HomeUncategorized‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

‘ಇದು ಸಿದ್ಧಾರ್ಥನ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ..’ ಯುವ ಉದ್ಯಮಿಯ ಮನದಾಳದ ಮಾತುಗಳು

- Advertisement -
- Advertisement -

‘ಇದು ಸಿದ್ಧಾರ್ಥ ದುರಂತವಷ್ಟೇ ಅಲ್ಲ, ದೇಶದ ಎಕಾನಮಿಯದೂ ಕೂಡ…..’
ಯುವ ಉದ್ಯಮಿಯೊಬ್ಬನ ಮನದಾಳದ ಮಾತುಗಳು..

ಇವತ್ತು ದೇಶದ ಆರ್ಥಿಕತೆ ಅಪಾಯದಲ್ಲಿದೆ. ಹೊರ ರಾಜ್ಯದಲ್ಲಿ ಸಣ್ಣ ಉದ್ಯಮ ಆರಂಭಿಸಿರುವ ಗದಗ ಜಿಲ್ಲೆಯ ಗಜೇಂದ್ರಗಡದ ಯುವ ಇಂಜಿನಿಯರ್-ಎಂಟರಪ್ರೈನರ್ ಒಬ್ಬರು ನಮ್ಮ ಪತ್ರಿಕೆ ಮತು ಪೋರ್ಟಲ್ ಮುಂದೆ ಹೇಳಿದ ಮನದಾಳದ ಮಾತುಗಳು ಇಲ್ಲಿವೆ…….

ಒಂದು ದುರಂತ ಸಾವು ಇವತ್ತು ಒಂದಿಷ್ಟು ಪ್ರಶ್ನೆಗಳನ್ನೂ ಎಬ್ಬಿಸಿದೆ. ಎಲ್ಲ ಸಾವುಗಳೂ, ಅವೂ ಆತ್ಮಹತ್ಯೆಯಾಗಿದ್ದರೆ ಇಂತಹ ಪ್ರಶ್ನೆಗಳನ್ನು ಹುಟ್ಟು ಹಾಕಲೇಬೇಕು…

ಇತ್ತೀಚೆಗೆ ಬಿಡಿಬಿಡಿಯಾಗಿ ವ್ಯಾಟ್ಸಾಫ್‍ನಲ್ಲಿ ಸಿಗುತ್ತಿರುವ ‘ನ್ಯಾಯಪಥ’ದ ಬರಹಗಳು ಮತ್ತು ಕೈಗೇ ಸಿಗುತ್ತಿರುವ ನಾನುಗೌರಿ.ಕಾಂ ಬರಹಗಳು ನನಗೆ ಇಷ್ಟವಾಗಿವೆ. ಸಿದ್ಧಾರ್ಥ ಕುರಿತಾಗಿ, ಈ ಸಲದ ನ್ಯಾಯಪಥದಲ್ಲಿ ಬಂದ ಲೇಖನ ಮತ್ತು ಸಿದ್ಧಾರ್ಥ ಸಾವಿನ ಕುರಿತಾಗಿ ಶಿವಸುಂದರ್ ಎನ್ನುವವರು ವಿಶ್ಲೇಷಣೆ ಮಾಡಿದ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದನ್ನು ಇಲ್ಲಿ ಮುಂದಿಡುತ್ತಿರುವೆ:

ಬರಹ ಮತ್ತು ವಿಡಿಯೋದ ಕೆಲವು ಅಂಶಗಳಲ್ಲಿ ವೈರುಧ್ಯ ಇರಬಹುದಾದರೂ ಒಟ್ಟೂ ಕಾಳಜಿ ಜನಪರವಾಗಿಯೇ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಒಬ್ಬ ತೀರಾ ಪುಟ್ಟ ಉದ್ಯಮಿಯಾಗಿ ನನ್ನ ಈ ಅನಿಸಿಕೆಗಳನ್ನು ಇಲ್ಲಿ ನಿಮ್ಮ ಮುಂದೆ ಇಡುತ್ತಿರುವೆ:

