Homeಅಂಕಣಗಳುದಕ್ಷಿಣ ಭಾರತದ ಕರ್ನಾಟಕದಲ್ಲಿ ನೆಲೆಕಂಡಿರುವ ಬಿಜೆಪಿ ಈ ಬಾರಿಯೂ ತನ್ನ ನೆಲೆ ಉಳಿಸಿಕೊಳ್ಳುವುದೇ?

ದಕ್ಷಿಣ ಭಾರತದ ಕರ್ನಾಟಕದಲ್ಲಿ ನೆಲೆಕಂಡಿರುವ ಬಿಜೆಪಿ ಈ ಬಾರಿಯೂ ತನ್ನ ನೆಲೆ ಉಳಿಸಿಕೊಳ್ಳುವುದೇ?

- Advertisement -
- Advertisement -

ಎ.ನಾರಾಯಣ್ |

ಒಂದು ರೀತಿಯಲ್ಲಿ ಯೋಚಿಸಿದರೆ ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯ ಸೋಲು ಗೆಲುವುಗಳನ್ನು ಸುಲಭವಾಗಿ ಊಹಿಸಿಬಿಡಬಹುದು. ಹೋದಬಾರಿ,  ಅಂದರೆ 2014 ರಲ್ಲಿ ದೇಶಾದ್ಯಂತ ನರೇಂದ್ರ ಮೋದಿ ಪರ ಅಲೆ ಇತ್ತು. ಅದು ಕರ್ನಾಟಕದಲ್ಲೂ ಕಾಣಿಸಿಕೊಂಡಿತ್ತು. ಆ ಕಾರಣಕ್ಕೆರಾಜ್ಯದಲ್ಲಿರುವ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು (ಆ ನಂತರ ಉಪ ಚುನಾವಣೆಯಲ್ಲಿ ಒಂದು ಸ್ಥಾನ ಕಳೆದುಕೊಂಡಿತು). ಈ ಬಾರಿ ನರೇಂದ್ರ ಮೋದಿ ಪರ ಅಲೆಯ ಅಬ್ಬರ ಕೊಂಚ ಕುಸಿದಿದೆ. ಈ ಕುಸಿತವನ್ನು ಸರಿದೂಗಿಸಬಲ್ಲಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ರಾಜ್ಯಮಟ್ಟದ ನಾಯಕತ್ವ ಬೆಳೆದಿಲ್ಲ. ಆದುದರಿಂದ ಬಿಜೆಪಿ ಹೋದ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎನ್ನುವುದು ತರ್ಕಬಧ್ದ ಯೋಚನೆಯಾಗುತ್ತದೆ

ಇನ್ನು ಕಾಂಗ್ರೆಸ್ಸಿನ ವಿಚಾರಕ್ಕೆ ಬಂದರೆ ಹೋದ ಬಾರಿ ಲೋಕಸಭಾ ಚುನಾವಣೆನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಚುನಾವಣೆಗೆ ಒಂದುವರ್ಷಕ್ಕೆ ಮೊದಲು ಮುಖ್ಯಮಂತ್ರಿ ಸ್ಥಾನವೇರಿದ್ದ ಸಿದ್ಧರಾಮಯ್ಯ ಅವರ ನಾಯಕತ್ವದ ವರ್ಚಸ್ಸು ಇನ್ನೂ ಊರ್ಧ್ವಮುಖಿಯಾಗಿತ್ತು. ಆದುದರಿಂದಲೇ ಮೋದಿ ಅಲೆಯ ಹೊರತಾಗಿಯೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ  2009ರ ಚುನಾವಣೆಗಿಂತ ಕೊಂಚ ಹೆಚ್ಚಿನ ಸಾಧನೆ ತೋರಿಸಲು ಸಾಧ್ಯವಾಗಿದ್ದು. 2009ರಲ್ಲಿ ಕೇವಲ ಆರು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 2014ರಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿತು (ಉಪಚುನಾವಣೆಯಲ್ಲಿ ಇನ್ನೊಂದು ಸ್ಥಾನ ಗೆದ್ದುಕೊಂಡು ಈಗ ೧೦ ಸ್ಥಾನಗಳನ್ನು ಹೊಂದಿದೆ).