Homeರಾಜಕೀಯಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ,

- Advertisement -
- Advertisement -

ಮೇರೆ ಪ್ಯಾರೇ ದೇಶ್‍ವಾಸಿಯೋಂ, ಭಾಯಿಯೋ ಔರ್ ಬೆಹನೋ, ಇವತ್ತು ನಂ ದೇಸುದಾಗೆ ಏನೇನ್ ಅನಾನುಕೂಲ ಆಗ್ಯದೆ ಅನ್ನೋದುನ್ನ ಮರತುಬಿಡಿ. ಅಜಮಾಸು ನಲುವತ್ತು ವರ್ಸುದ ಹಿಂದಿನ ಇತಿಹಾಸುವ ಒಸಿ ನ್ಯೆಪ್ತಿ ಮಾಡ್ಕಳಿ. ಅದುಕ್ಕೆ ಸಮಂಧಪಟ್ಟಂಗೆ ಜಾಗೃತ್ರಾಗಿ. ಅವುತ್ತು ಈ ದ್ಯೇಸುದ ಮ್ಯಾಕೆ ಎಮುರ್ಜೆನ್ಸಿ ಹ್ಯೇರಿದ್ದವುರು, ಅದುನ್ನು ವಿರೋಧಿಸಿದ್ದವುರು, ಇವತ್ತು ಕೇವುಲ ಅಧಿಕಾರುಕ್ಕಾಗಿ ಒಬ್ಬರ ಕೈಯೊಳಿಕ್ಕೆ ಮತ್ತೊಬ್ಬರು ಕೈ ಜ್ಯೋಡಿಸ್ಕ್ಯಂಡ ಕುಂತವುರೆ. ಅವುರಿಗೆ ತಕ್ಕುನ ಪಾಟ ಕಲುಸಿ. ಈಗ ನಾನು ಮೂರು ಸಲ ಎಮುರ್ಜನ್ಸಿ ಅಂತೀನಿ, ನೀವೆಲ್ಲ ಕೈಯೆತ್ತಿ ಅಂಗೇ ಆಕ್ಷುನ್ ಮಾಡ್ಕ್ಯಂತ ರಿಪೀಟ್ ಮಾಡಿ…..’
– ನರೇಂದ್ರ ಮೋದಿ, ಮಾತಿಗೆ ಮರುಳಾದ ದೇಶಕ್ಕೆ ಸಿಕ್ಕಿರೋ ದುಬಾರಿ ದೊರೆ

*****

ಅನಂತ್ಕುಮಾರ್ ಹೆಗುಡೆ ಒಬ್ಬ ಲೋಪರ್ರು ಕಣ್ರೀ… ನೀಚ ಕಣ್ರೀ… ಹುಬ್ಳಿಯಾಗೆ ಯಾರೋ ಹಾರುಸಿದ್ದ ಧ್ವಜುವಾ ನಾನೇ ಹಾರುಸಿದ್ದು ಅಂತ ಆರೆಸ್ಸೆಸ್ನೋರ ಸಭೆಗಳುಲ್ಲಿ ಹ್ಯೇಳ್ಕಂಡ ತಿರುಗ್ಯಾಡ್ತಾ ಅವುನೆ. ಅವುನು ಎಲ್ಲರಿಗೂ ಹೊಡುದವುನೆ. ಬೀಜೇಪಿ ಪಾಲ್ಟಿ ಆಪಿಸ್ನಾಗೇ ಆ ಇಸ್ವೇಸ್ವರ ಹೆಗುಡೆ ಕಾಗೇರಿಗೆ ಯಕ್ಕಡಾ ತಕೊಂಡು ಹೊಡುದಿದ್ದ. ಅವುನಂಥಾ ನೀಚ ಇಡಿ ದೇಸುದಾಗೇ ಯಾರು ಇಲ್ಲ ಬಿಡಿ. ಅವುನು ನಂ ಜಿಲ್ಲೆಗೆ ಸಂಸುದ ಆಗ್ಯಿರೋದೆ ದುರಂತ’
– ಆನಂದ್ ಆಸ್ನೋಟಿಕರ್, ಕರಾವಳಿ ಭಾಗದ ಜೆಡಿಎಸ್ ಪಳೆಯುಳಿಕೆ