‘ಸಿದ್ಧಾರ್ಥ್ ಹೆಗ್ಡೆ ಒಬ್ಬ ಬ್ರಿಲಿಯಂಟ್ ಉದ್ಯಮಿಯಾಗಿದ್ದ… ಶೂನ್ಯದಿಂದ ಶುರು ಮಾಡಿ, ಈ (ಜಟಿಲ) ಅರ್ಥವ್ಯವಸ್ಥೆ ಮತ್ತು ಮಾರುಕಟ್ಟೆಯ ಸೂಕ್ಷ್ಮಗಳನ್ನು ಮನಗಂಡಿದ್ದ ಒಬ್ಬ ವ್ಯಕ್ತಿಯಾಗಿ ನನ್ನಂತಹ ಯಾವುದೇ ಬಿಸಿನೆಸ್ ಹಿನ್ನೆಲೆಯಿಂದ ಬರದ ಯುವಕರಿಗೆ ಸ್ಪೂರ್ತಿಯೂ ಆಗಿದ್ದರು… ಆದರೆ, ಕಾಲಘಟ್ಟ ಅದೆಷ್ಟು ಅಪಾಯಕಾರಿ ವೇಗದಲ್ಲಿ ಅರ್ಥವ್ಯವಸ್ಥೆಯನ್ನು ಮುಂದಕ್ಕೆ ಒಯ್ಯುವ ಭರವಸೆ ಮೂಡಿಸಿ ಬಿಟ್ಟಿತು ಎಂದರೆ….. ಈ ವೇಗದೋಟದ ಹಾದಿಯಲ್ಲಿ ಜನಸಾಮಾನ್ಯರಿಗೆ ಜಾಗವೇ ಇಲ್ಲ ಎಂಬುದು ಸತ್ಯವಾಗಿದ್ದರೂ, ಜನರನ್ನು ದಾರಿ ತಪ್ಪಿಸುತ್ತಲೇ ಬರಲಾಗಿತು…

ಸಿದ್ಧಾರ್ಥರು ಸೃಷ್ಟಿಸಿದ ಉದ್ಯೋಗಗಳ ಸಂಖ್ಯೆ ಮತ್ತು ಸಂಪತ್ತನ (?) ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೆ ಒಬ್ಬ ಅತಿ ಸಣ್ಣ ಉದ್ಯಮಿಯಾಗಿ ನನಗೆ ವೈಯಕ್ತಿಕವಾಗಿ ಸಿದ್ಧಾರ್ಥರ ಬಗ್ಗೆ ಗೌರವವಂತೂ ಇದೆ, ಅದು ಅವರು ತಳಮಟ್ಟದಿಂದ ಕಟ್ಟಿದ ಹೊಸ ಉದ್ಯಮ ಸಾಮ್ರಾಜ್ಯಕ್ಕಾಗಿ… ಆದರೆ ಅದಷ್ಟೇ ಜೀವನವಲ್ಲವಲ್ಲ….

***
2014ರ ಚುನಾವಣೆ ಸಂದರ್ಭ. ಅಲ್ಲಿವರೆಗೂ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹೇರುತ್ತಿದ್ದ ತೆರಿಗೆ ಭಾರಗಳನ್ನು ತಡೆಯದೇ ನನ್ನಂತಹ ಪುಟ್ಟ ಪುಟ್ಟ ಹೊಸ ಉದ್ಯಮಿಗಳು ( ಇಂಜಿನಿಯರಿಂಗ್ ನೆರವಿನಿಂದ ದೊಡ್ಡ ಸಂಬಳದ ಹುದ್ದೆ ಗಿಟ್ಟಿಸಿ, ಅದರಲ್ಲಿ ಉಳಿಸಿದ ಹಣ ಮತ್ತು ಅದರ ಆಧಾರದಲ್ಲಿ ಸಿಕ್ಕ ಬ್ಯಾಂಕ್ ಸಾಲಗಳಿಂದ ಸಣ್ಣ ಉದ್ಯಮ ಘಟಕ) ಆಘಾತ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಪಾರದರ್ಶಕ, ಉದ್ಯಮಿಗಳಿಗೆ ಕಿರುಕುಳಮುಕ್ತ …ಇತ್ಯಾದಿ ಇತ್ಯಾದಿ ಭರವಸೆಗಳನ್ನೇ ನೀಡಿದ ಮೋದಿಯಿಂದ ಬದಲಾವಣೆ ಆಗಬಹುದು ಎಂದು ಎಲ್ಲರಂತೆ ನಾವೂ ನಂಬಿದೆವು.

