Homeಅಂಕಣಗಳು`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

`ಅರೆರೆ, ನಮ್ದು ಕುತ್ತೆ ನಮಿಗೇ ಬೌ..ಬೌ..’

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳು, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.
ಬ್ಲೂಜೆಪಿಯೆಂಬ ಕೊಳಕುಮಂಡಲ ಪಾರ್ಟಿಯು ದೇಶದ ತುಂಬೆಲ್ಲ ಕಾರ್ಯಕರ್ತರ ಹೆಸರಿನಲ್ಲಿ ಮಿಡಿನಾಗರಗಳನ್ನು ಸಾಕಿ, ವಿರೋಧಿಗಳ ಮೇಲೆ ಎಸೆಯುತ್ತಿರುವುದು ಗೊತ್ತೇ ಇದೆ. ಕಂಡಕಂಡವರಿಗೆಲ್ಲ ಕಚ್ಚಿ ಕಚ್ಚಿ ಅಭ್ಯಾಸವಾಗಿರುವ ಈ ಹಾವುಗಳು ಕಚ್ಚಲು ಬೇರೆ ಯಾರೂ ಸಿಗದೆ ಇತ್ತೀಚೆಗೆ ಬ್ಲೂಜೆಪಿ ಪಕ್ಷದವರನ್ನೇ ಅಗಿಯುತ್ತಿರುವುದು ಹೊಸ ಸಮಾಚಾರ. ಅಂತರ್ಧರ್ಮೀಯ ಮದುವೆಯಾದ ದಂಪತಿಗಳಿಗೆ ಪಾಸ್ ಪೋರ್ಟ್ ಕೊಡಲ್ಲ ಎಂದ ಸರ್ಕಾರಿ ಅಧಿಕಾರಿಯೊಬ್ಬನನ್ನು ಕೇಂದ್ರ ವಿದೇಶಾಂಗ ಮಂತ್ರಿ ಚೆಷ್ಮಾ ಸುರಾಜಮ್ಮ ಒದೆಯಬಾರದ ಜಾಗಕ್ಕೆ ಒದ್ದು ಕೆಲಸದಿಂದ ಓಡಿಸಿದ್ದರು. ಇಷ್ಟಕ್ಕೇ ರೊಚ್ಚಿಗೆದ್ದ ಬ್ಲೂಜೆಪಿಯ ಕಾರ್ಯಕರ್ತ ಸರ್ಪಗಳ ಪಡೆಯು ಚೆಶ್ಮಮ್ಮನನ್ನು ಕೊಲೆ ಮಾಡಲು, ತುಳಿದು ಸಾಯಿಸಲು ಕರೆ ಕೊಟ್ಟಿದ್ದವು. ಮುದ್ದು ಮಾಡಿ, ತಲೆಸವರಿ, ವಿಷವುಣಿಸಿ ಬೆಳೆಸಿದ ತಮ್ಮ ಸ್ವಂತ ಸರ್ಪಗಳೇ ತಿರುಗಿ ಬಿದ್ದು ಕಚ್ಚುತ್ತಿರುವುದರಿಂದ ಘಾಸಿಗೊಂಡ ಚೆಷ್ಮಮ್ಮ `ಅರೆರೆ, ನಮ್ದು ಕುತ್ತಾ ನಮಿಗೇ ಬೌ..ಬೌ..’ ಎಂದು ಕನವರಿಸುತ್ತಾ ಜೀವನದಲ್ಲಿ ಜಿಗುಪ್ಸೆ ಹುಟ್ಟಿಸಿಕೊಂಡಿದ್ದಾರೆಂದು ಅನಧಿಕೃತ ಮೂಲಗಳು ತಿಳಿಸಿವೆ.

