Homeಸಾಮಾಜಿಕಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

ಬ್ರಾಹ್ಮಣ್ಯದ ವಿರುದ್ಧದ ದನಿಯು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ

- Advertisement -
- Advertisement -

ದು.ಸರಸ್ವತಿ |

ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ ಅನ್ನುವ ಕಾನ್ಸೆಪ್ಟನ್ನು ಮೊದಲು ಕೇಳಿದ್ದು ಉಮಾ ಚಕ್ರವರ್ತಿಯವರ ಜಂಡರಿಂಗ್ ಕಾಸ್ಟ್ ಎನ್ನುವ ಪುಸ್ತಕದಲ್ಲಿ. ಮಂಡಲ್ ಆಯೋಗ ವರದಿ ಜಾರಿಯಾದ ನಂತರ ದೇಶ ಹೊತ್ತಿ ಉರಿವಾಗ ಕೆಲವು ಹೆಣ್ಣು ಮಕ್ಕಳು, ಐಎಎಸ್, ಐಪಿಎಸ್ ಆಫೀಸರ್ ಗಂಡುಗಳು ಸಿಗುವುದಿಲ್ಲ ಎಂದು ಪ್ಲೆಕಾರ್ಡ್ ಹಿಡಿದು ನಿಂತಿದ್ದರು. ಅಂದರೆ ರಿಸರ್ವೇಶನ್ ಇದ್ರೆ ನಾವು ಮದುವೆ ಆಗಲು ಮೇಲ್ಜಾತಿ ಆಫೀಸರ್‌ಗಳು ಸಿಗುವುದಿಲ್ಲ ಎಂದು ಪರೋಕ್ಷವಾಗಿ ಮೀಸಲಾತಿಯ ವಿರುದ್ಧ ದನಿ ಎತ್ತಿದ್ದರು. ಮಹಿಳೆಯರೆಲ್ಲ ದಲಿತರು, ಶೋಷಿತರು ಎಂದು ಹೋರಾಟದಲ್ಲಿದ್ದ ಮಹಿಳಾ ಚಳುವಳಿಗೆ ಇದು ದೊಡ್ಡ ಸವಾಲಾಗಿ ಎದುರಾಯಿತು. ಈ ಸಂದರ್ಭದಲ್ಲಿ ಉಮಾ ಚಕ್ರವರ್ತಿ ‘ಜೆಂಡರಿಂಗ್ ಕಾಸ್ಟ್’ ಪುಸ್ತಕ ಬರೆದರು. ಮಹಾರಾಷ್ಟ್ರದ ದಲಿತ ಸ್ತ್ರೀವಾದಿಗಳು ಅಂಬೇಡ್ಕರ್ ಮತ್ತು ಮಹಿಳೆ ಬಗ್ಗೆ ತುಂಬಾ ಆಳವಾದ ಅಧ್ಯಯನ ಮಾಡಿದರು. ಆಗ, ಅಂಬೇಡ್ಕರ್ ಅವರ ಜಾತಿ ವಿನಾಶ ಚಳುವಳಿಯ ಪರಂಪರೆ ಅಂದರೆ, ಲಿಂಗ ತಾರತಮ್ಯದ ವಿರುದ್ಧವೂ ಹೋರಾಡುವ ಪರಂಪರೆ; ಅದನ್ನ ಯಾಕೆ ಮಹಿಳಾ ಚಳುವಳಿಗಳು ಗುರುತಿಸಲೇ ಇಲ್ಲ ಎಂದು ಮೊದಲನೇ ಬಾರಿ ಎಲ್ಲರೂ ಆಲೋಚಿಸುವಂತಾಯಿತು. ಜ್ಯೋತಿ ಬಾ ಪುಲೆ, ಸಾವಿತ್ರಿ ಬಾ ಪುಲೆ, ಅಂಬೇಡ್ಕರ್‌ರ ವಿಚಾರಗಳನ್ನು ಕುರಿತ ಪುಸ್ತಕಗಳು ಬಂದವು. ಅಂಬೇಡ್ಕರ್ ಮತ್ತು ಮಹಿಳೆ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣಿಕೆಯ ಪಿತೃಪ್ರಧಾನತೆ ಎಂಬ ಪರಿಕಲ್ಪನೆ ನಮಗೆಲ್ಲ ಸರಿಯಾಗಿ ಅರ್ಥವಾದದ್ದು.

