Homeಮುಖಪುಟಕೋವಿಡ್ ಸಾವಿನ ಸಂಖ್ಯೆಗಳನ್ನು ಮುಚ್ಚಿಡುತ್ತಿರುವ ಯೋಗಿ ಸರ್ಕಾರ: ಒಂದು ಗ್ರೌಂಡ್ ರಿಪೋರ್ಟ್

ಕೋವಿಡ್ ಸಾವಿನ ಸಂಖ್ಯೆಗಳನ್ನು ಮುಚ್ಚಿಡುತ್ತಿರುವ ಯೋಗಿ ಸರ್ಕಾರ: ಒಂದು ಗ್ರೌಂಡ್ ರಿಪೋರ್ಟ್

- Advertisement -
- Advertisement -

ಉತ್ತರ ಪ್ರದೇಶ ರಾಜ್ಯಾದ್ಯಂತ ಸ್ಮಶಾನಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಾರ್ಮಿಕರೊಂದಿಗೆ ನಡೆಸಿದ ಸಂದರ್ಶನಗಳಿಂದ ಉತ್ತರಪ್ರದೇಶ ಸರ್ಕಾರ ಕೋವಿಡ್ ಸಾವಿನ ಸಂಖ್ಯೆಗಳನ್ನು ‘ಕಡಿಮೆ ವರದಿ’ ಮಾಡುತ್ತಿರುವುದನ್ನು ತೋರಿಸುತ್ತಿವೆ ಎಂದು ದಿ ವೈರ್ ವರದಿ ಮಾಡಿದೆ.

ಉತ್ತರ ಪ್ರದೇಶ ಸರ್ಕಾರದ ಕೋವಿಡ್ ಬುಲೆಟಿನ್ ಶುಕ್ರವಾರ ಆಗ್ರಾ, ಘಾಜಿಯಾಬಾದ್ ಮತ್ತು ಝಾನ್ಸಿ ಜಿಲ್ಲೆಗಳಿಂದ ಹಿಂದಿನ 24 ಗಂಟೆಗಳಲ್ಲಿ ಶೂನ್ಯ ಸಾವು ಸಂಭವಿಸಿದೆ ಮತ್ತು ಬರೇಲಿಯಿಂದ ಕೇವಲ ಒಂದು ಸಾವು ಸಂಭವಿಸಿದೆ ಎಂದು ವರದಿ ಮಾಡಿದೆ. ಒಟ್ಟಾರೆಯಾಗಿ, ಏಪ್ರಿಲ್ 16 ರ ಯುಪಿ ಸರ್ಕಾರದ ಬುಲೆಟಿನ್‌ನಲ್ಲಿ ಏಪ್ರಿಲ್ 15 ರಂದು ರಾಜ್ಯದ 75 ಜಿಲ್ಲೆಗಳಲ್ಲಿ 46 ರಲ್ಲಿ ಯಾವುದೇ ಕೋವಿಡ್ -19 ಸಂಬಂಧಿತ ಸಾವುಗಳು ಸಂಭವಿಸಿಲ್ಲ ಎಂದು ಹೇಳಿದೆ. ಈ ಜಿಲ್ಲೆಗಳಲ್ಲಿ ಬರಾಬಂಕಿ, ಅಜಮ್‌ಗಡ್, ಸೋನ್‌ಭದ್ರ, ಚಂದೌಲಿ, ಬಿಜ್ನೋರ್, ಬಹ್ರೆಚ್, ಅಮ್ರೋಹಾ, ಶಮ್ಲಿ , ಕನ್ನೌಜ್, ಮೌ, ಸಂಭಾಲ್, ಭಾದೋಹಿ, ಎಟಾ ಮತ್ತು ಹತ್ರಾಸ್ ಇತರ ಜಿಲ್ಲೆ ಇವೆ.

ರಾಜ್ಯವ್ಯಾಪಿ, ಸರ್ಕಾರದ ಬುಲೆಟಿನ್ ಪ್ರಕಾರ ಶುಕ್ರವಾರದ ಒಟ್ಟು ಸಾವಿನ ಸಂಖ್ಯೆ 103 ಆಗಿದ್ದು, ಲಕ್ನೋವೊಂದರಲ್ಲಿ 35 ಸಾವು ದಾಖಲಾಗಿವೆ.

