Homeಮುಖಪುಟಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

ಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

- Advertisement -
- Advertisement -

“ಸೀರೇನೇ ಮುಳ್ಳಿನ ಮೇಲೆ ಬಿದ್ರೂ, ಮುಳ್ಳೇ ಸೀರೇ ಮೇಲೆ ಬಿದ್ರೂ ಹರಿಯೋದು ಸೀರೇನೇ”
ಯಾವುದೇ ಪುಟ್ಟ ಹುಡುಗಿ ‘ಆ ಹುಡುಗ ನಂಗೆ ಹಿಂಗಂದಾ, ಹಾಗ್ ಮಾಡಿದ’ ಎಂದು ತನ್ನ ಅಮ್ಮನಿಗೆ ದೂರುಕೊಟ್ಟರೆ ಸಿಗುವ ಉತ್ತರ ‘ನೀನ್ ಅಲ್ಯಾಕೆ ಹೋಗಿದ್ದೆ/ ನೀನೇ ಏನಾದ್ರೂ ಮಾಡಿರಬೇಕು/ ಸುಮ್ನಿರು, ಅಂತದ್ದೆಲ್ಲಾ ಮಾತಾಡಬರದು’ ಎನ್ನುವಂತ ಉತ್ತರ ಅಥವಾ ಪ್ರತ್ಯಾರೋಪಗಳನ್ನು ಎದುರಿಸಬೇಕುಗುವ ಸಾಧ್ಯತೆಗಳೇ ಹೆಚ್ಚು. ಒಂದೆರಡು ಸಲ ಕಂಪ್ಲೇಂಟ್ ಮಾಡಿ ಬೈಸಿಕೊಂಡ ಆ ಪುಟ್ಟ ಹುಡುಗಿ ಮುಂದೆಂದೂ ಮಾತನಾಡದಂತಹ ಸ್ಥಿತಿಗೆ ತಲುಪುತ್ತಾಳೆ. ಬಾಲ್ಯದಲ್ಲಿ ಆಗುವ ಲೈಂಗಿಕ ಕಿರುಕುಳ ಯಾವುದೋ ಒಬ್ಬರು ಅನುಭವಿಸುವಂತಹದ್ದಲ್ಲ, ಅರ್ಧಕ್ಕಿಂತ ಹೆಚ್ಚು ಮಕ್ಕಳು ಅನುಭವಿಸಿರುತ್ತಾರೆ (ಇದು ಹೆಣ್ಣುಮಕ್ಕಳಿಗಷ್ಟೇ ಸಿಮಿತವಾಗಿರುವುದಿಲ್ಲ). ಲೈಂಗಿಕ ವಿಷಯಗಳ ಬಗ್ಗೆಯೇ ಎಂದೂ ಮಾತನಾಡಲೂ ಅವಕಾಶವಿಲ್ಲದಾಗ ಲೈಂಗಿಕ ಕಿರುಕುಳದ ಬಗ್ಗೆ ಹೇಗೆ ಮಾತನಾಡಬೇಕು?
ಬಾಲಿವುಡ್ ಎನ್ನುವ ದೈತ್ಯ ಚಿತ್ರರಂಗ ವರ್ಷಕ್ಕೆ ಸಾವಿರಾರು ಸಿನಿಮಾಗಳನ್ನು ತಯಾರಿಸುವ, ನೂರಾರು ಸಿನಿಮಾಗಳನ್ನು ಬಿಡುಗಡೆ ಮಾಡುವ ಒಂದು ಕನಸಿನ ಕಾರ್ಖಾನೆ. ಹೀರೋ, ಹೀರೋಯಿನ್ ಆಗುವ ಕನಸು ಕಾಣುತ್ತ ಪ್ರತಿನಿತ್ಯ ನೂರಾರು ಯುವಕ. ಯುವತಿಯರು ಮುಂಬಯಿ ಶಹರಕ್ಕೆ ಬಂದು ಸೇರುತ್ತಾರೆ.
