Homeರಾಜಕೀಯಥರ್ಡ್ ಪ್ಲೇಸ್ ಈಶ್ವರಪ್ಪ ಫಸ್ಟ್ ಕ್ಲಾಸ್ ಗೆದ್ದಿದ್ದು ಹೇಗೆ?

ಥರ್ಡ್ ಪ್ಲೇಸ್ ಈಶ್ವರಪ್ಪ ಫಸ್ಟ್ ಕ್ಲಾಸ್ ಗೆದ್ದಿದ್ದು ಹೇಗೆ?

- Advertisement -
- Advertisement -

ಮಾಚಯ್ಯ |

ಅಂತೂಇಂತೂ ಬ್ರಿಗೇಡ್ ಈಶ್ವರಪ್ಪ ಶಿವಮೊಗ್ಗ ಸಿಟಿಯಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಎತ್ತಿಂದೆತ್ತ ಲೆಕ್ಕ ಹಾಕಿದರೂ ಕಳೆದ ಸಲದ ಮೂರನೇ ಸ್ಥಾನ ಬಿಟ್ಟು ಮೇಲಕ್ಕೇಳುವ ಲಕ್ಷಣಗಳೇ ಈ ಚುನಾವಣೆಯ ಕೊನೆಯ ಕ್ಷಣದವರೆಗೆ ಈಶ್ವರಪ್ಪ ಮೊಗದಲ್ಲಿ ಕಾಣಿಸುತ್ತಿರಲಿಲ್ಲ. ತಾನು ಪಕ್ಷ ಬಿಟ್ಟು ಹೋಗಲು ಕಾರಣವಾಗಿದ್ದ, ವಾಪಾಸು ಬಂದಾಗಲೂ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ವಿಪರೀತ ಕಾಟ ಕೊಟ್ಟಿದ್ದ ಈಶ್ವರಪ್ಪರನ್ನು ಸೋಲಿಸಿ, ಅವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಲು ಸ್ವತಃ ಯಡ್ಯೂರಪ್ಪನವರೇ ಸಕಲ ಸನ್ನದ್ಧರಾಗಿದ್ದು ವಾಸ್ತವ. ಹಾಗೆ ನೋಡಿದರೆ ಈಶ್ವರಪ್ಪನಿಗೆ ಟಿಕೇಟು ಕೊಡೋದೇ ಯಡ್ಯೂರಪ್ಪನವರಿಗೆ ಇಷ್ಟವಿರಲಿಲ್ಲ. ಅದಕ್ಕೆಂದೇ ಕಳೆದ ಸಲದ ಕೆಜೆಪಿ ಹುರಿಯಾಳು ರುದ್ರೇಗೌಡರನ್ನು ಜಿಲ್ಲಾಧ್ಯಕ್ಷ ಮಾಡಿ, ಚುನಾವಣಾ ಮುಂಚೂಣಿಗೆ ತರುವ ಪ್ರಯತ್ನ ಮಾಡಿದ್ದೂ ಉಂಟು.

ಹೈಕಮಾಂಡ್ ಒತ್ತಡಕ್ಕೆ ಮಣಿದು ಟಿಕೇಟ್ ಕನ್ಫರ್ಮ್ ಮಾಡಿದ ಮೇಲೂ ಈಶ್ವರಪ್ಪರಿಗೆ ಸೋಲಿನ ರುಚಿ ತೋರಿಸಲು ಮಾಡಬೇಕಾದ ಮಸಲತ್ತುಗಳನ್ನೆಲ್ಲ ಯಡ್ಯೂರಪ್ಪ ಅಣಿ ಮಾಡಿಟ್ಟಿದ್ದರು. ಕೊನೇ ಕ್ಷಣದವರೆಗೆ ಕ್ಷೇತ್ರದೊಳಗೆ ಕಾಲಿಟ್ಟ ಎಂತವರಿಗೇ ಆದರೂ ಈಶ್ವರಪ್ಪನ ಮೂರನೇ ಸ್ಥಾನದ ದುರಂತ ಭವಿಷ್ಯ ಮುಖಕ್ಕೆ ರಾಚುತ್ತಿತ್ತು. ಅಂತದ್ದರಲ್ಲಿ ಬ್ರಾಹ್ಮಣ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅದೇ ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನ ಕುಮಾರ್‍ರನ್ನು ಹಿಂದಿಕ್ಕಿ ಬರೋಬ್ಬರಿ ಐವತ್ತು ಸಾವಿರ ಲೀಡ್‍ನಲ್ಲಿ ಈಶ್ವರಪ್ಪ ಗೆಲುವಿನ ಪತಾಕೆ ಹಾರಿಸುತ್ತಾರೆಂದರೆ ಹೇಗೆ ಸಾಧ್ಯ ಅನ್ನೋದು ಜನರನ್ನು ಕಾಡುತ್ತಿದೆ.

