Homeಸಾಹಿತ್ಯ-ಸಂಸ್ಕೃತಿಕವನಕವನ | ಹೋಗಿ, ಬರಬೇಡಿ

ಕವನ | ಹೋಗಿ, ಬರಬೇಡಿ

- Advertisement -
- Advertisement -

ವಿಕಾಸ್ ಆರ್ ಮೌರ್ಯ | 

ಅತಿಥಿ ದೇವೋಭವ
ನಿಮ್ಮ ದೇವಭಾಷೆಯಲ್ಲಿ
ನೀವು ಬರೆದಿಟ್ಟುಕೊಂಡಿರಿ
ನಮಗೆ ಕೊಟ್ಟಿಗೆಯಲ್ಲಿ
ತಂಗಳವೋ, ಹಳಸಿದ್ದೋ ನೀಡಿದಿರಿ
ನಾವು ಕಣ್ಣಿಗೊತ್ತಿ ತಿಂದಿದ್ದೆವು

ನೀವು ಮನೆಯೊಳಗೆ ಉಣಿಸಿದ
ಇತಿಹಾಸವೇ ಇಲ್ಲ
ಈಗೇನೋ ನಮ್ಮನೆ ಆತಿಥ್ಯ ಬಯಸಿದ್ದೀರಿ
ನಾವು ಬರೆದವರಲ್ಲ, ಬದುಕಿದವರು
ಹಸಿವೆಂದು ಬಂದವರಿಗೆ
ಹಳಸಿದ್ದನ್ನು ನೀಡೆವು
ತಂಗಳಾದರೂ ಸರಿಯೇ
ಬಿಸಿ ಮಾಡಿ ಬಡಿಸುವೆವು

ಇಗೋ ಬಾಳೆಎಲೆ
ಅಪ್ಪ ಹರಿವಾಗ, ಕುಡುಗೋಲು
ರೋಹಿತನನ್ನು ನೆನೆಸಿತಂತೆ
ಈ ನೀರು
ದೊಡ್ಡವ್ವ ಬಾವೀಲಿ ಸೇದುವಾಗ
ಚೆಲ್ಲಿ ಅರ್ಧವಾಗಿ ಆಸೀಫಾ ಅಂತಂತೆ
ಈ ಚೊಂಬೂ ಅಷ್ಟೆ
ತೊಳೆವಾಗ ಊನಾ ಎಂದು ಕಿರುಚಿತಂತೆ

ಇಂದೇಕೋ ಹಿಟ್ಟಿನೆಸರು
ಕೊತಕೊತವೆನ್ನದೆ ಕಥುವಾ ಕಥುವಾ ಎಂದಿತು
ಅನ್ನದ ಗಂಜಿ ಉಕ್ಕಿ
ಉನ್ನಾವೋ ಎಂದಿತು
ಒಲೆ ಹೊಗೆ ಉಗುಳಿ
ಜೀವಾನಿಲವಿಲ್ಲದೆ ಕರುಳು ಹಿಂಡಿದಂತಾಯಿತು
ಸಾರು ಕುದಿಯುವಾಗ ಎದ್ದ ಗುಳ್ಳೆಗಳು
ಗೋಲಿಬಾರ್ ಗುಂಡುಗಳಂತೆ ಕಂಡವು

ಇಗೋ ಸೊಪ್ಪಿನ ಪಲ್ಯ, ಹಿತ್ತಲಿನದು
ನೀರ ಮನೆಯ ಬೆವರ ಹೀರಿ ಬೆಳೆದಿದೆ
ಈ ಉಪ್ಪಿನ ಕಾಯಿ, ಮನೆಯದ್ದು
ಎಳ್ಳಿಕಾಯಿ ಸ್ವಲ್ಪ ಕಹಿಯಿದೆ
ಅಲ್ಲಲ್ಲಿ ಮೆತ್ತಿದ ಮೆಣಸು
ಹಪ್ಪಳದೊಂದಿಗೆ ಕಾರ ಸೇರಿಸಿದೆ
ರಸದಲ್ಲಿನ ಮೆಣಸಿನಕಾಯಿ
ಕುದ್ದು ಕುದ್ದು ಕೆಂಪಾಗಿದೆ
ಮಸಾಲೆ ಘಮವ ಘಮಿಸಿ
ಬೆಚ್ಚಿ ಬೀಳಬೇಡಿ
ನಿಮ್ಮ ಆಹಾರ ನಿಮಗೆ ನೀಡಿಹೆವು
ನಮ್ಮದು, ಶುಂಠಿ ಬೆಳ್ಳುಳ್ಳಿಯೊಂದಿಗೆ ಬೇಯುತ್ತಿದೆ
ಹಲ್ಲಿಗೂ ರುಚಿಯೆನಿಸುವ ದನದ ಬಾಡು
ಇಂದೇಕೋ ಹೆಚ್ಚು ಘಮಿಸುತ್ತಿದೆ
ನಿಮ್ಮ ಪೂರ್ವಜರ ಆತ್ಮಗಳು ಇಲ್ಲೇ ಎಲ್ಲೋ
ಗಿರಕಿ ಹೊಡೆಯುತ್ತಿರಬೇಕು

ಸಿಹಿ ಮಾಡಿಲ್ಲವೆಂದು ಬೇಸರವಾಗಬೇಡಿ
ಹೋಳಿಗೆ ಮಾಡಲು ತಂದಿದ್ದ ಮೈದಾವನ್ನ
ಅಜ್ಜಿ ತಿಕದಡಿ ಹಾಕಿಕೊಂಡು ಕುಂತಿದ್ದಾಳೆ
ಸಂಬಂಧಿಗಳಿಗೆ ಸಿಹಿಯುಣಿಸುವುದು ಅವಳ ವಾಡಿಕೆ
ಕ್ಷಮಿಸಿ, ಎಲೆ ಅಡಿಕೆ ಕೊಡಲಾರೆವು
ನಿಮಗೆ ಸುಣ್ಣ ಸವರಿ ಅಭ್ಯಾಸವಿಲ್ಲವಲ್ಲ
ಹೋಗಿ.. ಬರಬೇಡಿ
ಕನ್ನ ಹಾಕದಂತೆ ಕಾವಲಿರಬೇಕಿದೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...