Homeಸಾಮಾಜಿಕ"ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ.... '

“ಜೀವ ಬಿಟ್ಟ ಸೈನಿಕರನ್ನು ನೆನೆಯುತ್ತ…. ‘

- Advertisement -
- Advertisement -

ಎಂ.ಡಿ.ಒಕ್ಕುಂದ |

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೀಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…..

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ……

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾಾ….

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳೆದಾಗೊಮ್ಮೆ
ಗುಡ್ದದೋರೆಗೋಡಿ
ಯೆಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…..

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗವ್ರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದಗದಾಳೆ ತಾಯಿ ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೊರುವಿ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಸಾನೆಯಲ್ಲಿ
ಚಿಟ್ಟನೇ ಚೇರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ…..

ಪಪ್ಪಾ
ಭಾರತದ ನಕಾಶೆಯಲ್ಲಿ
ಕಾಶ್ಮೀರದ ಗಡಿರೇಖೆಗಳನ್ನೆಳೆಯುವಾಗ
ದಳದಳ ಕಣ್ಣೀರುದುರಿ
ಗಡಿರೇಖೆಗಳು
ತೊಳೆದು ಹೋದವು
ಮತ್ತೆ ಬಿಡಿಸಲಾರೆ
ಯಾವಾಗ ಬರುವೆ ಪಪ್ಪಾ…

ಪಪ್ಪಾ
ನಮ್ಮ ಹೊಟ್ಟೆ ಬಟ್ಟೆಗಾಗಿ
ನೀನು ಸೈನ್ಯ ಸೇರಿದೆಯಂತೆ
ನನಗೆ ರೊಟ್ಟಿ ತಿನ್ನುವಾಗೊಮ್ಮೆ
ಹೊಟ್ಟೆ ತೊಳಸಿದಂತಾಗುತ್ತದೆ
ಬಟ್ಟೆ ತೊಡುವಾಗೊಮ್ಮೆ
ಬೆಂಕಿ ಸುತ್ತಿಕೊಂಡಂತಾಗುತ್ತದೆ
ಯಾವಾಗ ಬರುವಿ ಪಪ್ಪಾ…

ಪಪ್ಪಾ
ನೀ ತಂದ ಹೊಸ ಬಟ್ಟೆ
ಹೊಲಿಸಿಕೊಳ್ಳುವ ಮೊದಲೇ
ನೀ ಹೋಗಿಬಿಟ್ಟಿ
ಮತ್ತೆ ಬರುವೆಯಾ ಪಪ್ಪಾ…

ಆಪ್ಪ ಆಪ್ಪಾಜಿ ಆಪ್ಪಯ್ಯಾ ಪಪ್ಪಾ
ಆಪ್ಪಂದಿರನು ಕರೆವ
ಆಕ್ಕರೆಯ ದನಿಗಳನ್ನು
ಕೇಳಿದಾಗೊಮ್ಮೆ
ಗುಡ್ದದೋರೆಗೋಡಿ
ಎಲ್ಲ ಪದಗಳಲ್ಲಿ
ನಿನ್ನನ್ನು ಕೂಗಿ ಕರೆಯುತ್ತೇನೆ
ಮರುದನಿ ಕೇಳುವುದಿಲ್ಲ
ಮರಳಿ ಬರುವೆಯಾ ಪಪ್ಪಾ…

ಪಪ್ಪಾ
ಹುತಾತ್ಮ ಯೋಧ
ಸರಕಾರಿ ಗೌರವಗಳೊಂದಿಗೆ
ಮಣ್ಣು ಸೇರುವದ ಟಿವಿಯಲಿ ಕಂಡೆ
ಹೇಗೆ ಮಲಗಲಿ ತಂದೆ
ಬಿಕ್ಕುತ್ತಿದ್ದಾಳೆ ತಾಯಿ
ಆ ಕಡೆಗೆ ಮುಖಮಾಡಿ
ಕಣ್ಣು ಮುಚ್ಚಿರುವೆ ನಾನೀ ಕಡೆಗೆ ಮುಖತೋರುವೆ
ಮೆದುಳಿನ ಕಪ್ಪು ಲೋಕದಲ್ಲಿ
ತೇಲಿ ಬರುತ್ತದೆ ನಿನ್ನ
ಬಿಳಿಬಿಳಿ ಹೆಣ
ಕೇಸರಿ ಬಿಳಿ ಹಸಿರು ನಿಶಾನೆಯಲ್ಲಿ
ಚಿಟ್ಟನೇ ಚೀರುತ್ತೇನೆ
ಬಿಗಿದಪ್ಪಿದ್ದಾಳೆ ತಾಯಿ
ಬೇಗ ಬಾರೋ ತಂದೆ……

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...