Homeಅಂಕಣಗಳುಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

ಹೊಸ ಮೌಲ್ಯಕ್ಕಾಗಿ ಯುವಕರು ಹೊಸ ಪಕ್ಷ ಕಟ್ಟುವಂತಾಗಬೇಕು

- Advertisement -
- Advertisement -

ಕವಿಯತ್ರಿ ಸರೋಜಿನಿ ನಾಯ್ಡು ಅವರು ಗಾಂಧೀಜಿಯನ್ನು ಪ್ರಥಮ ಬಾರಿಗೆ 1915ರಲ್ಲಿ ಇಂಗ್ಲೆಂಡಿನಲ್ಲಿ ಭೇಟಿಮಾಡುತ್ತಾರೆ. ಆಗ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡಿಗೆ ಕಾರ್ಯನಿಮಿತ್ತ ಬಂದಿರುತ್ತಾರೆ. ಗಾಂಧೀಜಿ ಕಂಬಳಿ ಮೇಲೆ ನೆಲದಲ್ಲಿ ಕೂತು ಕಡಲೆಕಾಯಿ ಬೀಜ, ಬಿಸ್ಕತ್, ಕಿವಿಚಿದ ಟಮೋಟಗೆ ಬೆರೆಸಿದ ಆಲೀವ್ ಆಯಿಲ್ ಸೇವಿಸುತ್ತಿದ್ದರು. ಇದನ್ನು ನೋಡಿದ ಸರೋಜಿನಿ ನಾಯ್ಡು ಗಾಂಧೀಜಿಯವರ ಕುರಿತು ‘ನೀವು ನನಗೆ ದಕ್ಷಿಣ ಆಫ್ರಿಕಾದ ಭಾರತೀಯರ ಪರವಾಗಿ ಹೋರಾಡುವ ಧೀರರಾಗಿ ಕಾಣುತ್ತಿಲ್ಲ. ನೀವು ಒಂದು ಮಿಕ್ಕಿಮೌಸ್‍ನಂತೆ ಕಾಣುತ್ತಿದ್ದೀರಿ’ ಎಂದರು. ‘ನೀವು ಸರೋಜಿನಿ ಅಲ್ಲವೇ? ಇನ್ನು ಯಾರಿಗೆ ಇಷ್ಟು ಧಿಮಾಕು, ಧೈರ್ಯ ಇದ್ದೀತು?’ ಎಂದರು ಗಾಂಧೀಜಿ ಆ ತುಂಟ ಮಾತು ಆಕೆಯ ಮನ ತುಂಬಿತು. ಅಂದು ಗಾಂಧೀಜಿಯ ಅನುಯಾಯಿಯಾದ ಸರೋಜಿನಿದೇವಿ ಮುಂದೆ 33 ವರ್ಷಗಳ ಕಾಲ ಗಾಂಧೀಜಿಯ ನಿಕಟವರ್ತಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಬಾರಿ ಸೆರೆಮನೆವಾಸ ಅನುಭವಿಸಿದರು. ಬ್ರಿಟಿಷರೊಡನೆ ರಾಯಭಾರ ಕೆಲಸಕೂಡ ಮಾಡಿದರು.
ಗಾಂಧೀಜಿ ಅವರ ರಾಷ್ಟ್ರಭಕ್ತಿ ಎಂಥದ್ದು? ಅವರು ಹೀಗೆ ಬರೆಯುತ್ತಾರೆ. ‘ನನ್ನ ರಾಷ್ಟ್ರ ಭಕ್ತಿ ಉದಾರ ಚರಿತವಾದುದು. ನಾನು ವಸುಧೈವ ಕುಟುಂಬಕಂ ಎಂಬ ವಿಚಾರದಲ್ಲಿ ಶ್ರದ್ಧೆಯುಳ್ಳವನು. ನಾನು ಬದುಕಿರುವುದು ಭಾರತದ ಸ್ವಾತಂತ್ರ್ಯಕ್ಕಾಗಿ. ನಾನು ಸಾಯುವುದೂ ಆ ಗುರಿ ಸಾಧನೆಯಲ್ಲಿಯೇ.’
