Homeಮುಖಪುಟಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

ಕೆಪಿಎಸ್‌ಸಿ ಚೇಷ್ಟೆ : ಅಧಿಕಾರ ಶಾಹಿಗಳ ಜಾತಿ ಪೂರ್ವಗ್ರಹ

- Advertisement -
- Advertisement -

ಪ್ರೊ.ನಗರಗೆರೆ ರಮೇಶ್ |

ನೀವು ಸರ್ಕಾರಿ ಬಸ್ಸುಗಳಲ್ಲಿ, ಮುಖ್ಯವಾಗಿ ಬೆಂಗಳೂರಿನ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದರೆ ಒಂದು ವಿಷಯವನ್ನು ಗಮನಿಸಿರಬಹುದು. ಮೊದಲ 16 ಸೀಟುಗಳು ಮಹಿಳೆಯರಿಗೆ ಮೀಸಲಿದ್ದು ಮತ್ತೆ ಕೆಲವು ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮೀಸಲು ಎಂದು ನಮೂದಾಗಿರುತ್ತದೆ. ಒಂದು ವೇಳೆ 16 ಸೀಟುಗಳು ಭರ್ತಿಯಾಗಿದ್ದರೆ ಉಳಿದ ಮಹಿಳೆಯರು ನಿಂತಿರುವುದನ್ನು ಕಾಣುತ್ತೀರಿ. ಹಿಂದಕ್ಕೆ ಬಂದು ಬೇರೆ ಸೀಟುಗಳಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುವುದಿಲ್ಲ. ಒಂದುವೇಳೆ ಯಾರಾದರೂ ಕುಳಿತರೆ ಕೆಲ ಗಂಡಸರು ಇವು ನಮ್ಮ ಸೀಟುಗಳು ತಾವು ಹೆಂಗಸರ ಸೀಟುಗಳಿಗೆ ಹೋಗಿ ಅಂತ ಹೇಳುವುದುಂಟು. ಕೆಲವರು ಮಹಿಳೆಯರು ಆ ಮಾತನ್ನು ಪಾಲಿಸುವುದೂ ಉಂಟು. ವಾಸ್ತವದಲ್ಲಿ ಅದು ಗಂಡಸರ ಸೀಟುಗಳಲ್ಲ. ಆಗ ಆ ಬಸ್ಸಿನಲ್ಲಿ ಗಂಡಸರಿಗೆ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಮೀಸಲಾತಿ ಎಂದಾಗಿಬಿಡುತ್ತದೆ.

ಯಾವುದೇ ಕ್ಷೇತ್ರದಲ್ಲಾಗಲೀ ಮೀಸಲಿಗೆ ಒಳಗಾಗದ ಯಾವುದೇ ಸ್ಥಾನವು ಎಲ್ಲರಿಗೂ ಅಂದರೆ ಮೀಸಲಾತಿ ಸೌಲಭ್ಯವಿರುವ ಗುಂಪುಗಳವರಿಗೂ ಸೇರಿದಂತೆ ತೆರೆದಿರುತ್ತದೆ ಎನ್ನುವುದು ಸಾಮಾನ್ಯ ಜ್ಞಾನವಿರುವ ಯಾರಿಗಾದರೂ ತಿಳಿದಿರುವ ಅಥವಾ ತಿಳಿದಿರಬೇಕಾದ ಸಂಗತಿ. ಆಶ್ಚರ್ಯದ ಸಂಗತಿಯೆಂದರೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಅನೇಕರಿಗೆ ಈ ವಿಷಯದ ಪರಿಜ್ಞಾನವಿಲ್ಲದಿರುವುದು ಕಂಡುಬರುತ್ತದೆ. ಈ ಅಜ್ಞಾನ ಆಡಳಿತದ ಉನ್ನತ ಸ್ಥಾನಗಳಲ್ಲಿರುವವರನ್ನೂ ಬಿಟ್ಟಿಲ್ಲ ಎನ್ನುವುದೇ ಈಗಿನ ಸಮಸ್ಯೆ.

