Homeಮುಖಪುಟಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

ಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

- Advertisement -
- Advertisement -

ಕರ್ನಾಟಕದಲ್ಲಿ ಪಕ್ಷದ ಸಾಮಥ್ರ್ಯಕ್ಕಿಂತಲೂ ವ್ಯಕ್ತಿಗತ ಚರಿಷ್ಮಾ ಮಾತ್ರ ಲೆಕ್ಕ ಹಾಕುವುದಾದರೆ ಕುಮಾರಸ್ವಾಮಿಯೇ ಜನಪ್ರಿಯ ನಾಯಕರಾಗಿದ್ದರು. ರೈತರ ಗಣನೀಯ ವಿಭಾಗ, ಮಾಸಾಶನ ಪಡೆಯುವ ವೃದ್ಧರು-ಮಹಿಳೆಯರು ಮತ್ತು ಯುವಕರ ಒಂದು ವಿಭಾಗದ ನಡುವೆ ಎಚ್‍ಡಿಕೆ ಬಗ್ಗೆ ವಿಶೇಷವಾದ ಅಭಿಮಾನವಿತ್ತು. ಹಾಗಾಗಿಯೇ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಮೂವರ ಜನಪ್ರಿಯತೆಯ ಕುರಿತು ಸಮೀಕ್ಷೆ ನಡೆದಾಗ, ಜೆಡಿಎಸ್ ಪಕ್ಷದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಮಾರಸ್ವಾಮಿಯ ಪರ ಒಲವು ಇರುತ್ತಿತ್ತು. ಮುಖ್ಯಮಂತ್ರಿಯಾದ ನಂತರ ಜೆಡಿಎಸ್ ಪಕ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡುವಾಗ ಅವರೂ ಇದನ್ನೇ ಹೇಳಿದರು. ‘ನಾನು ಹೋದ ಕಡೆಯಲ್ಲೆಲ್ಲಾ ಜನರು ತೋರುವ ಅಭಿಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಮಾತ್ರ ಅವರು ಏಕೆ ಓಟು ಕೊಡುವುದಿಲ್ಲ?’.
ಜೆಡಿಎಸ್ ಪಕ್ಷದ ಸಂಘಟನೆಗೆ ಯಾವ ರೀತಿಯ ಒತ್ತೂ ಕೊಡದೇ, ಪಕ್ಷದಲ್ಲಿ ಸ್ವತಂತ್ರವಾಗಿ ಆಲೋಚಿಸಿ ನಾಯಕರಾಗುವ ತಮ್ಮ ಕುಟುಂಬೇತರ ವ್ಯಕ್ತಿಗಳಿಗೆ ಅವಕಾಶ ಕೊಡದೇ ಪಕ್ಷ ಬೆಳೆಯಬೇಕು ಎಂದರೆ ಹೇಗೆ ಬೆಳೆಯಲು ಸಾಧ್ಯ? ಜೆಡಿಎಸ್‍ನ ಶಕ್ತಿ ಮತ್ತು ಮಿತಿ ಎರಡೂ ಸಹಾ ದೇವೇಗೌಡರ ಕುಟುಂಬವೇ ಆಗಿದೆ. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ‘ಮೂರನೇ’ ಶಕ್ತಿಗಿರುವ ಸಾಧ್ಯತೆಯ ಪ್ರಮಾಣವನ್ನು ಅವರು ಇವತ್ತಿಗೂ ಸರಿಯಾಗಿ ಮನಗಂಡಂತಿಲ್ಲ. ಹಲವು ತಪ್ಪು ಹೆಜ್ಜೆಗಳ ನಂತರವೂ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿಯವರ ಜನಪ್ರಿಯತೆಯ ಕಾರಣಗಳಾದರೂ ಆ ಕುಟುಂಬಕ್ಕೆ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಎಡವಟ್ಟುಗಳನ್ನು ಪದೇ ಪದೇ ಮಾಡಿಕೊಂಡು ‘ಮೂರನೇ ಸ್ಥಾನದಲ್ಲಿರುವ’ ಶಕ್ತಿಯಾಗಿಯೇ ಜೆಡಿಎಸ್ ಉಳಿದುಕೊಂಡಿದೆ.
