Homeಮುಖಪುಟಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

ಬಾಲಿವುಡ್ ಅಂಗಳದ ಲೈಂಗಿಕ ಶೋಷಣೆ ಮತ್ತು #ಮಿಟೂ ಚಳವಳಿ

- Advertisement -
- Advertisement -

“ಸೀರೇನೇ ಮುಳ್ಳಿನ ಮೇಲೆ ಬಿದ್ರೂ, ಮುಳ್ಳೇ ಸೀರೇ ಮೇಲೆ ಬಿದ್ರೂ ಹರಿಯೋದು ಸೀರೇನೇ”
ಯಾವುದೇ ಪುಟ್ಟ ಹುಡುಗಿ ‘ಆ ಹುಡುಗ ನಂಗೆ ಹಿಂಗಂದಾ, ಹಾಗ್ ಮಾಡಿದ’ ಎಂದು ತನ್ನ ಅಮ್ಮನಿಗೆ ದೂರುಕೊಟ್ಟರೆ ಸಿಗುವ ಉತ್ತರ ‘ನೀನ್ ಅಲ್ಯಾಕೆ ಹೋಗಿದ್ದೆ/ ನೀನೇ ಏನಾದ್ರೂ ಮಾಡಿರಬೇಕು/ ಸುಮ್ನಿರು, ಅಂತದ್ದೆಲ್ಲಾ ಮಾತಾಡಬರದು’ ಎನ್ನುವಂತ ಉತ್ತರ ಅಥವಾ ಪ್ರತ್ಯಾರೋಪಗಳನ್ನು ಎದುರಿಸಬೇಕುಗುವ ಸಾಧ್ಯತೆಗಳೇ ಹೆಚ್ಚು. ಒಂದೆರಡು ಸಲ ಕಂಪ್ಲೇಂಟ್ ಮಾಡಿ ಬೈಸಿಕೊಂಡ ಆ ಪುಟ್ಟ ಹುಡುಗಿ ಮುಂದೆಂದೂ ಮಾತನಾಡದಂತಹ ಸ್ಥಿತಿಗೆ ತಲುಪುತ್ತಾಳೆ. ಬಾಲ್ಯದಲ್ಲಿ ಆಗುವ ಲೈಂಗಿಕ ಕಿರುಕುಳ ಯಾವುದೋ ಒಬ್ಬರು ಅನುಭವಿಸುವಂತಹದ್ದಲ್ಲ, ಅರ್ಧಕ್ಕಿಂತ ಹೆಚ್ಚು ಮಕ್ಕಳು ಅನುಭವಿಸಿರುತ್ತಾರೆ (ಇದು ಹೆಣ್ಣುಮಕ್ಕಳಿಗಷ್ಟೇ ಸಿಮಿತವಾಗಿರುವುದಿಲ್ಲ). ಲೈಂಗಿಕ ವಿಷಯಗಳ ಬಗ್ಗೆಯೇ ಎಂದೂ ಮಾತನಾಡಲೂ ಅವಕಾಶವಿಲ್ಲದಾಗ ಲೈಂಗಿಕ ಕಿರುಕುಳದ ಬಗ್ಗೆ ಹೇಗೆ ಮಾತನಾಡಬೇಕು?
ಬಾಲಿವುಡ್ ಎನ್ನುವ ದೈತ್ಯ ಚಿತ್ರರಂಗ ವರ್ಷಕ್ಕೆ ಸಾವಿರಾರು ಸಿನಿಮಾಗಳನ್ನು ತಯಾರಿಸುವ, ನೂರಾರು ಸಿನಿಮಾಗಳನ್ನು ಬಿಡುಗಡೆ ಮಾಡುವ ಒಂದು ಕನಸಿನ ಕಾರ್ಖಾನೆ. ಹೀರೋ, ಹೀರೋಯಿನ್ ಆಗುವ ಕನಸು ಕಾಣುತ್ತ ಪ್ರತಿನಿತ್ಯ ನೂರಾರು ಯುವಕ. ಯುವತಿಯರು ಮುಂಬಯಿ ಶಹರಕ್ಕೆ ಬಂದು ಸೇರುತ್ತಾರೆ.
