Homeಸಾಹಿತ್ಯ-ಸಂಸ್ಕೃತಿಕವನಕವನ | ಹೋಗಿ, ಬರಬೇಡಿ

ಕವನ | ಹೋಗಿ, ಬರಬೇಡಿ

- Advertisement -
- Advertisement -

ವಿಕಾಸ್ ಆರ್ ಮೌರ್ಯ | 

ಅತಿಥಿ ದೇವೋಭವ
ನಿಮ್ಮ ದೇವಭಾಷೆಯಲ್ಲಿ
ನೀವು ಬರೆದಿಟ್ಟುಕೊಂಡಿರಿ
ನಮಗೆ ಕೊಟ್ಟಿಗೆಯಲ್ಲಿ
ತಂಗಳವೋ, ಹಳಸಿದ್ದೋ ನೀಡಿದಿರಿ
ನಾವು ಕಣ್ಣಿಗೊತ್ತಿ ತಿಂದಿದ್ದೆವು

ನೀವು ಮನೆಯೊಳಗೆ ಉಣಿಸಿದ
ಇತಿಹಾಸವೇ ಇಲ್ಲ
ಈಗೇನೋ ನಮ್ಮನೆ ಆತಿಥ್ಯ ಬಯಸಿದ್ದೀರಿ
ನಾವು ಬರೆದವರಲ್ಲ, ಬದುಕಿದವರು
ಹಸಿವೆಂದು ಬಂದವರಿಗೆ
ಹಳಸಿದ್ದನ್ನು ನೀಡೆವು
ತಂಗಳಾದರೂ ಸರಿಯೇ
ಬಿಸಿ ಮಾಡಿ ಬಡಿಸುವೆವು

ಇಗೋ ಬಾಳೆಎಲೆ
ಅಪ್ಪ ಹರಿವಾಗ, ಕುಡುಗೋಲು
ರೋಹಿತನನ್ನು ನೆನೆಸಿತಂತೆ
ಈ ನೀರು
ದೊಡ್ಡವ್ವ ಬಾವೀಲಿ ಸೇದುವಾಗ
ಚೆಲ್ಲಿ ಅರ್ಧವಾಗಿ ಆಸೀಫಾ ಅಂತಂತೆ
ಈ ಚೊಂಬೂ ಅಷ್ಟೆ
ತೊಳೆವಾಗ ಊನಾ ಎಂದು ಕಿರುಚಿತಂತೆ

ಇಂದೇಕೋ ಹಿಟ್ಟಿನೆಸರು
ಕೊತಕೊತವೆನ್ನದೆ ಕಥುವಾ ಕಥುವಾ ಎಂದಿತು
ಅನ್ನದ ಗಂಜಿ ಉಕ್ಕಿ
ಉನ್ನಾವೋ ಎಂದಿತು
ಒಲೆ ಹೊಗೆ ಉಗುಳಿ
ಜೀವಾನಿಲವಿಲ್ಲದೆ ಕರುಳು ಹಿಂಡಿದಂತಾಯಿತು
ಸಾರು ಕುದಿಯುವಾಗ ಎದ್ದ ಗುಳ್ಳೆಗಳು
ಗೋಲಿಬಾರ್ ಗುಂಡುಗಳಂತೆ ಕಂಡವು