ಕಾಸ್ಟಿಂಗ್ ಕೌಚ್- ಎಂದರೆ, ಒಬ್ಬ ಯುವತಿಗೆ ಒಂದು ಸಿನಿಮಾದಲ್ಲಿ ಪಾತ್ರ ಮಾಡಬೇಕಾದರೆ ಆ ಚಿತ್ರದ ನಿರ್ದೇಶಕ ಅಥವಾ ನಿರ್ಮಾಪಕ ಅಥವಾ ನಾಯಕನಟನೊಂದಿಗೆ ಲೈಂಗಿಕ ಸಂಪರ್ಕ ಮಾಡಲು ಒಪ್ಪಿಕೊಳ್ಳುವುದು. ಇದು ಇಲ್ಲಿ ನಾರ್ಮಲ್. ಎಲ್ಲರಿಗೂ ಇದರ ಬಗ್ಗೆ ಅರಿವಿದ್ದರೂ ಇದನ್ನು ಸಾಮಾನ್ಯೀಕರಿಸಲಾಗಿತ್ತು. ಯಾರೂ ಇದರ ಬಗ್ಗೆ ಮಾತನಾಡುವಂತಿದ್ದಿಲ್ಲ. ಇದನ್ನು ಅವರವರ ಆಯ್ಕೆ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಇದು ಬರೀ ಆಯ್ಕೆಯ ಪ್ರಶ್ನೆಯೇ? ಖಂಡಿತ ಇಲ್ಲ ಹಾಗೂ ಇದರ ಪ್ರಕ್ರಿಯೆ ಕೂಡ ಅಷ್ಟು ಸರಳವಾಗಿರುವುದಿಲ್ಲ. ಸಲೋನಿ ಚೋಪ್ರ ಎನ್ನುವ ಬಾಲಿವುಡ್ ನಟಿಯ ಅನುಭವಗಳನ್ನು ಓದಿದರೆ ಲೈಂಗಿಕ ಕಿರುಕುಳ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತೇ ಎನ್ನುವುದು ಅರ್ಥವಾಗುತ್ತದೆ. ಅವಳಿಗೆ ಕಿರುಕುಳ ನೀಡಿದವ ಸಾಜಿದ್ ಖಾನ್ ಎನ್ನುವ ಖ್ಯಾತ ನಿರ್ದೇಶಕ. ಇನಿಬ್ಬರು ಯುವತಿಯರೂ ಅವನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಬಾಲಿವುಡ್‍ನ ಖ್ಯಾತನಾಮರನೇಕರು ಅವನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂದರೆ ಸಾಜಿದ್ ಖಾನ್ ಮಾಡಿದ ಕುಕರ್ಮಗಳ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಗೊತ್ತಿತ್ತು. ಈತನಷ್ಟೇ ಅಲ್ಲ ಇನ್ನಿತರ ನೂರಾರು ಬಾಲಿವುಡ್ ಖ್ಯಾತನಾಮರು ಮಾಡುತ್ತಿದ್ದ ಇಂತಹ ಕೃತ್ಯಗಳ ಬಗ್ಗೆ ಇಂಡಸ್ಟ್ರಿಯ ಎಲ್ಲರಿಗೂ ಯಾವಾಗಲೂ ಗೊತ್ತಿತ್ತು. ಆದರೆ ಯಾರೂ ಮಾತನಾಡುವಂತಿರಲಿಲ್ಲ. ಯಾರಾದರೂ ಮಾತನಾಡಿದರೆ ಅವರನ್ನು ಇಂಡಸ್ಟ್ರಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು.
