HomeಮುಖಪುಟYes Bank ಪತನ ಅಂತ್ಯವೋ, ಆರಂಭವೋ?

Yes Bank ಪತನ ಅಂತ್ಯವೋ, ಆರಂಭವೋ?

- Advertisement -
- Advertisement -

ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ Yes Bank ಪತನದ ಹಾದಿ ಹಿಡಿದಿದ್ದು ಆ ಬ್ಯಾಂಕಿನಲ್ಲಿ ಡಿಪಾಜಿಟ್ ಇಟ್ಟಿದ್ದ ಗ್ರಾಹಕರ ಹಣವನ್ನು ರಕ್ಷಿಸಲು ಮತ್ತು Yes Bankನ್ನು ಪೂರ್ಣ ಮುಳುಗಡೆಯಿಂದ ರಕ್ಷಿಸಲು ಪಬ್ಲಿಕ್ ಸೆಕ್ಟರ್ ಬ್ಯಾಂಕಾದ SBI, ಯೆಸ್ ಬ್ಯಾಂಕಿನ 49% ಶೇರುಗಳನ್ನು 2450 ಹೂಡಿಕೆ ಮಾಡಿ ಕೊಳ್ಳುವಂತೆ RBI ಮಾಡಿದೆ.

ಆದರೆ, ಯೆಸ್ ಬ್ಯಾಂಕನ್ನು ಈ ಕ್ರೈಸಿಸ್‍ನಿಂದ ಪಾರು (bail out) ಮಾಡಲು ಕನಿಷ್ಟ 21,000 ಕೋಟಿ ರೂಪಾಯಿಗಳ ಅವಶ್ಯಕತೆ ಇತ್ತು. ಆದರೆ, ಈಗ SBI ಹೂಡಿಕೆ ಮಾಡಿರುವುದು ಕೇವಲ 2450 ಕೋಟಿ ರೂಪಾಯಿಗಳು. ಆದ್ದರಿಂದ RBIನ ಈ ನಡೆ ಗ್ರಾಹಕರ ಡಿಪಾಜಿಟ್ ಹಣದ ರಕ್ಷಣೆ ಯಾವ ಮಟ್ಟದಲ್ಲಿ ಮಾಡಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ಬಹುತೇಕ ಕಡೆಯ ಹದಿನೈದು ವರ್ಷಗಳಲ್ಲಿ ಒಂದು ಖಾಸಗಿ ಬ್ಯಾಂಕನ್ನು ಪತನದಿಂದ ರಕ್ಷಿಸಲು ಸರ್ಕಾರ ಮುಂದಾಗಿದ್ದು ಇದೇ ಮೊದಲು.

ಈ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕಿನ ಪತನಕ್ಕೆ ಕಾರಣಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ನೋಡುತ್ತ, ಈ ಬ್ಯಾಂಕಿಂಗ್ ಕ್ಷೇತ್ರದ ಈ ರೀತಿಯ ಪತನದ ಕತೆ ಇಲ್ಲಿಗೇ ಮುಗಿಯಲಿದೆಯೇ ಅತವಾ ಮುಂದುವರೆಯಲಿದೆಯೇ ನೋಡೋಣ.

ಯಾವುದೇ ಬ್ಯಾಂಕಿನ ವ್ಯವಹಾರ ಸರಳವಾಗಿ ಗ್ರಾಹಕರಿಂದ ಡಿಪಾಜಿಟ್ಟುಗಳನ್ನು ಕಡಿಮೆ ಬಡ್ಡಿದರದಲ್ಲಿ ಇರಿಸಿಕೊಂಡು, ಆ ಡಿಪಾಜಿಟ್ ಹಣವನ್ನು ಹೆಚ್ಚಿನ ಬಡ್ಡಿದರಕ್ಕೆ ಸಾಲವಾಗಿ ಅವಶ್ಯಕತೆಯುಳ್ಳ ಗ್ರಾಹಕರಿಗೆ ಕೊಟ್ಟು ಲಾಭ ಗಳಿಸುವುದು.

