Homeಸಾಹಿತ್ಯ-ಸಂಸ್ಕೃತಿಕವನಕವನ | ಹೋಗಿ, ಬರಬೇಡಿ

ಕವನ | ಹೋಗಿ, ಬರಬೇಡಿ

- Advertisement -
- Advertisement -

ವಿಕಾಸ್ ಆರ್ ಮೌರ್ಯ | 

ಅತಿಥಿ ದೇವೋಭವ
ನಿಮ್ಮ ದೇವಭಾಷೆಯಲ್ಲಿ
ನೀವು ಬರೆದಿಟ್ಟುಕೊಂಡಿರಿ
ನಮಗೆ ಕೊಟ್ಟಿಗೆಯಲ್ಲಿ
ತಂಗಳವೋ, ಹಳಸಿದ್ದೋ ನೀಡಿದಿರಿ
ನಾವು ಕಣ್ಣಿಗೊತ್ತಿ ತಿಂದಿದ್ದೆವು

ನೀವು ಮನೆಯೊಳಗೆ ಉಣಿಸಿದ
ಇತಿಹಾಸವೇ ಇಲ್ಲ
ಈಗೇನೋ ನಮ್ಮನೆ ಆತಿಥ್ಯ ಬಯಸಿದ್ದೀರಿ
ನಾವು ಬರೆದವರಲ್ಲ, ಬದುಕಿದವರು
ಹಸಿವೆಂದು ಬಂದವರಿಗೆ
ಹಳಸಿದ್ದನ್ನು ನೀಡೆವು
ತಂಗಳಾದರೂ ಸರಿಯೇ
ಬಿಸಿ ಮಾಡಿ ಬಡಿಸುವೆವು

ಇಗೋ ಬಾಳೆಎಲೆ
ಅಪ್ಪ ಹರಿವಾಗ, ಕುಡುಗೋಲು
ರೋಹಿತನನ್ನು ನೆನೆಸಿತಂತೆ
ಈ ನೀರು
ದೊಡ್ಡವ್ವ ಬಾವೀಲಿ ಸೇದುವಾಗ
ಚೆಲ್ಲಿ ಅರ್ಧವಾಗಿ ಆಸೀಫಾ ಅಂತಂತೆ
ಈ ಚೊಂಬೂ ಅಷ್ಟೆ
ತೊಳೆವಾಗ ಊನಾ ಎಂದು ಕಿರುಚಿತಂತೆ

ಇಂದೇಕೋ ಹಿಟ್ಟಿನೆಸರು
ಕೊತಕೊತವೆನ್ನದೆ ಕಥುವಾ ಕಥುವಾ ಎಂದಿತು
ಅನ್ನದ ಗಂಜಿ ಉಕ್ಕಿ
ಉನ್ನಾವೋ ಎಂದಿತು
ಒಲೆ ಹೊಗೆ ಉಗುಳಿ
ಜೀವಾನಿಲವಿಲ್ಲದೆ ಕರುಳು ಹಿಂಡಿದಂತಾಯಿತು
ಸಾರು ಕುದಿಯುವಾಗ ಎದ್ದ ಗುಳ್ಳೆಗಳು
ಗೋಲಿಬಾರ್ ಗುಂಡುಗಳಂತೆ ಕಂಡವು

ಇಗೋ ಸೊಪ್ಪಿನ ಪಲ್ಯ, ಹಿತ್ತಲಿನದು
ನೀರ ಮನೆಯ ಬೆವರ ಹೀರಿ ಬೆಳೆದಿದೆ
ಈ ಉಪ್ಪಿನ ಕಾಯಿ, ಮನೆಯದ್ದು
ಎಳ್ಳಿಕಾಯಿ ಸ್ವಲ್ಪ ಕಹಿಯಿದೆ
ಅಲ್ಲಲ್ಲಿ ಮೆತ್ತಿದ ಮೆಣಸು
ಹಪ್ಪಳದೊಂದಿಗೆ ಕಾರ ಸೇರಿಸಿದೆ
ರಸದಲ್ಲಿನ ಮೆಣಸಿನಕಾಯಿ
ಕುದ್ದು ಕುದ್ದು ಕೆಂಪಾಗಿದೆ
ಮಸಾಲೆ ಘಮವ ಘಮಿಸಿ
ಬೆಚ್ಚಿ ಬೀಳಬೇಡಿ
ನಿಮ್ಮ ಆಹಾರ ನಿಮಗೆ ನೀಡಿಹೆವು
ನಮ್ಮದು, ಶುಂಠಿ ಬೆಳ್ಳುಳ್ಳಿಯೊಂದಿಗೆ ಬೇಯುತ್ತಿದೆ
ಹಲ್ಲಿಗೂ ರುಚಿಯೆನಿಸುವ ದನದ ಬಾಡು
ಇಂದೇಕೋ ಹೆಚ್ಚು ಘಮಿಸುತ್ತಿದೆ
ನಿಮ್ಮ ಪೂರ್ವಜರ ಆತ್ಮಗಳು ಇಲ್ಲೇ ಎಲ್ಲೋ
ಗಿರಕಿ ಹೊಡೆಯುತ್ತಿರಬೇಕು

ಸಿಹಿ ಮಾಡಿಲ್ಲವೆಂದು ಬೇಸರವಾಗಬೇಡಿ
ಹೋಳಿಗೆ ಮಾಡಲು ತಂದಿದ್ದ ಮೈದಾವನ್ನ
ಅಜ್ಜಿ ತಿಕದಡಿ ಹಾಕಿಕೊಂಡು ಕುಂತಿದ್ದಾಳೆ
ಸಂಬಂಧಿಗಳಿಗೆ ಸಿಹಿಯುಣಿಸುವುದು ಅವಳ ವಾಡಿಕೆ
ಕ್ಷಮಿಸಿ, ಎಲೆ ಅಡಿಕೆ ಕೊಡಲಾರೆವು
ನಿಮಗೆ ಸುಣ್ಣ ಸವರಿ ಅಭ್ಯಾಸವಿಲ್ಲವಲ್ಲ
ಹೋಗಿ.. ಬರಬೇಡಿ
ಕನ್ನ ಹಾಕದಂತೆ ಕಾವಲಿರಬೇಕಿದೆ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...