Homeರಾಜಕೀಯರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

ರಫೇಲ್: ಕೇಂದ್ರಕ್ಕೆ ಮುಳುವಾದ ಮುಚ್ಚಿದ ಲಕೋಟೆ ಮತ್ತು ಬಿಜೆಪಿಯ ದ್ವಂದ್ವ ನಿಲುವು

- Advertisement -
- Advertisement -

ಏನಿದು ಮುಚ್ಚಿಟ್ಟ ಲಕೋಟೆ?
ಕೆಲವೊಮ್ಮೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದ ಸಂಗತಿಗಳನ್ನು ಕೋರ್ಟು ಮುಚ್ಚಿದ ಲಕೋಟೆಯಲ್ಲಿ ಕೊಡಲು ಕೇಳುತ್ತದೆ. ಅಥವಾ ಸರ್ಕಾರ ಯಾ ಕೇಸು ದಾಖಲಿಸಿದ ವಾದಿಯೇ ಅಂತಹ ಮುಚ್ಚಿದ ಲಕೋಟೆಯನ್ನು ಕೋರ್ಟಿಗೆ ನೀಡುತ್ತದೆ. ಈ ವಿಧಾನವನ್ನು ಒಪ್ಪುವುದೂ ಕಷ್ಟ. ಏಕೆಂದರೆ, ಅದೇ ಕೇಸಿನಲ್ಲಿ ಇರುವ ಎದುರುದಾರರಿಗೂ ನಿರಾಕರಿಸಲ್ಪಟ್ಟ ದಾಖಲೆಗಳು ನ್ಯಾಯಾಧೀಶರಿಗೆ ಮಾತ್ರ ಲಭ್ಯವಾಗುತ್ತದೆ. ಅಂತಿಮವಾಗಿ ನ್ಯಾಯಾಧೀಶರಿಗೆ ಲಭ್ಯವಾಗಿರುವ ‘ಪುರಾವೆ’ಗಳು ಸುಳ್ಳೂ ಇರಬಹುದು. ಅದರ ಕುರಿತು ತಮ್ಮ ವಿವರಣೆ ಹೇಳುವ ಅವಕಾಶವೂ ಎದುರುದಾರರಿಗಿಲ್ಲದೇ ತಪ್ಪು ತೀರ್ಪೂ ಸಹಾ ಬರಬಹುದು.
ಈ ಪ್ರಕರಣವು ಹಾಗೆಯೇ ಆಗಿರುವ ಎಲ್ಲಾ ಲಕ್ಷಣಗಳೂ ಇವೆ.

ತೀರ್ಪನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟಿಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್

ರಾಫೇಲ್ ಡೀಲ್‌ನಲ್ಲಿ ಮೂರು ಅಂಶಗಳು ಕೋರ್ಟಿನ ಮುಂದೆ ಇದ್ದವು. ಮೂಲ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಖರೀದಿ ಮಾಡಲು ಮೋದಿ ಸರ್ಕಾರ ಹೊರಟಿರುವುದು, ಈ ಡೀಲ್‌ನಲ್ಲಿ ಆಫ್‌ಸೆಟ್ ಪಾಲುದಾರನನ್ನಾಗಿ 7 ದಿನಗಳ ಹಿಂದಷ್ಟೇ ಹುಟ್ಟಿಕೊಂಡ ಅನಿಲ್ ಅಂಬಾನಿಯ ಕಂಪೆನಿಯನ್ನು ಒಳಗೊಂಡಿರುವುದು ಮತ್ತು ಸೂಕ್ತ ಪ್ರಕ್ರಿಯೆ ಅಳವಡಿಸದೇ ಖರೀದಿ ವ್ಯವಹಾರ ಒಪ್ಪಂದ ಮಾಡಿಕೊಂಡಿರುವುದು. ಮೊದಲೆರಡು ಅಂಶಗಳು ಯಾವುದೇ ಸರ್ಕಾರ ಅಥವಾ ಕಂಪೆನಿಯ ಆಂತರಿಕ ವ್ಯವಹಾರದಂತೆಯೂ ತೋರಬಹುದಾದ್ದರಿಂದ ಆ ಕುರಿತು ತಾನೇನೂ ಹೇಳಲು ಇಲ್ಲ ಎಂದು ನ್ಯಾಯಾಲಯವು ಹೇಳಬಹುದು; ಹೇಳಿದೆ. ಆದರೂ, ನ್ಯಾಯಾಲಯವು ಈ ಬಗ್ಗೆ ಖಚಿತವಾಗಿರಲು ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಕೇಳಿತು. ಅದರಲ್ಲಿ ದರಗಳ ವಿವರದ ಜೊತೆಗೆ, ಸೂಕ್ತ ಪ್ರಕ್ರಿಯೆಯನ್ನು ಅಳವಡಿಸಿರುವ ಕುರಿತು ಸರ್ಕಾರವು ವಿವರಗಳನ್ನು ನೀಡಿತು.