******

ಬ್ರದಾನಮಂತ್ರಿ ಫಕೀರಪ್ಪನನ್ನು ರೋಡ್ ಶೋ ಟೈಮಿನಲ್ಲಿ ಆನೆಪಟಾಕಿ ಸರಕ್ಕೆ ಬೆಂಕಿಹಚ್ಚಿ ಎಸೆದು ಉಡೀಸ್ ಮಾಡಲು ದುಷ್ಕರ್ಮಿಗಳು ಹೊಂಚು ಹಾಕುತ್ತಿದ್ದಾರೆಂದು ಹಗಲುಕನಸು ಕಂಡ ಮಹಾರಾಷ್ಟ್ರ ಪೊಲೀಸರು ಈ ಕೆಟ್ಟಕನಸಿನ ಬಗ್ಗೆ ಬ್ರಧಾನಮಂತ್ರಿ ಕಚೇರಿಗೆ ಮಾಹಿತಿ ತಲುಪಿಸಿದ್ದಾರೆ. ಈ ತಳಬುಡವಿಲ್ಲದ ದುಸ್ವಪ್ನದ ಆಧಾರದ ಮೇಲೆ ಪಿ.ಎಂ ಫಕೀರಪ್ಪನಿಗೆ ಸೆಕ್ಯುರಿಟಿಯನ್ನು ಟೈಟ್ ಮಾಡಲಾಗಿದೆಯಂತೆ. ಹೊಸ ಆದೇಶದ ಪ್ರಕಾರ ಫಕೀರಪ್ಪನನ್ನು ದೇಶದ ಎಂ.ಎಲ್.ಎ, ಎಂಪಿಗಳು, ಅಧಿಕಾರಿಗಳೂ ಸಹ ಭೇಟಿ ಮಾಡಲು ನಿಬರ್ಂಧ ಹೇರಲಾಗಿದೆ. ಫಕೀರಪ್ಪನನ್ನು ಒಂದು ಪುರಿಮೂಟೆಯೊಳಗೆ ತುಂಬಿ, ಲಾರಿಯೊಂದಕ್ಕೆ ಎಸೆದು, ಆ ಲಾರಿಯ ಸುತ್ತ ಎಸ್.ಪಿ.ಜಿ ಕಮ್ಯಾಂಡೋಗಳು ಬಂದೂಕು ಹಿಡಿದು ಪಹರೆ ಕಾಯುತ್ತಿದ್ದಾರೆ ಎನ್ನಲಾಗಿದೆ. ತಿಂಡಿ, ಊಟ, ಸುಸ್ಸು ಮಾಡಲಷ್ಟೇ ಪುರಿಮೂಟೆಯಿಂದ ಹೊರಬರುವ ಫಕೀರಪ್ಪ, ಬಂದ ಕೆಲಸ ಮುಗಿಯುತ್ತಿದ್ದಂತೆ ಪುಸುಕ್ ಅಂತ ಲಾರಿ ಹತ್ತಿ ವಾಪಸ್ ಪುರಿಮೂಟೆಯೊಳಗೆ ಹೋಗಿ ಅವಿತು ಕುಳಿತುಕೊಳ್ಳುತ್ತಿದ್ದಾರೆಂದು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