‘ನಾನು ಹಿಂದು, ಆದರೆ ನನ್ನ ನಿಲುವು ‘ಸರ್ವಧರ್ಮ ಸಮನ್ವಯ’, ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣುತ್ತೇನೆ. ನನ್ನ ಕನಸಿನ ಭಾರತದಲ್ಲಿ ನಾನಾ ಧರ್ಮದವರು ಸಂಪೂರ್ಣ ಸ್ನೇಹದಿಂದ ಕೂಡಿಕೊಂಡು ಬದುಕುತ್ತಾರೆ.’
‘ಸ್ವರಾಜ್ಯವೆಂದರೆ ಹಿಂದು ರಾಷ್ಟ್ರವಲ್ಲ. ನನ್ನ ಶಕ್ತಿಯನ್ನೆಲ್ಲ ಬಳಸಿ ಈ ಸಂಕುಚಿತ ರಾಷ್ಟ್ರ ಪರಿಕಲ್ಪನೆಯ ವಿರುದ್ಧವಾಗಿ ಹೋರಾಡುತ್ತೇನೆ. ಅಧಿಕಾರದ ಅಮಲಿನಲ್ಲಿ ಅಲ್ಪಸಂಖ್ಯಾತರನ್ನು ತುಳಿದು ಹಾಕಿ ಅಂಥಾ ರಾಷ್ಟ್ರ ಸ್ಥಾಪಿಸುವುದಾದರೆ ಅದು ಹಿಂದೂ ಧರ್ಮಕ್ಕೇ ದ್ರೋಹ ಬಗೆದಂತೆ. ಅದು ಹಾನಿಕಾರಕವೂ ಹೌದು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಗ ಹಿಂದು ದೇವಾಲಯಗಳಿಗೆ ಹರಿಜನರು ಬರುವಂತಿರಲಿಲ್ಲ. ಬಂದರೆ ಅವರನ್ನು ಸನಾತನಿಗಳು ಬರ್ಬರವಾಗಿ ನಡೆಸಿಕೊಳ್ಳುತ್ತಿದ್ದರು. ‘ಭಾರತೀಯರು ತಮ್ಮ ಇಂಥಾ ವರ್ತನೆಗಾಗಿ ಪಶ್ಚಾತಾಪ ಪಡಬೇಕು’ ಎಂದರು ಗಾಂಧೀಜಿ. ಹರಿಜನರಿಗೆ ದೇವಾಲಯಕ್ಕೆ ಪ್ರವೇಶದ ಹಕ್ಕನ್ನು ನೀಡಬೇಕೆಂದು ಹಿಂದುಗಳಲ್ಲಿ ವಿನಂತಿಸಿಕೊಂಡರು. ಸನಾತನಿಗಳು ಗಾಂಧಿಯವರ ನಿಲುವನ್ನು ಅಲ್ಲಗಳೆದರು. ಆಗ ಗಾಂಧೀಜಿ ಹಿಂದುಗಳು ಹರಿಜನರಿಗೆ ದೇವಾಲಯಗಳಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹಳ್ಳಿಹಳ್ಳಿಗೂ ಗಾಂಧೀಜಿಯ ಉಪವಾಸದ ಸುದ್ದಿ ಕಾಳ್ಗಿಚ್ಚಿನಂತೆ ಮುಟ್ಟಿತು. ಗಾಂಧೀಜಿ ಉಪವಾಸ 21 ದಿನ ನಡೆಯಿತು. ಉಪವಾಸ ಮುಕ್ತಾಯಕ್ಕೆ ಮೊದಲೇ ಅನೇಕ ಕಡೆ ಹರಿಜನರ ದೇವಾಲಯ ಪ್ರವೇಶಕ್ಕೆ ಜನರು ಅವಕಾಶ ಮಾಡಿಕೊಟ್ಟರು.
