Homeಸಾಮಾಜಿಕಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

ಜೋಯಿಸರ ‘ವರ್ಚುವಲ್’ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ಮು!

- Advertisement -
- Advertisement -

ನಕಲಿ ಜೋಯಿಸರ ಬುರುಡೆ ಶಾಸ್ತ್ರಗಳು ಹೇಗೆ, ಜನ್ಮದಿಂದ ಸುತ್ತಿಕೊಂಡು, ಹೆಸರಿನಿಂದ ಗಟ್ಟಿಗೊಂಡು, ಪಂಚಾಂಗಗಳೆಂಬ ಬಾಹುಗಳಿಂದ ಕಟ್ಟಿಹಾಕುತ್ತವೆಂಬುದನ್ನು ನೋಡಿದೆವು. ಕಳೆದ ಬಾರಿ ವಿವರಿಸಿದ ಹಲ್ಲಿ ಶಕುನ ಎಷ್ಟು ವ್ಯಾಪಕವಾಗಿದೆ ಎಂಬುದನ್ನು ಸೂಚಿಸಲು ಓದುಗರಾದ ಪುಷ್ಪಾ ಸುರೇಂದ್ರ ಅವರು ಕಾಂಚಿಪುರಂ ದೇವಾಲಯದ ಉದಾಹರಣೆ ಕೊಟ್ಟಿದ್ದಾರೆ. ಅಲ್ಲೊಂದು ಕಲ್ಲಿನ ಹಲ್ಲಿಯಿದೆಯಂತೆ. ಈ ಹಲ್ಲಿಪತನ ಫಲದಿಂದ ಭಯಗೊಂಡವರು ಬೇರೆಬೇರೆ ರಾಜ್ಯಗಳಿಂದ ಪರಿಹಾರಾರ್ಥ ಇಲ್ಲಿ ಬಂದು ಅದರ ಮೇಲೆ ಎಣ್ಣೆ ಸುರಿಯುತ್ತಾರಂತೆ! ಅಂದರೆ ಈ ಹಲ್ಲಿಯನ್ನೇ ಜನರ ಮೇಲೆಸೆದು ಬೆದರಿಸಿ ದೋಚುವ ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದೆ ಎಂದಾಯಿತು! ಅದಿರಲಿ, ನಾವೀಗ ಹುಟ್ಟಿನಿಂದ ನೇರವಾಗಿ ಸಾವಿಗೆ ಹೋಗಿ ಅಲ್ಲಾಗಿರುವ ಮಹಾನ್ ಆವಿಷ್ಕಾರಗಳನ್ನು ನೋಡೋಣ. ನಂತರ ವಿಸ್ತಾರವಾದ ಜೀವನಕ್ಕೆ ಬರೋಣ.
ಕೆಲ ವರ್ಷಗಳ ಹಿಂದೆ ನನ್ನ ದೊಡ್ಡಪ್ಪ ಮುಂಬಯಿಯಲ್ಲಿ ತೀರಿಕೊಂಡಾಗ ಅವರ ಮತ್ತು ಅದಕ್ಕೆ ಕೇವಲ ಒಂದು ವಾರ ಮೊದಲು ತೀರಿಕೊಂಡಿದ್ದ ಅವರ ಪತ್ನಿ- ದೊಡ್ಡಮ್ಮನ ಶವಸಂಸ್ಕಾರವನ್ನು ಅವರ ಗೆಳೆಯರು ವಿದ್ಯುತ್ ಚಿತೆಯಲ್ಲಿ ಯಾವುದೇ ಧಾರ್ಮಿಕ ಕ್ರಿಯಾಕರ್ಮ ಇಲ್ಲದೇ ಮಾಡಿದ್ದರು. ಅವರಿಗೆ ಮಕ್ಕಳಿರಲಿಲ್ಲ.
