Homeರಾಜಕೀಯಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

ಫಲಿತಾಂಶ 2018: ಒಂದು ಪೊಲಿಟಿಕಲ್ ಪೋಸ್ಟ್ ಮಾರ್ಟಂ

- Advertisement -
- Advertisement -

ಸು-NIL |

2018 ರ ಚುನಾವಣೆ ಫಲಿತಾಂಶ ಅತಂತ್ರವಾಗುತ್ತಿದ್ದಂತೆಯೇ ತಂತ್ರ-ಕುತಂತ್ರಗಳು ಆರಂಭವಾಗಿವೆ. ಬಿಜೆಪಿ ಡೆಮಾಕ್ರಸಿಯನ್ನು ಹರಿದು ಮುಕ್ಕುವ ರಭಸಕ್ಕೆ ಬೆದರಿದ ಕಾಂಗ್ರೆಸ್, ಜೆಡಿಎಸ್ ಪಾರ್ಟಿಗಳು ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಬೇಕಾಗಿ ಬಂದಿದೆ. ಇತ್ತ ಕುದುರೆ ವ್ಯಾಪಾರಕ್ಕೆ ಬೇಕಾದ ವೇದಿಕೆಯನ್ನು ಬಿಜೆಪಿ ಸಜ್ಜುಗೊಳಿಸಿಕೊಳ್ಳುತ್ತಿದೆ. ಕೇಸರಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಅಖಾಡಕ್ಕೆ ಇಳಿದಾಗಿದೆ. ಪ್ರಧಾನ ಮಂತ್ರಿ ಸ್ಥಾನವನ್ನೇ ಕೆಳ ಮಟ್ಟಕ್ಕೆ ಇಳಿಸಿಕೊಂಡಿರುವ, ಸುಳ್ಳುಗಳನ್ನೇ ಸತ್ಯವೆಂದು ನಂಬಿಸುವ ಜಾದುಗಾರ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ತೊಡೆ ತಟ್ಟಿದ್ದಾರೆ.

ಜನರಿಂದ ಜನರಿಗೋಸ್ಕರ ಜನರೇ ಸೇರಿ ಕೊಳ್ಳೆ ಹೊಡೆಯುವ ಪ್ರಜಾಪ್ರಭುತ್ವದಲ್ಲಿ ನಡೆಯುವುದು ನಂಬರ್ ಗೇಮ್ ಆದ್ರೂ ಸಹ ಸಾಂವಿಧಾನಿಕ ಸ್ಥಾನಗಳಾದ ರಾಜಭವನದ ಮೂಲಕ ಅಧಿಕಾರ ಪಡೆಯುವ ಹುನ್ನಾರ ಭಾರತೀಯ ಜನತಾ ಪಕ್ಷದ್ದಾಗಿದೆ. ತಳ ಸಮುದಾಯದ, ಬಹುಜನರ ಹಿತ ಕಾಯಲು ಹೊರಟ ಸಿದ್ದರಾಮಯ್ಯ ಇನ್ನಿಲ್ಲದಂತೆ ನೆಲಕಚ್ಚಿದ್ದಾರೆ. ಅಹಿಂದದ ತಳ ಸಮುದಾಯದ ಮತ್ತು ಅಲ್ಪಸಂಖ್ಯಾತರನ್ನು ಉದ್ಧಾರ ಮಾಡುತ್ತೇನೆಂಬ ಧಾವಂತದಲ್ಲಿ ವಾಸ್ತವಿಕ ಸಂತುಲನೆಯನ್ನು ಕಳೆದುಕೊಂಡು ಚುನಾವಣೆ ಗೆಲ್ಲಲಾಗುವುದಿಲ್ಲ ಎಂಬ ಕಟು ಸತ್ಯ ಮತ್ತೊಮ್ಮೆ ಸಾಬೀತಾಗಿದೆ. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಅವರ ಕೈ ಹಿಡಿಯಲಿಲ್ಲ, ಜನಪ್ರಿಯ ಇಂದಿರಾ ಕ್ಯಾಂಟೀನ್, ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಮತ್ತು ಕನ್ನಡದ ಅಸ್ಮಿತೆ ಯಾವುದೂ ಕೂಡ ಅಹಿಂದ ನಾಯಕನನ್ನು ಕೈ ಹಿಡಿಯಲಿಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ತಂದುಕೊಡಲಿಲ್ಲ. ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದ್ದು 2018ರ ಚುನಾವಣೆಯಲ್ಲಿ ಕೋಮು ಶಕ್ತಿಗಳನ್ನು ಹಿಂದಿಕ್ಕುವಲ್ಲಿ ಕನ್ನಡ ನಾಡು ಸಂಪೂರ್ಣ ವಿಫಲವಾಗಿದೆ. `ಭಾಗ್ಯ’ಗಳನ್ನು ನಂಬಿಕೊಂಡು ಅತಿ ಆತ್ಮವಿಶ್ವಾಸದಲ್ಲಿ ಹೊರಟಿದ್ದ ಕಾಂಗ್ರೆಸ್ ಗಾಡಿ ಹಳಿ ತಪ್ಪಿದ್ದೆಲ್ಲಿ ಅಂತ ನೋಡಲು ಹೊರಟರೆ ಕಾಣುವ ಸಂಗತಿಗಳು ಇಲ್ಲಿವೆ.

