Homeಮುಖಪುಟಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

ಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

- Advertisement -
- Advertisement -

ಪ್ರೊ.ನಗರಗೆರೆ ರಮೇಶ್ |

ನೀವು ಸರ್ಕಾರಿ ಬಸ್ಸುಗಳಲ್ಲಿ, ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದರೆ ಒಂದು ವಿಷಯವನ್ನು ಗಮನಿಸಿರಬಹುದು. ಮೊದಲ 16 ಸೀಟುಗಳು ಮಹಿಳೆಯರಿಗೆ ಮೀಸಲಿದ್ದು ಮತ್ತೆ ಕೆಲವು ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮೀಸಲು ಎಂದು ನಮೂದಾಗಿರುತ್ತದೆ. ಒಂದು ವೇಳೆ 16 ಸೀಟುಗಳು ಭರ್ತಿಯಾಗಿದ್ದರೆ ಉಳಿದ ಮಹಿಳೆಯರು ನಿಂತಿರುವುದನ್ನು ಕಾಣುತ್ತೀರಿ. ಹಿಂದಕ್ಕೆ ಬಂದು ಬೇರೆ ಸೀಟುಗಳಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುವುದಿಲ್ಲ. ಒಂದುವೇಳೆ ಯಾರಾದರೂ ಕುಳಿತರೆ ಕೆಲ ಗಂಡಸರು ಇವು ನಮ್ಮ ಸೀಟುಗಳು ತಾವು ಹೆಂಗಸರ ಸೀಟುಗಳಿಗೆ ಹೋಗಿ ಅಂತ ಹೇಳುವುದುಂಟು. ಕೆಲವರು ಮಹಿಳೆಯರು ಆ ಮಾತನ್ನು ಪಾಲಿಸುವುದೂ ಉಂಟು. ವಾಸ್ತವದಲ್ಲಿ ಅದು ಗಂಡಸರ ಸೀಟುಗಳಲ್ಲ. ಆಗ ಆ ಬಸ್ಸಿನಲ್ಲಿ ಗಂಡಸರಿಗೆ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಮೀಸಲಾತಿ ಎಂದಾಗಿಬಿಡುತ್ತದೆ.

ಯಾವುದೇ ಕ್ಷೇತ್ರದಲ್ಲಾಗಲೀ ಮೀಸಲಿಗೆ ಒಳಗಾಗದ ಯಾವುದೇ ಸ್ಥಾನವು ಎಲ್ಲರಿಗೂ ಅಂದರೆ ಮೀಸಲಾತಿ ಸೌಲಭ್ಯವಿರುವ ಗುಂಪುಗಳವರಿಗೂ ಸೇರಿದಂತೆ ತೆರೆದಿರುತ್ತದೆ ಎನ್ನುವುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ತಿಳಿದಿರುವ ಅಥವಾ ತಿಳಿದಿರಬೇಕಾದ ಸಂಗತಿ. ಆಶ್ಚರ್ಯದ ಸಂಗತಿಯೆಂದರೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಅನೇಕರಿಗೆ ಈ ವಿಷಯದ ಪರಿಜ್ಞಾನವಿಲ್ಲದಿರುವುದು ಕಂಡುಬರುತ್ತದೆ. ಈ ಅಜ್ಞಾನ ಆಡಳಿತದ ಉನ್ನತ ಸ್ಥಾನಗಳಲ್ಲಿರುವವರನ್ನೂ ಬಿಟ್ಟಿಲ್ಲ ಎನ್ನುವುದೇ ಈಗಿನ ಸಮಸ್ಯೆ.

