Homeಅಂಕಣಗಳುಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

ಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

- Advertisement -
- Advertisement -

ಕವಿಯತ್ರಿ ಸರೋಜಿನಿ ನಾಯ್ಡು ಅವರು ಗಾಂಧೀಜಿಯನ್ನು ಪ್ರಥಮ ಬಾರಿಗೆ 1915ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಮಾಡುತ್ತಾರೆ. ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಕಾರ್ಯನಿಮಿತ್ತ ಬಂದಿರುತ್ತಾರೆ. ಗಾಂಧೀಜಿ ಕಂಬಳಿ ಮೇಲೆ ನೆಲದಲ್ಲಿ ಕೂತು ಕಡಲೆಕಾಯಿ ಬೀಜ, ಬಿಸ್ಕತ್, ಕಿವಿಚಿದ ಟಮೋಟಗೆ ಬೆರೆಸಿದ ಆಲೀವ್ ಆಯಿಲ್ ಸೇವಿಸುತ್ತಿದ್ದರು. ಇದನ್ನು ನೋಡಿದ ಸರೋಜಿನಿ ನಾಯ್ಡು ಗಾಂಧೀಜಿಯವರ ಕುರಿತು ‘ನೀವು ನನಗೆ ದಕ್ಷಿಣ ಆಫ್ರಿಕಾದ ಭಾರತೀಯರ ಪರವಾಗಿ ಹೋರಾಡುವ ಧೀರರಾಗಿ ಕಾಣುತ್ತಿಲ್ಲ. ನೀವು ಒಂದು ಮಿಕ್ಕಿಮೌಸ್‍ನಂತೆ ಕಾಣುತ್ತಿದ್ದೀರಿ’ ಎಂದರು. ‘ನೀವು ಸರೋಜಿನಿ ಅಲ್ಲವೇ? ಇನ್ನು ಯಾರಿಗೆ ಇಷ್ಟು ಧಿಮಾಕು, ಧೈರ್ಯ ಇದ್ದೀತು?’ ಎಂದರು ಗಾಂಧೀಜಿ ಆ ತುಂಟ ಮಾತು ಆಕೆಯ ಮನ ತುಂಬಿತು. ಅಂದು ಗಾಂಧೀಜಿಯ ಅನುಯಾಯಿಯಾದ ಸರೋಜಿನಿದೇವಿ ಮುಂದೆ 33 ವರ್ಷಗಳ ಕಾಲ ಗಾಂಧೀಜಿಯ ನಿಕಟವರ್ತಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರೊಡನೆ ರಾಯಭಾರ ಕೆಲಸಕೂಡ ಮಾಡಿದರು.
ಗಾಂಧೀಜಿ ಅವರ ರಾಷ್ಟ್ರಭಕ್ತಿ ಎಂಥದ್ದು? ಅವರು ಹೀಗೆ ಬರೆಯುತ್ತಾರೆ. ‘ನನ್ನ ರಾಷ್ಟ್ರ ಭಕ್ತಿ ಉದಾರ ಚರಿತವಾದುದು. ನಾನು ವಸುಧೈವ ಕುಟುಂಬಕಂ ಎಂಬ ವಿಚಾರದಲ್ಲಿ ಶ್ರದ್ಧೆಯುಳ್ಳವನು. ನಾನು ಬದುಕಿರುವುದು ಭಾರತದ ಸ್ವಾತಂತ್ರ್ಯಕ್ಕಾಗಿ. ನಾನು ಸಾಯುವುದೂ ಆ ಗುರಿ ಸಾಧನೆಯಲ್ಲಿಯೇ.’
‘ನಾನು ಹಿಂದು, ಆದರೆ ನನ್ನ ನಿಲುವು ‘ಸರ್ವಧರ್ಮ ಸಮನ್ವಯ’, ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ನನ್ನ ಕನಸಿನ ಭಾರತದಲ್ಲಿ ನಾನಾ ಧರ್ಮದವರು ಸಂಪೂರ್ಣ ಸ್ನೇಹದಿಂದ ಕೂಡಿಕೊಂಡು ಬದುಕುತ್ತಾರೆ.’
