Homeಅಂಕಣಗಳುಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ‘ಅಟ್ಯಾಕ್ ಹನ್ಮಂತ’. ಇದೀಗ ದೊಡ್ ಸುದ್ದಿಗಳು.
ಪರದೇಶಿ ದುಡ್ಡಿಗೆ ಆಸೆಪಟ್ಟು ಬ್ಲೂಜೆಪಿ ಮಾಡ್ತು ಎಡವಟ್ಟು: ಕಾನೂನಿಗೆ ತಂದ್ರು ತಿದ್ದುಪಡಿ, ಕೋರ್ಟ್ ಇಡ್ತು ದೊಡ್ಡ ಧಡಿ.
ಪೊಲಿಟಿಕಲ್ ಪಾರ್ಟಿಗಳು ವಿದೇಶದಿಂದ ಯಾವುದೇ ಬಗೆಯ ದೇಣಿಗೆ ಪಡೆಯುವುದು ಅಪರಾಧ ಎಂದಿದ್ದ ಹಿಂದಿನ ಕಾನೂನನ್ನು ಬದಲಾಯಿಸಿ, ದೇಶದೊಳಗಿನ ಪಕ್ಷಗಳು ಯಾವ ದೇಶದ ಶ್ರೀಮಂತರಿಂದ ಬೇಕಾದರೂ ಕೋಟಿಗಟ್ಟಲೆ ತಿರುಪೆ ಎತ್ತಬಹುದು ಎಂದು ತಿದ್ದುಪಡಿ ಮಾಡಿಕೊಂಡಿದ್ದ ಬ್ಲೂಜೆಪಿ ಪಕ್ಷದ ಮುಖಕ್ಕೆ ಖಡಕ್ ನೊಟೀಸ್ ಕಳಿಸಿರುವ ದೆಹಲಿ ಹೈಕೋರ್ಟ್, ಇಷ್ಟ ಬಂದಂತೆ ಕಾನೂನನ್ನು ಬದಲಿಸಲು, ಕೋರ್ಟ್‍ನ ತೀರ್ಪುಗಳನ್ನು ತಿರುಚಲು ಕಾನೂನು ನಿಮ್ಮಪ್ಪನ ಮನೆಯ ಆಸ್ತಿಯಲ್ಲ ಎಂದು ಕ್ಯಾಕರಿಸಿ ಉಗಿದಿದೆ. ಅಕ್ರಮವಾಗಿ ಅಘೋಷಿತ ಮೂಲಗಳಿಂದ ಪಕ್ಷಕ್ಕೆ ದೇಣಿಗೆ ಪಡೆದು ಜೇಬು ತುಂಬಿಸಿಕೊಂಡಿದ್ದ ಕಮಲ ಪಕ್ಷ ಕಾನೂನಿನ ಕುಣಿಕೆಗೆ ಸಿಲುಕಿ ಮುಖ ಕೆತ್ತಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೈ ಪಕ್ಷ ಕೂಡ ಈ ದಂಧೆಯಲ್ಲಿ ಕಮಲ ಪಕ್ಷಕ್ಕೆ ಸಾಥ್ ಕೊಟ್ಟಿರುವುದೂ ಕೂಡ ಜಗಜ್ಜಾಹೀರಾಗಿದೆ. ಕಾನೂನು ಕುಣಿಕೆಯಿಂದ ಬಚಾವಾಗಲು ಎಫ್.ಸಿ.ಆರ್.ಎ ಕಾಯ್ದೆಗೇ ತಿದ್ದುಪಡಿ ತಂದು ಎಸ್ಕೇಪ್ ರೂಟ್ ಹುಡುಕಿದ್ದ ಊಸರವಳ್ಳಿ ಪಕ್ಷ ಈಗ ಹೆಗ್ಗಣ ಹಿಡಿಯಲು ಇಟ್ಟಿದ್ದ ಇಕ್ಕಳದೊಳಗೆ ಮುಖ ಸಿಗಿಸಿಕೊಂಡು ತಪ್ಪಿಸಿಕೊಳ್ಳಲಾರದೆ ಕುಯ್ಯೋ ಮರ್ರೋ ಎಂದು ನರಳಾಡುತ್ತಿರುವುದು ದೇಶದ ಜನತೆಗೆ ಸಂತಸವುಂಟು ಮಾಡಿದೆ.

