HomeಮುಖಪುಟYes Bank ಪತನ ಅಂತ್ಯವೋ, ಆರಂಭವೋ?

Yes Bank ಪತನ ಅಂತ್ಯವೋ, ಆರಂಭವೋ?

- Advertisement -
- Advertisement -

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ Yes Bank ಪತನದ ಹಾದಿ ಹಿಡಿದಿದ್ದು ಆ ಬ್ಯಾಂಕಿನಲ್ಲಿ ಡಿಪಾಜಿಟ್ ಇಟ್ಟಿದ್ದ ಗ್ರಾಹಕರ ಹಣವನ್ನು ರಕ್ಷಿಸಲು ಮತ್ತು Yes Bankನ್ನು ಪೂರ್ಣ ಮುಳುಗಡೆಯಿಂದ ರಕ್ಷಿಸಲು ಪಬ್ಲಿಕ್ ಸೆಕ್ಟರ್ ಬ್ಯಾಂಕಾದ SBI, ಯೆಸ್ ಬ್ಯಾಂಕಿನ 49% ಶೇರುಗಳನ್ನು 2450 ಹೂಡಿಕೆ ಮಾಡಿ ಕೊಳ್ಳುವಂತೆ RBI ಮಾಡಿದೆ.

ಆದರೆ, ಯೆಸ್ ಬ್ಯಾಂಕನ್ನು ಈ ಕ್ರೈಸಿಸ್‍ನಿಂದ ಪಾರು (bail out) ಮಾಡಲು ಕನಿಷ್ಟ 21,000 ಕೋಟಿ ರೂಪಾಯಿಗಳ ಅವಶ್ಯಕತೆ ಇತ್ತು. ಆದರೆ, ಈಗ SBI ಹೂಡಿಕೆ ಮಾಡಿರುವುದು ಕೇವಲ 2450 ಕೋಟಿ ರೂಪಾಯಿಗಳು. ಆದ್ದರಿಂದ RBIನ ಈ ನಡೆ ಗ್ರಾಹಕರ ಡಿಪಾಜಿಟ್ ಹಣದ ರಕ್ಷಣೆ ಯಾವ ಮಟ್ಟದಲ್ಲಿ ಮಾಡಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಬಹುತೇಕ ಕಡೆಯ ಹದಿನೈದು ವರ್ಷಗಳಲ್ಲಿ ಒಂದು ಖಾಸಗಿ ಬ್ಯಾಂಕನ್ನು ಪತನದಿಂದ ರಕ್ಷಿಸಲು ಸರ್ಕಾರ ಮುಂದಾಗಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡುತ್ತ, ಈ ಬ್ಯಾಂಕಿಂಗ್ ಕ್ಷೇತ್ರದ ಈ ರೀತಿಯ ಪತನದ ಕತೆ ಇಲ್ಲಿಗೇ ಮುಗಿಯಲಿದೆಯೇ ಅತವಾ ಮುಂದುವರೆಯಲಿದೆಯೇ ನೋಡೋಣ.

ಯಾವುದೇ ಬ್ಯಾಂಕಿನ ವ್ಯವಹಾರ ಸರಳವಾಗಿ ಗ್ರಾಹಕರಿಂದ ಡಿಪಾಜಿಟ್ಟುಗಳನ್ನು ಕಡಿಮೆ ಬಡ್ಡಿದರದಲ್ಲಿ ಇರಿಸಿಕೊಂಡು, ಆ ಡಿಪಾಜಿಟ್ ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಅವಶ್ಯಕತೆಯುಳ್ಳ ಗ್ರಾಹಕರಿಗೆ ಕೊಟ್ಟು ಲಾಭ ಗಳಿಸುವುದು.