ಈ ಜಿಲ್ಲೆಗಳಲ್ಲಿ ಜನರು ಕೊರೋನಾಕ್ಕೆ ತೀವ್ರವಾಗಿ ತುತ್ತಾಗಿಲ್ಲ ಎಂದು ಅಧಿಕೃತ ದತ್ತಾಂಶಗಳು ಸೂಚಿಸಿದರೆ, ಜನರು ಕೋವಿಡ್‌ನಿಂದ ಬಳಲುತ್ತಿರುವ ತಮ್ಮ ಸಂಬಂಧಿಕರಿಗೆ ಹಾಸಿಗೆ ಸಿಗುತ್ತಿಲ್ಲ ಎಂದು ದೂರುವ ವರದಿಗಳು ಮತ್ತು ಈ ಜಿಲ್ಲೆಗಳ ಸ್ಮಶಾನಗಳಲ್ಲಿ ಕಂಡು ಬರುತ್ತಲೇ ಇರುವ ಭಾರಿ ಜನಸಂದಣಿ ವಿಭಿನ್ನ ಕಥೆಯನ್ನು ಹೇಳುತ್ತದೆ.

ಗಾಜಿಯಾಬಾದ್: “ಸತ್ತವರನ್ನು ಅಂತ್ಯಸಂಸ್ಕಾರ ಮಾಡಲು ಹೆಣಗಾಟ”

ಅಧಿಕೃತವಾಗಿ, ಗಾಜಿಯಾಬಾದ್ ಇದುವರೆಗೆ ಏಪ್ರಿಲ್‌ನಲ್ಲಿ ಕೇವಲ ನಾಲ್ಕು “ಕೋವಿಡ್ ಸಂಬಂಧಿತ ಸಾವುಗಳನ್ನು” ವರದಿ ಮಾಡಿದೆ. ಆದರೂ, ಜಿಲ್ಲೆಯ ಹಿಂಡನ್ ಶವಾಗಾರದ ಕಾರ್ಮಿಕರು, ಪ್ರತಿದಿನವೂ ಅಲ್ಲಿಗೆ ತಲುಪುತ್ತಿರುವ ಅಪಾರ ಸಂಖ್ಯೆಯ ಶವಗಳನ್ನು ದಹನ ಮಾಡಲು ಹೆಣಗಾಟ ನಡೆದಿದೆ ಎಂದು ಹೇಳುತ್ತಾರೆ. ಕೋವಿಡ್ -ರೋಗಿಗಳ 50 ಕ್ಕೂ ಹೆಚ್ಚು ಮೃತ ದೇಹಗಳು ಶುಕ್ರವಾರ ಬಂದಿವೆ ಎಂದು ಕಾರ್ಮಿಕರೊಬ್ಬರು ದಿ ವೈರ್‌ಗೆ ತಿಳಿಸಿರುವುದಾಗಿ ವರದಿ ತಿಳಿಸಿದೆ. ಅವರಲ್ಲಿ ಕನಿಷ್ಠ 15 ಮಂದಿ ವಿದ್ಯುತ್ ಶವಾಗಾರದಲ್ಲಿ ಸುಡಲು ಉದ್ದೇಶಿಸಿದ್ದಾರೆ.

ಶನಿವಾರ, ಪರಿಸ್ಥಿತಿ ಹಾಗೇ ಉಳಿದಿದೆ, ಏಕೆಂದರೆ ದಿನವಿಡೀ ಸುಮಾರು 50 ಶವಗಳನ್ನು ತರಲಾಯಿತು. ಈ ಎರಡೂ ದಿನಗಳಲ್ಲಿ, ಕುತೂಹಲಕಾರಿಯಾಗಿ ಯುಪಿ ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಬುಲೆಟಿನ್ ಜಿಲ್ಲೆಯಲ್ಲಿ ಶೂನ್ಯ ಸಾವುಗಳು ಸಂಭವಿಸಿವೆ ಎಂದು ಸಮರ್ಥಿಸಿಕೊಂಡಿದೆ!