*****

ಲಾಚಾರ್ ಸಾಹಿತಿ ‘ಬೊಯ್ರಪ್ಪ’ನ ‘ಮಕ್ಕನ್ ಮಾರ್’ ಅವಾಂತರ: ಈ ಸಲ ಗ್ಯಾರಂಟಿ ವಕ್ಕರಿಸುತ್ತಂತೆ ಜ್ಞಾನಪೀಠಕ್ಕೇ ಗಂಡಾಂತರ
ದೇಶದ ಅತ್ಯುನ್ನತ ಪ್ರಶಸ್ತಿಗಳು ಘೋಷಣೆಯಾಗಲು ಒಂದೆರಡು ತಿಂಗಳು ಇರುವಂತೆಯೇ ಗರ್ಭಧರಿಸಿದ ಬೆಕ್ಕಿನಂತೆ ಕಯೋವ್, ಮಿಯೋವ್ ಎಂದು ಎದ್ದು ಕೂರುವ ಕುಖ್ಯಾತ ಸಾಹಿತಿ ‘ಬೊಯ್ರಪ್ಪ’ನವರು ಪ್ರತೀವರ್ಷದಂತೆ ಈ ವರ್ಷವೂ ತಮ್ಮ ಮನೆಯಿಂದ ಹೊರಗೆ ಬಂದು ನರಳಾಡಲು ಶುರು ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸಲು ಪಕೋಡೇಂದ್ರ ಫಕೀರಪ್ಪನಿಗೆ 5 ವರ್ಷಗಳು ಜುಜುಬಿ, ಕನಿಷ್ಟಪಕ್ಷ ಎರಡು ಶತಮಾನವಾದರೂ ಪಕೋಡಯ್ಯನು ದೇಶದ ಪ್ರಧಾನಿಯಾದರೆ ದೇಶ ಉದ್ದಾರವಾಗುತ್ತದೆ ಎಂಬ ಸುಸ್ಸು ಸ್ಟೇಟ್‍ಮೆಂಟನ್ನು ಮನೆಯೆದುರಿನ ಲೈಟುಕಂಬಕ್ಕೆ ಕಾಲೆತ್ತಿ ಹುಯ್ದು ವಾಪಸ್ ಮನೆಯೊಳಗೆ ಬುಡುಬುಡನೆ ಓಡಿಹೋಗಿ ಹೊಟ್ಟೆ ಮಕಾಡೆ ಮಲಗಿಬಿಟ್ಟರೆಂದು ನಂಬಲರ್ಹ ಗಾಳಿಸುದ್ದಿಗಳು ತಿಳಿಸಿವೆ.

*****

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮುಸುಡಿಗೆ ಬಿತ್ತು ಕೋರ್ಟ್ ತಪರಾಕಿ: ಕೇಜ್ರಿವಾಲ್ ಎದುರು ಮಕಾಡೆಬಿದ್ದ ಬ್ಲೂಜೆಪಿ ಬಾಯಿಗೆ ಆನೆಪಟಾಕಿ.