ಆದರೆ ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಬ್ಯಾಂಕುಗಳು ತೊಂದರೆಗೆ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ. ಈ ರೀತಿ ಕನಿಷ್ಟ ತೊಂಬತ್ತು ದಿನ ಕೊಟ್ಟ ಸಾಲದ ಕಂತು ವಾಪಸ್ ಬರದೇ ಇದ್ದಾಗ ಅಂತ ಸಾಲವನ್ನು ಕೆಟ್ಟ ಸಾಲ (Bad loans) ಎಂದು ಕರೆಯಲಾಗುತ್ತದೆ. ಈ ಕೆಟ್ಟ ಸಾಲಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಾದಷ್ಟೂ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ಆಗ ಅಂತಹ ಬ್ಯಾಂಕಿನಲ್ಲಿ ಕಷ್ಟಪಟ್ಟು ಉಳಿಸಿದ ಹಣವನ್ನು ಡಿಪಾಜಿಟ್ ಇಟ್ಟಿರುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇರೀತಿ ಯೆಸ್ ಬ್ಯಾಂಕ್ ಕೂಡ ಕೆಟ್ಟ ಸಾಲದ ಸುಳಿಗೆ ಸಿಲುಕಿತ್ತು. ಈ ರೀತಿ ಸಾಲ ತೆಗೆದುಕೊಂಡು ವಾಪಸ್ ಕೊಡದಿರುವವರು ಬಹುತೇಕ ಕಾರ್ಪೊರೇಟ್ ಕಂಪನಿಗಳವರಾಗಿರುತ್ತಾರೆ ಮತ್ತು ಯೆಸ್ ಬ್ಯಾಂಕ್ ಕೊಟ್ಟ ಸಾಲದಲ್ಲಿ ಸುಮಾರು 63% ರಷ್ಟನ್ನು ಕಾರ್ಪೊರೇಟ್ ಕಂಪನಿಗಳಿಗೇ (ಅಥವಾ ಕಾರ್ಪೊರೇಟ್ ವ್ಯಕ್ತಿಗಳಿಗೆ) ಕೊಡಲಾಗಿತ್ತು. ಬ್ಯಾಂಕುಗಳ NPA ಯನ್ನೂ ಒಂದು ಪ್ರಮುಖ ವಿಷಯ ಮಾಡಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿಯೇ ಯೆಸ್ ಬ್ಯಾಂಕ್ ಕೊಟ್ಟ ಸಾಲ 400% ( 2014 ರಿಂದ 2019 ರವರೆಗೆ 55000 ಕೋಟಿಯಿಂದ 241000 ಕೋಟಿ) ರಷ್ಟು ಏರಿಕೆಯಾಗಿದೆ ಎಂಬ ವಿಷಯ ಈ ರೀತಿಯ ಕೆಟ್ಟ ಸಾಲಗಳ ನೀಡುವಿಕೆ ಸರ್ಕಾರಕ್ಕೆ ಅರಿವಿದ್ದೂ ನಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗೆಯೇ ಈ ರೀತಿಯ ಸಾಲ ಪಡೆದವರಲ್ಲಿ ಅನೇಕರು ಸರ್ಕಾರಕ್ಕೆ ( ಯಾವುದೇ ಸರ್ಕಾರವಿದ್ದಾಗಲೂ) ಆಪ್ತರಾಗಿರುವವರು ಎಂಬುದು ಈ ವ್ಯವಹಾರದ ಮತ್ತೊಂದು ಮುಖವನ್ನು ನಮಗೆ ತೆರೆದು ತೋರಿಸುತ್ತದೆ.

ಈ ಯೆಸ್ ಬ್ಯಾಂಕಿನ ಒಟ್ಟಾರೆ NPA ಪ್ರಮಾಣ ಅದು ಕೊಟ್ಟಿರುವ ಒಟ್ಟು ಸಾಲದ 8% ಗಳಷ್ಟು ಮಾತ್ರ ( ಈ ಪ್ರಮಾಣ 2% ಗಿಂತ ಹೆಚ್ಚಿದ್ದರೆ ಅಂತ ಬ್ಯಾಂಕ್ ವ್ಯವಹಾರ ಅನಾರೋಗ್ಯಕರವಾಗಿದೆಯೆಂದು ಹೇಳಲಾಗುತ್ತದೆ). ಇಷ್ಟು ಕೆಟ್ಟ ಸಾಲದ ಹೊರೆಯಿಂದಾಗಿ ಯೆಸ್ ಬ್ಯಾಂಕ್ ತನ್ನ ಡಿಪಾಜಿಟ್‍ದಾರರಿಗೆಹಣ ಹಿಂದುರಿಗಿಸಲಾರದ ಸ್ಥಿತಿಗೆ ತಲುಪಿತ್ತು.