******

ರಾಜ್ಯ ರಾಜಕಾರಣದ ಕಲಬೆರಕೆ ಸರ್ಕಾರದಲ್ಲಿ ದಿನಕ್ಕೊಂದು ಧೀಂತಕಿಟತೋಂ ಅವಾಂತರಗಳನ್ನು ನೋಡಿ ನೋಡಿ ಕಣ್ಣು ಬೇನೆ ಬರಿಸಿಕೊಂಡಿರುವ ಸಮಾಜವಾದಿ ಸಿದ್ದಣ್ಣನವರು ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದೂ ಪಡೆದೂ ಬೇಜಾರಾಗಿರೋ ಸಿದ್ದಣ್ಣ ‘ಬೆರಕೆ ಸರ್ಕಾರದ ಆಯುಸ್ಸು ಇಷ್ಟು ತಿಂಗಳು, ಆಮೇಲಿದು ಕಾಲೆತ್ತಿಕೊಂಡು ಮಲಗುತ್ತದೆ’ ಅಂತ ದಿನಕ್ಕೊಂದು ಆಡಿಯೋ ರೆಕಾಡಿರ್ಂಗ್, ವಿಡಿಯೋ ಕ್ಲಿಪಿಂಗ್ ರಿಲೀಸ್ ಮಾಡುತ್ತ ಕುಮಾರಣ್ಣನ ಬೋಳುಮಂಡೆಯ ಮೇಲೆ ಟುಕುಟುಕು ಕುಟ್ಟಿಕೊಂಡು ಎಂಜಾಯ್ ಮಾಡುತ್ತಿರುವುದು ಕೈಕಮಾಂಡ್ ತಲೆ ಕೆಡಿಸಿದೆ. ಈ ಬಗ್ಗೆ ಚಿಂತಾಕ್ರಾಂತರಾದ ಕೈಕಮ್ಯಾಂಡ್ ಮುಖ್ಯಸ್ಥರು ಪೇಟದ ಹೆಗ್ಗಡೆಯವರಿಗೆ ಫೋನು ಮಾಡಿ, ಸಿದ್ದಣ್ಣನವರ ಚಿಕಿತ್ಸೆ ಮುಗಿಯುವವರೆಗೆ ಅವರು ಮಾತನಾಡಲು ಸಾಧ್ಯವಾಗದಂತೆ ಯಾವುದಾದರೂ ಬೇರನ್ನು ಅರೆದು ಸಿದ್ದಣ್ಣನಿಗೆ ಬಲವಂತವಾಗಿ ಕುಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆಂದು ಸೋರಿಕೆ ಸುದ್ದಿಗಳು ತಿಳಿಸಿವೆ.

******

ಬೀದಿಬೀದಿಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಮೊಬೈಲ್ ರಿಪೇರಿ ಅಂಗಡಿಗಳ ಹುಡುಗರಿಗಿಂತ ಕಡಿಮೆ ಕಾಮನ್ ಸೆನ್ಸ್ ಮತ್ತು ಸೈನ್ಸ್ ತಿಳುವಳಿಕೆಯಿರೋ ‘ಪವನಜ್ಜ’ ಎಂಬ ವಯೋವೃದ್ಧ ಚೆಡ್ಡಿಯೊಂದು ತನ್ನ ಮಾನವನ್ನು ತಾನೇ ತೆಗೆದುಕೊಂಡಿರೋ ಘಟನೆ ವರದಿಯಾಗಿದೆ. ಮೊಬೈಲ್‍ಗಳಲ್ಲಿ ಅದಿದೆ, ಇದು ಹಂಗೆ ಕೆಲ್ಸ ಮಾಡುತ್ತೆ, ಅದು ಹಿಂಗೆ ಕೆಲ್ಸ ಮಾಡುತ್ತೆ ಅಂತ ಪತ್ರಿಕೆಗಳಲ್ಲಿ ಪುಂಗುವ ಈ ಹಳೇ ದೊಗಳೆಚೆಡ್ಡಿಯು ಪುಸ್ತಕ ನೋಡಿ ಪರೀಕ್ಷೆ ಬರೆಯುವ ಶಿಕ್ಷಣ ಇಲಾಖೆಯ ಹೊಸ ಆಲೋಚನೆಯನ್ನು ಮೀಸಲಾತಿಗೆ ಗಂಟುಹಾಕಿ ತನ್ನ ಪುಳಚಾರ್ ಪಾಲಿಟಿಕ್ಸನ್ನು ಬಟಾಬಯಲು ಮಾಡಿಕೊಂಡಿದೆ. ಮೀಸಲಾತಿ ಅನುಪಾತದ ಹಿಂದುಮುಂದು ಗೊತ್ತಿಲ್ಲದೆ ಕೆಕರುಮಕರು ಪಟ್ಟಿಯೊಂದನ್ನು ಫೇಸ್ಬುಕ್ಕಲ್ಲಿ ಪೋಸ್ಟ್ ಮಾಡಿರುವ ಪವನಜ್ಜ.. ತಾನೆಂಥ ಶ್ರೇಷ್ಟಜಾತಿಯ ಹುಳ ಎಂಬುದನ್ನು ಅಂಡು ತಟ್ಟಿಕೊಂಡು ಘೋಷಿಸಿ ಜನರಿಂದ ಛೀಥೂ ಎಂದು ಉಗಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