ಅದರಲ್ಲೇ ಸಿಎಜಿಗೂ ವಿವರ ನೀಡಿದ್ದೇವೆ; ಸಿಎಜಿಯ ವರದಿಯನ್ನು ಪಿಎಸಿ (ಸಂಸತ್ತಿನ ಲೆಕ್ಕ ಪತ್ರಗಳ ಸಮಿತಿ)ಗೂ ಸಲ್ಲಿಸಲಾಗಿದೆ ಇತ್ಯಾದಿ ಸುಳ್ಳುಗಳನ್ನು ಸರ್ಕಾರವು ಹೇಳಿತು. ಬಹುಶಃ ಮುಚ್ಚಿದ ಲಕೋಟೆಯಲ್ಲಿನ ವಿವರಗಳನ್ನು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಲಿಕ್ಕಿಲ್ಲ ಎಂದು ಸರ್ಕಾರದ ಆಲೋಚನೆಯಾಗಿರಬೇಕು. ಆದರೆ, ಸೂಕ್ತ ಪ್ರಕ್ರಿಯೆ ನಡೆದಿರುವುದು ತನಗೆ ಮನವರಿಕೆಯಾದ್ದರಿಂದಲೂ ‘ತಾನು ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಬಯಸಿತು. ಹಾಗಾಗಿ ಅದನ್ನು ತೀರ್ಪಿನಲ್ಲಿ ಉಲ್ಲೇಖಿಸಿಬಿಟ್ಟಿತು.

ಈ ಮೊಕದ್ದಮೆಯಲ್ಲಿ ಭಾಗಿಯಾಗಿರುವ ನ್ಯಾಯವಾದಿ ಪ್ರಶಾಂತ್‌ಭೂಷಣ್ ಅವರು ಮೊದಲಿಗೆ ಈ ವಿವರಗಳು ನಮಗೆ ಗೊತ್ತೇ ಇರಲಿಲ್ಲವಲ್ಲಾ ಎಂದು ಆಶ್ಚರ್ಯವ್ಯಕ್ತಪಡಿಸಿದರು. ನಂತರ ಆಶ್ಚರ್ಯವ್ಯಕ್ತಪಡಿಸುವ ಸರದಿ ಪಿಎಸಿ ಅಧ್ಯಕ್ಷರದ್ದಾಗಿತ್ತು. ಅಂತಹ ಯಾವ ವರದಿಯೂ ತಮಗೂ ಸಿಕ್ಕಿಲ್ಲವಲ್ಲಾ ಎಂದು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಲ್ಲದೇ, ಸಿಎಜಿ ಮತ್ತು ಸುಪ್ರೀಂಕೋರ್ಟಿಗೆ ಸರ್ಕಾರದ ಪರವಾಗಿ ಸುಳ್ಳನ್ನು ಹೇಳಿದ ಅಟಾರ್ನಿ ಜನರಲ್ ಇಬ್ಬರನ್ನೂ ಪಿಎಸಿ ಕರೆಸುತ್ತದೆಂದು ಹೇಳಿದರು.

ಇಷ್ಟು ಸಣ್ಣ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲದೇನಲ್ಲ. ಆದರೆ, ತಾನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟ ಅಂಶವು ಹೊರಗೆ ಬರಲಾರದು ಎಂಬ ತಪ್ಪು ಲೆಕ್ಕಾಚಾರ ಅದರದ್ದಾಗಿತ್ತು. ಈಗ ಬೇರೆ ದಾರಿಯೇ ಇಲ್ಲ. ಹಾಗಾಗಿ ಸಿಎಜಿ ವರದಿಯನ್ನು ಸಾಮಾನ್ಯವಾಗಿ ಪಿಎಸಿ ಪರಿಶೀಲಿಸುತ್ತದೆ ಎಂದು ತಾನು ಹೇಳಬಯಸಿದ್ದೆ, ಅದು ಈಗಾಗಲೇ ಪರಿಶೀಲಿಸಿದೆ ಎಂಬರ್ಥದಲ್ಲಿ ಟೈಪಿಂಗ್ ಎಡವಟ್ಟು ಅಷ್ಟೇ ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದೆ.

ಒಂದು ವೇಳೆ ಇದನ್ನು ಟೈಪಿಂಗ್ ಎಡವಟ್ಟು ಎಂದೇ ಇಟ್ಟುಕೊಂಡರೆ, ಸಿಎಜಿ ಹಾಗೂ ಪಿಎಸಿ ಪರಿಶೀಲಿಸಿದ ಮೇಲೆ ಪ್ರಕ್ರಿಯೆಯ ಕುರಿತು ಆಕ್ಷೇಪಣೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂಕೋರ್ಟು, ಈಗ ಅದರಲ್ಲಿ ಲೋಪವನ್ನು ಕಾಣಲೇಬೇಕು. ಆಗ ಕೇಂದ್ರ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಷ್ಟೇ.

