Homeಸಾಮಾಜಿಕಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

ಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

- Advertisement -
- Advertisement -

ದು.ಸರಸ್ವತಿ |

ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ ಅನ್ನುವ ಕಾನ್ಸೆಪ್ಟನ್ನು ಮೊದಲು ಕೇಳಿದ್ದು ಉಮಾ ಚಕ್ರವರ್ತಿಯವರ ಜಂಡರಿಂಗ್ ಕಾಸ್ಟ್ ಎನ್ನುವ ಪುಸ್ತಕದಲ್ಲಿ. ಮಂಡಲ್ ಆಯೋಗ ವರದಿ ಜಾರಿಯಾದ ನಂತರ ದೇಶ ಹೊತ್ತಿ ಉರಿವಾಗ ಕೆಲವು ಹೆಣ್ಣು ಮಕ್ಕಳು, ಐಎಎಸ್, ಐಪಿಎಸ್ ಆಫೀಸರ್ ಗಂಡುಗಳು ಸಿಗುವುದಿಲ್ಲ ಎಂದು ಪ್ಲೆಕಾರ್ಡ್ ಹಿಡಿದು ನಿಂತಿದ್ದರು. ಅಂದರೆ ರಿಸರ್ವೇಶನ್ ಇದ್ರೆ ನಾವು ಮದುವೆ ಆಗಲು ಮೇಲ್ಜಾತಿ ಆಫೀಸರ್‌ಗಳು ಸಿಗುವುದಿಲ್ಲ ಎಂದು ಪರೋಕ್ಷವಾಗಿ ಮೀಸಲಾತಿಯ ವಿರುದ್ಧ ದನಿ ಎತ್ತಿದ್ದರು. ಮಹಿಳೆಯರೆಲ್ಲ ದಲಿತರು, ಶೋಷಿತರು ಎಂದು ಹೋರಾಟದಲ್ಲಿದ್ದ ಮಹಿಳಾ ಚಳುವಳಿಗೆ ಇದು ದೊಡ್ಡ ಸವಾಲಾಗಿ ಎದುರಾಯಿತು. ಈ ಸಂದರ್ಭದಲ್ಲಿ ಉಮಾ ಚಕ್ರವರ್ತಿ ‘ಜೆಂಡರಿಂಗ್ ಕಾಸ್ಟ್’ ಪುಸ್ತಕ ಬರೆದರು. ಮಹಾರಾಷ್ಟ್ರದ ದಲಿತ ಸ್ತ್ರೀವಾದಿಗಳು ಅಂಬೇಡ್ಕರ್ ಮತ್ತು ಮಹಿಳೆ ಬಗ್ಗೆ ತುಂಬಾ ಆಳವಾದ ಅಧ್ಯಯನ ಮಾಡಿದರು. ಆಗ, ಅಂಬೇಡ್ಕರ್ ಅವರ ಜಾತಿ ವಿನಾಶ ಚಳುವಳಿಯ ಪರಂಪರೆ ಅಂದರೆ, ಲಿಂಗ ತಾರತಮ್ಯದ ವಿರುದ್ಧವೂ ಹೋರಾಡುವ ಪರಂಪರೆ; ಅದನ್ನ ಯಾಕೆ ಮಹಿಳಾ ಚಳುವಳಿಗಳು ಗುರುತಿಸಲೇ ಇಲ್ಲ ಎಂದು ಮೊದಲನೇ ಬಾರಿ ಎಲ್ಲರೂ ಆಲೋಚಿಸುವಂತಾಯಿತು. ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ, ಅಂಬೇಡ್ಕರ್‌ರ ವಿಚಾರಗಳನ್ನು ಕುರಿತ ಪುಸ್ತಕಗಳು ಬಂದವು. ಅಂಬೇಡ್ಕರ್ ಮತ್ತು ಮಹಿಳೆ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣಿಕೆಯ ಪಿತೃಪ್ರಧಾನತೆ ಎಂಬ ಪರಿಕಲ್ಪನೆ ನಮಗೆಲ್ಲ ಸರಿಯಾಗಿ ಅರ್ಥವಾದದ್ದು.