ಸರ್ಕಾರಿ ಆಸ್ಪತ್ರೆಗಳ ಹೊರಗೆ ರೋಗಿಗಳು ಸಾಲಿನಲ್ಲಿ ನಿಂತಿರುವುದು ಗಾಜಿಯಾಬಾದ್‌ನಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಅವರ ಟ್ವೀಟ್‌ನಿಂದ ಪರಿಸ್ಥಿತಿಯ ಕಠೋರತೆ ಹೆಚ್ಚು ಸ್ಪಷ್ಟವಾಯಿತು. ಲೋಕಸಭೆಯಲ್ಲಿ ಗಾಜಿಯಾಬಾದ್ ಅನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಸಿಂಗ್ ತಮ್ಮ ಕ್ಷೇತ್ರದ ಕೋವಿಡ್ ರೋಗಿಯ ಪರವಾಗಿ ರಾಜ್ಯ ಆಡಳಿತಕ್ಕೆ ಸಹಾಯ ಮಾಡಲು ಮನವಿ ಮಾಡಿದ್ದಾರೆ. ಈಗ ಅಳಿಸಿರುವ ಅವರ ಟ್ವೀಟ್‌ನಲ್ಲಿ, “ದಯವಿಟ್ಟು ನಮಗೆ ಸಹಾಯ ಮಾಡಿ, ನನ್ನ ಸಹೋದರನಿಗೆ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಯ ಹಾಸಿಗೆಯ ಅವಶ್ಯಕತೆಯಿದೆ. ಪ್ರಸ್ತುತ, ಗಾಜಿಯಾಬಾದ್‌ನಲ್ಲಿ ಹಾಸಿಗೆ ವ್ಯವಸ್ಥೆ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.

ಸಹಾಯಕ್ಕಾಗಿ ಈ ಮಂತ್ರಿಯ ಕೂಗು ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಬಗ್ಗೆ ಸ್ಪಷ್ಟ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಗಾಜಿಯಾಬಾದ್ ನಿವಾಸಿ ಮತ್ತು ವಕೀಲ ವೀರೇಂದ್ರ ಸಿಂಗ್ ಕುಶ್ವಾಹಾ ತನ್ನ ಸಹೋದ್ಯೋಗಿಯ ತಂದೆಯನ್ನು ಶನಿವಾರ ಅಂತ್ಯಕ್ರಿಯೆ ಮಾಡಲು ಹಿಂಡನ್ ಶವಾಗಾರದಿಂದ ಮೃತದೇಹ ಪಡೆಯಲು ಬಂದಿದ್ದರು. “ನಾಲ್ಕು ದಿನಗಳವರೆಗೆ ಅನೇಕ ಆಸ್ಪತ್ರೆಗಳನ್ನು ಬೆನ್ನಟ್ಟಿದ ನಂತರ, ನಾವು ಅಂತಿಮವಾಗಿ ಒಂದು ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾದೆವು. ಪ್ರವೇಶ ಪಡೆದ ನಂತರವೂ, ತಂದೆಗೆ ಅಗತ್ಯವಾದ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಸಿಗಲಿಲ್ಲ. ಕೊನೆಗೆ ಅವರು ಮೃತರಾದರು. ನಂತರ ಶವ ಸಂಸ್ಕಾರಕ್ಕಾಗಿ ಕಾಯುವ ಸಾಲಿನಲ್ಲಿ ನಿಂತೆ. ನಾವು ಬೆಳಿಗ್ಗೆ ಬೇಗನೆ ಇಲ್ಲಿಗೆ ಬಂದಿದ್ದೇವೆ, ಅದಕ್ಕಾಗಿಯೇ ನಮಗೆ ಎಂಟನೇ ಟೋಕನ್ ಸಿಕ್ಕಿದೆ” ಎಂದು ಹೇಳಿದ್ದಾರೆ.

ಜಿಲ್ಲೆಯ ವಿದ್ಯುತ್ ಶವಾಗಾರವು ತಾಂತ್ರಿಕ ಸಮಸ್ಯೆಗಳಿಗೆ ಸಾಕ್ಷಿಯಾಗುತ್ತಿದೆ. ಆದ್ದರಿಂದ ಕೋವಿಡ್ ಶವಗಳನ್ನು ಸ್ಮಶಾನ ಅಥವಾ ಖಾಲಿ ಜಾಗಗಳಲ್ಲಿ ಕಟ್ಟಿಗೆ ಬಳಸಿ ಸುಡಲಾಗುತ್ತಿದೆ. ಸ್ಮಶಾನದ ಕೆಲಸಗಾರನು “ಯಾರಾದರೂ ನಿಜವಾದ ಸಂಖ್ಯೆಯ ಕೋವಿಡ್ ಸಾವುಗಳನ್ನು ತಿಳಿದುಕೊಳ್ಳಲು ಬಯಸಿದರೆ, ಅವರು ಇಲ್ಲಿಗೆ ಭೇಟಿ ನೀಡಿ ನೋಡಬೇಕು’ ಎಂದು ದಿ ವೈರ್‌ಗೆ ತಿಳಿಸಿದ್ದಾನೆ.