ಕೆಪಿಎಸ್ಸಿ ಅಧ್ಯಕ್ಷ ಶ್ಯಾಂ ಭಟ್

ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ ದಮನಕ್ಕೊಳಗಾದವರಿಗೆ ಹಾಗೂ ಹಿಂದುಳಿದವರಿಗೆ ಶಿಕ್ಷಣ ಮತ್ತು ಸರ್ಕಾರೀ ನೇಮಕಾತಿಗಳಲ್ಲಿ ಇಂತಿಷ್ಟು ಎಂದು ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ತಳ ಸಮುದಾಯದವರಿಗೆ ಸಹಾಯವಾಗಿದೆ ಎನ್ನುವುದು ವಾಸ್ತವ. ಈ ಸಂದರ್ಭದಲ್ಲಿಯೂ ಸಹ ನಾವು ಬಳಸುವ ಜನರಲ್ ಮೆರಿಟ್ (ಸಾಮಾನ್ಯ ಪ್ರತಿಭೆ) ಎನ್ನುವ ಪದವೇ ತಪ್ಪು ಅದು ಜನರಲ್ ಕ್ಯಾಟಗರಿ ಎಂದು ಮಾತ್ರ ಇರಬೇಕು. ‘ಮೆರಿಟ್’ ಎಂದು ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಮಾತ್ರ ಬಳಸಿ ಉಳಿದವರಿಗೆ ಮಾತ್ರ ಕ್ಯಾಟಗರಿ ಎಂದು ಬಳಸುವ ಪರಿಪಾಠವಿದೆ. ಈ ಪದದ ಬಳಕೆಯಲ್ಲಿಯೇ ತಥಾಕಥಿತ ‘ಪ್ರತಿಭಾನ್ವಿತ’ ಜನರಲ್ಲಿ ತುಳಿತಕ್ಕೊಳಗಾದವರ/ ಹಿಂದುಳಿದವರ ಬಗ್ಗೆ ತಾತ್ಸಾರ ಮಾತ್ರವಲ್ಲ ಪೂರ್ವಗ್ರಹವೂ ಎದ್ದು ಕಾಣುತ್ತದೆ.

ಇದೇ ಪೂರ್ವಗ್ರಹ ಇತ್ತೀಚೆಗೆ ಕೆಪಿಎಸ್ಸಿ ತೆಗೆದುಕೊಂಡಿರುವ ನೀತಿ ನಿರ್ಧಾರದ ಸಂಬಂಧದಲ್ಲಿಯೂ ಕಾಣುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯವು, ಡಾ.ಕೃಷ್ಣ ಅವರು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆ ಕೇಸಿಗೆ ಮಾತ್ರ ಸೀಮಿತವಾಗುವಂತೆ ನೀಡಿದ ಒಂದು ತೀರ್ಪನ್ನು ಆಧಾರವಾಗಿಟ್ಟು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊಕದ್ದಮೆಯಲ್ಲಿ ಆ ಕೇಸಿಗೆ ಮಾತ್ರ ಅನ್ವಯವಾಗುವಂತೆ ನೀಡಿದ ತೀರ್ಪನ್ನು ಆಧರಿಸಿ ನ್ಯಾಯಾಲಯದ ಆ ತೀರ್ಪನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ದೊಡ್ಡ ತಪ್ಪನ್ನು ಮಾಡುತ್ತಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವರ್ಗದಲ್ಲಿ ನೇಮಕಾತಿ ಹೊಂದುವಂತಿಲ್ಲ ಎನ್ನುವ ಕೆಪಿಎಸ್ಸಿಯ ಇತ್ತೀಚಿನ ನಿರ್ಧಾರ ಸಾಮಾಜಿಕವಾಗಿ ಪ್ರತಿಗಾಮಿಯಾದಂಥದು ಮಾತ್ರವಲ್ಲ ಸಂವಿಧಾನ ವಿರೋಧಿಯೂ ಸಹ ಆಗಿದೆ. ಮೀಸಲಾತಿಯು ಶೇ.50ನ್ನು ಮೀರಬಾರದು ಎನ್ನುವ ನೀತಿಯೇ ಅಸಂಬದ್ಧವಾಗಿರುವುದು ಒಂದು ಕಡೆಯಾದರೆ ಮೀಸಲಾತಿ ಸೌಲಭ್ಯವನ್ನು ಪಡೆದವರು ಸಾಮಾನ್ಯ ಪ್ರವರ್ಗದಲ್ಲಿ ಗಣನೆಗೇ ಅರ್ಹರಲ್ಲ ಎನ್ನುವುದು ದೊಡ್ಡ ಮೋಸ.

