Homeಅಂಕಣಗಳುಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ‘ಅಟ್ಯಾಕ್ ಹನ್ಮಂತ’. ಇದೀಗ ದೊಡ್ ಸುದ್ದಿಗಳು.
ಪರದೇಶಿ ದುಡ್ಡಿಗೆ ಆಸೆಪಟ್ಟು ಬ್ಲೂಜೆಪಿ ಮಾಡ್ತು ಎಡವಟ್ಟು: ಕಾನೂನಿಗೆ ತಂದ್ರು ತಿದ್ದುಪಡಿ, ಕೋರ್ಟ್ ಇಡ್ತು ದೊಡ್ಡ ಧಡಿ.
ಪೊಲಿಟಿಕಲ್ ಪಾರ್ಟಿಗಳು ವಿದೇಶದಿಂದ ಯಾವುದೇ ಬಗೆಯ ದೇಣಿಗೆ ಪಡೆಯುವುದು ಅಪರಾಧ ಎಂದಿದ್ದ ಹಿಂದಿನ ಕಾನೂನನ್ನು ಬದಲಾಯಿಸಿ, ದೇಶದೊಳಗಿನ ಪಕ್ಷಗಳು ಯಾವ ದೇಶದ ಶ್ರೀಮಂತರಿಂದ ಬೇಕಾದರೂ ಕೋಟಿಗಟ್ಟಲೆ ತಿರುಪೆ ಎತ್ತಬಹುದು ಎಂದು ತಿದ್ದುಪಡಿ ಮಾಡಿಕೊಂಡಿದ್ದ ಬ್ಲೂಜೆಪಿ ಪಕ್ಷದ ಮುಖಕ್ಕೆ ಖಡಕ್ ನೊಟೀಸ್ ಕಳಿಸಿರುವ ದೆಹಲಿ ಹೈಕೋರ್ಟ್, ಇಷ್ಟ ಬಂದಂತೆ ಕಾನೂನನ್ನು ಬದಲಿಸಲು, ಕೋರ್ಟ್‍ನ ತೀರ್ಪುಗಳನ್ನು ತಿರುಚಲು ಕಾನೂನು ನಿಮ್ಮಪ್ಪನ ಮನೆಯ ಆಸ್ತಿಯಲ್ಲ ಎಂದು ಕ್ಯಾಕರಿಸಿ ಉಗಿದಿದೆ. ಅಕ್ರಮವಾಗಿ ಅಘೋಷಿತ ಮೂಲಗಳಿಂದ ಪಕ್ಷಕ್ಕೆ ದೇಣಿಗೆ ಪಡೆದು ಜೇಬು ತುಂಬಿಸಿಕೊಂಡಿದ್ದ ಕಮಲ ಪಕ್ಷ ಕಾನೂನಿನ ಕುಣಿಕೆಗೆ ಸಿಲುಕಿ ಮುಖ ಕೆತ್ತಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೈ ಪಕ್ಷ ಕೂಡ ಈ ದಂಧೆಯಲ್ಲಿ ಕಮಲ ಪಕ್ಷಕ್ಕೆ ಸಾಥ್ ಕೊಟ್ಟಿರುವುದೂ ಕೂಡ ಜಗಜ್ಜಾಹೀರಾಗಿದೆ. ಕಾನೂನು ಕುಣಿಕೆಯಿಂದ ಬಚಾವಾಗಲು ಎಫ್.ಸಿ.ಆರ್.ಎ ಕಾಯ್ದೆಗೇ ತಿದ್ದುಪಡಿ ತಂದು ಎಸ್ಕೇಪ್ ರೂಟ್ ಹುಡುಕಿದ್ದ ಊಸರವಳ್ಳಿ ಪಕ್ಷ ಈಗ ಹೆಗ್ಗಣ ಹಿಡಿಯಲು ಇಟ್ಟಿದ್ದ ಇಕ್ಕಳದೊಳಗೆ ಮುಖ ಸಿಗಿಸಿಕೊಂಡು ತಪ್ಪಿಸಿಕೊಳ್ಳಲಾರದೆ ಕುಯ್ಯೋ ಮರ್ರೋ ಎಂದು ನರಳಾಡುತ್ತಿರುವುದು ದೇಶದ ಜನತೆಗೆ ಸಂತಸವುಂಟು ಮಾಡಿದೆ.

