Homeಅಂಕಣಗಳುಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

ಈ ಸಲ ಜ್ಞಾನಪೀಠಕ್ಕೆ ಕಾದೈತೆ ಗಂಡಾಂತರ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ‘ಅಟ್ಯಾಕ್ ಹನ್ಮಂತ’. ಇದೀಗ ದೊಡ್ ಸುದ್ದಿಗಳು.
ಪರದೇಶಿ ದುಡ್ಡಿಗೆ ಆಸೆಪಟ್ಟು ಬ್ಲೂಜೆಪಿ ಮಾಡ್ತು ಎಡವಟ್ಟು: ಕಾನೂನಿಗೆ ತಂದ್ರು ತಿದ್ದುಪಡಿ, ಕೋರ್ಟ್ ಇಡ್ತು ದೊಡ್ಡ ಧಡಿ.
ಪೊಲಿಟಿಕಲ್ ಪಾರ್ಟಿಗಳು ವಿದೇಶದಿಂದ ಯಾವುದೇ ಬಗೆಯ ದೇಣಿಗೆ ಪಡೆಯುವುದು ಅಪರಾಧ ಎಂದಿದ್ದ ಹಿಂದಿನ ಕಾನೂನನ್ನು ಬದಲಾಯಿಸಿ, ದೇಶದೊಳಗಿನ ಪಕ್ಷಗಳು ಯಾವ ದೇಶದ ಶ್ರೀಮಂತರಿಂದ ಬೇಕಾದರೂ ಕೋಟಿಗಟ್ಟಲೆ ತಿರುಪೆ ಎತ್ತಬಹುದು ಎಂದು ತಿದ್ದುಪಡಿ ಮಾಡಿಕೊಂಡಿದ್ದ ಬ್ಲೂಜೆಪಿ ಪಕ್ಷದ ಮುಖಕ್ಕೆ ಖಡಕ್ ನೊಟೀಸ್ ಕಳಿಸಿರುವ ದೆಹಲಿ ಹೈಕೋರ್ಟ್, ಇಷ್ಟ ಬಂದಂತೆ ಕಾನೂನನ್ನು ಬದಲಿಸಲು, ಕೋರ್ಟ್‍ನ ತೀರ್ಪುಗಳನ್ನು ತಿರುಚಲು ಕಾನೂನು ನಿಮ್ಮಪ್ಪನ ಮನೆಯ ಆಸ್ತಿಯಲ್ಲ ಎಂದು ಕ್ಯಾಕರಿಸಿ ಉಗಿದಿದೆ. ಅಕ್ರಮವಾಗಿ ಅಘೋಷಿತ ಮೂಲಗಳಿಂದ ಪಕ್ಷಕ್ಕೆ ದೇಣಿಗೆ ಪಡೆದು ಜೇಬು ತುಂಬಿಸಿಕೊಂಡಿದ್ದ ಕಮಲ ಪಕ್ಷ ಕಾನೂನಿನ ಕುಣಿಕೆಗೆ ಸಿಲುಕಿ ಮುಖ ಕೆತ್ತಿಸಿಕೊಳ್ಳುವ ಸಂದರ್ಭ ಎದುರಾಗಿದೆ. ಕೈ ಪಕ್ಷ ಕೂಡ ಈ ದಂಧೆಯಲ್ಲಿ ಕಮಲ ಪಕ್ಷಕ್ಕೆ ಸಾಥ್ ಕೊಟ್ಟಿರುವುದೂ ಕೂಡ ಜಗಜ್ಜಾಹೀರಾಗಿದೆ. ಕಾನೂನು ಕುಣಿಕೆಯಿಂದ ಬಚಾವಾಗಲು ಎಫ್.ಸಿ.ಆರ್.ಎ ಕಾಯ್ದೆಗೇ ತಿದ್ದುಪಡಿ ತಂದು ಎಸ್ಕೇಪ್ ರೂಟ್ ಹುಡುಕಿದ್ದ ಊಸರವಳ್ಳಿ ಪಕ್ಷ ಈಗ ಹೆಗ್ಗಣ ಹಿಡಿಯಲು ಇಟ್ಟಿದ್ದ ಇಕ್ಕಳದೊಳಗೆ ಮುಖ ಸಿಗಿಸಿಕೊಂಡು ತಪ್ಪಿಸಿಕೊಳ್ಳಲಾರದೆ ಕುಯ್ಯೋ ಮರ್ರೋ ಎಂದು ನರಳಾಡುತ್ತಿರುವುದು ದೇಶದ ಜನತೆಗೆ ಸಂತಸವುಂಟು ಮಾಡಿದೆ.