ಇಗೋ ಸೊಪ್ಪಿನ ಪಲ್ಯ, ಹಿತ್ತಲಿನದು
ನೀರ ಮನೆಯ ಬೆವರ ಹೀರಿ ಬೆಳೆದಿದೆ
ಈ ಉಪ್ಪಿನ ಕಾಯಿ, ಮನೆಯದ್ದು
ಎಳ್ಳಿಕಾಯಿ ಸ್ವಲ್ಪ ಕಹಿಯಿದೆ
ಅಲ್ಲಲ್ಲಿ ಮೆತ್ತಿದ ಮೆಣಸು
ಹಪ್ಪಳದೊಂದಿಗೆ ಕಾರ ಸೇರಿಸಿದೆ
ರಸದಲ್ಲಿನ ಮೆಣಸಿನಕಾಯಿ
ಕುದ್ದು ಕುದ್ದು ಕೆಂಪಾಗಿದೆ
ಮಸಾಲೆ ಘಮವ ಘಮಿಸಿ
ಬೆಚ್ಚಿ ಬೀಳಬೇಡಿ
ನಿಮ್ಮ ಆಹಾರ ನಿಮಗೆ ನೀಡಿಹೆವು
ನಮ್ಮದು, ಶುಂಠಿ ಬೆಳ್ಳುಳ್ಳಿಯೊಂದಿಗೆ ಬೇಯುತ್ತಿದೆ
ಹಲ್ಲಿಗೂ ರುಚಿಯೆನಿಸುವ ದನದ ಬಾಡು
ಇಂದೇಕೋ ಹೆಚ್ಚು ಘಮಿಸುತ್ತಿದೆ
ನಿಮ್ಮ ಪೂರ್ವಜರ ಆತ್ಮಗಳು ಇಲ್ಲೇ ಎಲ್ಲೋ
ಗಿರಕಿ ಹೊಡೆಯುತ್ತಿರಬೇಕು

ಸಿಹಿ ಮಾಡಿಲ್ಲವೆಂದು ಬೇಸರವಾಗಬೇಡಿ
ಹೋಳಿಗೆ ಮಾಡಲು ತಂದಿದ್ದ ಮೈದಾವನ್ನ
ಅಜ್ಜಿ ತಿಕದಡಿ ಹಾಕಿಕೊಂಡು ಕುಂತಿದ್ದಾಳೆ
ಸಂಬಂಧಿಗಳಿಗೆ ಸಿಹಿಯುಣಿಸುವುದು ಅವಳ ವಾಡಿಕೆ
ಕ್ಷಮಿಸಿ, ಎಲೆ ಅಡಿಕೆ ಕೊಡಲಾರೆವು
ನಿಮಗೆ ಸುಣ್ಣ ಸವರಿ ಅಭ್ಯಾಸವಿಲ್ಲವಲ್ಲ
ಹೋಗಿ.. ಬರಬೇಡಿ
ಕನ್ನ ಹಾಕದಂತೆ ಕಾವಲಿರಬೇಕಿದೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಮೂರ್ತಿ ಸ್ವಾಮಿನಾಥನ್ ಪದಚ್ಯುತಿಗೆ ಪ್ರಸ್ತಾವ ಮಂಡಿಸಿದ ವಿಪಕ್ಷ ಸಂಸದರು

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಲೋಕಸಭಾ ಸ್ಪೀಕರ್ ಮುಂದೆ ಪ್ರಸ್ತಾವ ಮಂಡಿಸಿದ್ದಾರೆ. ಡಿಸೆಂಬರ್ 9ರಂದು ಸಂವಿಧಾನದ 124ನೇ ವಿಧಿಯೊಂದಿಗೆ...

ಕೇರಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಕಾರ

ಕೇರಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರಸ್ತುತ ಗಡುವಾದ ಡಿಸೆಂಬರ್ 18ರವರೆಗೆ ವಿಷಯವನ್ನು ಮುಂದೂಡಿ, ಆ ನಂತರ ಗಡುವನ್ನು...

‘ಎಷ್ಟೇ ದೊಡ್ಡ ಸಂಸ್ಥೆಯಾದರೂ ಪ್ರಯಾಣಿಕರಿಗೆ ತೊಂದರೆ ನೀಡುವಂತಿಲ್ಲಾ’: ಇಂಡಿಗೋ ಸಂಸ್ಥೆಗೆ ಎಚ್ಚರಿಕೆ ನೀಡಿದ ವಿಮಾನಯಾನ ಸಚಿವ

ಡಿಸೆಂಬರ್ ಆರಂಭದಿಂದಲೂ ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ ಲೈಲ್ಸ್ ಸಂಸ್ಥೆಗೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಎಚ್ಚರಿಕೆ ನೀಡಿದ್ದಾರೆ.  "ಇಂಡಿಗೋದಲ್ಲಿನ ಅಡಚಣೆಗಳು ಸ್ಥಿರವಾಗುತ್ತಿವೆ; ದೇಶಾದ್ಯಂತ ಎಲ್ಲಾ ಇತರ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ....