*****

ಈ ತಾಜಮಹಲು ಏನ್ ಇದ್ಯೆಲಾ, ಅದು ಅಕ್ಚುಲೀ ಸಿವುನ ದ್ಯೇವುಸ್ತಾನುವಂತೆ. ಅಂಥಾ ದ್ಯೇವುಸ್ತಾನ ಕಂ ಮಹಲುನ್ನ ಹೊಡೆಯೋಕ್ಕೆ ಅಂತ ನಂ ಯೂಪಿ ಸೀಎಂ ಸ್ವಾಮಿಗೊಳಾದ ಆದಿತ್ಯನಾಥುರು ಹೊಂಟವುರೆ. ಅವುರೇನಾದ್ರು ದಿಟವಾಗ್ಲೂ ಆ ಕ್ಯೆಲುಸಕ್ಕೆ ಕೈ ಹಾಕುದ್ರೆ, ಅದುಕ್ಕೆ ಹ್ಯೆಗಲು ಕ್ವೊಡಕ್ಕೆ ನಾನೂ ಸಿದ್ದ. ಬೇಕಾರೆ ಬೀಜೇಪಿಗೂ ಸೇರ್ಕಂಬುಡ್ತೀನಿ. ಜ್ವತೀಗೆ ಇಪ್ಪತ್ತು ಸಾವುರ ಜನಾನು ಕರ್ಕಂಬತ್ತೀನಿ. ಈ ಆಪರ್ರು ಒಪ್ಕಂಡಾರಾ ನಂ ಯೂಪಿ ಸೀಎಂ…
– ಆಜಂ ಖಾನ್, ಸಮಾಜವಾದಿ ಪಾರ್ಟಿಯ ಕಾಂಟ್ರವರ್ಸಿಯಲ್ ಕಿಲಾಡಿ

*****

ನಂ ಕರ್ನಾಟುಕದಲ್ಲಿರೋ ಪರಬಾಸಿಕರನ್ನ ನಡು ರಸ್ತೇನಾಗೇ ಸುಟ್ಟು ಹಾಕ್ಬೇಕು ಕಣ್ರೀ. ಅವುರೆಲ್ಲ ಇಲ್ಲಿಗೆ ಬಂದು ವಕ್ಕರಿಸಿಕ್ಯಂಡಿದ್ದುರಿಂದ್ಲೇ ಬೆಂಗ್ಳೂರು ನಂ ಕೈತ್ಯೆಪ್ಪಿ ಹೋಗೈತಿ. ಅವುರನ್ನು ಇಲ್ಲಿಂದ ಹೊರಕ್ಕೆ ದೂಡಕ್ಕೆ ನಾವೆಲ್ಲ ಮತ್ತೆ ಚಳುವಳಿ ಸುರು ಮಾಡ್ಬೇಕಾಗೈತಿ. ಜೈ ಕನ್ನುಡಾಂಬೆ…                                                                                  – ವಾಟಾಳ್ ನಾಗರಾಜ್, ವಿಚಿತ್ರ ಚಳುವಳಿಗಳ ಸಚಿತ್ರ ಕಾರ್ಟೂನ್

*****

ನಾ ಹ್ಯೇಳ್ತೀನಿ ಕ್ಯೇಳಿ, ಈ ಸಮ್ಮಿಸ್ರು ಸರ್ಕಾರ ಬಾಳ ದಿನ ಉಳಿಯಂಗಿಲ್ಲ. ಯಾಕಂದ್ರೆ ನಂ ಬಳ್ಳಾರಿ ರಾಜ್ಯುದ ಇತಿಹಾಸುದಾಗೆ ಯಾವ ಕೊಲೀಷನ್ ಗೋರ್ಮೆಂಟೂ ಪುಲ್‍ಟೇಮು ಅಧಿಕಾರುವ ಮಾಡಿದ ಎಜ್ಜಾಂಪಲ್ಲೇ ಇಲ್ಲ. ಅಂತದ್ರಾಗೆ ಇವುರು ಮಾಡ್ಯಾರಾ? ನೋ ಚಾನ್ಸ್. ಬಿದ್ದೋಯ್ತರೆ ನೋಡ್ತಾ ಇರಿ…
– ಬೀ ಶ್ರೀರಾಮುಲು, ಬಿಜೆಪಿಯ ಗಡ್ಡಧಾರಿ ಅವತಾರ ಪುರುಷ