ಭಾರತದ ರಾಜಕೀಯವನ್ನು ‘ನಾವು’ ಯುವಕರು ಆಮೂಲಾಗ್ರವಾಗಿ ಬದಲಾಯಿಸಬೇಕು. ರಾಜಕೀಯದಿಂದ ಜಾತಿ, ಧರ್ಮಗಳನ್ನು ದೂರ ಇಡಲು ಹೋರಾಟ ಮಾಡಬೇಕು. ಈ ಬದಲಾವಣೆ ಆಗುವುದೆಂದು ನಿರೀಕ್ಷಣೆ ಮಾಡುತ್ತಾ ಕಾದು ಕೂರುವುದು ಮೂರ್ಖತನ; ಅಥವಾ ಇನ್ಯಾರೋ ನಮ್ಮ ಪರವಾಗಿ ರಾಜಕೀಯದಲ್ಲಿ ಬದಲಾವಣೆ ತರುವುದೆಂದು ಕನಸು ಕಾಣುತ್ತಾ ಕೂಡುವುದೂ ಸರಿಯಲ್ಲ. ಯುವಕರು ತಾವೇ ಬದಲಾವಣೆಯ ವಾಹಕರು ಎಂದು ಘೋಷಣೆ ಮಾಡಬೇಕು.
ದೆಹಲಿಯಲ್ಲಿ ಆಮ್‍ಆದ್ಮಿಪಕ್ಷ ಒಮ್ಮೆಯಲ್ಲ ಎರಡು ಸಾರಿ ಚುನಾವಣೆ ಎದುರಿಸಿ ಸರ್ಕಾರ ರಚಿಸಿದೆ. ಸ್ವಲ್ಪವೇ ಹಣ ಖರ್ಚುಮಾಡಿ ಈ ಚುನಾವಣೆಗಳಲ್ಲಿ ಪಕ್ಷ ಜಯಗಳಿಸಿದೆ. ಹಾಗೆ ಗೆಲ್ಲಿಸಬಹುದು ಎಂಬುದನ್ನು ನಮಗೆ ತೋರಿಸಿಕೊಟ್ಟಿದೆ. ಜನರಿಗೆ ಈಗಿನ ರಾಜಕೀಯ ಪಕ್ಷಗಳ ವೈಫಲ್ಯಗಳನ್ನು ನೋಡಿ ಬೇಸರವಾಗಿದೆ. ಜನರಿಗೆ ಬದಲಾವಣೆ ಬೇಕಾಗಿದೆ. ಅವರ ಆಸೆಯನ್ನು ಪೂರೈಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ.
ಇಂದಿನ ರಾಜಕೀಯ ಹೀಗಿದೆ:- ಅಧಿಕಾರಬೇಕೆನ್ನುವವರು ಯಾವುದೋ ಒಂದು ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಚುನಾವಣೆಯಲ್ಲಿ ಸೋತರೆ ಮತ್ತೊಂದು ಪಕ್ಷಕ್ಕೆ ಹಾರುತ್ತಾರೆ. ಸೀಟು ಸಿಗದಿದ್ದರೆ ಬೇರೆ ಪಕ್ಷಕ್ಕೆ ಜಿಗಿಯುತ್ತಾರೆ. ಆ ಪಕ್ಷಗಳು ಇಂತಹವರ ಬರುವಿಕೆಗಾಗಿ ಕಾಯುತ್ತಿರುತ್ತವೆ. ಬಂದೊಡನೆ ಸೇರಿಸಿಕೊಳ್ಳುತ್ತವೆ. ನಾಯಿ ಹಸಿದಿತ್ತು ಹಿಟ್ಟು ಹಳಸಿತ್ತು ಎಂಬಂತಾಗಿದೆ ನಮ್ಮ ಇಂದಿನ ರಾಜಕೀಯ. ಈ ಪದ್ಧತಿ ಬದಲಾಗಬೇಕಲ್ಲವೇ? ಈ ವ್ಯವಸ್ಥೆಗೆ ಬೇಸತ್ತು ಜನ ಯಾವ ಒಂದು ಪಕ್ಷಕ್ಕೂ ಬಹುಮತ ನೀಡದೆ ಒಂದು ಅಭದ್ರ ಸ್ಥಿತಿಯನ್ನು ಸೃಷ್ಟಿಸುತ್ತಾರೆ. ಆಗ ರಾಜಕೀಯ ಪಕ್ಷಗಳು ಇತರ ಪಕ್ಷಗಳೊಡನೆ ಹೊಂದಾಣಿಕೆ ಮಾಡಿಕೊಳ್ಳತೊಡಗುತ್ತವೆ. ಆಗ ಎತ್ತು ಏರಿಗೆ ಎಮ್ಮೆ ನೀರಿಗೆ ಎಂಬ ಅನುಭವ ಆ ಪಕ್ಷಗಳದಾಗುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕಪ್ಪು ಹಣ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟವಾಗಿದೆ. ಅಷ್ಟೇ ಅಲ್ಲ, ಚುನಾವಣೆಗೆ ಭಾರೀ ಹಣ ಚೆಲ್ಲಲು ತಯಾರಾಗಬೇಕು. ಈ ಹಣ ರಾಜಕೀಯ ಪಕ್ಷಗಳಿಗೆ ಯಾರು ಯಾರು ಕೊಡುತ್ತಾರೆ? ರಾಜಕೀಯ ಪಕ್ಷಗಳು ಆಯ್ದ ಉದ್ಯಮಿಗಳಿಗೆ ಕೋಟಿ ಕೋಟಿರೂಗಳನ್ನು ದೋಚಿಕೊಳ್ಳಲು ಅವಕಾಶ ಕಲ್ಪಿಸಿಕೊಡುತ್ತವೆ. ಈ ಉದ್ಯಮಿಗಳು ಗಳಿಸಿದ ಪಾಪದ ಹಣದಲ್ಲಿ ಒಂದಿಷ್ಟು ನರಿಪಾಲನ್ನು ರಾಜಕೀಯ ಪಕ್ಷಗಳಿಗೆ ಎಸೆಯುತ್ತವೆ. ಹೀಗೆ ಕೊಡಲಾದ ಹಣ ಕೋಟ್ಯಾಂತರ ರೂಪಾಯಿಗಳು.
ಪಕ್ಷ ಕಟ್ಟಲು ಹತ್ತಾರು ವರ್ಷ ಬೇಕು, ಪಕ್ಷ ಬೆಳೆಸಲು ಕೋಟ್ಯಾಂತರ ರೂಗಳು ಬೇಕು ಎನ್ನುವುದು ಈಗ ಸುಳ್ಳಾಗಿದೆ. ಇಷ್ಟು ಬಲವಾಗಿ ಬೇರೂರಿರುವ ಪಕ್ಷಗಳನ್ನು ಮೂಲೋಚ್ಚಾಟನೆ ಮಾಡಲಾಗದು ಎನ್ನುವುದೂ ಒಂದು ಮಿಥ್ಯೆಯಾಗಿದೆ. ಜನ ಈಗಿರುವ ರಾಜಕೀಯ ಪಕ್ಷಗಳಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಅವರಿಗೆ ಬದಲಾವಣೆ ಬೇಕಾಗಿದೆ.
ಇದಕ್ಕೆ ಪರ್ಯಾಯವಾಗಿ ಆದರ್ಶಗಳಿಂದ ಕೂಡಿದ ಒಂದು ಪಕ್ಷದ ಅಗತ್ಯತೆ ಇದೆ. ಈಗಿರುವ ರಾಜಕೀಯ ಪಕ್ಷಗಳಿಗೆ ಪ್ರತಿ ಸ್ಪರ್ಧಿಯಾಗಿ ನಿಲ್ಲುವುದಷ್ಟೇ ನಮ್ಮ ಆಶಯವಾಗಬಾರದು. ಒಂದು ಹೊಸ ಮೌಲ್ಯ ಸ್ಥಾಪನೆಗಾಗಿ ನಮ್ಮ ಹೋರಾಟ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ನಾವು ಹೊಸ ಪಕ್ಷ ಕಟ್ಟಬೇಕು.

-ಹೆಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...