*****

ಲಾಚಾರ್ ಸಾಹಿತಿ ‘ಬೊಯ್ರಪ್ಪ’ನ ‘ಮಕ್ಕನ್ ಮಾರ್’ ಅವಾಂತರ: ಈ ಸಲ ಗ್ಯಾರಂಟಿ ವಕ್ಕರಿಸುತ್ತಂತೆ ಜ್ಞಾನಪೀಠಕ್ಕೇ ಗಂಡಾಂತರ
ದೇಶದ ಅತ್ಯುನ್ನತ ಪ್ರಶಸ್ತಿಗಳು ಘೋಷಣೆಯಾಗಲು ಒಂದೆರಡು ತಿಂಗಳು ಇರುವಂತೆಯೇ ಗರ್ಭಧರಿಸಿದ ಬೆಕ್ಕಿನಂತೆ ಕಯೋವ್, ಮಿಯೋವ್ ಎಂದು ಎದ್ದು ಕೂರುವ ಕುಖ್ಯಾತ ಸಾಹಿತಿ ‘ಬೊಯ್ರಪ್ಪ’ನವರು ಪ್ರತೀವರ್ಷದಂತೆ ಈ ವರ್ಷವೂ ತಮ್ಮ ಮನೆಯಿಂದ ಹೊರಗೆ ಬಂದು ನರಳಾಡಲು ಶುರು ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸಲು ಪಕೋಡೇಂದ್ರ ಫಕೀರಪ್ಪನಿಗೆ 5 ವರ್ಷಗಳು ಜುಜುಬಿ, ಕನಿಷ್ಟಪಕ್ಷ ಎರಡು ಶತಮಾನವಾದರೂ ಪಕೋಡಯ್ಯನು ದೇಶದ ಪ್ರಧಾನಿಯಾದರೆ ದೇಶ ಉದ್ದಾರವಾಗುತ್ತದೆ ಎಂಬ ಸುಸ್ಸು ಸ್ಟೇಟ್‍ಮೆಂಟನ್ನು ಮನೆಯೆದುರಿನ ಲೈಟುಕಂಬಕ್ಕೆ ಕಾಲೆತ್ತಿ ಹುಯ್ದು ವಾಪಸ್ ಮನೆಯೊಳಗೆ ಬುಡುಬುಡನೆ ಓಡಿಹೋಗಿ ಹೊಟ್ಟೆ ಮಕಾಡೆ ಮಲಗಿಬಿಟ್ಟರೆಂದು ನಂಬಲರ್ಹ ಗಾಳಿಸುದ್ದಿಗಳು ತಿಳಿಸಿವೆ.

*****

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮುಸುಡಿಗೆ ಬಿತ್ತು ಕೋರ್ಟ್ ತಪರಾಕಿ: ಕೇಜ್ರಿವಾಲ್ ಎದುರು ಮಕಾಡೆಬಿದ್ದ ಬ್ಲೂಜೆಪಿ ಬಾಯಿಗೆ ಆನೆಪಟಾಕಿ.
