Homeಅಂಕಣಗಳುಸಂಪಾದಕೀಯ

ಸಂಪಾದಕೀಯ

- Advertisement -
- Advertisement -

ಕವಿದ ಕತ್ತಲ ನಡುವೆ ಬೆಳಕಿನ ಭರವಸೆಗಳು

ಸಂಪಾದಕೀಯ ತಂಡದ ಪರವಾಗಿ
@ ದೊಡ್ಡಿಪಾಳ್ಯ ನರಸಿಂಹಮೂರ್ತಿ

ಹಸುಗೂಸು ಆಸಿಫಾಳ ಮೇಲೆ ನಡೆದ ಆ ಕ್ರೌರ್ಯ ಕಲ್ಲುಹೃದಯಗಳನ್ನೂ ಕಲಕಿಬಿಟ್ಟಿದೆ. ಸೂಕ್ಷ್ಮಸಂವೇದನೆಯ ಅದೆಷ್ಟೋ ಮಂದಿ ಈ ಆಘಾತದ ವಿವರ ಕೇಳಿ ಮಂಕುಬಡಿದವರಂತಾಗಿದ್ದಾರೆ. ಆಸಿಫಾಳ ಪ್ರಸ್ತಾಪ ಬಂದಾಕ್ಷಣ ತೀವ್ರ ವ್ಯಾಕುಲತೆಗೆ ಜಾರುವವರಿದ್ದಾರೆ. ‘ಪ್ಲೀಸ್, ಆ ವಿಷ್ಯ ನಿಲ್ಸಿ, ಮತ್ತೆ ನೆನಪಿಸಬೇಡಿ’ ಎಂದು ಮರೆಯಲೆತ್ನಿಸುವವರೂ ಇದ್ದಾರೆ. ಹೌದು, ಇವೆಲ್ಲಾ ಮನುಷ್ಯರ ಸಹಜ ಪ್ರತಿಕ್ರಿಯೆಗಳು.

ಆದರೆ ಪಾತಕಿಗಳ ಪರವಾಗಿ ನಿಂತು ಆ ಮುಗ್ದ ಕೂಸಿನ ಮೇಲೆ ನಡೆದ ಕ್ರೌರ್ಯವನ್ನು ಮುಚ್ಚಿಹಾಕಲು ಹರಸಾಹಸಪಟ್ಟ ಕಥುವಾದ ಪೊಲೀಸರೂ ಮನುಷ್ಯರೇ ತಾನೆ? ಭಾರತ್ ಮಾತಾ ಕಿ ಜೈ ಘೋಷಣೆಯ ಅಬ್ಬರದಡಿ ನ್ಯಾಯದ ಕೂಗನ್ನು ಮುಚ್ಚಿಹಾಕಲು ಹೆಣಗುತ್ತಿರುವವರು, ತ್ರಿವರ್ಣದ್ವಜವನ್ನು ಪಟಪಟಿಸಿ ಅದರಡಿಯಲ್ಲಿ ಪಾತಕಿಗಳಿಗೆ ರಕ್ಷಣೆ ಒದಗಿಸಿದ್ದವರಿಗೂ ಕೂಡ ಮನುಷ್ಯ ರೂಪವೇ ಇತ್ತಲ್ಲಾ? ಅತ್ಯಾಚಾರಿ, ಕೊಲೆಗಡುಕರ ಪರವಾಗಿ ಭಾರೀ ರ್ಯಾಲಿ ಏರ್ಪಡಿಸಿದ ಸಂಘಿ ಕೂಟದ ‘ಹಿಂದೂ ಏಕತಾ ಮಂಚ್’ನವರ ಅಸಲಿಯತ್ತಾದರೂ ಏನು? ‘ಯಾರೊಬ್ಬರನ್ನೂ ಅರೆಸ್ಟ್ ಮಾಡುವಂತಿಲ್ಲ’ ಎಂದು ಬಿಜೆಪಿಯ ಕೈಗಾರಿಕಾ ಸಚಿವ ಚಂದ್ರಪ್ರಕಾಶ್ ಗಂಗ ಈ ಬಹಿರಂಗ ರ್ಯಾಲಿಗಳಲ್ಲೇ ಧಮಕಿ ಹಾಕುತ್ತಾನೆಂದರೆ ಅಲ್ಲಿ ಎಂಥಾ ವ್ಯವಸ್ಥೆ ಇರಬಹುದು? ‘ಒಬ್ಬ ಹುಡುಗಿಯಷ್ಟೇ ಸತ್ತಿರೋದು, ಇನ್ನೂ ಬಹಳ ಹೆಣ್ಣುಮಕ್ಕಳು ನಮ್ಮ ಮುಂದೆಯೇ ಇದ್ದಾರೆ’ ಎಂದು ಉಗ್ರಹಿಂದುತ್ವದ ಭಾಷಣ ಮಾಡಿ ಘೋರಪಾತಕಗಳಿಗೆ ಬಹಿರಂಗ ಪ್ರಚೋದನೆ ನೀಡಿದ ಲಾಲ್‍ಸಿಂಗ್ ಆ ರಾಜ್ಯದ ಅರಣ್ಯ ಸಚಿವನೆಂದರೆ ನಂಬುವುದಾದರೂ ಹೇಗೆ?

ಕಥುವಾ ಮತ್ತು ಉನ್ನಾವೊಗಳಲ್ಲಿ ಪಾತಕಿಗಳು, ಪೊಲೀಸರು ಮತ್ತು ಸರ್ಕಾರ ಎಲ್ಲರೂ ಒಂದೇ ಗ್ಯಾಂಗಿನ ಸದಸ್ಯರೆಂಬಂತೆ ವರ್ತಿಸಿದ್ದಾರೆ. ಇಷ್ಟು ಸಾಲದು ಎಂಬಂತೆ ಕೋಮುವ್ಯಾಧಿ ವೈರಸ್ ಹರಡುತ್ತಿರುವ ಶಕ್ತಿಗಳು ಈ ಪಾತಕಗಳಿಗೆ ಸಾಮಾಜಿಕ ಬೆಂಬಲ ಕೂಡಿಸುವ ಪಾಪದಲ್ಲಿ ತೊಡಗಿವೆ. ದೇಶಾದ್ಯಂತ ಈ ಜಾಲ ವೇಗವಾಗಿ ವಿಸ್ತರಿಸುತ್ತಿದೆ. ಹೀಗೇ ಮುಂದುವರೆದರೆ ಮನುಷ್ಯತ್ವಕ್ಕೆ ಉಳಿಗಾಲವಿದೆಯೆ? ನಮ್ಮ ಪ್ರಜಾತಂತ್ರಕ್ಕೆ ಭವಿಷ್ಯವಿದೆಯೆ ಎಂಬ ಆತಂಕ ಕಾಡುತ್ತದೆ. ನಾವು ಸಿನಿಕತೆಗೆ ಜಾರುವುದು ಇಂಥ ಸನ್ನಿವೇಶಗಳಲ್ಲೇ.

ಕೋರ್ಟ್ ಆವರಣದಲ್ಲಿ ದೀಪಿಕಾ ಸಿಂಗ್

ಇಂಥಾ ಕರಾಳ ಸನ್ನಿವೇಶದಲ್ಲೂ ಆಸಿಫಾಳ ಪೋಷಕರ ಪರ ನ್ಯಾಯಾಲಯದಲ್ಲಿ ದೃಡವಾಗಿ ಹೋರಾಡಿದ ಯುವ ವಕೀಲೆ ದೀಪಿಕಾ ಸಿಂಗ್ ರಜಾವತ್ ನಮಗೆ ಭರವಸೆಯ ಬೆಳಕಾಗಿ ಕಾಣುತ್ತಾರೆ. ಈ ಕೇಸು ಕೈಗೆತ್ತಿಕೊಂಡಿದ್ದಕ್ಕಾಗಿ ಸೋದರಿ ದೀಪಿಕಾರನ್ನು ಹಿಂದೂವಿರೋಧಿಯೆಂದು ಆರೋಪಿಸಿ ಹಿಂದೂ ಏಕತಾ ಮಂಚ್ ಗದ್ದಲವೆಬ್ಬಿಸಿತು. ಅವರ ಓಡಾಟಕ್ಕೇ ಆತಂಕ ಒಡ್ಡಲಾಯ್ತು. ಅತ್ಯಾಚಾರ ಮಾಡಿ ಕೊಲ್ಲುವ ಬೆದರಿಕೆಗಳೂ ಬಂದವು.

ದೀಪಿಕಾಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕೊಟ್ಟಿದೆಯೆಂದರೆ ಆಕೆ ಎದುರಿಸುತ್ತಿರುವ ಪರಿಸ್ಥಿತಿಯನ್ನು ಯಾರಾದರೂ ಗ್ರಹಿಸಬಹುದು. ‘ಆಸಿಫಾ ನನ್ನ ಮಗಳು, ಆಕೆಯ ಪರವಾಗಿ ನನ್ನ ಉಸಿರಿರುವವರೆಗೂ ಹೋರಾಡುತ್ತೇನೆ’ ಎಂದ ದೀಪಿಕಾ ನಮ್ಮ ಭರವಸೆ.

ಈ ಪ್ರಕರಣದಲ್ಲಿ ಪಾತಕಿಗಳನ್ನು ಪತ್ತೆಹಚ್ಚಿ, ಕಂಬಿಗಳ ಹಿಂದೆ ಕಳಿಸುವಲ್ಲಿ ಬಹುಮುಖ್ಯಪಾತ್ರ ವಹಿಸಿದವರು ಎಸ್‍ಐಟಿಯ ಡಿವೈಎಸ್‍ಪಿ ಶ್ವೇತಾಂಬರಿ ಶರ್ಮ. ಅವರ ಮಾತುಗಳನ್ನೇ ಕೇಳೋಣ.

“ಬಹುತೇಕ ಆರೋಪಿಗಳು ಬ್ರಾಹ್ಮಣರೇ ಆಗಿದ್ದುದರಿಂದ ಅವರು ತಮ್ಮ ಸರ್‍ನೇಮ್‍ಗಳನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ನಾವೂ ನೀವೂ ಒಂದೇ ಜಾತಿಯವರು, ಒಂದೇ ಧರ್ಮದವರು. ಆದ್ದರಿಂದ ಆ ಮುಸ್ಲಿಂ ಹುಡುಗಿಯ ರೇಪ್ & ಮರ್ಡರ್ ಕೇಸಿನಿಂದ ತಮ್ಮನ್ನು ತಪ್ಪಿಸಬೇಕೆಂದು ನಾನಾ ವಿಧಾನದಲ್ಲಿ ಪ್ರಭಾವ ಬೀರಲು ಯತ್ನಿಸಿದರು. ಪೊಲೀಸ್ ಅಧಿಕಾರಿಯಾಗಿರುವ ನನಗೆ ಯಾವುದೇ ಧರ್ಮವಿಲ್ಲ, ನಾನು ತೊಟ್ಟಿರುವ ಸಮವಸ್ತ್ರವೇ ನನ್ನ ಧರ್ಮ ಎಂದು ಅವರಿಗೆ ಹೇಳಿ ಕಳಿಸಿದೆ.”