ಕರ್ನಾಟಕ ಲೋಕಸೇವಾ ಆಯೋಗ ಸರ್ಕಾರದ ಅಂಗಸಂಸ್ಥೆ ಮಾತ್ರ. ಅದಕ್ಕೆ ನೀಡಲಾಗಿರುವುದು ಸೀಮಿತ ಸ್ವಾಯತ್ತತೆ ಮಾತ್ರ. ಅದರ ಕೆಲಸವೇನಿದ್ದರೂ ಅನುಷ್ಠಾನಗೊಳಿಸುವುದೇ ಹೊರತು ತಾನೇ ನೀತಿ ನಿರ್ಧಾರ ಮಾಡುವಂತಿಲ್ಲ. ಮೀಸಲಾತಿ ಸೌಲಭ್ಯ ಪಡೆದವರನ್ನು ಸಾಮಾನ್ಯ ಪ್ರವರ್ಗದಲ್ಲಿ ಪರಿಗಣಿಸಲಾಗದು ಎನ್ನುವುದು ಒಂದು ಬಹುಮುಖ್ಯ ನೀತಿ ನಿರ್ಧಾರ. ಸಾಮಾಜಿಕ ಆರ್ಥಿಕ ಆಯಾಮಗಳುಳ್ಳದ್ದು. ಇಂಥ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರಿಗೆ ಕೊಟ್ಟರ‍್ಯಾರು? ವಿಚಿತ್ರವೆಂದರೆ ಕೆಪಿಎಸ್ಸಿಯ ಈ ನಿಲುವಿಗೆ ಸರ್ಕಾರದಿಂದಲೇ ಒಪ್ಪಿಗೆ ಬೆಂಬಲ ಸಿಗುತ್ತಿದೆ ಎನ್ನುವುದು ಬಾಲವೇ ಕುದುರೆಯನ್ನು ಆಡಿಸಿದಂತಾಗಿದೆ. ಸರ್ಕಾರದಲ್ಲಿನ ಕ್ಯಾಬಿನೆಟ್ ಹುದ್ದೆಯ ಮಂತ್ರಿಯಾದ ಪ್ರಿಯಾಂಕಖರ್ಗೆಯವರು ಈ ವಿಷಯದಲ್ಲಿ ಮುಖ್ಯಮಂತ್ರಿಗಳಿಗೆ ತಮ್ಮ ಆಕ್ಷೇಪಣೆಗಳನ್ನೊಳಗೊಂಡ ಪತ್ರವೊಂದನ್ನು ಬರೆದರೆಂದರೆ ಈ ವಿಷಯ ಮಂತ್ರಿ ಮಂಡಲದಲ್ಲಿಯೂ ಚರ್ಚೆಯಾಗಿಲ್ಲ ಎನ್ನುವುದು ಸ್ಪಷ್ಟ. ಮಂತ್ರಿಮಂಡಲದಲ್ಲಿ ಒಪ್ಪಿಗೆ ಇಲ್ಲದೆ ಇಂಥ ನಿರ್ಧಾರವನ್ನು ಸರ್ಕಾರದ ಅಂಗಸಂಸ್ಥೆಯೊಂದು ತೆಗೆದುಕೊಳ್ಳುವ ಧೈರ್ಯ ಮಾಡಿತೆಂದರೆ ರಾಜ್ಯದ ಆಡಳಿತ ಯಾವ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಕೆಪಿಎಸ್ಸಿ ಕಾರ್ಯದರ್ಶಿ ಜನ್ನು

ಈ ವಿಷಯವಾಗಿ ಈಗಾಗಲೇ ಹಲವು ದಲಿತ ಸಂಘಟನೆಗಳು ಮತ್ತು ಚಿಂತಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತ ಸಂಘಟನೆಗಳು ಬೆಂಗಳೂರಿನಲ್ಲಿ 19.11.2018ರಂದು ಪ್ರತಿಭಟನೆಯನ್ನು ನಡೆಸಿದ್ದಾರೆ. ತಾವು ಮಾಡುತ್ತಿರುವ ಸಂವಿಧಾನ ವಿರೋಧಿ ಕೆಲಸದ ಪರಿಣಾಮ ಎಂಥದು ಎನ್ನುವ ಕುರಿತು ಉನ್ನತ ಸ್ಥಾನಗಳಲ್ಲಿ ಕುಳಿತಿರುವವರನ್ನು ಈ ಬೆಳವಣಿಗೆಗಳಾದರೂ ಎಚ್ಚರಿಸುತ್ತವೆ. ತಕ್ಷಣವೇ ಲೋಕಸೇವಾ ಆಯೋಗವು ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮಾತ್ರವಲ್ಲ, ಇಂಥ ಉದ್ಧಟತನದ ನಿರ್ಧಾರವನ್ನು ತಮಗೆ ನೀಡಲಾಗಿರುವ ಯಾವ ಅಧಿಕಾರದ ಭಾಗವಾಗಿ ತೆಗೆದುಕೊಳ್ಳಲಾಯಿತು ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವು ಆಯೋಗದ ಅಧ್ಯಕ್ಷರಿಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್ ಜಾತಿವಾದಿ ಎಂಬ ಆಪಾದನೆ ಈಗಾಗಲೇ ಇದೆ. ಕಾಂಗ್ರೆಸ್ಸಿನ ಹಲವರು ನಾಯಕರೂ ಸಹ ಇಂಥ ಆಪಾದನೆಯಿಂದ ಮುಕ್ತವಾಗಿಲ್ಲ. ಕೆಪಿಎಸ್ಸಿಯ ಈಗಿನ ದಲಿತ ವಿರೋಧಿ ನಿರ್ಧಾರ ಸಾಮಾನ್ಯ ವರ್ಗಗಳವರಿಗೆ ಸಂತೋಷವನ್ನು ಉಂಟು ಮಾಡಬಹುದು. ಆದರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದವರ ದಮನಿತರ ಪ್ರಾತಿನಿಧ್ಯವನ್ನು ಖಾತರಿ ಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪಿತವಾದ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಜವಾಬ್ದಾರಿಯನ್ನು ಆಡಳಿತ ನಡೆಸುವವರು ಮರೆತರೆ ಇದೇ ರೀತಿ ಆಗುತ್ತದೆ.

ಈಗ ತುರ್ತಾಗಿ ಇಂಥ ಅಕ್ಷಮ್ಯ ಕ್ರಮಕ್ಕೆ ಮುಂದಾದವರು ಯಾರು ಎಂಬುದು ಜನರಿಗೆ ತಿಳಿಯಬೇಕಾಗಿದೆ. ಕೆಲವು ದಿನಗಳಿಂದ ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಗೆ ವಸ್ತುವಾಗಿರುವ ಈ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ತುಟಿಬಿಚ್ಚದಿರುವುದು ಏನನ್ನು ಹೇಳುತ್ತದೆ. ದೊಡ್ಡ ಸಂಖ್ಯೆಯಲ್ಲಿರುವ ಕೆಳ ಸಮುದಾಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಅಲ್ಪಸಂಖ್ಯಾತರಾದ, ಆದರೆ ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿತವಾಗಿರುವ ಮೇಲ್ಜಾತಿ ಮೇಲ್ವರ್ಗದವರು ತೆಗೆದುಕೊಳ್ಳಬಹುದಾದರೆ ಇಲ್ಲಿನ ಪ್ರಜಾತಂತ್ರದ ಭವಿಷ್ಯವೇನು ಎನ್ನುವುದು ಪ್ರಶ್ನೆ.

