HomeಮುಖಪುಟYes Bank ಪತನ ಅಂತ್ಯವೋ, ಆರಂಭವೋ?

Yes Bank ಪತನ ಅಂತ್ಯವೋ, ಆರಂಭವೋ?

- Advertisement -
- Advertisement -

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ Yes Bank ಪತನದ ಹಾದಿ ಹಿಡಿದಿದ್ದು ಆ ಬ್ಯಾಂಕಿನಲ್ಲಿ ಡಿಪಾಜಿಟ್ ಇಟ್ಟಿದ್ದ ಗ್ರಾಹಕರ ಹಣವನ್ನು ರಕ್ಷಿಸಲು ಮತ್ತು Yes Bankನ್ನು ಪೂರ್ಣ ಮುಳುಗಡೆಯಿಂದ ರಕ್ಷಿಸಲು ಪಬ್ಲಿಕ್ ಸೆಕ್ಟರ್ ಬ್ಯಾಂಕಾದ SBI, ಯೆಸ್ ಬ್ಯಾಂಕಿನ 49% ಶೇರುಗಳನ್ನು 2450 ಹೂಡಿಕೆ ಮಾಡಿ ಕೊಳ್ಳುವಂತೆ RBI ಮಾಡಿದೆ.

ಆದರೆ, ಯೆಸ್ ಬ್ಯಾಂಕನ್ನು ಈ ಕ್ರೈಸಿಸ್‍ನಿಂದ ಪಾರು (bail out) ಮಾಡಲು ಕನಿಷ್ಟ 21,000 ಕೋಟಿ ರೂಪಾಯಿಗಳ ಅವಶ್ಯಕತೆ ಇತ್ತು. ಆದರೆ, ಈಗ SBI ಹೂಡಿಕೆ ಮಾಡಿರುವುದು ಕೇವಲ 2450 ಕೋಟಿ ರೂಪಾಯಿಗಳು. ಆದ್ದರಿಂದ RBIನ ಈ ನಡೆ ಗ್ರಾಹಕರ ಡಿಪಾಜಿಟ್ ಹಣದ ರಕ್ಷಣೆ ಯಾವ ಮಟ್ಟದಲ್ಲಿ ಮಾಡಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಬಹುತೇಕ ಕಡೆಯ ಹದಿನೈದು ವರ್ಷಗಳಲ್ಲಿ ಒಂದು ಖಾಸಗಿ ಬ್ಯಾಂಕನ್ನು ಪತನದಿಂದ ರಕ್ಷಿಸಲು ಸರ್ಕಾರ ಮುಂದಾಗಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡುತ್ತ, ಈ ಬ್ಯಾಂಕಿಂಗ್ ಕ್ಷೇತ್ರದ ಈ ರೀತಿಯ ಪತನದ ಕತೆ ಇಲ್ಲಿಗೇ ಮುಗಿಯಲಿದೆಯೇ ಅತವಾ ಮುಂದುವರೆಯಲಿದೆಯೇ ನೋಡೋಣ.

ಯಾವುದೇ ಬ್ಯಾಂಕಿನ ವ್ಯವಹಾರ ಸರಳವಾಗಿ ಗ್ರಾಹಕರಿಂದ ಡಿಪಾಜಿಟ್ಟುಗಳನ್ನು ಕಡಿಮೆ ಬಡ್ಡಿದರದಲ್ಲಿ ಇರಿಸಿಕೊಂಡು, ಆ ಡಿಪಾಜಿಟ್ ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಅವಶ್ಯಕತೆಯುಳ್ಳ ಗ್ರಾಹಕರಿಗೆ ಕೊಟ್ಟು ಲಾಭ ಗಳಿಸುವುದು.