ಆದರೆ ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಬ್ಯಾಂಕುಗಳು ತೊಂದರೆಗೆ ಸಿಲುಕಿ ನಷ್ಟ ಅನುಭವಿಸಬೇಕಾಗುತ್ತದೆ. ಈ ರೀತಿ ಕನಿಷ್ಟ ತೊಂಬತ್ತು ದಿನ ಕೊಟ್ಟ ಸಾಲದ ಕಂತು ವಾಪಸ್ ಬರದೇ ಇದ್ದಾಗ ಅಂತ ಸಾಲವನ್ನು ಕೆಟ್ಟ ಸಾಲ (Bad loans) ಎಂದು ಕರೆಯಲಾಗುತ್ತದೆ. ಈ ಕೆಟ್ಟ ಸಾಲಗಳ ಸಂಖ್ಯೆ ಮತ್ತು ಮೌಲ್ಯ ಹೆಚ್ಚಾದಷ್ಟೂ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ಆಗ ಅಂತಹ ಬ್ಯಾಂಕಿನಲ್ಲಿ ಕಷ್ಟಪಟ್ಟು ಉಳಿಸಿದ ಹಣವನ್ನು ಡಿಪಾಜಿಟ್ ಇಟ್ಟಿರುವವರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಭಾರೀ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇರೀತಿ ಯೆಸ್ ಬ್ಯಾಂಕ್ ಕೂಡ ಕೆಟ್ಟ ಸಾಲದ ಸುಳಿಗೆ ಸಿಲುಕಿತ್ತು. ಈ ರೀತಿ ಸಾಲ ತೆಗೆದುಕೊಂಡು ವಾಪಸ್ ಕೊಡದಿರುವವರು ಬಹುತೇಕ ಕಾರ್ಪೊರೇಟ್ ಕಂಪನಿಗಳವರಾಗಿರುತ್ತಾರೆ ಮತ್ತು ಯೆಸ್ ಬ್ಯಾಂಕ್ ಕೊಟ್ಟ ಸಾಲದಲ್ಲಿ ಸುಮಾರು 63% ರಷ್ಟನ್ನು ಕಾರ್ಪೊರೇಟ್ ಕಂಪನಿಗಳಿಗೇ (ಅಥವಾ ಕಾರ್ಪೊರೇಟ್ ವ್ಯಕ್ತಿಗಳಿಗೆ) ಕೊಡಲಾಗಿತ್ತು. ಬ್ಯಾಂಕುಗಳ NPA ಯನ್ನೂ ಒಂದು ಪ್ರಮುಖ ವಿಷಯ ಮಾಡಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಅವಧಿಯಲ್ಲಿಯೇ ಯೆಸ್ ಬ್ಯಾಂಕ್ ಕೊಟ್ಟ ಸಾಲ 400% ( 2014 ರಿಂದ 2019 ರವರೆಗೆ 55000 ಕೋಟಿಯಿಂದ 241000 ಕೋಟಿ) ರಷ್ಟು ಏರಿಕೆಯಾಗಿದೆ ಎಂಬ ವಿಷಯ ಈ ರೀತಿಯ ಕೆಟ್ಟ ಸಾಲಗಳ ನೀಡುವಿಕೆ ಸರ್ಕಾರಕ್ಕೆ ಅರಿವಿದ್ದೂ ನಡೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಹಾಗೆಯೇ ಈ ರೀತಿಯ ಸಾಲ ಪಡೆದವರಲ್ಲಿ ಅನೇಕರು ಸರ್ಕಾರಕ್ಕೆ ( ಯಾವುದೇ ಸರ್ಕಾರವಿದ್ದಾಗಲೂ) ಆಪ್ತರಾಗಿರುವವರು ಎಂಬುದು ಈ ವ್ಯವಹಾರದ ಮತ್ತೊಂದು ಮುಖವನ್ನು ನಮಗೆ ತೆರೆದು ತೋರಿಸುತ್ತದೆ.

ಈ ಯೆಸ್ ಬ್ಯಾಂಕಿನ ಒಟ್ಟಾರೆ NPA ಪ್ರಮಾಣ ಅದು ಕೊಟ್ಟಿರುವ ಒಟ್ಟು ಸಾಲದ 8% ಗಳಷ್ಟು ಮಾತ್ರ ( ಈ ಪ್ರಮಾಣ 2% ಗಿಂತ ಹೆಚ್ಚಿದ್ದರೆ ಅಂತ ಬ್ಯಾಂಕ್ ವ್ಯವಹಾರ ಅನಾರೋಗ್ಯಕರವಾಗಿದೆಯೆಂದು ಹೇಳಲಾಗುತ್ತದೆ). ಇಷ್ಟು ಕೆಟ್ಟ ಸಾಲದ ಹೊರೆಯಿಂದಾಗಿ ಯೆಸ್ ಬ್ಯಾಂಕ್ ತನ್ನ ಡಿಪಾಜಿಟ್‍ದಾರರಿಗೆಹಣ ಹಿಂದುರಿಗಿಸಲಾರದ ಸ್ಥಿತಿಗೆ ತಲುಪಿತ್ತು.

ಹಾಗೆ ನೋಡಿದರೆ, ನಮ್ಮ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ NPA ಪ್ರಮಾಣ ಶೇ ಹತ್ತಕಿಂತ ಹೆಚ್ಚಿದೆ. ಶೇ. ಹತ್ತಕ್ಕಿಂತ ಹೆಚ್ಚು ಓPಂ ಹೊಂದಿರುವ ಒಟ್ಟು ಹದಿನೇಳು ಬ್ಯಾಂಕುಗಳಲ್ಲಿ ಹದಿನಾರು ಬ್ಯಾಂಕುಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳೇ ಆಗಿವೆ. IDBI, UCO Bank, IOB ಗಳ NPA ಪ್ರಮಾಣ 20% ಗಿಂತ ಹೆಚ್ಚಿದೆ.