ನಾಸ್ತಿಕರಾಗಿದ್ದ ಅವರ ಪಿಂಡ ಪ್ರಧಾನವನ್ನೂ ಯಾರೂ ಮಾಡಿಲ್ಲ ಎಂದು ಬಹುವಾಗಿ ನೊಂದ ಮುಂಬಯಿಯಲ್ಲೇ ಇದ್ದ ಅವರ ತಂಗಿ, ಅಂದರೆ ನನ್ನ ಅತ್ತೆ ಪಿಂಡ ಬಿಡಲು ನನ್ನನ್ನು ಕರೆಸಿದರು. ಹಿಂದೂ ಆಚರಣೆಗಳ ಬಗ್ಗೆ ಅತೀವ ಶ್ರದ್ಧೆ ಇದ್ದ ಅತ್ತೆ ಮದುವೆಯಾದದ್ದು ಕ್ರೈಸ್ತರನ್ನು ಎಂದರೆ ನಿಮಗೆ ಆಶ್ಚರ್ಯ ಆಗಬಹುದು!
ದೊಡ್ಡಪ್ಪನ ಶಿಷ್ಯನೂ, ದೇವ-ಧರ್ಮ ನಿರ್ಲಿಪ್ತನೂ ಅದ ನಾನು, ಅವರ ಮನ ನೋಯಿಸಲು ಇಚ್ಛಿಸದೇ ಒಪ್ಪಿಕೊಂಡಿದ್ದೆ. ಮುಂಬಯಿಯಲ್ಲೇ ಕೆಲ ವರ್ಷ ಇದ್ದ ನನಗೆ ಜನ ನಿಭಿಡ ಮೆರೀನ್ ಲೈನ್ಸ್ನಲ್ಲಿ ಎತ್ತರವಾದ ಗೋಡೆಗಳ ಹಿಂದೆ ಅಷ್ಟೊಂದು ದೊಡ್ಡ ಸ್ಮಶಾನವಿದೆ ಎಂದು ಗೊತ್ತೇ ಇರಲಿಲ್ಲ. ಅದೊಂದು ಹಳ್ಳಿಯೇ ಅಗಿದ್ದು, ಬೇರೆ ಬೇರೆ ಜಾತಿಗಳವರು ನೂರಾರು ವರ್ಷಗಳ ಹಿಂದೆಯೇ ಕ್ರಿಯಾಕರ್ಮಗಳಿಗೆಂದು ಕಟ್ಟಿಸಿದ್ದ ದೊಡ್ಡ ದೊಡ್ಡ ಪುರಾತನ ಮನೆಗಳಿದ್ದವು. ಅಲ್ಲಿ ಅದಕ್ಕಾಗಿಯೇ ಹಲವಾರು ಅರ್ಚಕ ಕುಟುಂಬಗಳೂ ವಾಸಿಸುತ್ತಿದ್ದವು! ಅದೊಂದು ಬ್ರಾಹ್ಮಣ ಗ್ರಾಮವಾಗಿದ್ದು, ಇವೆಲ್ಲಾ ಬೇಕಾಬಿಟ್ಟಿ ಹಣ ಮಾಡುವ ಅಧಿಕೃತ ಏಜೆನ್ಸಿಗಳು!
ನನ್ನ ಸಂಬಂಧಿಯೊಬ್ಬರು ಕ್ರಿಯೆಗೆ ಕೂತುದರಿಂದ ನನಗೆ ಸಂಕಷ್ಟ ತಪ್ಪಿತು. ನಮಗೆ ಸಿಕ್ಕಿದ ಭಟ್ರು ಮಂತ್ರದ ಅರ್ಥ ಮಾತ್ರವಲ್ಲದೆ, ಆ ಪದ್ಧತಿ ಬಂದುದರ ಹಿನ್ನೆಲೆ, ಆಚರಣೆಯ ವೈದಿಕ ಅರ್ಥ, ಕಾಲಾನುಕ್ರಮದಲ್ಲಿ ಆದ ಬದಲಾವಣೆಗಳು ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. “ನಿಮಗೆ ಅರ್ಧವಾಗದೆ ನೀವಿದನ್ನು ಮಾಡಿ ಏನು ಪ್ರಯೋಜನ?” ಎಂಬ ಅವರ ಮಾತನ್ನು ಈಗಿನ ಸುಲಿಗೆಕೋರರಿಗೂ, ಅವರ ಬಕ್ರಾಗಳಿಗೂ ಕೇಳಬೇಕು!