ದೆಹಲಿಯಲ್ಲಿ ಕೇಜ್ರಿವಾಲ್ ಕೈಲಿ ಸಮಾ ಇಕ್ಕಿಸಿಕೊಂಡು ಚರಂಡಿಪಾಲಾಗಿದ್ದ ದ್ವೇಷಭಕ್ತ ಬ್ಲೂಜೆಪಿಗಳು ಮರ್ಮಸ್ಥಳಕ್ಕೆ ಬಿದ್ದ ಸುತ್ತಿಗೆ ಏಟಿಗೂ ಜಗ್ಗದೆ ಕೇಜ್ರಿವಾಲ್ ತಲೆಯ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಗಢವಗೂಬೆಯೊಂದನ್ನು ಕೂರಿಸಿ ಬ್ಯಾಕ್‍ಡೋರ್ ಪಾಲಿಟಿಕ್ಸಿಗೆ ಇಳಿದಿದ್ದರು. ಈ ಬಗ್ಗೆ ಸುಪ್ರೀಂಕೋರ್ಟಿಗೆ ಕೇಸು ಜಡಾಯಿಸಿದ್ದ ಕೇಜ್ರಿವಾಲ್ ಈ ವನ್ಯಜೀವಿ ಗಢವಗೂಬೆಯನ್ನು ಯಾವುದಾದರೂ ಅಭಯಾರಣ್ಯಕ್ಕೆ ಎಸೆಯಬೇಕೆಂದು ಹೋರಾಟ ನಡೆಸುತ್ತಿದ್ದರು. ಈ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಲೆಫ್ಟಿನೆಂಟ್ ಗೌರ್ನರ್’ ಎಂಬ ಹುದ್ದೆಯೇ ಮೂರುಕಾಸಿನದ್ದು, ಅದಕ್ಕೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ, ಬ್ಲೂಜೆಪಿಯ ಈ ಲಡಕಾಸಿ ಗೌರ್ನರ್ ಜನಪ್ರತಿನಿಧಿಗಳ ಅಧಿಕಾರದಲ್ಲಿ ಮೂಗುತೂರಿಸದೆ ಸರ್ವಾಂಗಗಳನ್ನೂ ಮುಚ್ಚಿಕೊಂಡು ತೆಪ್ಪಗಿರಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಕೇಜ್ರಿವಾಲ್ ಕೈ ಮೇಲಾಗಿ, ಬ್ಲೂಜೆಪಿಯ ವಯೋವೃದ್ಧ ಪಾಖಂಡಿಗಳು ತಾವು ಬಿದ್ದಿದ್ದ ಚರಂಡಿಯೊಳಗಿಂದ ಎದ್ದುಬರಲು ಯತ್ನಿಸುತ್ತಿರುವಾಗಲೇ ಮತ್ತೊಂದು ಮ್ಯಾನ್‍ಹೋಲ್ ಒಳಕ್ಕೆ ತಲೆಕೆಳಗಾಗಿ ಬಿದ್ದಂತಾಗಿದೆಯೆಂಬ ವಿಶ್ಲೇಷಣೆ ಹೊರಬಿದ್ದಿದೆ. ಈ ಕಿತಾಪತಿ ಪಿತೂರಿಯಲ್ಲಿ ಕೈ ಪಕ್ಷದ ಹಾಸ್ಯನಟರೂ ಸೇರಿಕೊಂಡು ಕೇಜ್ರಿವಾಲರನ್ನು ಈ ಸಲ ಕೆಡವಲು ನಡೆಸುತ್ತಿದ್ದ ಸಂಚು ಈ ಮೂಲಕ ವಿಫಲವಾಗಿದ್ದು, ಸದ್ಯಕ್ಕೆ ರಾಜಧಾನಿಯ ಗೋಶಾಲೆಯಲ್ಲಿ ಹಿಂಡಿಬೂಸಾ ಮೆಲ್ಲುತ್ತ ಪೊಗದಸ್ತಾಗಿದ್ದ ಕೈ ಪಕ್ಷದ ದೆಹಲಿ ನಾಯಕರು ಈ ಕೋರ್ಟ್ ತೀರ್ಪು ಕೇಳಿದ ಕೂಡಲೇ ಅಂಬಾ ಎಂದು ಅರಚಿ, ನಾಲಿಗೆ ಹೊರಚಾಚಿ ಮೂರ್ಛೆ ಹೋಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*****

