HomeಮುಖಪುಟYes Bank ಪತನ ಅಂತ್ಯವೋ, ಆರಂಭವೋ?

Yes Bank ಪತನ ಅಂತ್ಯವೋ, ಆರಂಭವೋ?

- Advertisement -
- Advertisement -

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ Yes Bank ಪತನದ ಹಾದಿ ಹಿಡಿದಿದ್ದು ಆ ಬ್ಯಾಂಕಿನಲ್ಲಿ ಡಿಪಾಜಿಟ್ ಇಟ್ಟಿದ್ದ ಗ್ರಾಹಕರ ಹಣವನ್ನು ರಕ್ಷಿಸಲು ಮತ್ತು Yes Bankನ್ನು ಪೂರ್ಣ ಮುಳುಗಡೆಯಿಂದ ರಕ್ಷಿಸಲು ಪಬ್ಲಿಕ್ ಸೆಕ್ಟರ್ ಬ್ಯಾಂಕಾದ SBI, ಯೆಸ್ ಬ್ಯಾಂಕಿನ 49% ಶೇರುಗಳನ್ನು 2450 ಹೂಡಿಕೆ ಮಾಡಿ ಕೊಳ್ಳುವಂತೆ RBI ಮಾಡಿದೆ.

ಆದರೆ, ಯೆಸ್ ಬ್ಯಾಂಕನ್ನು ಈ ಕ್ರೈಸಿಸ್‍ನಿಂದ ಪಾರು (bail out) ಮಾಡಲು ಕನಿಷ್ಟ 21,000 ಕೋಟಿ ರೂಪಾಯಿಗಳ ಅವಶ್ಯಕತೆ ಇತ್ತು. ಆದರೆ, ಈಗ SBI ಹೂಡಿಕೆ ಮಾಡಿರುವುದು ಕೇವಲ 2450 ಕೋಟಿ ರೂಪಾಯಿಗಳು. ಆದ್ದರಿಂದ RBIನ ಈ ನಡೆ ಗ್ರಾಹಕರ ಡಿಪಾಜಿಟ್ ಹಣದ ರಕ್ಷಣೆ ಯಾವ ಮಟ್ಟದಲ್ಲಿ ಮಾಡಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಬಹುತೇಕ ಕಡೆಯ ಹದಿನೈದು ವರ್ಷಗಳಲ್ಲಿ ಒಂದು ಖಾಸಗಿ ಬ್ಯಾಂಕನ್ನು ಪತನದಿಂದ ರಕ್ಷಿಸಲು ಸರ್ಕಾರ ಮುಂದಾಗಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡುತ್ತ, ಈ ಬ್ಯಾಂಕಿಂಗ್ ಕ್ಷೇತ್ರದ ಈ ರೀತಿಯ ಪತನದ ಕತೆ ಇಲ್ಲಿಗೇ ಮುಗಿಯಲಿದೆಯೇ ಅತವಾ ಮುಂದುವರೆಯಲಿದೆಯೇ ನೋಡೋಣ.

ಯಾವುದೇ ಬ್ಯಾಂಕಿನ ವ್ಯವಹಾರ ಸರಳವಾಗಿ ಗ್ರಾಹಕರಿಂದ ಡಿಪಾಜಿಟ್ಟುಗಳನ್ನು ಕಡಿಮೆ ಬಡ್ಡಿದರದಲ್ಲಿ ಇರಿಸಿಕೊಂಡು, ಆ ಡಿಪಾಜಿಟ್ ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಅವಶ್ಯಕತೆಯುಳ್ಳ ಗ್ರಾಹಕರಿಗೆ ಕೊಟ್ಟು ಲಾಭ ಗಳಿಸುವುದು.