ಈ ಬಾರಿ ಕಾಂಗ್ರೆಸ್ ರಾಜ್ಯದ ಮಟ್ಟಿಗೆ 2014ರಲ್ಲಿ ಇದ್ದಷ್ಟು ಗಟ್ಟಿಯಾಗಿಲ್ಲ. ರಾಷ್ಟ್ರಮಟ್ಟದಲ್ಲಿ ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಕಾಂಗ್ರೆಸ್ ಚಿಗುತುಕೊಂಡಿದೆಯಾದರೂ ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಎಷ್ಟು ಅನುಕೂಲವಾಗಲಿದ್ದೇ ಅಂತ ಲೆಕ್ಕಹಾಕುವುದು ಕಷ್ಟ.ಆದರೆ ಕಾಂಗ್ರೆಸ್ಸಿನ ಅದೃಷ್ಟವೋ, ದುರಾದೃಷ್ಟವೋ ಅದು ಈ ಬಾರಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿಲ್ಲ. ಹೋದ ಬಾರಿ ಎರಡು ಸೀಟುಗಳನ್ನು ಗೆದ್ದುಕೊಂಡಿದ್ದ ಜಾತ್ಯಾತೀತ ಜನತಾದಳ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಎದುರಿಸಲಿದೆ. ಕುಸಿದು ಹೋಗಿರುವ ರಾಜ್ಯ ಕಾಂಗ್ರೆಸ್ಸಿನ ಬಲವನ್ನು ಜಾತ್ಯಾತೀತ ಜನತಾದಳದ ಜತೆಗಿನ ಮೈತ್ರಿ ಎಷ್ಟರ ಮಟ್ಟಿಗೆ ಮೇಲೆತ್ತಲಿದೆ ಎನ್ನುವುದು ಮೋದಿಯವರನ್ನು ಇನ್ನೊಮ್ಮೆ ಪ್ರಧಾನಮಂತ್ರಿ ಪಟ್ಟಕ್ಕೇರಿಸಲು ಕಂಕಣಬದ್ಧ್ದವಾಗಿರುವ  ಬಿಜೆಪಿಗೆ ಕರ್ನಾಟಕ ಎಷ್ಟು ಸೀಟುಗಳನ್ನು ನೀಡಲಿದೆ ಎನ್ನುವುದನ್ನು ನಿರ್ಧರಿಸಲಿದೆ.ಹಾಗೆಯೇ, ಇದು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಮೈಕೊಡವಿ ಬಿಜೆಪಿಯೊಂದಿಗೆ ಸೆಣಸಲು ಬಯಸಿರುವ ಕಾಂಗ್ರೆಸ್ಸಿಗೂ ಕರ್ನಾಟಕ ಎಷ್ಟು ಸೀಟುಗಳನ್ನು ನೀಡಲಿದೆ ಎನ್ನುವುದನ್ನೂ ನಿರ್ಧರಿಸಲಿದೆ.

ಕರ್ನಾಟಕದ ಮಟ್ಟಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳೆರಡು ಮೈತ್ರಿಕೂಟ ರಚಿಸಿಕೊಂಡು ಚುನಾವಣಾ ಕಣಕ್ಕಳಿಯುತ್ತಿರುವುದು ಇದೇ ಮೊದಲು. ಹಾಗೆಂದು ಈ ಮೈತ್ರಿಯಲ್ಲಿ ಹಲವಾರು ಸೂಕ್ಷ್ಮಗಳಿವೆ. ಜನತಾದಳ ಪ್ರಬಲವಾಗಿರುವುದು ದಕ್ಷಿಣ ಕರ್ನಾಟಕದ ಕೆಲ ಭಾಗಗಲ್ಲಿ ಮಾತ್ರ. ಉತ್ತರ ಕರ್ನಾಟಕ ಮಟ್ಟಿಗೆ ಜನತಾದಳದ ಮೈತ್ರಿ ಬಹುತೇಕ ಹೆಸರಿಗಷ್ಟೇ. ಅಷ್ಟರಮಟ್ಟಿಗೆ ಇದೊಂದು ಭಾಗಶ ಮೈತ್ರಿ. ದಕ್ಷಿಣ ಕರ್ನಾಟಕದಲ್ಲಿ ಎರಡೂ ಪಕ್ಷಗಳು ಸೀಟು ಹಂಚಿಕೆಯಲ್ಲಿ ತೋರುವ ಉದಾರತೆ ಮತ್ತು ವ್ಯೂಹಾತ್ಮಕತೆ ಮೈತ್ರಿಯ ಲಾಭನಷ್ಟಗಳನ್ನು ನಿರ್ಧರಿಸಲಿದೆ. ಬಲಾಬಲಗಳಾಚೆಗೆ  ನೋಡಿದರೆ ಈ ಮೈತ್ರಿಯ ಪರಿಣಾಮದಿಂದ  ಬಿಜೆಪಿ ಮತ್ತು ಜಾತ್ಯತೀತ ಮತಗಳು ಮೊಟ್ಟಮೊದಲಿಗೆ ನೇರವಾಗಿ ಮುಖಾಮುಖಿಯಾಗಲಿವೆ. ಕರ್ನಾಟಕದಲ್ಲಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸೆಣಸಿದಾಗಲೆಲ್ಲಾ ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ ಮತ್ತು ಜನತಾ ದಳಗಳ ಮಧ್ಯೆ ಹಂಚಿಹೋಗುತಿದ್ದವು ಎಂದು ನಂಬಲಾಗುತಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜನತಾದಳಗಳು ಒಂದಾಗಿ ಜಾತ್ಯಾತೀತ ಮತಗಳಿಗೊಂದು ವೇದಿಕೆ ಕಲ್ಪಿಸಿರುವುದರಿಂದ, ರಾಜ್ಯದಲ್ಲಿ ಜಾತ್ಯಾತೀತ ಮತಪೆಟ್ಟಿಗೆ ನಿಜಕ್ಕೂ ಎಷ್ಟು ದೊಡ್ಡದಾಗದೆ ಎನ್ನುವುದನ್ನು ಈ ಚುನಾವಣೆ ತೋರಿಸಲಿದೆ.

ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಕನಿಷ್ಠ ನೆಲೆಯೂ ಇಲ್ಲ. ಆದುದರಿಂದ ಕರ್ನಾಟಕದಲ್ಲಿ ಸಾಧ್ಯವಾದಷ್ಟು ಹೆಚ್ಚು ಸೀಟುಗಳನ್ನು ಗೆಲ್ಲುವುದು ಆ ಪಕ್ಷಕ್ಕೆ ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಪ್ರತಿಷ್ಠೆಯ ದೃಷ್ಟಿಯಿಂದಲೂ ಅತ್ಯಗತ್ಯ. ಕರ್ನಾಟಕದಲ್ಲಿ ಪಕ್ಷದ ಸಾಧನೆ ಸೊರಗಿದರೆ ನರೇಂದ್ರ ಮೋದಿಯ ಕಾಲದ ಬಿಜೆಪಿ ಕೇವಲ ಉತ್ತರದ ಮಾಯೆಯಾಗಿ ಉಳಿದುಬಿಡುತ್ತದೆ.ಎಂಬ ಅಭಿಪ್ರಾಯ ಇನ್ನಷ್ಟೂ ಬಲಗೊಳ್ಳಲಿದೆ. ಹೀಗಾಗದಂತೆ ತಡೆಯಲು ಬಿಜೆಪಿ ಸಾಧ್ಯವಾದ ಎಲ್ಲಾ ಅಸ್ತ್ರಗಳನ್ನೂ ಇಲ್ಲಿ ಪ್ರಯೋಗಿಸಲಿದೆ.  ಹಾಗೆ ನೋಡಿದರೆಈ ತನಕ  ಮೋದಿಯ ಮಾಯಾಜಾಲ ಕರ್ನಾಟಕದ ಮಟ್ಟಿಗೆ ಮತದಾರನ್ನು ದೊಡ್ಡ ಮಟ್ಟಿಗೆ ಮರುಳು ಮಾಡಿಲ್ಲ ಅಂತಲೇ ಹೇಳಬೇಕಾಗುತ್ತದೆ. ಕರ್ನಾಟಕದಲ್ಲಿ ಬಿಜೆಪಿಯ ಅತ್ಯುತ್ತಮ ಸಾಧನೆ 2009 ರಲ್ಲಿ. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮತ್ತೊಮ್ಮೆ ಅಧಿಕಾರ ಪಡೆಯುವಕನಸುಕಾಣುತಿದ್ದ  ಅಟಲ್ ಬಿಹಾರಿ ವಾಜಪೇಯೀ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಸೋತು ಅಧಿಕಾರ ಕಳೆದುಕೊಂಡ ಆ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಮಾತ್ರ ಬಿಜೆಪಿಯನ್ನು ದೊಡ್ಡ ಮಟ್ಟಿಗೆ ಕೈಹಿಡಿದಿದ್ದರು. ಎಲ್ಲಿಯೂ ಇಲ್ಲದ ವಾಜಪೇಯೀ ಅಲೆಯೊಂದು  ಆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಣಿಸಿಕೊಂಡಿತ್ತು. 2014 ರಲ್ಲಿ ದೇಶಾದ್ಯಂತ ಮೋದಿ ಅಲೆ ದೊಡ್ಡದಾಗಿ ಕೆಲಸ ಮಾಡಿತು. ಕೆಲವು ರಾಜ್ಯಗಳಲ್ಲಿ ಎಲ್ಲಾ ಸೀಟುಗಳನ್ನು ಬಿಜೆಪಿ ಬಾಚಿಕೊಂಡಿತು. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ವಾಜಪೇಯೀ ಕಾಲದ ಸಾಧನೆಯನ್ನು ಮೀರುವುದು ಬಿಡಿ, ಸರಿದೂಗಿಸಲೂ ಸಾಧ್ಯವಾಗಲಿಲ್ಲ. ಅದು 2009 ರಲ್ಲಿ ಗಳಿದ್ದಕ್ಕಿಂತ ಮೂರು ಸ್ಥಾನಗಳನ್ನು ಕಡಿಮೆ ಪಡೆಯಿತು.  ಕಾಂಗ್ರೆಸ್ಸಿಗಿಂತ ಹೆಚ್ಚು ಸ್ಥಾನ ಪಡೆದುಕೊಂಡದ್ದೇ ಅದರ ಸಾಧನೆಯಾಯಿತು.ಅಂದರೆ ಮೋದಿ ಅಲೆ ಇಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಕೆಲಸ ಮಾಡಲಿಲ್ಲ ಎಂದಾಯಿತು. 2019 ರಲ್ಲಿ ವಿಧಾನ ಸಭಾ ಚುನಾವಣಾ ನಡೆದಾಗ ಮತ್ತೊಮ್ಮೆ ಮೋದಿಯವರ ವರ್ಚಸ್ಸು ಕರ್ನಾಟಕದಲ್ಲಿ ಪರೀಕ್ಷೆ ಎದುರಿಸಿತು. ಫಲಿತಾಂಶ ಬಂದಾಗ ಕಂಡು ಬಂಡ ಸತ್ಯ ಮಾತ್ರ ಮೋದಿ ಅಭಿಮಾನಿಗಳ ಪಾಲಿಗೆ ಆಶಾದಾಯಕವಾಗಿರಲಿಲ್ಲ. ಯಾಕೆಂದರೆ  ಮೋದಿ ಬಿಜೆಪಿಯ ಬಾನಂಗಳದಲ್ಲಿಪ್ರಖರವಾಗಿ  ಉದಯಿಸವ ಮೊದಲೇ ನಡೆದ್ದಿದ್ದ 2008ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಕೂಡಾ  ಮೋದಿ ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಸೆಣಸಿದ 2018ರಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲಾಗಲಿಲ್ಲ. 2008ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆದು ಬಿಜೆಪಿಗೆ 110ಸ್ಥಾನಗಳು ಲಭಿಸಿದ್ದರೆ, 2018ರಲ್ಲಿ ಮೋದಿಯ ವರ್ಚಸ್ಸು ದೇಶಾದ್ಯಂತ ಪ್ರಬಲ ಸ್ಥಿತಿಯಲ್ಲಿದ್ದ ಕಾಲಕ್ಕೆ ಬಿಜೆಪಿ ಕರ್ನಾಟಕದಲ್ಲಿ ಗೆದ್ದದ್ದು 104 ಸ್ಥಾನಗಳನ್ನು. 