ಕರಾವಳಿ ಕರ್ನಾಟಕ

ಅಭಯ್ ಚಂದ್ರ ಜೈನ್

2013ರಲ್ಲಿ ಬಲಪಂಥೀಯ ಕೋಮುವಾದದ ಪ್ರಯೋಗ ಶಾಲೆಯಾದ ಕರಾವಳಿಯಲ್ಲಿ, ಹದಿಮೂರು ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಈಗ ಕೇವಲ ಮೂರು ಸ್ಥಾನಗಳಿಗೆ ಕುಸಿದಿದೆ. ಎಲ್ಲಾ ಸಮೀಕ್ಷೆಗಳಲ್ಲಿ ಮುಂದಿದ್ದ ಹಲವು ನಾಯಕರು ಹೇಳಹೆಸರಿಲ್ಲದೇ ಕೊಚ್ಚಿಹೋಗಿದ್ದಾರೆ. ದುರ್ಬಲ ಅಭ್ಯರ್ಥಿಗಳ ಎದುರು ಖಾದರ್ ಬಿಟ್ಟರೆ ಉಳಿದ ಘಟಾನುಘಟಿ ಮಂತ್ರಿಗಳು ಮಂಡಿಯೂರಿದ್ದಾರೆ. ಮೇಲ್ವರ್ಗದ ಜನರ ಪೋಲರೈಜೇಶನ್, ಇದನ್ನು ಅರಿಯದ ತಳಸಮುದಾಯ ಅವರ ಸಂಚಿಗೆ ಬಲಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಶಕ್ತಿಶಾಲಿ ಬಂಟ ಸಮುದಾಯದ ಅಭ್ಯರ್ಥಿಗಳಿಗೆ ಮೊಗವೀರ ಮತ್ತು ಪೂಜಾರ್ ಸಮುದಾಯದ ಸಂಪೂರ್ಣ ಬೆಂಬಲ ಮತ್ತು ಆರೆಸ್ಸೆಸ್‍ನ ಕಾರ್ಯತಂತ್ರ ಜನಪರವಾಗಿರುವ ಅಭಯಚಂದ್ರ ಜೈನ್ ಮೋಹಿನುದ್ದಿನ ಭಾವಾ, ಲೋಬೋ ಮತ್ತು ರಮಾನಾಥ ರೈರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್