ಹಾಗೆ ನೋಡಿದರೆ, ನಮ್ಮ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ NPA ಪ್ರಮಾಣ ಶೇ ಹತ್ತಕಿಂತ ಹೆಚ್ಚಿದೆ. ಶೇ. ಹತ್ತಕ್ಕಿಂತ ಹೆಚ್ಚು ಓPಂ ಹೊಂದಿರುವ ಒಟ್ಟು ಹದಿನೇಳು ಬ್ಯಾಂಕುಗಳಲ್ಲಿ ಹದಿನಾರು ಬ್ಯಾಂಕುಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳೇ ಆಗಿವೆ. IDBI, UCO Bank, IOB ಗಳ NPA ಪ್ರಮಾಣ 20% ಗಿಂತ ಹೆಚ್ಚಿದೆ.

ಹಾಗಿದ್ದರೆ, ನಮ್ಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಇಂಥಾ ಸ್ಥಿತಿಯಲ್ಲಿ ಗ್ರಾಹಕರ ಡಿಪಾಜಿಟ್ ಹಣಕ್ಕೆ ಬಡ್ಡಿ ಕೊಡಲು ಮತ್ತು ವಾಪಸ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ನೋಡೋಣ. ನಿಮಗೆ ನೆನಪಿರುವ ಹಾಗೆ 2016-17 ಮತ್ತು 2017-18 ರಲ್ಲಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಟ್ಟು 50000 ಕೋಟಿ ರೂಪಾಯಿಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಕೊಟ್ಟಿದೆ. ಇದರಿಂದಾಗಿ ಭಾರೀ ಓPಂಯ ಹೊರತಾಗಿಯೂ ಈ ಬ್ಯಾಂಕುಗಳು ಒಂದು ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ.

ಆದರೆ, ಸರ್ಕಾರ ಬ್ಯಾಂಕುಗಳಿಗೆ ಕೊಟ್ಟ ಈ ಹಣ ನಮ್ಮೆಲ್ಲರ ತೆರಿಗೆಯ ಹಣ. ಇದನ್ನು ರಸ್ತೆಗೋ, ಶಾಲೆಗೋ ಉಪಯೋಗಿಸುವ ಬದಲು ಸರ್ಕಾರ ಬ್ಯಾಂಕುಗಳಿಗೆ ಕೊಟ್ಟಿದೆ.

ಇದರಿಂದ ಒಂದು ಕಡೆ ಅಭಿವೃದ್ಧಿ ಕುಂಠಿತವಾದರೆ ಮತ್ತೊಂದೆಡೆ ದೇಶದ ವಿತ್ತೀಯ ಕೊರತೆಯೂ ಹೆಚ್ಚುತ್ತದೆ(ಈ ಹಣ ಸರ್ಕಾರದ ಖರ್ಚಿನಡಿ ಬರುವುದರಿಂದ).

ಒಟ್ಟಿನಲ್ಲಿ ಬ್ಯಾಂಕುಗಳು ಮಾಡುವ ತಪ್ಪಿಗೆ (ಈ ತಪ್ಪಿನಲ್ಲಿ ಇದನ್ನು ತಡೆಯುವುದಿರಲಿ ಪರೋಕ್ಷವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಸರ್ಕಾರದ ಪಾಲು ದೊಡ್ಡದಿದೆ) ನಮ್ಮ ತೆರಿಗೆ ದುಡ್ಡು ಪೋಲಾಗುತ್ತಿದೆಯಷ್ಟೇ ಅಲ್ಲದೆ ನಮ್ಮೆಲ್ಲರ ಮೇಲೂ ಹೆಚ್ಚೆಚ್ಚು ಸಾಲದ ಹೊರೆ ಬೀಳುತ್ತಿದೆ.

ಹೀಗೆ NPA ಗೆ ಸಿಲುಕಿದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಕಾಪಾಡಲು ಮತ್ತು NPA ಯಿಂದಾಗುವ ವಿತ್ತೀಯ ಕೊರತೆಯಿಂದ ತಕ್ಷಣ ಪಾರಾಗಲು ಸರ್ಕಾರ ಅಕ್ಟೋಬರ್ 2017 ರಿಂದ Recapitalization bonds ಅನ್ನು ಬಿಡುಗಡೆ ಮಾಡಿತು. ಬ್ಯಾಂಕುಗಳು ತಮ್ಮ ಡಿಪಾಜಿಟ್ ಹಣದಿಂದ Recapitalization bond ಗಳನ್ನು ಖರೀದಿಸಬೇಕು. ಅ ಹಣವನ್ನು ಭಾರೀ ಸಂಕಷ್ಟದಲ್ಲಿರುವ ಬ್ಯಾಂಕುಗಳಿಗೆ ಸರ್ಕಾರ ವಿತರಿಸುತ್ತದೆ.