******

ಬಿಹಾರದಲ್ಲಿ ಲಲ್ಲೂ ಯಾದವ್ ಜೊತೆಗೆ ನೆಟ್ಟಗೆ ನಡೆಯುತ್ತಿದ್ದ ಕೂಡುಸಂಸಾರದ ಸರ್ಕಾರಕ್ಕೆ ಕೈ ಕೊಟ್ಟು ಬ್ಲೂಜೆಪಿಯೆಂಬ ಮಾನಸಿಕ ಅಸ್ವಸ್ಥ ಕತ್ತೆಯೊಂದರ ಜೊತೆಗೆ ಹೊಸ ಸಂಸಾರದ ಸರ್ಕಾರ ಮಾಡಿಕೊಂಡಿದ್ದ ನಿತೀಶ್ ಕುಮಾರ್‍ಗೆ ತಾನು ಓತಿಕ್ಯಾತಕ್ಕೆ ಹೆದರಿ ಹೆಬ್ಬಾವನ್ನು ತಬ್ಬಿಕೊಂಡಿದ್ದೇನೆ ಅಂತ ತಡವಾಗಿ ಅರಿವಾಗಿದೆಯತೆ. ಬ್ಲೂಜೆಪಿ ತಿಕ್ಕಲರು ಕೊಡ್ತಿರೋ ಚಿತ್ರಹಿಂಸೆಯಿಂದ ಹೇಗಾದರೂ ಸರಿ ತಪ್ಪಿಸಿಕೊಳ್ಳಲು ಹೆಣಗುತ್ತಿರೋ ನಿತೀಶ್, ಹಳೇ ಹಸ್ಬೆಂಡಿನ ಲೆಗ್ಗೇ ಗತಿ ಎಂಬ ತೀರ್ಮಾನಕ್ಕೆ ಬಂದು “ಲಲ್ಲೂ ಮಾಮ, ಐ ಲವ್ ಯೂ ಮಾಮಾ “ ಎಂದು ಲಲ್ಲೂ ಯಾದವ್‍ಗೆ ಮೆಸೇಜು ಪಾಸ್ ಮಾಡ್ತಿದ್ದಾರೆಂದು ಗೊತ್ತಾಗಿದೆ. ಹೋದ ಬಂದಲ್ಲೆಲ್ಲ ಮಕಮೂತಿಗೆ ಇಕ್ಕಿಸಿಕೊಂಡು ಏದುಸಿರು ಬಿಡುತ್ತಿರೋ ಹಮೀದ್ ಷಾ ಎಂಬ ಹಳೇ ಕ್ರಿಮಿನಲ್ ಗಿರಾಕಿಗೆ ಈ ಬೆಳವಣಿಗೆಯಿಂದ ಹೊಸದಾಗಿ ಬೇಧಿ ಕಿತ್ಕೊಂಡಿದೆಯೆಂದು ಗುಪ್ತಮೂಲಗಳು ತಿಳಿಸಿವೆ. ಬಿಹಾರದಲ್ಲೇನಾದ್ರೂ ಎಡವಟ್ಟಾದರೆ ಅಕ್ಕಪಕ್ಕದ ರಾಜ್ಯಗಳೂ ಕೈಗೆ ಕೆರ ಎತ್ತಿಕೊಳ್ತವೆ ಅಂತ ಗಾಬರಿಯಾಗಿರುವ ಡ್ರಾಮಾ ಮಾಸ್ಟರ್ ಫಕೀರಪ್ಪ ಪಕೋಡೇಂದ್ರನು ನಿತೀಶ್ ಕುಮಾರ್‍ಗೆ ತಕ್ಷಣ ಫೋನ್ ಮಾಡಿ “ಬಾ.. ಮುತ್ತು ಕೊಡುವೆ ಕಂದನೆ, ನನ್ನ ಮುದ್ದು ರಾಜ” ಎಂಬ ಹಾಡನ್ನು ಹಾಡಿದರಂತೆ.. ಇದಕ್ಕೆ ಉತ್ತರಿಸಿದ ನಿತೀಶ್ ಕುಮಾರ್ “ನಾನು ಆ ಟೈಪ್‍ನವನಲ್ಲ… ಮುಚ್ಕೊಂಡ್ ಫೋನ್ ಮಡಗು” ಎಂದು ಖಡಕ್‍ಆಗಿ ಹೇಳಿ ಫೋನು ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.