ಹಾಗಿದ್ದರೆ, ನಮ್ಮ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಇಂಥಾ ಸ್ಥಿತಿಯಲ್ಲಿ ಗ್ರಾಹಕರ ಡಿಪಾಜಿಟ್ ಹಣಕ್ಕೆ ಬಡ್ಡಿ ಕೊಡಲು ಮತ್ತು ವಾಪಸ್ ಮಾಡಲು ಹೇಗೆ ಸಾಧ್ಯವಾಗುತ್ತಿದೆ ಎಂದು ನೋಡೋಣ. ನಿಮಗೆ ನೆನಪಿರುವ ಹಾಗೆ 2016-17 ಮತ್ತು 2017-18 ರಲ್ಲಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಟ್ಟು 50000 ಕೋಟಿ ರೂಪಾಯಿಗಳನ್ನು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ಕೊಟ್ಟಿದೆ. ಇದರಿಂದಾಗಿ ಭಾರೀ ಓPಂಯ ಹೊರತಾಗಿಯೂ ಈ ಬ್ಯಾಂಕುಗಳು ಒಂದು ಮಟ್ಟಿಗೆ ಉಸಿರಾಡಲು ಸಾಧ್ಯವಾಗಿದೆ.

ಆದರೆ, ಸರ್ಕಾರ ಬ್ಯಾಂಕುಗಳಿಗೆ ಕೊಟ್ಟ ಈ ಹಣ ನಮ್ಮೆಲ್ಲರ ತೆರಿಗೆಯ ಹಣ. ಇದನ್ನು ರಸ್ತೆಗೋ, ಶಾಲೆಗೋ ಉಪಯೋಗಿಸುವ ಬದಲು ಸರ್ಕಾರ ಬ್ಯಾಂಕುಗಳಿಗೆ ಕೊಟ್ಟಿದೆ.

ಇದರಿಂದ ಒಂದು ಕಡೆ ಅಭಿವೃದ್ಧಿ ಕುಂಠಿತವಾದರೆ ಮತ್ತೊಂದೆಡೆ ದೇಶದ ವಿತ್ತೀಯ ಕೊರತೆಯೂ ಹೆಚ್ಚುತ್ತದೆ(ಈ ಹಣ ಸರ್ಕಾರದ ಖರ್ಚಿನಡಿ ಬರುವುದರಿಂದ).

ಒಟ್ಟಿನಲ್ಲಿ ಬ್ಯಾಂಕುಗಳು ಮಾಡುವ ತಪ್ಪಿಗೆ (ಈ ತಪ್ಪಿನಲ್ಲಿ ಇದನ್ನು ತಡೆಯುವುದಿರಲಿ ಪರೋಕ್ಷವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಸರ್ಕಾರದ ಪಾಲು ದೊಡ್ಡದಿದೆ) ನಮ್ಮ ತೆರಿಗೆ ದುಡ್ಡು ಪೋಲಾಗುತ್ತಿದೆಯಷ್ಟೇ ಅಲ್ಲದೆ ನಮ್ಮೆಲ್ಲರ ಮೇಲೂ ಹೆಚ್ಚೆಚ್ಚು ಸಾಲದ ಹೊರೆ ಬೀಳುತ್ತಿದೆ.

ಹೀಗೆ NPA ಗೆ ಸಿಲುಕಿದ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳನ್ನು ಕಾಪಾಡಲು ಮತ್ತು NPA ಯಿಂದಾಗುವ ವಿತ್ತೀಯ ಕೊರತೆಯಿಂದ ತಕ್ಷಣ ಪಾರಾಗಲು ಸರ್ಕಾರ ಅಕ್ಟೋಬರ್ 2017 ರಿಂದ Recapitalization bonds ಅನ್ನು ಬಿಡುಗಡೆ ಮಾಡಿತು. ಬ್ಯಾಂಕುಗಳು ತಮ್ಮ ಡಿಪಾಜಿಟ್ ಹಣದಿಂದ Recapitalization bond ಗಳನ್ನು ಖರೀದಿಸಬೇಕು. ಅ ಹಣವನ್ನು ಭಾರೀ ಸಂಕಷ್ಟದಲ್ಲಿರುವ ಬ್ಯಾಂಕುಗಳಿಗೆ ಸರ್ಕಾರ ವಿತರಿಸುತ್ತದೆ.