ಆದರೆ ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಬ್ಯಾಂಕುಗಳು ತೊಂದರೆಗೆ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ. ಈ ರೀತಿ ಕನಿಷ್ಟ ತೊಂಬತ್ತು ದಿನ ಕೊಟ್ಟ ಸಾಲದ ಕಂತು ವಾಪಸ್ ಬರದೇ ಇದ್ದಾಗ ಅಂತ ಸಾಲವನ್ನು ಕೆಟ್ಟ ಸಾಲ (Bad loans) ಎಂದು ಕರೆಯಲಾಗುತ್ತದೆ. ಈ ಕೆಟ್ಟ ಸಾಲಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಾದಷ್ಟೂ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ಆಗ ಅಂತಹ ಬ್ಯಾಂಕಿನಲ್ಲಿ ಕಷ್ಟಪಟ್ಟು ಉಳಿಸಿದ ಹಣವನ್ನು ಡಿಪಾಜಿಟ್ ಇಟ್ಟಿರುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇರೀತಿ ಯೆಸ್ ಬ್ಯಾಂಕ್ ಕೂಡ ಕೆಟ್ಟ ಸಾಲದ ಸುಳಿಗೆ ಸಿಲುಕಿತ್ತು. ಈ ರೀತಿ ಸಾಲ ತೆಗೆದುಕೊಂಡು ವಾಪಸ್ ಕೊಡದಿರುವವರು ಬಹುತೇಕ ಕಾರ್ಪೊರೇಟ್ ಕಂಪನಿಗಳವರಾಗಿರುತ್ತಾರೆ ಮತ್ತು ಯೆಸ್ ಬ್ಯಾಂಕ್ ಕೊಟ್ಟ ಸಾಲದಲ್ಲಿ ಸುಮಾರು 63% ರಷ್ಟನ್ನು ಕಾರ್ಪೊರೇಟ್ ಕಂಪನಿಗಳಿಗೇ (ಅಥವಾ ಕಾರ್ಪೊರೇಟ್ ವ್ಯಕ್ತಿಗಳಿಗೆ) ಕೊಡಲಾಗಿತ್ತು. ಬ್ಯಾಂಕುಗಳ NPA ಯನ್ನೂ ಒಂದು ಪ್ರಮುಖ ವಿಷಯ ಮಾಡಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿಯೇ ಯೆಸ್ ಬ್ಯಾಂಕ್ ಕೊಟ್ಟ ಸಾಲ 400% ( 2014 ರಿಂದ 2019 ರವರೆಗೆ 55000 ಕೋಟಿಯಿಂದ 241000 ಕೋಟಿ) ರಷ್ಟು ಏರಿಕೆಯಾಗಿದೆ ಎಂಬ ವಿಷಯ ಈ ರೀತಿಯ ಕೆಟ್ಟ ಸಾಲಗಳ ನೀಡುವಿಕೆ ಸರ್ಕಾರಕ್ಕೆ ಅರಿವಿದ್ದೂ ನಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗೆಯೇ ಈ ರೀತಿಯ ಸಾಲ ಪಡೆದವರಲ್ಲಿ ಅನೇಕರು ಸರ್ಕಾರಕ್ಕೆ ( ಯಾವುದೇ ಸರ್ಕಾರವಿದ್ದಾಗಲೂ) ಆಪ್ತರಾಗಿರುವವರು ಎಂಬುದು ಈ ವ್ಯವಹಾರದ ಮತ್ತೊಂದು ಮುಖವನ್ನು ನಮಗೆ ತೆರೆದು ತೋರಿಸುತ್ತದೆ.

ಈ ಯೆಸ್ ಬ್ಯಾಂಕಿನ ಒಟ್ಟಾರೆ NPA ಪ್ರಮಾಣ ಅದು ಕೊಟ್ಟಿರುವ ಒಟ್ಟು ಸಾಲದ 8% ಗಳಷ್ಟು ಮಾತ್ರ ( ಈ ಪ್ರಮಾಣ 2% ಗಿಂತ ಹೆಚ್ಚಿದ್ದರೆ ಅಂತ ಬ್ಯಾಂಕ್ ವ್ಯವಹಾರ ಅನಾರೋಗ್ಯಕರವಾಗಿದೆಯೆಂದು ಹೇಳಲಾಗುತ್ತದೆ). ಇಷ್ಟು ಕೆಟ್ಟ ಸಾಲದ ಹೊರೆಯಿಂದಾಗಿ ಯೆಸ್ ಬ್ಯಾಂಕ್ ತನ್ನ ಡಿಪಾಜಿಟ್‍ದಾರರಿಗೆಹಣ ಹಿಂದುರಿಗಿಸಲಾರದ ಸ್ಥಿತಿಗೆ ತಲುಪಿತ್ತು.