ಸ್ಮಶಾನದಲ್ಲಿ ಪದ್ಧತಿ ಪ್ರಕಾರ ಶವಸಂಸ್ಕಾರ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ವಿದ್ಯುತ್ ಅನಿಲ ಆಧಾರಿತ ವ್ಯವಸ್ಥೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ, ಈಗ ಕಟ್ಟಿಗೆ ಬಳಸಿ ದಹನ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸಾಲಿನಲ್ಲಿ ಕಾಯುತ್ತಿರುವ ಇನ್ನೊಬ್ಬ ವ್ಯಕ್ತಿ ದೂರಿದರು.

ಅಧಿಕೃತ ಬುಲೆಟಿನ್ ಏಪ್ರಿಲ್ 16 ರಂದು ಗಾಜಿಯಾಬಾದ್ ಜಿಲ್ಲೆಯಲ್ಲಿ ಶೂನ್ಯ ಸಾವುಗಳನ್ನು ತೋರಿಸಿದರೆ, ಜಿಲ್ಲೆಯ ಪುರಸಭೆ ಆಯುಕ್ತ ಮಹೇಂದ್ರ ಸಿಂಗ್ ತನ್ವಾರ್ ಮಾಧ್ಯಮಕ್ಕೆ ತಿಳಿಸಿದ್ದು, ಸ್ಮಶಾನದಲ್ಲಿ ಶವಸಂಸ್ಕಾರಕ್ಕಾಗಿ ಸುಮಾರು 10 ಕೊವಿಡ್ ಶವಗಳು ಬಂದಿವೆ ಎಂದು!
ಮರುದಿನ ಮಾಧ್ಯಮಗಳೊಂದಿಗೆ ಮಾತನಾಡುವಾಗ ತನ್ವಾರ್, “ಕೋವಿಡ್ ಶವಗಳ ಅಂತ್ಯಸಂಸ್ಕಾರ ನಿರ್ವಹಣೆಗೆ ನಾವು ಟೋಕನ್ ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ನಾನು ಇಂದು ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಮತ್ತು ಎಲ್ಲವೂ ಸರಿಯಾಗಿ ನಡೆಯುತ್ತಿದೆ’ ಎಂದಿದ್ದಾರೆ.

ಬರೇಲಿ ಡೇಟಾದಲ್ಲಿನ ವ್ಯತ್ಯಾಸಗಳು

ಬರೇಲಿಯಲ್ಲಿ, ರಾಜ್ಯ ಸರ್ಕಾರದ ಬುಲೆಟಿನ್ ಏಪ್ರಿಲ್ 15 ರಂದು ಕೋವಿಡ್ ಕಾರಣದಿಂದಾಗಿ ಕೇವಲ ಒಂದು ಸಾವನ್ನು ವರದಿ ಮಾಡಿದೆ. ಇಡೀ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರವು ಜಿಲ್ಲೆಯಿಂದ ಕೇವಲ ಏಳು ಸಾವುಗಳನ್ನು ವರದಿ ಮಾಡಿದೆ. ಆದಾಗ್ಯೂ, ನಿಜವಾದ ಸಂಖ್ಯೆಗಳು ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ. ಬರೇಲಿಯ ಪ್ರಮುಖ ಶವಾಗಾರ, ಸ್ಮಶಾನಗಳು ಸಾಮಾನ್ಯವಾಗಿ ಎರಡನೇ ಅಲೆ ದೇಶವನ್ನು ತಟ್ಟುವ ಮೊದಲು ದಿನಕ್ಕೆ ಸುಮಾರು 20 ಶವಗಳನ್ನು ಪಡೆಯುತ್ತಿದ್ದವು. ಈಗ ಈ ಸಂಖ್ಯೆಗಳು ಆಘಾತಕಾರಿ ದ್ವಿಗುಣಗೊಂಡಿದೆ.

ಈ ಶವಸಂಸ್ಕಾರದ ಸಮಯದಲ್ಲಿ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಸ್ಮಶಾನ ಸಮಿತಿ ಹೇಳುತ್ತದೆ. ಈಗ ಕೋವಿಡ್ ಶವಗಳು ಬರುವುದು ಹೆಚ್ಚಾಗಿದೆ ಎಂದು ಅವರು ದಿ ವೈರ್‌ಗೆ ತಿಳಿಸಿದ್ದಾರೆ.