ಆದರೆ, ಆ ಮನುಷ್ಯನ ಆಡಳಿತದ ಒಂದೇ ವರ್ಷದಲ್ಲಿ ಎಲ್ಲವೂ ಸ್ಪಷ್ಟವಾಯಿತು. ಈತ ಮಹಾನ್ ದರೋಡೆಕೋರ, ಮಹಾನ್ ಠಕ್ಕ ಎಂಬುದು. ಈತ ಕೇವಲ ಗುಜರಾತಿನ ಪಿಎಂ ಅಷ್ಟೇ ಎಂಬುದು ಗೊತ್ತಾಗಿತು.

ಆದರೆ, ದೇಶಭಕ್ತಿ ಮತ್ತು ಇತರ ಧಾರ್ಮಿಕ ಭಾವನಾತ್ಮಕ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುವಾಗ ಈ ದೇಶದ ಉದ್ಯಮ ಸಮೂಹ ಆತನ ಬೆಂಬಲಕ್ಕೇ ನಿಂತಿದ್ದು ವಿಚಿತ್ರವಾಗಿತ್ತು. ಮೀಡಿಯಾ ಕೂಡ ನಿನ್ನೆ ಮೊನ್ನೆವರೆಗೆ ಬೊಂಬಡಾ ಬಜಾಯಿಸಿ ಈಗ ಸಿದ್ಧಾರ್ಥರ ಸಾವಿನ ನಂತರ ಎಚ್ಚರಗೊಂಡು ಕೆಲವು ಸತ್ಯಗಳನ್ನು ಹೇಳುತ್ತಿದೆ.

ಸದ್ಯ ದೇಶದ ಆರ್ಥಿಕತೆ ಕುಸಿಯುತ್ತಲೇ ಸಾಗಿದೆ, ಬಂಡವಾಳ ಹೂಡಿಕೆ ಕುಸಿದಿದೆ ಕೂಡ… ಮೇಲಾಗಿ ಜನರ ಕೊಳ್ಳುವ ಶಕ್ತಿಯೇ ಕುಸಿದು ಹೋಗಿದೆ.. ಇಲ್ಲಿ ಏರುತ್ತಲೇ ಇರೋದು ಒಂದು ಮಾತ್ರ: ಅದು ಮೋದಿಯ ಹುಚ್ಚಾಟ, ಹುಂಬತನಗಳಷ್ಟೇ…

ಸಣ್ಣ ಮತ್ತ ಮಧ್ಯಮ ಉದ್ಯಮಗಳಿಗೆ ಈ ವರ್ಷ ಭಾರಿ ಗಂಡಾಂತರ ಕಾದಿದೆ. ಒಟ್ಟೂ ಅರ್ಥವ್ಯವಸ್ಥೆ ನಿಧಾನಕ್ಕೆ ಕುಸಿಯತೊಡಗಿದೆ….

(ಲೇಖಕರ ಕೋರಿಕೆಯ ಮೇರೆಗೆ ಅವರ ಹೆಸರನ್ನು ಪ್ರಕಟಿಸಿಲ್ಲ.)

ನಿರೂಪಣೆ: ಪಿ.ಕೆ ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...