ಆದರೆ ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಬ್ಯಾಂಕುಗಳು ತೊಂದರೆಗೆ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ. ಈ ರೀತಿ ಕನಿಷ್ಟ ತೊಂಬತ್ತು ದಿನ ಕೊಟ್ಟ ಸಾಲದ ಕಂತು ವಾಪಸ್ ಬರದೇ ಇದ್ದಾಗ ಅಂತ ಸಾಲವನ್ನು ಕೆಟ್ಟ ಸಾಲ (Bad loans) ಎಂದು ಕರೆಯಲಾಗುತ್ತದೆ. ಈ ಕೆಟ್ಟ ಸಾಲಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಾದಷ್ಟೂ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ಆಗ ಅಂತಹ ಬ್ಯಾಂಕಿನಲ್ಲಿ ಕಷ್ಟಪಟ್ಟು ಉಳಿಸಿದ ಹಣವನ್ನು ಡಿಪಾಜಿಟ್ ಇಟ್ಟಿರುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇರೀತಿ ಯೆಸ್ ಬ್ಯಾಂಕ್ ಕೂಡ ಕೆಟ್ಟ ಸಾಲದ ಸುಳಿಗೆ ಸಿಲುಕಿತ್ತು. ಈ ರೀತಿ ಸಾಲ ತೆಗೆದುಕೊಂಡು ವಾಪಸ್ ಕೊಡದಿರುವವರು ಬಹುತೇಕ ಕಾರ್ಪೊರೇಟ್ ಕಂಪನಿಗಳವರಾಗಿರುತ್ತಾರೆ ಮತ್ತು ಯೆಸ್ ಬ್ಯಾಂಕ್ ಕೊಟ್ಟ ಸಾಲದಲ್ಲಿ ಸುಮಾರು 63% ರಷ್ಟನ್ನು ಕಾರ್ಪೊರೇಟ್ ಕಂಪನಿಗಳಿಗೇ (ಅಥವಾ ಕಾರ್ಪೊರೇಟ್ ವ್ಯಕ್ತಿಗಳಿಗೆ) ಕೊಡಲಾಗಿತ್ತು. ಬ್ಯಾಂಕುಗಳ NPA ಯನ್ನೂ ಒಂದು ಪ್ರಮುಖ ವಿಷಯ ಮಾಡಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿಯೇ ಯೆಸ್ ಬ್ಯಾಂಕ್ ಕೊಟ್ಟ ಸಾಲ 400% ( 2014 ರಿಂದ 2019 ರವರೆಗೆ 55000 ಕೋಟಿಯಿಂದ 241000 ಕೋಟಿ) ರಷ್ಟು ಏರಿಕೆಯಾಗಿದೆ ಎಂಬ ವಿಷಯ ಈ ರೀತಿಯ ಕೆಟ್ಟ ಸಾಲಗಳ ನೀಡುವಿಕೆ ಸರ್ಕಾರಕ್ಕೆ ಅರಿವಿದ್ದೂ ನಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗೆಯೇ ಈ ರೀತಿಯ ಸಾಲ ಪಡೆದವರಲ್ಲಿ ಅನೇಕರು ಸರ್ಕಾರಕ್ಕೆ ( ಯಾವುದೇ ಸರ್ಕಾರವಿದ್ದಾಗಲೂ) ಆಪ್ತರಾಗಿರುವವರು ಎಂಬುದು ಈ ವ್ಯವಹಾರದ ಮತ್ತೊಂದು ಮುಖವನ್ನು ನಮಗೆ ತೆರೆದು ತೋರಿಸುತ್ತದೆ.

ಈ ಯೆಸ್ ಬ್ಯಾಂಕಿನ ಒಟ್ಟಾರೆ NPA ಪ್ರಮಾಣ ಅದು ಕೊಟ್ಟಿರುವ ಒಟ್ಟು ಸಾಲದ 8% ಗಳಷ್ಟು ಮಾತ್ರ ( ಈ ಪ್ರಮಾಣ 2% ಗಿಂತ ಹೆಚ್ಚಿದ್ದರೆ ಅಂತ ಬ್ಯಾಂಕ್ ವ್ಯವಹಾರ ಅನಾರೋಗ್ಯಕರವಾಗಿದೆಯೆಂದು ಹೇಳಲಾಗುತ್ತದೆ). ಇಷ್ಟು ಕೆಟ್ಟ ಸಾಲದ ಹೊರೆಯಿಂದಾಗಿ ಯೆಸ್ ಬ್ಯಾಂಕ್ ತನ್ನ ಡಿಪಾಜಿಟ್‍ದಾರರಿಗೆಹಣ ಹಿಂದುರಿಗಿಸಲಾರದ ಸ್ಥಿತಿಗೆ ತಲುಪಿತ್ತು.