ಬಾಲಿವುಡ್ ವಿಷಯದಿಂದ ಕೆಲಸಮಯದವರೆಗೆ ಹೊರಬರುವ. ಯಾವುದೇ ಮಹಿಳೆ, ಅವಳು ‘ಗಣ್ಯೆ’ಯಾಗಿರಲಿ ಅಥವಾ ಒಂದು ಹಳ್ಳಿಯ ದಲಿತ ಮಹಿಳೆಯಾಗಿರಲಿ ತನ್ನ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲು ನಮ್ಮ ಸಮಾಜ ಅವಕಾಶ ಕಲ್ಪಿಸಿದೆಯೇ? ಇತರರಿಗೆ ಹೇಳುವುದಕ್ಕೂ ಮುಂಚೆಯೇ ಆಂತರಿಕವಾದ ಒಂದು ದೊಡ್ಡ ಹೋರಾಟವನ್ನು ಜಯಸಬೇಕಾಗುತ್ತದೆ. ಒಂದು, ‘ನನ್ನದೇ ಏನಾದರೂ ತಪ್ಪಿರಬಹುದು’, ಎರಡು, ‘ಜನರು ನನ್ನನ್ನು ನಂಬುತ್ತಾರೆಯೇ?’, ಮೂರು, ಲೈಂಗಿಕ ಕಿರುಕುಳ ತನ್ನ ಕಾರ್ಯಕ್ಷೇತ್ರದಲ್ಲಿ ಆದಾಗ ಆಗುವ ಆತಂಕ ‘ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆಯೇ, ಇದರ ಬಗ್ಗೆ ಮಾತನಾಡಿ ಇಲ್ಲಿಂದ ಹೋದರೆ ಬೇರೆಡೆ ಕೆಲಸ ಸಿಗುವುದೇ?’. ಹೆಚ್ಚು ಇತ್ಯಾದಿ ಪ್ರಶ್ನೆ, ತೊಳಲಾಟಗಳನ್ನು ಯಶಸ್ವಿಯಾಗಿ ಜಯಿಸಿದ ನಂತರವೂ ಸಾರ್ವಜನಿಕವಾಗಿ ಮಾತನಾಡುವುದು ಖಂಡಿತ ಸುಲಭವಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಇಲ್ಲಿ ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ; ಪ್ರಕ್ರಿಯೆ ಎಷ್ಟು ಹಿಂಸಾತ್ಮಕವಾಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಯಾವುದೇ seಡಿiಚಿಟ oಜಿಜಿeಟಿಜeಡಿ ಅನ್ನು ಮಾತನಾಡಿಸಿ, ಮೇಲೆ ಹೇಳಿದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಅವನು ತನ್ನ ಕುಕೃತ್ಯಗಳನ್ನು ಅವ್ಯಾಹತವಾಗಿ ಮುಂದುವರೆಸುತ್ತಿರುತ್ತಾನೆ. ಈ ಮೇಲೆ ಹೇಳಿದ ಮತ್ತು ಇನ್ನಿತರ ಕಾರಣಗಳಿಂದ ಅನೇಕ ಪ್ರಕರಣಗಳು ಹೊರಗೆ ಬರುವುದೇ ಇಲ್ಲ.
ಇಂತಹ ಸಂದರ್ಭದಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಮೇಲೆ ಆದ ದೌರ್ಜನ್ಯ, ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವದು ಸಾಹಸವಲ್ಲವೇ? ಯಾರಾದರೂ ತಮ್ಮ ಸೇಡು ತೀರಿಸಲೆಂದೇ ಸಾರ್ವಜನಿಕವಾಗಿ ಹೇಳಿಕೊಂಡರೆ? ಈ #ಮಿಟೂ ಚಳವಳಿ ಬರೀ ‘ಗಣ್ಯೆ’ಯರಿಗೆ ಮಾತ್ರ ಸೀಮಿತವಾಗಿದೆಯೇ? ದೇಶದಾದ್ಯಂತ ನಡೆಯುತ್ತಿರುವ ಮಹಿಳಾ ಚಳವಳಿಯ ಮೇಲೆ ಯಾವ ಪರಿಣಾಮ ಬಿರುವುದು? ಸಕಾರಾತ್ಮಕ ಪರಿಣಾಮ ಬೀರುವುದೇ? ನಕಾರಾತ್ಮಕವಾಗಿರುವುದೇ?
