Homeಚಳವಳಿದೇಶದ ಗಮನ ಸೆಳೆಯಲು ಹೋದ ನಮ್ಮ ಗಮನ ಸೆಳೆದ ಒಂದು ಪ್ರತಿಭಟನೆ

ದೇಶದ ಗಮನ ಸೆಳೆಯಲು ಹೋದ ನಮ್ಮ ಗಮನ ಸೆಳೆದ ಒಂದು ಪ್ರತಿಭಟನೆ

- Advertisement -
- Advertisement -

ಸರೋವರ್ ಬೆಂಕಿಕೆರೆ |

ರೈತರ ಹೋರಾಟವು ಎಲ್ಲರ ಗಮನ ಸೆಳೆಯಿತು. ಅದಕ್ಕಾಗಿ ದೆಹಲಿಗೆ ಹೋಗಿದ್ದ ನಮಗೆ ಅದೇ ಜಂತರ್‌ಮಂತರ್‌ನಲ್ಲಿ ಇನ್ನೊಂದು ಹೋರಾಟವು ಗಮನ ಸೆಳೆಯಿತು. ಸರ್ಕಾರಗಳ ಕಣ್ಣು ಕಾಣಿಸದೇ ಇರಬಹುದು, ಅವರುಗಳ ಕಿವಿ ಕೇಳಿಸದೇ ಇರಬಹುದು. ಆದರೆ ಆಳದಲ್ಲಿ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡ ನಾಗರಿಕರು ಅವರ ಕಣ್ಣು, ಕಿವಿಗಳು ಊನವಾಗಿದ್ದರೂ, ಸಮಾಜವನ್ನು ಎಚ್ಚರಿಸುತ್ತಲೇ ಇರುತ್ತಾರೆ. ದೆಹಲಿಯ ರೈತ ಹೋರಾಟ ನಡೆದ ೨ ದಿನಗಳ ಬಳಿಕ ನಮಗೆ ಅಲ್ಲಿ ಕಂಡ ಸಂಗತಿಯಿದು. ಡಿ. 3ರಂದು ನೂರಾರು ಅಂಗವಿಕಲರು ಸಂಘಟಿತರಾಗಿ ಒಂದು ಪ್ರತಿಭಟನೆಯನ್ನು ನಡೆಸಿದರು. ಅವರಲ್ಲಿ ಅಂಧರೇ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿದ್ದರು.

ಹೆಣ್ಣುಮಕ್ಕಳು ಬಳಸುವ ನ್ಯಾಪ್ಕಿನ್ ಮೇಲೆ ಹೆಚ್ಚಿನ ಜಿಎಸ್‌ಟಿ ತೆರಿಗೆ ವಿಧಿಸಿ ದೇಶದಾದ್ಯಂತ ಪ್ರತಿರೋಧದ ಬಂದ ನಂತರದಲ್ಲಿ ಸ್ವಲ್ಪ ಮಟ್ಟಿಗೆ ತೆರಿಗೆ ಇಳಿಸಿದ್ದು ನಮಗೆ ಗೊತ್ತಿತ್ತು. ಆದರೆ ಅದೇ ಸರ್ಕಾರವು ಸಾವಿರಾರು ಕೋಟಿ ರೂಗಳನ್ನು ಕೊಳ್ಳೆ ಹೊಡೆದು ದೇಶ ಬಿಟ್ಟಂತ ದರೋಡೆಕೋರರು, ತೆರಿಗೆ ಪಾವತಿಸದೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ತಿಂದು ತೇಗುತ್ತಿರುವ ಬಂಡವಾಳಶಾಹಿಗಳಿಗೆ ಬೆನ್ನೆಲುಬಾಗಿ ನಿಂತಿರುವುದೂ ಗೊತ್ತಿತ್ತು. ಆದರೆ, ಈ ಪ್ರತಿಭಟನೆಯಿಂದ ನಮಗೆ ಇನ್ನೊಂದು ಸಂಗತಿಯೂ ಗೊತ್ತಾಯಿತು. ಮಾನ ಮರ್ಯಾದೆಯಿಲ್ಲದ, ಪಂಚೇಂದ್ರಿಯಗಳಿಲ್ಲದ ಕೇಂದ್ರ ಸರ್ಕಾರವು ಅಂಗವಿಕಲರು ಬಳಸುವ ಉಪಕರಣಗಳ ಮೇಲೆ ತೆರಿಗೆ ಹೆಚ್ಚಿಸಿ 25% ಜಿಎಸ್‌ಟಿಅನ್ನು ವಿಧಿಸಿದೆ! ಅದೇ ಕಾರಣಕ್ಕೆ ಅವರು ಅಲ್ಲಿ ಸೇರಿದ್ದರು.