ಈ ಸಾರಿ ಕುಮಾರಸ್ವಾಮಿಯವರು ಮಾಡುತ್ತಿರುವ ಒಂದು ಮುಖ್ಯ ಎಡವಟ್ಟೆಂದರೆ, ಸಕಾರಾತ್ಮಕ ಅಜೆಂಡಾದೊಂದಿಗೆ ತಮ್ಮ ವೋಟ್ ಬೇಸ್‍ಅನ್ನು ವಿಸ್ತರಿಸಿಕೊಳ್ಳದೇ ಇರುವುದು. ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್‍ಗಿರುವ ಅವಕಾಶವೇ ಹೆಚ್ಚು. ಹಳೆಯ ವೋಟ್‍ಬೇಸ್ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಯಾರು ಯುವಜನರನ್ನು ಹೆಚ್ಚು ತಮ್ಮೆಡೆಗೆ ಸೆಳೆಯುತ್ತಾರೋ ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸುವುದು ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಕುರಿತು ಅಪ್‍ಡೇಟೆಡ್ ಮುನ್ನೋಟದೊಂದಿಗೆ ಮತ್ತು ಆ ಮುನ್ನೋಟದ ಕನಸನ್ನು ಜಾರಿ ಮಾಡಲು ಖಚಿತ ಹೆಜ್ಜೆಗಳನ್ನಿಡುವುದರೊಂದಿಗೆ ಸಾಧಿಸಬೇಕಾದ ಅಂಶ ಅದಾಗಿದೆ.
ಹಾಗೆ ನೋಡಿದರೆ, ಜೆಡಿಎಸ್‍ನ ಚುನಾವಣಾ ಭರವಸೆಗಳು ಯುವಕರ ಪರವಾಗಿಯೇ ಇದ್ದವು. ಮೋದಿ ಕೋಟಿ ಉದ್ಯೋಗದ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದರಿಂದ, ಈ ಸಾರಿ ಬಿಜೆಪಿಯು ಯಾವ ಸಂಖ್ಯೆಯನ್ನೂ ಹೇಳಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೆರಡೂ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಅದನ್ನು ಮತ್ತಷ್ಟು ನಿರ್ದಿಷ್ಟವಾಗಿ ಮುಂದಿಟ್ಟಿದ್ದು ಜೆಡಿಎಸ್. ಪ್ರಣಾಳಿಕೆ, ಪೂರ್ಣಪುಟದ ಜಾಹೀರಾತುಗಳಿಂದ ಹಿಡಿದು, ಈಚೆಗೆ ಮಂಡಿಸಿದ ಬಜೆಟ್‍ನವರೆಗೆ ಕುಮಾರಸ್ವಾಮಿ ಹೊಸ ಅಂಶಗಳಿಗೆ ತೆರೆದುಕೊಂಡಿದ್ದು ಸ್ಪಷ್ಟವಾಗಿತ್ತು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆಂದು ಪ್ರಕಟಿಸಿದ್ದರಿಂದ ಹಿಡಿದು, ‘ಚೀನಾದೊಂದಿಗೆ ಸ್ಪರ್ಧೆ’ ಎಂದು ಹೇಳಿದ್ದರತನಕ ವಿಶೇಷತೆಗಳು ಗಮನ ಸೆಳೆದಿದ್ದೆವು. ನೀವು ಇಲ್ಲಿಯೇ ಬಂದು ತಯಾರು ಮಾಡಿ, ನಿಮ್ಮ ದೇಶಕ್ಕೆ ಲಾಭ ಕೊಂಡೊಯ್ಯಿ ಎಂದು ಹೇಳುವ ಮೋದಿಯವರ ಮೇಕ್‍ಇನ್‍ಇಂಡಿಯಾ ಯೋಜನೆ ಒಂದು ಕಡೆಗೆ ಇದ್ದರೆ, ನಾವು ಇಲ್ಲಿಯೇ ಉತ್ಪಾದಿಸಿ ಚೀನಾದೊಂದಿಗೂ ಸ್ಪರ್ಧಿಸುತ್ತೇವೆ ಎಂದು ಹೇಳುವ ಧೈರ್ಯ ಇನ್ನೊಂದೆಡೆ. ಎಚ್‍ಡಿಕೆ ಸಹಾ ಇಸ್ರೇಲ್ ಕೃಷಿ ಎಂಬ ಈ ನೆಲಕ್ಕೆ ಹೊಂದದ ಕೃಷಿಯನ್ನು ಇಲ್ಲಿ ಅಳವಡಿಸಬೇಕೆಂದು ಹೇಳಿದ್ದರೂ, ಪಾಳೇಕರ್ ಮಾದರಿಯ ಸಹಜ ಕೃಷಿಯ ವಿಚಾರ ಗಮನಕ್ಕೆ ಬಂದಾಗ ಅದರತ್ತಲೂ ಗಮನ ಹರಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ 10-15 ವರ್ಷಗಳಿಗೂ ಹೆಚ್ಚು ಕಾಲ ಅಡಿಗೆ ಮಾಡಿ, ಅಲ್ಲಿನ ಮಕ್ಕಳನ್ನು ಸಲಹಿ ದುಡಿದಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿ ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇರನೇಮಕಾತಿಯು ವಾಸ್ತವದಲ್ಲಿ ಎಚ್.ಆಂಜನೇಯ ಅವರ ಹಗರಣವಾಗಿತ್ತು. ಹಾಗಿದ್ದರೂ, ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಲು ಎಚ್‍ಡಿಕೆ ಸೂಚಿಸಿದ್ದರು. ಕೆಲಸ ಹೋಗಿಯೇಬಿಟ್ಟಿತು ಎಂದಾದರೂ ಬಿಡದೇ ಹೋರಾಡಿದವರಿಗೆ ನಿಜಕ್ಕೂ ಜೀವ ವಾಪಸ್ಸು ಬಂದಂತಾಗಿತ್ತು.
