HomeUncategorized‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

- Advertisement -
- Advertisement -

‘ಇದು ಸಿದ್ಧಾರ್ಥ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ…..’
ಯುವ ಉದ್ಯಮಿಯೊಬ್ಬನ ಮನದಾಳದ ಮಾತುಗಳು..

ಇವತ್ತು ದೇಶದ ಆರ್ಥಿಕತೆ ಅಪಾಯದಲ್ಲಿದೆ. ಹೊರ ರಾಜ್ಯದಲ್ಲಿ ಸಣ್ಣ ಉದ್ಯಮ ಆರಂಭಿಸಿರುವ ಗದಗ ಜಿಲ್ಲೆಯ ಗಜೇಂದ್ರಗಡದ ಯುವ ಇಂಜಿನಿಯರ್-ಎಂಟರಪ್ರೈನರ್ ಒಬ್ಬರು ನಮ್ಮ ಪತ್ರಿಕೆ ಮತು ಪೋರ್ಟಲ್ ಮುಂದೆ ಹೇಳಿದ ಮನದಾಳದ ಮಾತುಗಳು ಇಲ್ಲಿವೆ…….

ಒಂದು ದುರಂತ ಸಾವು ಇವತ್ತು ಒಂದಿಷ್ಟು ಪ್ರಶ್ನೆಗಳನ್ನೂ ಎಬ್ಬಿಸಿದೆ. ಎಲ್ಲ ಸಾವುಗಳೂ, ಅವೂ ಆತ್ಮಹತ್ಯೆಯಾಗಿದ್ದರೆ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಲೇಬೇಕು…

ಇತ್ತೀಚೆಗೆ ಬಿಡಿಬಿಡಿಯಾಗಿ ವ್ಯಾಟ್ಸಾಫ್‍ನಲ್ಲಿ ಸಿಗುತ್ತಿರುವ ‘ನ್ಯಾಯಪಥ’ದ ಬರಹಗಳು ಮತ್ತು ಕೈಗೇ ಸಿಗುತ್ತಿರುವ ನಾನುಗೌರಿ.ಕಾಂ ಬರಹಗಳು ನನಗೆ ಇಷ್ಟವಾಗಿವೆ. ಸಿದ್ಧಾರ್ಥ ಕುರಿತಾಗಿ, ಈ ಸಲದ ನ್ಯಾಯಪಥದಲ್ಲಿ ಬಂದ ಲೇಖನ ಮತ್ತು ಸಿದ್ಧಾರ್ಥ ಸಾವಿನ ಕುರಿತಾಗಿ ಶಿವಸುಂದರ್ ಎನ್ನುವವರು ವಿಶ್ಲೇಷಣೆ ಮಾಡಿದ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದನ್ನು ಇಲ್ಲಿ ಮುಂದಿಡುತ್ತಿರುವೆ:

ಬರಹ ಮತ್ತು ವಿಡಿಯೋದ ಕೆಲವು ಅಂಶಗಳಲ್ಲಿ ವೈರುಧ್ಯ ಇರಬಹುದಾದರೂ ಒಟ್ಟೂ ಕಾಳಜಿ ಜನಪರವಾಗಿಯೇ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಒಬ್ಬ ತೀರಾ ಪುಟ್ಟ ಉದ್ಯಮಿಯಾಗಿ ನನ್ನ ಈ ಅನಿಸಿಕೆಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿರುವೆ:

‘ಸಿದ್ಧಾರ್ಥ್ ಹೆಗ್ಡೆ ಒಬ್ಬ ಬ್ರಿಲಿಯಂಟ್ ಉದ್ಯಮಿಯಾಗಿದ್ದ… ಶೂನ್ಯದಿಂದ ಶುರು ಮಾಡಿ, ಈ (ಜಟಿಲ) ಅರ್ಥವ್ಯವಸ್ಥೆ ಮತ್ತು ಮಾರುಕಟ್ಟೆಯ ಸೂಕ್ಷ್ಮಗಳನ್ನು ಮನಗಂಡಿದ್ದ ಒಬ್ಬ ವ್ಯಕ್ತಿಯಾಗಿ ನನ್ನಂತಹ ಯಾವುದೇ ಬಿಸಿನೆಸ್ ಹಿನ್ನೆಲೆಯಿಂದ ಬರದ ಯುವಕರಿಗೆ ಸ್ಪೂರ್ತಿಯೂ ಆಗಿದ್ದರು… ಆದರೆ, ಕಾಲಘಟ್ಟ ಅದೆಷ್ಟು ಅಪಾಯಕಾರಿ ವೇಗದಲ್ಲಿ ಅರ್ಥವ್ಯವಸ್ಥೆಯನ್ನು ಮುಂದಕ್ಕೆ ಒಯ್ಯುವ ಭರವಸೆ ಮೂಡಿಸಿ ಬಿಟ್ಟಿತು ಎಂದರೆ….. ಈ ವೇಗದೋಟದ ಹಾದಿಯಲ್ಲಿ ಜನಸಾಮಾನ್ಯರಿಗೆ ಜಾಗವೇ ಇಲ್ಲ ಎಂಬುದು ಸತ್ಯವಾಗಿದ್ದರೂ, ಜನರನ್ನು ದಾರಿ ತಪ್ಪಿಸುತ್ತಲೇ ಬರಲಾಗಿತು…

ಸಿದ್ಧಾರ್ಥರು ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಮತ್ತು ಸಂಪತ್ತನ (?) ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೆ ಒಬ್ಬ ಅತಿ ಸಣ್ಣ ಉದ್ಯಮಿಯಾಗಿ ನನಗೆ ವೈಯಕ್ತಿಕವಾಗಿ ಸಿದ್ಧಾರ್ಥರ ಬಗ್ಗೆ ಗೌರವವಂತೂ ಇದೆ, ಅದು ಅವರು ತಳಮಟ್ಟದಿಂದ ಕಟ್ಟಿದ ಹೊಸ ಉದ್ಯಮ ಸಾಮ್ರಾಜ್ಯಕ್ಕಾಗಿ… ಆದರೆ ಅದಷ್ಟೇ ಜೀವನವಲ್ಲವಲ್ಲ….