ಮಧ್ಯ ಕರ್ನಾಟಕ
ಈ ಬಾರಿ ಭಾರತೀಯ ಜನತಾ ಪಕ್ಷ ನೂರರ ಗಡಿ ದಾಟಲು ಮಹತ್ವದ ಕೊಡುಗೆ ನೀಡಿದ ಭಾಗವೆಂದರೆ ಅದು ಮಧ್ಯ ಕರ್ನಾಟಕ. 2013ರಲ್ಲಿ ಎರಡು ಸ್ಥಾನಕ್ಕೆ ಕುಸಿದಿದ್ದ ಕೇಸರಿ ಪಕ್ಷ 2018ಕ್ಕೆ 21ಕ್ಕೆ ಲಾಂಗ್‍ಜಂಪ್ ಮಾಡಿದೆ. ಕಾಂಗ್ರೆಸ್ 18ರಿಂದ 7ಕ್ಕೆ ಕುಸಿದರೆ ಜೆಡಿಎಸ್ ಹತ್ತರಿಂದ 4ಕ್ಕೆ ಇಳಿದಿದೆ. ಆಂಜನೇಯ, ಎಸ್.ಎಸ್.ಮಲ್ಲಿಕಾರ್ಜುನ್‍ನಂತಹ ಸಚಿವರುಗಳೇ ಇಲ್ಲಿ ನೆಲ ಕಚ್ಚಿದ್ದಾರೆ. ಕೈ ನಾಯಕರ ದರ್ಪ, ಲಿಂಗಾಯತರ ಪೋಲರೈಜೇಶನ್ ಮತ್ತು ಕೇಸರಿ ಪಕ್ಷಗಳ ಪರ ಮಠಗಳ ವಕಾಲತ್ತು ಜನ ಕೈ ಪಾಳಯದಿಂದ ಕಮಲ ಕಡೆ ಜಾರುವಂತೆ ಮಾಡಿದೆ.

ಹಳೇ ಮೈಸೂರು
ಮುಖ್ಯಮಂತ್ರಿಯವರ ತವರು ಭಾಗದಲ್ಲಿ ಕಾಂಗ್ರೆಸ್‍ಗೆ 2013ಕ್ಕಿಂತ ಹೆಚ್ಚಿನ ಬಲ ಬರಬೇಕಾಗಿತ್ತು. ಆದರೆ ಅದು 24ರಿಂದ 17ಕ್ಕೆ ಕುಸಿತ ಕಂಡಿದೆ. ಇಲ್ಲಿ ಉಪ ಚುನಾವಣೆಯಲ್ಲಿ ಗೆದ್ದ ಎರಡು ಕ್ಷೇತ್ರಗಳು ಸೇರಿದಂತೆ ಮಹದೇವಪ್ಪ, ಜಯಚಂದ್ರ, ಮಂಜುರಂತಹ ಸಚಿವರು ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಸೋತಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಪುತ್ರ ವ್ಯಾಮೋಹ ಒಂದು ಕಾರಣವಾದರೆ, ಕೆಳಜಾತಿಯ ನಾಯಕತ್ವದ ವಿರುದ್ಧ ಕುದಿಯುತ್ತಿರುವ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಒಂದಾದ ಸಮೀಕರಣವೂ ಇನ್ನೊಂದು ಕಾರಣ,

ಮಂಬೈ ಕರ್ನಾಟಕ
ಕರಾವಳಿ ಕೋಮುವಾದದ ಪ್ರಯೋಗಶಾಲೆ, ಆದರೆ ಮುಂಬೈ ಕರ್ನಾಟಕ ಪ್ರಾಂತ್ಯ ಕೇಸರಿ ಪಕ್ಷದ ಭದ್ರಕೋಟೆ. ಲಿಂಗಾಯತರ ಪ್ರಾಬಲ್ಯವಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ 31 ಸ್ಥಾನ ಗೆದ್ದು ಹೊಸ ಅಲೆ ಹುಟ್ಟು ಹಾಕಿತ್ತು. ಈ ಬಾರಿ ಅದು ಕೇವಲ ಹದಿನೇಳಕ್ಕೆ ಕುಸಿತ ಕಂಡಿದೆ. ಬಿಜೆಪಿ ಹದಿಮೂರರಿಂದ ಮೂವತ್ತಕ್ಕೆ ಏರಿಕೆ ಕಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೊಡೆತ ಕೈ ಪಕ್ಷಕ್ಕೆ ಬಿದ್ದಿದೆ. ಮಹಾದಾಯಿ ವಿಚಾರವನ್ನು ಬಳಸಿಕೊಳ್ಳುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಠಗಳ ತಟಸ್ಥ ನಿಲುವು ಕೈ ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಪಂಚಪೀಠಗಳ ಬಹಿರಂಗ ಕಾರ್ಯಾಚರಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ.