ಹಾಗೆ ನೋಡಿದರೆ, ನಮ್ಮ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ NPA ಪ್ರಮಾಣ ಶೇ ಹತ್ತಕಿಂತ ಹೆಚ್ಚಿದೆ. ಶೇ. ಹತ್ತಕ್ಕಿಂತ ಹೆಚ್ಚು ಓPಂ ಹೊಂದಿರುವ ಒಟ್ಟು ಹದಿನೇಳು ಬ್ಯಾಂಕುಗಳಲ್ಲಿ ಹದಿನಾರು ಬ್ಯಾಂಕುಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳೇ ಆಗಿವೆ. IDBI, UCO Bank, IOB ಗಳ NPA ಪ್ರಮಾಣ 20% ಗಿಂತ ಹೆಚ್ಚಿದೆ.

ಹಾಗಿದ್ದರೆ, ನಮ್ಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಇಂಥಾ ಸ್ಥಿತಿಯಲ್ಲಿ ಗ್ರಾಹಕರ ಡಿಪಾಜಿಟ್ ಹಣಕ್ಕೆ ಬಡ್ಡಿ ಕೊಡಲು ಮತ್ತು ವಾಪಸ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ನೋಡೋಣ. ನಿಮಗೆ ನೆನಪಿರುವ ಹಾಗೆ 2016-17 ಮತ್ತು 2017-18 ರಲ್ಲಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಟ್ಟು 50000 ಕೋಟಿ ರೂಪಾಯಿಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಕೊಟ್ಟಿದೆ. ಇದರಿಂದಾಗಿ ಭಾರೀ ಓPಂಯ ಹೊರತಾಗಿಯೂ ಈ ಬ್ಯಾಂಕುಗಳು ಒಂದು ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ.

ಆದರೆ, ಸರ್ಕಾರ ಬ್ಯಾಂಕುಗಳಿಗೆ ಕೊಟ್ಟ ಈ ಹಣ ನಮ್ಮೆಲ್ಲರ ತೆರಿಗೆಯ ಹಣ. ಇದನ್ನು ರಸ್ತೆಗೋ, ಶಾಲೆಗೋ ಉಪಯೋಗಿಸುವ ಬದಲು ಸರ್ಕಾರ ಬ್ಯಾಂಕುಗಳಿಗೆ ಕೊಟ್ಟಿದೆ.

ಇದರಿಂದ ಒಂದು ಕಡೆ ಅಭಿವೃದ್ಧಿ ಕುಂಠಿತವಾದರೆ ಮತ್ತೊಂದೆಡೆ ದೇಶದ ವಿತ್ತೀಯ ಕೊರತೆಯೂ ಹೆಚ್ಚುತ್ತದೆ(ಈ ಹಣ ಸರ್ಕಾರದ ಖರ್ಚಿನಡಿ ಬರುವುದರಿಂದ).

ಒಟ್ಟಿನಲ್ಲಿ ಬ್ಯಾಂಕುಗಳು ಮಾಡುವ ತಪ್ಪಿಗೆ (ಈ ತಪ್ಪಿನಲ್ಲಿ ಇದನ್ನು ತಡೆಯುವುದಿರಲಿ ಪರೋಕ್ಷವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಸರ್ಕಾರದ ಪಾಲು ದೊಡ್ಡದಿದೆ) ನಮ್ಮ ತೆರಿಗೆ ದುಡ್ಡು ಪೋಲಾಗುತ್ತಿದೆಯಷ್ಟೇ ಅಲ್ಲದೆ ನಮ್ಮೆಲ್ಲರ ಮೇಲೂ ಹೆಚ್ಚೆಚ್ಚು ಸಾಲದ ಹೊರೆ ಬೀಳುತ್ತಿದೆ.

ಹೀಗೆ NPA ಗೆ ಸಿಲುಕಿದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಕಾಪಾಡಲು ಮತ್ತು NPA ಯಿಂದಾಗುವ ವಿತ್ತೀಯ ಕೊರತೆಯಿಂದ ತಕ್ಷಣ ಪಾರಾಗಲು ಸರ್ಕಾರ ಅಕ್ಟೋಬರ್ 2017 ರಿಂದ Recapitalization bonds ಅನ್ನು ಬಿಡುಗಡೆ ಮಾಡಿತು. ಬ್ಯಾಂಕುಗಳು ತಮ್ಮ ಡಿಪಾಜಿಟ್ ಹಣದಿಂದ Recapitalization bond ಗಳನ್ನು ಖರೀದಿಸಬೇಕು. ಅ ಹಣವನ್ನು ಭಾರೀ ಸಂಕಷ್ಟದಲ್ಲಿರುವ ಬ್ಯಾಂಕುಗಳಿಗೆ ಸರ್ಕಾರ ವಿತರಿಸುತ್ತದೆ.