ಜಾರ್ಖಂಡ್‌| ದಲಿತರಿಗೆ ಸೇವೆ ಬಹಿಷ್ಕರಿಸಿದ ಕ್ಷೌರಿಕರು; ಪೊಲೀಸರ ಎಚ್ಚರಿಕೆ ಹೊರತಾಗಿಯೂ ಅಂಗಡಿಗಳು ಬಂದ್

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್‌ನ ಬಹರಗೋರಾ ಬ್ಲಾಕ್‌ನ ಜಯಪುರ ಗ್ರಾಮದಲ್ಲಿ ನಮಗೆ ಕ್ಷೌರಿಕರು ಸೇವೆಗಳನ್ನು ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಹಳ್ಳಿಯಲ್ಲಿರುವ ಎಲ್ಲ ಆರು...

ಕಸಾಪ ಅಕ್ರಮ | 17 ಆರೋಪಗಳ ಪೈಕಿ 14ರ ವಿಚಾರಣೆ ಪೂರ್ಣ : ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದ 17 ಆರೋಪಗಳ ಪೈಕಿ 14ರ ವಿಚಾರಣೆ ಮುಕ್ತಾಯಗೊಂಡಿದ್ದು, ಉಳಿದ 3 ಅಂಶಗಳ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ...

ವೇತನ ಸಹಿತ ಮುಟ್ಟಿನ ರಜೆ : ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆ

ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ...

‘ಸಿಎಂ ಹುದ್ದೆಗೆ 500 ಕೋಟಿ’ ಹೇಳಿಕೆ : ನವಜೋತ್ ಕೌರ್ ಸಿಧು ಕಾಂಗ್ರೆಸ್‌ನಿಂದ ಅಮಾನತು

"500 ಕೋಟಿ ರೂಪಾಯಿಯ ಸೂಟ್‌ಕೇಸ್ ನೀಡುವ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೆ" ಎಂದು ಹೇಳಿಕೆ ನೀಡಿದ ಎರಡು ದಿನಗಳ ನಂತರ, ಮಾಜಿ ಕ್ರಿಕೆಟಿಗ ಮತ್ತು ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್...

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಕನಿಷ್ಠ 30 ಜನರಿಗೆ ಗಾಯ, ಸಾವಿರಾರು ಜನರ ಸ್ಥಳಾಂತರ

ಸೋಮವಾರ (ಡಿಸೆಂಬರ್ 8) ರಾತ್ರಿ (ಭಾರತೀಯ ಕಾಲಮಾನ ಸಂಜೆ 7.45) ಈಶಾನ್ಯ ಜಪಾನ್‌ನಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು...

ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ ‘ವಂದೇ ಮಾತರಂ’ ಕುರಿತು ಚರ್ಚೆ ಏಕೆ? ಪ್ರಿಯಾಂಕಾ ಗಾಂಧಿ

ಸೋಮವಾರ ಲೋಕಸಭೆಯಲ್ಲಿ 'ವಂದೇ ಮಾತರಂನ 150 ವರ್ಷಗಳು' ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಹೆಚ್ಚು ಮುಖ್ಯವಾದ ವಿಷಯಗಳಿರುವಾಗ, ಈ...

ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇ.30 ಮಹಿಳಾ ಮೀಸಲಾತಿಗೆ ಸುಪ್ರೀಂ ಕೋರ್ಟ್ ಆದೇಶ

ಮಹತ್ವದ ಆದೇಶವೊಂದರಲ್ಲಿ, ಚುನಾವಣೆಗಳು ಇನ್ನೂ ಘೋಷಣೆಯಾಗದ ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಶೇಕಡ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಲು ಸೋಮವಾರ (ಡಿಸೆಂಬರ್ 8) ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಪ್ರಸಕ್ತ ವರ್ಷಕ್ಕೆ, ಶೇಕಡ 20ರಷ್ಟು ಮಹಿಳಾ...