ಹೈದ್ರಾಬಾದ್ ಕರ್ನಾಟಕ
ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕೈ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿಲ್ಲ. ಕೇವಲ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಆದರೆ ಕೆಜೆಪಿ ಮತ್ತು ಬಿಅಸ್ ಆರ್ ಪಕ್ಷಗಳಿಂದ ಹರಿದು ಹಂಚಿ ಹೋಗಿದ್ದ ಸ್ಥಾನಗಳನ್ನು ಮರಳಿ ಪಡೆದ ಬಿಜೆಪಿ ಪಕ್ಷ ಐದು ಸ್ಥಾನಗಳಿಂದ ಹದಿನೈದಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿಯೂ ಸಹ ಮೇಲ್ಜಾತಿಗಳ ಒಂದುಗೂಡುವಿಕೆ ಕೆಲಸ ಮಾಡಿದೆ.

ಬೆಂಗಳೂರು ಮಹಾನಗರ
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಹೆಚ್ಚಿನ ಬಲ ಬಂದಿದ್ದರೆ ಅದು ಮಹಾನಗರದಲ್ಲಿ ಮಾತ್ರ.. ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಹದಿಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಕೇವಲ ಇಪ್ಪತ್ತಾರು ಸ್ಥಾನಗಳಲ್ಲಿ ಚುನಾವಣೆ ನಡೆದರೂ ಅದರಲ್ಲಿ ಹದಿಮೂರು ಸ್ಥಾನವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಡಿಮೆ ಪ್ರಮಾಣದ ವೋಟಿಂಗ್ ಸಹ ಕಾಂಗ್ರೆಸ್ ಗೆಲುವನ್ನು ತಡೆಯುವಲ್ಲಿ ವಿಫಲವಾಗಿದೆ. ನಗರದ ಜನರು, ಮಧ್ಯಮ ವರ್ಗದವರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಕೊಡುತ್ತಾರೆ ಎಂಬ ಈವರೆಗಿನ ನಂಬಿಕೆಯನ್ನು ಈ ಇಲೆಕ್ಷನ್ ಸುಳ್ಳು ಮಾಡಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಹನ್ನೊಂದು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಒಟ್ಟಾರೆ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗೆ ವಿಶ್ಲೇಷಿಸಬಹುದು. 1. ಕರ್ನಾಟಕ ಸರಕಾರದ ಕಳೆದ ಐದು ವರ್ಷಗಳ ಸಫಲತೆ ಮತ್ತು ವೈಫಲ್ಯಗಳು ಜನರ ಆದ್ಯತೆಯೇ ಆಗಿಲ್ಲ. ಕಾಂಗ್ರೆಸ್ ನೇತೃತ್ವದ ಸರಕಾರ ಹಗರಣಗಳಿಲ್ಲದೆ, ಭ್ರಷ್ಟಾಚಾರದ ಪ್ರಕರಣಗಳಿಲ್ಲದೆ, ಜಾರಿ ಮಾಡಿದ ಹಲವು ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನ ಪರಾಮರ್ಶೆ ಮಾಡಲು ಹೋಗಿಲ್ಲ. 2. ದೇಶದ ವರ್ತಮಾನದ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳು ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. 3. ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮನುಷ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ಮತ್ತು ಆತ ಜನಪ್ರಿಯನಾಗಿದ್ದು ಹಲವು ಪಾಳೇಗಾರಿ ಮನಸ್ಥಿತಿಯ ಜನಸಮುದಾಯಗಳಿಗೆ ಇರಸುಮುರುಸು ಉಂಟು ಮಾಡಿತ್ತು. 4. ಲಿಂಗಾಯ್ತ ಪ್ರತ್ಯೇಕ ಧರ್ಮ ಮತ್ತು ಒಳಮೀಸಲಾತಿ ವಿಷಯಗಳು ಭೂತಾಕಾರ ತಾಳಿ ಜನರ ಮನಸ್ಸಿನಾಳಕ್ಕಿಳಿದವು. ದಲಿತರನ್ನು, ಶೂದ್ರರನ್ನು ನಾಯಿ ನರಿಗಳಿಗೆ ಹೋಲಿಸದ್ದು, ಮುಸ್ಲಿಮರ ಓಟನ್ನೇ ನಿರಾಕರಿಸಿದ್ದು, ಬೆಂಕಿ ಹಚ್ಚುವ, ದಾಂದಲೆ ಮಾಡುತ್ತೇವೆಂದ ಪಕ್ಷಗಳ ಗುಂಡಾ ವರ್ತನೆಗಳು ಜನರನ್ನು ಒಂದಿಂಚೂ ಕದಲಿಸಲಿಲ್ಲ. 5. ರಾಜ್ಯದ ಎರಡು ಪ್ರಬಲ ಜಾತಿಗಳು, ಮುಖ್ಯಮಂತ್ರಿಯಾದರೆ ಅದು `ನಮ್ಮ’ ಸಮುದಾಯದವರೇ ಆಗಬೇಕು ಎಂದು ಹಠ ಹಿಡಿದವರಂತೆ ಹಳೆಮೈಸೂರು ಮತ್ತು ಉತ್ತರ ಕರ್ನಾಕಟದಲ್ಲಿ ಓಟು ಮಾಡಿದವು. ಈ ಪ್ರಬಲ ಸಮುದಾಯಗಳ ಕುರುಡು ನಡೆಯು ಚುನಾವಣೆಯನ್ನು ಮತ್ತೆಲ್ಲಿಗೋ ನಡೆಸಿಕೊಂಡು ಹೋಯಿತು. 6. ಅತಂತ್ರ ಫಲಿತಾಂಶ ಬಂದಿದೆ. ಮತ್ತೆ ರಾಜ್ಯದ ಪ್ರಬಲ ಜಾತಿಗಳ ರಾಜಕಾರಣಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಚುನಾವಣೆ ಮತ್ತೆ ಪ್ರಬಲ ಜಾತಿಗಳ ದೃವೀಕರಣಕ್ಕೆ ದಾರಿ ಮಾಡಿಕೊಟ್ಟಿಡಿದ್ದನ್ನು ಬಿಟ್ಟರೆ, ಜಾತ್ಯಾತೀತ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ನಾಶ ಮಾಡಿದೆ. ಮರೆತಿದ್ದೆ, ಈ ಚುನಾವಣಾ ಫಲಿತಾಂಶ 24/7 ಟಿವಿ ನ್ಯೂಸ್ ಚಾನಲ್ ಗಳಿಗೆ ಯಥೇಚ್ಚ ಆಹಾರವನ್ನು ತಿಂಗಳುಗಟ್ಟಲೆ ತಿನ್ನಲು ಮತ್ತು ಮೆಲುಕು ಹಾಕಲು ಉತ್ಪಾದನೆ ಮಾಡಿಕೊಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯ (ಎಂಜಿಎನ್‌ಆರ್‌ಇಜಿಎ) ಹೆಸರು ಮತ್ತು ನಿಬಂಧನಗೆಳನ್ನು ಬದಲಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್),2025 (ವಿಬಿ-ಜಿ ರಾಮ್‌ ಜಿ) ಮಸೂದೆಗೆ...

ಪ್ರೀತಿಸಿ ಮದುವೆಯಾಗಿ ಕೇವಲ 8 ತಿಂಗಳು : ವರದಕ್ಷಿಣೆಗಾಗಿ ಹೆಂಡತಿಯನ್ನು ಹೊಡೆದು ಕೊಂದ ಗಂಡ!

ಮದುವೆಯಾಗಿ ಎಂಟು ತಿಂಗಳಿಗೆ ಗಂಡ ಹೆಂಡತಿಯನ್ನು ಮನೆ ಅಂಗಳದಲ್ಲೇ ಹೊಡೆದು ಕೊಂದ ಹೃದಯವಿದ್ರಾವಕ ಘಟನೆ ತೆಲಂಗಾಣದ ವಿಕಾರಬಾದ್ ಜಿಲ್ಲೆಯ ತಂಡೂರ್‌ನಲ್ಲಿ ನಡೆದಿದೆ. ಅನುಷಾ (22) ಕೊಲೆಯಾದ ಹೆಣ್ಣು ಮಗಳು. ಗಂಡ ಪರಮೇಶ್ (28) ವಿರುದ್ದ...

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ

ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ...

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...