ಹಾಗೆ ನೋಡಿದರೆ, ನಮ್ಮ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ NPA ಪ್ರಮಾಣ ಶೇ ಹತ್ತಕಿಂತ ಹೆಚ್ಚಿದೆ. ಶೇ. ಹತ್ತಕ್ಕಿಂತ ಹೆಚ್ಚು ಓPಂ ಹೊಂದಿರುವ ಒಟ್ಟು ಹದಿನೇಳು ಬ್ಯಾಂಕುಗಳಲ್ಲಿ ಹದಿನಾರು ಬ್ಯಾಂಕುಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳೇ ಆಗಿವೆ. IDBI, UCO Bank, IOB ಗಳ NPA ಪ್ರಮಾಣ 20% ಗಿಂತ ಹೆಚ್ಚಿದೆ.

ಹಾಗಿದ್ದರೆ, ನಮ್ಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಇಂಥಾ ಸ್ಥಿತಿಯಲ್ಲಿ ಗ್ರಾಹಕರ ಡಿಪಾಜಿಟ್ ಹಣಕ್ಕೆ ಬಡ್ಡಿ ಕೊಡಲು ಮತ್ತು ವಾಪಸ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ನೋಡೋಣ. ನಿಮಗೆ ನೆನಪಿರುವ ಹಾಗೆ 2016-17 ಮತ್ತು 2017-18 ರಲ್ಲಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಟ್ಟು 50000 ಕೋಟಿ ರೂಪಾಯಿಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಕೊಟ್ಟಿದೆ. ಇದರಿಂದಾಗಿ ಭಾರೀ ಓPಂಯ ಹೊರತಾಗಿಯೂ ಈ ಬ್ಯಾಂಕುಗಳು ಒಂದು ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ.

ಆದರೆ, ಸರ್ಕಾರ ಬ್ಯಾಂಕುಗಳಿಗೆ ಕೊಟ್ಟ ಈ ಹಣ ನಮ್ಮೆಲ್ಲರ ತೆರಿಗೆಯ ಹಣ. ಇದನ್ನು ರಸ್ತೆಗೋ, ಶಾಲೆಗೋ ಉಪಯೋಗಿಸುವ ಬದಲು ಸರ್ಕಾರ ಬ್ಯಾಂಕುಗಳಿಗೆ ಕೊಟ್ಟಿದೆ.

ಇದರಿಂದ ಒಂದು ಕಡೆ ಅಭಿವೃದ್ಧಿ ಕುಂಠಿತವಾದರೆ ಮತ್ತೊಂದೆಡೆ ದೇಶದ ವಿತ್ತೀಯ ಕೊರತೆಯೂ ಹೆಚ್ಚುತ್ತದೆ(ಈ ಹಣ ಸರ್ಕಾರದ ಖರ್ಚಿನಡಿ ಬರುವುದರಿಂದ).

ಒಟ್ಟಿನಲ್ಲಿ ಬ್ಯಾಂಕುಗಳು ಮಾಡುವ ತಪ್ಪಿಗೆ (ಈ ತಪ್ಪಿನಲ್ಲಿ ಇದನ್ನು ತಡೆಯುವುದಿರಲಿ ಪರೋಕ್ಷವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಸರ್ಕಾರದ ಪಾಲು ದೊಡ್ಡದಿದೆ) ನಮ್ಮ ತೆರಿಗೆ ದುಡ್ಡು ಪೋಲಾಗುತ್ತಿದೆಯಷ್ಟೇ ಅಲ್ಲದೆ ನಮ್ಮೆಲ್ಲರ ಮೇಲೂ ಹೆಚ್ಚೆಚ್ಚು ಸಾಲದ ಹೊರೆ ಬೀಳುತ್ತಿದೆ.

ಹೀಗೆ NPA ಗೆ ಸಿಲುಕಿದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಕಾಪಾಡಲು ಮತ್ತು NPA ಯಿಂದಾಗುವ ವಿತ್ತೀಯ ಕೊರತೆಯಿಂದ ತಕ್ಷಣ ಪಾರಾಗಲು ಸರ್ಕಾರ ಅಕ್ಟೋಬರ್ 2017 ರಿಂದ Recapitalization bonds ಅನ್ನು ಬಿಡುಗಡೆ ಮಾಡಿತು. ಬ್ಯಾಂಕುಗಳು ತಮ್ಮ ಡಿಪಾಜಿಟ್ ಹಣದಿಂದ Recapitalization bond ಗಳನ್ನು ಖರೀದಿಸಬೇಕು. ಅ ಹಣವನ್ನು ಭಾರೀ ಸಂಕಷ್ಟದಲ್ಲಿರುವ ಬ್ಯಾಂಕುಗಳಿಗೆ ಸರ್ಕಾರ ವಿತರಿಸುತ್ತದೆ.

