ್ಯಂಗೆ ಬತ್ಲ ಅವುರಿಗೆ ಹ್ಯಣ ತಿನ್ನೊ ನನ್ನ ಮಕ್ಕಳಿವುರು.’

‘ಆ ಟೈಮಲ್ಲಿ ಮನಸು ಕ್ಯಲಸ ಮಾಡದಿಲ್ಲ ಕಣಕ್ಕ. ಜನಗಳೂ ಇಗಿರೊ ಕಷ್ಟದಲ್ಲಿ ಅದ್ನ್ಯಲ್ಲ ನೋಡದಿಲ್ಲ. ಕೇಳದಿಲ್ಲ ಅಂತ ಅವುರಿಗೂ ಗೊತ್ತು’ ಎಂದ ವಾಟಿಸ್ಸೆ.

‘ಅಂಗರಿವುರು ಜನಗಳ ಉಳಸದಿಲ್ಲ ಬುಡು.’

‘ಜನಗಳ ಉಳಸರಾಗಿದ್ರೆ ಇಂತ ತೀರಮಾನ ತಗತಿದ್ರೇನಕ್ಕ.’

‘ಯಾವ ತೀರಮಾನ.’

‘ಕೆಲವು ಜಿಲ್ಲೆಯ ಮಧ್ಯಾಹ್ನದ ಮ್ಯಾಲೆ ಲಾಕ್‍ಡವುನ್ ಮಾಡ್ತಾ ಅವುರೆ. ಅಲ್ಲ ಕಣಕ್ಕ ವತ್ತರಿಂದ ಜನ ನಾಯಿ ತಿರಿಗಿದಂಗೆ ತಿರಗಿ ಮೂರುಗಂಟಿಗೆ ಮನಿಗೆ ಸೇರಿಕತ್ತರೆ. ಅಮ್ಯಾಲೆ ಲಾಕ್‍ಡವುನ್ ಆದ್ರೆಷ್ಟು ಬುಟ್ಟರೆಸ್ಟೂ ಇಂತದೂ ತಿಳಿಯದಿಲವಲ್ಲ ಏನೇಳನ.’

‘ಎಡೂರಪ್ಪನಿಗಾಗ್ಲೆ ವಯಿಸಾಯ್ತು ಕಣೊ, ಇಂತ ಸೂಕುಸ್ಮೆ ಹ್ವಳಿಯದಿಲ್ಲ ಅವುನಿಗೆ.’

‘ನಿಜಕಣೊ ಉಗ್ರಿ, ಅದ್ಕೆ ನೊಡು ಯಯಾತಿ ಓತ್ತಾಕುಂತವುನೆ.’

‘ಯಯ್ಯಾತಿ ಅಂದ್ರೇನ್ಲ.’

‘ಅದು ಪುಸ್ತಗ ಕಣಕ್ಕ ಮುದುಕರ್ಯಲ್ಲ ಓದೊ ಪುಸ್ತಕ.’

‘ಅದ್ಯಂತೆದ್ಲ ಮುದುಕುರೋದೊ ಪುಸಗ.’

‘ಅದರ ಕತೆ ಗೊತ್ತೇನಕ್ಕ.’

‘ನನಿಗೇನು ಗೊತ್ತು ಹೇಳ್ಳ.’

‘ಯಯಾತಿ ಒಬ್ಬ ರಾಜ ಕಣಕ್ಕ. ರಾಜ ಅಂದ ಮ್ಯಾಲೆ ಹೆಂಗಸರ ಚಟ ಇದ್ದೇ ಇರತದೆ. ಅಂಗೆ ಇವುನು ರುಶಿಮುನಿ ಮಗಳ ಹಿಡಕಳಕ್ಕೋದ ಅವುಳೋಗಿ ಅವುರಪ್ಪನಿಗೇಳಿದ್ಲು.’

‘ರಾಜನಿಗೆ ಹೆಡತಿ ಇರಲಿಲ್ವೆ?’

‘ಇರತರೆ ಕಣಕ್ಕ. ಅವುರ್ಯಲ್ಲ ನ್ಯಪಕಿರತರೆ ಇವುರು ಮಾತ್ರ ಚನ್ನಾಗಿರೊರನ್ಯಲ್ಲ ಹಿಡಕಳಕ್ಕೋಯ್ತರೆ, ಅಂಗೆ ಯಯಾತಿನೂ ಹೋಗಿ ಬ್ರಾಂಬ್ರುಡುಗಿ ಕೆಣಕಿದ. ಸಾಮಾನ್ಯವಾಗಿ ಬ್ರಾಂಬ್ರುಡುಗಿರಿಗೆ ಸೆಕ್ಸ್ ಕಡಮೆ. ಅದ್ಕೆ ಹೋಗಿ ಅವುರಪ್ಪನಿಗೇಳಿದ್ಲು.’

‘ಸರಿಯಾಗೆ ಮ್ಯಾಡವುಳೆ ಬುಡು.’

‘ಅವುರಪ್ಪ ಮಹಾಕೋಪಿಸ್ಟ. ಅವುನೋಗಿ ಯಯಾತಿ ಬೈದು ನಿನ್ನ ಪ್ರಾಯದಿಂದ್ಲೆ ಹಿಂಗೆ ಮಾಡಿದ್ದಿ ಅದ್ಕೆ ನೀನು ಮುದುಕಾಗೋಗತ್ತಗೆ ಅಂತ ಶಾಪ ಕೊಟ್ಟ. ಆ ಕೂಡ್ಳೆ ಯಯಾತಿ ನಮ್ಮ ಸೀರ ಮಾವನಂಗಾದ.’

