Homeಅಂಕಣಗಳುದಲಿತರ ಮೇಲಿನ ದೌರ್ಜನ್ಯ ನ್ಯಾಯಾಂಗಕ್ಕೆ ಕಾಣುತ್ತಿಲ್ಲವೇ?

ದಲಿತರ ಮೇಲಿನ ದೌರ್ಜನ್ಯ ನ್ಯಾಯಾಂಗಕ್ಕೆ ಕಾಣುತ್ತಿಲ್ಲವೇ?

- Advertisement -
- Advertisement -

ಕಳೆದ ಮಾರ್ಚ್ 20ರಂದು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ನ್ಯಾ.ಆದರ್ಶ್ ಗೋಯಲ್ ಮತ್ತು ಯು.ಯು.ಲಲಿತ್ ಅದರನ್ನೊಳಗೊಂಡ ನ್ಯಾಯಪೀಠ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯ್ದೆ-1989ಕ್ಕೆ ಸಂಬಂಧಿಸಿದಂತೆ ಒಂದು ಪವಿತ್ರವಾದ ತೀರ್ಪನ್ನು ನೀಡಿತು. “ಸುಭಾಶ್ ಕಾಶಿನಾಥ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಹೆಸರಿನ ಪ್ರಕರಣವನ್ನು ವಿಚಾರಣೆ ನಡೆಸುತ್ತಾ ದೇಶದಲ್ಲಿ ಸ.ಜಾ ಮತ್ತು ಪ.ತಂ(ದೌರ್ಜನ್ಯಗಳ…) ಕಾಯ್ದೆಯನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸುವುದರ ಮೂಲಕ ದಲಿತನು ಈ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದೂ, ಇದರಿಂದಾಗಿ ಮೇಲ್ಜಾತಿಗಳು ಉದ್ದೇಶಪೂರ್ವಕವಾಗಿ ತೊಂದರೆ ಅನುಭವಿಸುವಂತಾಗಿದೆಯೆಂದು ಅಭಿಪ್ರಾಯ ಪಟ್ಟ ನ್ಯಾಯಾಲಯ ಈ ಕಾಯ್ದೆಯನ್ನು ಪುನರ್ ಸಂಯೋಜಿಸಿ ಕೆಲವು ತಿದ್ದುಪಡಿಗಳನ್ನು ಮಾಡುವುದರ ಮೂಲಕ ಕಾಯ್ದೆಯು ಅನಗತ್ಯವಾಗಿ ದುರುಪಯೋಗ ಆಗುವುದನ್ನು ಮತ್ತು ಮೇಲ್ಜಾತಿಯವರು ತೊಂದರೆ ಅನುಭವಿಸದಂತೆ ಹೇಳಿತ್ತು. ಸುಪ್ರೀಂಕೋರ್ಟ್ ಪ್ರಕಾರ ಈ ಕಾಯ್ದೆಯ ಅಡಿಯಲ್ಲಿ ಆಗಿರುವಂತೆ ಜಾಮೀನುರಹಿತ ಬಂಧಿಸುವುದನ್ನು ಬದಲಾಯಿಸಿ ಈ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸುವ ಮುಂಚೆ ವಿಸ್ತøತ ವಿಚಾರಣೆ ನಡೆಸಬೇಕೆಂದು ಅವಶ್ಯಕತೆ ಇದ್ದರೆ ನಿರೀಕ್ಷಣಾ ಜಾಮೀನು ಪಡೆಯಲು ಆಪಾದಿತನಿಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿತ್ತು. ಈ ತೀರ್ಪು ಪ್ರಕಟವಾದ ಬೆನ್ನಿಗೆ ಈ ತೀರ್ಪನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು. ತೀರ್ಪಿನ ಪರವಾಗಿ ಮತ್ತು ತೀರ್ಪಿನ ವಿರುದ್ಧವಾಗಿ ಚರ್ಚೆಗಳು ನಡೆದವು ಮತ್ತು ಈಗಲೂ ನಡೆಯುತ್ತಲೇ ಇವೆ. ದೇಶದೆಲ್ಲೆಡೆ ಈ ತೀರ್ಪಿನ ವಿರುದ್ಧ ಕಂಡುಬಂದ ದಲಿತರ ಪ್ರತಿರೋಧವನ್ನು ಗಮನಿಸಿ ಕೇಂದ್ರಸರ್ಕಾರ ಸುಪ್ರೀಂಕೋರ್ಟ್‍ಗೆ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ ನಾಟಕವೂ ನಡೆಯಿತು.