‘ಸ್ವರಾಜ್ಯವೆಂದರೆ ಹಿಂದು ರಾಷ್ಟ್ರವಲ್ಲ. ನನ್ನ ಶಕ್ತಿಯನ್ನೆಲ್ಲ ಬಳಸಿ ಈ ಸಂಕುಚಿತ ರಾಷ್ಟ್ರ ಪರಿಕಲ್ಪನೆಯ ವಿರುದ್ಧವಾಗಿ ಹೋರಾಡುತ್ತೇನೆ. ಅಧಿಕಾರದ ಅಮಲಿನಲ್ಲಿ ಅಲ್ಪಸಂಖ್ಯಾತರನ್ನು ತುಳಿದು ಹಾಕಿ ಅಂಥಾ ರಾಷ್ಟ್ರ ಸ್ಥಾಪಿಸುವುದಾದರೆ ಅದು ಹಿಂದೂ ಧರ್ಮಕ್ಕೇ ದ್ರೋಹ ಬಗೆದಂತೆ. ಅದು ಹಾನಿಕಾರಕವೂ ಹೌದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಹಿಂದು ದೇವಾಲಯಗಳಿಗೆ ಹರಿಜನರು ಬರುವಂತಿರಲಿಲ್ಲ. ಬಂದರೆ ಅವರನ್ನು ಸನಾತನಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದರು. ‘ಭಾರತೀಯರು ತಮ್ಮ ಇಂಥಾ ವರ್ತನೆಗಾಗಿ ಪಶ್ಚಾತಾಪ ಪಡಬೇಕು’ ಎಂದರು ಗಾಂಧೀಜಿ. ಹರಿಜನರಿಗೆ ದೇವಾಲಯಕ್ಕೆ ಪ್ರವೇಶದ ಹಕ್ಕನ್ನು ನೀಡಬೇಕೆಂದು ಹಿಂದುಗಳಲ್ಲಿ ವಿನಂತಿಸಿಕೊಂಡರು. ಸನಾತನಿಗಳು ಗಾಂಧಿಯವರ ನಿಲುವನ್ನು ಅಲ್ಲಗಳೆದರು. ಆಗ ಗಾಂಧೀಜಿ ಹಿಂದುಗಳು ಹರಿಜನರಿಗೆ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಳ್ಳಿಹಳ್ಳಿಗೂ ಗಾಂಧೀಜಿಯ ಉಪವಾಸದ ಸುದ್ದಿ ಕಾಳ್ಗಿಚ್ಚಿನಂತೆ ಮುಟ್ಟಿತು. ಗಾಂಧೀಜಿ ಉಪವಾಸ 21 ದಿನ ನಡೆಯಿತು. ಉಪವಾಸ ಮುಕ್ತಾಯಕ್ಕೆ ಮೊದಲೇ ಅನೇಕ ಕಡೆ ಹರಿಜನರ ದೇವಾಲಯ ಪ್ರವೇಶಕ್ಕೆ ಜನರು ಅವಕಾಶ ಮಾಡಿಕೊಟ್ಟರು.
ಭಾರತದ ರಾಜಕೀಯವನ್ನು ‘ನಾವು’ ಯುವಕರು ಆಮೂಲಾಗ್ರವಾಗಿ ಬದಲಾಯಿಸಬೇಕು. ರಾಜಕೀಯದಿಂದ ಜಾತಿ, ಧರ್ಮಗಳನ್ನು ದೂರ ಇಡಲು ಹೋರಾಟ ಮಾಡಬೇಕು. ಈ ಬದಲಾವಣೆ ಆಗುವುದೆಂದು ನಿರೀಕ್ಷಣೆ ಮಾಡುತ್ತಾ ಕಾದು ಕೂರುವುದು ಮೂರ್ಖತನ; ಅಥವಾ ಇನ್ಯಾರೋ ನಮ್ಮ ಪರವಾಗಿ ರಾಜಕೀಯದಲ್ಲಿ ಬದಲಾವಣೆ ತರುವುದೆಂದು ಕನಸು ಕಾಣುತ್ತಾ ಕೂಡುವುದೂ ಸರಿಯಲ್ಲ. ಯುವಕರು ತಾವೇ ಬದಲಾವಣೆಯ ವಾಹಕರು ಎಂದು ಘೋಷಣೆ ಮಾಡಬೇಕು.
ದೆಹಲಿಯಲ್ಲಿ ಆಮ್‍ಆದ್ಮಿಪಕ್ಷ ಒಮ್ಮೆಯಲ್ಲ ಎರಡು ಸಾರಿ ಚುನಾವಣೆ ಎದುರಿಸಿ ಸರ್ಕಾರ ರಚಿಸಿದೆ. ಸ್ವಲ್ಪವೇ ಹಣ ಖರ್ಚುಮಾಡಿ ಈ ಚುನಾವಣೆಗಳಲ್ಲಿ ಪಕ್ಷ ಜಯಗಳಿಸಿದೆ. ಹಾಗೆ ಗೆಲ್ಲಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜನರಿಗೆ ಈಗಿನ ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ನೋಡಿ ಬೇಸರವಾಗಿದೆ. ಜನರಿಗೆ ಬದಲಾವಣೆ ಬೇಕಾಗಿದೆ. ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ.