‘ಅಯ್ಯೋ ಪಾಪ ಅಂತ ಸಾಪನೇನ್ಲ ಕೊಡದು.’

‘ಅದವುನಿಗೂ ಗೊತ್ತಾಯ್ತು ಕಣಕ್ಕ. ಅದ್ಕೆ ಯಯಾತಿಗೆ ನಿನ್ನ ಮುಪ್ಪ ಯಾರಿಗಾರ ಕೊಟ್ರೆ ಅವುರ ಹರೇಯ ನಿನಿಗೆ ಬತ್ತದೆ ಹೋಗು ಅಂದ. ಸರಿ ಯಯಾತಿ ಬಂದು ಯಾರಾರ ನನ್ನ ಮುಪ್ಪ ತಗಳಿ ಅರ್ದ ರಾಜ್ಯ ಕೊಡ್ತಿನಿ ಅಂದ ಯಾರೂ ಬರಲಿಲ್ಲ.’

‘ಅದ್ಯಂಗೆ ಬಂದರ್ಲ ಮುಪ್ಪು ಯಾರಿಗೆ ಬೇಕೇಳು.’

‘ಅಂಗೆ ಆಯ್ತು ಕಣಕ್ಕ. ಕಡಿಗೆ ಅಪ್ಪನ ಗೋಳಾಟ ನೋಡಕ್ಕಾಗದೆ ಮಗನೆ ಬಂದು ಈಸ್ಕಂಡ. ಅಪ್ಪ ಹರೇವುದೋನಾದ. ಮಗ ಮುದುಕಾದ ಅದ ನೊಡಿ ಸ್ವಸೆ ನ್ಯಾಣಾಯ್ಕಂಡು ಸತ್ತೋದ್ಲು. ಅದು ಗೊತ್ತಿಲ್ಲದೆ ಯಯಾತಿ ಹೆಡತಿ ಹಿಡಕಳಕ್ಕೊದ. ಅವುಳು ನಿನ್ನ ಪ್ರಾಯ ನನ್ನ ಮಗಂದು ಮುಟ್ಟುಬ್ಯಾಡ ಅಂದ್ಲು. ಯಾಯತಿ ಅಳತ ತಿರಗ ಮಗನಿಗೆ ಪ್ರಾಯಕೊಟ್ಟು ಮುದುಕಾದ.’

‘ಚನಾಗ್ಯದೆ ಕಂಡ್ಳ ಕತೆ. ಇದ್ಯಾಕ್ಕೋತ್ತ ಅವುನೆ ಎಡೂರಪ್ಪಾ.’

‘ಯಾಕೆ ಅಂದ್ರೆ ಆಗ್ಲೆ ಯಪ್ಪಂತೆಟ್ಟು ವರ್ಸಾಯ್ತ ಅದೆ. ಶೋಬಕ್ಕನೂ ದೂರಾಗ್ಯವುಳೆ. ಪ್ರಾಯ ಹೋಯ್ತಾ ಅದೆ. ಹೈಕಮಾಂಡು ಎಡೂರಪ್ಪನೆ ಇಳಿಲಿ ಅಂತ ಕಿರುಕುಳ ಕೊಡ್ತಾ ಅವುರೆ. ಕೊರೋನಾ ಸಮಸ್ಯೆ ಹಠಗಾಯಿಸಿಗಂಡದೆ. ಜ್ವತೆಲಿರೊ ಮಂತ್ರಿಗಳು ಕೊರೋನಾದಲ್ಲೂ ಕಾಸು ತಿಂತಾ ಅವುರೆ. ಅಂತೂ ಸೂಕುಸ್ಮುವಾಗಿ ನೋಡಿದ್ರೆ ಯಯಾತಿ ಗೋಳಾಟ ಹೆಡೂರಪ್ಪನಿಗೂ ಹಠಗಾಯಿಸಿಗಂಡದೆ. ಮುಪ್ಪು ಅನಿವಾರ್ಯ ಅಧಿಕಾರದಿಂದ ಇಳಿಯೋದು ಅನಿವಾರ್ಯ, ವಿಜಯೇಂದ್ರನ್ನ ಮುಂದೆ ತರೋದು ಅನಿವಾರ್ಯ, ಇಂತ ಅನಿವಾರ್ಯಗಳೆ ಎಡೂರಪ್ಪನ್ನ ಬಗ್ಗಸಬಹುದು ಕಣಕ್ಕ.’

‘ಅದೇನಾರ ಆಗ್ಲಿ ಬಡುವುರು ತಿನ್ನ ಅಕ್ಕಿನೆ ಕಡಮೆ ಮಾಡ್ಯವುನಂತೆ ಇವುನಿಗೆ ವಳ್ಳೆದಾದತೆ?’

‘!?


ಇದನ್ನು ಓದಿ: ಡಿ.ಕೆ.ಶಿ ಬಿಜೆಪಿಗಳ ಹೆದರಸ್ತನೆ ಬುಡೊ. ನೋ ಡವುಟು – ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...