2006ರಲ್ಲಿ ಸಿಕ್ಕ ಅವಕಾಶದಲ್ಲೂ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ ಎಚ್‍ಡಿಕೆ ಈ ಸಾರಿಯೂ ಅದೇ ರೀತಿ ಮಾಡಬಹುದು ಎಂಬ ಸೂಚನೆಗಳು ಕಾಣುತ್ತಿದ್ದ ಹೊತ್ತಿನಲ್ಲೇ ಎಡವಟ್ಟುಗಳೂ ಆರಂಭವಾಗಿವೆ. ಅದರ ಉದ್ಘಾಟನೆ ಆಗಿದ್ದು, ಶಾಲಾಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸಿದ್ದು. ಶೋಷಿತ ಸಮುದಾಯಗಳ ಪರವಾಗಿ ಪಕ್ಷಪಾತ ಎಣಿಸುತ್ತಾರೆ ಎಂದು ಟೀಕೆಗೊಳಗಾಗಿದ್ದ ಸಿದ್ದರಾಮಯ್ಯನವರೇ ತಮ್ಮ ಕಡೆಯ ಬಜೆಟ್‍ನಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಎಂದು ಪ್ರಕಟಿಸಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಶೈಕ್ಷಣಿಕ ವರ್ಷದ ಕೊನೆ ಬಂದಿದ್ದರಿಂದ ಅದು ಜಾರಿಯಾಗುವ ಸಂದರ್ಭವಿರಲಿಲ್ಲ. ‘ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳೂ ಮುಂದುವರೆಯುತ್ತವೆ’ ಎಂದು ಪ್ರಕಟಿಸಿದ್ದರೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಮಾತ್ರ ಆಗಲಿಲ್ಲ.
ರಾಜ್ಯದ 19.6 ಲಕ್ಷ ಮಕ್ಕಳಿಗೆ ಹಿಂದಿನಿಂದಲೂ 650 ಕೋಟಿ ರೂ.ಗಳ ಸರ್ಕಾರೀ ಅನುದಾನದಿಂದ ರಿಯಾಯಿತಿ ದರದ ಬಸ್‍ಪಾಸ್ ನೀಡಲಾಗುತ್ತಿತ್ತು ಮತ್ತು ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲಾಗುತ್ತಿತ್ತು. ಅದಕ್ಕೆ ಇನ್ನೂ 836 ಕೋಟಿ ರೂ.ಗಳನ್ನು ಸೇರಿಸಿದ್ದರೆ, ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಿದಂತಾಗುತ್ತಿತ್ತು. ಅದನ್ನೇ ಸಿದ್ದರಾಮಯ್ಯವರು ಪ್ರಕಟಿಸಿದ್ದದ್ದು. ಆದರೆ, ಸಾರಿಗೆ ನಿಗಮಗಳಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿಯೇ ಇದಕ್ಕೆ 1900 ಕೋಟಿ ರೂಗಳು ಬೇಕು ಇತ್ಯಾದಿ ಅಸಂಬದ್ಧ ಹೇಳಿಕೆಗಳು ಬಂದವು. ಕುಮಾರಸ್ವಾಮಿಯವರು ಒಂದಷ್ಟು ಕಾಲ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಎಳೆದರು. ನಂತರ, ಕೊಡುವುದೇ ಇಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕಿಳಿದವು. ಅವೆಲ್ಲಾ ಆದ ಮೇಲೆ ಸರ್ಕಾರೀ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್‍ಪಾಸ್ ನೀಡಲಾಗುವುದು ಎಂದು ಸ್ವತಃ ಸಿಎಂ ರಾಮನಗರದ ಸಭೆಯೊಂದರಲ್ಲಿ ಪ್ರಕಟಿಸಿದರು. ರಾಜ್ಯದ ಎಷ್ಟೋ ಕಡೆ ಸರ್ಕಾರೀ ವ್ಯವಸ್ಥೆಯಲ್ಲಿ ಓದಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದ್ದು, ಅನುದಾನಿತವೋ ಖಾಸಗಿ ಸಂಸ್ಥೆಯನ್ನೋ ಪೋಷಕರು ನೋಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅಂತಿಮವಾಗಿ ಕುಮಾರಸ್ವಾಮಿಯವರ ನಿರ್ಧಾರವು ಭಾಗಶಃ ಕ್ರೆಡಿಟ್‍ಅನ್ನು ಸಹಾ ನೀಡದೇ, ಜಾರಿಯಾಗುವ ಹಂತದಲ್ಲಿದೆ.
ಇಂಥದ್ದೇ ಇನ್ನೊಂದು ಸಮಸ್ಯೆ ಗುತ್ತಿಗೆ ನೌಕರರ ವಿಚಾರದಲ್ಲಿ ಆಗುತ್ತಿದೆ. ಎಲ್ಲಾ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರವು ರಚನೆಯಾಗಿದೆ; ಇರುವ ಭದ್ರತೆಯನ್ನೂ ಕಿತ್ತುಹಾಕುವ ಕೆಲಸ ಹಲವು ಇಲಾಖೆಗಳಲ್ಲಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಯವರ ಕೈಯ್ಯಲ್ಲೇ ಇರುವ ಇಂಧನ ಇಲಾಖೆಗೆ ಸೇರಿದ ಕೆಪಿಟಿಸಿಎಲ್‍ನಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕಲಾಗುತ್ತಿದೆ. ಅದರಲ್ಲೂ ಜೆಸ್ಕಾಂನ ವ್ಯಾಪ್ತಿಯಲ್ಲಿ ಒಬ್ಬ ಗುತ್ತಿಗೆ ನೌಕರರೂ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಖಜಾನೆ-2 ಎಂಬ ತಂತ್ರಾಂಶ ವಿಧಾನದ ಕಾರಣದಿಂದ ಡಾಟಾ ಎಂಟ್ರಿ ಆಪರೇಟರ್‍ಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಶುಪಾಲನಾ ಇಲಾಖೆಯ ಗ್ರೂಪ್ ಡಿ ನೌಕರರಲ್ಲಿ 650 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟವು ಹೋರಾಟ ಮಾಡಿ, ಸ್ವತಃ ಮುಖ್ಯಮಂತ್ರಿಯವರನ್ನೇ ಭೇಟಿಯಾದರೂ, ಸ್ಪಷ್ಟ ಕ್ರಮ ತೆಗೆದುಕೊಳ್ಳದೇ ಎಚ್‍ಡಿಕೆ ನುಣುಚಿಕೊಂಡಿದ್ದಾರೆ. ಒಕ್ಕೂಟದ ಪದಾಧಿಕಾರಿಗಳ ಪ್ರಕಾರ ಸುಮಾರು 30,000 ಗುತ್ತಿಗೆ ನೌಕರರಿಗೆ 4-6 ತಿಂಗಳಿಂದ ಸಂಬಳವೇ ಇಲ್ಲ. ಇದರ ಕುರಿತೂ ಯಾವ ನಿರ್ದಿಷ್ಟ ಕ್ರಮವನ್ನು ಪ್ರಕಟಿಸಿಲ್ಲ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಭರವಸೆಯದ್ದೂ ಇದೇ ಪಾಡು. ಚೀನಾದೊಂದಿಗೆ ಸ್ಪರ್ಧೆಯೂ ಸೇರಿ ಅವರ ಯೋಜನೆಗಳಿಂದ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಬಜೆಟ್‍ನಲ್ಲಿ ಘೋಷಿಸಿದರು. ಆದರೆ, ಇದುವರೆಗಿನ ಇತಿಹಾಸ ನೋಡಿದರೆ, 2 ಲಕ್ಷ ಉದ್ಯೋಗಗಳಿಗಿಂತ ಹೆಚ್ಚಿನ ಸಾಧ್ಯತೆ ಇಲ್ಲ. ಅದಕ್ಕಿಂತ ತುಂಬಾ ಮೇಲು ಪದರದ ಒಂದು ಕ್ರಮವನ್ನೂ ಎಚ್‍ಡಿಕೆ ಪ್ರಕಟಿಸಿದರು. ಅದೆಂದರೆ, ತಮ್ಮ ಗೃಹ ಕಚೇರಿಯಲ್ಲೇ ಉದ್ಯೋಗ ಕೊಡಿಸುವುದು. ಅದೇ ಒಂದು ಉದ್ಯೋಗ ಮೇಳದ ಥರಾ ಆಗುತ್ತದೆ ಎಂತಲೂ ಪ್ರಕಟಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂಬ ಕಾರಣಕ್ಕೆ ಕೆಲವು ಕಂಪೆನಿಗಳು ಆಗಾಗ್ಗೆ ಕೆಲವು ಉದ್ಯೋಗಗಳನ್ನು ನೀಡಬಹುದಾದರೂ, ರಾಜ್ಯದ ಪ್ರತಿ ಮೂಲೆಯಲ್ಲೂ ಉದ್ಯೋಗ ಸ್ಥಳೀಯವಾಗಿಯೇ, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸೃಷ್ಟಿಯಾಗಬೇಕು ಎಂಬುದು ತಿಳಿಯದಷ್ಟು ಮುಖ್ಯಮಂತ್ರಿ ಅಮಾಯಕರೇ ಎಂಬ ಪ್ರಶ್ನೆ ಏಳುತ್ತದೆ.
ಉದ್ಯೋಗ ಸೃಷ್ಟಿಗೆ ಬೇಕಿರುವುದು ಹಣ ಎಂದು ತಿಳಿದಿರುವುದರಲ್ಲೇ ಒಂದು ದಡ್ಡತನ ಅಡಗಿದೆ. ಹಾಗಾಗಿಯೇ ಹೆಚ್ಚೆಚ್ಚು ಹೂಡಿಕೆ ಆಗಬೇಕು ಎಂದು ಸರ್ಕಾರಗಳು ಅನಗತ್ಯವಾಗಿ ಬೃಹತ್ ಕಂಪೆನಿಗಳಿಗೆ ರಿಯಾಯಿತಿ ನೀಡುತ್ತಿರುತ್ತವೆ. ಹಣದ ಅಗತ್ಯವಿರುವುದು ನಿಜವಾದರೂ, ಅದಕ್ಕಿಂತ ಮುಖ್ಯವಾದುದೆಂದರೆ ಉದ್ಯೋಗ ಸೃಷ್ಟಿಯ ನೀತಿ ಮತ್ತು ಅದನ್ನು ಆಗಮಾಡಿಸುವ ಯಂತ್ರಾಂಗ. ಅದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನೇನೂ ಕೈಗೊಳ್ಳದಿದ್ದರೆ, ಕುಮಾರಸ್ವಾಮಿಯವರಿಗೆ ಸಿಗಬಹುದಾದಷ್ಟು ಸಮಯದಲ್ಲಿ ಪರಿಣಾಮಕಾರಿಯಾದ ಏನನ್ನೂ ಮಾಡಿದಂತಾಗುವುದಿಲ್ಲ. ರೈತರ ಸಾಲಮನ್ನಾದ ವಿಚಾರಕ್ಕಿಂತಲೂ ಮಹತ್ವದ ಸಂಗತಿಗಳು ಇವಾಗಿವೆ. ಆ ಕಡೆಗೆ ಗಮನ ಹರಿಸದೇ, ಹೊಸ ತಲೆಮಾರಿನ ಯುವಜನರು ಮತ್ತಷ್ಟು ಸಿನಿಕತನಕ್ಕೆ, ಹತಾಶೆಗೆ ಒಳಗಾದರೆ ಅದರಿಂದ ಜೆಡಿಎಸ್‍ಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಅಷ್ಟು ಮುಖ್ಯವಲ್ಲ; ರಾಜ್ಯಕ್ಕಂತೂ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...