ಕೆಪಿಎಸ್ಸಿ ಅಧ್ಯಕ್ಷ ಶ್ಯಾಂ ಭಟ್

ಸಂವಿಧಾನದ ಅಡಿಯಲ್ಲಿ ಸಾಮಾಜಿಕವಾಗಿ ದಮನಕ್ಕೊಳಗಾದವರಿಗೆ ಹಾಗೂ ಹಿಂದುಳಿದವರಿಗೆ ಶಿಕ್ಷಣ ಮತ್ತು ಸರ್ಕಾರೀ ನೇಮಕಾತಿಗಳಲ್ಲಿ ಇಂತಿಷ್ಟು ಎಂದು ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ತಳ ಸಮುದಾಯದವರಿಗೆ ಸಹಾಯವಾಗಿದೆ ಎನ್ನುವುದು ವಾಸ್ತವ. ಈ ಸಂದರ್ಭದಲ್ಲಿಯೂ ಸಹ ನಾವು ಬಳಸುವ ಜನರಲ್ ಮೆರಿಟ್ (ಸಾಮಾನ್ಯ ಪ್ರತಿಭೆ) ಎನ್ನುವ ಪದವೇ ತಪ್ಪು ಅದು ಜನರಲ್ ಕ್ಯಾಟಗರಿ ಎಂದು ಮಾತ್ರ ಇರಬೇಕು. ‘ಮೆರಿಟ್’ ಎಂದು ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಮಾತ್ರ ಬಳಸಿ ಉಳಿದವರಿಗೆ ಮಾತ್ರ ಕ್ಯಾಟಗರಿ ಎಂದು ಬಳಸುವ ಪರಿಪಾಠವಿದೆ. ಈ ಪದದ ಬಳಕೆಯಲ್ಲಿಯೇ ತಥಾಕಥಿತ ‘ಪ್ರತಿಭಾನ್ವಿತ’ ಜನರಲ್ಲಿ ತುಳಿತಕ್ಕೊಳಗಾದವರ/ ಹಿಂದುಳಿದವರ ಬಗ್ಗೆ ತಾತ್ಸಾರ ಮಾತ್ರವಲ್ಲ ಪೂರ್ವಗ್ರಹವೂ ಎದ್ದು ಕಾಣುತ್ತದೆ.

ಇದೇ ಪೂರ್ವಗ್ರಹ ಇತ್ತೀಚೆಗೆ ಕೆಪಿಎಸ್ಸಿ ತೆಗೆದುಕೊಂಡಿರುವ ನೀತಿ ನಿರ್ಧಾರದ ಸಂಬಂಧದಲ್ಲಿಯೂ ಕಾಣುತ್ತದೆ. ಕರ್ನಾಟಕ ಉಚ್ಚನ್ಯಾಯಾಲಯವು, ಡಾ.ಕೃಷ್ಣ ಅವರು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆ ಕೇಸಿಗೆ ಮಾತ್ರ ಸೀಮಿತವಾಗುವಂತೆ ನೀಡಿದ ಒಂದು ತೀರ್ಪನ್ನು ಆಧಾರವಾಗಿಟ್ಟು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊಕದ್ದಮೆಯಲ್ಲಿ ಆ ಕೇಸಿಗೆ ಮಾತ್ರ ಅನ್ವಯವಾಗುವಂತೆ ನೀಡಿದ ತೀರ್ಪನ್ನು ಆಧರಿಸಿ ನ್ಯಾಯಾಲಯದ ಆ ತೀರ್ಪನ್ನು ಎಲ್ಲ ಸಂದರ್ಭಗಳಿಗೂ ಅನ್ವಯಿಸುವ ದೊಡ್ಡ ತಪ್ಪನ್ನು ಮಾಡುತ್ತಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳ ಅಭ್ಯರ್ಥಿಗಳನ್ನು ಸಾಮಾನ್ಯ ಪ್ರವರ್ಗದಲ್ಲಿ ನೇಮಕಾತಿ ಹೊಂದುವಂತಿಲ್ಲ ಎನ್ನುವ ಕೆಪಿಎಸ್ಸಿಯ ಇತ್ತೀಚಿನ ನಿರ್ಧಾರ ಸಾಮಾಜಿಕವಾಗಿ ಪ್ರತಿಗಾಮಿಯಾದಂಥದು ಮಾತ್ರವಲ್ಲ ಸಂವಿಧಾನ ವಿರೋಧಿಯೂ ಸಹ ಆಗಿದೆ. ಮೀಸಲಾತಿಯು ಶೇ.50ನ್ನು ಮೀರಬಾರದು ಎನ್ನುವ ನೀತಿಯೇ ಅಸಂಬದ್ಧವಾಗಿರುವುದು ಒಂದು ಕಡೆಯಾದರೆ ಮೀಸಲಾತಿ ಸೌಲಭ್ಯವನ್ನು ಪಡೆದವರು ಸಾಮಾನ್ಯ ಪ್ರವರ್ಗದಲ್ಲಿ ಗಣನೆಗೇ ಅರ್ಹರಲ್ಲ ಎನ್ನುವುದು ದೊಡ್ಡ ಮೋಸ.