***
2014ರ ಚುನಾವಣೆ ಸಂದರ್ಭ. ಅಲ್ಲಿವರೆಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೇರುತ್ತಿದ್ದ ತೆರಿಗೆ ಭಾರಗಳನ್ನು ತಡೆಯದೇ ನನ್ನಂತಹ ಪುಟ್ಟ ಪುಟ್ಟ ಹೊಸ ಉದ್ಯಮಿಗಳು ( ಇಂಜಿನಿಯರಿಂಗ್ ನೆರವಿನಿಂದ ದೊಡ್ಡ ಸಂಬಳದ ಹುದ್ದೆ ಗಿಟ್ಟಿಸಿ, ಅದರಲ್ಲಿ ಉಳಿಸಿದ ಹಣ ಮತ್ತು ಅದರ ಆಧಾರದಲ್ಲಿ ಸಿಕ್ಕ ಬ್ಯಾಂಕ್ ಸಾಲಗಳಿಂದ ಸಣ್ಣ ಉದ್ಯಮ ಘಟಕ) ಆಘಾತ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಪಾರದರ್ಶಕ, ಉದ್ಯಮಿಗಳಿಗೆ ಕಿರುಕುಳಮುಕ್ತ …ಇತ್ಯಾದಿ ಇತ್ಯಾದಿ ಭರವಸೆಗಳನ್ನೇ ನೀಡಿದ ಮೋದಿಯಿಂದ ಬದಲಾವಣೆ ಆಗಬಹುದು ಎಂದು ಎಲ್ಲರಂತೆ ನಾವೂ ನಂಬಿದೆವು.

ಆದರೆ, ಆ ಮನುಷ್ಯನ ಆಡಳಿತದ ಒಂದೇ ವರ್ಷದಲ್ಲಿ ಎಲ್ಲವೂ ಸ್ಪಷ್ಟವಾಯಿತು. ಈತ ಮಹಾನ್ ದರೋಡೆಕೋರ, ಮಹಾನ್ ಠಕ್ಕ ಎಂಬುದು. ಈತ ಕೇವಲ ಗುಜರಾತಿನ ಪಿಎಂ ಅಷ್ಟೇ ಎಂಬುದು ಗೊತ್ತಾಗಿತು.

ಆದರೆ, ದೇಶಭಕ್ತಿ ಮತ್ತು ಇತರ ಧಾರ್ಮಿಕ ಭಾವನಾತ್ಮಕ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುವಾಗ ಈ ದೇಶದ ಉದ್ಯಮ ಸಮೂಹ ಆತನ ಬೆಂಬಲಕ್ಕೇ ನಿಂತಿದ್ದು ವಿಚಿತ್ರವಾಗಿತ್ತು. ಮೀಡಿಯಾ ಕೂಡ ನಿನ್ನೆ ಮೊನ್ನೆವರೆಗೆ ಬೊಂಬಡಾ ಬಜಾಯಿಸಿ ಈಗ ಸಿದ್ಧಾರ್ಥರ ಸಾವಿನ ನಂತರ ಎಚ್ಚರಗೊಂಡು ಕೆಲವು ಸತ್ಯಗಳನ್ನು ಹೇಳುತ್ತಿದೆ.

ಸದ್ಯ ದೇಶದ ಆರ್ಥಿಕತೆ ಕುಸಿಯುತ್ತಲೇ ಸಾಗಿದೆ, ಬಂಡವಾಳ ಹೂಡಿಕೆ ಕುಸಿದಿದೆ ಕೂಡ… ಮೇಲಾಗಿ ಜನರ ಕೊಳ್ಳುವ ಶಕ್ತಿಯೇ ಕುಸಿದು ಹೋಗಿದೆ.. ಇಲ್ಲಿ ಏರುತ್ತಲೇ ಇರೋದು ಒಂದು ಮಾತ್ರ: ಅದು ಮೋದಿಯ ಹುಚ್ಚಾಟ, ಹುಂಬತನಗಳಷ್ಟೇ…

ಸಣ್ಣ ಮತ್ತ ಮಧ್ಯಮ ಉದ್ಯಮಗಳಿಗೆ ಈ ವರ್ಷ ಭಾರಿ ಗಂಡಾಂತರ ಕಾದಿದೆ. ಒಟ್ಟೂ ಅರ್ಥವ್ಯವಸ್ಥೆ ನಿಧಾನಕ್ಕೆ ಕುಸಿಯತೊಡಗಿದೆ….

(ಲೇಖಕರ ಕೋರಿಕೆಯ ಮೇರೆಗೆ ಅವರ ಹೆಸರನ್ನು ಪ್ರಕಟಿಸಿಲ್ಲ.)

ನಿರೂಪಣೆ: ಪಿ.ಕೆ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...