Homeಅಂಕಣಗಳುಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

ಮೋದಿಯ ಅವಸಾನ ಕರ್ನಾಟಕದಿಂದ ಆರಂಭವಾಗಲಿದೆ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ರಾಜಕೀಯದಲ್ಲಿ chaotic meltdown ಆಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿವೆ. ಈ ಹೋರಾಟ ಸ್ವಪ್ರತಿಷ್ಠೆಗೆ, ಅನಾಗರಿಕ ನಡವಳಿಕೆಗೆ ಎಡೆಮಾಡಿದೆ. ರಾಜಕೀಯ ವ್ಯಕ್ತಿಗಳು ಪ್ರಾಥಮಿಕ ಮಾನವೀಯ instinctಗಳನ್ನು ಗಾಳಿಗೆ ತೂರಿವೆ. ಅನಾಗರಿಕರಿಗಿಂತ ಕೀಳುಮಟ್ಟದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಸಮಾಜಕ್ಕೆ ತನ್ನಿಂದ ಆಗಬೇಕಾಗಿರುವ ಸೇವೆಯ ಬಗೆಗೆ ಆಲೋಚನೆ ಮಾಡುತ್ತಿಲ್ಲ. ಸ್ವಲಾಭದ ಕಡೆಗೇ ಅವನ ಗಮನವೆಲ್ಲ ರಾಜಕೀಯ ನಾಯಕರು ರಾಜಕೀಯ ಮೌಲ್ಯಗಳನ್ನು ಕುರಿತು ಮಾತನಾಡುತ್ತಿಲ್ಲ. ವಕೀಲರು ಕಾನೂನನ್ನು ಎತ್ತಿ ಹಿಡಿಯುವವರಾಗಿ ಉಳಿದಿಲ್ಲ. ನ್ಯಾಯಾಧಿಪತಿಗಳು ಕೇಂದ್ರ ಸರ್ಕಾರದ ರಕ್ಷಣೆಗೆ ನಿಲ್ಲುತ್ತಿದ್ದಾರೆ. ಸರ್ಕಾರ ಸಿಬಿ, ಆದಾಯ ತೆರಿಗೆ ಇಲಾಖೆ ಮುಂತಾದವನ್ನು ತನ್ನ ಕೈಗೊಂಬೆ ಮಾಡಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣ್ಣು ಮಾಡಲು ಬಳಸುತ್ತಿದೆ. ಶಾಸಕರು, ಪಾರ್ಲಿಮೆಂಟ್ ಸದಸ್ಯರು ಶಾಸನ ರೂಪಿಸುವ ಕೆಲಸ ಬಿಟ್ಟು ತಮ್ಮ ಕರ್ತವ್ಯಗಳನ್ನು ಮರೆತು, ಶಾಸನಸಭೆ ಮತ್ತು ಪಾರ್ಲಿಮೆಂಟ್ ಸಭೆಗಳು, ಕಾರ್ಯಕಲಾಪಗಳನ್ನು ನಡೆಸಲು ಬಿಡದೆ, ಜನದ್ರೋಹದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಹಿಂದೆಂದೂ ಕೇಳರಿಯದ ಮಟ್ಟದಲ್ಲಿ ಭಾರತದ ಎಲ್ಲ ಕಡೆಗಳಲ್ಲಿ ಹಿಂಸಾಚಾರ, ಗೂಂಡಾಗಿರಿ, ಮಹಿಳೆಯರ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ನಡೆಯುತ್ತಲೇ ಇವೆ. ದೇಶ ಇಂತಹ ಘೋರ ವಿಪತ್ತುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ಬಂದಿದೆ.

ಚುನಾವಣೆ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವುದರಿಂದ, ಸೀಟು ಸಿಕ್ಕದವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುತ್ತಿದ್ದಾರೆ. ಇವರಿಗೆ ನಾಚಿಕೆಯೂ ಇಲ್ಲ, ಮತದಾರರ ಭಯವೂ ಇಲ್ಲ. ಪಕ್ಷ ಇರುವುದು ಇವರ ದೃಷ್ಟಿಯಲ್ಲಿ ತಮ್ಮ ಸ್ವಾರ್ಥಸಾಧನೆಗೆ ಅವಕಾಶ ಮಾಡಿಕೊಡಲು ಮಾತ್ರ. ಮತದಾರನೂ ಕೂಡ ಇಂಗುತಿಂದ ಮಂಗನಂತೆ ಈ ಸಮಯಸಾಧಕ ಸ್ವಾರ್ಥಿಗಳ ಹುಚ್ಚಾಟವನ್ನು ಮೂಕಪ್ರೇಕ್ಷಕನಂತೆ ನೋಡುತ್ತಾ ಕೂತಿದ್ದಾನೆ.