ಕಾಸ್ಟಿಂಗ್ ಕೌಚ್- ಎಂದರೆ, ಒಬ್ಬ ಯುವತಿಗೆ ಒಂದು ಸಿನಿಮಾದಲ್ಲಿ ಪಾತ್ರ ಮಾಡಬೇಕಾದರೆ ಆ ಚಿತ್ರದ ನಿರ್ದೇಶಕ ಅಥವಾ ನಿರ್ಮಾಪಕ ಅಥವಾ ನಾಯಕನಟನೊಂದಿಗೆ ಲೈಂಗಿಕ ಸಂಪರ್ಕ ಮಾಡಲು ಒಪ್ಪಿಕೊಳ್ಳುವುದು. ಇದು ಇಲ್ಲಿ ನಾರ್ಮಲ್. ಎಲ್ಲರಿಗೂ ಇದರ ಬಗ್ಗೆ ಅರಿವಿದ್ದರೂ ಇದನ್ನು ಸಾಮಾನ್ಯೀಕರಿಸಲಾಗಿತ್ತು. ಯಾರೂ ಇದರ ಬಗ್ಗೆ ಮಾತನಾಡುವಂತಿದ್ದಿಲ್ಲ. ಇದನ್ನು ಅವರವರ ಆಯ್ಕೆ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಇದು ಬರೀ ಆಯ್ಕೆಯ ಪ್ರಶ್ನೆಯೇ? ಖಂಡಿತ ಇಲ್ಲ ಹಾಗೂ ಇದರ ಪ್ರಕ್ರಿಯೆ ಕೂಡ ಅಷ್ಟು ಸರಳವಾಗಿರುವುದಿಲ್ಲ. ಸಲೋನಿ ಚೋಪ್ರ ಎನ್ನುವ ಬಾಲಿವುಡ್ ನಟಿಯ ಅನುಭವಗಳನ್ನು ಓದಿದರೆ ಲೈಂಗಿಕ ಕಿರುಕುಳ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತೇ ಎನ್ನುವುದು ಅರ್ಥವಾಗುತ್ತದೆ. ಅವಳಿಗೆ ಕಿರುಕುಳ ನೀಡಿದವ ಸಾಜಿದ್ ಖಾನ್ ಎನ್ನುವ ಖ್ಯಾತ ನಿರ್ದೇಶಕ. ಇನಿಬ್ಬರು ಯುವತಿಯರೂ ಅವನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಬಾಲಿವುಡ್‍ನ ಖ್ಯಾತನಾಮರನೇಕರು ಅವನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂದರೆ ಸಾಜಿದ್ ಖಾನ್ ಮಾಡಿದ ಕುಕರ್ಮಗಳ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಗೊತ್ತಿತ್ತು. ಈತನಷ್ಟೇ ಅಲ್ಲ ಇನ್ನಿತರ ನೂರಾರು ಬಾಲಿವುಡ್ ಖ್ಯಾತನಾಮರು ಮಾಡುತ್ತಿದ್ದ ಇಂತಹ ಕೃತ್ಯಗಳ ಬಗ್ಗೆ ಇಂಡಸ್ಟ್ರಿಯ ಎಲ್ಲರಿಗೂ ಯಾವಾಗಲೂ ಗೊತ್ತಿತ್ತು. ಆದರೆ ಯಾರೂ ಮಾತನಾಡುವಂತಿರಲಿಲ್ಲ. ಯಾರಾದರೂ ಮಾತನಾಡಿದರೆ ಅವರನ್ನು ಇಂಡಸ್ಟ್ರಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು.