ತೀರ್ಪಿನ ಪರ-ವಿರೋಧ ಚರ್ಚೆಗಳ ಆಚೆಗೆ ನಮ್ಮ ದೇಶಕ್ಕೆ ಇಂತಹದೊಂದು ಕಾಯ್ದೆಯ ಅಗತ್ಯವಾದರೂ ಏಕಿದೆ ಎನ್ನುವುದನ್ನು ಪರಿಶೀಲಿಸಿದರೆ ಈ ತೀರ್ಪಿನ ಹಾದಿರುವ ಮತ್ತು ತೀರ್ಪಿಗೆ ಅನುಗುಣವಾಗಿ ಈ ಕಾಯ್ದೆಗೆ ತಿದ್ದುಪಡಿಗಳಾದರೆ ಎಂತಹ ಪರಿಣಾಮಗಳಾಗಬಹುದು ಎನ್ನುವುದು ಅರ್ಥವಾಗುತ್ತದೆ. ಜಾತಿಯ ಕಾರಣಕ್ಕೆ ಮೇಲು-ಕೀಳು ಎನ್ನುವ ಅಪಮಾನತೆಯನ್ನು ಸೃಷ್ಟಿಸಿ ತಳ ಸಮುದಾಯಗಳ ಮೇಲೆ ನಿರಂತರವಾಗಿ ಶೋಷಣೆ, ದೌರ್ಜನ್ಯಗಳನ್ನು ಎಸಗುತ್ತಿರುವ ದೇಶ ನಮ್ಮದು. ಅಸ್ಪøಶ್ಯತೆ, ಅಸಮಾನತೆಗಳ ಭೀಕರತೆಯನ್ನು ಮನಗಂಡೆ ನಮ್ಮ ಹಿರಿಯರು ಸ್ವಾತಂತ್ರ್ಯದ ನಂತರ ಜಾರಿಯಾದ ಸಂವಿಧಾನದಲ್ಲಿ ಅಸ್ಪøಶ್ಯತೆ ಆಚರಣೆ ಮತ್ತು ಜಾತಿಯ ಹೆಸರಿನಲ್ಲಿ ಅವಮಾನ, ಶೋಷಣೆ ಮಾಡುವುದನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಅಸ್ಪøಶ್ಯತೆ ಆಚರಣೆಯನ್ನು ಅಪರಾಧವೆಂದು ಘೋಷಿಸಿ, ಸಂವಿಧಾನದಲ್ಲಿ ಅಳವಡಿಸಿಕೊಂಡರು.
ಆದರೆ ಸಂವಿಧಾನದಲ್ಲಿ ಅಕ್ಷರರೂಪದಲ್ಲೇ ಉಳಿದ ಕಾನೂನುಗಳಿಗೆ ಸಂಪೂರ್ಣ ವಿರುದ್ಧವಾಗಿ ದೇಶ ನಡೆದುಕೊಳ್ಳ ತೊಡಗಿದಾಗ, ಸ್ವಾತಂತ್ರ್ಯ ಬಂದು ನಾಲ್ಕು ದಶಕಗಳ ನಂತರ 1989ರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ (ದೌರ್ಜನ್ಯದ ತಡೆ)ಕಾಯ್ದೆ ಜಾರಿಗೆ ತರಲಾಯಿತು. ಆ ಮೂಲಕ ತಮ್ಮ ಮೇಲಿನ ದೌರ್ಜನ್ಯಗಳಿಂದ ರಕ್ಷಣೆ ಪಡೆಯುವ ಮತ್ತು ನ್ಯಾಯಾಲಯದ ಮೂಲಕ ತಮಗಾದ ದೌರ್ಜನ್ಯಕ್ಕೆ ನ್ಯಾಯ ಪಡೆಯುವ ಅಧಿಕಾರವನ್ನು ಈ ಕಾಯ್ದೆ ದಲಿತರಿಗೆ ಒದಗಿಸಿತ್ತು. ಈಗ ದುರುಪಯೋಗದ ಹೆಸರಿನಲ್ಲಿ ಈ ಕಾಯ್ದೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಪ್ರಯತ್ನಿಸುವ ಸುಪ್ರೀಂಕೋರ್ಟಿನ ನಡೆ ದಲಿತರಿಗೆ ಇದ್ದ ಏಕೈಕ ರಕ್ಷಣೆಯ ಅಸ್ತ್ರವನ್ನು ಕಿತ್ತುಕೊಳ್ಳುತ್ತಿದೆ.