2008 ರಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ 2018ರ ಚುನಾವಣೆಯ ನಂತರ ಅಧಿಕಾರಹಿಡಿದ ಮೈತ್ರಿ ಸರಕಾರದ ವಿರುದ್ಧ ಏನೇ ತಿಪ್ಪರಲಾಗ ಹಾಕಿದರೂ ಅಧಿಕಾರ ಪಡೆದುಕೊಳ್ಳುವಲ್ಲಿ ಅದು ಇನ್ನೂ ಯಶಸ್ವಿಯಾಗಿಲ್ಲ. ಇದರ ಒಟ್ಟು ತಾತ್ಪರ್ಯ ಏನೆಂದರೆ ಕರ್ನಾಟಕಲ್ಲಿ ಮೋದಿಯವರ ಹೆಸರು ಉತ್ತರದ ರಾಜ್ಯಗಳಲ್ಲಿ ಮಾಡಿದ ಮೋಡಿ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಹೇಗೂ ಮೋದಿತನ್ನ  ಹಿಂದಿನ ವರ್ಚಸ್ಸನ್ನು ಕರ್ನಾಟಕದಲ್ಲಿ ಬಿಡಿ, ಇತರೆಡೆ ಕೂಡಾ ಉಳಿಸಿಕೊಂಡಿಲ್ಲ. ಆದುದರಿಂದ ಬಿಜೆಪಿ ಈಗ ಮುನ್ನೆಲೆಗೆ ತರುತ್ತಿರುವ ದೇಶ ಪ್ರೇಮ, ಪಾಕಿಸ್ತಾನ ದ್ವೇಷ, ಮಿಲಿಟರಿ ಉನ್ಮೇಷಗಳೆಲ್ಲಾ ಕರ್ನಾಟಕದ ಮತದಾರರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದರ ಮೇಲೆ ಅದು ಮೈತ್ರಿಕೂಟವನ್ನು ಹೇಗೆ ಮಣಿಸಲಿದೆ ಎನ್ನುವುದು ನಿರ್ಣಯವಾಗುತ್ತದೆ.

ಬಿಜೆಪಿಯ ಸಾಧನೆ ಹೋದ ಚುನಾವಣೆಗಿಂತ ಹೆಚ್ಚಾಗಲಾರದು ಎಂಬ ಸಾಧ್ಯತೆ ಕಾಂಗ್ರೆಸ್ಸಿಗೆ ಸಮಾಧಾನ ತರುವ ವಿಚಾರವಲ್ಲ. ಯಾಕೆಂದರೆ, ಹೋದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ಸಿಗಿಂತ ಹೆಚ್ಚು ಕಡಿಮೆ ಎರಡು ಪಟ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ಸಿಗೂ ಕೇರಳ ಬಿಟ್ಟರೆ ದಕ್ಷಿಣ ರಾಜ್ಯಗಳ ಪೈಕಿ ಇನ್ನೆಲ್ಲೂ ದೊಡ್ಡ ಮಟ್ಟಿನ ನೆಲೆ ಉಳಿದಿಲ್ಲ. ಆದುದರಿಂದ ಕರ್ನಾಟಕದಿಂದ ಹೋದ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ದೊಡ್ಡ ಅನಿವಾರ್ಯತೆ ಆ ಪಕ್ಷಕ್ಕೂ ಇದೆ. ಆ ಕಾರಣಕ್ಕಾಗಿಯೇ ಅದು ತನ್ನ ಸ್ವಪ್ರತಿಷ್ಠೆಯನ್ನು ತ್ಯಾಗಮಾಡಿ ಜನತಾದಳದೊಂದಿಗೆ ಮೈತ್ರಿ ಮಾಡಿಕೊಂಡಿರುವುದು. ಮೈತ್ರಿಯಿಂದ ದೊಡ್ಡ ಲಾಭ ಪಡೆಯಲು ಹೊರಟ ಕಾಂಗ್ರೆಸ್ ಸೀಟು ಹಂಚಿಕೆ ವಿಚಾರದಲ್ಲಿ  ಎಡವಟ್ಟು ಮಾಡಿಕೊಂಡರೆ ಗಳಿಸುವುದಕ್ಕಿಂತ ಹೆಚ್ಚು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಬಂದೀತು.ಈ ತನಕ ಎಲ್ಲ ಪಕ್ಷಗಳಲ್ಲೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಗೊಂದಲ ಇದ್ದಂತಿದೆ. ಯಾವುದೇ ಕ್ಷೇತ್ರಕ್ಕೆ ಇಂತವರೇ ಅಭ್ಯರ್ಥಿ ಅಂತ ಯಾವ ಪಕ್ಷಕ್ಕೂ ಸ್ಪಷ್ಟತೆ ಇದ್ದಂತಿಲ್ಲ. ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆಯ ಬಗ್ಗೆ ದಿನಕ್ಕೊಂದು ಕತೆ ಹುಟ್ಟುತ್ತಲೇ ಇದೆ.  ಸೀಟು ಹಂಚಿಕೆ ಗೊಂದಲ ಮುಂದುವರಿದು ಕೊನೆತನಕವೂ ಅಭ್ಯರ್ಥಿಗಳ ಘೋಷಣೆ ಆಗದೆ ಹೋದರೆ ಉಳಿದೆರಡೂ ಪಕ್ಷಗಳಿಗಿಂತ ಹೆಚ್ಚಿನ ಏಟು ಬೀಳುವುದು ಕಾಂಗ್ರೆಸ್ಸಿಗೆ. ಯಾಕೆಂದರೆ, ಬಿಜೆಪಿಯಲ್ಲಿ ಅಭ್ಯರ್ಥಿಯ ಆಯ್ಕೆ ಆಗಲಿ,ಆಗದಿರಲಿ, ಅದು ತಳಮಟ್ಟದಲ್ಲಿ ತನ್ನ ಚುನಾವಣಾ ತಯಾರಿಯನ್ನು ವ್ಯವಸ್ಥಿತವಾಗಿ ನಡೆಸುತ್ತದೆ. ಈ ಕೆಲಸಕ್ಕೆ ಅಗತ್ಯ ಇರುವ ಕೇಡರ್ ಅನ್ನು ಅದು ಹೊಂದಿದೆ. ಜಾತ್ಯಾತೀತ ಜನತಾ ದಳ ಸಂಪೂರ್ಣವಾಗಿ ಜಾತಿಯ ಮೇಲೆಯೇ ಅವಲಂಬಿಸಿರುವುದರಿಂದ ಅಕಸ್ಮಾತ್  ಅಭ್ಯರ್ಥಿಗಳ ಘೋಷಣೆ ತಡವಾದರೂ ಅದಕ್ಕೆ ಹೆಚ್ಚಿನ ನಷ್ಟ ಏನೂ ಆಗಲಾರದು. ಆದರೆ ಕಾಂಗ್ರೆಸ್ಸಿಗೆ ಅತ್ತ ಕೇಡರ್  ಬಲವೂ ಇಲ್ಲ ಇತ್ತ ಯಾವುದೇ ನಿರ್ಧಿಷ್ಟ ಜಾತಿಯ ಬಲವೂ ಇಲ್ಲ (ಅಲ್ಪಸಂಖ್ಯಾತರನ್ನು ಹೊರತುಪಡಿಸಿದರೆ). ಅಭ್ಯರ್ಥಿಗಳ ಆಯ್ಕೆ ತಡವಾದಷ್ಟು ಕಾಂಗ್ರೆಸ್ಸಿಗೆ ಕ್ಷೇತ್ರ ಮಟ್ಟದಲ್ಲಿ ಚುನಾವಣಾ ತಂತ್ರಗಳನ್ನು ರೂಪಿಸಲು ಕಷ್ಟವಾಗಬಹುದು.  ಆದುದರಿಂದಸೀಟು ಹಂಚಿಕೆ  ಪರಿಸ್ಥಿತಿ ಎಲ್ಲಾತಿಳಿಯಾಗಿ ಅಭ್ಯರ್ಥಿಗಳ ಆಯ್ಕೆ ಆಗುವ ವರೆಗೆ  ವರೆಗೆ ಚುನಾವಣೆಯಲ್ಲಿ ಏನಾಗಬಹುದು ಅಂತ ಕೇವಲ ತರ್ಕ ಮಾತ್ರದಿಂದ ಊಹಿಸುವುದು ಕಷ್ಟ.ತರ್ಕಬದ್ಧ ಲೆಕ್ಕಾಚಾರಗೆಲ್ಲ ಚುನಾವಣೆಯಲ್ಲಿ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ. ಭಾರತದ ಚುನಾವಣೆಗಳಲ್ಲಿ  ಯಾವ್ಯಾವುದೋ ಊಹಿಸಲಸದಳವಾದ ಅಗೋಚರ ವಿಚಾರಗಳೆಲ್ಲಾ ಸಕ್ರಿಯವಾಗಿರುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...