ಬಾಲಿವುಡ್ ವಿಷಯದಿಂದ ಕೆಲಸಮಯದವರೆಗೆ ಹೊರಬರುವ. ಯಾವುದೇ ಮಹಿಳೆ, ಅವಳು ‘ಗಣ್ಯೆ’ಯಾಗಿರಲಿ ಅಥವಾ ಒಂದು ಹಳ್ಳಿಯ ದಲಿತ ಮಹಿಳೆಯಾಗಿರಲಿ ತನ್ನ ಮೇಲೆ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲು ನಮ್ಮ ಸಮಾಜ ಅವಕಾಶ ಕಲ್ಪಿಸಿದೆಯೇ? ಇತರರಿಗೆ ಹೇಳುವುದಕ್ಕೂ ಮುಂಚೆಯೇ ಆಂತರಿಕವಾದ ಒಂದು ದೊಡ್ಡ ಹೋರಾಟವನ್ನು ಜಯಸಬೇಕಾಗುತ್ತದೆ. ಒಂದು, ‘ನನ್ನದೇ ಏನಾದರೂ ತಪ್ಪಿರಬಹುದು’, ಎರಡು, ‘ಜನರು ನನ್ನನ್ನು ನಂಬುತ್ತಾರೆಯೇ?’, ಮೂರು, ಲೈಂಗಿಕ ಕಿರುಕುಳ ತನ್ನ ಕಾರ್ಯಕ್ಷೇತ್ರದಲ್ಲಿ ಆದಾಗ ಆಗುವ ಆತಂಕ ‘ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆಯೇ, ಇದರ ಬಗ್ಗೆ ಮಾತನಾಡಿ ಇಲ್ಲಿಂದ ಹೋದರೆ ಬೇರೆಡೆ ಕೆಲಸ ಸಿಗುವುದೇ?’. ಹೆಚ್ಚು ಇತ್ಯಾದಿ ಪ್ರಶ್ನೆ, ತೊಳಲಾಟಗಳನ್ನು ಯಶಸ್ವಿಯಾಗಿ ಜಯಿಸಿದ ನಂತರವೂ ಸಾರ್ವಜನಿಕವಾಗಿ ಮಾತನಾಡುವುದು ಖಂಡಿತ ಸುಲಭವಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಇಲ್ಲಿ ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ; ಪ್ರಕ್ರಿಯೆ ಎಷ್ಟು ಹಿಂಸಾತ್ಮಕವಾಗಿರುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಯಾವುದೇ seಡಿiಚಿಟ oಜಿಜಿeಟಿಜeಡಿ ಅನ್ನು ಮಾತನಾಡಿಸಿ, ಮೇಲೆ ಹೇಳಿದ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಅವನು ತನ್ನ ಕುಕೃತ್ಯಗಳನ್ನು ಅವ್ಯಾಹತವಾಗಿ ಮುಂದುವರೆಸುತ್ತಿರುತ್ತಾನೆ. ಈ ಮೇಲೆ ಹೇಳಿದ ಮತ್ತು ಇನ್ನಿತರ ಕಾರಣಗಳಿಂದ ಅನೇಕ ಪ್ರಕರಣಗಳು ಹೊರಗೆ ಬರುವುದೇ ಇಲ್ಲ.
ಇಂತಹ ಸಂದರ್ಭದಲ್ಲಿ ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ತಮ್ಮ ಮೇಲೆ ಆದ ದೌರ್ಜನ್ಯ, ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವದು ಸಾಹಸವಲ್ಲವೇ? ಯಾರಾದರೂ ತಮ್ಮ ಸೇಡು ತೀರಿಸಲೆಂದೇ ಸಾರ್ವಜನಿಕವಾಗಿ ಹೇಳಿಕೊಂಡರೆ? ಈ #ಮಿಟೂ ಚಳವಳಿ ಬರೀ ‘ಗಣ್ಯೆ’ಯರಿಗೆ ಮಾತ್ರ ಸೀಮಿತವಾಗಿದೆಯೇ? ದೇಶದಾದ್ಯಂತ ನಡೆಯುತ್ತಿರುವ ಮಹಿಳಾ ಚಳವಳಿಯ ಮೇಲೆ ಯಾವ ಪರಿಣಾಮ ಬಿರುವುದು? ಸಕಾರಾತ್ಮಕ ಪರಿಣಾಮ ಬೀರುವುದೇ? ನಕಾರಾತ್ಮಕವಾಗಿರುವುದೇ?