ಇಂದಿನ ರಾಜಕೀಯ ಹೀಗಿದೆ:- ಅಧಿಕಾರಬೇಕೆನ್ನುವವರು ಯಾವುದೋ ಒಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋತರೆ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಸೀಟು ಸಿಗದಿದ್ದರೆ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಇಂತಹವರ ಬರುವಿಕೆಗಾಗಿ ಕಾಯುತ್ತಿರುತ್ತವೆ. ಬಂದೊಡನೆ ಸೇರಿಸಿಕೊಳ್ಳುತ್ತವೆ. ನಾಯಿ ಹಸಿದಿತ್ತು ಹಿಟ್ಟು ಹಳಸಿತ್ತು ಎಂಬಂತಾಗಿದೆ ನಮ್ಮ ಇಂದಿನ ರಾಜಕೀಯ. ಈ ಪದ್ಧತಿ ಬದಲಾಗಬೇಕಲ್ಲವೇ? ಈ ವ್ಯವಸ್ಥೆಗೆ ಬೇಸತ್ತು ಜನ ಯಾವ ಒಂದು ಪಕ್ಷಕ್ಕೂ ಬಹುಮತ ನೀಡದೆ ಒಂದು ಅಭದ್ರ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆಗ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳತೊಡಗುತ್ತವೆ. ಆಗ ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬ ಅನುಭವ ಆ ಪಕ್ಷಗಳದಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕಪ್ಪು ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಚುನಾವಣೆಗೆ ಭಾರೀ ಹಣ ಚೆಲ್ಲಲು ತಯಾರಾಗಬೇಕು. ಈ ಹಣ ರಾಜಕೀಯ ಪಕ್ಷಗಳಿಗೆ ಯಾರು ಯಾರು ಕೊಡುತ್ತಾರೆ? ರಾಜಕೀಯ ಪಕ್ಷಗಳು ಆಯ್ದ ಉದ್ಯಮಿಗಳಿಗೆ ಕೋಟಿ ಕೋಟಿರೂಗಳನ್ನು ದೋಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ. ಈ ಉದ್ಯಮಿಗಳು ಗಳಿಸಿದ ಪಾಪದ ಹಣದಲ್ಲಿ ಒಂದಿಷ್ಟು ನರಿಪಾಲನ್ನು ರಾಜಕೀಯ ಪಕ್ಷಗಳಿಗೆ ಎಸೆಯುತ್ತವೆ. ಹೀಗೆ ಕೊಡಲಾದ ಹಣ ಕೋಟ್ಯಾಂತರ ರೂಪಾಯಿಗಳು.
ಪಕ್ಷ ಕಟ್ಟಲು ಹತ್ತಾರು ವರ್ಷ ಬೇಕು, ಪಕ್ಷ ಬೆಳೆಸಲು ಕೋಟ್ಯಾಂತರ ರೂಗಳು ಬೇಕು ಎನ್ನುವುದು ಈಗ ಸುಳ್ಳಾಗಿದೆ. ಇಷ್ಟು ಬಲವಾಗಿ ಬೇರೂರಿರುವ ಪಕ್ಷಗಳನ್ನು ಮೂಲೋಚ್ಚಾಟನೆ ಮಾಡಲಾಗದು ಎನ್ನುವುದೂ ಒಂದು ಮಿಥ್ಯೆಯಾಗಿದೆ. ಜನ ಈಗಿರುವ ರಾಜಕೀಯ ಪಕ್ಷಗಳಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆ ಬೇಕಾಗಿದೆ.
ಇದಕ್ಕೆ ಪರ್ಯಾಯವಾಗಿ ಆದರ್ಶಗಳಿಂದ ಕೂಡಿದ ಒಂದು ಪಕ್ಷದ ಅಗತ್ಯತೆ ಇದೆ. ಈಗಿರುವ ರಾಜಕೀಯ ಪಕ್ಷಗಳಿಗೆ ಪ್ರತಿ ಸ್ಪರ್ಧಿಯಾಗಿ ನಿಲ್ಲುವುದಷ್ಟೇ ನಮ್ಮ ಆಶಯವಾಗಬಾರದು. ಒಂದು ಹೊಸ ಮೌಲ್ಯ ಸ್ಥಾಪನೆಗಾಗಿ ನಮ್ಮ ಹೋರಾಟ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ನಾವು ಹೊಸ ಪಕ್ಷ ಕಟ್ಟಬೇಕು.

-ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...