ಈ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಪಿತೃಪ್ರಧಾನವಾದುದ್ದು ಎಂದು ಎಲ್ಲರಿಗೂ ಗೊತ್ತು. ರಾಜ್ಯವನ್ನು, ಆಸ್ತಿಯನ್ನ ಹಾಗೂ ಎಲ್ಲಾ ಅಧಿಕಾರವನ್ನು ಚಲಾಯಿಸುವಂತಹ, ಗಂಡು ನಾನೇ ಸುಪ್ರೀಂ ಎನ್ನುವ ವ್ಯವಸ್ಥೆ ಇದು. ಬ್ಯಾಹ್ಮಣ್ಯದ ಶ್ರೇಣೀಕರಣದಲ್ಲಿ ಬ್ರಾಹ್ಮಣರು ಜಾತಿ ವ್ಯವಸ್ಥೆಯ ಮೇಲ್ದರ್ಜೆಯ ತುತ್ತ ತುದಿಯಲ್ಲಿದ್ದಾರೆ. ಗಂಡು ಎನ್ನುವ ಶ್ರೇಷ್ಠತೆ, ಮೇಲ್ಜಾತಿ ಎನ್ನುವ ಶ್ರೇಷ್ಠತೆ ಎರಡೂ ಕೂಡಿ ಬ್ರಾಹ್ಮಣ ಶ್ರೇಷ್ಠತೆ ಉತ್ಕೃಷ್ಟ ಮಾದರಿಯಾಗಿ ನಿಲ್ಲುತ್ತದೆ. ಹಾಗಾಗಿ ಎಲ್ಲಾ ದೇವಾಲಯಗಳಲ್ಲಿ ಬ್ರಾಹ್ಮಣ ಗಂಡಸರು ಪೂಜೆ ಮಾಡುತ್ತಾರೆ, ಇತರರು ಕೈ ಮುಗಿದು ನಿಲ್ಲುತ್ತಾರೆ, ದಲಿತರು ಹೊರಗಿರಿಸಲ್ಪಡುತ್ತಾರೆ. ಇದು ಎಲ್ಲ ಸಮುದಾಯಗಳ ಒಳಕ್ಕೂ ಇಳಿದುಬಿಟ್ಟಿದೆ. ಮಾದಿಗರ ದಾಸಯ್ಯರು ಪೂಜೆ ಮಾಡ್ತಾರೆ, ಸಮಗಾರರು ಚರ್ಮದ ಕೆಲಸವನ್ನು ಮಾಡ್ತಾರೆ. ಇನ್ನು ಹೈರಾರ್ಕಿಯಲ್ಲಿ ಎಲ್ಲಾ ಸಮುದಾಯದಲ್ಲೂ ಪುರುಷರು ಮೇಲು ಎನ್ನುವುದೂ ಬೆಳೆದು ಬಂದಿದೆ, ಮೇಲ್ ಹೈರಾರ್ಕಿ, ಬ್ರಾಹ್ಮಿಣಿಕಲ್ ಹೈರಾರ್ಕಿಯ ಆಳದಲ್ಲಿ ಕಾಸ್ಟ್ ಸುಪ್ರಿಮಸಿ ಪ್ರಧಾನವಾಗಿದೆ, ಈ ಮೇಲರಿಮೆಯಲ್ಲಿ ಖಾಸಗಿ ಆಸ್ತಿಯೂ ಸೇರಿಕೊಂಡಿದೆ. ಇದು ಬೌದ್ಧಿಕ ಪವರ್‌ನೂ ಹೌದು ಮತ್ತೂ ಮೆಟಿರಿಯಲ್ ಪವರ್ ಕೂಡ ಹೌದು. ಅಕಾಡೆಮಿಕ್ ಬಳಕೆಯಲ್ಲಿ ಬ್ರಾಹ್ಮಿಣಿಕಲ್ ಪೇಟ್ರಿಯಾರ್ಕಿ ಅನ್ನೋದು ಬ್ರಾಹ್ಮಣರನ್ನು ವಿರೋಧಿಸುವಂತದ್ದಲ್ಲ, ತಾನೇ ಸುಪ್ರೀಂ ನಾವಿರುವುದೇ ಆಳುವುದಕ್ಕೆ ಎನ್ನುವಂತಹ ವಾದವನ್ನು ಪ್ರಶ್ನಿಸುವಂತದ್ದು. ಈಗ ಮೇಲ್ಜಾತಿ ಎತ್ತಿರುವ ತಕರಾರು ಅಸಮಂಜಸವಾದದ್ದು. ವಿದ್ವತ್ ವಲಯದಲ್ಲಿ ಚರ್ಚೆಯಲ್ಲಿರುವ ಜಾಗತೀಕರಣ, ಆಳುವ ವರ್ಗ, ಫ್ಯೂಡಲಿಸಂ ಎನ್ನುವಂತಹ ಪರಿಕಲ್ಪನೆಗಳನ್ನು ಚರ್ಚೆ ಮಾಡಬೇಡಿ, ಇದರ ಬಗ್ಗೆ ಮಾತನಾಡಬೇಡಿ ಎಂದರೆ ಅದನ್ನೆಲ್ಲ ನಿಲ್ಲಸಲಾಗುತ್ತದೆಯೇ? ಖಂಡಿತಾ ಇಲ್ಲ. ಹಾಗೆಯೆ ಇದು ಕೂಡ. ಬ್ರಾಹ್ಮಣ್ಯದ ವಿರುದ್ಧದ ದನಿಯೇ ಹೊರತು ಮನುಷ್ಯರಾದ ಬ್ರಾಹ್ಮಣರ ವಿರುದ್ಧವಾದುದ್ದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...