ದೆಹಲಿಯಲ್ಲಿ ಕೇಜ್ರಿವಾಲ್ ಕೈಲಿ ಸಮಾ ಇಕ್ಕಿಸಿಕೊಂಡು ಚರಂಡಿಪಾಲಾಗಿದ್ದ ದ್ವೇಷಭಕ್ತ ಬ್ಲೂಜೆಪಿಗಳು ಮರ್ಮಸ್ಥಳಕ್ಕೆ ಬಿದ್ದ ಸುತ್ತಿಗೆ ಏಟಿಗೂ ಜಗ್ಗದೆ ಕೇಜ್ರಿವಾಲ್ ತಲೆಯ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಗಢವಗೂಬೆಯೊಂದನ್ನು ಕೂರಿಸಿ ಬ್ಯಾಕ್‍ಡೋರ್ ಪಾಲಿಟಿಕ್ಸಿಗೆ ಇಳಿದಿದ್ದರು. ಈ ಬಗ್ಗೆ ಸುಪ್ರೀಂಕೋರ್ಟಿಗೆ ಕೇಸು ಜಡಾಯಿಸಿದ್ದ ಕೇಜ್ರಿವಾಲ್ ಈ ವನ್ಯಜೀವಿ ಗಢವಗೂಬೆಯನ್ನು ಯಾವುದಾದರೂ ಅಭಯಾರಣ್ಯಕ್ಕೆ ಎಸೆಯಬೇಕೆಂದು ಹೋರಾಟ ನಡೆಸುತ್ತಿದ್ದರು. ಈ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಲೆಫ್ಟಿನೆಂಟ್ ಗೌರ್ನರ್’ ಎಂಬ ಹುದ್ದೆಯೇ ಮೂರುಕಾಸಿನದ್ದು, ಅದಕ್ಕೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ, ಬ್ಲೂಜೆಪಿಯ ಈ ಲಡಕಾಸಿ ಗೌರ್ನರ್ ಜನಪ್ರತಿನಿಧಿಗಳ ಅಧಿಕಾರದಲ್ಲಿ ಮೂಗುತೂರಿಸದೆ ಸರ್ವಾಂಗಗಳನ್ನೂ ಮುಚ್ಚಿಕೊಂಡು ತೆಪ್ಪಗಿರಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಕೇಜ್ರಿವಾಲ್ ಕೈ ಮೇಲಾಗಿ, ಬ್ಲೂಜೆಪಿಯ ವಯೋವೃದ್ಧ ಪಾಖಂಡಿಗಳು ತಾವು ಬಿದ್ದಿದ್ದ ಚರಂಡಿಯೊಳಗಿಂದ ಎದ್ದುಬರಲು ಯತ್ನಿಸುತ್ತಿರುವಾಗಲೇ ಮತ್ತೊಂದು ಮ್ಯಾನ್‍ಹೋಲ್ ಒಳಕ್ಕೆ ತಲೆಕೆಳಗಾಗಿ ಬಿದ್ದಂತಾಗಿದೆಯೆಂಬ ವಿಶ್ಲೇಷಣೆ ಹೊರಬಿದ್ದಿದೆ. ಈ ಕಿತಾಪತಿ ಪಿತೂರಿಯಲ್ಲಿ ಕೈ ಪಕ್ಷದ ಹಾಸ್ಯನಟರೂ ಸೇರಿಕೊಂಡು ಕೇಜ್ರಿವಾಲರನ್ನು ಈ ಸಲ ಕೆಡವಲು ನಡೆಸುತ್ತಿದ್ದ ಸಂಚು ಈ ಮೂಲಕ ವಿಫಲವಾಗಿದ್ದು, ಸದ್ಯಕ್ಕೆ ರಾಜಧಾನಿಯ ಗೋಶಾಲೆಯಲ್ಲಿ ಹಿಂಡಿಬೂಸಾ ಮೆಲ್ಲುತ್ತ ಪೊಗದಸ್ತಾಗಿದ್ದ ಕೈ ಪಕ್ಷದ ದೆಹಲಿ ನಾಯಕರು ಈ ಕೋರ್ಟ್ ತೀರ್ಪು ಕೇಳಿದ ಕೂಡಲೇ ಅಂಬಾ ಎಂದು ಅರಚಿ, ನಾಲಿಗೆ ಹೊರಚಾಚಿ ಮೂರ್ಛೆ ಹೋಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*****