ಸ್ಥಳೀಯ ಆರೋಗ್ಯ ಇಲಾಖೆಯ ಮಾಹಿತಿಯೂ ವಿಭಿನ್ನವಾಗಿದೆ. ಯುಪಿ ಸರ್ಕಾರದ ಬುಲೆಟಿನ್ ವರದಿ ಮಾಡಿದ ಶೂನ್ಯ ಸಾವುಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಏಳು ಸಾವುಗಳು ಸಂಭವಿಸಿವೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಏಪ್ರಿಲ್ 16 ರಂದು ತಿಳಿಸಿದೆ!

ಏಪ್ರಿಲ್ 16 ರಂದು, ಸಿಟಿ ಸ್ಮಶಾನ್ ಭೂಮಿಯ ಕಾರ್ಮಿಕರ ಪ್ರಕಾರ, ಕೋವಿಡ್ ಪ್ರೋಟೋಕಾಲ್ ಪ್ರಕಾರ ಈ ಸ್ಮಶಾನದಲ್ಲಿ ಕೇವಲ ಏಳು ಶವಸಂಸ್ಕಾರಗಳು ನಡೆದಿವೆ. ಅವರ ಮಾಹಿತಿಯ ಪ್ರಕಾರ ಸಂಜಯ್ ನಗರ ಶವಾಗಾರದಲ್ಲಿ ಇನ್ನೂ ಏಳು ಶವಗಳಿದ್ದವು. ಏಪ್ರಿಲ್ 17 ರಂದು, ಆರೋಗ್ಯ ಇಲಾಖೆಯು ನಾಲ್ಕು ಕೋವಿಡ್ ಸಾವು ಎಂದು ಹೇಳಿದೆ.

ಆಗ್ರಾ ಜಿಲ್ಲೆಯಲ್ಲೂ ಇದೇ ಕತೆ!

ಆಗ್ರಾದಲ್ಲಿ ಪರಿಸ್ಥಿತಿ ಬಹುಶಃ ಕೆಟ್ಟದಾಗಿದೆ. ಇದನ್ನು ಮುಚ್ಚಿಡಲು ಯುಪಿ ಸರ್ಕಾರದ ಬುಲೆಟಿನ್ ಏಪ್ರಿಲ್ ತಿಂಗಳಲ್ಲಿ 13 ದಿನಗಳಲ್ಲಿ ಶೂನ್ಯ ಸಾವುಗಳನ್ನು ವರದಿ ಮಾಡಿದೆ. ಏಪ್ರಿಲ್ 17 ರಂದು ಯುಪಿ ಸರ್ಕಾರದ ಬುಲೆಟಿನ್ ಕೇವಲ ನಾಲ್ಕು ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಹೇಳಿದರೆ, ಆಗ್ರಾದ ತಾಜ್‌ಗಂಜ್ ಸ್ಮಶಾನದಲ್ಲಿ 48 ಮೃತ ದೇಹಗಳು ಪತ್ತೆಯಾಗಿವೆ. ಈ ಸ್ಮಶಾನದಲ್ಲಿ ಹಲವಾರು ಕಾರ್ಮಿಕರು ದಿ ವೈರ್ ಜೊತೆ ಮಾತನಾಡಿ, ಎರಡನೇ ಅಲೆಗೆ ಮುಂಚಿತವಾಗಿ, ಸುಮಾರು 15 ಶವಗಳನ್ನು ಸಾಮಾನ್ಯವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಈಗ, ಸಂಖ್ಯೆಗಳು ದ್ವಿಗುಣಗೊಂಡಿವೆ ಎಂದಿದ್ದಾರೆ. “ಏಪ್ರಿಲ್ 17 ರಂದು, ಸುಮಾರು 30 ಶವಗಳನ್ನು ಕಟ್ಟಿಗೆ ಬಳಸಿ ಮತ್ತು ಇನ್ನೂ 30 ಶವಗಳನ್ನು ಅನಿಲ ಆಧಾರಿತ ವಿದ್ಯುತ್ ಚಿತಾಗಾರ ಬಳಸಿ ದಹನ ಮಾಡಲಾಯಿತು” ಎಂದು ಕಾರ್ಮಿಕ ರಾಹುಲ್ ಹೇಳಿದ್ದಾರೆ.
ಒಂದೇ ದಿನದಲ್ಲಿ ಇಷ್ಟು ದೇಹಗಳು ಬರುವುದನ್ನು ತಾನು ನೋಡಿಲ್ಲ ಎಂದು ರಾಹುಲ್ ಹೇಳಿದ್ದಾರೆ. “ಒಂದು ದೇಹವನ್ನು ದಹನ ಮಾಡಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಆದರೆ, ಈಗ ಪರಿಸ್ಥಿತಿ ಹದಗೆಟ್ಟಿದೆ ” ಎಂದು ಅವರು ಹೇಳಿದರು.