ಅದೇನೇ ಇರಲಿ, ದೇಶದ ರಕ್ಷಣಾ ಇಲಾಖೆಗೆ ಸೇರಿದ ಇಂತಹ ದೊಡ್ಡ ಡೀಲ್‌ನ ಕುರಿತು ಇಷ್ಟೊಂದು ತಪ್ಪುಗಳ ನಡೆದಿರುವಾಗ, ಉನ್ನತ ಮಟ್ಟದ ತನಿಖೆ ಆಗದೇ ಹೋದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿರಲಾರದು.

ಜಂಟಿ ಸಂಸದೀಯ ಸಮಿತಿ: ಬಿಜೆಪಿಯ ದ್ವಂದ್ವ ನಿಲುವು

ಯುಪಿಎ ಅವಧಿಯ 2 ಜಿ ಸ್ಪೆಕ್ಟ್ರಂ ಹಗರಣ ಎಲ್ಲರಿಗೂ ಗೊತ್ತಿದೆ. ಆ ವಿಚಾರದಲ್ಲಿ ತನಿಖೆಯೂ ನಡೆಯಿತು; ಕೇಂದ್ರದಲ್ಲಿ ಮಂತ್ರಿಯಾಗಿದ್ದವರೊಬ್ಬರು ಜೈಲಿಗೂ ಹೋಗಿ ಬಂದರು. ಆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯೇ ರಚನೆಯಾಗಬೇಕು ಎಂದು ಬಿಜೆಪಿಯು ಪಟ್ಟು ಹಿಡಿಯಿತು. ಆಗಿನ ಅದರ ಸರ್ವೋಚ್ಚ ನಾಯಕ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದವು.

ಅದರ ನಂತರ ಭ್ರಷ್ಟಾಚಾರವೇ ಪ್ರಮುಖ ಇಶ್ಯೂ ಎಂದು ಬಿಜೆಪಿಯು ಹೇಳಿತು. ಎಲ್.ಕೆ.ಅಡ್ವಾಣಿಯವರು ದೇಶಾದ್ಯಂತ ಪ್ರವಾಸ ಹೊರಟರು. ಅಂತಹ ಒಂದು ಪ್ರವಾಸದ ಭಾಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲೂ ಒಂದು ಬೃಹತ್ ಸಭೆ ಆಯೋಜನೆಯಾಯಿತು. ಆ ಹೊತ್ತಿಗೆ ಜೈಲಿಗೆ ಹೋಗಿದ್ದ ಯಡಿಯೂರಪ್ಪನವರ ವಿಚಾರವನ್ನು ದೂರವಿಟ್ಟಿದ್ದಲ್ಲದೇ, ಯಡಿಯೂರಪ್ಪನವರ ಸಮೀಪವರ್ತಿಗಳನ್ನೂ ದೂರವಿಡಲಾಗಿತ್ತು.

ಅದೇನೇ ಇರಲಿ, ಜಂಟಿ ಸಂಸದೀಯ ಸಮಿತಿಯಿಂದ ಮಾತ್ರ ಇದರ ಸರಿಯಾದ ತನಿಖೆ ಸಾಧ್ಯ ಎಂದು ಆಗ ಬಿಜೆಪಿ ಹೇಳಿತ್ತು. ಈಗ ಖರ್ಗೆಯವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಿಂದ ಪರಿಶೀಲನೆ ಆಗಿದೆ ಎಂದು ಆಗ ಯುಪಿಎ ಸರ್ಕಾರವು ಹೇಳಿತ್ತು. ಆದರೆ, ಇವೆರಡರ ಪಾತ್ರ ಬೇರೆ ಬೇರೆಯಾಗಿದ್ದು, ಜೆಪಿಸಿ (ಜಂಟಿ ಸಂಸದೀಯ ಸಮಿತಿ)ಯೇ ಇದಕ್ಕೆ ಸರಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.

‘ನಮ್ಮ ಬೇಡಿಕೆ – ಜೆಪಿಸಿ’ ಎಂದು ಹೇಳುವ ಪ್ಲಕಾರ್ಡ್ಗಳನ್ನು ಇಟ್ಟುಕೊಂಡು ಆಗ ಬಿಜೆಪಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಈಗ ರಾಫೇಲ್ ಡೀಲ್‌ನ ವಿಚಾರದಲ್ಲಿ ಮಾತ್ರ ಜಂಟಿ ಸಂಸದೀಯ ಸಮಿತಿಯ ರಚನೆ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷವಾದ ಬಿಜೆಪಿಯು ಪಟ್ಟು ಹಿಡಿದಿದೆ. ಅದರಲ್ಲೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಡೀಲ್‌ನಲ್ಲಿ ಭಾಗಿ ಎಂಬ ಆರೋಪವನ್ನು ಮಾಡಲಾಗಿದೆ ಹಾಗೂ ಮೇಲ್ನೋಟಕ್ಕೆ ಹಲವು ಅಂಶಗಳನ್ನು ಅದನ್ನು ಸಮರ್ಥಿಸುವಂತೆ ಇರುವಾಗ ಬಿಜೆಪಿಯ ಈ ಹಿಂದೇಟು ಅನುಮಾನಗಳನ್ನು ದೃಢೀಕರಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...