ಕ್ಯಾನ್ಸರ್‍ಗೆ ದನದ ಮೂತ್ರದಲ್ಲಿ ಔಷಧಿ ಕಂಡುಹಿಡಿದ್ರು ಗುಜರಾತಿಗರು: ಫ್ರಥಮ ದರ್ಜೆ ಮುಠ್ಠಾಳರ ಸಂಶೋಧನೆಯಾಯ್ತು ಜಗಜ್ಜಾಹೀರು
‘ಆಧುನಿಕ ವೈದ್ಯಶಾಸ್ತ್ರ’ ಅಂದರೆ ಕೇಜಿಗೆಷ್ಟು, ಅದು ನೋಡಲಿಕ್ಕೆ ಕರ್ರಗಿರುತ್ತೋ ಬೆಳ್ಳಗಿರುತ್ತೋ ಎಂದು ಕೇಳುವ ಪ್ರಥಮದರ್ಜೆ ಮುಠ್ಠಾಳರ ಗುಜರಾತಿನ ಪಡೆಯೊಂದು, ದನದ ಮೂತ್ರದಲ್ಲಿ ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಎದೆಯೊಡೆಯುವ ಹಾಸ್ಯಾಸ್ಪದ ಸಂಶೋಧನೆಯನ್ನು ಮಾಡಿ ಮುಗಿಸಿದ್ದಾರೆ. ಗುಜರಾತಿನ ಜುನಾಗಢ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಈ ಕಿಸಲಗೇಡಿ ಕ್ರಿಸ್ತಪೂರ್ವ ಕಾಲದ ತಾಳೆಗರಿ ಸಂಶೋಧನೆ ನಡೆಸಿದ್ದಾರೆ. ಈ ಸುದ್ದಿ ತಿಳಿದ ವಿದೇಶದ ಯೂನಿವರ್ಸಿಟಿಗಳು ಈ ನಾಲ್ಕನೇ ದರ್ಜೆ ಸಂಶೋಧನೆ ನಡೆಸಿದ ಆದಿಮಾನವರು ಶಿಲಾಯುಗ ಕಾಲದಿಂದ 21ನೇ ಶತಮಾನಕ್ಕೆ ಟೈಂಟ್ರಾವೆಲ್ ಮಾಡಿಕೊಂಡು ಬಂದದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಲು ಅನುಮತಿ ಕೋರಿ ದ್ವೇಷಭಕ್ತರ ಸರ್ಕಾರದ ಅನುಮತಿ ಕೋರಿದ್ದಾರಂತೆ. ಈ ಅರ್ಜಿಯನ್ನು ಓದಿದ ಸನ್ಮಾನ್ಯ ಕೌಡಂಗ್‍ಪ್ರಿಯ ಪಕೋಡೇಂದ್ರ ಅವರು ಆ ಸಂಶೋಧನೆಗಿಂತಲೂ ಮುಂಚೆ ತನ್ನ ತಲೆಯನ್ನೇ ಮೊದಲು ಆಪರೇಷನ್ ಮಾಡಿ ಒಳಗಿರುವುದು ಮಾಂಸಮಜ್ಜೆಯಿಂದಾದ ಮಿದುಳೋ, ಇಲ್ಲಾ.. ದನದ ಸೆಗಣಿಯಿಂದ ತಯಾರಾದ ಮಿದುಳೋ ಎಂದು ಪತ್ತೆ ಮಾಡಿಕೊಡಲು ವಿದೇಶಿ ಸಂಶೋಧಕರನ್ನು ಅಂಗಲಾಚಿದ್ದಾರಂತೆ.