ಸೀಟು ಆಕಾಂಕ್ಷಿಗಳ ಅನೀತಿಯುತ ಗೆಯ್ಮೆಯನ್ನು ತಡೆಗಟ್ಟಬೇಕಾದ ರಾಜಕೀಯ ಪಕ್ಷಗಳು, ಅವರಿಗೆ ಮಣೆ ಹಾಕಿ ಬರಮಾಡಿಕೊಳ್ಳುತ್ತಿವೆ. ಹೀಗೆ ಅನೀತಿಯನ್ನು ಪ್ರೋತ್ಸಾಹಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೇ ಎಂದು ಮತದಾರ ವಿಚಾರ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು. ಆದರೆ ನಮ್ಮ ಮತದಾರ ಗರಬಡಿದವನಂತೆ ಇದ್ದಾನೆ. ನಡೆಯುತ್ತಿರುವ ವಿದ್ಯಮಾನಗಳನ್ನು ವಿಶ್ಲೇಷಣೆ ಮಾಡಲಾರದಷ್ಟು ಜಡವಾಗಿ ಬಿಟ್ಟಿದ್ದಾನೆ.

ಯಶ್ವಂತ್‍ಸಿನ್ಹಾ, ಶತ್ರುಘ್ನಸಿನ್ಹಾ ಮೊದಲಾದ ನಿಷ್ಠಾವಂತ ಬಿಜೆಪಿ ನಾಯಕರು ಮೋದಿಯ ಹುಚ್ಚಾಟಗಳಿಗೆ ರೋಸಿಹೋಗಿ, ಪಕ್ಷವನ್ನು ಬಿಟ್ಟುಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಪಕ್ಷವನ್ನು ಸರಿದಾರಿಗೆ ತರಲು ಶಾಂತಿಯುತ ಹೋರಾಟ ನಡೆಸಲೂ ನಿರ್ಧರಿಸಿದ್ದಾರೆ.

ಯಡಿಯೂರಪ್ಪನವರಿಗೆ ಚುನಾವಣೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದ ಹೈಕಮಾಂಡ್, ಸೀಟು ಹಂಚಿಕೆಯಲ್ಲಿ ಪ್ರಮಾದವೆಸಗಿದ್ದ ಯಡಿಯೂರಪ್ಪನವರ ಅಧಿಕಾರವನ್ನೂ ಮೊಟಕು ಮಾಡಿ, ಯಡಿಯೂರಪ್ಪನವರ ಮಗನಿಗೆ, ಕರಂದ್ಲಾಜೆಯವರಿಗೆ ಸೀಟು ಕೊಡಲು ನಿರಾಕರಿಸಿದೆ. ಮೊದಲು ಎಲ್ಲಾ ಸೀಟುಗಳನ್ನು ಹಂಚಲು ಯಡಿಯೂರಪ್ಪನವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದ ಹೈಕಮಾಂಡ್ ಅದನ್ನು 40ಕ್ಕೆ ಇಳಿಸಿ, ಈಗ 16 ಸೀಟುಗಳನ್ನು ಮಾತ್ರ ತಮಗೆ ಬೇಕಾದವರಿಗೆ ನೀಡಲು ಅವಕಾಶ ಕೊಟ್ಟು ಉಳಿದದ್ದನ್ನು ತಾನೇ ಭರ್ತಿ ಮಾಡಿದೆ.