#ಮಿಟೂ ಶುರುವಾದಾಗಿನಿಂದ ಮಹಿಳೆಯರು ಸಾರ್ವಜನಿಕವಾಗಿ ಬರೆದ ಬರಹಗಳನ್ನು ಓದಿದರೇ ಸಾಕು ನಮಗೆ ಗೊತ್ತಾಗುವುದು ಅವರು ಎಂತಹ ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು. ಆ ಎಲ್ಲಾ ಪರಿಸ್ಥಿತಿಗಳಲ್ಲೂ ಮಹಿಳೆಯಯರು ತಮ್ಮ ದೌರ್ಬಲ್ಯದ ಬಗ್ಗೆಯೂ ಬರೆದಿದ್ದಾರೆ. ಆ ಪರಿಸ್ಥಿತಿಯನ್ನು ಎದುರಿಸಲು ತಮಗೆ ಶಕ್ತಿಯಿರಲಿಲ್ಲ ಎಂದೂ ಬರೆದುಕೊಂಡಿದ್ದಾರೆ. ತಾವು ಅನುಭವಿಸಿದ ಇಂತಹ ನೋವಿನ, ದೌರ್ಬಲ್ಯದ, ಅಸಹಾಕತೆಯ ಕತೆಗಳನ್ನು ಎಲ್ಲರ ಮುಂದೆ ಬಿಚ್ಚಿಡಬೇಕಾದರೆ ಅದು ಧೈರ್ಯದ ಕೆಲಸವೇ ಸರಿ. ಈ ಕತೆಗಳನ್ನು ಓದಿದರೆ ಇವುಗಳ ಪ್ರಾಮಾಣಿಕತೆ ಬಗ್ಗೆಯೂ ಯಾರೂ ಸಂದೇಹಪಡುವಂತಿಲ್ಲ. ಪ್ರಾಮಾಣಿಕವಾಗಿಲ್ಲದೇ ಬರೀ ಸೇಡಿಗಾಗಿ ಬರೆದಿದ್ದರೆ ಅದರ ವಾಸನೆ ಖಂಡಿತವಾಗಿಯೂ ರಾಚುತ್ತಿತ್ತು. ಇನ್ನೊಂದು ಗಂಭೀರ ಪ್ರಶ್ನೆ, ಈ ಚಳವಳಿ ಬರೀ eಟiಣe ಸಮುದಾಯಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಇದರಿಂದ ಯಾವುದೇ ಸಮಗ್ರ ಬದಲಾವಣೆ ಆಗಲು ಸಾಧ್ಯವಿಲ್ಲ. ಹೌದು, ಸದ್ಯಕ್ಕೆ ಇಲ್ಲಿಯವರೆಗೆ ತಮ್ಮ ಕಿರುಕುಳದ ಕತೆಯನ್ನು ಬಿಚ್ಚಿಟ್ಟವರು ಇಂಗ್ಲಿಷ್ ಮಾತನಾಡುವ ಮೇಲ್ವರ್ಗದ ಮಹಿಳೆಯರು. ಆದರೆ ಇದರ ಪರಿಣಾಮ ಅನೇಕಕಡೆ ಆಗುತ್ತಿರುವುದೂ ಅಷ್ಟೇ ಸತ್ಯ. ಹಾಗೂ ಈ ‘ಗಣ್ಯೆ’ಯರೂ ನಮ್ಮ ಸಮಾಜದ ಅಂಗವೇ ಆಗಿದ್ದಾರೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಯಾವ ಒಂದು ವರ್ಗಕ್ಕೂ ಸೀಮಿತವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವರುಗಳು ‘ಗಣ್ಯೆ’ಯರಾಗಿದ್ದೂ ಇಂತಹ ಕಿರುಕುಳ ಅನುಭವಿಸಬೇಕಾದರೆ ನಮ್ಮ ಸಮಾಜದಲ್ಲಿ ಮಹಿಳೆಯರು ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಹಾಗೂ ಇವರುಗಳು ತೋರಿಸಿದ ಧರ್ಯ, ಸಾಹಸ ಬೇರೆಯವರಿಗೂ ಧೈರ್ಯತಂದುಕೊಡುತ್ತೆ ಎನ್ನುವ ನಂಬಿಕೆ ನನ್ನದು. ಹಾಗೂ ಈ #ಮಿಟೂ ಚಳವಳಿಯಿಂದಾಗಿ ಅನೇಕ ಪುರುಷರಿಗೆ ತಮಗಿರುವ ಠಿಡಿiviಟege ಅರ್ಥವಾಗುತ್ತಿದೆ; ಅನೇಕರು ತಮ್ಮ ಚಿಛಿಣioಟಿs ಗಳನ್ನು ಪ್ರಶ್ನಿಸುತ್ತಿದ್ದಾರೆ. ಒಂದು ರೀತಿಯ ಆತ್ಮಾವಲೋಕನ ಆಗುತ್ತಿರುವುದು ಸ್ಪಷ್ಟ. ಈ ಆತ್ಮಾವಲೋಕ ಈ ಚಳವಳಿಯ ಸಾಧನೆಯಲ್ಲವೇ? ಇನ್ನೊಂದು, ಎಮ್.ಜೆ. ಅಕ್ಬರ್‍ನಂತಹ ಹಿರಿಯ ಪತ್ರಕರ್ತ ಹಾಗೂ ರಾಜಕಾರಿಣಿಗೆ ಲೈಂಗಿಕ ಕಿರುಕುಳದ ಇತಿಹಾಸವೇ ಇದೆ. ಪತ್ರಿಕೋದ್ಯಮದಲ್ಲಿ ಒಂದೆರಡು ದಿನಗಳ ಕಾಲ ಕೆಲಸ ಮಾಡಿದ ಎಲ್ಲರಿಗೂ ಅವನೊಬ್ಬ ‘ಚಮಡಿ’ ಎಂದು ಗೊತ್ತು. ಆದರೂ ಅವನ ಕುಕರ್ಮಗಳು, ಅವನಂತಹ ಇನ್ನಿತರರ ಕುಕರ್ಮಗಳು ಅವ್ಯಾಹತವಾಗಿ ನಡೆಯುತ್ತಲೇ ಇದ್ದವು. ಈ ಚಳವಳಿಯ ನಂತರ ಅವೆಲ್ಲವೂ ನಿಂತಿಬಿಡುತ್ತವೆ ಎನ್ನುವುದು ಸತ್ಯವಲ್ಲ ಆದರೆ ಖಂಡಿತವಾಗಿಯೂ ಅವರೆಲ್ಲರೂ ಮುಂದಾಗಬಹುದಾದ ಪರಿಣಾಮಗಳ ಬಗ್ಗೆ ವಿಚಾರ ಮಾಡಿಯೇ ಮಾಡುತ್ತಾರೆ.