ಒನ್ಸ್ ಎಗೇನ್, ಈಶ್ವರಪ್ಪನವರ ಈ ಗೆಲುವಿನ ಹಿಂದೆ ಕೆಲಸ ಮಾಡಿರೋದು ಅದೇ ಹೈಕಮಾಂಡ್! ಶತಾಯಗತಾಯ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡಬೇಕೆಂದು ನಿರ್ಧರಿಸಿಕೊಂಡಿದ್ದ ಬಿಜೆಪಿ ಹೈಕಮಾಂಡ್‍ಗೆ ಒಂದೊಂದು ಸೀಟೂ ಮುಖ್ಯವೆನ್ನುವುದು ಮನದಟ್ಟಾಗಿ ಹೋಗಿತ್ತು. ಅದಕ್ಕೋಸ್ಕರ ಆಂತರಿಕ ಕಚ್ಚಾಟದಿಂದ ಕೈತಪ್ಪಿ ಹೋಗಬಹುದಾಗಿರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟವರ ತಲೆಮೇಲೆ ಮೊಟಕುವ ಪ್ರಯತ್ನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾದಾಗ ಆ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಂಡಿದ್ದೇ ಈಶ್ವರಪ್ಪನವರ ತವರುಮನೆ. ಸ್ವತಃ ಯಡ್ಯೂರಪ್ಪನವರೇ ಈಶ್ವರಪ್ಪನನ್ನು ಮಣಿಸಲು ರಹಸ್ಯ ಸಿದ್ಧತೆ ಮಾಡಿಕೊಂಡಿರೋದನ್ನು ಖಾತ್ರಿಪಡಿಸಿಕೊಂಡ ಅಮಿತ್ ಶಾ, ಯಡ್ಯೂರಪ್ಪನನ್ನು ಕರೆದು `ನಿಮ್ಮ ಸಿಎಂ ಆಗೋ ಕನಸು ನನಸಾಗಬೇಕು ಅಂದ್ರೆ, ನೀವು ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲೇಬೇಕು. ಅಕಸ್ಮಾತ್ ಆಯಪ್ಪ ಸೋತರೆ, ಅದಕ್ಕೆ ನೀವೇ ಜವಾಬ್ಧಾರರಾಗ್ತೀರಿ. ಆಮೇಲಿನ ಬೆಳವಣಿಗೆಗಳಿಗೆ ನಾವು ಹೊಣೆಯಲ್ಲ’ ಅನ್ನೋ ಸಾಫ್ಟ್ ಎಚ್ಚರಿಕೆ ರವಾನಿಸಿದ್ದರು. ಆನಂತರವೇ ಯಡ್ಯೂರಪ್ಪ ತನ್ನೆಲ್ಲಾ ರಣತಂತ್ರಗಳನ್ನು ರಿವರ್ಸ್ ಮಾಡಿ, ಈಶ್ವರಪ್ಪನನ್ನು ಗೆಲ್ಲಿಸಿಕೊಳ್ಳಲು ದಾಳ ಉರುಳಿಸಿದ್ದು. ಲಿಂಗಾಯತ ಮತಗಳು ಸಾಲಿಡ್ಡಾಗಿ ಈಶ್ವರಪ್ಪನಿಗೆ ಒಲಿದು ಬರುವಂತೆ ಫರ್ಮಾನು ಹೊರಡಿಸಿದ್ದಲ್ಲದೇ, ಸ್ಥಳೀಯ ಆರೆಸ್ಸೆಸ್ ನಾಯಕರನ್ನು ಬಳಸಿಕೊಂಡು ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದ್ರೇನೆ ಬ್ರಾಹ್ಮಣ ಸಮುದಾಯಕ್ಕೆ ಅನುಕೂಲ, ಹಾಗಾಗಿ ಜಾತ್ಯಸ್ಥ ಅಂತ ಪ್ರಸನ್ನ ಕುಮಾರ್‍ಗೆ ಓಟ್ ಹಾಕುವ ಬದಲು ಕಮಲದ ಚಿಹ್ನೆಗೆ ಮತ ಹಾಕುವಂತೆ ಅಂಡರ್ ಕರೆಂಟ್ ಹರಿಸಿದ್ದರು. ಅದು ಈಶ್ವರಪ್ಪನವರನ್ನು ಅನಾಮತ್ತು ಮೂರನೇ ಸ್ಥಾನದಿಂದ ಮೇಲಕ್ಕೇರಿಸಿ, ಐವತ್ತು ಸಾವಿರ ಲೀಡ್‍ಗಳಲ್ಲಿ ಗೆಲ್ಲಿಸಿದೆ.

ಅಂದಹಾಗೆ, ಗೆದ್ದರೂ ಪಕ್ಷದೊಳಗೆ ಈಶ್ವರಪ್ಪರನ್ನು ಈ ಋಣಭಾರ ಭರ್ಜರಿಯಾಗೇ ಮೆತ್ತಗಾಗಿಸಲಿದೆ. ಅಂತದ್ದೊಂದು ಸಣ್ಣ ಸ್ಯಾಂಪಲ್ ಕೂಡಾ ಈಗಾಗಲೇ ಘಟಿಸಿದೆ. ಫಲಿತಾಂಶ ಹೊರಬಿದ್ದು ಅಧಿಕಾರದ ಹೊಸ್ತಿಲಿಗೆ ಬಂದು ಅಂಡು ಸುಟ್ಟ ಬೆಕ್ಕಿನಂತಾಗಿದ್ದ ಬಿಜೆಪಿಯು ಪಕ್ಷೇತರರು, ಕಾಂಗ್ರೆಸ್-ಜೆಡಿಎಸ್ ಅತೃಪ್ತರಿಗೆ ಗಾಳ ಹಾಕುವ ಪ್ರಯತ್ನದಲ್ಲಿತ್ತು. ಆಗ ರಾಣೇಬೆನ್ನೂರಿನಿಂದ ಕೋಳಿವಾಡರನ್ನು ಮುಕ್ಕಿಸಿ ಬಂದ ಕೆಪಿಜೆಪಿಯ ಆರ್.ಶಂಕರ್‍ನನ್ನು ಬಿಜೆಪಿ ಸಂಪರ್ಕಿಸಿ ಕುದುರಿಸಿಕೊಂಡಿದ್ದುಂಟು. ಆತ ಜಾತಿಯಲ್ಲಿ ಕುರುಬನಾದ್ದರಿಂದ ಮತ್ತು ಈಶ್ವರಪ್ಪನ ಕಳ್ಳುಬಳ್ಳಿ ಸಂಬಂಧಿಕನೂ ಆದ್ದರಿಂದ ಆತನನ್ನು ನಿಭಾಯಿಸುವ ಹೊಣೆಯನ್ನು ಈಶ್ವರಪ್ಪನಿಗೇ ಹೈಕಮಾಂಡ್ ವಹಿಸಿತ್ತು. ಆದರೆ ಈಶ್ವರಪ್ಪ ಕೊಂಚ ಮೈಮರೆತಿದ್ದರಿಂದ ಬೆಳಿಗ್ಗೆ ಬಿಜೆಪಿ ಜೊತೆಗಿದ್ದ ಶಂಕರ್ ಸಂಜೆಯ ವೇಳೆಗಾಗಲೇ ಸಿದ್ದರಾಮಯ್ಯನವರ ಪಡಸಾಲೆಯಲ್ಲಿ ಮುಖ ತೋರಿಸಿ ಜೈ ಅಂದ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹೈಕಮಾಂಡ್ ಪ್ರತಿನಿಧಿ ಪ್ರಕಾಶ್ ಜಾವ್ಡೇಕರ್, ಈಶ್ವರಪ್ಪನನ್ನು ಕರೆಸಿಕೊಂಡು `ಒಬ್ಬ ಎಮ್ಮೆಲ್ಲೆನ ನಿಮ್ಮ ಕೈಲಿ ನಿಭಾಯಿಸೋಕೆ ಆಗಲ್ವೇನ್ರೀ? ಇದಕ್ಕೋಸ್ಕರನೇನಾ ನಾವು ಯಡ್ಯೂರಪ್ಪಾಜಿಯ ಮನವೊಲಿಸಿ ನಿಮ್ಮನ್ನು ಗೆಲ್ಲಿಸಿಕೊಂಡದ್ದು. ನಿಮ್ಮ ಈ ಹೊಣೆಗೇಡಿತನದ ವಿರುದ್ಧ ಅಮಿತ್ ಶಾಜಿಗೆ ಕಂಪ್ಲೇಂಟ್ ಮಾಡ್ತೀನಿ’ ಅಂತ ಲೆಫ್ಟ್‍ರೈಟ್ ಕ್ಲಾಸ್ ತಗೊಂಡಿದ್ದರು. ಯಡ್ಯೂರಪ್ಪನವರ ಮರ್ಜಿಯಲ್ಲಿ ಗೆದ್ದಿರೋ ಈಶ್ವರಪ್ಪನೋರಿಗೆ ಭವಿಷ್ಯದಲ್ಲಿ ಇಂಥ ದೈನೇಸಿ ಬಹುಮಾನಗಳು ಸಾಕಷ್ಟು ಕಾದಿವೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...