*****

ಲಾಚಾರ್ ಸಾಹಿತಿ ‘ಬೊಯ್ರಪ್ಪ’ನ ‘ಮಕ್ಕನ್ ಮಾರ್’ ಅವಾಂತರ: ಈ ಸಲ ಗ್ಯಾರಂಟಿ ವಕ್ಕರಿಸುತ್ತಂತೆ ಜ್ಞಾನಪೀಠಕ್ಕೇ ಗಂಡಾಂತರ
ದೇಶದ ಅತ್ಯುನ್ನತ ಪ್ರಶಸ್ತಿಗಳು ಘೋಷಣೆಯಾಗಲು ಒಂದೆರಡು ತಿಂಗಳು ಇರುವಂತೆಯೇ ಗರ್ಭಧರಿಸಿದ ಬೆಕ್ಕಿನಂತೆ ಕಯೋವ್, ಮಿಯೋವ್ ಎಂದು ಎದ್ದು ಕೂರುವ ಕುಖ್ಯಾತ ಸಾಹಿತಿ ‘ಬೊಯ್ರಪ್ಪ’ನವರು ಪ್ರತೀವರ್ಷದಂತೆ ಈ ವರ್ಷವೂ ತಮ್ಮ ಮನೆಯಿಂದ ಹೊರಗೆ ಬಂದು ನರಳಾಡಲು ಶುರು ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸಲು ಪಕೋಡೇಂದ್ರ ಫಕೀರಪ್ಪನಿಗೆ 5 ವರ್ಷಗಳು ಜುಜುಬಿ, ಕನಿಷ್ಟಪಕ್ಷ ಎರಡು ಶತಮಾನವಾದರೂ ಪಕೋಡಯ್ಯನು ದೇಶದ ಪ್ರಧಾನಿಯಾದರೆ ದೇಶ ಉದ್ದಾರವಾಗುತ್ತದೆ ಎಂಬ ಸುಸ್ಸು ಸ್ಟೇಟ್‍ಮೆಂಟನ್ನು ಮನೆಯೆದುರಿನ ಲೈಟುಕಂಬಕ್ಕೆ ಕಾಲೆತ್ತಿ ಹುಯ್ದು ವಾಪಸ್ ಮನೆಯೊಳಗೆ ಬುಡುಬುಡನೆ ಓಡಿಹೋಗಿ ಹೊಟ್ಟೆ ಮಕಾಡೆ ಮಲಗಿಬಿಟ್ಟರೆಂದು ನಂಬಲರ್ಹ ಗಾಳಿಸುದ್ದಿಗಳು ತಿಳಿಸಿವೆ.

*****

ದೆಹಲಿ ಲೆಫ್ಟಿನೆಂಟ್ ಗೌರ್ನರ್ ಮುಸುಡಿಗೆ ಬಿತ್ತು ಕೋರ್ಟ್ ತಪರಾಕಿ: ಕೇಜ್ರಿವಾಲ್ ಎದುರು ಮಕಾಡೆಬಿದ್ದ ಬ್ಲೂಜೆಪಿ ಬಾಯಿಗೆ ಆನೆಪಟಾಕಿ.