ಇನ್ನು ಇತರ ಮಹಿಳಾ ಚಳವಳಿಗಳ ಮೇಲೆ ಇದರ ಪರಿಣಾಮ. ಇದು ಮೇಲ್ವರ್ಗದ ಮಹಿಳೆಯರ ಚಳವಳಿಯಾದರೂ ಆ ಮಹಿಳೆಯರೂ ದೌರ್ಜನ್ಯಕ್ಕೊಳಗಾದವರು, ಅವರೂ ಆ ಪರಿಸ್ಥಿತಿಯಲ್ಲಿ ದುರ್ಬಲರೇ ಆಗಿದ್ದವರು ಹಾಗೂ ಇಂತಹ ವರ್ಗಗಳು ಪ್ರಾರಂಭಿಸಿದ್ದ ಚಳವಳಿಗಳು ಎಲ್ಲೆಡೆಗೂ ಪಸರಿಸಿದ ಉದಾಹರಣೆಗಳೂ ಇವೆ. ಇವರು ಮಾಡಿದ ಸಾಹಸದಿಂದ ಇತರ ವರ್ಗದ ಮಹಿಳೆಯರಿಗೆ ಧರ್ಯವನ್ನೇ ತಂದುಕೊಡುವುದು ಎನ್ನುವುದು ನನ್ನ ಬಲವಾದ ನಂಬಿಕೆ ಹಾಗೂ ಯಾವ ವರ್ಗದವರೇ ಆಗಿರಲಿ ಅವರೊಂದಿಗೆ ನಿಲ್ಲುವುದು ಸಮಾಜದ ಕರ್ತವ್ಯ. ಈ ಚಳವಳಿ ಮೇಲ್ವರ್ಗಕ್ಕೆ ಸೀಮಿತವಾಗುವುದೇ ಎನ್ನುವ ಪ್ರಶ್ನೆಗೆ ನನ್ನ ಉತ್ತರ- ಇಲ್ಲ, ಈಗಾಗಲೇ ಇದರ ಬಗ್ಗೆ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲೂ ಬಹಳಷ್ಟು ಚರ್ಚೆಯಾಗುತ್ತಿದೆ. ಹಾಗಾಗಿ ಇದರ ಪರಿಣಾಮ ಎಲ್ಲೆಡೆ ಆಗಬಹುದು. ಒಂದು ವೇಳೆ ಅಷ್ಟಕ್ಕೇ ಸೀಮಿತಗೊಂಡರೂ ಮತ್ತು ಇದೊಂದು ಅದ್ಭುತ ಪರಿಣಾಮ ಬೀರಿದ ಚಳವಳಿಯಲ್ಲವೇ? ಇನ್ನೆಷ್ಟು ದಿನ ಮುಂದುವರೆಯಬಹುದು? ಮುಂದುವರೆಯದಿದ್ದರೂ ಇದರಿಂದ ಈಗಾಗಲೇ ಆದ ಪರಿಣಾಮ ಕಡಿಮೆಯೇನಿಲ್ಲ. ಇದು ಹೀಗೆ ಮುಂದುವರೆಯಲಿ, ಸೀರೆ ಮತ್ತು ಮುಳ್ಳಿನ ಸಮೀಕರಣ ಸುಳ್ಳಾಗಲಿ.

– ರಾಜಶೇಖರ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...