ಕೇಂದ್ರದಲ್ಲಿ ಬ್ರಾಹ್ಮಣಿಯ ಮೌಲ್ಯಗಳ ಪ್ರತಿನಿಧಿಯಾಗಿರುವ ಬಿಜೆಪಿಯು ವಿಜೃಂಭಿಸುತ್ತಿರುವಾಗ ಕೋಮುವಾದಿಗಳ ವಿರೋಧಿಗಳು ನಾವು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಕೇವಲ ಆಡಳಿತವನ್ನು ಕೈವಶಮಾಡಿಕೊಳ್ಳುವುದು ಮಾತ್ರವಲ್ಲದೇ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಜನಪರ ಧೋರಣೆಯನ್ನು ಸಾಬೀತುಗೊಳಿಸಬೇಕಾಗಿದೆ. ತಾವು ಜನಪರ ಎಂದು ಭಾವಿಸುವುದು ಮಾತ್ರವಲ್ಲ ಜನಪರ ಎಂದು ಬಿಂಬಿಸಿಕೊಳ್ಳುವುದು ಮಾತ್ರವಲ್ಲ, ತಮ್ಮ ಜನಪರತೆಯನ್ನು ಸಾಬೀತುಮಾಡುವ ಜವಾಬ್ದಾರಿಯೂ ಅಧಿಕಾರಸ್ಥರಿಗಿದೆ. ಹಾಗೆ ಮಾಡದಿದ್ದರೆ ಅವರ ಮಾತುಗಳ ಹಾಗೂ ಕೃತ್ಯಕ್ಕೆ ನಡುವಿನ ಅಂತರ ಬಹುಬೇಗನೇ ಜಗಜ್ಜಾಹೀರಾಗುವುದು ಖಂಡಿತಾ.

ಸರ್ಕಾರವು ತನ್ನದೇ ಆದ ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಿ. ಅಲ್ಲದೆ ಈ ಹುನ್ನಾರದ ಹಿಂದಿನ ಕುಟಿಲ ಮನಸ್ಸುಗಳನ್ನೂ ಗುರುತಿಸಿ ಮುಂದೆ ಇನ್ನೆಂದು ಇಂತಹದಕ್ಕೆ ಕೈ ಹಾಕದಂತೆ ಕ್ರಮ ತೆಗೆದುಕೊಂಡರೆ ಮಾತ್ರ ಈಗಾಗಲೇ ಜನರು ಈ ಸರ್ಕಾರದ ವಿರುದ್ಧ ಆಡುತ್ತಿರುವ ಮಾತುಗಳ ಪಟ್ಟಿಗೆ ಮತ್ತೊಂದು ಅಂಥದ್ದೇ ಮಾತು ಸೇರಿಕೊಳ್ಳದಂತೆ ತಡೆಯಬಹುದು. ಹಾಗಾಗಿದ್ದಲ್ಲಿ ಇವರು ರಾಜಕೀಯವನ್ನು ತಂತ್ರಗಾರಿಕೆ, ಕುತಂತ್ರಗಳ ಮಟ್ಟಕ್ಕೆ ಇಳಿಸುವ ಕಾರ್ಯಗಳಿಗೇ ಸೀಮಿತವಾಗಿ ಇತಿಹಾಸದಲ್ಲಿ ದಾಖಲೆಯೊಂದಿಗೆ ಉಳಿದು ಬಿಡುತ್ತಾರೆ. ಆಯ್ಕೆ ಸರ್ಕಾರಕ್ಕೆ ಬಿಟ್ಟಿದ್ದು ಒಂದಂತೂ ಗ್ಯಾರಂಟಿ ಈ ಅನಾಹುತವನ್ನು ಸರಿಪಡಿಸದಿದ್ದಲ್ಲಿ ದಲಿತರ ಹಿಂದುಳಿದವರ ವಿರೋಧ, ಆಸಂತೋಷಗಳನ್ನು ಎದುರಿಸಲು ಬದ್ಧವಾಗಬೇಕು. ಹಾಗೆ ಮಾಡುವುದು ಸರ್ಕಾರಕ್ಕೆ ಒಳ್ಳೆಯದಂತೂ ಆಗುವುದಿಲ್ಲ.