ಕ್ಯಾನ್ಸರ್‍ಗೆ ದನದ ಮೂತ್ರದಲ್ಲಿ ಔಷಧಿ ಕಂಡುಹಿಡಿದ್ರು ಗುಜರಾತಿಗರು: ಫ್ರಥಮ ದರ್ಜೆ ಮುಠ್ಠಾಳರ ಸಂಶೋಧನೆಯಾಯ್ತು ಜಗಜ್ಜಾಹೀರು
‘ಆಧುನಿಕ ವೈದ್ಯಶಾಸ್ತ್ರ’ ಅಂದರೆ ಕೇಜಿಗೆಷ್ಟು, ಅದು ನೋಡಲಿಕ್ಕೆ ಕರ್ರಗಿರುತ್ತೋ ಬೆಳ್ಳಗಿರುತ್ತೋ ಎಂದು ಕೇಳುವ ಪ್ರಥಮದರ್ಜೆ ಮುಠ್ಠಾಳರ ಗುಜರಾತಿನ ಪಡೆಯೊಂದು, ದನದ ಮೂತ್ರದಲ್ಲಿ ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಎದೆಯೊಡೆಯುವ ಹಾಸ್ಯಾಸ್ಪದ ಸಂಶೋಧನೆಯನ್ನು ಮಾಡಿ ಮುಗಿಸಿದ್ದಾರೆ. ಗುಜರಾತಿನ ಜುನಾಗಢ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಈ ಕಿಸಲಗೇಡಿ ಕ್ರಿಸ್ತಪೂರ್ವ ಕಾಲದ ತಾಳೆಗರಿ ಸಂಶೋಧನೆ ನಡೆಸಿದ್ದಾರೆ. ಈ ಸುದ್ದಿ ತಿಳಿದ ವಿದೇಶದ ಯೂನಿವರ್ಸಿಟಿಗಳು ಈ ನಾಲ್ಕನೇ ದರ್ಜೆ ಸಂಶೋಧನೆ ನಡೆಸಿದ ಆದಿಮಾನವರು ಶಿಲಾಯುಗ ಕಾಲದಿಂದ 21ನೇ ಶತಮಾನಕ್ಕೆ ಟೈಂಟ್ರಾವೆಲ್ ಮಾಡಿಕೊಂಡು ಬಂದದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಲು ಅನುಮತಿ ಕೋರಿ ದ್ವೇಷಭಕ್ತರ ಸರ್ಕಾರದ ಅನುಮತಿ ಕೋರಿದ್ದಾರಂತೆ. ಈ ಅರ್ಜಿಯನ್ನು ಓದಿದ ಸನ್ಮಾನ್ಯ ಕೌಡಂಗ್‍ಪ್ರಿಯ ಪಕೋಡೇಂದ್ರ ಅವರು ಆ ಸಂಶೋಧನೆಗಿಂತಲೂ ಮುಂಚೆ ತನ್ನ ತಲೆಯನ್ನೇ ಮೊದಲು ಆಪರೇಷನ್ ಮಾಡಿ ಒಳಗಿರುವುದು ಮಾಂಸಮಜ್ಜೆಯಿಂದಾದ ಮಿದುಳೋ, ಇಲ್ಲಾ.. ದನದ ಸೆಗಣಿಯಿಂದ ತಯಾರಾದ ಮಿದುಳೋ ಎಂದು ಪತ್ತೆ ಮಾಡಿಕೊಡಲು ವಿದೇಶಿ ಸಂಶೋಧಕರನ್ನು ಅಂಗಲಾಚಿದ್ದಾರಂತೆ.