ಕರ್ನಾಟಕ ಲೋಕಸೇವಾ ಆಯೋಗ ಸರ್ಕಾರದ ಅಂಗಸಂಸ್ಥೆ ಮಾತ್ರ. ಅದಕ್ಕೆ ನೀಡಲಾಗಿರುವುದು ಸೀಮಿತ ಸ್ವಾಯತ್ತತೆ ಮಾತ್ರ. ಅದರ ಕೆಲಸವೇನಿದ್ದರೂ ಅನುಷ್ಠಾನಗೊಳಿಸುವುದೇ ಹೊರತು ತಾನೇ ನೀತಿ ನಿರ್ಧಾರ ಮಾಡುವಂತಿಲ್ಲ. ಮೀಸಲಾತಿ ಸೌಲಭ್ಯ ಪಡೆದವರನ್ನು ಸಾಮಾನ್ಯ ಪ್ರವರ್ಗದಲ್ಲಿ ಪರಿಗಣಿಸಲಾಗದು ಎನ್ನುವುದು ಒಂದು ಬಹುಮುಖ್ಯ ನೀತಿ ನಿರ್ಧಾರ. ಸಾಮಾಜಿಕ ಆರ್ಥಿಕ ಆಯಾಮಗಳುಳ್ಳದ್ದು. ಇಂಥ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರಿಗೆ ಕೊಟ್ಟರ‍್ಯಾರು? ವಿಚಿತ್ರವೆಂದರೆ ಕೆಪಿಎಸ್ಸಿಯ ಈ ನಿಲುವಿಗೆ ಸರ್ಕಾರದಿಂದಲೇ ಒಪ್ಪಿಗೆ ಬೆಂಬಲ ಸಿಗುತ್ತಿದೆ ಎನ್ನುವುದು ಬಾಲವೇ ಕುದುರೆಯನ್ನು ಆಡಿಸಿದಂತಾಗಿದೆ. ಸರ್ಕಾರದಲ್ಲಿನ ಕ್ಯಾಬಿನೆಟ್ ಹುದ್ದೆಯ ಮಂತ್ರಿಯಾದ ಪ್ರಿಯಾಂಕಖರ್ಗೆಯವರು ಈ ವಿಷಯದಲ್ಲಿ ಮುಖ್ಯಮಂತ್ರಿಗಳಿಗೆ ತಮ್ಮ ಆಕ್ಷೇಪಣೆಗಳನ್ನೊಳಗೊಂಡ ಪತ್ರವೊಂದನ್ನು ಬರೆದರೆಂದರೆ ಈ ವಿಷಯ ಮಂತ್ರಿ ಮಂಡಲದಲ್ಲಿಯೂ ಚರ್ಚೆಯಾಗಿಲ್ಲ ಎನ್ನುವುದು ಸ್ಪಷ್ಟ. ಮಂತ್ರಿಮಂಡಲದಲ್ಲಿ ಒಪ್ಪಿಗೆ ಇಲ್ಲದೆ ಇಂಥ ನಿರ್ಧಾರವನ್ನು ಸರ್ಕಾರದ ಅಂಗಸಂಸ್ಥೆಯೊಂದು ತೆಗೆದುಕೊಳ್ಳುವ ಧೈರ್ಯ ಮಾಡಿತೆಂದರೆ ರಾಜ್ಯದ ಆಡಳಿತ ಯಾವ ಮಟ್ಟವನ್ನು ಮುಟ್ಟಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಕೆಪಿಎಸ್ಸಿ ಕಾರ್ಯದರ್ಶಿ ಜನ್ನು