ರಮೇಶ ಕುಮಾರ್ ಜಲ್ಲಾ

ಈ ತನಿಖೆಯ ಮೇಲ್ವಿಚಾರಣಾಧಿಕಾರಿ ಎಸ್‍ಪಿ ರಮೇಶ್ ಕುಮಾರ್ ಜಲ್ಲಾ ಅತಿ ಸೂಕ್ಷ್ಮ ಕೇಸುಗಳನ್ನು ನಿಭಾಯಿಸಿದ ಅನುಭವಿ. ಅವರು ಆಸಿಫಾ ಕೇಸನ್ನು ಎಷ್ಟು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ‘ಎರಡು ತಿಂಗಳು ಹಗಲಿರುಳು ಶ್ರಮಿಸಿದ ನಂತರ ಅಂತಿಮವಾಗಿ ಚಾರ್ಜ್‍ಶೀಟ್ ದಾಖಲಿಸಲು ಸಾಧ್ಯವಾಯ್ತು. ನಂತರವಷ್ಟೇ ಕಣ್ತುಂಬಾ ನಿದ್ದೆ ಮಾಡಿದ್ದು’ ಎಂದು ವಿವರಿಸುತ್ತಾರೆ. ಶಿಸ್ತಿನ ಈ ಅಧಿಕಾರಿ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಖ್ಯಾತಿ ಪಡೆದಿರುವವರು.

ಮಾನವೀಯತೆ ಹಾಗೂ ಕಾನೂನು ಆಡಳಿತದ ಪರವಾಗಿ ದಿಟ್ಟವಾಗಿ ನಿಂತ ಇಂಥಾ ಮಹಾನ್‍ವ್ಯಕ್ತಿಗಳ ಪ್ರಯತ್ನದಿಂದಲೇ ನಮ್ಮ ಸಮಾಜ ಇಷ್ಟಾದರೂ ಸಹ್ಯವಾಗಿ ಉಳಿದುಕೊಂಡಿದೆ. ಈ ದಿಟ್ಟ ದನಿಗಳಿಗೆ ಈಗ ದೇಶದಾದ್ಯಂತ ಕೋಟ್ಯಾಂತರ ಜನರು ಮಾರ್ದನಿಯಾಗಿದ್ದಾರೆ. ಮಾನವೀಯ ಭವಿಷ್ಯದ ಕನಸಿಗೆ ಮತ್ತಷ್ಟು ಕಸುವು ತುಂಬುತ್ತಿದ್ದಾರೆ.

ಕೊನೆಯದಾಗಿ, ಇನ್ಸ್‍ಟಾಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಪತ್ರ ಬರೆದ ಒಬ್ಬ ಮೋದಿ ಅಭಿಮಾನಿಯ ಮಾತನ್ನು ಕೇಳೋಣ.
“ಮಾನ್ಯ ಪ್ರಧಾನಿಯವರೆ,
ತಾವು ರಾತ್ರೋರಾತ್ರಿ ಕರೆನ್ಸಿ ನೋಟು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿರಿ.
ರಾತ್ರೋರಾತ್ರಿ ಸರ್ಕಾರಗಳನ್ನೂ ಬದಲಾಯಿಬಿಡುತ್ತಿದ್ದೀರಿ.
ನೀವೀಗ ಈ ಅತ್ಯಾಚಾರದ ಸಂಸ್ಕøತಿಯನ್ನು ಬದಲಾಯಿಸದಿದ್ದರೆ, ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ಮಾಡದಿದ್ದರೆ, ಆಗ ನಾನು ನನ್ನ ಓಟನ್ನು ರಾತ್ರೋರಾತ್ರಿ ಬದಲಿಸಬಲ್ಲೆ. 2019 ಬಹಳ ದೂರವೇನಿಲ್ಲ.”

ತಾವು ಬೆಂಬಲಿಸುವ ಬಿಜೆಪಿ ಪಕ್ಷದ ಮುಖಂಡರೇ ಘೋರ ಕೃತ್ಯಗಳಲ್ಲಿ ತೊಡಗಿದಾಗ, ಅದನ್ನು ಖಂಡಿಸಿ ಮಾನವೀಯತೆಯ ಪರವಾಗಿ ನಿಂತ ಸಹಸ್ರ ಸಹಸ್ರ ಮನುಷ್ಯರಿದ್ದಾರೆ. ಭವಿಷ್ಯದಲ್ಲಿ ಭರವಸೆ ಇಡೋಣ. ದನಿಗೂಡಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...