ಸರಿ, ಈ ಕಾಯ್ದೆ ದುರುಪಯೋಗವಾಗುತ್ತಿದ್ದು, ಮೇಲ್ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ನ್ಯಾಯಾಲಯ ಈ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿಜವಾಗಿಯೂ ಕಡಿಮೆಯಾಗಿವೆಯೇ ಎಂಬುದನ್ನು ಗಮನಿಸಿದರೆ ವಾಸ್ತವದ ಚಿತ್ರಣ ಬೇರೆಯೇ ಇರುವುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ನ್ಯಾಷನಲ್ ಕ್ರೈಂ ರೀಸರ್ಚ್ ಬ್ಯೂರೋದಲ್ಲಿರುವ ಅಂಕಿ ಅಂಶಗಳನ್ನು ಒಂದು ಸಾರಿ ಇಣುಕಿ ನೋಡಿದರೆ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರಾಟ ದರ್ಶನವಾಗುತ್ತದೆ. ಕೇವಲ ದಾಖಲಾಗುವ ಪ್ರಕರಣಗಳ ಸಂಖ್ಯೆಯೇ ಬೆಟ್ಟ ಬೀಳಿಸುವ ಹಾಗಿದ್ದರೆ, ದಾಖಲಾಗದೇ ಪೊಲೀಸ್ ಠಾಣೆಯಲ್ಲಿಯೇ ಮುಚ್ಚಿಹೋಗುವ ಪ್ರಕರಣಗಳ ಸಂಖ್ಯೆ ಇನ್ನೆಷ್ಟಿರಬಹುದು ಎಂಬುದು ಗೊತ್ತಾಗುತ್ತದೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ಪ್ರಶ್ನಿಸಿ ದೂರು ದಾಖಲಿಸಲು ಪೊಲೀಸ್ ಠಾಣೆಯ ಬಾಗಿಲು ತಟ್ಟಿದರೆ ದಲಿತರಿಗೆ ಎದುರಾಗುವ ಸಂಕಷ್ಟಗಳನ್ನು ನಿವಾರಿಸಲೆಂದೇ ಪ್ರತ್ಯೇಕ ಕಾಯ್ದೆಯನ್ನು ರೂಪಿಸಬೇಕಾದಷ್ಟು ಭೀಕರ ಸ್ಥಿತಿ ನಮ್ಮಲ್ಲಿದೆ. ದೌರ್ಜನ್ಯ ಪ್ರಕರಣ ದಾಖಲಿಸಲು ಬರುವ ದಲಿತರ ಮೇಲೆಯೇ ಕಳ್ಳತನ, ವಂಚನೆ, ಕೊಲೆ, ದರೋಡೆ ಇನ್ನೂ ಮುಂದುವರೆದು ನಕ್ಸಲರು, ಡಕಾಯಿತರು ಎಂದು ಆರೋಪಿಸಿ ಸುಳ್ಳು ಮೊಕದ್ದಮೆ ದಾಖಲಿಸಿ ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ಮಾತನಾಡದೇ ಇರುವಂತೆ ಮಾಡಬಲ್ಲ ವ್ಯವಸ್ಥಿತ ಕ್ರೌರ್ಯ ನಿರಂತರವಾಗಿ ಕೆಲಸ ಮಾಡುತ್ತಿವೆ. … ಯಲ್ಲಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಆದರೆ ಅದೇ ಕಾಲದಲ್ಲಿ ಈ ರೀತಿ ಏರಿಕೆಯಾದ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುತ್ತಿರುವ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಮೇಲೆ ಹೇಳಿದ ಅಂಶಗಳು ಈ ರೀತಿ ಇಳಿಕೆಯಾಗಲು ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಧ್ಯಯನಗಳ ಪ್ರಕಾರ ಇದಕ್ಕೆ ಉದಾಹರಣೆಯಾಗಿ 2016ರಲ್ಲಿ ದೇಶದ ನ್ಯಾಯಾಲಯಗಳಲ್ಲಿ ದಾಖಲಾದ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶೇ89.7 ರಷ್ಟು ಪ್ರಕರಣಗಳನ್ನು ಇನ್ನೂ ವಿಚಾರಣೆಗೆ ತೆಗೆದುಕೊಂಡಿಲ್ಲ. ಇನ್ನು ಪರಿಶಿಷ್ಟ ಪಂಗಡಗಳಲ್ಲಿ ಶೇ 87.2ರಷ್ಟು ಪ್ರಕರಣಗಳು ವಿಚಾರಣೆ ಆಗದೇ ಹಾಗೆಯೇ ಉಳಿದಿದೆ. ಶೇ80ಕ್ಕಿಂತ ಹೆಚ್ಚು ಪ್ರಕರಣಗಳನ್ನು ವಿಚಾರಣೆಯೇ ನಡೆಸುತ್ತಿಲ್ಲ ಎಂದಾಗ ದಲಿತರಿಗೆ ನ್ಯಾಯ ಸಿಗುತ್ತದೆ ಎಂದಾಗಲೀ ಮೇಲ್ಜಾತಿಯವರಿಗೆ ಶಿಕ್ಷೆ ಆಗುತ್ತಿದೆ ಎಂದಾಗಲಿ ಹೇಗೆ ಅರ್ಥಮಾಡಿಕೊಳ್ಳುವುದು. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡದೇ ಕೊಳೆಯುತ್ತಿರುವ ಪ್ರಕರಣಗಳ ಕಥೆ ಹೀಗಿದ್ದರೆ ಪ್ರತಿ ಗಂಟೆಗೆ ಹತ್ತರಂತೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಜರುಗುತ್ತಿವೆ.
ಪ್ರತಿಯೊಂದಕ್ಕೂ ಸಾಕ್ಷಿ, ಪುರಾವೆಗಳನ್ನು ಕೇಳುವ ನ್ಯಾಯಾಲಯಗಳಿಗೆ ಖೈರ್ಲಾಂಜಿ ಕಂಬಾಲದಲ್ಲಿಲರುವಂತಹ ಭೀಕರ ಕ್ರೌರ್ಯದ ಉದಾಹರಣೆಗಳಲ್ಲಿ ಜಾತಿಯ ಕಾರಣಕ್ಕೆ ದೌರ್ಜನ್ಯ ಎಸಗಿರುವಂತೆ ಕಾಣುವ ಸಾಕ್ಷ್ಯಾಧಾರಗಳು ಸಿಕ್ಕುವುದಿಲ್ಲ ಎಂದರೆ ಈ ದೇಶ ನ್ಯಾಯಾಂಗ ದಲಿತರಿಗೆ ಎಷ್ಟರಮಟ್ಟಿಗೆ ನ್ಯಾಯ ನೀಡಲು ನಿಂತಿರಬಹುದು ಎನ್ನುವುದು ಅರ್ಥವಾಗುತ್ತಿದೆ. ಖೈರ್ಲಾಂಜಿ,ಕಂಬಾಪಲ್ಲಿಯಲ್ಲಿನ ಘಟನೆಗಳಲ್ಲಿ ಶೋಷಣೆಗೊಳಗಾದವರು ಮತ್ತು ಶೋಷಣೆಯ ಸಾಕ್ಷಿನುಡಿಯುತ್ತಿದ್ದವರು ಪ್ರತಿಕೂಲ ಹೇಳಿಕೆ ನೀಡುವ ಮಟ್ಟಕ್ಕೆ ಹೋಗುತ್ತಾರೆ ಎಂದರೆ ದಲಿತರ ಮೇಲೆ ದËರ್ಜನ್ಯಗಳನ್ನು ತಡೆಗಟ್ಟಲು ಇನ್ನು ಹೆಚ್ಚು ಕಠಿಣವಾದ ಕಾಯ್ದೆಗಳನ್ನು ರೂಪಿಸುವ ಅವಶ್ಯಕತೆ ಇದೆಯೇ ಹೊರತು ಇರುವ ಕಾಯ್ದೆಗಳನ್ನು ದುರ್ಬಲಗೊಳಿಸುವುದಲ್ಲ. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳಿದ್ದರೂ ದಲಿತರಿಗೆ ತಮ್ಮ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡುವುದಕ್ಕೆ ಇರುವ ಏಕೈಕ ಅಸ್ತ್ರವು ದುರುಪಯೋಗದ ಹೆಸರಲ್ಲಿ ಕಿತ್ತುಕೊಳ್ಳಲು ಬಯಸುವ ಸುಪ್ರೀಂಕೋರ್ಟ್ ದಲಿತರಿಗೆ ಶಿಕ್ಷಣ ನೀಡಲು, ಭೂಮಿ ನೀಡಲು, ವಸತಿ ನೀಡಲು, ಉದ್ಯೋಗ ನೀಡಲು ಇರುವ ಎಷ್ಟೋ ಕಾನೂನುಗಳು ಸಮರ್ಪಕವಾಗಿ ಜಾರಿಯಾಗದೇ ದಲಿತರಿಗೆ ಮೀಸಲಿಟ್ಟ ಹಣ ಉಪಯೋಗವಾಗದೇ ಇರುವುದು ಕಾನೂನಿನ ದುರುಪಯೋಗ ಎನ್ನಿಸುವುದಿಲ್ಲವೇ…? ಬಹುತೇಕ ಮೇಲ್ಜಾತಿಗಳ ಅಡಿತದಲ್ಲೇ ಇರುವ ಸರ್ಕಾರ ಮತ್ತು ಆಡಳಿತಶಾಹಿಗಳು ದಲಿತರ ಅಭಿವೃಧ್ಧಿ ಇರುವ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸುತ್ತಿರುವುದು ಸಂವಿಧಾನದ ದುರುಪಯೋಗ ಅಲ್ಲವೇ..?
ದಲಿತನೊಬ್ಬ ಒಳ್ಳೆಯ ಬಟ್ಟೆ ಹಾಕಿದ ಕಾರಣಕ್ಕೆ ಮದುವೆ ಸಂದರ್ಭದಲ್ಲಿ ಕುದುರೆ ಸವಾರಿ ಮಾಡಿದ್ದಕ್ಕೆ, ದಪ್ಪನಾಗಿ ಮೀಸೆ ಬಿಟ್ಟಿದ್ದಕ್ಕೆ, ಹಿಡಿದು ಚಚ್ಚಿ ಸಾಯಿಸಿದ ಘಟನೆಗಳು ದಿನಬೆಳಗಾದರೆ ಬೆಳಕಿಗೆ ಬರುತ್ತಿರುವುದು ನಮ್ಮ ನ್ಯಾಯಾಲಯಗಳ ಕಣ್ಣಿಗೆ ಕಾಣುವುದಿಲ್ಲವೇಕೆ..? ಇವೆಲ್ಲವನ್ನು ಮೀರಿ ದಲಿತನನ್ನು ಮದುವೆಯಾದ ಕಾರಣಕ್ಕೆ ತಮ್ಮ ಮಕ್ಕಳನ್ನೇ ಮರ್ಯಾದೆಯ ಹೆಸರಿನಲ್ಲಿ ಭೀಕರವಾಗಿ ಕೊಲೆ ಮಾಡುತ್ತಿರುವ ದಲಿತ ಹುಡುಗರನ್ನು ಕೊಂದು ಅವನ ಕುಟುಂಬವನ್ನು ಬಹಿಷ್ಕಾರ ಹಾಕುತ್ತಿರುವ ಘಟನೆಗಳು ದಿನನಿತ್ಯದ ಸುದ್ದಿಗಳಾಗಿ ಹೋಗುತ್ತಿರುವಾಗ ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವುದರ ಹಿಂದಿನ ಮರ್ಮವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅದರ ಪಾಂಡಿತ್ಯದ ಅವಶ್ಯಕತೆ ಇಲ್ಲ.