ಈ ವಿಷಯವಾಗಿ ಈಗಾಗಲೇ ಹಲವು ದಲಿತ ಸಂಘಟನೆಗಳು ಮತ್ತು ಚಿಂತಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ದಲಿತ ಸಂಘಟನೆಗಳು ಬೆಂಗಳೂರಿನಲ್ಲಿ 19.11.2018ರಂದು ಪ್ರತಿಭಟನೆಯನ್ನು ನಡೆಸಿದ್ದಾರೆ. ತಾವು ಮಾಡುತ್ತಿರುವ ಸಂವಿಧಾನ ವಿರೋಧಿ ಕೆಲಸದ ಪರಿಣಾಮ ಎಂಥದು ಎನ್ನುವ ಕುರಿತು ಉನ್ನತ ಸ್ಥಾನಗಳಲ್ಲಿ ಕುಳಿತಿರುವವರನ್ನು ಈ ಬೆಳವಣಿಗೆಗಳಾದರೂ ಎಚ್ಚರಿಸುತ್ತವೆ. ತಕ್ಷಣವೇ ಲೋಕಸೇವಾ ಆಯೋಗವು ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮಾತ್ರವಲ್ಲ, ಇಂಥ ಉದ್ಧಟತನದ ನಿರ್ಧಾರವನ್ನು ತಮಗೆ ನೀಡಲಾಗಿರುವ ಯಾವ ಅಧಿಕಾರದ ಭಾಗವಾಗಿ ತೆಗೆದುಕೊಳ್ಳಲಾಯಿತು ಎಂಬುದನ್ನು ಸ್ಪಷ್ಟಪಡಿಸುವಂತೆ ಸರ್ಕಾರವು ಆಯೋಗದ ಅಧ್ಯಕ್ಷರಿಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜೆಡಿಎಸ್ ಜಾತಿವಾದಿ ಎಂಬ ಆಪಾದನೆ ಈಗಾಗಲೇ ಇದೆ. ಕಾಂಗ್ರೆಸ್ಸಿನ ಹಲವರು ನಾಯಕರೂ ಸಹ ಇಂಥ ಆಪಾದನೆಯಿಂದ ಮುಕ್ತವಾಗಿಲ್ಲ. ಕೆಪಿಎಸ್ಸಿಯ ಈಗಿನ ದಲಿತ ವಿರೋಧಿ ನಿರ್ಧಾರ ಸಾಮಾನ್ಯ ವರ್ಗಗಳವರಿಗೆ ಸಂತೋಷವನ್ನು ಉಂಟು ಮಾಡಬಹುದು. ಆದರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದವರ ದಮನಿತರ ಪ್ರಾತಿನಿಧ್ಯವನ್ನು ಖಾತರಿ ಪಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪಿತವಾದ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಜವಾಬ್ದಾರಿಯನ್ನು ಆಡಳಿತ ನಡೆಸುವವರು ಮರೆತರೆ ಇದೇ ರೀತಿ ಆಗುತ್ತದೆ.

ಈಗ ತುರ್ತಾಗಿ ಇಂಥ ಅಕ್ಷಮ್ಯ ಕ್ರಮಕ್ಕೆ ಮುಂದಾದವರು ಯಾರು ಎಂಬುದು ಜನರಿಗೆ ತಿಳಿಯಬೇಕಾಗಿದೆ. ಕೆಲವು ದಿನಗಳಿಂದ ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಗೆ ವಸ್ತುವಾಗಿರುವ ಈ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ತುಟಿಬಿಚ್ಚದಿರುವುದು ಏನನ್ನು ಹೇಳುತ್ತದೆ. ದೊಡ್ಡ ಸಂಖ್ಯೆಯಲ್ಲಿರುವ ಕೆಳ ಸಮುದಾಯಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಅಲ್ಪಸಂಖ್ಯಾತರಾದ, ಆದರೆ ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿತವಾಗಿರುವ ಮೇಲ್ಜಾತಿ ಮೇಲ್ವರ್ಗದವರು ತೆಗೆದುಕೊಳ್ಳಬಹುದಾದರೆ ಇಲ್ಲಿನ ಪ್ರಜಾತಂತ್ರದ ಭವಿಷ್ಯವೇನು ಎನ್ನುವುದು ಪ್ರಶ್ನೆ.