ಸ್ಮಶಾನ ದಾಖಲೆಗಳ ಪ್ರಕಾರ, ಏಪ್ರಿಲ್ 12 ಮತ್ತು 13 ರಂದು 18 ವಿದ್ಯುತ್ ಮತ್ತು 18 ಸಾಮಾನ್ಯ ಶವಸಂಸ್ಕಾರಗಳು, ಏಪ್ರಿಲ್ 14 ರಂದು 19 ವಿದ್ಯುತ್ ಮತ್ತು 29 ಸಾಮಾನ್ಯ ಶವಸಂಸ್ಕಾರಗಳು, ಏಪ್ರಿಲ್ 15 ರಂದು 24 ವಿದ್ಯುತ್ ಮತ್ತು 26 ಸಾಮಾನ್ಯ ಶವಸಂಸ್ಕಾರಗಳು, ಏ. 16ರಂದು 27 ವಿದ್ಯುತ್ ಮತ್ತು 32 ಕಟ್ಟಿಗೆ ಬಳಸಿ ದಹನಗಳು ನಡೆದವು. ಏಪ್ರಿಲ್ 17ರಂದು 30 ವಿದ್ಯುತ್ ಮತ್ತು 38 ಕಟ್ಟಿಗೆ ದಹನದ ಶವಸಂಸ್ಕಾರಗಳು ನಡೆದಿವೆ. ಏಪ್ರಿಲ್ 12 ರಂದು 3, ಏಪ್ರಿಲ್ 17 ರಂದು 3 ಮತ್ತು ಏಪ್ರಿಲ್ 18 ರಂದು 3 ಸಾವುಗಳು ಮಾತ್ರ ಸಂಭವಿಸಿವೆ ಎಂದು ಯುಪಿ ಸರ್ಕಾರದ ಬುಲೆಟಿನ್ ಹೇಳಿದೆ. ಏಪ್ರಿಲ್ 13 ಮತ್ತು 15 ರ ಪ್ರಕಾರ ಯುಪಿ ಸರ್ಕಾರದ ಬುಲೆಟಿನ್, ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ ಎಂದು ಹೇಳಿದೆ.

ರಾಜ್ಯದ ಬಹುತೇಕ ಜಿಲ್ಲೆಗಳ ಸ್ಮಶಾನ, ಶವಾಗಾರಗಳನ್ನು ಪರಿಶೀಲಿಸಿ ವಿವರ ಪಡೆದಾಗ ಇಂಥದ್ದೇ ಮರೆಮಾಚುವಿಕೆಯ ವಿವರಗಳು ಲಭ್ಯವಾಗಿವೆ. ನಿಜವಾದ ಕೋವಿಡ್ ಸಾವಿನ ಸಂಖ್ಯೆಯನ್ನು ಮರೆಮಾಡಲು ಸರ್ಕಾರವು ದೊಡ್ಡ “ಪಿತೂರಿ” ನಡೆಸುತ್ತಿದೆ ಎಂದು ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವ ಮತ್ತು ಝಾನ್ಸಿ ಕ್ಷೇತ್ರದ ಮಾಜಿ ಸಂಸದ ಪ್ರದೀಪ್ ಜೈನ್ ಆದಿತ್ಯ ಹೇಳುತ್ತಾರೆ.

ಕೃಪೆ: ದಿ ವೈರ್


ಇದನ್ನೂ ಓದಿ: ಕೊರೊನಾ ಬಗ್ಗೆ ಸಲಹೆ; ಮನಮೋಹನ್ ಸಿಂಗ್‌ ಅವರನ್ನು ಟ್ರೋಲ್ ಮಾಡಿದ ಕೇಂದ್ರ ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...