*****

ಹೊಲದಲ್ಲಿ ನಿಂತು ಮಂತ್ರ ಹೇಳಿದ್ರೆ ಬೆಳೆ ಬರುತ್ತಂತೆ
ಗೋವಾ ಬ್ಲೂಜೆಪಿ ಸಚಿವನ ತಲೆಕೆಟ್ಟ ಅಂತೆಕಂತೆ
ರೈತರ ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇದ್ರೆ ರೈತರು ಹೊಲದಲ್ಲಿ ನಿಂತು “ಓಂ ರುಂ ಜುಂ ಸ್ವಾಹಾ, ಓಂ ರುಂ ಜುಂ ಸ್ವಾಹಾ” ಎಂದು ಮಂತ್ರ ಪಠಿಸಿದರೆ ಬೆಳೆ ಚೆನ್ನಾಗಿ ಬರುತ್ತದೆಂದು ಗೋವಾದ ಬ್ಲೂಜೆಪಿ ಪಕ್ಷದ ಕೃಷಿಸಚಿವ ಹೊಸ ಸಂಶೋಧನೆ ಮಾಡಿದ್ದಾನೆ. ಹೀಗೆ ಮಂತ್ರ ಪಠಿಸುವಾಗ ಹಿಂದಿನಿಂದ ಯಾವುದಾದರೂ ಕೊಳಕುಮಂಡಲದ ಹಾವು ಬಂದು ತೊಡೆಗೆ ಕಡಿದರೆ ಓಡಿ ಹೋಗುವುದೋ, ಕಚ್ಚಿಸಿಕೊಂಡು ಅಲ್ಲೇ ನಿಂತು “ಓಂ ರುಂ ಜುಂ ಸ್ವಾಹಾ” ಮಂತ್ರ ಪಠಿಸುವುದೋ ಎಂದು ವದರಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಕೆಂಡಾಮಂಡಲರಾಗಿ ಕೈಲಿ ಹಿಡಿದಿದ್ದ ಮೈಕನ್ನೇ ಕಚಪಚನೆ ಅಗಿದು ‘ಪ್ಯಾಕಪ್’ ಎಂದು ಕಿರುಚಿ ಓಡಿಹೋದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಎಲ್ಲ ಬಿಟ್ಟು ಈ ಬ್ಲೂಜೆಪಿಯವರಿಗೇ ಈ ಕಜ್ಜಿ ಐಡಿಯಾಗಳು ಹೇಗೆ ಬರುತ್ತವೆ? ಯಾವ ಫ್ಯಾಕ್ಟರಿಯಲ್ಲಿ ಇವರ ಮೆದುಳುಗಳನ್ನು ಪ್ರೊಡಕ್ಷನ್ ಮಾಡಲಾಗುತ್ತದೆ ಎಂದು ಕಕ್ಕಾಬಿಕ್ಕಿಯಾಗಿರುವ ಕೃಷಿ ವಿಜ್ಞಾನಿಗಳು ಸದರಿ ಬ್ಲೂಜೆಪಿ ಕೃಷಿ ಸಚಿವನನ್ನು ಗುಂಪುಗಲಭೆಯಲ್ಲಿ ಹೊಡೆದು ರೈತರ ಹೊಲಗಳಿಂದ ಒದ್ದೋಡಿಸಲು ತಯಾರಾಗಿದ್ದಾರೆಂದು ವರದಿಯಾಗಿದೆ. ಈ ಮನೆಹಾಳು ಐಡಿಯಾ ಮಾಡಿದ ಕೃಷಿಸಚಿವನ ಎಬಡೇಶಿ ಹೇಳಿಕೆಯ ದೆಸೆಯಿಂದ ಕಂಗಾಲಾಗಿರುವ ಗೋವಾದ ರೈತರು, ಹಂದಿ ಆಹಾರವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ಸಾಗಿಸುವ ಹಡಗಿನಲ್ಲಿ ಈ ಸಚಿವನನ್ನು ಹಾಕಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಆದಷ್ಟು ಬೇಗ ರಫ್ತು ಮಾಡಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಇನ್ನೂ ಆಗ್ರಹಿಸಿಲ್ಲದಿರುವುದು ಆಶ್ಚರ್ಯ ಹುಟ್ಟಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನಷ್ಟು ಮತ್ತಷ್ಟು ಆಘಾತ ಹುಟ್ಟಿಸುವ ವಾರ್ತೆಗಳಿಗಾಗಿ ಮುಂದಿನವಾರ ಸಿಗೋಣ. ಧನ್ಯವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...