ಹಿಂದೂ ಧರ್ಮ ಪ್ರಕಾರ ನನ್ನ ದಿವಂಗತ ದೊಡ್ಡಪ್ಪ ಮತ್ತು ದೊಡ್ಡಮ್ಮನಿಗೆ ಸ್ಥಾನಮಾನ ಬೇರೆ ಬೇರೆಯಾಗಿದ್ದುದರಿಂದ ಪಿತೃ ಪ್ರಧಾನ ಸಂಸ್ಕೃತಿಯಂತೆ ಗಂಡು-ಹೆಣ್ಣು ತಾರತಮ್ಯದ ಕ್ರಿಯೆಗಳು ನಡೆದವು. ಅದು ಯಾಕೆ ಇತ್ಯಾದಿಗಳನ್ನೂ ಅವರು ‘ವೇದಾಧಾರದಲ್ಲಿ’ ವಿವರಿಸಿದರು.
ಇದನ್ನು ಯಾಕೆ ಹೇಳಿದೆನೆಂದರೆ ಈಗ ನಿಮ್ಮನ್ನು ಹುಸಿಮಂತ್ರಗಳ ಭಯದ ಕತ್ತಲಲ್ಲಿಟ್ಟು ನೀವು ಬೆರಳು ತೋರಿಸದೆಯೇ ಹಸ್ತ ಮಾತ್ರವಲ್ಲ, ಇಡೀ ದೇಹವನ್ನೇ ನುಂಗುವ ಜೋಯಿಸರುಗಳು ಟಿವಿಗಳಲ್ಲೇ ವಕ್ಕರಿಸುತ್ತಿರುವಾಗ ಇಂತವರು ‘ನವಗ್ರಹ’ ಯೋಗದಂತೆ ತಾತಾ ಅಪರೂಪ!
ವಿಶೇಷವೆಂದರೆ ಸರಳವಾಗಿದ್ದ ಈ ವ್ಯಕ್ತಿ ‘ಶಾಸ್ತ್ರ’ದಲ್ಲಿ ಎಷ್ಟು ಹೇಳಿದೆಯೋ ಅಷ್ಟೇ- ಅಂದರೆ, ಪೈಸೆ, ಅಣೆ ಲೆಕ್ಕದಲ್ಲಿ ಚಿಲ್ಲರೆ ಹಣ ಮಾತ್ರ ಪಡೆಯುತ್ತಿದ್ದರು!
“ನಿಮ್ಮಲ್ಲಿ ಚಿಲ್ಲರೆ ಇರಲಿಕ್ಕಿಲ್ಲವಾದುದರಿಂದ ಅದನ್ನೂ ನಾನೇ ತಂದಿದ್ದೇನೆ” ಎಂದು ಜೋಳಿಗೆಯಿಂದ ಹಳೆಯ ನಾಣ್ಯಗಳನ್ನು ತೆಗೆದರು. “ನಿಮಗೆ ನಾನು ಸಾಲ ಕೊಡುತ್ತೇನೆ. ಅದನ್ನು ನೀವು ಶಾಸ್ತ್ರದಂತೆ ನನಗೆ ದಾನ ಮಾಡಬೇಕು. ನಂತರ ನನ್ನ ಸಾಲವನ್ನು ಒಟ್ಟಿಗೆ ತೀರಿಸಿ. ಶಾಸ್ತ್ರದ ಪ್ರಕಾರ ನೀವು ನನಗೆ ಗೋದಾನ ಮಾಡಬೇಕು. ಈಗ ಈ ನಗರದಲ್ಲಿ ಗೋವನ್ನು ಎಲ್ಲಿಂದ ತರುತ್ತೀರಿ? ನಾನೆಲ್ಲಿ ಸಾಕಲಿ? ಗೋವು ಇಲ್ಲದಿದ್ದಲ್ಲಿ ಶಾಸ್ತ್ರದಲ್ಲಿ ಚಿನ್ನದ ಪ್ರತಿಮೆ ದಾನ ಮಾಡಬಹುದೆಂದಿದೆ. ನಾನು ಅದನ್ನೂ ತಂದಿದ್ದೇನೆ” ಎಂದು ಜೋಳಿಗೆಯಿಂದ ಚಿನ್ನದ ಚಿಕ್ಕ ದನದ ಪ್ರತಿಮೆ ತೆಗೆದರು.