#ಮಿಟೂ ಶುರುವಾದಾಗಿನಿಂದ ಮಹಿಳೆಯರು ಸಾರ್ವಜನಿಕವಾಗಿ ಬರೆದ ಬರಹಗಳನ್ನು ಓದಿದರೇ ಸಾಕು ನಮಗೆ ಗೊತ್ತಾಗುವುದು ಅವರು ಎಂತಹ ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು. ಆ ಎಲ್ಲಾ ಪರಿಸ್ಥಿತಿಗಳಲ್ಲೂ ಮಹಿಳೆಯಯರು ತಮ್ಮ ದೌರ್ಬಲ್ಯದ ಬಗ್ಗೆಯೂ ಬರೆದಿದ್ದಾರೆ. ಆ ಪರಿಸ್ಥಿತಿಯನ್ನು ಎದುರಿಸಲು ತಮಗೆ ಶಕ್ತಿಯಿರಲಿಲ್ಲ ಎಂದೂ ಬರೆದುಕೊಂಡಿದ್ದಾರೆ. ತಾವು ಅನುಭವಿಸಿದ ಇಂತಹ ನೋವಿನ, ದೌರ್ಬಲ್ಯದ, ಅಸಹಾಕತೆಯ ಕತೆಗಳನ್ನು ಎಲ್ಲರ ಮುಂದೆ ಬಿಚ್ಚಿಡಬೇಕಾದರೆ ಅದು ಧೈರ್ಯದ ಕೆಲಸವೇ ಸರಿ. ಈ ಕತೆಗಳನ್ನು ಓದಿದರೆ ಇವುಗಳ ಪ್ರಾಮಾಣಿಕತೆ ಬಗ್ಗೆಯೂ ಯಾರೂ ಸಂದೇಹಪಡುವಂತಿಲ್ಲ. ಪ್ರಾಮಾಣಿಕವಾಗಿಲ್ಲದೇ ಬರೀ ಸೇಡಿಗಾಗಿ ಬರೆದಿದ್ದರೆ ಅದರ ವಾಸನೆ ಖಂಡಿತವಾಗಿಯೂ ರಾಚುತ್ತಿತ್ತು. ಇನ್ನೊಂದು ಗಂಭೀರ ಪ್ರಶ್ನೆ, ಈ ಚಳವಳಿ ಬರೀ eಟiಣe ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಇದರಿಂದ ಯಾವುದೇ ಸಮಗ್ರ ಬದಲಾವಣೆ ಆಗಲು ಸಾಧ್ಯವಿಲ್ಲ. ಹೌದು, ಸದ್ಯಕ್ಕೆ ಇಲ್ಲಿಯವರೆಗೆ ತಮ್ಮ ಕಿರುಕುಳದ ಕತೆಯನ್ನು ಬಿಚ್ಚಿಟ್ಟವರು ಇಂಗ್ಲಿಷ್ ಮಾತನಾಡುವ ಮೇಲ್ವರ್ಗದ ಮಹಿಳೆಯರು. ಆದರೆ ಇದರ ಪರಿಣಾಮ ಅನೇಕಕಡೆ ಆಗುತ್ತಿರುವುದೂ ಅಷ್ಟೇ ಸತ್ಯ. ಹಾಗೂ ಈ ‘ಗಣ್ಯೆ’ಯರೂ ನಮ್ಮ ಸಮಾಜದ ಅಂಗವೇ ಆಗಿದ್ದಾರೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಯಾವ ಒಂದು ವರ್ಗಕ್ಕೂ ಸೀಮಿತವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವರುಗಳು ‘ಗಣ್ಯೆ’ಯರಾಗಿದ್ದೂ ಇಂತಹ ಕಿರುಕುಳ ಅನುಭವಿಸಬೇಕಾದರೆ ನಮ್ಮ ಸಮಾಜದಲ್ಲಿ ಮಹಿಳೆಯರು ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಹಾಗೂ ಇವರುಗಳು ತೋರಿಸಿದ ಧರ್ಯ, ಸಾಹಸ ಬೇರೆಯವರಿಗೂ ಧೈರ್ಯತಂದುಕೊಡುತ್ತೆ ಎನ್ನುವ ನಂಬಿಕೆ ನನ್ನದು. ಹಾಗೂ ಈ #ಮಿಟೂ ಚಳವಳಿಯಿಂದಾಗಿ ಅನೇಕ ಪುರುಷರಿಗೆ ತಮಗಿರುವ ಠಿಡಿiviಟege ಅರ್ಥವಾಗುತ್ತಿದೆ; ಅನೇಕರು ತಮ್ಮ ಚಿಛಿಣioಟಿs ಗಳನ್ನು ಪ್ರಶ್ನಿಸುತ್ತಿದ್ದಾರೆ. ಒಂದು ರೀತಿಯ ಆತ್ಮಾವಲೋಕನ ಆಗುತ್ತಿರುವುದು ಸ್ಪಷ್ಟ. ಈ ಆತ್ಮಾವಲೋಕ ಈ ಚಳವಳಿಯ ಸಾಧನೆಯಲ್ಲವೇ? ಇನ್ನೊಂದು, ಎಮ್.ಜೆ. ಅಕ್ಬರ್‍ನಂತಹ ಹಿರಿಯ ಪತ್ರಕರ್ತ ಹಾಗೂ ರಾಜಕಾರಿಣಿಗೆ ಲೈಂಗಿಕ ಕಿರುಕುಳದ ಇತಿಹಾಸವೇ ಇದೆ. ಪತ್ರಿಕೋದ್ಯಮದಲ್ಲಿ ಒಂದೆರಡು ದಿನಗಳ ಕಾಲ ಕೆಲಸ ಮಾಡಿದ ಎಲ್ಲರಿಗೂ ಅವನೊಬ್ಬ ‘ಚಮಡಿ’ ಎಂದು ಗೊತ್ತು. ಆದರೂ ಅವನ ಕುಕರ್ಮಗಳು, ಅವನಂತಹ ಇನ್ನಿತರರ ಕುಕರ್ಮಗಳು ಅವ್ಯಾಹತವಾಗಿ ನಡೆಯುತ್ತಲೇ ಇದ್ದವು. ಈ ಚಳವಳಿಯ ನಂತರ ಅವೆಲ್ಲವೂ ನಿಂತಿಬಿಡುತ್ತವೆ ಎನ್ನುವುದು ಸತ್ಯವಲ್ಲ ಆದರೆ ಖಂಡಿತವಾಗಿಯೂ ಅವರೆಲ್ಲರೂ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ವಿಚಾರ ಮಾಡಿಯೇ ಮಾಡುತ್ತಾರೆ.