ಈ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಪಿತೃಪ್ರಧಾನವಾದುದ್ದು ಎಂದು ಎಲ್ಲರಿಗೂ ಗೊತ್ತು. ರಾಜ್ಯವನ್ನು, ಆಸ್ತಿಯನ್ನ ಹಾಗೂ ಎಲ್ಲಾ ಅಧಿಕಾರವನ್ನು ಚಲಾಯಿಸುವಂತಹ, ಗಂಡು ನಾನೇ ಸುಪ್ರೀಂ ಎನ್ನುವ ವ್ಯವಸ್ಥೆ ಇದು. ಬ್ಯಾಹ್ಮಣ್ಯದ ಶ್ರೇಣೀಕರಣದಲ್ಲಿ ಬ್ರಾಹ್ಮಣರು ಜಾತಿ ವ್ಯವಸ್ಥೆಯ ಮೇಲ್ದರ್ಜೆಯ ತುತ್ತ ತುದಿಯಲ್ಲಿದ್ದಾರೆ. ಗಂಡು ಎನ್ನುವ ಶ್ರೇಷ್ಠತೆ, ಮೇಲ್ಜಾತಿ ಎನ್ನುವ ಶ್ರೇಷ್ಠತೆ ಎರಡೂ ಕೂಡಿ ಬ್ರಾಹ್ಮಣ ಶ್ರೇಷ್ಠತೆ ಉತ್ಕೃಷ್ಟ ಮಾದರಿಯಾಗಿ ನಿಲ್ಲುತ್ತದೆ. ಹಾಗಾಗಿ ಎಲ್ಲಾ ದೇವಾಲಯಗಳಲ್ಲಿ ಬ್ರಾಹ್ಮಣ ಗಂಡಸರು ಪೂಜೆ ಮಾಡುತ್ತಾರೆ, ಇತರರು ಕೈ ಮುಗಿದು ನಿಲ್ಲುತ್ತಾರೆ, ದಲಿತರು ಹೊರಗಿರಿಸಲ್ಪಡುತ್ತಾರೆ. ಇದು ಎಲ್ಲ ಸಮುದಾಯಗಳ ಒಳಕ್ಕೂ ಇಳಿದುಬಿಟ್ಟಿದೆ. ಮಾದಿಗರ ದಾಸಯ್ಯರು ಪೂಜೆ ಮಾಡ್ತಾರೆ, ಸಮಗಾರರು ಚರ್ಮದ ಕೆಲಸವನ್ನು ಮಾಡ್ತಾರೆ. ಇನ್ನು ಹೈರಾರ್ಕಿಯಲ್ಲಿ ಎಲ್ಲಾ ಸಮುದಾಯದಲ್ಲೂ ಪುರುಷರು ಮೇಲು ಎನ್ನುವುದೂ ಬೆಳೆದು ಬಂದಿದೆ, ಮೇಲ್ ಹೈರಾರ್ಕಿ, ಬ್ರಾಹ್ಮಿಣಿಕಲ್ ಹೈರಾರ್ಕಿಯ ಆಳದಲ್ಲಿ ಕಾಸ್ಟ್ ಸುಪ್ರಿಮಸಿ ಪ್ರಧಾನವಾಗಿದೆ, ಈ ಮೇಲರಿಮೆಯಲ್ಲಿ ಖಾಸಗಿ ಆಸ್ತಿಯೂ ಸೇರಿಕೊಂಡಿದೆ. ಇದು ಬೌದ್ಧಿಕ ಪವರ್‌ನೂ ಹೌದು ಮತ್ತೂ ಮೆಟಿರಿಯಲ್ ಪವರ್ ಕೂಡ ಹೌದು. ಅಕಾಡೆಮಿಕ್ ಬಳಕೆಯಲ್ಲಿ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಬ್ರಾಹ್ಮಣರನ್ನು ವಿರೋಧಿಸುವಂತದ್ದಲ್ಲ, ತಾನೇ ಸುಪ್ರೀಂ ನಾವಿರುವುದೇ ಆಳುವುದಕ್ಕೆ ಎನ್ನುವಂತಹ ವಾದವನ್ನು ಪ್ರಶ್ನಿಸುವಂತದ್ದು. ಈಗ ಮೇಲ್ಜಾತಿ ಎತ್ತಿರುವ ತಕರಾರು ಅಸಮಂಜಸವಾದದ್ದು. ವಿದ್ವತ್ ವಲಯದಲ್ಲಿ ಚರ್ಚೆಯಲ್ಲಿರುವ ಜಾಗತೀಕರಣ, ಆಳುವ ವರ್ಗ, ಫ್ಯೂಡಲಿಸಂ ಎನ್ನುವಂತಹ ಪರಿಕಲ್ಪನೆಗಳನ್ನು ಚರ್ಚೆ ಮಾಡಬೇಡಿ, ಇದರ ಬಗ್ಗೆ ಮಾತನಾಡಬೇಡಿ ಎಂದರೆ ಅದನ್ನೆಲ್ಲ ನಿಲ್ಲಸಲಾಗುತ್ತದೆಯೇ? ಖಂಡಿತಾ ಇಲ್ಲ. ಹಾಗೆಯೆ ಇದು ಕೂಡ. ಬ್ರಾಹ್ಮಣ್ಯದ ವಿರುದ್ಧದ ದನಿಯೇ ಹೊರತು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...