ಸುಪ್ರೀಂಕೋರ್ಟ್‍ನ ಪ್ರಸ್ತುತ ತೀರ್ಪನ್ನು ವಿರೋಧಿಸಿ ದೇಶದ ವಿರುಧ್ಧ ಕಡೆಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ 8 ಜನ ದಲಿತ ಪ್ರತಿಭಟನಾಕಾರರನ್ನು ಗುಂಡಿಟ್ಟು ಸಾಯಿಸುವ ಸರ್ಕಾರಗಳು ಈ ತೀರ್ಪನ್ನು ಜಾರಿಗೆ ತಂದು ಆದಷ್ಟು ಬೇಗ ಕಾಯ್ದೆಯನ್ನು ದುರ್ಬಲಗೊಳಿಸಿ ಎಂದು ಆಗ್ರಹಿಸಿ ನಡೆದ ಸಮಾವೇಶ, ರ್ಯಾಲಿಗಳಿಗೆ ಬೆರಗಿ ತಾವು ಆದಷ್ಟು ಬೇಗ ಈ ಕ್ರಾಂತಿಯನ್ನು ದುರ್ಬಲಗೊಳಿಸುತ್ತೇವೆ ಎಂದು ಹೇಳಿಕೆ ನೀಡುವುದು ಈ ದೇಶದ ಸಂವಿಧಾನಿಕ ವ್ಯವಸ್ಥೆ ಎಷ್ಟು ಮಾತ್ರ ದಲಿತರ ಪರವಿದೆ ಎನ್ನುವುದನ್ನು ಸೂಚಿಸುತ್ತಿದೆ. ಸ್ವಾತಂತ್ರ್ಯ ನಂತರದ ಇಷ್ಟೂ ವರ್ಷಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಹೊರತುಪಡಿಸಿ ಬೇರೆ ಕಾಯ್ದೆಯೂ ದುರುಪಯೋಗವಾಗಿಲ್ಲವೇ..? ಆಗಿದ್ದರೆ ಅವೆಲ್ಲವನ್ನು ಬಿಟ್ಟು ಕ್ಷುಲ್ಲಕ ಕಾರಣ ನೀಡಿ ಸುಪ್ರೀಂಕೋರ್ಟ್ ಈ ಕಾಯ್ದಯಲ್ಲಿ ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿರುವುದನ್ನು ಹೇಳುತ್ತಿದೆ..? ಇಷ್ಟುದಿನ ದಲಿತರ ಮೇಲಿನ ದೌರ್ಜನ್ಯಗಳಿಗೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದ ದಲಿತರಿಗೆ ಇಂದು ನ್ಯಾಯಾಲಯವೇ ದೌರ್ಜನ್ಯ ಎಸಗುತ್ತಿರುವುದರಿಂದ ಸುಪ್ರೀಂಕೋರ್ಟ್‍ನ ಈ ನಡೆಯನ್ನು ದಲಿತರ ಮೇಲೆ ನ್ಯಾಯಾಂಗದ ದೌರ್ಜನ್ಯ ಎಂದು ಕರೆಯಬಹುದಲ್ಲವೇ..? ಸರಿ ಈಗ ನ್ಯಾಯ ಅರಸಿ ಹೋಗುವುದೆಲ್ಲಿಗೆ…?

– ನರಸಿಂಹಮೂರ್ತಿ ವಡ್ಡನಹಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...