ಕೇಂದ್ರದಲ್ಲಿ ಬ್ರಾಹ್ಮಣಿಯ ಮೌಲ್ಯಗಳ ಪ್ರತಿನಿಧಿಯಾಗಿರುವ ಬಿಜೆಪಿಯು ವಿಜೃಂಭಿಸುತ್ತಿರುವಾಗ ಕೋಮುವಾದಿಗಳ ವಿರೋಧಿಗಳು ನಾವು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು, ಕೇವಲ ಆಡಳಿತವನ್ನು ಕೈವಶಮಾಡಿಕೊಳ್ಳುವುದು ಮಾತ್ರವಲ್ಲದೇ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಜನಪರ ಧೋರಣೆಯನ್ನು ಸಾಬೀತುಗೊಳಿಸಬೇಕಾಗಿದೆ. ತಾವು ಜನಪರ ಎಂದು ಭಾವಿಸುವುದು ಮಾತ್ರವಲ್ಲ ಜನಪರ ಎಂದು ಬಿಂಬಿಸಿಕೊಳ್ಳುವುದು ಮಾತ್ರವಲ್ಲ, ತಮ್ಮ ಜನಪರತೆಯನ್ನು ಸಾಬೀತುಮಾಡುವ ಜವಾಬ್ದಾರಿಯೂ ಅಧಿಕಾರಸ್ಥರಿಗಿದೆ. ಹಾಗೆ ಮಾಡದಿದ್ದರೆ ಅವರ ಮಾತುಗಳ ಹಾಗೂ ಕೃತ್ಯಕ್ಕೆ ನಡುವಿನ ಅಂತರ ಬಹುಬೇಗನೇ ಜಗಜ್ಜಾಹೀರಾಗುವುದು ಖಂಡಿತಾ.

ಸರ್ಕಾರವು ತನ್ನದೇ ಆದ ಈ ವಿಷಯದಲ್ಲಿ ಕಾರ್ಯಪ್ರವೃತ್ತವಾಗಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲಿ. ಅಲ್ಲದೆ ಈ ಹುನ್ನಾರದ ಹಿಂದಿನ ಕುಟಿಲ ಮನಸ್ಸುಗಳನ್ನೂ ಗುರುತಿಸಿ ಮುಂದೆ ಇನ್ನೆಂದು ಇಂತಹದಕ್ಕೆ ಕೈ ಹಾಕದಂತೆ ಕ್ರಮ ತೆಗೆದುಕೊಂಡರೆ ಮಾತ್ರ ಈಗಾಗಲೇ ಜನರು ಈ ಸರ್ಕಾರದ ವಿರುದ್ಧ ಆಡುತ್ತಿರುವ ಮಾತುಗಳ ಪಟ್ಟಿಗೆ ಮತ್ತೊಂದು ಅಂಥದ್ದೇ ಮಾತು ಸೇರಿಕೊಳ್ಳದಂತೆ ತಡೆಯಬಹುದು. ಹಾಗಾಗಿದ್ದಲ್ಲಿ ಇವರು ರಾಜಕೀಯವನ್ನು ತಂತ್ರಗಾರಿಕೆ, ಕುತಂತ್ರಗಳ ಮಟ್ಟಕ್ಕೆ ಇಳಿಸುವ ಕಾರ್ಯಗಳಿಗೇ ಸೀಮಿತವಾಗಿ ಇತಿಹಾಸದಲ್ಲಿ ದಾಖಲೆಯೊಂದಿಗೆ ಉಳಿದು ಬಿಡುತ್ತಾರೆ. ಆಯ್ಕೆ ಸರ್ಕಾರಕ್ಕೆ ಬಿಟ್ಟಿದ್ದು ಒಂದಂತೂ ಗ್ಯಾರಂಟಿ ಈ ಅನಾಹುತವನ್ನು ಸರಿಪಡಿಸದಿದ್ದಲ್ಲಿ ದಲಿತರ ಹಿಂದುಳಿದವರ ವಿರೋಧ, ಆಸಂತೋಷಗಳನ್ನು ಎದುರಿಸಲು ಬದ್ಧವಾಗಬೇಕು. ಹಾಗೆ ಮಾಡುವುದು ಸರ್ಕಾರಕ್ಕೆ ಒಳ್ಳೆಯದಂತೂ ಆಗುವುದಿಲ್ಲ.