*****

ಹೊಲದಲ್ಲಿ ನಿಂತು ಮಂತ್ರ ಹೇಳಿದ್ರೆ ಬೆಳೆ ಬರುತ್ತಂತೆ
ಗೋವಾ ಬ್ಲೂಜೆಪಿ ಸಚಿವನ ತಲೆಕೆಟ್ಟ ಅಂತೆಕಂತೆ
ರೈತರ ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇದ್ರೆ ರೈತರು ಹೊಲದಲ್ಲಿ ನಿಂತು “ಓಂ ರುಂ ಜುಂ ಸ್ವಾಹಾ, ಓಂ ರುಂ ಜುಂ ಸ್ವಾಹಾ” ಎಂದು ಮಂತ್ರ ಪಠಿಸಿದರೆ ಬೆಳೆ ಚೆನ್ನಾಗಿ ಬರುತ್ತದೆಂದು ಗೋವಾದ ಬ್ಲೂಜೆಪಿ ಪಕ್ಷದ ಕೃಷಿಸಚಿವ ಹೊಸ ಸಂಶೋಧನೆ ಮಾಡಿದ್ದಾನೆ. ಹೀಗೆ ಮಂತ್ರ ಪಠಿಸುವಾಗ ಹಿಂದಿನಿಂದ ಯಾವುದಾದರೂ ಕೊಳಕುಮಂಡಲದ ಹಾವು ಬಂದು ತೊಡೆಗೆ ಕಡಿದರೆ ಓಡಿ ಹೋಗುವುದೋ, ಕಚ್ಚಿಸಿಕೊಂಡು ಅಲ್ಲೇ ನಿಂತು “ಓಂ ರುಂ ಜುಂ ಸ್ವಾಹಾ” ಮಂತ್ರ ಪಠಿಸುವುದೋ ಎಂದು ವದರಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಕೆಂಡಾಮಂಡಲರಾಗಿ ಕೈಲಿ ಹಿಡಿದಿದ್ದ ಮೈಕನ್ನೇ ಕಚಪಚನೆ ಅಗಿದು ‘ಪ್ಯಾಕಪ್’ ಎಂದು ಕಿರುಚಿ ಓಡಿಹೋದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಎಲ್ಲ ಬಿಟ್ಟು ಈ ಬ್ಲೂಜೆಪಿಯವರಿಗೇ ಈ ಕಜ್ಜಿ ಐಡಿಯಾಗಳು ಹೇಗೆ ಬರುತ್ತವೆ? ಯಾವ ಫ್ಯಾಕ್ಟರಿಯಲ್ಲಿ ಇವರ ಮೆದುಳುಗಳನ್ನು ಪ್ರೊಡಕ್ಷನ್ ಮಾಡಲಾಗುತ್ತದೆ ಎಂದು ಕಕ್ಕಾಬಿಕ್ಕಿಯಾಗಿರುವ ಕೃಷಿ ವಿಜ್ಞಾನಿಗಳು ಸದರಿ ಬ್ಲೂಜೆಪಿ ಕೃಷಿ ಸಚಿವನನ್ನು ಗುಂಪುಗಲಭೆಯಲ್ಲಿ ಹೊಡೆದು ರೈತರ ಹೊಲಗಳಿಂದ ಒದ್ದೋಡಿಸಲು ತಯಾರಾಗಿದ್ದಾರೆಂದು ವರದಿಯಾಗಿದೆ. ಈ ಮನೆಹಾಳು ಐಡಿಯಾ ಮಾಡಿದ ಕೃಷಿಸಚಿವನ ಎಬಡೇಶಿ ಹೇಳಿಕೆಯ ದೆಸೆಯಿಂದ ಕಂಗಾಲಾಗಿರುವ ಗೋವಾದ ರೈತರು, ಹಂದಿ ಆಹಾರವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ಸಾಗಿಸುವ ಹಡಗಿನಲ್ಲಿ ಈ ಸಚಿವನನ್ನು ಹಾಕಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಆದಷ್ಟು ಬೇಗ ರಫ್ತು ಮಾಡಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಇನ್ನೂ ಆಗ್ರಹಿಸಿಲ್ಲದಿರುವುದು ಆಶ್ಚರ್ಯ ಹುಟ್ಟಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನಷ್ಟು ಮತ್ತಷ್ಟು ಆಘಾತ ಹುಟ್ಟಿಸುವ ವಾರ್ತೆಗಳಿಗಾಗಿ ಮುಂದಿನವಾರ ಸಿಗೋಣ. ಧನ್ಯವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...