ಇನ್ನು ಇತರ ಮಹಿಳಾ ಚಳವಳಿಗಳ ಮೇಲೆ ಇದರ ಪರಿಣಾಮ. ಇದು ಮೇಲ್ವರ್ಗದ ಮಹಿಳೆಯರ ಚಳವಳಿಯಾದರೂ ಆ ಮಹಿಳೆಯರೂ ದೌರ್ಜನ್ಯಕ್ಕೊಳಗಾದವರು, ಅವರೂ ಆ ಪರಿಸ್ಥಿತಿಯಲ್ಲಿ ದುರ್ಬಲರೇ ಆಗಿದ್ದವರು ಹಾಗೂ ಇಂತಹ ವರ್ಗಗಳು ಪ್ರಾರಂಭಿಸಿದ್ದ ಚಳವಳಿಗಳು ಎಲ್ಲೆಡೆಗೂ ಪಸರಿಸಿದ ಉದಾಹರಣೆಗಳೂ ಇವೆ. ಇವರು ಮಾಡಿದ ಸಾಹಸದಿಂದ ಇತರ ವರ್ಗದ ಮಹಿಳೆಯರಿಗೆ ಧರ್ಯವನ್ನೇ ತಂದುಕೊಡುವುದು ಎನ್ನುವುದು ನನ್ನ ಬಲವಾದ ನಂಬಿಕೆ ಹಾಗೂ ಯಾವ ವರ್ಗದವರೇ ಆಗಿರಲಿ ಅವರೊಂದಿಗೆ ನಿಲ್ಲುವುದು ಸಮಾಜದ ಕರ್ತವ್ಯ. ಈ ಚಳವಳಿ ಮೇಲ್ವರ್ಗಕ್ಕೆ ಸೀಮಿತವಾಗುವುದೇ ಎನ್ನುವ ಪ್ರಶ್ನೆಗೆ ನನ್ನ ಉತ್ತರ- ಇಲ್ಲ, ಈಗಾಗಲೇ ಇದರ ಬಗ್ಗೆ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲೂ ಬಹಳಷ್ಟು ಚರ್ಚೆಯಾಗುತ್ತಿದೆ. ಹಾಗಾಗಿ ಇದರ ಪರಿಣಾಮ ಎಲ್ಲೆಡೆ ಆಗಬಹುದು. ಒಂದು ವೇಳೆ ಅಷ್ಟಕ್ಕೇ ಸೀಮಿತಗೊಂಡರೂ ಮತ್ತು ಇದೊಂದು ಅದ್ಭುತ ಪರಿಣಾಮ ಬೀರಿದ ಚಳವಳಿಯಲ್ಲವೇ? ಇನ್ನೆಷ್ಟು ದಿನ ಮುಂದುವರೆಯಬಹುದು? ಮುಂದುವರೆಯದಿದ್ದರೂ ಇದರಿಂದ ಈಗಾಗಲೇ ಆದ ಪರಿಣಾಮ ಕಡಿಮೆಯೇನಿಲ್ಲ. ಇದು ಹೀಗೆ ಮುಂದುವರೆಯಲಿ, ಸೀರೆ ಮತ್ತು ಮುಳ್ಳಿನ ಸಮೀಕರಣ ಸುಳ್ಳಾಗಲಿ.

– ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...