*****

ಈ ಮಠಾಧೀಸರು ಏನವುರಲ್ಲ, ಅವುರು ಅಧಿಕಾರ ಇದ್ದಕಡೀಕೆ ವಾಲಿಕ್ಯಂತಾರೆ. ಜನುರ ಕಷ್ಟ ಸುಖದ ಬಗ್ಗೆ ಮಾತಾಡೋದು ಬುಟ್ಟು, ರಾಜಕಾರಣುದಾಗೆ ಮೂಗು ತ್ವೂರ್ಸಕ್ಕೆ ಬತ್ತಾರಲ್ಲ, ಇವ್ರಿಗೆ ಏನನ್ನಬೇಕು? ಇವತ್ತು ಸಿದ್ರಾಮಯ್ಯುನ ಪರುವಾಗಿ ಮಾತಾಡೊ ಕುರುಬರ ಸ್ವಾಮಿ, ಅವತ್ತು ಇದೇ ಸಿದ್ರಾಮಯ್ಯ ನನಿಗೆ ಅನ್ಯಾಯ ಮಾಡುವಾಗ ಎತ್ತಗೋಗಿದ್ರು. ಯಾಕೆ, ನಾನು ಕುರುಬನಲ್ಲುವಾ…?
– ಎಚ್ಚ್ ವಿಶ್ವನಾಥ್, ಗೌಡರ ಹಟ್ಟಿಯ ನಿರಾಶ್ರಿತ ಶಿಬಿರದ ಫಲಾನುಭವಿ

*****

ಸ್ವಿಸ್ ಬ್ಯಾಂಕಿನಾಗೆ ಇಟ್ಟಿರೋ ಭಾರತೀಯರ ಹಣ ಕಳುದ ವರ್ಸ ಡಬಲ್ ಆಗ್ಯದೆ ಅನ್ನೋ ಸುದ್ದಿ ನನಿಗೂ ಬಂದದೆ. ಹಾಗಂತ ಅದು ಬ್ಲ್ಯಾಕ್ ಮನಿ ಅಲ್ಲಾ ಕಣ್ರೀ. ನಂ ಎನ್ನಾರೈಗಳು ಶ್ಯಾನೆ ಕಸ್ಟಪಟ್ಟು ದುಡುದು ಕೂಡಿಟ್ಟ ನ್ಯಾಯಬದ್ಧ ಹಣ ಆಗಿರ್ಬೈದಲ್ವಾ. ಯಾಕ್ರೀ ನಂ ಜನುಕ್ಕೆ ಕನ್‍ಫ್ಯೂಜ್ ಮಾಡ್ತೀರಾ?
– ಪಿಯೂಷ್ ಗೋಯೆಲ್, ಬ್ಲ್ಯಾಕ್‍ಮನಿ ಸ್ಪೆಷಲಿಸ್ಟ್
ಮೋದಿ ಸಂಪುಟದ ಮನಿ ಮಂತ್ರಿ

*****

ಲುಕ್ ಮೈ ಡಿಯರ್ ಫ್ರೆಂಡ್ಸ್, ಒಂದು ಸತ್ಯುವ ಹ್ಯೇಳ್ತೀನಿ ಅರುಗಿಸಿಕೊಳ್ಳಿ. ನಾವು ಇವತ್ತು ಪ್ಲ್ಯಾಸ್ಟಿಕ್ ಕುರ್ಚಿನಾಗೆ ಕೂತ್ಕಂಡಿರೋದ್ಕೆ ಆ ಕಾಂಗ್ರೆಸ್ ಪಾಲ್ಟಿಯೇ ಕಾರುಣ. ಅಕಸುಮಾತ್ ಎಪ್ಪತ್ತು ವರ್ಸುದ ಹಿಂದೆಯೇ ದೇಸುದಾಗೆ ಬೀಜೇಪಿ ಅಧಿಕಾರುಕ್ಕೆ ಬಂದಿದ್ದ್ರೆ ಎಲ್ರೂ ಬ್ಯೆಳ್ಳಿ ಕುರ್ಚಿನಾಗೆ ಕುಂತ್ಕಂಡಿರ್ತಿದ್ವಿ. ಎಲ್ಡು ಸಾವುರದ ಹತ್ರೊಂಬ್ವತ್ತರ ಎಲೆಕ್ಸೆನ್ನಾಗೆ ಒಂದು ಹ್ವುಲೀನ ಸೋಲುಸಕ್ಕೆ ಕಾಗ್ಯಣ್ಣ, ನರಿಯಣ್ಣ, ತ್ವಾಳಣ್ಣ, ಕರಿಡ್ಯಣ್ಣಗಳು ಒಂದಾಗ್ಯವೆ. ಈ ಕತ್ತೆಕ್ಯಿರುಬಗಳು ಗ್ಯೆಲ್ಲಬೇಕೊ, ಅಥುವಾ ನಂ ಹ್ವುಲಿ ಗ್ಯೆಲ್ಲಬೇಕೊ ನೀವೇ ಡಿಸೈಡ್ ಮಾಡಿ…
– ಅನಂತ್‍ಕುಮಾರ್ ಹೆಗಡೆ, ನಾಲಿಗೆ ನರದ ಸ್ವಾಧೀನ ಕಳೆದುಕೊಂಡಿರುವ ಕೇಂದ್ರ ಮಂತ್ರಿ