ದೆಹಲಿಯಲ್ಲಿ ಕೇಜ್ರಿವಾಲ್ ಕೈಲಿ ಸಮಾ ಇಕ್ಕಿಸಿಕೊಂಡು ಚರಂಡಿಪಾಲಾಗಿದ್ದ ದ್ವೇಷಭಕ್ತ ಬ್ಲೂಜೆಪಿಗಳು ಮರ್ಮಸ್ಥಳಕ್ಕೆ ಬಿದ್ದ ಸುತ್ತಿಗೆ ಏಟಿಗೂ ಜಗ್ಗದೆ ಕೇಜ್ರಿವಾಲ್ ತಲೆಯ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಗಢವಗೂಬೆಯೊಂದನ್ನು ಕೂರಿಸಿ ಬ್ಯಾಕ್‍ಡೋರ್ ಪಾಲಿಟಿಕ್ಸಿಗೆ ಇಳಿದಿದ್ದರು. ಈ ಬಗ್ಗೆ ಸುಪ್ರೀಂಕೋರ್ಟಿಗೆ ಕೇಸು ಜಡಾಯಿಸಿದ್ದ ಕೇಜ್ರಿವಾಲ್ ಈ ವನ್ಯಜೀವಿ ಗಢವಗೂಬೆಯನ್ನು ಯಾವುದಾದರೂ ಅಭಯಾರಣ್ಯಕ್ಕೆ ಎಸೆಯಬೇಕೆಂದು ಹೋರಾಟ ನಡೆಸುತ್ತಿದ್ದರು. ಈ ಕೇಸಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಲೆಫ್ಟಿನೆಂಟ್ ಗೌರ್ನರ್’ ಎಂಬ ಹುದ್ದೆಯೇ ಮೂರುಕಾಸಿನದ್ದು, ಅದಕ್ಕೆ ಯಾರೂ ಬೆಲೆ ಕೊಡುವ ಅಗತ್ಯವಿಲ್ಲ, ಬ್ಲೂಜೆಪಿಯ ಈ ಲಡಕಾಸಿ ಗೌರ್ನರ್ ಜನಪ್ರತಿನಿಧಿಗಳ ಅಧಿಕಾರದಲ್ಲಿ ಮೂಗುತೂರಿಸದೆ ಸರ್ವಾಂಗಗಳನ್ನೂ ಮುಚ್ಚಿಕೊಂಡು ತೆಪ್ಪಗಿರಬೇಕೆಂದು ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಕೇಜ್ರಿವಾಲ್ ಕೈ ಮೇಲಾಗಿ, ಬ್ಲೂಜೆಪಿಯ ವಯೋವೃದ್ಧ ಪಾಖಂಡಿಗಳು ತಾವು ಬಿದ್ದಿದ್ದ ಚರಂಡಿಯೊಳಗಿಂದ ಎದ್ದುಬರಲು ಯತ್ನಿಸುತ್ತಿರುವಾಗಲೇ ಮತ್ತೊಂದು ಮ್ಯಾನ್‍ಹೋಲ್ ಒಳಕ್ಕೆ ತಲೆಕೆಳಗಾಗಿ ಬಿದ್ದಂತಾಗಿದೆಯೆಂಬ ವಿಶ್ಲೇಷಣೆ ಹೊರಬಿದ್ದಿದೆ. ಈ ಕಿತಾಪತಿ ಪಿತೂರಿಯಲ್ಲಿ ಕೈ ಪಕ್ಷದ ಹಾಸ್ಯನಟರೂ ಸೇರಿಕೊಂಡು ಕೇಜ್ರಿವಾಲರನ್ನು ಈ ಸಲ ಕೆಡವಲು ನಡೆಸುತ್ತಿದ್ದ ಸಂಚು ಈ ಮೂಲಕ ವಿಫಲವಾಗಿದ್ದು, ಸದ್ಯಕ್ಕೆ ರಾಜಧಾನಿಯ ಗೋಶಾಲೆಯಲ್ಲಿ ಹಿಂಡಿಬೂಸಾ ಮೆಲ್ಲುತ್ತ ಪೊಗದಸ್ತಾಗಿದ್ದ ಕೈ ಪಕ್ಷದ ದೆಹಲಿ ನಾಯಕರು ಈ ಕೋರ್ಟ್ ತೀರ್ಪು ಕೇಳಿದ ಕೂಡಲೇ ಅಂಬಾ ಎಂದು ಅರಚಿ, ನಾಲಿಗೆ ಹೊರಚಾಚಿ ಮೂರ್ಛೆ ಹೋಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*****

ಕ್ಯಾನ್ಸರ್‍ಗೆ ದನದ ಮೂತ್ರದಲ್ಲಿ ಔಷಧಿ ಕಂಡುಹಿಡಿದ್ರು ಗುಜರಾತಿಗರು: ಫ್ರಥಮ ದರ್ಜೆ ಮುಠ್ಠಾಳರ ಸಂಶೋಧನೆಯಾಯ್ತು ಜಗಜ್ಜಾಹೀರು
‘ಆಧುನಿಕ ವೈದ್ಯಶಾಸ್ತ್ರ’ ಅಂದರೆ ಕೇಜಿಗೆಷ್ಟು, ಅದು ನೋಡಲಿಕ್ಕೆ ಕರ್ರಗಿರುತ್ತೋ ಬೆಳ್ಳಗಿರುತ್ತೋ ಎಂದು ಕೇಳುವ ಪ್ರಥಮದರ್ಜೆ ಮುಠ್ಠಾಳರ ಗುಜರಾತಿನ ಪಡೆಯೊಂದು, ದನದ ಮೂತ್ರದಲ್ಲಿ ಕ್ಯಾನ್ಸರ್‍ಗೆ ಔಷಧಿ ಇದೆಯೆಂಬ ಎದೆಯೊಡೆಯುವ ಹಾಸ್ಯಾಸ್ಪದ ಸಂಶೋಧನೆಯನ್ನು ಮಾಡಿ ಮುಗಿಸಿದ್ದಾರೆ. ಗುಜರಾತಿನ ಜುನಾಗಢ್ ಯೂನಿವರ್ಸಿಟಿಯ ಪ್ರಾಧ್ಯಾಪಕರು ಈ ಕಿಸಲಗೇಡಿ ಕ್ರಿಸ್ತಪೂರ್ವ ಕಾಲದ ತಾಳೆಗರಿ ಸಂಶೋಧನೆ ನಡೆಸಿದ್ದಾರೆ. ಈ ಸುದ್ದಿ ತಿಳಿದ ವಿದೇಶದ ಯೂನಿವರ್ಸಿಟಿಗಳು ಈ ನಾಲ್ಕನೇ ದರ್ಜೆ ಸಂಶೋಧನೆ ನಡೆಸಿದ ಆದಿಮಾನವರು ಶಿಲಾಯುಗ ಕಾಲದಿಂದ 21ನೇ ಶತಮಾನಕ್ಕೆ ಟೈಂಟ್ರಾವೆಲ್ ಮಾಡಿಕೊಂಡು ಬಂದದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಲು ಅನುಮತಿ ಕೋರಿ ದ್ವೇಷಭಕ್ತರ ಸರ್ಕಾರದ ಅನುಮತಿ ಕೋರಿದ್ದಾರಂತೆ. ಈ ಅರ್ಜಿಯನ್ನು ಓದಿದ ಸನ್ಮಾನ್ಯ ಕೌಡಂಗ್‍ಪ್ರಿಯ ಪಕೋಡೇಂದ್ರ ಅವರು ಆ ಸಂಶೋಧನೆಗಿಂತಲೂ ಮುಂಚೆ ತನ್ನ ತಲೆಯನ್ನೇ ಮೊದಲು ಆಪರೇಷನ್ ಮಾಡಿ ಒಳಗಿರುವುದು ಮಾಂಸಮಜ್ಜೆಯಿಂದಾದ ಮಿದುಳೋ, ಇಲ್ಲಾ.. ದನದ ಸೆಗಣಿಯಿಂದ ತಯಾರಾದ ಮಿದುಳೋ ಎಂದು ಪತ್ತೆ ಮಾಡಿಕೊಡಲು ವಿದೇಶಿ ಸಂಶೋಧಕರನ್ನು ಅಂಗಲಾಚಿದ್ದಾರಂತೆ.