ಬಳ್ಳಾರಿ ಜನಾರ್ದನ ರೆಡ್ಡಿಯನ್ನು ಯಡಿಯೂರಪ್ಪನವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕರೆದಿದ್ದಕ್ಕಾಗಿ ಮೋದಿ ಮತ್ತು ಶಾ ಮುನಿಸಿಕೊಂಡಿದ್ದಾರೆ. ಮೋದಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ಹೋಗುವ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಈ chaotic situation ನಲ್ಲಿ, ಮತದಾರ ತಾನೇನು ಮಾಡಬೇಕು ಎಂದು ತಿಳಿಯದೆ ದಿಗ್ಭ್ರಾಂತನಾಗಿದ್ದಾನೆ. ಮತದಾರನಿಗೆ ದಿಕ್ಸೂಚಿ ಮಾಡುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಈ ಕೆಲಸವನ್ನು ಈಗ ಕೋಮು ಸೌಹಾರ್ದ ವೇದಿಕೆಯಂತಹ ಸಂಸ್ಥೆ ಇತರ ಎಲ್ಲ ಪ್ರಗತಿಪರ ಕೋಮು ವಿರೋಧಿ ಶಕ್ತಿಗಳನ್ನೂ ಕೂಡಿಕೊಂಡು, ಸಂವಿಧಾನ ವಿರೋಧಿಗಳನ್ನು ಕೊಟ್ಟ ಮಾತಿನಂತೆ ನಡೆದುಕೊಳ್ಳದ ಮೋದಿಯನ್ನೂ ಪರಾಭವಗೊಳಿಸಲು ನಿರ್ಧರಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿ ಒಬ್ಬನೇ ನಾಯಕ. ಆ ನಾಯಕನ ಪರಿಸ್ಥಿತಿ ಏನಾಗಿದೆ ನೋಡಿ 2014ರ ಲೋಕಸಭೆ ಚುನಾವಣೆಗೆ ಮೋದಿ ಹಠಾತ್ತನೆ ಇಳಿದರು. ಅಂದಿನ ದಿನಗಳಲ್ಲಿ ಕಾಂಗ್ರೆಸ್ ಅನೇಕ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಮತದಾರರಿಗೂ ಇದು ಬೇಸರ ತಂದಿತ್ತು. ಮೋದಿ ಕಾಂಗ್ರೆಸ್ಸಿನ ಹಗರಣಗಳನ್ನೆಲ್ಲ ಬಿಚ್ಚಿ ಮತ್ತು ಅದನ್ನು ಪ್ರಬಲ ಅಸ್ತ್ರವಾಗಿ ಚುನಾವಣೆಗೆ ಬಳಸಿಕೊಂಡರು. ರೋಸಿದ್ದ ಜನ ಕಾಂಗ್ರೆಸ್ಸಿನ ವಿರುದ್ಧವಾಗಿ ಮೋದಿಗೆ ಮತಹಾಕಿ ಗೆಲ್ಲಿಸಿದರು.

ಮೋದಿ ಆಡಳಿತವನ್ನು 4 ವರ್ಷಗಳಿಂದ ನೋಡುತ್ತಿರುವ ಮತದಾರನಿಗೆ ಭ್ರಮನಿರಸನ ಆಗಿದೆ. ಮೋದಿ ಹೆಜ್ಜೆಹೆಜ್ಜೆಗೂ ಮಾತು ತಪ್ಪಿದ್ದಾರೆ. ಕಾಳಹಣವನ್ನು 100 ದಿನಗಳ ಒಳಗೆ ಸ್ವಿಸ್‍ಬ್ಯಾಂಕಿನಿಂದ ತಂದು ಪ್ರತಿ ಬಡವನ ಹೆಸರಿನಲ್ಲೂ ಒಂದು ಉಳಿತಾಯ ಖಾತೆ ತೆರೆದು ಬ್ಯಾಂಕಿನಲ್ಲಿ ಅವರ ಹೆಸರಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿ ಬಡವರ ಮತ ಕಿತ್ತುಕೊಂಡರು. ಭಾರತದಲ್ಲಿ ಒಂದು ವರ್ಷದಲ್ಲಿ 5 ಲಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಿ ಯುವಕರಿಗೆ ನೀಡುವುದಾಗಿ ಬೊಗಳೆಬಿಟ್ಟರು. ಅದೂ ಕೈಗೂಡಲಿಲ್ಲ. 1000 ಹಾಗೂ ಐದು ನೂರು ರೂಪಾಯಿ ನೋಟುಗಳನ್ನು ಅಪಮೌಲ್ಯ ಮಾಡಿ ಕಾಳಧನವನ್ನು ಹೊರತೆಗೆಯುವುದಾಗಿ ಹೇಳಿದರು. ಈ ಅಪಮೌಲ್ಯ ಮಾಡಿ ಹೊಸ 2000 ಹಾಗೂ 500 ರೂ.ಗಳ ನೋಟುಗಳನ್ನು ಪ್ರಿಂಟ್ ಮಾಡಿದ್ದು. ಕಾಳಹಣ ಸಂಗ್ರಹಿಸಿದ್ದ ಖದೀಮರು, ಕಪ್ಪುಹಣವನ್ನೆಲ್ಲ ಬಿಳಿಯ ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಯಿತು. ರಾಷ್ಟ್ರೀಕೃತ ಬ್ಯಾಂಕುಗಳು ಈ ಕಾಳಹಣದ ಖದೀಮರಿಗೆ ತಮ್ಮ ಬಳಿ ಇದ್ದ ಕಪು ್ಪಹಣವನ್ನು ಬಿಳಿ ಹಣ ಮಾಡಿಕೊಳ್ಳುವುದಕ್ಕೆ ನೆರವಾದವು.