ಈ ರೀತಿಯಾಗಿ ಇಲ್ಲಿಯತನಕ ಒಟ್ಟು 250000 ಕೋಟಿಗಳಷ್ಟು ಬೆಲೆಯ ಬಾಂಡುಗಳನ್ನು ವಿವಿಧ ಬ್ಯಾಂಕುಗಳು ಖರೀದಿಸಿವೆ. ಅಂದರೆ ನಮ್ಮ ಡಿಪಾಜಿಟ್ ಹಣದಿಂದಲೇ ಬ್ಯಾಂಕುಗಳನ್ನು NPA ಸುಳಿಯಿಂದ ಮೇಲೆತ್ತುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದರಿಂದ ಸರ್ಕಾರ ಬಜೆಟಲ್ಲಿ ಬ್ಯಾಂಕುಗಳಿಗೆ ಕೊಡುವ ಹಣವನ್ನು ತಪ್ಪಿಸಿ ಅದರಿಂದಾವಾಗುವಷ್ಟು ವಿತ್ತೀಯ ಕೊರತೆಯಿಂದ ತಕ್ಷಣಕ್ಕೆ ಪಾರಾಗುವ ಯತ್ನ ಮಾಡಿತು.

ಆದರೆ, ಈ ಬಾಂಡುಗಳನ್ನು ಖರೀದಿಸಿದ ಹಣಕ್ಕೆ ಸರ್ಕಾರ ವಾರ್ಷಿಕ 6 – 8% ಬಡ್ಡಿ ಕೊಡಬೇಕಿದೆ. ಈ ಬಡ್ಡಿಯೂ ಒಂದು ಮಟ್ಟಿಗೆ ವಿತ್ತೀಯ ಕೊರತೆ ಹೆಚ್ಚಿಸಲಿದೆ. ಅದಲ್ಲದೆ ಈ ಬಾಂಡುಗಳು ಮುಂದೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಮೆಚ್ಯೂರ್ ಆದಾಗ ಅಷ್ಟೂ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ.

ಅಂದರೆ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಹತ್ತಾರು ಲಕ್ಷ ಕೋಟಿಗಳಷ್ಟು ಹೊರೆ ಒಟ್ಟಿಗೆ ಬೀಳಲಿದ್ದು, ಸರ್ಕಾರದ ಈ ಕ್ರಮ ಬ್ಯಾಂಕಿಂಗ್ ಪತನವನ್ನು ಮುಂದೂಡುಲಷ್ಟೇ ಶಕ್ತವಾಗಲಿದೆ. ಈ ಮುಂದೂಡಲ್ಪಟ್ಟದ್ದು ಮುಂದಿನ ಹತ್ತು ವರ್ಷಗಳಲ್ಲಿ ಈಗಿನದಕ್ಕಿಂತ ಭಾರೀ ಸಮಸ್ಯೆಯಾಗಿ ಎರಗುವ ಎಲ್ಲ ಸಾಧ್ಯತೆಗಳೂ ಇವೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೇ ಹೆಚ್ಚಿನ NPA ಹೊಂದಿರುವುದನ್ನು (ಕೆಲವು ಶೇ ಇಪ್ಪತ್ತಕಿಂತ ಹೆಚ್ಚು) ನೋಡಿದಾಗ ಮತ್ತು ಸರ್ಕಾರದ ಕ್ರಮಗಳು ಕೇವಲ ತಾತ್ಕಾಲಿಕವಾಗಿರುವಾಗ ಈ ಯೆಸ್ ಬ್ಯಾಂಕ್ ಬಿಕ್ಕಟ್ಟು ಅಂತ್ಯವಲ್ಲ, ಆರಂಭ ಎಂದು ಯಾರಿಗಾದರೂ ಗೊತ್ತಾಗುತ್ತದೆ.

ಕೊನೆಯದಾಗಿ, ಒಂದು ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಅರಿವಿರುವವರಿಗೆ ನಮ್ಮ ಬ್ಯಾಂಕುಗಳ ಪರಿಹಾರವಾಗದ NPA ಬಿಕ್ಕಟ್ಟನ್ನು ನೋಡಿದಾಗ ನಮಗೆ ಬೇರೆಯದೇ ಅಭಿವೃದ್ದಿ ಮಾದರಿಯ ಅವಶ್ಯಕತೆ ಇದೆಯೆಂಬುದು ಸುಸ್ಪಷ್ಟವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...