*****

ಒಬ್ಬೊಬ್ರ ಅಕೋಂಟಿಗೂ ಹದುನೈದು ಲಕ್ಸುವ ರೊಕ್ಕ ಹಾಕ್ತೀನಿ ಅಂತ ಎಲೆಕ್ಸನ್ ಟೇಮಿನಾಗೆ ಹ್ಯೇಳಿ, ಕಡೀಕೆ ಹದುನೈದ್ರುಪಾಯುನೂ ಹಾಕದ ಮ್ವೋದಿಯವುರಿಗೆ ನಂ ಸೀಎಂ ಕುಮಾರ್ಸೋಮಿ ಬಗ್ಗೆ ಮಾತಾಡಕ್ಕೆ ಅದೆಂತದೋ ಅಂತಾರಲ್ಲ, ಅದು ಇಲ್ಲ ಕಣ್ರೀ. ಸೋನ್ಯಾ ಗಾಂದಿ, ರಾಹುಲ್ ಗಾಂದಿ ಇಬ್ರೂನುವೆ, ಬೇಸರತ್ ಬೆಂಬುಲವ ಕೊಡ್ತೀವಿ ನೀವು ಜೇಡಿಯೆಸ್ ಗೋರ್ಮೆಂಟ್ ಮಾಡ್ಕಳಿ ಅಂತ ಹ್ಯೇಳಿದ್ದ್ರು. ಆದ್ರೆ ನಂ ದ್ವೊಡ್ಡಗೌಡ್ರು ಬ್ಯಾಡ, ಬ್ಯಾಡ ಇಬ್ರೂ ಕೂಡೇ ಸರ್ಕಾರುವ ಮಾಡನ ಅಂತೇಳಿದ್ದುಕ್ಕೆ ಇವತ್ತು ಸಮ್ಮಿಸ್ರು ಸರ್ಕಾರ ಆಗ್ಯದೆ. ಅದು ಐದು ವರ್ಸ ಅಲ್ಲಾಡಕಿಲ್ಲ ನೋಡ್ತಾ ಇರಿ…
– ಸಾರಾ ಮಹೇಶ್, ಮೇಡಂ ಭವಾನಿಯವರ ಕೃಪಾಶೀರ್ವಾದ ಇರುವ ಜೆಡಿಎಸ್ ಮಂತ್ರಿ

*****

ನಂ ಮ್ವೋದಿ ಸಾಹೇಬ್ರು ಪರ್ದಾನಿಯಾದ ಮ್ಯಾಕೆ ದ್ಯೇಸ ಶ್ಯಾನೆ ಅಭಿರುದ್ದಿ ಆಗ್ಯದೆ. ಕಳುದ ಎಂಟೇ ತಿಂಗ್ಳಾಗೆ ನಲ್ವತ್ತ್ವೊಂದು ಲಕ್ಸ ಉದ್ಯೋಗ ಹುಟ್ಕ್ಯಂಡವೆ ಮಹಾಸಯುರೆ. ಯಪ್ಪತ್ತು ವರ್ಸುದಿಂದ ಉದ್ದಾರುವೇ ಆಗುದೇ ಹಾಳು ಕ್ವೊಂಪ್ಯೆಯಾಗಿದ್ದ ಈಶಾನ್ಯುದ ರಾಜ್ಯಗಳು ಮ್ವೋದಿಯವುರ ಆಡಳಿತುದಾಗೆ ಯಾಪಾಟಿ ಉದ್ದಾರ ಆಗ್ಯವೆ ಅಂದ್ರೆ, ನಂಗೆ ಯೋಳಕ್ಕೆ ಮಾತ್ವುಗಳೇ ಬತ್ತಿಲ್ಲ ಕಣ್ರೀ, ಆಹ್ಞಾ…ಹಾ.. ಹಾ.. ಇಲ್ನೋಡಿ ಥೇಟು ನನ್ ಹಲ್ಲುಗುಳ ಥರಾ ಹೊಳೀತಾ ಕುಂತವೆ. ಇನ್ನು ಸಿಟಿಗುಳಂಗೆ ನಂ ಹಳ್ಳ್ಯಿಗುಳೂ ಸಿಕ್ಕಾಪಟ್ಟೆ ಇಂಪ್ರೂವ್ ಆಗ್ಯವೆ..
– ಡಿ.ವಿ.ಸದಾನಂದ ಗೌಡ, ಅಳುವಾಗ್ಲೂ ನಗುತ್ತಿರುವಷ್ಟೇ ಕಳೆಯಿಂದ
ಕಾಣುವ ಬಿಜೆಪಿಯ ವಜ್ರದಂತಿ ಸಚಿವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...