ಈ ರೀತಿಯಾಗಿ ಇಲ್ಲಿಯತನಕ ಒಟ್ಟು 250000 ಕೋಟಿಗಳಷ್ಟು ಬೆಲೆಯ ಬಾಂಡುಗಳನ್ನು ವಿವಿಧ ಬ್ಯಾಂಕುಗಳು ಖರೀದಿಸಿವೆ. ಅಂದರೆ ನಮ್ಮ ಡಿಪಾಜಿಟ್ ಹಣದಿಂದಲೇ ಬ್ಯಾಂಕುಗಳನ್ನು NPA ಸುಳಿಯಿಂದ ಮೇಲೆತ್ತುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದರಿಂದ ಸರ್ಕಾರ ಬಜೆಟಲ್ಲಿ ಬ್ಯಾಂಕುಗಳಿಗೆ ಕೊಡುವ ಹಣವನ್ನು ತಪ್ಪಿಸಿ ಅದರಿಂದಾವಾಗುವಷ್ಟು ವಿತ್ತೀಯ ಕೊರತೆಯಿಂದ ತಕ್ಷಣಕ್ಕೆ ಪಾರಾಗುವ ಯತ್ನ ಮಾಡಿತು.

ಆದರೆ, ಈ ಬಾಂಡುಗಳನ್ನು ಖರೀದಿಸಿದ ಹಣಕ್ಕೆ ಸರ್ಕಾರ ವಾರ್ಷಿಕ 6 – 8% ಬಡ್ಡಿ ಕೊಡಬೇಕಿದೆ. ಈ ಬಡ್ಡಿಯೂ ಒಂದು ಮಟ್ಟಿಗೆ ವಿತ್ತೀಯ ಕೊರತೆ ಹೆಚ್ಚಿಸಲಿದೆ. ಅದಲ್ಲದೆ ಈ ಬಾಂಡುಗಳು ಮುಂದೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಮೆಚ್ಯೂರ್ ಆದಾಗ ಅಷ್ಟೂ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ.

ಅಂದರೆ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಹತ್ತಾರು ಲಕ್ಷ ಕೋಟಿಗಳಷ್ಟು ಹೊರೆ ಒಟ್ಟಿಗೆ ಬೀಳಲಿದ್ದು, ಸರ್ಕಾರದ ಈ ಕ್ರಮ ಬ್ಯಾಂಕಿಂಗ್ ಪತನವನ್ನು ಮುಂದೂಡುಲಷ್ಟೇ ಶಕ್ತವಾಗಲಿದೆ. ಈ ಮುಂದೂಡಲ್ಪಟ್ಟದ್ದು ಮುಂದಿನ ಹತ್ತು ವರ್ಷಗಳಲ್ಲಿ ಈಗಿನದಕ್ಕಿಂತ ಭಾರೀ ಸಮಸ್ಯೆಯಾಗಿ ಎರಗುವ ಎಲ್ಲ ಸಾಧ್ಯತೆಗಳೂ ಇವೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೇ ಹೆಚ್ಚಿನ NPA ಹೊಂದಿರುವುದನ್ನು (ಕೆಲವು ಶೇ ಇಪ್ಪತ್ತಕಿಂತ ಹೆಚ್ಚು) ನೋಡಿದಾಗ ಮತ್ತು ಸರ್ಕಾರದ ಕ್ರಮಗಳು ಕೇವಲ ತಾತ್ಕಾಲಿಕವಾಗಿರುವಾಗ ಈ ಯೆಸ್ ಬ್ಯಾಂಕ್ ಬಿಕ್ಕಟ್ಟು ಅಂತ್ಯವಲ್ಲ, ಆರಂಭ ಎಂದು ಯಾರಿಗಾದರೂ ಗೊತ್ತಾಗುತ್ತದೆ.

ಕೊನೆಯದಾಗಿ, ಒಂದು ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಅರಿವಿರುವವರಿಗೆ ನಮ್ಮ ಬ್ಯಾಂಕುಗಳ ಪರಿಹಾರವಾಗದ NPA ಬಿಕ್ಕಟ್ಟನ್ನು ನೋಡಿದಾಗ ನಮಗೆ ಬೇರೆಯದೇ ಅಭಿವೃದ್ದಿ ಮಾದರಿಯ ಅವಶ್ಯಕತೆ ಇದೆಯೆಂಬುದು ಸುಸ್ಪಷ್ಟವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...