******

ಕಳೆದ ಮುವ್ವತ್ತು ವರ್ಷಗಳಿಂದಲೂ ‘ಮಂದಿರ್ ವಹೀ ಬನಾಯೇಂಗೆ, ಇಟ್ಟಿಗೆ ಕೊಡಿ, ಚಪ್ಪಡಿ ಕೊಡಿ, ಮಣ್ಣು ಕೊಡಿ, ಸಿಮೆಂಟು ಕೊಡಿ’ ಅಂತ ಗಂಟಲು ಹರಿದುಕೊಳ್ತಿದ್ದ ದೊಗಳೆಚಡ್ಡಿಗಳು 2014ರಲ್ಲಿ ತಮ್ಮದೇ ಮೆಜಾರಿಟಿ ಸರ್ಕಾರ ಬಂದ ತಕ್ಷಣ ತಮ್ಮ ನವರಂಧ್ರಗಳಿಗೂ ಮಂದಿರದ ಹೆಸರಿನಲ್ಲಿ ಕಲೆಕ್ಷನ್ ಮಾಡಿದ ಐಟಂಗಳನ್ನು ಇಟ್ಟುಕೊಂಡು ಗಪ್ ಚುಪ್ ಆಗಿದ್ದರು. 4 ವರ್ಷ ಇದೇ “ಗಪ್ ಚುಪ್ಪಾಸನ” ಮಾಡುತ್ತಿದ್ದ ಇದೇ ದೊಗಳೆಚಡ್ಡಿಗಳು, ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ. ಮತ್ತೆ “ಮಂದಿರ್ ವಹೀ ಬನಾಯೇಂಗೆ” ಎಂದು ಥಕಥಕ ಕುಣಿಯುತ್ತಿವೆ. ನಿಮ್ಮದೇ ಸರ್ಕಾರ, ನಿಮ್ಮದೇ ಕಾನೂನು, ನಿಮ್ಮದೇ ಆಡಳಿತ, ನಿಮ್ಮದೇ ರಾಜ್ಯ, ನಿಮ್ಮದೇ ಮುಖ್ಯಮಂತ್ರಿ, ಇಷ್ಟೆಲ್ಲ ಇದ್ದು ಮಂದಿರ ಕಟ್ಟದೇ ಇಷ್ಟು ವರ್ಷ ಎಲ್ಲಿ ಎಂಜಲೆತ್ತೋಕೆ ಹೋಗಿದ್ರಿ ಅಂತ ದೊಗಳೆ ಚಡ್ಡಿಗಳಿಗೆ ಜನ ಉಗಿಯುತ್ತಿದ್ದಾರೆ. ಇದನ್ನು ಕೇರು ಮಾಡದ ದೊಗಳೆಚಡ್ಡಿಗಳು ಅದೇ ಚಡ್ಡಿಯಲ್ಲಿ ಉಗುಳುಬಿದ್ದ ಮುಖವನ್ನು ಒರೆಸಿಕೊಂಡು “ಮಂದಿರ್ ವಹೀ….” ಅಂತ ತಲೆ ಮೇಲೆ ಟವೆಲ್ ಹಾಕಿಕೊಂಡು ಹತ್ತಿರದ ವೈನ್ ಸ್ಟೋರ್ ಕಡೆಗೆ ಠೀವಿಯಿಂದ ಹೆಜ್ಜೆಹಾಕಿದರು ಎಂಬ ಸುದ್ದಿ ಲಭ್ಯವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...