“ನಾನು ನಿಮಗೆ ಹಣ ಸಾಲಕೊಟ್ಟು ಇದನ್ನು ಮಾರುತ್ತೇನೆ. ಆ ಕಾಲದ ರೇಟು ಒಂದೂ ಕಾಲು ರೂಪಾಯಿ. ಹಣ ನಂತರ ಕೊಡಿ” ಎಂದು ಚಿನ್ನದ ದನವನ್ನು ಅತ್ತೆಗೆ ಮಾರಿದರು. ನಂತರ ಅದನ್ನೇ ದಾನವಾಗಿ ಪಡೆದರು ಎನ್ನಿ! ಮಾರಿದ ಹಣ ಬೇರೆ, ದಾನ ಲಾಭ ಪ್ರತ್ಯೇಕ! ಅದರೂ ಅವರು ದನದ ಪ್ರಸ್ತುತ ರೇಟು ಪಡೆಯಲಿಲ್ಲ! ಅದೇ ರೀತಿ ಜೋಳಿಗೆಯಿಂದ ಮಣ್ಣನ್ನು ತೆಗೆದು ತಾವೇ ಮಾರಿ, ಭೂದಾನವನ್ನೂ ಪಡೆದರು. ಎಲ್ಲವನ್ನೂ ಅಣೆ ಪೈ ಲೆಕ್ಕದಲ್ಲಿ ದಕ್ಷಿಣೆ ಪಡೆದರು. ನಾನು ಈ ವರ್ಚುವಲ್ ಗೋದಾನ, ಭೂದಾನ ಮತ್ತು ಕ್ರೆಡಿಟ್ ಸಿಸ್ಟಮ್ ನೋಡಿ ಅಚ್ಚರಿಪಟ್ಟೆ.
ನನ್ನ ಅತ್ತೆಯವರಿಗಂತೂ ಖುಷಿಯಾಗಿ ಕೊನೆಗೆ ಉದಾರ ದಕ್ಷಿಣೆ ಕೊಟ್ಟ ರೂ, ಅವರು ಅದರಲ್ಲಿ ಈಗಿನ ಲೆಕ್ಕಾಚಾರ ಹಾಕಿ ಸ್ವಲ್ಪವನ್ನೇ ತೆಗೆದುಕೊಂಡರು! “ನಿಮಗಿದು ಈಗ ಕಡಿಮೆ ಕಾಣಬಹುದು. ಹಿಂದಿನ ಕಾಲದಲ್ಲಿ ಇದು ಭಾರೀ ದೊಡ್ಡ ಹಣ!” ಎಂದು ನೆನಪಿಸಿದರು ಬೇರೆ!!
ಇವೆಲ್ಲಾ ನಮಗೆ ಜೀವನದ ಅರ್ಥ ಮಾಡಿಸುವ ಸಾಂಕೇತಿಕ ಕ್ರಿಯೆಗಳು ಮಾತ್ರ ಅವುಗಳಿಗೆ ಪ್ರಸ್ತುತತೆ ಅರ್ಥ ಇಲ್ಲ. ಹಿಂದಿನವರ ಜೀವನಕ್ರಮ, ಅವರು ಕಂಡುಕೊಂಡ ಅರ್ಥವನ್ನು ನೆನಪಿಸುವುದು ಇವುಗಳ ಉದ್ದೇಶ ಎಂದೂ ವಿವರಿಸಿದರು.