ಈ ರೀತಿಯಾಗಿ ಇಲ್ಲಿಯತನಕ ಒಟ್ಟು 250000 ಕೋಟಿಗಳಷ್ಟು ಬೆಲೆಯ ಬಾಂಡುಗಳನ್ನು ವಿವಿಧ ಬ್ಯಾಂಕುಗಳು ಖರೀದಿಸಿವೆ. ಅಂದರೆ ನಮ್ಮ ಡಿಪಾಜಿಟ್ ಹಣದಿಂದಲೇ ಬ್ಯಾಂಕುಗಳನ್ನು NPA ಸುಳಿಯಿಂದ ಮೇಲೆತ್ತುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದರಿಂದ ಸರ್ಕಾರ ಬಜೆಟಲ್ಲಿ ಬ್ಯಾಂಕುಗಳಿಗೆ ಕೊಡುವ ಹಣವನ್ನು ತಪ್ಪಿಸಿ ಅದರಿಂದಾವಾಗುವಷ್ಟು ವಿತ್ತೀಯ ಕೊರತೆಯಿಂದ ತಕ್ಷಣಕ್ಕೆ ಪಾರಾಗುವ ಯತ್ನ ಮಾಡಿತು.

ಆದರೆ, ಈ ಬಾಂಡುಗಳನ್ನು ಖರೀದಿಸಿದ ಹಣಕ್ಕೆ ಸರ್ಕಾರ ವಾರ್ಷಿಕ 6 – 8% ಬಡ್ಡಿ ಕೊಡಬೇಕಿದೆ. ಈ ಬಡ್ಡಿಯೂ ಒಂದು ಮಟ್ಟಿಗೆ ವಿತ್ತೀಯ ಕೊರತೆ ಹೆಚ್ಚಿಸಲಿದೆ. ಅದಲ್ಲದೆ ಈ ಬಾಂಡುಗಳು ಮುಂದೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಮೆಚ್ಯೂರ್ ಆದಾಗ ಅಷ್ಟೂ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ.

ಅಂದರೆ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಹತ್ತಾರು ಲಕ್ಷ ಕೋಟಿಗಳಷ್ಟು ಹೊರೆ ಒಟ್ಟಿಗೆ ಬೀಳಲಿದ್ದು, ಸರ್ಕಾರದ ಈ ಕ್ರಮ ಬ್ಯಾಂಕಿಂಗ್ ಪತನವನ್ನು ಮುಂದೂಡುಲಷ್ಟೇ ಶಕ್ತವಾಗಲಿದೆ. ಈ ಮುಂದೂಡಲ್ಪಟ್ಟದ್ದು ಮುಂದಿನ ಹತ್ತು ವರ್ಷಗಳಲ್ಲಿ ಈಗಿನದಕ್ಕಿಂತ ಭಾರೀ ಸಮಸ್ಯೆಯಾಗಿ ಎರಗುವ ಎಲ್ಲ ಸಾಧ್ಯತೆಗಳೂ ಇವೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೇ ಹೆಚ್ಚಿನ NPA ಹೊಂದಿರುವುದನ್ನು (ಕೆಲವು ಶೇ ಇಪ್ಪತ್ತಕಿಂತ ಹೆಚ್ಚು) ನೋಡಿದಾಗ ಮತ್ತು ಸರ್ಕಾರದ ಕ್ರಮಗಳು ಕೇವಲ ತಾತ್ಕಾಲಿಕವಾಗಿರುವಾಗ ಈ ಯೆಸ್ ಬ್ಯಾಂಕ್ ಬಿಕ್ಕಟ್ಟು ಅಂತ್ಯವಲ್ಲ, ಆರಂಭ ಎಂದು ಯಾರಿಗಾದರೂ ಗೊತ್ತಾಗುತ್ತದೆ.

ಕೊನೆಯದಾಗಿ, ಒಂದು ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಅರಿವಿರುವವರಿಗೆ ನಮ್ಮ ಬ್ಯಾಂಕುಗಳ ಪರಿಹಾರವಾಗದ NPA ಬಿಕ್ಕಟ್ಟನ್ನು ನೋಡಿದಾಗ ನಮಗೆ ಬೇರೆಯದೇ ಅಭಿವೃದ್ದಿ ಮಾದರಿಯ ಅವಶ್ಯಕತೆ ಇದೆಯೆಂಬುದು ಸುಸ್ಪಷ್ಟವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...