ಶೇ.93 ಜನಕ್ಕೆ ಶೇ.50 ಮೀಸಲಾತಿ. ಶೇ.7 ಜನಕ್ಕೆ ಶೇ.50 ಮೀಸಲಾತಿ

ಸುಪ್ರೀಂಕೋರ್ಟ್ ಒಟ್ಟಾರೆ ಮೀಸಲಾತಿ ಶೇ.50ನ್ನು ಮೀರಬಾರದೆಂದು ಹೇಳಿದೆ. ಅದು ಪ್ರಾತಿನಿಧ್ಯದಲ್ಲಿ ಮೀಸಲಾತಿಯನ್ನು ಸಾಮಾಜಿಕ ನ್ಯಾಯಕ್ಕೆ ತಕ್ಕಂತೆ ಅಳವಡಿಸಲು ದೊಡ್ಡ ಅಡ್ಡಿಯಾಗಿದೆ. ಇದೀಗ ಹೈಕೋರ್ಟ್ ಆದೇಶವು ನಿರ್ದಿಷ್ಟ ಪ್ರಕರಣದಲ್ಲಿ ಹೇಳಿರುವಂತೆ, ಮೀಸಲಾತಿಯನ್ನು ಪಡೆದುಕೊಳ್ಳುವ ಜಾತಿಗಳಿಗೆ ಸೇರಿದವರು ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೂ ಅವರು ಜಾತಿಯೊಳಗೇ ಸೀಟು ಪಡೆದುಕೊಳ್ಳಬೇಕು ಎಂದು ಎಲ್ಲೆಡೆ ವಿಸ್ತರಿಸಿದರೆ ಏನಾಗುತ್ತದೆ? ಕರ್ನಾಟಕದಲ್ಲಿ ನೇರ ಮೀಸಲಾತಿಯನ್ನು ಪಡೆದುಕೊಳ್ಳುತ್ತಿರುವ ಸಮುದಾಯಗಳ ಒಟ್ಟು ಜನಸಂಖ್ಯೆ ಶೇ.93. ಅವರೆಲ್ಲರಿಗೆ ಸೇರಿ ಕೇವಲ ಶೇ.50ರಷ್ಟು ಪ್ರಾತಿನಿಧ್ಯ ಸಿಗುತ್ತದೆ. ಉಳಿದ ಶೇ.7ರಷ್ಟು ಸಮುದಾಯಗಳಿಗೆ ಶೇ.50ರಷ್ಟು ಮೀಸಲಾಗುತ್ತದೆ.

ಒಂದರ್ಥದಲ್ಲಿ ಇದು ಈ ದೇಶದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದದ್ದರ ಪುನರಾವರ್ತನೆ. ಅಂದರೆ ಮೇಲ್ಜಾತಿಗಳು ಅದರಲ್ಲೂ ಬ್ರಾಹ್ಮಣ ಸಮುದಾಯಗಳಿಗೆ ಸೇರಿದವರು ಎಲ್ಲೆಡೆ ಜನಸಂಖ್ಯೆಗೆ ಮೀರಿ, 10 ಪಟ್ಟಿಗೂ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿದ್ದರು. ಅದೂ ಒಂದು ರೀತಿಯ ಮೀಸಲಾತಿಯೇ ಆಗಿತ್ತು. ಕೆಲವು ಸಮುದಾಯಗಳಿಗೆ ಕೆಲವು ರೀತಿಯ ಕೆಲಸ ಮೀಸಲು ಎಂಬಂತೆ.

ಇಂದು ಇನ್ನೊಂದು ರೀತಿಯಲ್ಲಿ ಅದನ್ನೇ ಈ ಕ್ರಮವೂ ಜಾರಿ ಮಾಡುತ್ತಿದೆ. ಅತ್ಯಂತ ಅಪಾಯಕಾರಿಯಾದ ಕ್ರಮ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...