ಹೀಗಾಗಿ ಮೋದಿಯವರ ವರ್ಚಸ್ಸು ಕ್ಷೀಣವಾಯಿತು. ಅವರು ಬರೀ ಬಾಯ್ಬಡಕ ಎಂಬುದು ಜನತೆಗೆ ಈ ನಾಲ್ಕು ವರ್ಷದಲ್ಲಿ ಅರಿವಾಯಿತು.
ಮೋದಿ ಮೇಲಿನ ಪ್ರತೀಕಾರ ಕರ್ನಾಟಕದಿಂದ ಆರಂಭವಾಗಲಿದೆ. ಮೋದಿಗೆ ಇದು ಫೈನಲ್ಸ್. 2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಅವರ ಭಾಗಕ್ಕೆ ಫೈನಲ್ಸ್. ಮೋದಿಯವರ ವಿರೋಧವಾಗಿ ರಾಜಕೀಯ ಪಕ್ಷಗಳ ಧ್ರುವೀಕರಣ ಈಗಾಗಲೇ ಆರಂಭವಾಗಿದೆ.

ಈ ಫೈನಲ್ಸ್‍ಗೆ ಮುಂಚೆಯೇ ಕರ್ನಾಟಕದಲ್ಲಿ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿ ಮೋದಿಗೆ ಶಾಕ್ ಕೊಡಲು ಕರ್ನಾಟಕ ಜನ ಸಂಕಲ್ಪ ಮಾಡಿದ್ದಾರೆ.

ಮೋದಿಯ ಅಲೆಯ ಅಬ್ಬರ ಇಳಿದು ಎಷ್ಟೋ ದಿನಗಳಾದವು. ಈಗ ಜನ ಅವರ ಬೊಗಳೆ ಮಾತುಗಳಿಗೆ ಬೇಸರಗೊಂಡಿದ್ದಾರೆ. ಬಿಜೆಪಿ ವಿರೋಧದ ಅಲೆ ಕರ್ನಾಟಕದ ಬಿಜೆಪಿಯನ್ನು ಅಪ್ಪಳಿಸಲು ಸನ್ನದ್ಧವಾಗಿದೆ.

ಮೋದಿ, ಅಮಿತ್ ಶಾ ಹೋದಲ್ಲೆಲ್ಲ ಕಪ್ಪುಬಾವುಟ ಪ್ರದರ್ಶನ ಆಗುತ್ತಿದೆ. ಜನಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿಗೆ ವಿರುದ್ಧವಾಗಿ ಮತ ಹಾಕಲು ಬಡವರು, ಶ್ರಮಿಕರು, ಕಾರ್ಮಿಕರು, ದಲಿತರು, ನಿರುದ್ಯೋಗಿ ಯುವಕರು, ಸ್ತ್ರೀಯರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತಾಂಧ ಬಿಜೆಪಿ ಹಿಂದುಗಳನ್ನುಳಿದು ಇತರ ಹಿಂದುಗಳು ಒಮ್ಮತದಿಂದ ಮೋದಿ ಹಠಾವ್ ಮಾಡಬೇಕೆಂದು ಸಂಕಲ್ಪ ಮಾಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕದಲ್ಲಿ ಮೋದಿಯ ಮೋಡಿಗೆ ಒಳಗಾಗುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಸಾರಿ ನಡೆಯುವ ಚುನಾವಣೆಯಲ್ಲಿ ಅದು ಪ್ರಕಟವಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...