*****

ಹೊಲದಲ್ಲಿ ನಿಂತು ಮಂತ್ರ ಹೇಳಿದ್ರೆ ಬೆಳೆ ಬರುತ್ತಂತೆ
ಗೋವಾ ಬ್ಲೂಜೆಪಿ ಸಚಿವನ ತಲೆಕೆಟ್ಟ ಅಂತೆಕಂತೆ
ರೈತರ ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇದ್ರೆ ರೈತರು ಹೊಲದಲ್ಲಿ ನಿಂತು “ಓಂ ರುಂ ಜುಂ ಸ್ವಾಹಾ, ಓಂ ರುಂ ಜುಂ ಸ್ವಾಹಾ” ಎಂದು ಮಂತ್ರ ಪಠಿಸಿದರೆ ಬೆಳೆ ಚೆನ್ನಾಗಿ ಬರುತ್ತದೆಂದು ಗೋವಾದ ಬ್ಲೂಜೆಪಿ ಪಕ್ಷದ ಕೃಷಿಸಚಿವ ಹೊಸ ಸಂಶೋಧನೆ ಮಾಡಿದ್ದಾನೆ. ಹೀಗೆ ಮಂತ್ರ ಪಠಿಸುವಾಗ ಹಿಂದಿನಿಂದ ಯಾವುದಾದರೂ ಕೊಳಕುಮಂಡಲದ ಹಾವು ಬಂದು ತೊಡೆಗೆ ಕಡಿದರೆ ಓಡಿ ಹೋಗುವುದೋ, ಕಚ್ಚಿಸಿಕೊಂಡು ಅಲ್ಲೇ ನಿಂತು “ಓಂ ರುಂ ಜುಂ ಸ್ವಾಹಾ” ಮಂತ್ರ ಪಠಿಸುವುದೋ ಎಂದು ವದರಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಕೆಂಡಾಮಂಡಲರಾಗಿ ಕೈಲಿ ಹಿಡಿದಿದ್ದ ಮೈಕನ್ನೇ ಕಚಪಚನೆ ಅಗಿದು ‘ಪ್ಯಾಕಪ್’ ಎಂದು ಕಿರುಚಿ ಓಡಿಹೋದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಎಲ್ಲ ಬಿಟ್ಟು ಈ ಬ್ಲೂಜೆಪಿಯವರಿಗೇ ಈ ಕಜ್ಜಿ ಐಡಿಯಾಗಳು ಹೇಗೆ ಬರುತ್ತವೆ? ಯಾವ ಫ್ಯಾಕ್ಟರಿಯಲ್ಲಿ ಇವರ ಮೆದುಳುಗಳನ್ನು ಪ್ರೊಡಕ್ಷನ್ ಮಾಡಲಾಗುತ್ತದೆ ಎಂದು ಕಕ್ಕಾಬಿಕ್ಕಿಯಾಗಿರುವ ಕೃಷಿ ವಿಜ್ಞಾನಿಗಳು ಸದರಿ ಬ್ಲೂಜೆಪಿ ಕೃಷಿ ಸಚಿವನನ್ನು ಗುಂಪುಗಲಭೆಯಲ್ಲಿ ಹೊಡೆದು ರೈತರ ಹೊಲಗಳಿಂದ ಒದ್ದೋಡಿಸಲು ತಯಾರಾಗಿದ್ದಾರೆಂದು ವರದಿಯಾಗಿದೆ. ಈ ಮನೆಹಾಳು ಐಡಿಯಾ ಮಾಡಿದ ಕೃಷಿಸಚಿವನ ಎಬಡೇಶಿ ಹೇಳಿಕೆಯ ದೆಸೆಯಿಂದ ಕಂಗಾಲಾಗಿರುವ ಗೋವಾದ ರೈತರು, ಹಂದಿ ಆಹಾರವನ್ನು ಪ್ಯಾಕ್ ಮಾಡಿ ವಿದೇಶಗಳಿಗೆ ಸಾಗಿಸುವ ಹಡಗಿನಲ್ಲಿ ಈ ಸಚಿವನನ್ನು ಹಾಕಿ ಯಾವುದಾದರೂ ಆಫ್ರಿಕನ್ ದೇಶಕ್ಕೆ ಆದಷ್ಟು ಬೇಗ ರಫ್ತು ಮಾಡಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಇನ್ನೂ ಆಗ್ರಹಿಸಿಲ್ಲದಿರುವುದು ಆಶ್ಚರ್ಯ ಹುಟ್ಟಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಇನ್ನಷ್ಟು ಮತ್ತಷ್ಟು ಆಘಾತ ಹುಟ್ಟಿಸುವ ವಾರ್ತೆಗಳಿಗಾಗಿ ಮುಂದಿನವಾರ ಸಿಗೋಣ. ಧನ್ಯವಾದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...