ಯುಪಿಎ ಆಡಳಿತದ ಸಂದರ್ಭದಿಂದ ಶುರುವಾದ ಜಾಬ್‌ಲೆಸ್ ಗ್ರೋಥ್‌ನಿಂದ ಜಾಬ್ ಲಾಸ್‌ಗ್ರೋಥ್‌ನತ್ತ ಭಾರತವು ಮುಖ ಮಾಡಿದೆ. ಈ ನಕಾರಾತ್ಮಕ ಬೆಳವಣಿಗೆಗೆ ಬಿಜೆಪಿ ಆಡಳಿತವೇ ಕಾರಣವೆಂಬುದು ನಮಗೆ ಗೊತ್ತಿತ್ತು. ನಿರುದ್ಯೋಗದ ವಿರುದ್ಧದ ಆಂದೋಲನದಲ್ಲಿ ತೊಡಗಿದ್ದ ನಮಗೆ ಅದರ ಒಳಹೊರಗುಗಳ ಅರಿವಿದೆ. ಆದರೆ ಈ ಅವಧಿಯಲ್ಲಿ ಎರಡು ವಿಶೇಷ ಸಮುದಾಯಗಳ ಕುರಿತು ನಮಗೆ ದೆಹಲಿಯಲ್ಲಿ ಅರಿವಿಗೆ ಬಂದಿತು. ನಿರುದ್ಯೋಗದ ಸಮಸ್ಯೆಯು ಓದಿಕೊಂಡಿರುವ ಸುಶಿಕ್ಷಿತ ಸಮುದಾಯದ ಜೊತೆಗೆ, ಹಳ್ಳಿಯಲ್ಲೇ ಉಳಿಯಬಯಸುವ ಯುವಜನರದ್ದೂ ಆಗಿರುವುದು ಎಲ್ಲರಿಗೂ ತಿಳಿದಿದೆ; ಉದ್ಯೋಗ ಹುಡುಕಿಕೊಳ್ಳಲು ಸಾಧ್ಯವಾಗದೇ ಸೆಕ್ಸ್‌ವರ್ಕ್ ಮತ್ತು ಭಿಕ್ಷಾಟನೆಗಿಳಿದಿರುವ ಹಿಜ್ರಾ ಸಮುದಾಯದ ಕಥೆ ಏನಾಗಿರಬಹುದು? ಹಾಗೆಯೇ ವಿಕಲಚೇತನರದ್ದು?

ಎಲ್ಲರಿಗೂ ಖುಷಿಯಿಂದ ಆಚರಣೆ ಮಾಡಲು ಒಂದು ದಿನವಿರುವಂತೆ (ಡಿ.3ರಂದು) ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಂಗವಿಕಲರ ದಿನವನ್ನು ಸಂತಸದಿಂದ ಆಚರಣೆ ಮಾಡಬೇಕಿದ್ದವರು ಅಂದು ಪ್ರತಿಭಟನೆಗೆ ಧುಮುಕಿದ್ದರು. ದೆಹಲಿಯಲ್ಲಿ ಸಂಘಟಿತರಾಗಿದ್ದ ಅವರು ನೋವುಗಳನ್ನು ಅದುಮಿಟ್ಟುಕೊಂಡು ರೋಷಾವೇಶದಿಂದ ಕುದಿಯುತ್ತಿದ್ದರು. ನಮಗೆ ನಿಮ್ಮ ಕರುಣೆ ಬೇಡ, ಸ್ವಾವಲಂಬಿಯಾಗಿ ಘನತೆಯಿಂದ ನಾವು ಜೀವಿಸಲು ನಮ್ಮ ಕೈಗೆ ಉದ್ಯೋಗ ಕೊಡಿ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಿ ಎಂದು ತಮ್ಮ ಹಕ್ಕುಗಳನ್ನು ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದರು. ಅಲ್ಲದೆ ಅಂಗವಿಕಲರ ಉಪಕರಣಗಳ ಮೇಲೆ ಹೆಚ್ಚಿಸಿರುವ ಜಿಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡಿ ಎನ್ನುವುದು ಅವರ ಹಕ್ಕೊತ್ತಾಯವಾಗಿತ್ತು. ದೇಶದ ದೊಡ್ಡ ಸುದ್ದಿಯಾಗಬೇಕಿದ್ದ ಈ ಹೋರಾಟವು ದುರದೃಷ್ಟವಶಾತ್ ಬಿಜೆಪಿಯ ಕೈಗೊಂಬೆಯಾಗಿರುವ ಮಾಧ್ಯಮಗಳು ಜನರ ಜೀವನಕ್ಕೆ ಸಂಬಂಧವೇ ಇಲ್ಲದ ಯಾರ ಹೊಟ್ಟೆಯನ್ನು ತುಂಬಿಸದ ರಾಮಮಂದಿರ, ಕೋಮು ದ್ವೇಷದಂತಹ ವಿಚಾರಗಳು ಮತ್ತು ಸೆಲಬ್ರಿಟಿಗಳ ಮದುವೆಯಿಂದ ಹಿಡಿದು ಬಸುರಿ ಬಾಣಂತನದವರೆಗಿನ ಸುದ್ದಿಗಳಲ್ಲಿ ಮುಳುಗಿವೆ. ಕರ್ನಾಟಕದಿಂದ ದೆಹಲಿಯವರೆಗೆ ಇದೇ ಕಥೆ. ಒಂದು ಸಮಧಾನದ ವಿಚಾರವೆಂದರೆ, ನೋವುಣ್ಣುತ್ತಿರುವ ಸಮುದಾಯಗಳು ಸುಮ್ಮನೇ ಕೂತಿಲ್ಲ; ಬೀದಿಗಿಳಿಯುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...