ಶೇ.93 ಜನಕ್ಕೆ ಶೇ.50 ಮೀಸಲಾತಿ. ಶೇ.7 ಜನಕ್ಕೆ ಶೇ.50 ಮೀಸಲಾತಿ

ಸುಪ್ರೀಂಕೋರ್ಟ್ ಒಟ್ಟಾರೆ ಮೀಸಲಾತಿ ಶೇ.50ನ್ನು ಮೀರಬಾರದೆಂದು ಹೇಳಿದೆ. ಅದು ಪ್ರಾತಿನಿಧ್ಯದಲ್ಲಿ ಮೀಸಲಾತಿಯನ್ನು ಸಾಮಾಜಿಕ ನ್ಯಾಯಕ್ಕೆ ತಕ್ಕಂತೆ ಅಳವಡಿಸಲು ದೊಡ್ಡ ಅಡ್ಡಿಯಾಗಿದೆ. ಇದೀಗ ಹೈಕೋರ್ಟ್ ಆದೇಶವು ನಿರ್ದಿಷ್ಟ ಪ್ರಕರಣದಲ್ಲಿ ಹೇಳಿರುವಂತೆ, ಮೀಸಲಾತಿಯನ್ನು ಪಡೆದುಕೊಳ್ಳುವ ಜಾತಿಗಳಿಗೆ ಸೇರಿದವರು ಹೆಚ್ಚಿನ ಅಂಕಗಳನ್ನು ಪಡೆದುಕೊಂಡರೂ ಅವರು ಜಾತಿಯೊಳಗೇ ಸೀಟು ಪಡೆದುಕೊಳ್ಳಬೇಕು ಎಂದು ಎಲ್ಲೆಡೆ ವಿಸ್ತರಿಸಿದರೆ ಏನಾಗುತ್ತದೆ? ಕರ್ನಾಟಕದಲ್ಲಿ ನೇರ ಮೀಸಲಾತಿಯನ್ನು ಪಡೆದುಕೊಳ್ಳುತ್ತಿರುವ ಸಮುದಾಯಗಳ ಒಟ್ಟು ಜನಸಂಖ್ಯೆ ಶೇ.93. ಅವರೆಲ್ಲರಿಗೆ ಸೇರಿ ಕೇವಲ ಶೇ.50ರಷ್ಟು ಪ್ರಾತಿನಿಧ್ಯ ಸಿಗುತ್ತದೆ. ಉಳಿದ ಶೇ.7ರಷ್ಟು ಸಮುದಾಯಗಳಿಗೆ ಶೇ.50ರಷ್ಟು ಮೀಸಲಾಗುತ್ತದೆ.

ಒಂದರ್ಥದಲ್ಲಿ ಇದು ಈ ದೇಶದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದದ್ದರ ಪುನರಾವರ್ತನೆ. ಅಂದರೆ ಮೇಲ್ಜಾತಿಗಳು ಅದರಲ್ಲೂ ಬ್ರಾಹ್ಮಣ ಸಮುದಾಯಗಳಿಗೆ ಸೇರಿದವರು ಎಲ್ಲೆಡೆ ಜನಸಂಖ್ಯೆಗೆ ಮೀರಿ, 10 ಪಟ್ಟಿಗೂ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿದ್ದರು. ಅದೂ ಒಂದು ರೀತಿಯ ಮೀಸಲಾತಿಯೇ ಆಗಿತ್ತು. ಕೆಲವು ಸಮುದಾಯಗಳಿಗೆ ಕೆಲವು ರೀತಿಯ ಕೆಲಸ ಮೀಸಲು ಎಂಬಂತೆ.

ಇಂದು ಇನ್ನೊಂದು ರೀತಿಯಲ್ಲಿ ಅದನ್ನೇ ಈ ಕ್ರಮವೂ ಜಾರಿ ಮಾಡುತ್ತಿದೆ. ಅತ್ಯಂತ ಅಪಾಯಕಾರಿಯಾದ ಕ್ರಮ ಇದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...