ನಾನು ಒಂದು ಕಡೆ ಬೆರಗಾಗುತ್ತಾ, ಇನ್ನೊಂದು ಕಡೆ ಮನಸ್ಸಿನಲ್ಲೇ ನಗುತ್ತಾ ಇದ್ದೆ! ಯಾಕೆಂದರೆ, ಕ್ರಿಯೆ ನಡೆಯುತ್ತಿದ್ದಾಗ ನಾನು ಈ ರೀತಿಯ ಪಿಂಡ ಪ್ರಧಾನ ನಡೆಯುವ ಕೆಲವು ಕಡೆಗೆಲ್ಲ ಹೋಗಿ ಇಣುಕ್ಕಿದ್ದೆ! ಕಾಟಾಚಾರಕ್ಕೆ ಕ್ರಿಯೆಗಳು ಅವಸರವಸರದಲ್ಲಿ ನಡೆದು, ಕಂತೆ ಕಂತೆ ನೋಟುಗಳು ಕೈಬದಲಿಸುತ್ತಿದ್ದವು! ದಂಧೆ ಜೋರಾಗಿ ನಡೆಯುತ್ತಿತ್ತು.
ನಮಗೆ ಸಿಕ್ಕಂತಹ ಪ್ರಾಮಾಣಿಕ ಅರ್ಚಕನನ್ನು ನಾನು ಜನ್ಮದಲ್ಲಿ ನೋಡಿಲ್ಲ. ಸುಲಿಯುವವರೇ ಹೆಚ್ಚು!
ನನಗೆ ಸಂಸ್ಕೃತ ಅರೆಬರೆ ಅರ್ಥ ಅಗುವುದರಿಂದ ತಪ್ಪು ಮಂತ್ರ ಹೇಳಿದ್ದಕ್ಕೆ ಹಿಂದೆ ನಾನು ಒಂದಿಬ್ಬರು ಪರಿಚಯದ ಅರ್ಚಕರನ್ನು ಪ್ರಶ್ನಿಸಿದ್ದೆ! ನನ್ನ ವಿಷಯ ಗೊತ್ತಿದ್ದುದರಿಂದ ‘ನಮ್ಮದು ಬಾಯಿಪಾಠ ಮಾರಾಯ್ರೆ, ಎಲ್ಲರೆದುರು ಮರ್ಯಾದೆ ತೆಗೆಯಬೇಡಿ’ ಅಂದಿದ್ದರು!
ನಂಬಿಕೆ ಸಂಕೀರ್ಣವಾದ ವಿಷಯ. ನುಂಗುವಂತಿಲ್ಲ, ಉಗುಳುವಂತಿಲ್ಲ! ಅದಕ್ಕಾಗಿ ಸುಮ್ಮನಿದ್ದೆ! ಇಂತವರನ್ನು ನಾವು ದೇವರ ಕಮೀಷನ್ ಏಜೆಂಟರಾಗಿ ಒಪ್ಪಿಕೊಂಡು ಬಕ್ರಾಗಳಾಗುತ್ತಿದ್ದೇವೆ.
ಮೇಲೆ ಹೇಳಿದ ಅರ್ಚಕರಿಗೆ ವ್ಯತಿರಿಕ್ತವಾಗಿ ಈಗಿನ ವಂಚಕರು ಗೋದಾನ, ಭೂದಾನ, ಸುವರ್ಣ ದಾನ ಎಂದು ಅವರೇ ಮಾರಿ, ಅವರೇ ಪಡೆದು ಎಂತಹ ದರೋಡೆ ಮಾಡುತ್ತಿದ್ದಾರೆಂಬುದಕ್ಕೆ ಹಿನ್ನೆಲೆಯಾಗಿ ಈ ಘಟನೆಯನ್ನು ವಿವರಿಸಿದೆ. ಇವರಲ್ಲಿ ಕೆಲವರು ‘ಕನ್ಯಾದಾನ’ ಪಡೆಯಲು ಹೋಗಿ ಏಟುತಿಂದ, ಕೇಸು ಸುತ್ತಿಸಿಕೊಂಡ ಮಹಾನುಭಾವರೂ ಇದ್ದಾರೆಂಬುದನ್ನು ನೆನಪಿಸಿಕೊಳ್ಳಿ! ಸಾವಿನಂತಹ ದುಃಖದ ಘಟನೆಯಿಂದಲೂ ಹಿಂಡಲು ಎಂತಹಾ ಮಹಾ ಭಯಂಕರ ಆವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ಮುಂದೆ ನೋಡೋಣ. ಅದಕ್ಕಿದು ಪೀಠಿಕೆ ಅಷ್ಟೇ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...