ಈ ರೀತಿಯಾಗಿ ಇಲ್ಲಿಯತನಕ ಒಟ್ಟು 250000 ಕೋಟಿಗಳಷ್ಟು ಬೆಲೆಯ ಬಾಂಡುಗಳನ್ನು ವಿವಿಧ ಬ್ಯಾಂಕುಗಳು ಖರೀದಿಸಿವೆ. ಅಂದರೆ ನಮ್ಮ ಡಿಪಾಜಿಟ್ ಹಣದಿಂದಲೇ ಬ್ಯಾಂಕುಗಳನ್ನು NPA ಸುಳಿಯಿಂದ ಮೇಲೆತ್ತುವ ಕೆಲಸಕ್ಕೆ ಸರ್ಕಾರ ಕೈಹಾಕಿತು. ಇದರಿಂದ ಸರ್ಕಾರ ಬಜೆಟಲ್ಲಿ ಬ್ಯಾಂಕುಗಳಿಗೆ ಕೊಡುವ ಹಣವನ್ನು ತಪ್ಪಿಸಿ ಅದರಿಂದಾವಾಗುವಷ್ಟು ವಿತ್ತೀಯ ಕೊರತೆಯಿಂದ ತಕ್ಷಣಕ್ಕೆ ಪಾರಾಗುವ ಯತ್ನ ಮಾಡಿತು.

ಆದರೆ, ಈ ಬಾಂಡುಗಳನ್ನು ಖರೀದಿಸಿದ ಹಣಕ್ಕೆ ಸರ್ಕಾರ ವಾರ್ಷಿಕ 6 – 8% ಬಡ್ಡಿ ಕೊಡಬೇಕಿದೆ. ಈ ಬಡ್ಡಿಯೂ ಒಂದು ಮಟ್ಟಿಗೆ ವಿತ್ತೀಯ ಕೊರತೆ ಹೆಚ್ಚಿಸಲಿದೆ. ಅದಲ್ಲದೆ ಈ ಬಾಂಡುಗಳು ಮುಂದೆ ಹತ್ತರಿಂದ ಹದಿನೈದು ವರ್ಷಗಳಲ್ಲಿ ಮೆಚ್ಯೂರ್ ಆದಾಗ ಅಷ್ಟೂ ಹಣವನ್ನು ಸರ್ಕಾರ ಬಡ್ಡಿ ಸಮೇತ ಹಿಂದಿರುಗಿಸಬೇಕಾಗುತ್ತದೆ.

ಅಂದರೆ, ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಹತ್ತಾರು ಲಕ್ಷ ಕೋಟಿಗಳಷ್ಟು ಹೊರೆ ಒಟ್ಟಿಗೆ ಬೀಳಲಿದ್ದು, ಸರ್ಕಾರದ ಈ ಕ್ರಮ ಬ್ಯಾಂಕಿಂಗ್ ಪತನವನ್ನು ಮುಂದೂಡುಲಷ್ಟೇ ಶಕ್ತವಾಗಲಿದೆ. ಈ ಮುಂದೂಡಲ್ಪಟ್ಟದ್ದು ಮುಂದಿನ ಹತ್ತು ವರ್ಷಗಳಲ್ಲಿ ಈಗಿನದಕ್ಕಿಂತ ಭಾರೀ ಸಮಸ್ಯೆಯಾಗಿ ಎರಗುವ ಎಲ್ಲ ಸಾಧ್ಯತೆಗಳೂ ಇವೆ.

ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳೇ ಹೆಚ್ಚಿನ NPA ಹೊಂದಿರುವುದನ್ನು (ಕೆಲವು ಶೇ ಇಪ್ಪತ್ತಕಿಂತ ಹೆಚ್ಚು) ನೋಡಿದಾಗ ಮತ್ತು ಸರ್ಕಾರದ ಕ್ರಮಗಳು ಕೇವಲ ತಾತ್ಕಾಲಿಕವಾಗಿರುವಾಗ ಈ ಯೆಸ್ ಬ್ಯಾಂಕ್ ಬಿಕ್ಕಟ್ಟು ಅಂತ್ಯವಲ್ಲ, ಆರಂಭ ಎಂದು ಯಾರಿಗಾದರೂ ಗೊತ್ತಾಗುತ್ತದೆ.

ಕೊನೆಯದಾಗಿ, ಒಂದು ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರದ ಅರಿವಿರುವವರಿಗೆ ನಮ್ಮ ಬ್ಯಾಂಕುಗಳ ಪರಿಹಾರವಾಗದ NPA ಬಿಕ್ಕಟ್ಟನ್ನು ನೋಡಿದಾಗ ನಮಗೆ ಬೇರೆಯದೇ ಅಭಿವೃದ್ದಿ ಮಾದರಿಯ ಅವಶ್ಯಕತೆ ಇದೆಯೆಂಬುದು ಸುಸ್ಪಷ್ಟವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...